ಜರಗನಹಳ್ಳಿ ಶಿವಶಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜರಗನಹಳ್ಳಿ ಶಿವಶಂಕರ್‍ (ಸೆಪ್ಟೆಂಬರ್ ೦೮, ೧೯೪೯ - ಮೇ ೦೫, ೨೦೨೧) ಕನ್ನಡದ ಪ್ರಮುಖ ಲೇಖಕ. ಬಿ.ಕಾಂ ಪಧವಿದರರಾದ ಇವರು ಕೆನರಾ ಬ್ಯಾಂಕಿನಲ್ಲಿ ೨೮ ವರ್‍ಷಗಳ ಸೇವೆ ಸಲ್ಲಿಸಿ ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ವ್ಯಕ್ತಿಚಿತ್ರ[ಬದಲಾಯಿಸಿ]

ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು ೪೦ ವರ್‍ಷಗಳಿಂದ ಪ್ರಪಟಗೊಳ್ಳುತ್ತಿವೆ. ಇವರು ಶುಭದ ಪ್ರಕಾಶನವೆಂಬ ಕಾವ್ಯ ಪ್ರಕಟಣೆಗೆ ಮೀಸಲಾದ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಅದರ ಮೂಲಕ ವಿವಿಧ ಬರಹಗಾರರ ಸುಮಾರು ೫೦ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ನಿಧನ[ಬದಲಾಯಿಸಿ]

ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಿವಶಂಕರ್ ಅವರು ಮೇ ೫, ೨೦೨೧ರಂದು ನಿಧನ ಹೊಂದಿದರು.[೧]

ಪುಸ್ತಕಗಳು[ಬದಲಾಯಿಸಿ]

ಕವನ ಸಂಕಲನ

೧೯೮೫ ಕವನ - ಶುಭಾಂಗಿ
೧೯೯೧ ಹನಿಗವನ - ಬುಗ್ಗೆ
೧೯೯೮ ಕವನ - ಮರಗಳೂ
೨೦೦೦ ಹನಿಗವನ - ಮಳೆ
೨೦೦೧ ಕಿರು ಕವಿತೆ - ಆಲಿಕಲ್ಲು
೨೦೦೨ ಹನಿಗವನ ಝರಿ - ಆಯ್ದ ಹನಿಗವಿತೆಗಳು
೨೦೦೩ ಕವಿತೆ - ದೇವರ ನೆರಳು
೨೦೧೨ ವಚನ - ವಚನ ಧ್ಯಾನ
೨೦೧೩ ಹನಿಗವನ - ಹೊಳೆ
೨೦೧೩ ಹನಿಗವನ - ಮರಗಳು
೨೦೧೫ ಭಾವಗೀತೆ - ನಾದೋತ್ಸವ
೨೦೧೬ ವಚನ - ವಚನ ಛಾಯೆ

ಲೇಖನ
೨೦೦೪ ಭವ ಬದುಕು - ತರಂಗ ಅಂಕಣ ಬರಹಗಳು
೨೦೦೭ ನೆನಪಿನ ನೆಂಟರು - ವಿಜಯ ಕರ್ನಾಟಕದ ಅಂಕಣ ಬರಹಗಳು
೨೦೧೩ ಚಾತಕ - ಕರ್ಮವೀರ ಪತ್ರಿಕೆಯ ಅಂಕಣ ಬರಹಗಳು

ಸಂಪಾದನೆ
೧೯೮೭ ಜೊತೆಯಾದವರು - ಕವನ ವಿಮರ್‍ಶಾ ಸಂಕಲನ
೨೦೦೯ ಬೇರು ಚಿಗುರು - ಕವನ ಸಂಕಲನ
೨೦೧೩ ಅಕ್ಷರ ತಾಂಬೂಲ - ಸಂಸಾರ-ವಿವಾಹ ಸಂಬಂಧಿತ ಬರಹಗಳು
೨೦೧೫ ವಚನ ಸಂಗಮ - ಆಧುನಿಕ ವಚನಗಳ ಪ್ರಾತಿನಿಧಿಕ ಸಂಕಲನ

ಪ್ರಶಸ್ತಿ ಪುರಸ್ಕಾರ[ಬದಲಾಯಿಸಿ]

  • ೨೦೦೦ ಚುಟುಕು ರತ್ನ - ಚುಟುಕು ಸಾಹಿತ್ಯ ಪರಿಷತ್ತು, ಮೈಸೂರು
  • ೨೦೦೧ ಕೆಂಪೇಗೌಡ ಪ್ರಶಸ್ತಿ - ಬೆಂಗಳೂರು ಮಹಾನಗರ ಪಾಲಿಕೆ
  • ೨೦೦೧ ಗೊರೂರು ಸಾಹಿತ್ಯ ಪ್ರಶಸ್ತಿ
  • ೨೦೦೩ ಸಾಹಿತ್ಯ ಸೇತು ಪ್ರಶಸ್ತಿ
  • ೨೦೦೪ ಸರ್ ಎಂ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
  • ೨೦೦೪ ಕೋಲಾರ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ
  • ೨೦೦೫ ಸುವರ್‍ಣ ಕರ್‍ನಾಟಕ ರಜ್ಯೋತ್ಸವ ಪ್ರಶಸ್ತಿ - ಕರ್ನಾಟಕ ಸರ್‍ಕಾರ
  • ೨೦೦೫ ಭೂಪಾಲಿನ ಭಾರತ್ ಭವನದಲ್ಲಿ ನಡೆದ ‘ಕವಿಭಾರತಿ’ಯಲ್ಲಿ ಕನ್ನಡದ ಪ್ರತಿನಿಧಿ
  • ೨೦೦೬ ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ
  • ೨೦೦೭ ಕಾಸರಗೋಡಿನಲ್ಲಿ ನಡೆದ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ
  • ೨೦೦೭ ಸುವರ್‍ಣ ಕರ್ನಾಟಕ ಭೂಷಣ ಪ್ರಶಸ್ತಿ
  • ೨೦೦೮ ದುಬೈ ಧ್ವನಿ ಪ್ರತಿಷ್ಠಾನ ನೀಡುವ ‘ಧ್ವನಿ’ ಪುರಸ್ಕಾರ
  • ೨೦೦೮ ಬಸವ ಜ್ಯೋತಿ ರಾಜ್ಯ ಪ್ರಶಸ್ತಿ, ಅಹೇರಿ, ಬಿಜಾಪುರ
  • ೨೦೧೩ ೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬಿಜಾಪುರ - ಗೌರವ ಪುರಸ್ಕಾರ
  • ೨೦೧೩ ತಮಿಳುನಾದಿನ ನೈವೇಲಿ ಲಿಗ್ನೈಟ್ ಕಾರ್‍ಪೊರೇಷನ್ ಕನ್ನಡ ಸಂಘದ ಸುವರ್‍ಣ ಮಹೋತ್ಸವ ಸಮಾರಂಭದ ಉಧ್ಘಾಟಕರಾಗಿ ಭಾಗಿ
  • ೨೦೧೩ ಅಡ್ವೈಸರ್‍ ಸಾಹಿತ್ಯ ಪ್ರಶಸ್ತಿ - ಮಂಡ್ಯ. ‘ಹೊಳೆ’ ಹನಿಗವಿತೆಗಳ ಸಂಕಲನಕ್ಕೆ
  • ೨೦೧೩-೧೧-೨೪ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್‍ವಾಧ್ಯಕ್ಷತೆ
  • ೨೦೧೪-೦೧-೧೦ ಕನ್ನಡ ಮತ್ತು ಸಂಸ್ಕೃತಿ ಇಲಾಖೆ - ‘ಮನೆಯಂಗಳದಲ್ಲಿ ಮಾತುಕತೆ’ ಯಲ್ಲಿ ‘ತಿಂಗಳ ಅತಿಥಿ’ ಗೌರವ
  • ೨೦೧೫-೦೨-೨೫ ‘ಹೊಳೆ’ ಹನಿಗವಿತೆಗಳ ಸಂಕಲನಕ್ಕೆ ಬೆಳಗಾವಿ ಚುಟುಕು ಸಾಹಿತ್ಯ ಸಮ್ಮೇಳನದ ದ್ವಿತೀಯ ಬಹುಮಾನ
  • ೨೦೧೬ ‘ಹೊಸಗನ್ನಡ ಕಾವ್ಯ ಸಂಚಯ’ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಬಿ.ಎ. ಮೂರನೆ ಸೆಮಿಸ್ಟರ್‍ ಕನ್ನಡ ಐಚ್ಛಿಕ ಪಠ್ಯಪುಸ್ತಕ (೨೦೧೬ ರಿಂದ ೨೦೧೯) ದಲ್ಲಿ ಹನಿಗವಿತೆಗಳು ಪಠ್ಯವಾಗಿದೆ
  • ೨೦೧೬-೦೮-೦೭ ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಸಿರುವ ‘ಹೆಚ್.ಎಸ್.ರೇಣುಕಾ ಪ್ರಸಾದ ಪ್ರಶಸ್ತಿ’ ಪ್ರಥಮ ಪ್ರಶಸ್ತಿಗೆ ಭಾಜನ
  • ೨೦೧೬-೦೯-೦೮ ಅಂತರ ರಾಷ್ಟ್ರೀಯ ಮಾನವ ಧರ್‍ಮ ಪ್ರತಿಷ್ಠಾನ ‘ನಿಜ ಧರ್‍ಮಾಧೀಶ ಬಸವ’ ಪ್ರಶಸ್ತಿ
  • ೨೦೧೬-೧೦-೦೨ ವೆಲ್ಫೇರ್‍ ಪಾರ್‍ಟಿ ಆಫ್ ಇಂಡಿಯ ದಿಂದ ಗಾಂಧಿ ಶಾಂತಿ ಪುರಸ್ಕಾರ
  • ೨೦೧೬-೧೨-೦೨ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರಿನಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ
  • ೨೦೧೬ ಜೀವನ್ಮುಖಿ ಪತ್ರಿಕಾ ಪ್ರಶಸ್ತಿ

೨೦೧೬ ಬೆಂಗಳೂರು ನಗರ ಜಿಲ್ಲೆ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ

  • ೨೦೧೭-೦೯-೨೨ ಸಂದೇಶ್ ಸಂಸ್ಥೆಯಿಂದ ಪ್ರಶಸ್ತಿ
  • ೨೦೧೭-೧೨-೦೮ ಪ್ರೊ. ಸಿ ಹೆಚ್ ಮರಿದೇವರು ಸಾಹಿತ್ಯ ಪ್ರಶಸ್ತಿ (ಕ.ಸಾ.ಪ) ದತ್ತಿ ಮೊದಲನೆಯ ಪ್ರಶಸ್ತಿ
  • ೨೦೧೮-೦೧-೨೬ ಕೆನರಾ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಗಣರಾಜ್ಯೋತ್ಸವದ ಪ್ರಶಸ್ತಿ ಪುರಸ್ಕಾರ
  • ೨೦೧೮-೧೦-೦೪ ಬಹರೇನ್ ದೇಶದಲ್ಲಿ ನಡೆದ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ.
  • ೨೦೧೮-೧೦-೨೦ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯ ಅಧ್ಯಕ್ಷತೆ
  • ೨೦೧೯-೦೪-೨೨ ಭಾಲ್ಕಿ ಮಠವು ನೀಡುವ "ಬಸವ ತತ್ವ ಪ್ರಚಾರ ಪುರಸ್ಕಾರ ೨೦೧೯"
  • ೨೦೧೯-೦೫-೧೨ ಬಸವ ವೇದಿಕೆ, ಬೆಂಗಳೂರು ನೀಡುವ ವಚನ ಸಾಹಿತ್ಯ ಶ್ರೀ ೨೦೧೯ ಪ್ರಶಸ್ತಿ
  • ೨೦೧೯-೦೮-೧೧ ಸಮ್ಮಿಲನ ಸಾಹಿತ್ಯ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

  1. "ಸಾಹಿತಿ ಜರಗನಹಳ್ಳಿ ಶಿವಶಂಕರ್ ನಿಧನ". Prajavani. 5 May 2021.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಚಿಲುಮೆ ಅಂತರ್ಜಾಲ ತಾಣದಲ್ಲಿರುವ ಜರಗನಹಳ್ಳಿ ಶಿವಶಂಕರ್‍ ಅವರ ಬರಹಗಳು