ಮೂಡ್ನಾಕೂಡು ಚಿನ್ನಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಡ್ನಾಕೂಡು ಚಿನ್ನಸ್ವಾಮಿ
ಜನನ (1954-09-22) ೨೨ ಸೆಪ್ಟೆಂಬರ್ ೧೯೫೪ (ವಯಸ್ಸು ೬೯)
ಮೂಡ್ನಾಕೂಡು, ಚಾಮರಾಜನಗರ,ಕರ್ನಾಟಕ,ಭಾರತ.
ವೃತ್ತಿ
  • ಹಣಕಾಸು ಸಲಹೆಗಾರ,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  • ಬರಹಗಾರ
  • ಕವಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆM.Com. M.A.(Kan). D.Lit
ಕಾಲ1989–present
ಪ್ರಕಾರ/ಶೈಲಿDalit Literature
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಮಕ್ಕಳು2

ಮೂಡ್ನಾಕೂಡು ಚಿನ್ನಸ್ವಾಮಿ ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಎರಡನೆಯ ಹಂತದ ಸತ್ವಪೂರ್ಣ ದನಿಯಾಗಿದ್ದಾರೆ.[೧][೨] ಚಿನ್ನಸ್ವಾಮಿ ಅವರ 'ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ' ಪುಸ್ತಕಕ್ಕೆ ೨೦೨೨ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ.

ಜನನ, ಜೀವನ[ಬದಲಾಯಿಸಿ]

  • ಚಿನ್ನಸ್ವಾಮಿಯವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದು, ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ ೨೦ ವರ್ಷಗಳಿಂದ ಸಾಹಿತ್ಯ ವ್ಯವಸಾಯ ನಿರ್ವಹಿಸುತ್ತಿದ್ದಾರೆ. ಕವಿಯಾಗಿ ಚಿನ್ನಸ್ವಾಮಿಯವರು ಪ್ರಕಟಿಸಿದ ಸಂಕಲನಗಳು ಹಲವಿವೆ. ವೆನಿಜುಲಾ ದೇಶದ ಸ್ಪ್ಯಾನಿಷ್ ಭಾಷೆಗೂ ಇವರ ಕವನಗಳು ಅನುವಾದಗೊಂಡಿವೆ. ಹಿಂದಿಯಲ್ಲಿ ಅಂಗಾರ್ ಕೀ ಚೋಟಿಪರ್ (ಅನು: ಧರಣೀಂದ್ರ ಕುರಕುರಿ) ಎಂಬ ಸಂಕಲನ ಪ್ರಕಟವಾಗಿದೆ. ಇವರ ಕಾವ್ಯ ಕೃತಿಗಳಿಗೆ ನಾಡಿನ ವಿವಿಧ ಪುರಸ್ಕಾರ, ಬಹುಮಾನಗಳು ಲಭಿಸಿವೆ.

ಕೃತಿಗಳು[ಬದಲಾಯಿಸಿ]

ನಾಟಕಗಳು - ಕೆಂಡ ಮಂಡಲ,ಬಹುರೂಪಿ.

ಆತ್ಮಕಥೆ _ ನೆನಪಿನ ಹಕ್ಕಿಯ ಹಾರಲು ಬಿಟ್ಟು (೨೦೨೦ )

ಕವನಗಳ ಸಂಕಲನಗಳು[ಬದಲಾಯಿಸಿ]

  1. ಕೊಂಡಿಗಳು ಮತ್ತು ಮುಳ್ಳುಬೇಲಿಗಳು,[೩]
  2. ಗೋಧೂಳಿ,
  3. ಮತ್ತೆ ಮಳೆ ಬರುವ ಮುನ್ನ
  4. ನಾನನೊಂದು ಮರವಾಗಿದ್ದರೆ
  5. ಚಪ್ಪಲಿ ಮತ್ತು ನಾನು
  6. ನಾನೊಂದು ಮರವಾಗಿದ್ದರೆ,[೪]
  7. ಚಂದಿರನ ಕಣ‍್ಣು ಇಂಗಲಾರದ ಹುಣ್ಣು ಎಂಬುದು ಇವರ ಆಯ್ದ ಐವತ್ತು ಕವನಗಳ ಸಂಕಲನ.

ಸಣ್ಣ ಕಥೆಗಳ ಒಂದು ಸಂಗ್ರಹ[ಬದಲಾಯಿಸಿ]

  1. ಮೋಹದ ದೀಪ.

ನಾಟಕ ಕೃತಿಗಳು ಎರಡು[ಬದಲಾಯಿಸಿ]

  1. ಕೆಂಡಾಮಂಡಲ;
  2. ಅಪಘಾತ-ಅಂಗಭಂಗ.[೫]

ವಿಮಾ‌ರ್ಶಾತ್ಮಕ ಗದ್ಯ ಕೃತಿಗಳು[ಬದಲಾಯಿಸಿ]

ಸಾಹಿತ್ಯ, ಸಮಾಜ, ಸಂಪ್ರಾದಾಯ, ಆಧುನಿಕತೆಗಳನ್ನು ಕುರಿತು ಇವರು ಬರೆದ ವಿಮಾ‌ರ್ಶಾತ್ಮಕ ಗದ್ಯ ಕೃತಿಗಳು;[೬]

  1. ನೊಂದವರ ನೋವು [೭]
  2. ಮಾತು-ಮಂಥನ.[೮]

ಉಲ್ಲೇಖಗಳು[ಬದಲಾಯಿಸಿ]

  1. "Dalit Literature: Written in the Margins". OPEN Magazine. 6 May 2016. Retrieved 2 September 2017.
  2. "Progressive writers should support Dalits". Deccan Herald. 22 June 2007. Retrieved 2 September 2017.
  3. "Sensitive translation of Dalit experience". ದಿ ಹಿಂದೂ. 22 June 2017. Retrieved 2 September 2017.
  4. "A dialogue between Mudnakudu Chinnaswamy and Rowena Hill". The Journal of Commonwealth Literature. Retrieved 29 October 2017.
  5. "First Year PU Course Syllabus, Sl No 7" (PDF). Department of PU Education, Karnataka State. Archived from the original (PDF) on 13 ಜುಲೈ 2017. Retrieved 29 October 2017.
  6. "Academy awards for five". ದಿ ಹಿಂದೂ. 20 April 2010. Retrieved 2 September 2017.
  7. "Rajyotsava Awards (2014)". The New Indian Express. 31 October 2014. Retrieved 2 September 2017.
  8. "ಅಕಾಡೆಮಿಯ ಗೌರವ ಪುರಸ್ಕೃತರು" (PDF). Karnataka Sahitya Academy. Archived from the original (PDF) on 17 ಏಪ್ರಿಲ್ 2018. Retrieved 2 September 2017.