ಚಂದ್ರಕೀರ್ತಿ (ಜೈನ ಕವಿ)
ಚಂದ್ರಕೀರ್ತಿ ಎನ್ನುವವನು ಪರಮಾಗಮಸಾರ ಎಂಬ ಕಂದವೃತ್ತಗಳನ್ನೊಳಗೊಂಡ ಒಂದು ಕನ್ನಡ ಗ್ರಂಥದ ಕರ್ತೃ. ಜೈನ.[೧]
ಈತನ ಕಾಲನಿರ್ಣಯಕ್ಕೆ ಯಾವುದೇ ಆಧಾರ ದೊರೆಯುವುದಿಲ್ಲ. ಕವಿಚರಿತೆಕಾರರು ಈತ ಸುಮಾರು 1400 ರಲ್ಲಿದ್ದಿರಬಹುದೆಂದು ಹೇಳುತ್ತಾರೆ. ಈತನ ಗ್ರಂಥ ಆತ್ಮಸ್ವರೂಪ, ವೈರಾಗ್ಯ-ಮುಂತಾದ ವಿಷಯಗಳನ್ನೊಳಗೊಂಡಿದೆ. ಇದರಲ್ಲಿ 132 ಕಂದವೃತ್ತಗಳಿವೆ. ತನ್ನ ಗ್ರಂಥಕ್ಕೆ ಆ ಹೆಸರು ಬರಲು ಕಾರಣವನ್ನು ಕವಿ ಹೀಗೆ ವಿವರಿಸುತ್ತಾನೆ.
ಪರಮಜಿನೇಶ್ವರ ಮತದೊಳ್ |
ಪರಿಕಿಸಿ ಸಾರಾಯಮಪ್ಪುವಂ ಕೊಂಡು ಕರಂ ||
ವಿರಚಿಸಿತಪ್ಪುದ ಱಿಂದಂ |
ಪರಮಾಗಮಸಾರಮಾದುದೀ ಕೃತಿಯಂದಂ ||
ಪದ್ಯಗಳು
[ಬದಲಾಯಿಸಿ]ಮುನಿಪತಿ ದರ್ಶನಶುದ್ಧಂ |
ವಿನುತಯಶಂ ಶೀಲರತ್ನನಚಳಿತಧೈರ್ಯಂ ||
ಮನಸಿಜಮದಕರಿಸಿಂಹಂ |
ವಿನಯನಿಧಾನಂ ಸರಸ್ವತೀಮುಖತಿಲಕಂ ||
ಯಮನಿಯಮಧ್ಯಾನಯುತಂ |
ಸಮಚಿತ್ತಂ ತತ್ತ್ವವೇದಿ ವೈರಾಗ್ಯಯುತಂ|
ಶಮಿತ ಕಷಾಯಂ ನಿಸ್ಪೃಹ |
ನಮಲಂ ಭವ್ಯಂ ಸರಸ್ವತೀಮುಖತಿಲಕಂ ||
ಎಂಬೀ ಎರಡು ಪದ್ಯಗಳಲ್ಲಿ ಕವಿ ತನ್ನ ಗುಣಾತಿಶಯಗಳನ್ನು ಹೇಳಿಕೊಂಡಿದ್ದಾನೆ. ಸರಸ್ವತೀಮುಖತಿಲಕಂ, ಕವಿಜನಮಿತ್ರ ಎಂಬುವು ಈತನ ಬಿರುದುಗಳಿದ್ದಿರಬಹುದು.
ಉಲ್ಲೇಖಗಳು
[ಬದಲಾಯಿಸಿ]