ನಂದಿವಾಡ ರತ್ನಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಂದಿವಾಡ ರತ್ನಶ್ರೀ
೨೦೧೧ ರಲ್ಲಿ ರತ್ನಶ್ರೀ
ಜನನ೨೬ ನವೆಂಬರ್ ೧೯೬೩
ಭಾರತ
ಮರಣ೯ ಮೇ ೨೦೨೧
ಕಾರ್ಯಕ್ಷೇತ್ರಖಗೋಳ ಭೌತಶಾಸ್ತ್ರಜ್ಞೆ, ವಿಜ್ಞಾನ ಸಂವಹನ
ಸಂಸ್ಥೆಗಳುನೆಹರು ತಾರಾಲಯಗಳು
ಅಭ್ಯಸಿಸಿದ ವಿದ್ಯಾಪೀಠಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
ಶೈಕ್ಷಣಿಕ ಸಲಹೆಗಾರರುಅಲಕ್ ರೇ

ನಂದಿವಾಡ ರತ್ನಶ್ರೀ (೨೬ ನವೆಂಬರ್ ೧೯೬೩ - ೯ ಮೇ ೨೦೨೧) ಅಥವಾ ಎನ್. ರತ್ನಶ್ರೀ ಅವರು ಭಾರತೀಯ ಖಗೋಳ ಭೌತಶಾಸ್ತ್ರಜ್ಞೆ, ವಿಜ್ಞಾನ ಸಂವಹನಕಾರ್ತಿ ಮತ್ತು ವಿಜ್ಞಾನ ಇತಿಹಾಸಕಾರ್ತಿಯಾಗಿದ್ದರು. ಅವರು ಸುಮಾರು ಇಪ್ಪತ್ತು ವರ್ಷಗಳ ಕಾಲ ಭಾರತದ ನೆಹರು ತಾರಾಲಯದ ನಿರ್ದೇಶಕರಾಗಿದ್ದರು. ತಾರಾಲಯದ ಸುಧಾರಣೆಗಳಿಗೆ ಮತ್ತು ಭಾರತದಲ್ಲಿ ಐತಿಹಾಸಿಕ ವಾಸ್ತುಶಿಲ್ಪದ ಖಗೋಳ ಉಪಕರಣಗಳ ಬಳಕೆಯ ಸಂಶೋಧನೆಯ ನೇತೃತ್ವ ವಹಿಸಿದ್ದರು. ಅವರು ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ.

ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಎನ್. ರತ್ನಶ್ರೀ ತಮ್ಮ ಬಾಲ್ಯವನ್ನು ಆಂಧ್ರಪ್ರದೇಶ ರಾಜ್ಯದಲ್ಲಿ ಕಳೆದರು. ಅವರು ಹೈದರಾಬಾದ್‌ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಫಾರ್ ವುಮೆನ್‌ನಲ್ಲಿ ಪದವಿ ಶಿಕ್ಷಣವನ್ನು ಪಡೆದರು ಮತ್ತು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು. ಅವರು ಭೌತಶಾಸ್ತ್ರಜ್ಞ ಅಲಕ್ ರೇ ಅವರ ಮೇಲ್ವಿಚಾರಣೆಯಲ್ಲಿ ಲಾರ್ಜ್ ಮೆಗೆಲಾನಿಕ್ ಕ್ಲೌಡ್‍ನಲ್ಲಿ ಯುಗಳ ನಕ್ಷತ್ರಗಳನ್ನು ಅಧ್ಯಯನ ಮಾಡಿದರು. [೧] ಅವರು ಭೌತಶಾಸ್ತ್ರಜ್ಞ ಪ್ಯಾಟ್ರಿಕ್ ದಾಸ್‍ಗುಪ್ತರನ್ನು ವಿವಾಹವಾದರು ಮತ್ತು ಅವರಿಗೆ ಒಬ್ಬ ಮಗನಿದ್ದನು. [೨] ಅವರು ೨೦೨೧ ರಲ್ಲಿ ಕೋವಿಡ್-೧೯ ರಿಂದ ನಿಧನರಾದರು. [೩]

ವೃತ್ತಿ[ಬದಲಾಯಿಸಿ]

ಎನ್. ರತ್ನಶ್ರೀ ಅವರು ೧೯೯೨ ರಿಂದ ೧೯೯೪ ರವರೆಗೆ ವರ್ಮೊಂಟ್ ವಿಶ್ವವಿದ್ಯಾಲಯದಲ್ಲಿ ಮತ್ತು ನಂತರ ೧೯೯೬ ರವರೆಗೆ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಪಲ್ಸರ್‌ಗಳ ರೇಡಿಯೋ ಅವಲೋಕನಗಳ ಸಂಶೋಧನೆಯನ್ನು ಮುಂದುವರೆಸಿದರು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲಸ ಮಾಡುವಾಗ, ಅವರು ಪೋರ್ಟೊ ರಿಕೊದ ಅರೆಸಿಬೊ ರೇಡಿಯೊ ಟೆಲಿಸ್ಕೋಪ್‌ನಲ್ಲಿ ವೀಕ್ಷಕರಾಗಿದ್ದರು, ಅಲ್ಲಿ ಅವರು ಪಲ್ಸರ್‌ಗಳಿಂದ ರೇಡಿಯೊ ಹೊರಸೂಸುವಿಕೆಯ ಸ್ಥಿರತೆಯನ್ನು ಸಂಶೋಧಿಸಿದರು. [೨]

೧೯೯೬ ರಲ್ಲಿ, ಅವರು ನವದೆಹಲಿಯ ನೆಹರು ತಾರಾಲಯದ ಆಡಳಿತಕ್ಕೆ ಸೇರಲು ಆಹ್ವಾನಿಸಲ್ಪಟ್ಟರು ಮತ್ತು ೧೯೯೯ ರಲ್ಲಿ ತಾರಾಲಯದ ನಿರ್ದೇಶಕರಾದರು. ಅವರು ೨೧ ವರ್ಷಗಳ ಅವಧಿಗೆ ತಾರಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರು ತಾರಾಲಯದ ಕಾರ್ಯವಿಧಾನಗಳನ್ನು ಆಪ್ಟೊ-ಮೆಕ್ಯಾನಿಕಲ್‌ನಿಂದ ಹೈಬ್ರಿಡ್ ಸಿಸ್ಟಮ್‌ಗೆ ನವೀಕರಿಸಿದರು, ಇದಕ್ಕಾಗಿ ಡಿಜಿಟಲ್ ಮತ್ತು ಮೆಕ್ಯಾನಿಕಲ್ ಪ್ರೊಜೆಕ್ಷನ್‌ಗಳನ್ನು ಬಳಸಲಾಯಿತು. ಜೊತೆಗೆ, ಅವರು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಹಲವಾರು ಮೇಲ್ವಿಚಾರಣೆಯ ಸಂಶೋಧನೆ ಮತ್ತು ಪ್ರಭಾವ ಕಾರ್ಯಕ್ರಮಗಳನ್ನು ನಡೆಸಿದರು. [೨] [೩] ಖಗೋಳ ವಿದ್ಯಮಾನಗಳನ್ನು ವೀಕ್ಷಿಸಲು ಮತ್ತು ಪ್ರಮುಖ ವೈಜ್ಞಾನಿಕ ಸಂಶೋಧಕರನ್ನು ಸ್ಮರಿಸಲು ಅವರು ಹಲವಾರು ಸಾರ್ವಜನಿಕ ವೀಕ್ಷಣೆ ಕಾರ್ಯಕ್ರಮಗಳನ್ನು ಪರಿಚಯಿಸಿದರು. [೪]

ದೆಹಲಿಯ ಜಂತರ್ ಮಂತರ್

೨೧ ನೇ ಶತಮಾನದ ಆರಂಭದಲ್ಲಿ, ಅವರು ಐತಿಹಾಸಿಕ ವಾಸ್ತುಶಿಲ್ಪದ ರಚನೆಗಳಲ್ಲಿ ಬಳಸಲಾದ ಖಗೋಳ ಉಪಕರಣಗಳ ಕಾರ್ಯನಿರ್ವಹಣೆಯ ಕುರಿತು ಸಂಶೋಧನೆಯನ್ನು ಪ್ರಾರಂಭಿಸಿದರು. ಜಂತರ್ ಮಂತರ್ ಎಂದು ಕರೆಯಲ್ಪಡುವ ಈ ರಚನೆಗಳನ್ನು ಭಾರತದ ಹಲವಾರು ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ರತ್ನಶ್ರೀ ಅವರು ದೆಹಲಿ, ಜೈಪುರ, ಉಜ್ಜಯಿನಿ ಮತ್ತು ವಾರಣಾಸಿಯಲ್ಲಿ ಸ್ಥಾಪಿಸಲಾದ ಕಲ್ಲಿನ ಜಂತರ್ ಮಂತರ್‌ಗಳೊಂದಿಗೆ ಕೆಲಸ ಮಾಡಿದರು. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅವುಗಳ ಉಪಯೋಗಗಳನ್ನು ಕಲಿಸಿದರು ಮತ್ತು ಅವುಗಳ ಐತಿಹಾಸಿಕ ಬಳಕೆ ಮತ್ತು ವಿನ್ಯಾಸದ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. [೫] [೬] ಇಂದಿನ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರವನ್ನು ಕಲಿಸುವಾಗ ಕಲ್ಲಿನಿಂದ ನಿರ್ಮಿಸಲಾದ ಜಂತರ್ ಮಂತರ್ ವೀಕ್ಷಣಾಲಯಗಳನ್ನು ಬಳಸಬಹುದು ಎಂದು ರತ್ನಶ್ರೀ ಪ್ರಸ್ತಾಪಿಸಿದರು. [೭] ನಂತರ ಅವರು ದೆಹಲಿಯ ಜಂತರ್ ಮಂತರ್ ಅನ್ನು ಮರುಸ್ಥಾಪಿಸುವ ಯೋಜನೆಯಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆಯೊಂದಿಗೆ ಕೆಲಸ ಮಾಡಿದರು. ೨೦೧೮ ರಲ್ಲಿ ಜೈಪುರದಲ್ಲಿ ಸೌರ ಭೌತಶಾಸ್ತ್ರದ ಕುರಿತು ಇಂಟರ್‌ನ್ಯಾಷನಲ್ ಆಸ್ಟ್ರೋನಾಮಿಕಲ್ ಯೂನಿಯನ್ ಸಿಂಪೋಸಿಯಂ (ಐಎಯುಎಸ್೩೪೦) ನ ಸಮಯದಲ್ಲಿ, ಅವರು ಜೈಪುರದ ಜಂತರ್ ಮಂತರ್ ಅನ್ನು ಸಂಶೋಧಕರಿಗೆ ಪರಿಚಯಿಸಿದರು. [೨] [೮] [೯]

ಅವರು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಸದಸ್ಯರಾಗಿದ್ದರು ಮತ್ತು ೨೦೧೪ ರಲ್ಲಿ ಅವರು ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿ ಅವರು ಸಾಮಾನ್ಯ ಜನರಿಗೆ ವೈಜ್ಞಾನಿಕ ಕಲ್ಪನೆಗಳು ಮತ್ತು ಪರಿಕಲ್ಪನೆಗಳ ಸಂವಹನವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ಕಾರ್ಯಕ್ರಮಗಳನ್ನು ನಿರ್ದೇಶಿಸಿದರು. [೧೦] ೨೦೧೯ ರಲ್ಲಿ, ಮಹಾತ್ಮಾ ಗಾಂಧಿಯವರ ಜನ್ಮದಿನದ ೧೫೦ ನೇ ವಾರ್ಷಿಕೋತ್ಸವದ ನೆನಪಿಗಾಗಿ, ಅವರು ಖಗೋಳಶಾಸ್ತ್ರದ ಕುರಿತು ಅವರ ಬರವಣಿಗೆಯನ್ನು ಸಂಗ್ರಹಿಸಿದರು ಮತ್ತು ಅವರು ಭೇಟಿ ನೀಡಿದ ಖಗೋಳ ಆಸಕ್ತಿಯ ಸ್ಥಳಗಳಿಗೆ ಭೇಟಿ ನೀಡುವ ಜಾಡು ರೂಪಿಸಿದರು. [೧೧] [೧೨] ಅವರು ಖಗೋಳಶಾಸ್ತ್ರ-ಸಂಬಂಧಿತ ಸಂವಹನಗಳ ಸಲಹೆಗಾರರಾಗಿ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂಗಳೊಂದಿಗೆ ಕೆಲಸ ಮಾಡಿದರು. ಮತ್ತು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ ವಿಜ್ಞಾನ-ಸಂಬಂಧಿತ ಪ್ರಕಟಣೆಗಳಿಗೆ ಮುಖ್ಯ ಸಂಪಾದಕರಾಗಿದ್ದರು. [೧೩] ಅವರು ಜ್ಯೋತಿಷ್ಯದ ತೀವ್ರ ವಿರೋಧಿಯಾಗಿದ್ದರು. ಉನ್ನತ ಶಿಕ್ಷಣದಲ್ಲಿ ಜ್ಯೋತಿಷ್ಯವನ್ನು ಕಲಿಸಲು ಭಾರತೀಯ ವಿಶ್ವವಿದ್ಯಾಲಯ ಅನುದಾನ ಆಯೋಗ ನಿರ್ಧಾರವನ್ನು ಮಾಡಿದಾಗ ಅದನ್ನು ಟೀಕಿಸಿ ಸಾರ್ವಜನಿಕವಾಗಿ ಲೇಖನವನ್ನು ಬರೆದರು. [೧೪] ಅವರು ಭಾರತದಲ್ಲಿ ಬೆಳಕಿನ ಮಾಲಿನ್ಯದ ವಿರುದ್ಧ ಪ್ರತಿಪಾದಿಸಿದ್ದರು. [೧೫]

ಉಲ್ಲೇಖಗಳು[ಬದಲಾಯಿಸಿ]

  1. "Dr Nandivada Rathnasree; 10 Things To Know About The Well-Known Astronomy Communicator" (in ಅಮೆರಿಕನ್ ಇಂಗ್ಲಿಷ್). Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  2. ೨.೦ ೨.೧ ೨.೨ ೨.೩ Sule, Aniket; Ramanujam, Niruj Mohan (11 ಜೂನ್ 2021). "Remembering Rathnasree Nandivada, Who Brought the Stars To All of Us". The Wire Science (in ಬ್ರಿಟಿಷ್ ಇಂಗ್ಲಿಷ್). Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  3. ೩.೦ ೩.೧ Sharma, Pranav. "Nandivada Rathnasree (1963–2021): Passionate astronomy educator who helped many reach for the stars". Scroll.in (in ಅಮೆರಿಕನ್ ಇಂಗ್ಲಿಷ್). Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  4. Bhattacharya, Amit (12 ಮೇ 2021). "Delhi: Scientist who made Nehru Planetarium a city icon dies". The Times of India (in ಇಂಗ್ಲಿಷ್). Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  5. Rathnasree, N. (1 ನವೆಂಬರ್ 2004). "Venus elongation measurement for the Transit of Venus, using the historical Jantar Mantar Observatory". Resonance (in ಇಂಗ್ಲಿಷ್). 9 (11): 46–55. doi:10.1007/BF02834972. ISSN 0973-712X. Archived from the original on 17 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  6. Rathnasree, Nandivada; Das Gupta, Patrick; Garg, Anurag (1 ಜನವರಿ 2019). "A Quantitative Study of Accuracies in Positions of Star Markers on Historical Astrolabes". The Growth and Development of Astronomy and Astrophysics in India and the Asia-Pacific Region. Astrophysics and Space Science Proceedings. 54: 29–56. Bibcode:2019ASSP...54...29R. doi:10.1007/978-981-13-3645-4_3. ISBN 978-981-13-3644-7. Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  7. Rathnasree, N. (1 ಮಾರ್ಚ್ 2017). "Jantar Mantar observatories as teaching laboratories for positional astronomy". Resonance (in ಇಂಗ್ಲಿಷ್). 22 (3): 201–212. doi:10.1007/s12045-017-0453-6. ISSN 0973-712X. Archived from the original on 17 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  8. "INSAP IX". sophia-project.net. Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  9. "Credits". Jantar Mantar (in ಇಂಗ್ಲಿಷ್). Archived from the original on 24 ನವೆಂಬರ್ 2021. Retrieved 1 ಡಿಸೆಂಬರ್ 2021.
  10. "Nehru Planetarium director Dr Nandivada Rathnasree dies of Covid-19". Hindustan Times (in ಇಂಗ್ಲಿಷ್). 12 ಮೇ 2021. Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  11. "Mahatma Gandhi's little-known love affair with stargazing and astronomy". The Week (in ಇಂಗ್ಲಿಷ್). Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  12. "Gandhi Jayanti: Celebrations to mark Bapu's love for stars and sky gazing start at Yerwada prison in Pune". The Indian Express (in ಇಂಗ್ಲಿಷ್). 2 ಅಕ್ಟೋಬರ್ 2018. Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  13. Astronomical Society of India. "Dr. Nandivada Rathnasree, 26 November, 1963 – 09 May, 2021" (PDF). Tata Institute of Fundamental Research. Archived from the original (PDF) on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  14. "Astrology: An Abuse Of Astronomy". Outlook India (in ಇಂಗ್ಲಿಷ್). Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.
  15. Goswami, Urmi. "World Environment Day: Why kids in Delhi are growing up without seeing a starry sky". The Economic Times. Archived from the original on 1 ಡಿಸೆಂಬರ್ 2021. Retrieved 1 ಡಿಸೆಂಬರ್ 2021.