ಜಾಲಿ ಎಲ್ಎಲ್ಬಿ (ಚಲನಚಿತ್ರ)
| ಜಾಲಿ ಎಲ್ಎಲ್ಬಿ | |
|---|---|
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್ | |
| ನಿರ್ದೇಶನ | ಸುಭಾಷ್ ಕಪೂರ್ |
| ನಿರ್ಮಾಪಕ | ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ |
| ಲೇಖಕ | ಸುಭಾಷ್ ಕಪೂರ್ |
| ಪಾತ್ರವರ್ಗ | ಅರ್ಶದ್ ವಾರ್ಸಿ ಬಮನ್ ಇರಾನಿ ಅಮೃತಾ ರಾವ್ ಸೌರಭ್ ಶುಕ್ಲಾ |
| ಸಂಗೀತ | ಹಾಡುಗಳು: ಕೃಷ್ಣ ಸೋಲೊ ಹಿನ್ನೆಲೆ ಸಂಗೀತ: ಸಂಜೋಯ್ ಚೌಧರಿ |
| ಛಾಯಾಗ್ರಹಣ | ಅಂಶುಮಾನ್ ಮಹಾಲೆ |
| ಸಂಕಲನ | ಸಂದೀಪ್ ಸಿಂಗ್ ಬಜೇಲಿ |
| ಸ್ಟುಡಿಯೋ | ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ |
| ವಿತರಕರು | ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ |
| ಬಿಡುಗಡೆಯಾಗಿದ್ದು |
|
| ಅವಧಿ | 128 ನಿಮಿಷಗಳು |
| ದೇಶ | ಭಾರತ |
| ಭಾಷೆ | ಹಿಂದಿ |
| ಬಂಡವಾಳ | ₹10 ಕೋಟಿ[೧] |
| ಬಾಕ್ಸ್ ಆಫೀಸ್ | ಅಂದಾಜು₹48.7 ಕೋಟಿ[೨] |
ಜಾಲಿ ಎಲ್ಎಲ್ಬಿ ೨೦೧೩ ರಲ್ಲಿ ಬಿಡುಗಡೆಯಾದ ಒಂದು ಭಾರತೀಯ ಹಿಂದಿ ಭಾಷೆಯ ಕಾನೂನು ಹಾಸ್ಯ ನಾಟಕೀಯ ಚಲನಚಿತ್ರವಾಗಿದ್ದು, ಇದನ್ನು ಸುಭಾಷ್ ಕಪೂರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಇದನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಿಸಿದೆ. ೧೫ ಮಾರ್ಚ್ ೨೦೧೩ ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ಅರ್ಷದ್ ವಾರ್ಸಿ, ಬೋಮನ್ ಇರಾನಿ, ಅಮೃತಾ ರಾವ್ ಮತ್ತು ಸೌರಭ್ ಶುಕ್ಲಾ ನಟಿಸಿದ್ದಾರೆ ಮತ್ತು ಚಿತ್ರವು ಜಾಲಿ ಎಂದೂ ಕರೆಯಲ್ಪಡುವ ವಕೀಲ ಜಗದೀಶ್ ತ್ಯಾಗಿಯ ಆರಂಭಿಕ ಜೀವನದ ಸುತ್ತ ಸುತ್ತುತ್ತದೆ ಮತ್ತು ಆರು ಮುಗ್ಧ ಕಾರ್ಮಿಕರಿಗೆ ನ್ಯಾಯ ಗಳಿಸಿಕೊಡುವ ಪ್ರಯತ್ನ ಮತ್ತು ಶ್ರೀಮಂತರ ಏಕಸ್ವಾಮ್ಯ ವರ್ತನೆ ಹಾಗೂ ನ್ಯಾಯಾಂಗದ ಭ್ರಷ್ಟಾಚಾರದ ವಿರುದ್ಧದ ಅವನ ಪ್ರಯಾಣದ ಮೇಲೆ ಕೇಂದ್ರೀಕರಿಸುತ್ತದೆ.[೩] ಈ ಕಥಾಹಂದರವು 1999 ರ ಸಂಜೀವ್ ನಂದಾರ ಹಿಟ್-ಅಂಡ್-ರನ್ ಪ್ರಕರಣ ಮತ್ತು ಪ್ರಿಯದರ್ಶಿನಿ ಮಟ್ಟು ಪ್ರಕರಣದ ಸಣ್ಣ ಉಲ್ಲೇಖದಿಂದ ಪ್ರೇರಿತವಾಗಿದೆ.[೪] ಈ ಚಿತ್ರವು ವಿಮರ್ಶಕರಿಂದ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.[೫]
ಕಥಾವಸ್ತು
[ಬದಲಾಯಿಸಿ]2009 ರಲ್ಲಿ, ವಕೀಲ ಜಗದೀಶ್ "ಜಾಲಿ" ತ್ಯಾಗಿ ದೆಹಲಿ ಮೂಲದ ವಕೀಲನಾಗಿದ್ದು, ತನ್ನ ಸಹೋದರಿಯ ಪತಿ ಪ್ರತಾಪ್ ಜೊತೆ ವಾಸಿಸುತ್ತಿರುತ್ತಾನೆ ಮತ್ತು ಸಂಧ್ಯಾ ಜೊತೆ ಸಂಬಂಧ ಹೊಂದಿರುತ್ತಾನೆ. ಆರು ತಿಂಗಳ ಹಿಂದೆ ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೊದಲ್ಲಿ ಕುಡಿದು ವಾಹನ ಚಲಾಯಿಸಿ ನಡೆಹಾದಿ ಮೇಲೆ ಮಲಗಿದ್ದ ಆರು ಕಾರ್ಮಿಕರ ಸಾವಿಗೆ ಕಾರಣರಾದ ಆರೋಪ ಹೊತ್ತಿರುವ ಮೇಲ್ವರ್ಗದ ಕುಟುಂಬದ ರಾಹುಲ್ ದಿವಾನ್ನನ್ನು ಒಂದು ಸತ್ರ ನ್ಯಾಯಾಲಯದಲ್ಲಿ ಪ್ರಮುಖ ಕ್ರಿಮಿನಲ್ ಡಿಫೆನ್ಸ್ ವಕೀಲನಾದ ಅಡ್ವೊಕೇಟ್ ತೇಜಿಂದರ್ ರಾಜ್ಪಾಲ್ ಯಶಸ್ವಿಯಾಗಿ ಆರೋಪಿಯ ಪರ ವಾದಿಸುವುದನ್ನು ಅವನು ವೀಕ್ಷಿಸುತ್ತಾನೆ. ಹಣ ಮತ್ತು ಖ್ಯಾತಿಗಾಗಿ ಹತಾಶನಾಗಿರುವ ಜಾಲಿ, ಪ್ರಕರಣವನ್ನು ಮುಂದುವರಿಸಲು ನಿರ್ಧರಿಸುತ್ತಾನೆ ಮತ್ತು ರಾಹುಲ್ ದಿವಾನ್ ವಿರುದ್ಧ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸುತ್ತಾನೆ. ಜಾಲಿಯ ನೆರೆಯವನಾದ್ ಕೌಲ್ ಸಾಬ್ ತನ್ನ ಕಚೇರಿಯನ್ನು ಅವನಿಗೆ ಕೋಣೆಯಾಗಿ ನೀಡುತ್ತಾನೆ, ಏಕೆಂದರೆ ಕೌಲ್ ಸಾಬ್ನ ಮಗಳ ಮೇಲೆ ಒಬ್ಬ ಪೊಲೀಸ್ ಅಧಿಕಾರಿಯ ಮಗ ಅತ್ಯಾಚಾರ ಮಾಡಿ ಅವಳ ಕೊಲೆ ಮಾಡಿರುತ್ತಾನೆ, ಮತ್ತು ರಾಜ್ಪಾಲ್ ಅವನ ಪರವೂ ಯಶಸ್ವಿಯಾಗಿ ವಾದಿಸಿರುತ್ತಾನೆ. ಜಾಲಿಯ ಮೂಲಕ ನ್ಯಾಯ ಪಡೆಯಲು ಕೌಲ್ ಸಾಬ್ ಇದನ್ನು ಒಂದು ಅವಕಾಶವೆಂದು ಪರಿಗಣಿಸಿರುತ್ತಾನೆ.
ಪಿಐಎಲ್ ಸಲ್ಲಿಸುವಲ್ಲಿ ಮತ್ತು ಪತ್ರಿಕಾ ವರದಿಗಳನ್ನು ಸಾಕ್ಷಿಯಾಗಿ ಪ್ರಸ್ತುತಪಡಿಸುವಲ್ಲಿ ಜಾಲಿ ಮಾಡಿದ ತಪ್ಪುಗಳಿಗಾಗಿ ಆರಂಭದಲ್ಲಿ ಖಂಡಿಸಿದ ನ್ಯಾಯಾಧೀಶ ಸುಂದರ್ಲಾಲ್ ತ್ರಿಪಾಠಿ, ಮುಂದಿನ ವಿಚಾರಣೆಗೆ ಮೊದಲು ಕೆಲವು ಸರಿಯಾದ ಸಾಕ್ಷ್ಯಗಳನ್ನು ಸಂಗ್ರಹಿಸುವಂತೆ ಜಾಲಿಗೆ ಎಚ್ಚರಿಕೆ ನೀಡುತ್ತಾನೆ. ನಂತರ ಜಾಲಿ ಅಪಘಾತವನ್ನು ನೋಡಿದ್ದೇನೆಂದು ಹೇಳಿಕೊಳ್ಳುವ ಆಲ್ಬರ್ಟ್ ಪಿಂಟೊನನ್ನು ಭೇಟಿಯಾಗುತ್ತಾನೆ. ಆದರೆ ಅವನು ರಾಜ್ಪಾಲ್ನ ಸಹಾಯಕನಾಗಿದ್ದು, ದಿವಾನ್ ಕುಟುಂಬದಿಂದ ಹೆಚ್ಚಿನ ಹಣವನ್ನು ಕಸಿದುಕೊಳ್ಳಲು ಬಳಸಲ್ಪಡುತ್ತಿರುವನೆಂದು ಶೀಘ್ರದಲ್ಲೇ ತಿಳಿಯುತ್ತದೆ. ಒಪ್ಪಂದದ ಭಾಗವಾಗಿ, ಪಿಂಟೊ ಜಾಲಿಗೆ ಹಣದ ಪಾಲನ್ನು ನೀಡುತ್ತಾನೆ ಮತ್ತು ನ್ಯಾಯಾಲಯದಲ್ಲಿ ಪ್ರತಿಕೂಲನಾಗುತ್ತಾನೆ. ಆದರೆ, ಸಂಧ್ಯಾ ಮತ್ತು ಕೌಲ್ ಸಾಬ್ ತನ್ನ ದುರಾಸೆಗಾಗಿ ನ್ಯಾಯದಲ್ಲಿ ರಾಜಿ ಮಾಡಿಕೊಂಡಿದ್ದಕ್ಕಾಗಿ ಜಾಲಿಯನ್ನು ಗದರಿಸುತ್ತಾರೆ. ಇದರಿಂದ ಪ್ರಚೋದಿತನಾಗಿ ಅವನು ಹಣವನ್ನು ರಾಜ್ಪಾಲ್ಗೆ ಹಿಂದಿರುಗಿಸಿ ಪ್ರಕರಣವನ್ನು ಗೆಲ್ಲು ಎಂದು ರಾಜ್ಪಾಲ್ಗೆ ಸವಾಲು ಹಾಕುತ್ತಾನೆ.
ಪ್ರತಾಪ್ ಸಹಾಯದಿಂದ ಜಾಲಿ ಅಪಘಾತಕ್ಕೀಡಾದ ಕಾರಿನ ವೀಡಿಯೊ ದೃಶ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾನೆ. ದಿವಾನ್ ಕುಟುಂಬದ ಚಾಲಕನೇ ಕಾರನ್ನು ಚಲಾಯಿಸಿದ್ದಾನೆ ಮತ್ತು ಆ ದೃಶ್ಯಗಳು ನಕಲಿ ಎಂದು ರಾಜ್ಪಾಲ್ ಪ್ರತಿವಾದ ಮಾಡುತ್ತಾನೆ. ಚಾಲಕನನ್ನು ಪಾಟಿ ಸವಾಲು ಮಾಡುವ ಮೂಲಕ ಜಾಲಿ ಅದನ್ನು ಯಶಸ್ವಿಯಾಗಿ ನಿರಾಕರಿಸುತ್ತಾನೆ. ಕೊನೆಗೆ ಚಾಲಕ ತಾನು ಸುಳ್ಳು ಸಾಕ್ಷ್ಯವನ್ನು ದಾಖಲಿಸಿದ್ದೇನೆ ಎಂದು ಒಪ್ಪಿಕೊಳ್ಳುತ್ತಾನೆ. ರಾಜ್ಪಾಲ್ನ ಸಹೋದ್ಯೋಗಿಗಳು ಜಾಲಿಯ ಮೇಲೆ ಹಲ್ಲೆ ನಡೆಸಿದ ನಂತರ ನ್ಯಾಯಾಧೀಶ ತ್ರಿಪಾಠಿ ಪೊಲೀಸರಿಗೆ ಜಾಲಿಗಾಗಿ ಒಬ್ಬ ಅಂಗರಕ್ಷಕನನ್ನು ಒದಗಿಸುವಂತೆ ಆದೇಶಿಸುತ್ತಾನೆ. ರಾಜ್ಪಾಲ್ನ ಸಂಬಳದಲ್ಲಿರುವ ಸಬ್-ಇನ್ಸ್ಪೆಕ್ಟರ್ ಸತ್ಬೀರ್ ರಾಠಿ ಜಾಲಿಯನ್ನು ಹಾಳುಗೆಡವಲು ಪ್ರಯತ್ನಿಸುತ್ತಾನೆ. ಅಪಘಾತದಲ್ಲಿ ಬದುಕುಳಿದ ಸದಾಕಾಂತ್ ಮಿಶ್ರಾ ಗೋರಖ್ಪುರ್ನಲ್ಲಿ ಇದ್ದಾನೆ ಎಂದು ತಿಳಿದ ನಂತರ ಜಾಲಿ ತನ್ನ ಅಂಗರಕ್ಷಕ ಕಾನ್ಸ್ಟೆಬಲ್ ಹಲ್ದಿರಾಮ್ನ ಸಹಾಯದಿಂದ ಗೋರಖ್ಪುರಕ್ಕೆ ತೆರಳುತ್ತಾನೆ.
ಹಲವು ಅಡೆತಡೆಗಳನ್ನು ದಾಟಿದ ನಂತರ, ಜಾಲಿ ಮಿಶ್ರಾನನ್ನು ನ್ಯಾಯಾಲಯಕ್ಕೆ ಕರೆತರುತ್ತಾನೆ. ರಾಜ್ಪಾಲ್ ವಿಚಾರಣೆಯನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಸಂದಿಗ್ಧನಾಗಿರುವ ತ್ರಿಪಾಠಿ ಅವನ ಹೇಳಿಕೆಯನ್ನು ತಳ್ಳಿಹಾಕುತ್ತಾನೆ. ಮಿಶ್ರಾ ಅಪಘಾತದ ಸತ್ಯವನ್ನು ಬಹಿರಂಗಪಡಿಸುತ್ತಾನೆ; ಆ ರಾತ್ರಿ, ರಾಹುಲ್ ದಿವಾನ್ ತನ್ನ ಲ್ಯಾಂಡ್ ಕ್ರೂಸರ್ ಅನ್ನು ಮಿಶ್ರಾನನ್ನು ಹೊರತುಪಡಿಸಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಓಡಿಸಿರುತ್ತಾನೆ. ತಾನು ಮಾಡಿದ್ದನ್ನು ಮಿಶ್ರಾ ನೋಡುತ್ತಿರುವುದನ್ನು ನೋಡಿದಾಗ, ಮಿಶ್ರಾನ ಮೇಲೆ ಹರಿಸುವ ಆಶಯದೊಂದಿಗೆ, ರಾಹುಲ್ ದಿವಾನ್ ತನ್ನ ಕಾರನ್ನು ಹಿಂದಕ್ಕೆ ಚಲಿಸುತ್ತಾನೆ. ಆದರೆ ಮಿಶ್ರಾನ ಕಾಲಿನ ಮೇಲೆ ಹರಿದ ಪರಿಣಾಮವಾಗಿ ಕಾಲುಗಳನ್ನು ಕತ್ತರಿಸಲಾಗುತ್ತದೆ. ಅಪಘಾತದ ನಂತರ ರಾಠಿ ತನಗೆ ಬೆದರಿಕೆ ಹಾಕಿದ್ದ ಮತ್ತು ತನಿಖೆಯನ್ನು ತನಗೆ ಬೇಕಾದಂತೆ ಸೃಷ್ಟಿಸಿದ್ದ, ಮತ್ತು ತನ್ನ ಸಹೋದರಿಯ ಮದುವೆಗೆ ತಾನು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಆಭರಣಗಳನ್ನು ನೀಡಿದ ನಂತರವೇ ರಾಠಿ ತನಗೆ ಹೋಗಲು ಅವಕಾಶ ನೀಡಿದನು ಎಂದು ಮಿಶ್ರಾ ಹೇಳುತ್ತಾನೆ. ಕಾರನ್ನು ಚಲಾಯಿಸಿದವನು ರಾಹುಲ್ ದಿವಾನ್ ಎಂದು ಮಿಶ್ರಾ ಗುರುತಿಸುತ್ತಾನೆ. ರಾಜ್ಪಾಲ್ ಮತ್ತು ಜಾಲಿಯವರ ಭಾವನಾತ್ಮಕ ಮುಕ್ತಾಯದ ವಾದಗಳ ನಂತರ, ರಾಠಿಯನ್ನು ಅಮಾನತುಗೊಳಿಸಲು ಮತ್ತು ಅವನ ವಿರುದ್ಧ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಲು ತ್ರಿಪಾಠಿ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡುತ್ತಾನೆ ಮತ್ತು ರಾಹುಲ್ ದಿವಾನ್ ಅಪರಾಧಕ್ಕೆ ಕಾರಣನೆಂದು ಘೋಷಿಸುತ್ತಾನೆ ಮತ್ತು ಅವನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತಾನೆ. ಜಾಲಿ ಪ್ರಶಂಸೆಗಳನ್ನು ಸ್ವೀಕರಿಸುತ್ತಾ ಹೊರನಡೆಯುತ್ತಾನೆ. ರಾಜ್ಪಾಲ್ ಮೊದಲ ಬಾರಿಗೆ ಪ್ರಕರಣದಲ್ಲಿ ಸೋತಿದ್ದಕ್ಕೆ ಬೇಸರಗೊಂಡಿರುತ್ತಾನೆ.
ಪಾತ್ರವರ್ಗ
[ಬದಲಾಯಿಸಿ]ಚಿತ್ರದ ತಾರಾಗಣವನ್ನು ಕೆಳಗೆ ಪಟ್ಟಿ ಮಾಡಲಾಗಿದೆ:[೬]
- ಅಡ್ವೊಕೇಟ್ ಜಗದೀಶ್ ತ್ಯಾಗಿ (ಜಾಲಿ) ಪಾತ್ರದಲ್ಲಿ ಅರ್ಶದ್ ವಾರ್ಸಿ
- ಅಡ್ವೊಕೇಟ್ ತೇಜಿಂದರ್ ರಾಜ್ಪಾಲ್ ಪಾತ್ರದಲ್ಲಿ ಬಮನ್ ಇರಾನಿ
- ಸಂಧ್ಯಾ ಪಾತ್ರದಲ್ಲಿ ಅಮೃತಾ ರಾವ್
- ನ್ಯಾಯಾಧೀಶ ಸುಂದರ್ಲಾಲ್ ತ್ರಿಪಾಠಿ ಪಾತ್ರದಲ್ಲಿ ಸೌರಭ್ ಶುಕ್ಲಾ
- ಆಲ್ಬರ್ಟ್ ಪಿಂಟೊ ಪಾತ್ರದಲ್ಲಿ ಹರ್ಷ್ ಛಾಯಾ
- ಪ್ರತಾಪ್ (ಜಾಲಿಯ ಭಾವ) ಪಾತ್ರದಲ್ಲಿ ಮನೋಜ್ ಪಾಹ್ವಾ
- ಕೌಲ್ ಸಾಬ್ ಪಾತ್ರದಲ್ಲಿ ರಮೇಶ್ ದೇವ್
- ಯೋಗ್ರಾಜ್ ದೀವಾನ್ (ರಾಹುಲ್ ದೀವಾನ್ನ ಅಪ್ಪ) ಪಾತ್ರದಲ್ಲಿ ಮೋಹನ್ ಕಪೂರ್
- ಗುರೂಜಿ ಪಾತ್ರದಲ್ಲಿ ಸಂಜಯ್ ಮಿಶ್ರಾ
- ಹಿರಿಯ ದೀವಾನ್ (ರಾಹುಲ್ ದೀವಾನ್ನ ಅಜ್ಜ) ಪಾತ್ರದಲ್ಲಿ ಮೋಹನ್ ಅಗಾಷೆ
- ಮೀರಟ್ ನ್ಯಾಯಾಧೀಶೆಯ ಪಾತ್ರದಲ್ಲಿ ವಿಭಾ ಛಿಬ್ಬರ್
- ಸದಾಕಾಂತ್ ಮಿಶ್ರಾ (ಜಾಲಿ ಎಲ್ಎಲ್ಬಿ 2 ರಲ್ಲಿ ರಾಮ್ ಕುಮಾರ್ ಭದೌರಿಯಾ ಮತ್ತು ಜಾಲಿ ಎಲ್ಎಲ್ಬಿ 3 ರಲ್ಲಿ ರಘುನಾಥ್ ಭಾರದ್ವಾಜ್) ಪಾತ್ರದಲ್ಲಿ ಸುಶೀಲ್ ಪಾಂಡೆ
- ಉಪ-ಆರಕ್ಷಕ ಸತ್ಬೀರ್ ರಾಠಿ ಪಾತ್ರದಲ್ಲಿ ಸಂದೀಪ್ ಬೋಸ್
- ರಾಹುಲ್ ದೀವಾನ್ ಪಾತ್ರದಲ್ಲಿ ರಾಜೀವ್ ಸಿದ್ಧಾರ್ಥ
- ಸುರೇಶ್ ವಶಿಷ್ಠ್ ಪಾತ್ರದಲ್ಲಿ ಬ್ರಿಜೇಂದ್ರ ಕಲಾ (ಆರಂಭಿಕ ದೃಶ್ಯದಲ್ಲಿ)
- ಪೇದೆ ಹಲ್ದೀರಾಮ್ ಪಾತ್ರದಲ್ಲಿ ಮುಕುಂದ್ ಭಟ್
- ರಮಾಕಾಂತ್ ಶುಕ್ಲಾ ಪಾತ್ರದಲ್ಲಿ ವಿಜಯ್ ಗುಪ್ತಾ
- ವಕೀಲನ ಪಾತ್ರದಲ್ಲಿ ವಿಶಾಲ್ ಒ ಶರ್ಮಾ
- ವಾಸು (ರೋಹ್ತಕ್ನ ವಕೀಲ) ಪಾತ್ರದಲ್ಲಿ ಇಶ್ತಿಯಾಕ್ ಖಾನ್
ನಿರ್ಮಾಣ
[ಬದಲಾಯಿಸಿ]ಚಿತ್ರದ ಕಥೆಯು 1999 ರ ಸಂಜೀವ್ ನಂದಾ ಹಿಟ್-ಅಂಡ್-ರನ್ ಪ್ರಕರಣದ ಘಟನೆಗಳಿಂದ ಪ್ರೇರಿತವಾಗಿದೆ.[೪]
ಬಿಡುಗಡೆ
[ಬದಲಾಯಿಸಿ]ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಜಾಲಿ ಎಲ್ಎಲ್ಬಿ ವಿಮರ್ಶಕರಿಂದ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಸಂಗೀತ
[ಬದಲಾಯಿಸಿ]ಜಾಲಿ ಎಲ್ಎಲ್ಬಿ ಚಿತ್ರದ ಸಂಗೀತವನ್ನು ಕೃಷ್ಣ ಸಂಯೋಜಿಸಿದ್ದಾರೆ. ಸುಭಾಷ್ ಕಪೂರ್ ಮತ್ತು ವಾಯು ("ಝೂಠ್ ಬೋಲಿಯಾ" ಹಾಡಿಗಾಗಿ) ಗೀತಸಾಹಿತ್ಯ ಬರೆದಿದ್ದಾರೆ. ಬಪ್ಪಿ ಲಹಿರಿ ಅವರ "ಮೇರೆ ತೋ ಎಲ್ ಲಗ್ ಗಯೇ" ಹಾಡಿನ ಮೊದಲ ಪ್ರೋಮೋ (ಭೀಂಪಲಾಸಿ ರಾಗಕ್ಕೆ ಹೊಂದಿಸಲಾಗಿದೆ) ಫೆಬ್ರವರಿ 13, 2013 ರಂದು ಬಿಡುಗಡೆಯಾಯಿತು. ಧ್ವನಿವಾಹಿನಿಯಲ್ಲಿ, ಹಾಡನ್ನು ಎರಡು ವಿಭಿನ್ನ ಹಾಡುಗಳಾಗಿ ಕತ್ತರಿಸಲಾಗಿದೆ, ಒಂದು "ಲಾ ಲಗ್ ಗಯೇ" ಮತ್ತು ಇನ್ನೊಂದು "ಎಲ್ ಲಗ್ ಗಯೇ". ಕಮಲ್ ಖಾನ್ ಅವರ ಎರಡನೇ ಹಾಡಿನ ಪ್ರೋಮೋ, "ಝೂಠ್ ಬೋಲಿಯಾ" ಫೆಬ್ರವರಿ 15, 2013 ರಂದು ಬಿಡುಗಡೆಯಾಯಿತು. ಪೂರ್ಣ ಧ್ವನಿವಾಹಿನಿಯನ್ನು ಫೆಬ್ರವರಿ 22, 2013 ರಂದು ಟಿ-ಸೀರೀಸ್ ಗುರುತಿನ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಎಂಟು ಹಾಡುಗಳನ್ನು ಒಳಗೊಂಡಿದೆ.
ಹಾಡುಗಳ ಪಟ್ಟಿ
[ಬದಲಾಯಿಸಿ]| ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
|---|---|---|---|---|
| 1. | "ಝೂಠ್ ಬೋಲಿಯಾ" | ವಾಯು | ಕಮಲ್ ಖಾನ್ | 4:08 |
| 2. | "ದಾರು ಪೀಕೆ ನಾಚ್ನಾ" | ಸುಭಾಷ್ ಕಪೂರ್ | ಮೀಕಾ ಸಿಂಗ್, ಶ್ರೇಯಾ ಘೋಶಾಲ್ | 4:17 |
| 3. | "ಅಜ್ನಬಿ" | ಸುಭಾಷ್ ಕಪೂರ್ | ಮೋಹಿತ್ ಚೌಹಾನ್, ಶ್ರೇಯಾ ಘೋಶಾಲ್ | 3:55 |
| 4. | "ಹನ್ಸ್ ಕೀ ಚಾಲ್" | ಸುಭಾಷ್ ಕಪೂರ್ | ಕೈಲಾಶ್ ಖೇರ್ | 4:22 |
| 5. | "ಮೇರೆ ತೊ ಲಾ ಲಗ್ ಗಯೆ" | ಸುಭಾಷ್ ಕಪೂರ್ | ಬಪ್ಪಿ ಲಹಿರಿ | 4:31 |
| 6. | "ಝೂಠ್ ಬೋಲಿಯಾ" (ರೀಮಿಕ್ಸ್) | ವಾಯು | ಕಮಲ್ ಖಾನ್ | 3:59 |
| 7. | "ದಾರು ಪೀಕೆ ನಾಚ್ನಾ" (ರೀಮಿಕ್ಸ್) | ಸುಭಾಷ್ ಕಪೂರ್ | ಮೀಕಾ ಸಿಂಗ್ | 3:48 |
| 8. | "ಮೇರೆ ತೊ ಎಲ್ ಲಗ್ ಗಯೆ" | ಸುಭಾಷ್ ಕಪೂರ್ | ಬಪ್ಪಿ ಲಹಿರಿ | 4:30 |
ಪ್ರಶಸ್ತಿಗಳು
[ಬದಲಾಯಿಸಿ]- ಅತ್ಯುತ್ತಮ ಹಿಂದಿ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ[೭]
- ಅತ್ಯುತ್ತಮ ಪೋಷಕ ನಟನಿಗಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸೌರಭ್ ಶುಕ್ಲಾ[೭]
- ೨೦೧೪ ರ ಸ್ಕ್ರೀನ್ ಪ್ರಶಸ್ತಿಗಳು
- ಅತ್ಯುತ್ತಮ ಪೋಷಕ ನಟನಿಗಾಗಿರುವ ಸ್ಕ್ರೀನ್ ಪ್ರಶಸ್ತಿ: ಸೌರಭ್ ಶುಕ್ಲಾ
- ಅತ್ಯುತ್ತಮ ಕಥೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
- ಅತ್ಯುತ್ತಮ ಸಂಭಾಷಣೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ
ಕಿಡ್ಸ್ ಚಾಯ್ಸ್ ಅವಾರ್ಡ್ಸ್ 2014: ಬಿಂದಾಸ್!
- ಅಚ್ಚುಮೆಚ್ಚಿನ ಹಾಡು- ಮೇರೆ ತೋ ಎಲ್ ಲಗ್ ಗಯಿ (ವಿಜಯ)
- ಅಚ್ಚುಮೆಚ್ಚಿನ ಗೀತ್ ಸೆನ್ಸೇಷನಲ್ - ಝೂಟ್ ಬೋಲಿಯಾ
ಉತ್ತರಭಾಗಗಳು
[ಬದಲಾಯಿಸಿ]ಇದರ ಮುಂದುವರಿದ ಭಾಗವಾದ ಜಾಲಿ ಎಲ್ಎಲ್ಬಿ 2 ಫೆಬ್ರವರಿ 2017 ರಲ್ಲಿ ಬಿಡುಗಡೆಯಾಯಿತು.[೮][೯] ಇದರಲ್ಲಿ ಸೌರಭ್ ಶುಕ್ಲಾ, ಸಂಜಯ್ ಮಿಶ್ರಾ ಮತ್ತು ಬ್ರಿಜೇಂದ್ರ ಕಲಾ ಮತ್ತೆ ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಂಡರು. ವಾರ್ಸಿ ಬದಲಿಗೆ ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿದರು.
೨೦೨೫ ರಲ್ಲಿ, ಜಾಲಿ ಎಲ್ಎಲ್ಬಿ 3 ಬಿಡುಗಡೆಯಾಯಿತು. ಇದರಲ್ಲಿ ಕುಮಾರ್ ಮತ್ತು ವಾರ್ಸಿ, ಹಿಂದಿನ ಎರಡೂ ಚಿತ್ರಗಳ ಹಲವಾರು ಇತರ ಪಾತ್ರವರ್ಗದ ಸದಸ್ಯರೊಂದಿಗೆ ತಮ್ಮ ಪಾತ್ರಗಳನ್ನು ಪುನರಾವರ್ತಿಸಿದರು.
ರೀಮೇಕ್ಗಳು
[ಬದಲಾಯಿಸಿ]ಈ ಚಿತ್ರವನ್ನು ತಮಿಳಿನಲ್ಲಿ ಮನಿಥನ್ (2016) ಮತ್ತು ತೆಲುಗಿನಲ್ಲಿ ಸಪ್ತಗಿರಿ ಎಲ್ಎಲ್ಬಿ (2017) ಎಂದು ರೀಮೇಕ್ ಮಾಡಲಾಗಿದೆ.[೧೦][೧೧]
ಉಲ್ಲೇಖಗಳು
[ಬದಲಾಯಿಸಿ]- ↑ Surajeet Das Gupta & Urvi Malvania (30 November 2013). "Most profitable films entertain no love for the Rs 100-crore club". Business Standard. Retrieved 7 July 2016.
- ↑ "Jolly LLB Box Office Collection till Now | Box Collection". Bollywood Hungama (in ಇಂಗ್ಲಿಷ್). Retrieved 2024-05-06.
- ↑ "Arshad calls Jolly LLB 'wonderful' experience". Hindustan Times. 2 April 2012. Retrieved 7 July 2016.
{{cite web}}: CS1 maint: deprecated archival service (link) - 1 2 "'Jolly LLB' review: The film's not a bad way to spend the evening". Ibnlive.in.com. Archived from the original on 17 March 2013. Retrieved 25 April 2013.
- ↑ "Jolly LLB - Movie - Box Office India". www.boxofficeindia.com. Retrieved 2025-09-03.
- ↑ Hungama, Bollywood (2013-03-15). "Jolly LLB Cast List | Jolly LLB Movie Star Cast | Release Date | Movie Trailer | Review- Bollywood Hungama" (in ಇಂಗ್ಲಿಷ್). Retrieved 2025-02-01.
- 1 2 "61st National Film Awards For 2013" (PDF). Directorate of Film Festivals. 16 April 2014. Archived from the original (PDF) on 16 April 2014. Retrieved 16 April 2014.
- ↑ IANS (1 November 2014). "Eager to start Jolly LLB 2: Arshad Warsi". India Today. Retrieved 2016-07-07.
- ↑ "Akshay Kumar to star in 'Jolly LLB 2'; to star opposite this actress for the first time!". Daily News & Analysis (in ಅಮೆರಿಕನ್ ಇಂಗ್ಲಿಷ್). 2016-07-04. Retrieved 2016-07-05.
- ↑ "Udhayanidhi Stalin to remake 'Jolly LLB'!". Sify. Archived from the original on 13 June 2015.
- ↑ "'Saptagiri LLB' says prosecution is prostitution - Telugu News". 4 November 2017.