ಟಿ.ಜಿ.ಮುಡೂರು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಟಿ.ಜಿ.ಮುಡೂರು ಎಂದೆ ಹೆಸರು ಪಡೆದಿರುವ ಇವರು ಕರಾವಳಿಯ ಹಿರಿಯ ಬರಹಗಾರರಲ್ಲಿ ಒಬ್ಬರು.[೧] ಇವರ ಪೂರ್ಣ ಹೆಸರು ತಮ್ಮಯ್ಯ ಗೌಡ ಮುಡೂರು
ಹುಟ್ಟು[ಬದಲಾಯಿಸಿ]
ಕಾಸರಗೋಡು ಜಿಲ್ಲೆಯ ಅಡೂರು ಸಮೀಪ ಇರುವ ಮುಡೂರು ಎಂಬಲ್ಲಿ ೨೪-೧೧-೧೯೨೭ ರಲ್ಲಿ ಸುಬ್ಬಪ್ಪ ಗೌಡ ಮತ್ತು ಬಾಲಕ್ಕ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು.
ವೃತ್ತಿ[ಬದಲಾಯಿಸಿ]
೧೯೪೬ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕವಾದರು. ಕಲ್ಮಡ್ಕ,ಸುಬ್ರಹ್ಮಣ್ಯ, ಅಜ್ಜಾವರ , ಪ್ರೌಢಶಾಲಾ ಶಿಕ್ಷಕರಾಗಿ ಬೆಳ್ತಂಗಡಿ, ಪೂಂಜಾಲಕಟ್ಟೆ, ಪಂಜ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಕೃತಿಗಳು[ಬದಲಾಯಿಸಿ]
ಕವನ ಸಂಕಲನಗಳು[ಬದಲಾಯಿಸಿ]
- ಕಾಡ ಮಲ್ಲಿಗೆ
- ಹೊಸತು ಕಟ್ಟು.
- ಕುಡಿಮಿಂಚು
- ಪ್ರಗತಿಗೆ ಕರೆ
- ಬೆಳ್ಳಿಬೆಳಕು
ಕಾದಂಬರಿ[ಬದಲಾಯಿಸಿ]
- ಅಬ್ಬಿಯ ಮಡಿಲು
- ಕಣ್ ಕನಸು ತೆರೆದಾಗ
ಗದ್ಯಾನುವಾದ[ಬದಲಾಯಿಸಿ]
- ಜೀವದಯಾಷ್ಟಮಿ
ಲೇಖನ[ಬದಲಾಯಿಸಿ]
- ಧಾರಾ ಪಯಸ್ವಿನಿ
ಜಾನಪದ ರೂಪಕ[ಬದಲಾಯಿಸಿ]
- ಹೊಸಕೆರೆಯ ಹೊನ್ನಮ್ಮ
ನಾಟಕ[ಬದಲಾಯಿಸಿ]
- ಶಿವಕುಮಾರಿ
- ಕೇರಳಕುಮಾರಿ
- ಸಖು
- ಅಚ್ಚರಿಯ ಅರಳೆಯ
- ಮಧ್ಯಮಾ
- ಇನ್ಸೂರಳಿಯ
ತುಳು ನಾಟಕ[ಬದಲಾಯಿಸಿ]
- ಜೋಕುಳೆ ಬುದ್ಧಿ.
ಬಾನುಲಿ ರೂಪಕ[ಬದಲಾಯಿಸಿ]
- ಹುತ್ತದಲ್ಲಿ ಹೂ
- ದಯೆಯ ದಾಂಗುಡಿ
- ಅಮರ ಕಲ್ಯಾಣ ಕ್ರಾಂತಿ
ಛಂದೊ ನಾಟಕ[ಬದಲಾಯಿಸಿ]
- ಮಕುಡೋರು ಭಂಗ
- ಸಾವೋಲಿದ ಸಾವಿತ್ರಿ
ಗೀತಾ ರೂಪಕ[ಬದಲಾಯಿಸಿ]
- ಗುರುವನಗುಡಿ
- ಸೊನ್ನೆಯಿಂದ ಸೊನ್ನೆಗೆ
- ಹೃದಯ ರೂಪಕ
ಖಂಡ ಕಾವ್ಯ[ಬದಲಾಯಿಸಿ]
- ಸಿಡಿಲಮರಿ ಅಶ್ವಥಾಮನ್
- ಮೋಹನ ಮುರಲಿ
ಯಕ್ಷಗಾನ[ಬದಲಾಯಿಸಿ]
- ಪ್ರಥಮ ಸ್ವಾತಂತ್ರ್ಯ ಸಮರ
ತುಳು ಯಕ್ಷಗಾನ ಕೃತಿ[ಬದಲಾಯಿಸಿ]
- ಕೊಟಿ ಚೆನ್ನಯ್ಯ
ಸಂಪಾದಿತ ಕೃತಿ[ಬದಲಾಯಿಸಿ]
- ಸ್ಪಂದನ
- ಸ್ವರ್ಣಶಾರದೆ
- ರಜತ ರಶ್ಮಿ
- ಅಮೃತವಾಹಿನಿ
ಅರೆಗನ್ನಡ ಕೃತಿ[ಬದಲಾಯಿಸಿ]
- ಬೊಲ್ಪಾಕನ ಮುಕ್ತ್
ಹವಿಗನ್ನಡ ಕೃತಿ[ಬದಲಾಯಿಸಿ]
- ಒಪ್ಪಕುಂಞಿ
ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]
- ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ.
- ಅರಂತೋಡುವಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ಪ್ರಶಸ್ತಿ[ಬದಲಾಯಿಸಿ]
- ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
- ಅರೆಭಾಷೆ ಅಕಾಡೆಮಿ ಪ್ರಶಸ್ತಿ.[೨]