ಕೆ ಚಂದ್ರಶೇಖರ್ ರಾವ್
ಕೆ ಚಂದ್ರಶೇಖರ್ ರಾವ್ | |
---|---|
![]() | |
ತೆಲಂಗಾಣ ಮೊದಲನೇ ಮುಖ್ಯ ಮಂತ್ರಿ
| |
ಅಧಿಕಾರ ಅವಧಿ 2 June 2014 - ಪ್ರಸ್ತುತ | |
ಪೂರ್ವಾಧಿಕಾರಿ | ಮೊದಲ ಸರಕಾರ |
ಮತಕ್ಷೇತ್ರ | ಗಜ್ವಾಲ್ |
ವೈಯಕ್ತಿಕ ಮಾಹಿತಿ | |
ಜನನ | ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ ,ಚಿಂಟಮಡಕ |
ರಾಜಕೀಯ ಪಕ್ಷ | ತೆಲಂಗಾಣ ರಾಷ್ಟ್ರ ಸಮಿತಿ |
ವಾಸಸ್ಥಾನ | ಹೈದರಾಬಾದ್ |
ಧರ್ಮ | ಹಿಂದೂ |
ಕೆ ಚಂದ್ರಶೇಖರ್ ರಾವ್ (ಕಲ್ವಕುಂಟ್ಲ ಚಂದ್ರಶೇಖರ ರಾವ್, ಕೆಸಿಆರ್ )(ಜನನ 1954 ರ ಫೆಬ್ರವರಿ 17) ತೆಲಂಗಾಣ ರಾಜ್ಯದ ಮೊದಲ ಮತ್ತು ಪ್ರಸ್ತುತ ಮುಖ್ಯಮಂತ್ರಿ[೧] .ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ,ಮೇಡಕ್ ಜಿಲ್ಲೆಯ ಗಜ್ವಾಲ್ ಕ್ಷೇತ್ರದ ಶಾಸಕರಾಗಿದ್ದಾರೆ.ಜೂನ್ 2, 2014 ರಂದು ತೆಲಂಗಾಣ ,ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. [೨]
ಬಾಲ್ಯ ಜೀವನ[ಬದಲಾಯಿಸಿ]
ರಾವ್ ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ , ಚಿಂಟಮಡಕ ಗ್ರಾಮದಲ್ಲಿ 17 ಫೆಬ್ರವರಿ 1954 ರಂದು ಜನಿಸಿದರು .ಒಸ್ಮಾನಿಯಾ ಆರ್ಟ್ಸ್ ಕಾಲೇಜ್ ,ಉಸ್ಮಾನಿಯಾ ವಿಶ್ವವಿದ್ಯಾಲಯನಿಂದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.[೩]
ಕಾಂಗ್ರೆಸ್ ಪಕ್ಷ[ಬದಲಾಯಿಸಿ]
ಕೆಸಿಆರ್ ಮೇಡಕ್ ಜಿಲ್ಲೆಯ ಯುವ ಕಾಂಗ್ರೆಸ್ ಪಕ್ಷದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ನಂತರ NT.Rama ರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಸೇರಿದರು.
ತೆಲುಗು ದೇಶಂ ಪಕ್ಷ[ಬದಲಾಯಿಸಿ]
ಕೆಸಿಆರ್ 1983 ರಲ್ಲಿ ಟಿಡಿಪಿ ಸೇರಿದರು ಮತ್ತು ಎ ಮದನ್ ಮೋಹನ್ ವಿರುದ್ಧ ಸ್ಪರ್ಧಿಸಿ ಆ ಚುನಾವಣೆಯಲ್ಲಿ ಸೋತರು. ಅವರು 1985 ಮತ್ತು 1999 ರ ಮಧ್ಯೆ ಸಿದ್ದಿಪೇಟ್ ನಿಂದ ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.1987-1988 ರಿಂದ ಎನ್.ಟಿ.ರಾಮ ರಾವ್ ಸಂಪುಟದಲ್ಲಿ ಬರ ಮತ್ತು ಪರಿಹಾರ, 1996 ರಲ್ಲಿ ಅವರು ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿ ಮತ್ತು 2000-2001 ಆಂಧ್ರ ಪ್ರದೇಶ ವಿಧಾನಸಭೆಯ ಉಪಸಭಾಪತಿ ಕಾರ್ಯನಿರ್ವಹಿಸಿದರು.[೪]
ತೆಲಂಗಾಣ ರಾಷ್ಟ್ರ ಸಮಿತಿ[ಬದಲಾಯಿಸಿ]
27 ಏಪ್ರಿಲ್ 2001 ರಂದು, ರಾವ್ ಉಪ ಸ್ಪೀಕರ್, ಟಿಡಿಪಿ ಶಾಸಕ ಮತ್ತು ಟಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರು ತೆಲಂಗಾಣ ಪ್ರತ್ಯೇಕ ರಾಜ್ಯ ಸಾಧಿಸಲು ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವನ್ನು ಸ್ಥಾಪಿಸಿದರು.[೫]
ವೈಯಕ್ತಿಕ ಜೀವನ[ಬದಲಾಯಿಸಿ]
ಕೆ ಚಂದ್ರಶೇಖರ್ ರಾವ್ ,ಶೋಭಾರನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಅವರ ಮಗ, ಕೆ.ಟಿ.ರಾಮರಾವ್,ಮಗಳು ಕವಿತಾ .[೬]
ರಾಜಕೀಯ[ಬದಲಾಯಿಸಿ]
- ಸೋಲು
- 1983 ಸಿದ್ದಿಪೇಟ್
- ಗೆಲುವು
- 1985 ಶಾಸಕ, ಸಿದ್ದಿಪೇಟ್
- 1989 ಶಾಸಕ, ಸಿದ್ದಿಪೇಟ್
- 1994 ಶಾಸಕ, ಸಿದ್ದಿಪೇಟ್
- 1999 ಶಾಸಕ, ಸಿದ್ದಿಪೇಟ್
- 2001 (ಮರುಚುನಾವಣೆ) ಶಾಸಕ ಸಿದ್ದಿಪೇಟ್
- 2004 ಶಾಸಕ, ಸಿದ್ದಿಪೇಟ್
- 2004 ಸಂಸದ, ಕರೀಂನಗರ್
- 2006 (ಮರುಚುನಾವಣೆ) ಸಂಸದ, ಕರೀಂನಗರ್
- 2008 (ಮರುಚುನಾವಣೆ) ಸಂಸದ, ಕರೀಂನಗರ್
- 2009 ಸಂಸದ, ಮೆಹಬೂಬ್ ನಗರ
- 2014 ಶಾಸಕ, ಗಜ್ವಾಲ್
- 2014 ಸಂಸದ, (ಮೇದಕ್) [೭]
ಪ್ರಶಸ್ತಿಗಳು[ಬದಲಾಯಿಸಿ]
- ಸಿಎನ್ಎನ್-ಐಬಿಎನ್ ಭಾರತದ ವರ್ಷದ ವಕ್ತಿ - 2014[೮]
ಉಲ್ಲೇಖಗಳು[ಬದಲಾಯಿಸಿ]
- ↑ KCR Biography & Unknown Facts ,telangananewspaper.com
- ↑ "Kalvakuntla Chandrashekar Rao KCR Profile, www.telanganastateofficial.com". Archived from the original on 2016-03-19. Retrieved 2017-03-27.
- ↑ "Who is KCR? ,ndtv.com
- ↑ KCR to enter Congress via Telangana?,www.news18.com
- ↑ Dy. Speaker resigns, launches new outfit,www.thehindu.com
- ↑ Rao,Shri Kalva Kuntla Chandrasekhar,Fifteenth Lok Sabha Members Bioprofile
- ↑ "Kalvakuntla Chandrashekar Rao Biography,elections.in". Archived from the original on 2017-05-10. Retrieved 2017-03-27.
- ↑ "CM KCR Bagged Indian of the Year 2014,telanganastateofficial.com". Archived from the original on 2016-03-06. Retrieved 2017-03-27.