ದಹಿ ಹಂಡಿ
ದಹಿ ಹಂಡಿ | |
---|---|
ಮುಂಬೈನ ಹಿರನಂದನಿ ಗಾರ್ಡನ್ಸ್ನಲ್ಲಿ ಗೋವಿಂದರು ಮಣ್ಣಿನ ಮಡಕೆಯನ್ನು ತಲುಪಿ, ಅದನ್ನು ಒಡೆಯಲು ಪಿರಮಿಡ್ ರಚಿಸಿರುವುದು | |
ಪರ್ಯಾಯ ಹೆಸರುಗಳು | ಉತ್ಲೋತ್ಸವ, ಸಿಖ್ಯೋತ್ಸವ[೧] |
ಆಚರಿಸಲಾಗುತ್ತದೆ | ಹಿಂದೂ |
ರೀತಿ | ಧಾರ್ಮಿಕ |
ಆಚರಣೆಗಳು | ೧ ದಿನ |
ಆಚರಣೆಗಳು | ಉಪವಾಸ, ಪ್ರಾರ್ಥನೆ, ಜನರು ಪಿರಮಿಡ್ ಮಾಡಿ ಎತ್ತರದಲ್ಲಿ ನೇತುಹಾಕಿದ ಪಿರಮಿಡ್ ಅನ್ನು ಒಡೆಯುವುದು. |
ಸಂಬಂಧಪಟ್ಟ ಹಬ್ಬಗಳು | ಕೃಷ್ಣ |
ದಹಿ ಹಂಡಿ[೩][೪][೫] ಕೃಷ್ಣ ಜನ್ಮಾಷ್ಟಮಿಗೆ ಸಂಬಂಧಿಸಿದ ಮನೋರಂಜನಾ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮ. ಇದು ಕೃಷ್ಣನ ಜನ್ಮವನ್ನು ಆಚರಿಸುವ ಹಿಂದೂ ಹಬ್ಬ.[೬][೭]
ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಕೃಷ್ಣ ಜನ್ಮಾಷ್ಟಮಿಯ ನಂತರದ ದಿನದಂದು ಈ ಕಾರ್ಯಕ್ರಮ ನಡೆಯುತ್ತದೆ. ಇದು ಸಮುದಾಯಗಳು ಮೊಸರು ( ದಹಿ ), ಬೆಣ್ಣೆ ಅಥವಾ ಇತರ ಹಾಲು ಆಧಾರಿತ ಆಹಾರದಿಂದ ತುಂಬಿದ ಮಣ್ಣಿನ ಮಡಕೆಯನ್ನು ಎತ್ತರದಲ್ಲಿ ನೇತುಹಾಕಿ ಅದನ್ನು ಒಡೆಯುವುದನ್ನು ಒಳಗೊಂಡಿರುತ್ತದೆ. ಯುವಕರು ಮತ್ತು ಯುವತಿಯರು ತಂಡಗಳನ್ನು ರಚಿಸಿಕೊಂಡು, ಮಾನವ ಪಿರಮಿಡ್ ಅನ್ನು ನಿರ್ಮಿಸುತ್ತಾರೆ ಮತ್ತು ಮಡಕೆಯನ್ನು ತಲುಪಿ ಅದನ್ನು ಒಡೆಯಲು ಪ್ರಯತ್ನಿಸುತ್ತಾರೆ. ಅವರು ಹಾಗೆ ಮಾಡುವಾಗ, ಜನರು ಅವರನ್ನು ಸುತ್ತುವರೆದು, ಹಾಡುತ್ತಾರೆ, ಸಂಗೀತ ನುಡಿಸುತ್ತಾರೆ ಮತ್ತು ಅವರನ್ನು ಹುರಿದುಂಬಿಸುತ್ತಾರೆ.[೮][೯][೧೦] ಈ ಘಟನೆಯು ಕೃಷ್ಣನು ಬಾಲ್ಯದಲ್ಲಿ ಗೋಕುಲದ ನೆರೆಯ ಮನೆಗಳಿಂದ ಬೆಣ್ಣೆ ಮತ್ತು ಇತರ ಮೊಸರನ್ನು ತನ್ನ ಸ್ನೇಹಿತರೊಂದಿಗೆ ತುಂಟತನದಿಂದ ಕದಿಯುವ ದಂತಕಥೆಯನ್ನು ಆಧರಿಸಿದೆ. ಅವನನ್ನು ಮಖನ್ ಚೋರ್ ಅಥವಾ ಬೆಣ್ಣೆ ಕಳ್ಳ ಎಂದೂ ಕರೆಯುತ್ತಾರೆ. ನೆರೆಹೊರೆಯವರು ಮಡಕೆಗಳನ್ನು ಅವನ ಕೈಗೆಟುಕದಂತೆ ಎತ್ತರದಲ್ಲಿ ನೇತುಹಾಕುವ ಮೂಲಕ ಅವನ ದುಷ್ಕೃತ್ಯವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಆದರೆ ಕೃಷ್ಣ ಅವುಗಳನ್ನು ತಲುಪಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದ.[೧೧][೧೨]
ಮಹತ್ವ ಮತ್ತು ವಿವರಣೆ
[ಬದಲಾಯಿಸಿ]
ಮಹಾರಾಷ್ಟ್ರದಲ್ಲಿ, ಜನ್ಮಾಷ್ಟಮಿಯಲ್ಲಿ ದಹಿ ಹಂಡಿಯನ್ನು ಆಚರಿಸಲಾಗುತ್ತದೆ [೧೩] ಇದನ್ನು ಸರಿಸುಮಾರು ಪ್ರತಿ ಆಗಸ್ಟ್ನಲ್ಲಿ ಆಯೋಜಿಸಲಾಗುತ್ತದೆ.[೧೪] ದೇಶದ ಉಳಿದ ಭಾಗಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲ್ಪಡುವ ಗೋಕುಲಾಷ್ಟಮಿ ಹಬ್ಬವು ಕೃಷ್ಣನ ಜನ್ಮದ ಆಚರಣೆಯಾಗಿದೆ ಮತ್ತು ದಹಿ ಹಂಡಿ ಅದರ ಭಾಗವಾಗಿದೆ.[೧೫] ಈ ಕಾರ್ಯಕ್ರಮದಲ್ಲಿ ಮಾನವ ಪಿರಮಿಡ್ ತಯಾರಿಸಿ, ಹಾಲು, ಮೊಸರು, ಬೆಣ್ಣೆ, ಹಣ್ಣುಗಳು ಮತ್ತು ನೀರಿನಿಂದ ತುಂಬಿದ ಮಣ್ಣಿನ ಮಡಕೆಯನ್ನು ಒಡೆಯಲಾಗುತ್ತದೆ. ಹೀಗೆ ಬಾಲ ಕೃಷ್ಣನ ಕ್ರಿಯೆಗಳನ್ನು ಅನುಕರಿಸಲಾಗುತ್ತದೆ.[೧೬] ಕೆಲವೊಮ್ಮೆ ಬಹುಮಾನದ ಹಣವನ್ನೂ ಮಡಕೆಯಲ್ಲೇ ಹಾಕಲಾಗುತ್ತದೆ.[೧೭]
ಈ ಮಾನವ ಪಿರಮಿಡ್ ರಚನೆಯಲ್ಲಿ ಭಾಗವಹಿಸುವ ಜನರನ್ನು ಉಲ್ಲೇಖಿಸಲು ಗೋವಿಂದ (ಕೃಷ್ಣನ ಇನ್ನೊಂದು ಹೆಸರು) ಅಥವಾ ಗೋವಿಂದ ಪಾಠಕ್ ಎಂಬ ಪದಗಳನ್ನು ಬಳಸಲಾಗುತ್ತದೆ. ನಿಜವಾದ ಘಟನೆ ನಡೆಯುವ ವಾರಗಳ ಮೊದಲು ಅವರು ಗುಂಪುಗಳಲ್ಲಿ ಅಭ್ಯಾಸ ಮಾಡುತ್ತಾರೆ. ಈ ಗುಂಪುಗಳನ್ನು ಮಂಡಲಗಳು ಎಂದು ಕರೆಯಲಾಗುತ್ತದೆ. ಕಾರ್ಯಕ್ರಮದ ಸಮಯದಲ್ಲಿ ಸಾಧ್ಯವಾದಷ್ಟು ಮಡಕೆಗಳನ್ನು ಒಡೆಯಲು ಪ್ರಯತ್ನಿಸುತ್ತಾರೆ. ಪಿರಮಿಡ್ ರಚನೆಗೆ ಸಮನ್ವಯ ಮತ್ತು ಗಮನ ಬೇಕು. ಪಿರಮಿಡ್ನ ಕೆಳಗೆ ಹೆಚ್ಚಿನ ಜನರಿರಬೇಕು, ಮೇಲಾಗಿ ಅವರು ಗಟ್ಟಿಮುಟ್ಟಾಗಿರಬೇಕು. ಮಧ್ಯದಲ್ಲಿ ನಿಲ್ಲುವ ಆಟಗಾರರು ಕೆಳಗಿನವರು ಮತ್ತು ತಮ್ಮ ಭುಜದ ಮೇಲೆ ನಿಂತಿರುವವರ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಮೇಲೆ ನಿಂತ ವ್ಯಕ್ತಿಗಳು ಸಮತೋಲನವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಮೇಲೆ ಹಗುರವಾದ ಜನರ ಅಗತ್ಯವಿರುವುದರಿಂದ, ಅಲ್ಲಿ ಸಾಮಾನ್ಯವಾಗಿ ಒಂದೇ ವ್ಯಕ್ತಿಯನ್ನು ನಿಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ಮಡಕೆ ಒಡೆಯುವಾಗ ಅದರಲ್ಲಿನ ವಸ್ತುಗಳು ಭಾಗವಹಿಸುವವರ ಮೇಲೆ ಚೆಲ್ಲುತ್ತವೆ.[೧೮] ಪ್ರೇಕ್ಷಕರು ಮಡಕೆ ಒಡೆಯುವವರನ್ನು ತಡೆಯಲು ಅವರ ಮೇಲೆ ನೀರನ್ನು ಎರಚುತ್ತಾರೆ. ಜನರು ಮರಾಠಿಯಲ್ಲಿ " ಅಲಾ ರೇ ಅಲಾ, ಗೋವಿಂದ ಅಲಾ " (ಗೋವಿಂದರು ಬಂದಿದ್ದಾರೆ) ಎಂದು ಜಪಿಸುತ್ತಾರೆ.[೧೪][೧೯]
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಹಬ್ಬವನ್ನು ಉತ್ಲೋತ್ಸವಂ ( ತೆಲುಗಿನಲ್ಲಿ ಉತ್ತಿ: ಮಡಿಕೆಗಳನ್ನು ನೇತುಹಾಕಲು ಬಳಸುವ ನಾರಿನ ಜಾಲದ ಜೋಲಿ ಮತ್ತು ಉತ್ಸವಂ: ಹಬ್ಬ) ಎಂದು ಆಚರಿಸಲಾಗುತ್ತದೆ. ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ, ಈ ಪ್ರಾಚೀನ ಕ್ರೀಡೆಯನ್ನು ನವಮಿಯಂದು (ಕೃಷ್ಣ ಜನ್ಮಾಷ್ಟಮಿಯ ನಂತರದ ದಿನ) ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.[೨೦] ಶ್ರೀ ಕೃಷ್ಣ ಸ್ವಾಮಿ ಮತ್ತು ಶ್ರೀ ಮಲಯಪ್ಪ ಸ್ವಾಮಿಯ ಮೆರವಣಿಗೆಯ ದೇವರುಗಳನ್ನು ದೇವಾಲಯದ ಸುತ್ತಲೂ ಮೆರವಣಿಗೆಯಲ್ಲಿ ದೇವಾಲಯದ ಮುಂಭಾಗದಲ್ಲಿರುವ ಉತ್ಲೋತ್ಸವ ನಡೆಯುವ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಬಹುಮಾನದ ಹಣವನ್ನು ಗೆಲ್ಲಲು ಪ್ರಯತ್ನಿಸಲು ಸ್ಥಳೀಯ ಯುವಕರು ಈ ಕ್ರೀಡೆಯನ್ನು ಆಡುತ್ತಾರೆ. ಈ ಹಣವನ್ನು ೨೫ ಅಡಿ ಉದ್ದದ ಮರದ ಕಂಬದ ತುದಿಗೆ ಕಟ್ಟಲಾಗುತ್ತದೆ, ಅದರ ಮೇಲೆ ಜಿಗುಟಾದ ಮತ್ತು ಇತರ ಎಣ್ಣೆಯುಕ್ತ ಪದಾರ್ಥಗಳನ್ನು ಲೇಪಿಸಲಾಗುತ್ತದೆ.
ಆಚರಣೆ ಮತ್ತು ಬಹುಮಾನ
[ಬದಲಾಯಿಸಿ]ಭಾಗವಹಿಸುವವರು ಸಾಮಾನ್ಯವಾಗಿ ೯ ಹಂತಗಳಿಗಿಂತ ಕಡಿಮೆ ಇರುವ ಪಿರಮಿಡ್ ಅನ್ನು ರೂಪಿಸುತ್ತಾರೆ ಮತ್ತು ಮಣ್ಣಿನ ಮಡಕೆಯನ್ನು ಒಡೆಯಲು ಅವರಿಗೆ ಮೂರು ಪ್ರಯತ್ನಗಳನ್ನು ನೀಡಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಜನರು ಮತ್ತು ನೂರಾರು ಗೋವಿಂದ ತಂಡಗಳು ಪುಣೆ, ಮುಂಬೈ ಮತ್ತು ಥಾಣೆಯ ದಹಿ ಹಂಡಿ ಕಾರ್ಯಕ್ರಮಗಳಲ್ಲಿ ಸೇರುತ್ತವೆ. ೨೦೧೧ ರ ವರದಿಯ ಪ್ರಕಾರ, ಕಾರ್ಯಕ್ರಮಗಳ ಬಹುಮಾನದ ಹಣವು ಸಾಮಾನ್ಯವಾಗಿ ಆಯೋಜಕರು ಮತ್ತು ಅದರ ಪ್ರಾಯೋಜಕರನ್ನು ಅವಲಂಬಿಸಿ ₹1 ಲಕ್ಷ (ಯುಎಸ್$೨,೨೦೦) – ₹12 ಲಕ್ಷ (ಯುಎಸ್$೨೬,೬೦೦) ದ ನಡುವೆ ಇರುತ್ತದೆ.[೨೧] ಪ್ರತಿ ವರ್ಷ, ರಾಜಕೀಯ ಪಕ್ಷಗಳ ಭಾಗವಹಿಸುವಿಕೆ ಮತ್ತು ವಾಣಿಜ್ಯೀಕರಣದಿಂದಾಗಿ ಆಚರಣೆಗಳ ಬಹುಮಾನಗಳು ಮತ್ತು ಪ್ರಮಾಣವು ಹೆಚ್ಚಾಗುತ್ತದೆ.[೨೧]
ಸ್ಥಳೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಈ ಕಾರ್ಯಕ್ರಮದ ಸಂದರ್ಭದಲ್ಲಿ ಸಕ್ರಿಯವಾಗಿದ್ದು, ಪ್ರತಿಯೊಂದೂ ತಮ್ಮದೇ ಆದ ಬಹುಮಾನದ ಹಣವನ್ನು ನೀಡುತ್ತವೆ. ಪ್ರತಿಯೊಂದು ಪಕ್ಷವು ತನ್ನದೇ ಆದ ಮಂಡಲಗಳ ಗುಂಪನ್ನು ಪ್ರಾಯೋಜಿಸುತ್ತದೆ.[೨೨] ೨೦೦೦ ದ ದಶಕದಲ್ಲಿ ಅವರ ಒಳಗೊಳ್ಳುವಿಕೆ ಹೆಚ್ಚಾಗಿದೆ. ಇದರಿಂದಾಗಿ ಸ್ಪರ್ಧೆ ಮತ್ತು ಬಹುಮಾನದ ಹಣ ಹೆಚ್ಚಾಗಿದೆ. ಹೀಗಾಗಿ, ನಗರದಾದ್ಯಂತ ಬಹುಮಾನಗಳಿಗಾಗಿ ಹಲವಾರು ತಂಡಗಳು ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತವೆ.[೨೩] ಬಾಲಿವುಡ್ ನಟರು, ಮರಾಠಿ ನಟರು ಮತ್ತು ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.[೨೨][೨೪][೨೫]

೨೦೧೨ ರಲ್ಲಿ, ಮುಂಬೈನ ಜೋಗೇಶ್ವರಿಯ ಜೈ ಜವಾನ್ ಗೋವಿಂದ ಪಾಠಕ್ ಎಂಬ ಮಂಡಲ ಥಾಣೆಯಲ್ಲಿ ನಡೆದ ದಹಿ ಹಂಡಿ ಕಾರ್ಯಕ್ರಮದಲ್ಲಿ ೯ ಹಂತಗಳ 43.79 feet (13.35 m) ಮಾನವ ಪಿರಮಿಡ್ ಅನ್ನು ರಚಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶ ಪಡೆಯಿತು. ಅದಕ್ಕೂ ಮೊದಲು ೧೯೮೧ ರಿಂದ ಈ ದಾಖಲೆ ಸ್ಪೇನ್ ಪಾಲಿನದಾಗಿತ್ತು.[೨೬][೨೭] ಅದೇ ವರ್ಷದಲ್ಲಿ ಇದನ್ನು ಅಧಿಕೃತ ಕ್ರೀಡೆಯನ್ನಾಗಿ ಮಾಡುವ ಸಾಧ್ಯತೆಗಾಗಿ ಒಂದು ಲಾಬಿ ಒತ್ತಾಯಿಸಿತು, ಆದರೆ ವಿಮರ್ಶಕರು ಇದು ಕೇವಲ ಬೀದಿ ಆಚರಣೆಯಾಗಿ ಉಳಿಯಬೇಕೆಂದು ಹೇಳಿದರು.[೨೮]
೨೦೦೮ ರಲ್ಲಿ ಮಜಗಾಂವ್ ಸಾರ್ವಜನಿಕ ಗಣೇಶೋತ್ಸವ ಮಂಡಲ ಎಂದು ಕರೆಯಲ್ಪಡುವ ಒಂದು ಮಂಡಲವು ಥಾಣೆಯ ವರ್ತಕ್ ನಗರದಲ್ಲಿ ಭಾರತದಲ್ಲಿ ಮೊದಲ ೯ ಹಂತದ ಮಾನವ ಪಿರಮಿಡ್ ಅನ್ನು ನಿರ್ಮಿಸಿತು.[೨೯] ಮಜಗಾಂವ್ ಪ್ರದೇಶವು ದೀರ್ಘಕಾಲದವರೆಗೆ ಎಲ್ಲಾ ಆಚರಣೆಗಳನ್ನು ನಿರ್ವಹಿಸುತ್ತಾ ಮತ್ತು ಅನುಸರಿಸುತ್ತಾ ಬಂದಿರುವುದರಿಂದ ಅವರನ್ನು ದಹಿ ಹಂಡಿ ಚಿ ಪಂಢರಿ ಎಂದೂ ಕರೆಯುತ್ತಾರೆ.[೩೦] ಅಲ್ಲದೆ ಮಜಗಾಂವ್ ತಡ್ವಾಡಿ ಗೋವಿಂದ ಪಾಠಕ್ ಮೊದಲ ೬-ಶ್ರೇಣಿಯ, ೭-ಶ್ರೇಣಿಯ ಮತ್ತು ೮-ಶ್ರೇಣಿಯ ಪಿರಮಿಡ್ಗಳನ್ನು ನಿರ್ಮಿಸಿದರು.
ಸಮಸ್ಯೆಗಳು
[ಬದಲಾಯಿಸಿ]ಈ ಸಾಮೂಹಿಕ ಆಚರಣೆಗಳು ಮತ್ತು ಮಂಡಲಗಳ ಉಪಸ್ಥಿತಿಯು ಸಂಚಾರ ದಟ್ಟಣೆ ಮತ್ತು ಮಾಲಿನ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ.[೨೭] ಭಾರತದ ಸುಪ್ರೀಂ ಕೋರ್ಟ್ನ ನಿಗದಿತ ಮಾರ್ಗಸೂಚಿಗಳು ೫೫–೬೫ ಡೆಸಿಬಲ್ಗಳನ್ನು ಮಾತ್ರ ಅನುಮತಿಸುತ್ತದೆ. ಇಲ್ಲಿ ಅದಕ್ಕಿಂತ ಹೆಚ್ಚು ಗದ್ದಲ ಉಂಟಾಗುವುದರಿಂದ ಇದು ಶಬ್ದ ಮಾಲಿನ್ಯದ ಸಮಸ್ಯೆಗೂ ಕಾರಣವಾಗುತ್ತದೆ.[೩೧]
ಇದರಲ್ಲಿ ಭಾಗವಹಿಸುವುದರಿಂದ ಮರಣದ ಅಪಾಯ ಹೆಚ್ಚು. ೨೦೦೦ ನೇ ಇಸವಿಯಿಂದ ಈ ಆಟಕ್ಕೆ ಹೆಚ್ಚಿನ ಸ್ಪರ್ಧೆಯಿಂದಾಗಿ ಗಾಯಗಳ ಸಂಖ್ಯೆ ಹೆಚ್ಚಾಗಿದೆ. ಜರ್ನಲ್ ಆಫ್ ಪೋಸ್ಟ್ಗ್ರಾಜುಯೇಟ್ ಮೆಡಿಸಿನ್ ೨೦೧೨ ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, "ದಹಿಹಂಡಿ ಉತ್ಸವದಲ್ಲಿ ಮಾನವ ಪಿರಮಿಡ್ ರಚನೆ ಮತ್ತು ಅವರೋಹಣಕ್ಕೆ ಅಂತರ್ಗತವಾಗಿರುವ ಗಂಭೀರ, ಮಾರಣಾಂತಿಕ ಗಾಯಗಳ ಗಣನೀಯ ಅಪಾಯವಿದೆ" ಎಂದು ತೀರ್ಮಾನಿಸಿದೆ.[೨೩] ಮಡಕೆಯ ಎತ್ತರವನ್ನು ಕಡಿಮೆ ಮಾಡುವುದು, ಮಕ್ಕಳು ಭಾಗವಹಿಸುವುದನ್ನು ತಡೆಯುವುದು ಮತ್ತು ಸುರಕ್ಷತಾ ಸಾಧನಗಳನ್ನು ಬಳಸುವಂತಹ ಸುರಕ್ಷತಾ ಮಾರ್ಗಸೂಚಿಗಳನ್ನು ಅದು ಶಿಫಾರಸು ಮಾಡಿತು.[೨೩]
೨೦೧೨ ರಲ್ಲಿ, ೨೨೫ ಕ್ಕೂ ಹೆಚ್ಚು ಗೋವಿಂದರು ಗಾಯಗೊಂಡರು ಮತ್ತು ಒಬ್ಬರು ಸಾವನ್ನಪ್ಪಿದರು. ಇದು ಹಿಂದಿನ ವರ್ಷದ ೨೦೫ ಕ್ಕಿಂತ ಹೆಚ್ಚಾಗಿದೆ.[೩೨] ಮಹಾರಾಷ್ಟ್ರ ಸರ್ಕಾರವು ೨೦೧೪ ರಲ್ಲಿ ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಭಾಗವಹಿಸುವುದನ್ನು ನಿಷೇಧಿಸಿತು.[೩೩] ನಂತರ ಆಗಸ್ಟ್ನಲ್ಲಿ ಬಾಂಬೆ ಹೈಕೋರ್ಟ್ ಕನಿಷ್ಠ ವಯಸ್ಸನ್ನು ೧೮ ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಪಿರಮಿಡ್ನ ಎತ್ತರವು ೨೦ ಅಡಿಗಿಂತ ಹೆಚ್ಚಿರಬಾರದು ಎಂದು ತೀರ್ಪು ನೀಡಿತು. [೩೪][೩೫] ಬಾಂಬೆ ಹೈಕೋರ್ಟ್ನ ತೀರ್ಪಿನ ಕುರಿತು ಭಾರತದ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಲು ನಿರಾಕರಿಸಿತು. ಒಲಿಂಪಿಕ್ ಕ್ರೀಡೆಗಳು ಅಪಾಯಕಾರಿಯೆಂದು ಅವನ್ನು ನಿಲ್ಲಿಸುವುದಿಲ್ಲ ಹಾಗೇ ಒಂದು ಧಾರ್ಮಿಕ ಸಂಪ್ರದಾಯವನ್ನು ನಿಷೇಧಿಸುವುದು, ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿತು.
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Tirumala: Deities enjoy Utlotsavam by devotees in Tirumala". The Hindu. 17 August 2018. Retrieved 6 September 2018.
- ↑ Dahi Handi date
- ↑ The Orissa Historical Research Journal. Superintendent of Research and Museum. 2004.
- ↑ "Fun and frolic mark 'Utlotsavam'". The Hindu. 5 September 2018. Retrieved 6 September 2018.
- ↑ "'Utlotsavam' revelry marks Janmashtami celebrations in city". The Hindu. 4 September 2018. Retrieved 6 September 2018.
- ↑ Christian Roy (2005). Traditional Festivals: A Multicultural Encyclopedia. ABC-CLIO. pp. 213–215. ISBN 978-1-57607-089-5.
- ↑ Constance A Jones (2011). J. Gordon Melton (ed.). Religious Celebrations: An Encyclopedia of Holidays, Festivals, Solemn Observances, and Spiritual Commemorations. ABC-CLIO. p. 459. ISBN 978-1-59884-206-7.
- ↑ Christian Roy (2005). Traditional Festivals: A Multicultural Encyclopedia. ABC-CLIO. pp. 213–215. ISBN 978-1-57607-089-5.Christian Roy (2005).
- ↑ DMello, Daniel (4 October 2011). "8 incredible facts about Mumbai". CNN. Archived from the original on 2014-07-29. Retrieved 23 July 2014.
- ↑ "Janmashtami celebrated with zeal, enthusiasm". Mid Day. 24 August 2008. Retrieved 12 August 2009.
- ↑ Edwin Francis Bryant (2007). Krishna: A Sourcebook. Oxford University Press. pp. 9–10, 115–116, 265–267. ISBN 978-0-19-803400-1.
- ↑ John Stratton Hawley (2014). Krishna, The Butter Thief. Princeton University Press. pp. ix–xi, 3–11, 89, 256, 313–319. ISBN 978-1-4008-5540-7.
- ↑ J. Gordon Melton (13 September 2011). Religious Celebrations: An Encyclopedia of Holidays, Festivals, Solemn Observances, and Spiritual Commemorations. ABC-CLIO. p. 459. ISBN 978-1-59884-205-0.
- ↑ ೧೪.೦ ೧೪.೧ DMello, Daniel (4 October 2011). "8 incredible facts about Mumbai". CNN. Archived from the original on 2014-07-29. Retrieved 23 July 2014.DMello, Daniel (4 October 2011).
- ↑ J Mohapatra (24 December 2013). Wellness In Indian Festivals & Rituals: Since the Supreme Divine is manifested in all the Gods, worship of any God is quite legitimate. Partridge Publishing. p. 139. ISBN 978-1-4828-1689-1.
- ↑ Vijapurkar, Mahesh (16 August 2014). "Ban on kids: How Mumbai's dahi handi became a political event". Firstpost. Retrieved 16 August 2014.
- ↑ P Nemade; R Wade; AR Patwardhan; S Kale (4 January 2013). "Evaluation of nature and extent of injuries during Dahihandi festival". Journal of Postgraduate Medicine. 58 (4): 262–264. doi:10.4103/0022-3859.105445. PMID 23298920.
{{cite journal}}
: CS1 maint: unflagged free DOI (link) - ↑ J. Gordon Melton (13 September 2011). Religious Celebrations: An Encyclopedia of Holidays, Festivals, Solemn Observances, and Spiritual Commemorations. ABC-CLIO. p. 459. ISBN 978-1-59884-205-0.J. Gordon Melton (13 September 2011).
- ↑ "Ceremony of Dahi Handi". Happywink.org. Retrieved 25 July 2014.
- ↑ "Fun and frolic mark 'Utlotsavam'". The Hindu. 5 September 2018. Retrieved 6 September 2018."Fun and frolic mark 'Utlotsavam'".
- ↑ ೨೧.೦ ೨೧.೧ Birajdar, Laxmi (22 August 2011). "Higher stakes, grander celebrations this 'dahi-handi'". The Times of India. Retrieved 29 July 2014.
- ↑ ೨೨.೦ ೨೨.೧ Ashutosh Shukla; Geeta Desai (27 August 2013). "Dahi handi stakes grow bigger". DNA. Retrieved 23 July 2014.
- ↑ ೨೩.೦ ೨೩.೧ ೨೩.೨ P Nemade; R Wade; AR Patwardhan; S Kale (4 January 2013). "Evaluation of nature and extent of injuries during Dahihandi festival". Journal of Postgraduate Medicine. 58 (4): 262–264. doi:10.4103/0022-3859.105445. PMID 23298920.
{{cite journal}}
: CS1 maint: unflagged free DOI (link)P Nemade; R Wade; AR Patwardhan; S Kale (4 January 2013). - ↑ Ambarish Mishra; Nitin Yeshwantrao; Bella Jaisinghani (11 August 2012). "Nine-tier handi breaks into Guinness Records". Times of India. Retrieved 23 July 2014.
- ↑ Sen, Debarati S (16 August 2014). "Thane's Dahi Handi gets the Spanish flavour again". The Times of India. Retrieved 16 August 2014.
- ↑ Vijapurkar, Mahesh (16 August 2014). "Ban on kids: How Mumbai's dahi handi became a political event". Firstpost. Retrieved 16 August 2014.Vijapurkar, Mahesh (16 August 2014).
- ↑ ೨೭.೦ ೨೭.೧ Ambarish Mishra; Nitin Yeshwantrao; Bella Jaisinghani (11 August 2012). "Nine-tier handi breaks into Guinness Records". Times of India. Retrieved 23 July 2014.Ambarish Mishra; Nitin Yeshwantrao; Bella Jaisinghani (11 August 2012).
- ↑ Vijapurkar, Mahesh (10 August 2012). "Dahi handi: From prank to political platform, but a sport?". Firstpost. Retrieved 29 July 2014.
- ↑ "The Mazgaon Tadwadi Utsav Mandal forms a 9 tier human pyramid to win the prize money of 11 lakh in Thane - Photogallery".
- ↑ "Art Street: Dedicated to govinda pathaks, this sculpture talks the best about Mazgaon Tadwadi". 14 May 2022.
- ↑ Yeshwantrao, Nitin (24 August 2011). "51 dahi handi groups get noise pollution notice". The Times of India. Retrieved 29 July 2014.
- ↑ Pratibha Masand; Nitin Yeshwantrao (11 August 2012). "1 dies, 225 hurt in dahi handi revelry". The Times of India. Retrieved 29 July 2014.
- ↑ Deshpande, Vinaya (21 July 2014). "Parents happy with ban on children under 12 taking part in dahi handis". The Hindu. Retrieved 25 July 2014.
- ↑ Sequeira, Rosy (11 August 2014). "Dahi handi participants must be over 18, up to 4-level human pyramid: Bombay HC". The Times of India. Retrieved 12 August 2014.
- ↑ "Dahi handi participants must be over 18: Bombay HC". India Today. 11 August 2014. Retrieved 12 August 2014.