ಕನಕಾಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: 2017 source edit
ಟ್ಯಾಗ್: 2017 source edit
೬೩ ನೇ ಸಾಲು: ೬೩ ನೇ ಸಾಲು:
=== ಪುಸ್ತಕಗಳು ===
=== ಪುಸ್ತಕಗಳು ===
* "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್‍ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ
* "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್‍ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ
* "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
* "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ - ಸಾಂಪ್ರದಾಯಿಕ ಶಿಲ್ಪಿಗಳನ್ನು ಕುರಿತು
* "ಹೌದೇ? ಇದು ನಾನೇ!" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ<ref>[https://www.prajavani.net/article/%E0%B2%B6%E0%B2%BF%E0%B2%B2%E0%B3%86%E0%B2%97%E0%B2%B3-%E0%B2%AE%E0%B3%82%E0%B2%B2%E0%B2%95-%E0%B2%9C%E0%B3%80%E0%B2%B5%E0%B2%A8%E0%B2%97%E0%B2%BE%E0%B2%A8 ಶಿಲೆಗಳ ಮೂಲಕ ಜೀವನಗಾನ], ಪ್ರಜಾವಾಣಿ, 13 ಏಪ್ರಿಲ್ 2014</ref>
* "ಹೌದೇ? ಇದು ನಾನೇ!" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ<ref>[https://www.prajavani.net/article/%E0%B2%B6%E0%B2%BF%E0%B2%B2%E0%B3%86%E0%B2%97%E0%B2%B3-%E0%B2%AE%E0%B3%82%E0%B2%B2%E0%B2%95-%E0%B2%9C%E0%B3%80%E0%B2%B5%E0%B2%A8%E0%B2%97%E0%B2%BE%E0%B2%A8 ಶಿಲೆಗಳ ಮೂಲಕ ಜೀವನಗಾನ], ಪ್ರಜಾವಾಣಿ, 13 ಏಪ್ರಿಲ್ 2014</ref>



೧೩:೫೬, ೮ ಜೂನ್ ೨೦೨೧ ನಂತೆ ಪರಿಷ್ಕರಣೆ

ಕನ್ನಡದ ಪ್ರಥಮ ಮಹಿಳಾ ಶಿಲ್ಪಿ ಎಂದೇ ಖ್ಯಾತರಾಗಿದ್ದ [೧] ಜಕಣಾಚಾರಿ ಪ್ರಶಸ್ತಿಗೆ ಭಾಜನರಾಗಿದ್ದ ಕನಕಾಮೂರ್ತಿ (೧೯೪೨-೨೦೨೧) ಕೈಯಲ್ಲಿ ಅರಳಿದ್ದ ೨೦೦ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತಗೊಂಡಿವೆ.

ವೈಯಕ್ತಿಕ ಜೀವನ

೧೯೪೨ರ ಡಿಸೆಂಬರ ೨ರಂದು[೨][೩], ಜಮೀನ್ದಾರ್ ಮುತ್ತತ್ತಿ ಸುಬ್ಬರಾಯ ಮತ್ತು ಸುಂದರಮ್ಮ ದಂಪತಿಗಳಿಗೆ, ಟಿ. ನರಸೀಪುರದಲ್ಲಿ (ಮೈಸೂರು) ಜನಿಸಿದರು. ತಾಯಿ ಸುಂದರಮ್ಮ ಗಮಕ ಕಲಾವಿದರಾಗಿದ್ದರು.

ನಾರಾಯಣ ಮೂರ್ತಿಯವರನ್ನು ಮದುವೆಯಾಗಿದ್ದರು. ಇವರ ಮಗ ರೂಮಿ ಹರೀಶ್ (ಲಿಂಗ ಪರಿವರ್ತನೆಗೆ ಮುಂಚಿನ ಹೆಸರು: ಸುಮತಿ ಮೂರ್ತಿ)

ಕಲಾಶಿಕ್ಷಣ

ಬಾಲ್ಯದಲ್ಲಿಯೇ ರಂಗೋಲಿ ಕಲೆಯಲ್ಲಿ ಆಸಕ್ತಿ ಹೊಂದಿದ್ದರು.[೪] ಬಿ. ಎಸ್ಸಿ. ಪದವಿ ನಂತರ, ತಮ್ಮ ಸಹೋದರನೊಂದಿಗೆ ಚಿತ್ರಕಲೆ ಕಲೆಯುವ ಉದ್ದೇಶದಿಂದ ಭೇಟಿಕೊಟ್ಟಿದ್ದ ಬೆಂಗಳೂರಿನ ಕಲಾಮಂದಿರ ಕಲಾ ಶಾಲೆಯಲ್ಲಿ[೫] ೧೯೬೨ರಲ್ಲಿ, ಮೃತ್ತಿಕಾ (ಮಣ್ಣಿನ) ಪ್ರತಿಮಾಗಾರಿಕೆಯಲ್ಲಿ ಡಿಪ್ಲೊಮಾ ಗಳಿಸಿದರು. ಅಲ್ಲಿಯೇ ಕರ್ನಾಟಕದ ಹಲವಾರು ಶಿಲ್ಪಕಲಾ ಶೈಲಿಗಳನ್ನು ಅಭ್ಯಸಿಸಿದರು. [೬] ಗುರುಗಳಾದ ಡಿ. ವಾದಿರಾಜರು (ಸಾಂಪ್ರದಾಯಿಕ ಭಾರತೀಯ ಶಿಲ್ಪಶಾಸ್ತ್ರ) ಮತ್ತು ಎ. ಎನ್. ಸುಬ್ಬರಾಯರು (ರೇಖಾಚಿತ್ರ), ಕನಕಾಮೂರ್ತಿಯವರ ಆಸಕ್ತಿಗೆ ನೀರೆರೆದರು. [೭] ಹಲವಾರು ಶಿಲ್ಪ ಕಲಾಶಿಬಿರಗಳಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಶಿಲ್ಪ ಕಲಾಕೃತಿಗಳು

ಲೋಹಶಿಲ್ಪ, ಕಾಷ್ಠಶಿಲ್ಪ ಮತ್ತು ಶಿಲಾಶಿಲ್ಪಗಳಲ್ಲಿ ಪರಿಣಿತಿ ಹೊಂದಿ, ಬಹುಬೇಡಿಕೆಯ ಶಿಲ್ಪಿಯಾಗಿದ್ದ ಇವರ ೨೦೦ಕ್ಕೂ ಹೆಚ್ಚು ಕೆತ್ತನೆಯ ಕಲಾಕೃತಿಗಳು ನಾಡಿನಾದ್ಯಂತ ಪ್ರತಿಷ್ಠಾಪನೆಗೊಂಡಿವೆ.

  • ಕಲ್ಲಿನ ಗಣಪ - ೯ ಅಡಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು
  • ವಿಷ್ಣುವಿನ ಪ್ರತಿಮೆ - ಹೊಯ್ಸಳ ಶೈಲಿ, ಸಾಯಿಬಾಬ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು[೮]
  • ರೈಟ್ ಸೋದರರ ಪ್ರತಿಮೆ - ಫ಼ೈಬರ್ ಗ್ಲಾಸ್‌ ಶಿಲ್ಪ - ೨೦೦೩, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ
  • ಗಣೇಶ ಮತ್ತು ಸರಸ್ವತಿಯರ ವಿಗ್ರಹ, ಭಾರತೀಯ ವಿದ್ಯಾಭವನ
  • ಸಪ್ತಋಷಿಗಳ ಶಿಲಾಶಿಲ್ಪ - ಕುಳಿತ ಭಂಗಿಯಲ್ಲಿ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
  • ವಿಶ್ವಾಮಿತ್ರರ ಮಹರ್ಷಿ - ೭ ಅಡಿ ಶಿಲಾಶಿಲ್ಪ, ಚಿಕ್ಕ ಗುಬ್ಬಿಯ ತಪೋವನ ಆಶ್ರಮ
  • ಹನುಮಂತ - ೧೦ ಅಡಿ ಶಿಲಾಶಿಲ್ಪ , ಚಿಕ್ಕ ಗುಬ್ಬಿಯ ತಪೋವನ ಆಶ್ರಮ
  • ಗಣೇಶಮೂರ್ತಿ, ಮಲ್ಲೇಶ್ವರ
  • ಸಮುದ್ರ ಮಂಥನದ ಶಿಲಾಶಿಲ್ಪ - ೬ ಅಡಿ ಎತ್ತರ
  • ಪುರಂದರದಾಸರ ವಿಗ್ರಹ, ಇಂದಿರಾನಗರ ಸಂಗೀತ ಸಭಾ
  • ಕುವೆಂಪು ಪ್ರತಿಮೆ, ಲಾಲ್‌ಬಾಗ್ ಪಶ್ಚಿಮ ದ್ವಾರ
  • ಸರ್ ಎಂ. ವಿಶ್ವೇಶ್ವರಯ್ಯ
  • ವೀಣೆ ದೊರೆಸ್ವಾಮಿ ಅಯ್ಯಂಗಾರ್
  • ಗಂಗೂಬಾಯಿ ಹಾನ್‌ಗಲ್
  • ಕೆ. ಎಂ. ಮುಂಷಿ
  • ಶಿವರಾಮ ಕಾರಂತರ ಎದೆ ವಿಗ್ರಹ, ಉಡುಪಿಯ ಸಾಲಿಗ್ರಾಮದ ವಸ್ತುಸಂಗ್ರಹಾಲಯ
  • ಪಿ. ಎಂ. ಎ. ಪೈರವರ ಫ಼ೈಬರ್ ಗ್ಲಾಸ್‌ ಶಿಲ್ಪ, ಮಣಿಪಾಲ್ ವಿಶ್ವವಿದ್ಯಾಲಯ
  • ಡಿ. ಎ. ಪಾಂಡುರವರ ಕಂಚಿನ ಎದೆ ವಿಗ್ರಹ, ಆರ್. ವಿ. ದಂತ ವಿದ್ಯಾಲಯ
  • ಪ್ರೊ. ಎಂ. ಪಿ. ಎಲ್. ಶಾಸ್ತ್ರಿ (ಎಂ. ಇ. ಎಸ್. ಕಾಲೇಜಿನ ಸಂಸ್ಥಾಪಕರು)ರವರ ಫ಼ೈಬರ್ ಗ್ಲಾಸ್‌ ಶಿಲ್ಪ
  • ಶರಣಬಸಪ್ಪ ಅಪ್ಪರವರ ಎದೆ ವಿಗ್ರಹ, ಗುಲ್ಬರ್ಗ
  • ಕೆ. ಕೆ. ಹೆಬ್ಬಾರ್ - ಲೋಹ
  • ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ - ಲೋಹ
  • ಪಂ. ರಾಮರಾವ್ ನಾಯಕ್ - ಫ಼ೈಬರ್ ಗ್ಲಾಸ್‌
  • ಬೆಳೆಗರೆ ಚಂದ್ರಶೇಖರ ಶಾಸ್ತ್ರಿಗಳು - ಫ಼ೈಬರ್ ಗ್ಲಾಸ್‌

ಪ್ರಶಸ್ತಿಗಳು

  • ೧೯೭೦ - ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ
  • ೧೯೮೮ - ನಾಗಪುರದಲ್ಲಿ ಜರುಗಿದ ಶಿಲ್ಪಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ
  • ೧೯೯೬ - ಕನ್ನಡ ರಾಜ್ಯೊತ್ಸವ ಪ್ರಶಸ್ತಿ (ಕರ್ನಾಟಕ ಸರ್ಕಾರ)
  • ೧೯೯೯ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ
  • ೨೦೧೦ - ಜಕಣಾಚಾರಿ ಪ್ರಶಸ್ತಿ (ಕರ್ನಾಟಕ ಸರ್ಕಾರ)
  • ೨೦೧೬ - ಶ್ರೀ ವನಮಾಲಿ ಸೇವಾ ಪ್ರಶಸ್ತಿ

ಬರವಣಿಗೆ

ಲೇಖನಗಳು

ಶಿಲ್ಪಕಲೆ ಕುರಿತು ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ

  • ಡೆಕ್ಕನ್ ಹೆರಾಲ್ಡ್
  • ಇಂಡಿಯನ್ ಎಕ್ಸ್‌ಪ್ರೆಸ್
  • ತರಂಗ
  • ವಿಜಯವಾಣಿ
  • ಪ್ರಜಾವಾಣಿ
  • ಉದಯವಾಣಿ

ಪುಸ್ತಕಗಳು

  • "ಉತ್ತುಂಗ ಶಿಖರ ಶಿಲ್ಪಿ" - ಡಿ. ವಾದಿರಾಜ್‍ರವರನ್ನು ಕುರಿತ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿರುವ
  • "ನಮ್ಮದನಿ" - ೨೦೦೮ - ಕರ್ನಾಟಕ ಶಿಲ್ಪಕಲಾ ಅಕಾಡೆಮಿ - ಸಾಂಪ್ರದಾಯಿಕ ಶಿಲ್ಪಿಗಳನ್ನು ಕುರಿತು
  • "ಹೌದೇ? ಇದು ನಾನೇ!" - ೨೦೧೪ - ಭಾರತೀಯ ವಿದ್ಯಾಭವನ ಪ್ರಕಟಿಸಿದ ಆತ್ಮಚರಿತ್ರೆ[೯]

ನಿಧನ

ಮೇ ೧೩, ೨೦೨೧ ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು.[೧೦]

  1. https://www.vijayavani.net/a-sculptor-kanaka-murthy-is-no-more/
  2. https://www.newindianexpress.com/lifestyle/fashion/2021/may/15/kanaka-murthy-was-a-pioneer-former-unesco-ambassadorchiranjiv-singh-2302621.html
  3. https://www.thehindu.com/news/national/karnataka/kanaka-murthy-passes-away/article34561711.ece
  4. https://www.youtube.com/watch?v=tHeQZD4djGQ
  5. https://www.youtube.com/watch?v=yfj9sRv-rfE
  6. https://www.youtube.com/watch?v=yfj9sRv-rfE
  7. https://www.youtube.com/watch?v=rjy9EtU2PjI
  8. https://www.vijayavani.net/a-sculptor-kanaka-murthy-is-no-more/
  9. ಶಿಲೆಗಳ ಮೂಲಕ ಜೀವನಗಾನ, ಪ್ರಜಾವಾಣಿ, 13 ಏಪ್ರಿಲ್ 2014
  10. https://www.prajavani.net/artculture/art/lifestyle-of-sculpture-artist-kanaka-murthy-834383.html