ಚಂದ್ರಕೀರ್ತಿ

ಚಂದ್ರಕೀರ್ತಿ ಎನ್ನುವವನು ಬೌದ್ಧಮತದ ಮಹಾಯಾನ ಪಂಗಡಕ್ಕೆ ಸೇರಿದ ವಿದ್ವಾಂಸ. ಬಹುಶಃ ಕ್ರಿ.ಶ. ಸು. 7ನೆಯ ಶತಮಾನದ ಪೂರ್ವಾರ್ಧದಲ್ಲಿ ಇದ್ದವನೆಂದು ವಿದ್ವಾಂಸರ ಅಭಿಪ್ರಾಯ. ಪ್ರಸಿದ್ಧ ವಿದ್ವಾಂಸ ಸತೀಶಚಂದ್ರ ವಿದ್ಯಾಭೂಷಣ ಈತನನ್ನು ಶ್ರೀ ಶಂಕರಾಚಾರ್ಯರ ಸಮಕಾಲೀನನೆಂದು ಭಾವಿಸುತ್ತಾನೆ.
ಜೀವನ, ಬರೆದ ಗ್ರಂಥಗಳು
[ಬದಲಾಯಿಸಿ]ಈತನ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಆದ್ದರಿಂದಲೇ ವಿದ್ವಾಂಸರಲ್ಲಿ ಈತನ ಬಗ್ಗೆ ಭಿನ್ನಾಭಿಫ್ರಾಯವಿದೆ. ಬೌದ್ಧ ವಿದ್ವಾಂಸ ಆರ್ಯದೇವ ಈತನೇ ಎಂದು ಈವರೆಗೂ ಭಾವಿಸಲಾಗಿತ್ತು. ಆದರೆ ಇತ್ತೀಚೆಗೆ ಇದನ್ನು ನಿರಾಕರಿಸಲಾಗಿದೆ. ಏಕೆಂದರೆ ಚಂದ್ರಕೀರ್ತಿಯೇ ಆರ್ಯದೇವನನ್ನೂ ಮತ್ತು ಆತನ ಗ್ರಂಥಗಳಾದ ಶತಕ-ಚತುಶತಕ, ಶತಕಶಾಸ್ತ್ರ ಮತ್ತು ಆರ್ಯ ಪದೀಯಗಳನ್ನು ತನ್ನ ಗ್ರಂಥವಾದ ಮಾಧ್ಯಮಿಕವೃತ್ತಿ ಎನ್ನುವ ಗ್ರಂಥದಲ್ಲಿ ಸ್ಮರಿಸಿದ್ದಾನೆ.
ಚಂದ್ರಕೀರ್ತಿ ಬರೆದ ಮತ್ತೊಂದು ಸ್ವತಂತ್ರ ಗ್ರಂಥವೆಂದರೆ ಮಧ್ಯಮಕಾವತಾರ. ಇದು ಮೂಲದಲ್ಲಿ ಸಂಸ್ಕೃತ ಗ್ರಂಥ; ಈಗ ಲಭ್ಯವಾಗಿರುವುದು ಟಿಬೆಟನ್ ಲಿಪಿಯಲ್ಲಿ. ಮಹಾಯಾನ ಬೌದ್ಧಮತದ ವಿಚಾರವಾಗಿ ಈ ಗ್ರಂಥ ಅಧಿಕೃತ ವಾಣಿಯಿಂದ ಹೇಳುವುದಲ್ಲದೆ ಆ ಮತದ ಅಧ್ಯಯನಕ್ಕೆ ಈ ಗ್ರಂಥ ಅತ್ಯುತ್ತಮ ಪ್ರಸ್ತಾವನೆಯಾಗಿದೆ ಎಂದು ವಿದ್ವಾಂಸರ ಅಭಿಪ್ರಾಯ. ಈತನ ಮತ್ತೊಂದು ಗ್ರಂಥ ನಾಗಾರ್ಜುನನ ಮಾಧ್ಯಮಿಕ ಸೂತ್ರಗಳ ಮೇಲಿನ ಪ್ರಸನ್ನಪದ ಎನ್ನುವ ಸಂಸ್ಕೃತ ಭಾಷ್ಯ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Buswell & Lopez 2013, Entry for Script error: The function "transl" does not exist..
ಗ್ರಂಥಸೂಚಿ
[ಬದಲಾಯಿಸಿ]- Buswell, Robert E. Jr.; Lopez, Donald S. Jr. (2013). The Princeton Dictionary of Buddhism. Princeton: Princeton University Press. p. 165. ISBN 9781400848058.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Geshe Jampa Gyatso - Masters Program Middle Way
- Joe Wilson. Chandrakirti's Sevenfold Reasoning Meditation on the Selflessness of Persons
- Candrakiirti's critique of Vijñaanavaada, Robert F. Olson, Philosophy East and West, Volume 24 No. 4, 1977, pp. 405–411
