ಣಮೊಕರ ಮಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಣಮೋಂಕಾರ ಮಂತ್ರ

ಣಮೋಂಕಾರ ಮಂತ್ರ' (णमोकार मंत्र) ಜೈನ ಧರ್ಮದ ಪ್ರಾಥಮಿಕ ಮಂತ್ರ, ಇದನ್ನು ದಿನದ ಯಾವುದೇ ವೇಳೆ ಜಪಿಸಬಹುದು. ಈ ಮಂತ್ರವನ್ನು ಜೈನರು ತಮ್ಮ ಧ್ಯಾನದ ಪ್ರಾರಂಭದಲ್ಲಿ ಜಪಿಸುತ್ತಾರೆ. ಈ ಮಂತ್ರವನ್ನು ಜಪಿಸುವಾಗ ಭಕ್ತರು ಗೌರವದಿಂದ ಅರಿಹಂತರಿಗೆ, ಸಿದ್ಧರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ ಹಾಗು ಎಲ್ಲ ಗುರು ಮುನಿಗಳಿಗೆ ವಂದಿಸುತ್ತಾರೆ. ಅರಿಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು ಹಾಗು ಎಲ್ಲ ಗುರು ಮುನಿಗಳು ಈ ಐವರನ್ನು ಪಂಚ ಪರಮೇಷ್ಠಿಗಳೆಂದು ಕರೆಯಲಾಗುತ್ತದೆ. ಈ ಮಂತ್ರ ಪಠಣದಿಂದ ಕೇವಲ ಒಂದು ವ್ಯಕ್ತಿಯ ಪೂಜೆ ಅಲ್ಲದೆ ಎಲ್ಲ ಸತ್ಪುರುಷರ ಸದ್ಗುಣವನ್ನು ಪೂಜಿಸುವಂತಾಗುತ್ತದೆ. ಣಮೊಕರ ಮಂತ್ರದಲ್ಲಿ ತೀರ್ಥಂಕರನಾಗಲಿ ಅಥವಾ ಸಿದ್ಧರನ್ನಾಗಲೀ ಹೆಸರಿನಿಂದ ಜಪಿಸಲಾಗುವುದಿಲ್ಲ. ಜಪಿಸುವವೇಳೆ ಭಕ್ತರು ಸದ್ಗುಣಗಳನ್ನು ನೆನೆಯುತ್ತಾ ಅವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮಂತ್ರದಲ್ಲಿ ಜೈನರು ಸತ್ಪುರುಷರನ್ನು ನಮಸ್ಕರಿಸುವರು. ಆದ್ದರಿಂದ ಇದನ್ನು ನಮಸ್ಕಾರ ಮಂತ್ರವೆಂದು ಕರೆಯಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಉದಯಗಿರಿ ಬೆಟ್ಟದ ಹಾಥಿಗುಂಫ ಶಾಸನದಲ್ಲಿ ರಾಜಾ ಖಾರವೇಲ್ಲ ಕೆತ್ತಿಸಿದ ಬರಹ

ಉದಯಗಿರಿ ಬೆಟ್ಟಗಳಲ್ಲಿ ರಾಜ ಖಾರವೇಲಾ ಬರೆದ ಹಾಥಿಗುಂಫಾ ಶಾಸನ 162 ಬಿಸಿಇ ಶಾಸನ, ಹತಿಗುಂಫಾ ಶಾಸನವು ಣಮೋಂಕಾರ ಮಂತ್ರದಿಂದ ಪ್ರಾರಂಭವಾಗುತ್ತದೆ. ಇದನ್ನು ಜೈನ ರಾಜ ಖಾರವೇಲಾ ಕೆತ್ತಿಸಿದ್ದು ಎನ್ನಲಾಗಿದೆ. [5] [6]

ಣಮೊಕರ ಮಂತ್ರ ವನ್ನು, ನವಕಾರ ಮಂತ್ರ ಅಥವಾ ನಮಸ್ಕಾರ ಮಂತ್ರ ಎಂದು ಕೂಡ ಹೇಳಲಾಗುತ್ತದೆ. ಈ ಮಂತ್ರದಲ್ಲಿ ಒಟ್ಟು ೩೫ ಅಕ್ಷರಗಳಿವೆ.

ಣಮೋ ಅರಿಹಂತಾನಂ
ಣಮೋ ಸಿದ್ದಾನಾಂ
ಣಮೋ ಅಯರಿಯನಾಂ
ಣಮೋ ಉವಜ್ಝಾಯನಾಂ
ಣಮೋ ಲೋಎ ಸವ್ವ ಸಾಹುನಾಂ
ನಾನು ಅರಿಹಂತರಿಗೆ ನಮಸ್ಕರಿಸುತ್ತೇನೆ.
ಣಮೋ ಸಿದ್ದಾನಾಂ ನಾನು ಸಿದ್ಧರಿಗೆ ನಮಸ್ಕರಿಸುತ್ತೇನೆ.
ಣಮೋ ಅಯರಿಯನಾಂ ನಾನು ಆಚಾರ್ಯರಿಗೆ ನಮಸ್ಕರಿಸುತ್ತೇನೆ .
ಣಮೋ ಉವಜ್ಝಾಯನಾಂ ನಾನು ಉಪಾಧ್ಯಾಯರಿಗೆ ನಮಸ್ಕರಿಸುತ್ತೇನೆ.
ಣಮೋ ಲೋಎ ಸವ್ವ ಸಹುನಾಂ ನಾನು ಎಲ್ಲ ಸಾಧುಗಳಿಗೆ ನಮಸ್ಕರಿಸುತ್ತೇನೆ.


ಧ್ಯಾನ[ಬದಲಾಯಿಸಿ]

ಪ್ರಮುಖ ಜೈನ ಗ್ರಂಥವಾದ "ದ್ರವ್ಯಸಂಗ್ರಹ"ದ ಪ್ರಕಾರ:

"ಪಂಚ ಪರಮೇಷ್ಠಿಗಳ ಶ್ರೇಷ್ಠವಾದ ಗುಣಗಳನ್ನು ಸ್ತುತಿಸುವ ಈ ಣಮೋಂಕಾರ ಮಂತ್ರದ ಮೂವತ್ತೈದು, ಹದಿನಾರು, ಆರು, ಐದು, ನಾಲ್ಕು, ಎರಡು ಮತ್ತು ಒಂದು ಅಕ್ಷರವನ್ನು ಧ್ಯಾನ ಮಾಡಬೇಕು ಅಥವಾ ಪಠಿಸಬೇಕು. ಹಾಗೆಯೇ ತಮ್ಮ ಗುರುಗಳಿಂದ ಬೋಧಿಸಲ್ಪಟ್ಟಂತೆ ಬೆರೆ ಮಂತ್ರಗಳನ್ನು ಕೂಡ ಪಠಿಸಬೇಕು."


References[ಬದಲಾಯಿಸಿ]