ಕೆ ಚಂದ್ರಶೇಖರ್ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ ಚಂದ್ರಶೇಖರ್ ರಾವ್

ತೆಲಂಗಾಣ ಮೊದಲನೇ ಮುಖ್ಯ ಮಂತ್ರಿ
ಅಧಿಕಾರ ಅವಧಿ
2 June 2014 - ಪ್ರಸ್ತುತ
ಪೂರ್ವಾಧಿಕಾರಿ ಮೊದಲ ಸರಕಾರ
ಮತಕ್ಷೇತ್ರ ಗಜ್ವಾಲ್
ವೈಯಕ್ತಿಕ ಮಾಹಿತಿ
ಜನನ ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ ,ಚಿಂಟಮಡಕ
ರಾಜಕೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ
ವಾಸಸ್ಥಾನ ಹೈದರಾಬಾದ್
ಧರ್ಮ ಹಿಂದೂ

ಕೆ ಚಂದ್ರಶೇಖರ್ ರಾವ್ (ಕಲ್ವಕುಂಟ್ಲ ಚಂದ್ರಶೇಖರ ರಾವ್‌, ಕೆಸಿಆರ್ )(ಜನನ ೧೯೫೪ ರ ಫೆಬ್ರವರಿ ೧೭) ತೆಲಂಗಾಣ ರಾಜ್ಯದ ಮೊದಲ ಮತ್ತು ಪ್ರಸ್ತುತ ಮುಖ್ಯಮಂತ್ರಿ[೧] . ಭಾರತ್ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ,ಮೇಡಕ್ ಜಿಲ್ಲೆಯ ಗಜ್ವಾಲ್ ಕ್ಷೇತ್ರದ ಶಾಸಕರಾಗಿದ್ದಾರೆ.ಜೂನ್ ೨, ೨೦೧೪ ರಂದು ತೆಲಂಗಾಣ ,ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [೨]

ಬಾಲ್ಯ ಜೀವನ[ಬದಲಾಯಿಸಿ]

ರಾವ್ ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ , ಚಿಂಟಮಡಕ ಗ್ರಾಮದಲ್ಲಿ ೧೭ ಫೆಬ್ರವರಿ ೧೯೫೪ ರಂದು ಜನಿಸಿದರು .ಒಸ್ಮಾನಿಯಾ ಆರ್ಟ್ಸ್ ಕಾಲೇಜ್ ,ಉಸ್ಮಾನಿಯಾ ವಿಶ್ವವಿದ್ಯಾಲಯನಿಂದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.[೩]

ಕಾಂಗ್ರೆಸ್ ಪಕ್ಷ[ಬದಲಾಯಿಸಿ]

ಕೆಸಿಆರ್ ಮೇಡಕ್ ಜಿಲ್ಲೆಯ ಯುವ ಕಾಂಗ್ರೆಸ್ ಪಕ್ಷದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ನಂತರ NT.Rama ರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಸೇರಿದರು.

ತೆಲುಗು ದೇಶಂ ಪಕ್ಷ[ಬದಲಾಯಿಸಿ]

ಕೆಸಿಆರ್ ೧೯೮೩ ರಲ್ಲಿ ಟಿಡಿಪಿ ಸೇರಿದರು ಮತ್ತು ಎ ಮದನ್ ಮೋಹನ್ ವಿರುದ್ಧ ಸ್ಪರ್ಧಿಸಿ ಆ ಚುನಾವಣೆಯಲ್ಲಿ ಸೋತರು. ಅವರು ೧೯೮೫ ಮತ್ತು ೧೯೯೯ ರ ಮಧ್ಯೆ ಸಿದ್ದಿಪೇಟ್ ನಿಂದ ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.೧೯೮೭-೧೯೮೮ ರಿಂದ ಎನ್.ಟಿ.ರಾಮ ರಾವ್ ಸಂಪುಟದಲ್ಲಿ ಬರ ಮತ್ತು ಪರಿಹಾರ, ೧೯೯೬ ರಲ್ಲಿ ಅವರು ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿ ಮತ್ತು ೨೦೦೦-೨೦೦೧ ಆಂಧ್ರ ಪ್ರದೇಶ ವಿಧಾನಸಭೆಯ ಉಪಸಭಾಪತಿ ಕಾರ್ಯನಿರ್ವಹಿಸಿದರು.[೪]

ಭಾರತ್ ರಾಷ್ಟ್ರ ಸಮಿತಿ[ಬದಲಾಯಿಸಿ]

೨೭ ಏಪ್ರಿಲ್ ೨೦೦೧ ರಂದು, ರಾವ್ ಉಪ ಸ್ಪೀಕರ್, ಟಿಡಿಪಿ ಶಾಸಕ ಮತ್ತು ಟಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರು ತೆಲಂಗಾಣ ಪ್ರತ್ಯೇಕ ರಾಜ್ಯ ಸಾಧಿಸಲು ಹೈದರಾಬಾದ್ ನಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷವನ್ನು ಸ್ಥಾಪಿಸಿದರು.[೫]

ವೈಯಕ್ತಿಕ ಜೀವನ[ಬದಲಾಯಿಸಿ]

ಕೆ ಚಂದ್ರಶೇಖರ್ ರಾವ್ ,ಶೋಭಾರನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಅವರ ಮಗ, ಕೆ.ಟಿ.ರಾಮರಾವ್,ಮಗಳು ಕವಿತಾ .[೬]

ರಾಜಕೀಯ[ಬದಲಾಯಿಸಿ]

ಸೋಲು
  • ೧೯೮೩ ಸಿದ್ದಿಪೇಟ್
ಗೆಲುವು
  • ೧೯೮೫ ಶಾಸಕ, ಸಿದ್ದಿಪೇಟ್
  • ೧೯೮೯ ಶಾಸಕ, ಸಿದ್ದಿಪೇಟ್
  • ೧೯೯೪ ಶಾಸಕ, ಸಿದ್ದಿಪೇಟ್
  • ೧೯೯೯ ಶಾಸಕ, ಸಿದ್ದಿಪೇಟ್
  • ೨೦೦೧ (ಮರುಚುನಾವಣೆ) ಶಾಸಕ ಸಿದ್ದಿಪೇಟ್
  • ೨೦೦೪ ಶಾಸಕ, ಸಿದ್ದಿಪೇಟ್
  • ೨೦೦೪ ಸಂಸದ, ಕರೀಂನಗರ್‌
  • ೨೦೦೬ (ಮರುಚುನಾವಣೆ) ಸಂಸದ, ಕರೀಂನಗರ್‌
  • ೨೦೦೮ (ಮರುಚುನಾವಣೆ) ಸಂಸದ, ಕರೀಂನಗರ್‌
  • ೨೦೦೯ ಸಂಸದ, ಮೆಹಬೂಬ್ ನಗರ
  • ೨೦೧೪ ಶಾಸಕ, ಗಜ್ವಾಲ್
  • ೨೦೧೪ ಸಂಸದ, (ಮೇದಕ್‌) [೭]

ಪ್ರಶಸ್ತಿಗಳು[ಬದಲಾಯಿಸಿ]

  • ಸಿಎನ್ಎನ್-ಐಬಿಎನ್ ಭಾರತದ ವರ್ಷದ ವಕ್ತಿ - ೨೦೧೪[೮]

ಉಲ್ಲೇಖಗಳು[ಬದಲಾಯಿಸಿ]

  1. KCR Biography & Unknown Facts ,telangananewspaper.com
  2. "Kalvakuntla Chandrashekar Rao KCR Profile, www.telanganastateofficial.com". Archived from the original on 2016-03-19. Retrieved 2017-03-27.
  3. "Who is KCR? ,ndtv.com
  4. KCR to enter Congress via Telangana?,www.news18.com
  5. Dy. Speaker resigns, launches new outfit,www.thehindu.com
  6. Rao,Shri Kalva Kuntla Chandrasekhar,Fifteenth Lok Sabha Members Bioprofile
  7. "Kalvakuntla Chandrashekar Rao Biography,elections.in". Archived from the original on 2017-05-10. Retrieved 2017-03-27.
  8. "CM KCR Bagged Indian of the Year 2014,telanganastateofficial.com". Archived from the original on 2016-03-06. Retrieved 2017-03-27.