ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ
ಕಾವ್ಯ-ಪದ್ಯಗಳನ್ನು ರಾಗವಾಗಿ ಓದುವಂತಹ ವಿಶಿಷ್ಟವಾದ ಕಲೆಯನ್ನು ಗಮಕ [೧] ಎನ್ನುತ್ತೇವೆ. ಓದುವವರನ್ನು ಗಮಕಿ[೨]ಗಳೆನ್ನುತ್ತೇವೆ. ಹಳೆಯ ಕಾವ್ಯಗಳನ್ನು ಈ ರೀತಿ ಓದುವ ಗಮಕಿಗಳಲ್ಲಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರೂ ಒಬ್ಬರು.[೩]

ಜನನ
[ಬದಲಾಯಿಸಿ]ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿನ ಕಾರಡ್ಕ ಗ್ರಾಮದ ತೆಕ್ಕೆಕೆರೆಯಲ್ಲಿ ೧೯೪೬ ರ ದಶಂಬರ ೧೦ ರಂದು ಜನಿಸಿದರು. ಕಡೆಂಗೋಡ್ಲು ಮೂಲದ ತೆಕ್ಕೆಕೆರೆ-ಪೈಕ್ಕಾನ ಶಂಭು ಭಟ್ಟ-ಗೌರಮ್ಮನವರು ಇವರ ಮಾತಾ-ಪಿತರು.
ವಿದ್ಯಾಭ್ಯಾಸ
[ಬದಲಾಯಿಸಿ]ಏತಡ್ಕ ಏಡೆಡ್ ಎಲಿಮೆಂಟರಿ ಶಾಲೆ,ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಸಂಸ್ಕೃತ ಪ್ರೌಢಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ.
ಹಿಂದಿ ರಾಷ್ಟ್ರಭಾಷಾ ಪರೀಕ್ಷೆ (ದಕ್ಷಿಣ ಭಾರತದ ಹಿಂದೀ ಪ್ರಚಾರ ಸಭೆ) ಹಾಗೂ ಸಂಸ್ಕೃತ ರಾಷ್ಟ್ರ ಭಾಷಾ ಪರೀಕ್ಷೆ ( ಭಾರತೀಯ ವಿದ್ಯಾ ಭವನ ಮುಂಬಯಿ ) ಗಳಲ್ಲಿ ತೇರ್ಗಡೆಯಾಗಿರುತ್ತಾರೆ.

ವೃತ್ತಿ
[ಬದಲಾಯಿಸಿ]ಭಾರತೀಯ ಅಂಚೆ ತಂತಿ ಇಲಾಖೆ/ಬಿ.ಎಸ್.ಎನ್.ಎಲ್. ಗಳಲ್ಲಿ ದೂರವಾಣಿ ತಂತ್ರಜ್ಞರಾಗಿಯೂ,ತಾಂತ್ರಿಕ ಮೇಲ್ವಿಚಾರಕರಾಗಿಯೂ, ಹಿರಿಯ ತಾಂತ್ರಿಕ ಸಹಾಯಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ೧೯೬೫ ರಿಂದ ೨೦೦೬ ರವರೆಗೆ ಸೇವೆ ಸಲ್ಲಿಸಿ, ೨೦೦೬ ರ ದಶಂಬರ ೩೧ ರಂದು ಬೆಳ್ತಂಗಡಿ ಯಲ್ಲಿ ನಿವೃತ್ತರಾದರು.
ಕನ್ನಡ ಗೌರವ ಪ್ರಾಧ್ಯಾಪಕರಾಗಿ ಸುಮಾರು ೧೨ ವರ್ಷಗಳ ಕಾಲ ಚಿತ್ರದುರ್ಗ ದಲ್ಲಿ ಸೇವೆಯನ್ನು ನೀಡಿದ್ದರು.
ಪ್ರವೃತ್ತಿ
[ಬದಲಾಯಿಸಿ]ಸಾಹಿತಿ, ಕವಿ, ಗಮಕಿಯಲ್ಲದೆ, ಹರಿಕಥೆ-ಯಕ್ಷಗಾನ-ನಾಟಕಗಳಲ್ಲಿ ಪಾತ್ರಾಭಿನಯವನ್ನೂ ಮಾಡಿದ್ದಾರೆ. ಬಿಡಿ ಲೇಖನಗಳ ಹವ್ಯಾಸವೂ ಇವರಿಗಿದೆ. ವಿದ್ವಾನ್ ಕೈಂತಜೆ ನರಸಿಂಹ ಭಟ್ಟ ಮೊದಲಾದ ಗಮಕಿಗಳೊಡನೆ ವ್ಯಾಖ್ಯಾನವನ್ನೂ ಮಾಡಿದ್ದಾರೆ.
ಕಲಾಸೇವೆಗಳು
[ಬದಲಾಯಿಸಿ]- ೧೯೮೪-೮೫ ರಲ್ಲಿ ಗಮಕಿಗಳಾಗಿ ಗಮಕ ಕ್ಷೇತ್ರಕ್ಕೆ ಪ್ರವೇಶಗೈದ ಇವರ ಗುರುಗಳು ಚಿತ್ರದುರ್ಗದ ಗಮಕ ಸಹೋದರರಾದ ಶ್ರೀ ಜಿ.ಶೇಷಾಚಲಯ್ಯ ( ವ್ಯಾಖ್ಯಾನ) ಹಾಗೂ ಶ್ರೀ ಜಿ. ಚಂದ್ರಶೇಖರಯ್ಯ (ಗಮಕ ವಾಚನ)
- ೧೯೮೪ ರಿಂದ ಕರ್ನಾಟಕ ಗಮಕಕಲಾ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ.
- ಕರ್ನಾಟಕ ಗಮಕಕಲಾ ಪರಿಷತ್ತಿನ ಗಮಕ ಪ್ರಥಮ, ಕಾಜಾಣ, ಪಾರೀಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ, ಕಾಜಾಣ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ೧೯೮೫ ರಲ್ಲಿ ಭೂಪಾಲಂ ದತ್ತಿ ನಿಧಿ ಯ ಗೌರವವನ್ನು ಪಡೆದಿದ್ದಾರೆ.
- ೧೯೮೪ ರಿಂದ ೧೯೯೩ ರ ಅವಧಿಯಲ್ಲಿ ಚಿತ್ರದುರ್ಗ ಗಮಕಕ ಲಾಭಿಮಾನಿಗಳ ಸಂಘದಲ್ಲಿ ಗಮಕ - ವಾಚನ ವ್ಯಾಖ್ಯಾನವನ್ನು ಮಾಡಿದ್ದಾರೆ.
- ೧೯೮೪ ರಿಂದ ೨೦೦೭ ರ ಅವಧಿಯಲ್ಲಿ ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಗಳಲ್ಲಿ ಕರ್ನಾಟಕ ಗಮಕಕಲಾ ಪರಿಷತ್ತಿನ ಜಿಲ್ಲಾ ಪ್ರತಿನಿಧಿಯಾಗಿ ಗಮಕಕಲಾ ಪ್ರಚಾರವನ್ನು ಮಾಡಿದ್ದಾರೆ.[೪]
- ಕರ್ನಾಟಕ ಗಮಕಕಲಾಪರಿಷತ್ತಿನ ಗಮಕ ತರಗತಿಗಳನ್ನು ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆಸಿ ಅನೇಕರಿಗೆ ಮಾರ್ಗದರ್ಶನವನ್ನೂ ಮಾಡಿದ್ದಾರೆ.
- ಪರಿಷತ್ತಿನ ಗಮಕ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸಹಕಾರವನ್ನು ನೀಡುತ್ತಾರೆ.
- ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಬಿಜಾಪುರ ನಗರ, ಬೀದರ, ಗುಲ್ಬರ್ಗ ಜಿಲ್ಲೆಗಳಲ್ಲಿ ಜಿ. ಶೇಷಾಚಲಯ್ಯನವರೊಂದಿಗೆ ಗಮಕ ವಾಚನಕಾರರಾಗಿ ಕೆಲಸವನ್ನು ಮಾಡಿದ್ದಾರೆ.
- ೧೯೯೩ ರಿಂದ೨೦೦೬ ರ ವರೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಕಾಸರಗೋಡಿನಿಂದ ಉತ್ತರ ಕರ್ಣಾಟಕದ ಬೈಂದೂರು ವರೆಗೆ ಗಮಕಕಲಾ ಪ್ರಚಾರವನ್ನು ಮಾಡಿದ್ದಾರೆ.
- ೧೯೯೭ ರಿಂದ ೨೦೦೬ ರ ತನಕದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುನರೂರು, ಸುರತ್ಕಲ್, ಕುಕ್ಕೆ ಸುಬ್ರಹ್ಮಣ್ಯ, ಮುಳಿಯ, ಕಾಸರಗೋಡಿನ ಎಡನೀರು ಕ್ಷೇತ್ರದಲ್ಲಿ ಜಿಲ್ಲಾ ಸಮ್ಮೇಳನಗಳನ್ನು ನಡೆಸಿದ್ದಾರೆ.
- ಮುಂಬಯಿ, ನವದೆಹಲಿಗಳಲ್ಲಿ ಕನ್ನಡ ಕಾವ್ಯಗಳ ಗಮಕ ವಾಚನ -ವ್ಯಾಖ್ಯಾನಗಳು, ಮುಂಬಯಿ ಯ ಅಖಿಲ ಭಾರತ ಪ್ರಥಮ ಗಮಕಕಲಾ ಸಮ್ಮೇಳನದಲ್ಲಿ ಭಾಗವಹಿಸುವಿಕೆ ಹಾಗೂ ಬೆಳಗಾವಿ ಯ ವಿಶ್ವ ಕನ್ನಡ ಸಮ್ಮೇಳನ ದಲ್ಲಿ ಗಮಕ ರೂಪಕದ ಪಾತ್ರಧಾರಿಯಾಗಿಯೂ ಮಿಂಚಿದ್ದಾರೆ.
- ೨೦೦೯--೨೦೧೦ ರ ಅವಧಿಯಲ್ಲಿ ಡಾ | ಎಂ. ವೀರಪ್ಪ ಮೊಯ್ಲಿ ಯವರ ಶ್ರೀ ರಾಮಾಯಣ ಮಹಾನ್ವೇಷಣಂ ಕಾವ್ಯದ ಪ್ರಥಮ ಸಂಪುಟದ ೨೬ ಕಾರ್ಯಕ್ರಮಗಳಲ್ಲಿ ರಾಜ್ಯದಲ್ಲಲ್ಲದೆ ಕಾಸರಗೋಡು, ಮುಂಬಯಿ, ನವ ದೆಹಲಿ ಗಳಲ್ಲಿ ಗಮಕ ವ್ಯಾಖ್ಯಾನಕಾರರಾಗಿ ಪಾಲ್ಗೊಂಡಿದ್ದಾರೆ.
- ೨೦೧೭ ರಲ್ಲಿ ನವ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ರನ್ನ ನ ಸಾಹಸ ಭೀಮ ವಿಜಯದ ಇಂಗ್ಲೀಷ್ ಅವತರಣಿಕೆಯ ಬಿಡುಗಡೆಯ ಸಂದರ್ಭದಲ್ಲಿ ಅದರ ವಾಚನವನ್ನು ಮಾಡಿದ್ದಾರೆ.
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಶ್ರೀಮದ್ವಾಲ್ಮೀಕಿ ರಾಮಾಯಣದ ವ್ಯಾಖ್ಯಾನಕ್ಕೆ ಹಾಗೂ ಎ.ಬಿ.ಎಲ್. ನಾಗರಾಜರ ದೇವೀಭಾಗವತ ವ್ಯಾಖ್ಯಾನಕ್ಕೆ ಸಂಸ್ಕೃತ ಶ್ಲೋಕಗಳ ಗಮಕ ವಾಚನವನ್ನು ಮಾಡಿದ್ದಾರೆ.
- ವಿ || ಬಿ.ಎಸ್.ಎಸ್. ಕೌಶಿಕರ ಗುರು ಚರಿತ್ರೆ ಮತ್ತು ಕುವೆಂಪು ಪ್ರತಿಷ್ಠಾನ ಕುಪ್ಪಳಿ ಯವರ ಶ್ರೀ ರಾಮಾಯಣ ದರ್ಶನಂ ಇವುಗಳ ಧ್ವನಿ ಸುರುಳಿ ಹಾಗೂ ಅಡಕಗಳಲ್ಲಿ ಮೈಸೂರಿನ ಪರಂಪರೆ ಎಂಬ ಸಂಸ್ಥೆಯ ಕುಮಾರವ್ಯಾಸ ಭಾರತ ಅಡಕ ಧ್ವನಿ ಮುದ್ರಿಕೆಯ ವ್ಯಾಖ್ಯಾನಕಾರರಾಗಿ ಸಹಕಾರ ನೀಡಿದ್ದಾರೆ.
- ಅಗ್ನಿ ಸೇವಾ ಟ್ರಸ್ಟ್ ಬೆಂಗಳೂರು ಇವರ ತುರಂಗ ಭಾರತ ದ ಪ್ರಚಾರ ಹಾಗೂ ಧ್ವನಿಸುರುಳಿಗೆ ವಾಚನವನ್ನು ಮಾಡಿದ್ದಾರೆ.
- ಮಂಗಳೂರು, ಮೈಸೂರು, ಚಿತ್ರದುರ್ಗ ಆಕಾಶವಾಣಿ ಗಳಲ್ಲೂ ಬೆಂಗಳೂರು ದೂರದರ್ಶನ ದಲ್ಲೂ ಇವರ ಚಿಂತನ, ಸ್ವರಚಿತ ಕವನ ವಾಚನ, ಗಮಕ ಸಂಬಂಧೀ ವಾಚನ- ಭಾಷಣಗಳು ಪ್ರಸಾರವಾಗಿವೆ.
ಹುದ್ದೆಗಳು
[ಬದಲಾಯಿಸಿ]- ೨೦೦೧ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ೧೨ ನೆಯ ಸಾಹಿತ್ಯ ಸಮ್ಮೇಳನದಲ್ಲಿ ಗಮಕಗೋಷ್ಠಿಯ ಅಧ್ಯಕ್ಷ ಸ್ಥಾನ.

ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ - ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಕರ್ನಾಟಕ ಗಮಕಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ೨೦೧೩ ರಿಂದ ೨೦೧೭ ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ.
- ೨೦೧೩ ರ ಜನವರಿಯಲ್ಲಿ ಮೂಡುಬಿದಿರೆ ಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ೬ ನೆಯ ಗಮಕ ಕಲಾ ಸಮ್ಮೇಳನದ ಅಧ್ಯಕ್ಷ ಸ್ಥಾನ.
- ೨೦೨೩ ರ ಏಪ್ರಿಲ್ ೧೬,೧೭ ರಂದು ಬೆಳಗಾವಿ ಯಲ್ಲಿ ನಡೆದ ೧೩ ನೆಯ ಅಖಿಲ ಕರ್ಣಾಟಕ ಗಮಕಕಲಾ ಸಮ್ಮೇಳನದ ಅಧ್ಯಕ್ಷ ಸ್ಥಾನ.
- ಅಖಿಲ ಹವ್ಯಕ ಮಹಾಸಭೆ ಹಾಗೂ ಶ್ರೀ ರಾಮಚಂದ್ರಾಪುರ ಮಠ ಇವರ ಸಂಯೋಜನೆಯಲ್ಲಿ ಗೋಕರ್ಣ ದಲ್ಲಿ ಜರುಗಲಿರುವ ( ೧೭-೦೮-೨೦೨೫ ) ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಸವಿಗನ್ನಡ ಗೋಷ್ಠಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- ಉಂಡೆಮನೆಯವರ ಉಂಡೆಮನೆ ಶಂಭುಭಟ್ಟ ಪ್ರಶಸ್ತಿ
- ಅಗ್ನಿಸೇವಾ ಟ್ರಸ್ಟ್ ನವರ ಮಹಾಕವಿ ಪರಮದೇವ ಪ್ರಶಸ್ತಿ
- ಅಖಿಲ ಹವ್ಯಕ ಮಹಾಸಭೆ_ಬೆಂಗಳೂರು ಇವರ ವಿದ್ವತ್ ಸನ್ಮಾನ
- ಹಾಸನ ಜಿಲ್ಲಾ ಗಮಕ ಸಂಘದಿಂದ ಗಮಕ ಕಲಾ ತಪಸ್ವಿ ಪ್ರಶಸ್ತಿ
- ಕುಮಟಾ ಹವ್ಯಕ ಸಂಘ ಹಾಗೂ ಚಿತ್ರದುರ್ಗ ಗಮಕ ಕಲಾಭಿಮಾನಿಗಳ ಸಂಘದಿಂದ ಕರ್ಣಾಟಕ ಪ್ರಶಸ್ತಿ
- ಬೆಳ್ತಂಗಡಿ ಹವ್ಯಕ ಸಭೆಯ ದಶಮಾನ ಪ್ರಶಸ್ತಿ
- ೨೦೧೬-೨೦೧೭ ನೆಯ ಸಾಲಿನ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಯ ಕರ್ಣಾಟಕ ಕಲಾಶ್ರೀ ಗೌರವ ಪ್ರಶಸ್ತಿ.
- ಗಮಕ ಕಲಾ ಪರಿಷತ್ತು-ಬೆಂಗಳೂರು ಇವರಿಂದ ಸನ್ಮಾನ ಹೀಗೆ ಅನೇಕ ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳು ಲಭಿಸಿವೆ.
ಲೇಖಕರಾಗಿ
[ಬದಲಾಯಿಸಿ]
- ನೇಮಿಚಂದ್ರ ನ [ ೧೨ ನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಜೈನ ಕವಿ] ಕಥೆಗಳು ( ಸಂಗ್ರಹ)
- ಶ್ರೀ ರಾಘವೇಶ್ವರ ಕೀರ್ತನ ಶತಕಂ ( ಕೀರ್ತನೆಗಳು)
- ವಿಶ್ವವಂದ್ಯ ಗೋಮಾತೆ ( ಗೋ ಕೀರ್ತನೆಗಳು)
- ಶ್ರೀ ಕೃಷ್ಣ ಚೈತನ್ಯ ( ಜೀವನ ಚರಿತ್ರೆ)
- ಗಮಕ ಕೋಗಿಲೆ ಪಂ. ಮುಳಿಯ ತಿಮ್ಮಪ್ಪಯ್ಯ ( ವ್ಯಕ್ತಿ ಪರಿಚಯ)
- ಕಲಾ ದರ್ಶನ ( ಗಮಕ ಕಲೆಯ ಲೇಖನಗಳು)
- ಶ್ರೀ ಶರಾವತಿ ಮಹಾತ್ಮ ( ಪದ್ಯಶಃ ಭಾವಾನುವಾದ)
- ಪರಂಪರೆ ( ಲೇಖನ ಸಂಗ್ರಹ)
- ವಂದೇ ಗುರೂಣಾಮ್ ( ಗುರುಗಳ ಬಗ್ಗೆ ಲೇಖನಗಳು)
- ಪುರಾಣ ಪ್ರಪಂಚ -- ಭಾಗ ೧ ( ಶ್ರೀ ರಾಮಚಂದ್ರಾಪುರ ಮಠದ ಮಾಸ ಪತ್ರಿಕೆ-ಧರ್ಮ ಭಾರತೀ ಯಲ್ಲಿ ಧಾರಾವಾಹಿಯಾಗಿ ಬಂದುದು, ಈಗ ಪುಸ್ತಕ ರೂಪದಲ್ಲಿ)
- ಪುನರ್ನವ ( ಲೇಖನಗಳ ಸಂಗ್ರಹ)

ಕೃತಿ ಬಿಡುಗಡೆ - ವಿದ್ವಾನ್ ಟಿ.ಕೇಶವ ಭಟ್ಟರ ಗುರುಚರಿತ್ರಾಮೃತಮ್ ಕಾವ್ಯದ ಭಾವಾನುವಾದ.
- ಸಂಗಮ, ಸಮಾಗಮ, ಶ್ರೀಗಂಧ, ಭೂರಮೆ. ( ಕವನ ಸಂಗ್ರಹಗಳು)
ಉಲ್ಲೇಖಗಳು
[ಬದಲಾಯಿಸಿ]https://www.upayuktha.com/2023/04/Form-seperate-academy-for-Gamaka-Kala-.html
https://vijaykarnataka.com/news/vijayapura/-/articleshow/46078984.cms
https://pragativahini.com/13th-all-karnataka-gamaka-kala-sammelna-at-belagavi-on-16th-and-17th/
https://vijaykarnataka.com/news/chikkamagaluru/-/articleshow/30690119.cms
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ↑ https://www.upayuktha.com/2023/04/Form-seperate-academy-for-Gamaka-Kala-.html
- ↑ https://vijaykarnataka.com/news/vijayapura/-/articleshow/46078984.cms
- ↑ https://pragativahini.com/13th-all-karnataka-gamaka-kala-sammelna-at-belagavi-on-16th-and-17th/
- ↑ https://vijaykarnataka.com/news/chikkamagaluru/-/articleshow/30690119.cms


