ವಿಷಯಕ್ಕೆ ಹೋಗು

ಕುಟ್ಟಿಚಾತನ್ ಥೆಯ್ಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kuttichathan Theyyam
Kuttichathan theyyam face
ಸಂಲಗ್ನತೆHinduism
ಪ್ರದೇಶNorth Kerala, India

'ಕುಟ್ಟಿಚಾತನ್ ಥೆಯ್ಯಂ' ಇದನ್ನು ಸಾಸ್ತಪ್ಪನ್ ತೆಯ್ಯಂ ಎಂದೂ ಕರೆಯುತ್ತಾರೆ [] ಇದು ಭಾರತದ ಕೇರಳ ರಾಜ್ಯದ ಉತ್ತರ ಭಾಗಗಳಲ್ಲಿ ಪ್ರದರ್ಶಿಸಲಾಗುವ ಥೆಯ್ಯಂ ಆಗಿದೆ. ಕುಟ್ಟಿಚಾತನ್ ಥೆಯ್ಯಂನಲ್ಲಿರುವ ದೇವತೆಯು ಕಣ್ಣೂರು ಜಿಲ್ಲೆಯ ಪಯ್ಯನೂರಿನ ಕಲಕಟ್ಟು ಇಲ್ಲಂನ ಬ್ರಾಹ್ಮಣ ಕುಟುಂಬದೊಂದಿಗೆ ಸಂಬಂಧ ಹೊಂದಿರುವುದರಿಂದ, ಈ ಥೆಯ್ಯಂ ಅನ್ನು ಕಲಕಟ್ಟು ಕುಟ್ಟಿಚ್ಚಾತನ್ ಎಂದೂ ಕರೆಯುತ್ತಾರೆ.[]

ಪುರಾಣ

[ಬದಲಾಯಿಸಿ]

ಶಿವ ಮತ್ತು ಪಾರ್ವತಿಯ ಮಗ.

[ಬದಲಾಯಿಸಿ]

ಶಿವ ಮತ್ತು ಪಾರ್ವತಿ, ವಲ್ಲುವನ್ ಮತ್ತು ವಲ್ಲುವತಿ ವೇಷ ಧರಿಸಿದಾಗ, ಅವರಿಗೆ ಕರುವಲ್ ಮತ್ತು ಕುಟ್ಟಿಚಾತನ್ ಎಂಬ ಇಬ್ಬರು ಮಕ್ಕಳಿದ್ದರು.[] ಅವರು ಕಪ್ಪು ದೇಹ, ಹಣೆಯ ಮೇಲೆ ಹೂವು ಮತ್ತು ಮೂರು ಕಣ್ಣುಗಳೊಂದಿಗೆ ಜನಿಸಿದ ಕುಟ್ಟಿಚಾತನನ್ನು ಕಲಕಟ್ಟು ಇಲ್ಲಂನ ಮಕ್ಕಳಿಲ್ಲದ ನಂಬೂದರಿಗೆ ನೀಡಿದರು.[] ಅವನು ಮಗುವನ್ನು ಶಾಲೆಗೆ ಗುರುವಿನ ಬಳಿ ಕಳುಹಿಸುತ್ತಾನೆ. ಗುರುಗಳ ಮಾತನ್ನು ಪಾಲಿಸಲು ಸಿದ್ಧರಿಲ್ಲದ ಕುಟ್ಟಿಚಾತನ್, ಬ್ರಾಹ್ಮಣ ಪದ್ಧತಿಗಳಿಗೆ ವಿರುದ್ಧವಾದ ಆಚರಣೆಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದನು.[] ಗುರುವಿನ ಅಸಾಧಾರಣ ಬುದ್ಧಿಮತ್ತೆಯಿಂದಾಗಿ, ಮಗುವಿನ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.[] ಗುರುಗಳು ತನಗೆ ವಿಧೇಯನಾಗದ ಕುಟ್ಟಿಚಾತನನ್ನು ಗದರಿಸಿ ಹೊಡೆದರು. ಸೇಡು ತೀರಿಸಿಕೊಳ್ಳಲು ಚಾತನ್ ಗುರುಗಳನ್ನು ಕೊಂದು ಸ್ಥಳದಿಂದ ಹೊರಟುಹೋದನು.[]

ಇದನ್ನು ತಿಳಿದ ನಂಬೂದಿರಿ ತನ್ನ ಹೆಂಡತಿ ಅತೋಲಮ್ಮನಿಗೆ ಹಸಿವಿನಿಂದ ಬಳಲುತ್ತಿರುವ ಮಗುವಿಗೆ ಆಹಾರ ನೀಡಬೇಡಿ ಎಂದು ಹೇಳಿದನು.[] ಅವನು ಹಸಿದು ಹಾಲು ಕೇಳಿದಾಗ, ಅವಳು ಅದನ್ನು ತಿರಸ್ಕರಿಸಿದಳು ಮತ್ತು ಕೋಪದಿಂದ ಹುಡುಗ ಒಂದು ಹೋರಿಯನ್ನು ಕೊಂದು ಅದರ ರಕ್ತವನ್ನು ಕುಡಿದನು.[] ಇದರಿಂದ ಕೋಪಗೊಂಡ ನಂಬೂದಿರಿ ಕುಟ್ಟಿಚಾತನನ್ನು ಸಾಯುವಷ್ಟು ಹೊಡೆಯುತ್ತಾನೆ. ಆದರೆ ಕುಟ್ಟಿಚಾತನ್ ಮರುಜನ್ಮ ಪಡೆದನು.[] ನಂಬೂದಿರಿಯವರು ಹೆಚ್ಚಿನ ಸಂಖ್ಯೆಯ ಬ್ರಾಹ್ಮಣರನ್ನು ಕರೆತಂದು ಕುಟ್ಟಿಚಾತನನ್ನು ಕೊಂದು ಅವನ ದೇಹವನ್ನು 390 ತುಂಡುಗಳಾಗಿ ಕತ್ತರಿಸಿ 21 ಹೋಮಕುಂಡಗಳಲ್ಲಿ (ಒಂದು ರೀತಿಯ ಪವಿತ್ರ ಕುಂಡ) ಸುಟ್ಟರು.[] ಆ ಕುಂಡಗಳಿಂದ ಅನೇಕ ಕುಟ್ಟಿಚಾತನರು ಜನಿಸಿದರು ಮತ್ತು ಅವರು ನಂಬೂದಿರಿಯ ಮನೆ ಮತ್ತು ಹತ್ತಿರದ ಬ್ರಾಹ್ಮಣ ಮನೆಗಳಿಗೆ ಬೆಂಕಿ ಹಚ್ಚಿದರು.[] ಅವರು ಕಿರುಕುಳಕ್ಕೊಳಗಾದ ಕುಟ್ಟಿಚಾತನನ್ನು ಥೆಯ್ಯಂ ಆಗಿ ಪೂಜಿಸಲು ನಿರ್ಧರಿಸಿದರು. ಇದು ಕುಟ್ಟಿಚತನ್ ಥೆಯ್ಯಂನ ಹಿಂದಿನ ಪುರಾಣ.[]

ನಂಬೂದಿರಿಯವರ ಮಗ

[ಬದಲಾಯಿಸಿ]

ಇನ್ನೊಂದು ಕಥೆಯ ಪ್ರಕಾರ ಕುಟ್ಟಿಚಾತನ್ ನಂಬೂದಿರಿ ಮತ್ತು ಮನೆ ಗುಡಿಸುತ್ತಿದ್ದ ಹಿಂದುಳಿದ ಪುಲಯ ಮಹಿಳೆಗೆ ಜನಿಸಿದ ಮಗು.[] ಮುಜುಗರಕ್ಕೊಳಗಾದ, ಗರ್ಭಿಣಿ ಮಹಿಳೆ ತನ್ನನ್ನು ಕಲ್ಲಿನ ಕೋಣೆಯಲ್ಲಿ ಬೀಗ ಹಾಕಿಕೊಂಡಳು ಮತ್ತು ಹೆರಿಗೆಯ ನಂತರ ಹುಡುಗನನ್ನು ರಹಸ್ಯವಾಗಿ ಕೋಣೆಯಲ್ಲಿ ಬೆಳೆಸಲಾಯಿತು.[] ಅವನು ಬೆಳೆಯುತ್ತಿದ್ದಾಗ ಮನೆಯಿಂದ ಅಕ್ಕಿ ಮತ್ತು ಭತ್ತವನ್ನು ಕದ್ದು ಕೆಳಜಾತಿಯ ಬಡವರಿಗೆ ದಾನ ಮಾಡುತ್ತಿದ್ದ ಎಂಬ ಕಥೆಗಳೂ ಇವೆ.[]

ಇನ್ನೊಂದು ಕಥೆಯ ಪ್ರಕಾರ ಕುಟ್ಟಿಚಾತನ್ ನಂಬೂದಿರಿ ಮತ್ತು ಹಿಂದುಳಿದ ಪಾಣ ಮಹಿಳೆಗೆ ಜನಿಸಿದ ಮಗು.[] ಅಕ್ರಮ ಸಂಬಂಧದ ಮಗನಾಗಿ ಜನಿಸಿದ ಕಾರಣ, ಆ ಮಗನಿಗೆ ತಂದೆಯ ಪ್ರಭುತ್ವ ದೊರೆಯಲಿಲ್ಲ.[] ನಿರ್ಲಕ್ಷ್ಯದಿಂದ ಬೆಳೆದ ಮಗು ತುಂಬಾ ತುಂಟತನದಿಂದ ಕೂಡಿತ್ತು.[] ಒಮ್ಮೆ, ಅವರು ನೀರಿಗಾಗಿ ಬಾಯಾರಿದಾಗ, ಜನರು ನೀರು ಕೊಡದೆ ಅವಮಾನಿಸಿದರು. ಕೋಪಗೊಂಡ ಕುಟ್ಟಿಚಾತನ್ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹೋರಿಯನ್ನು ಕೊಂದು ರಕ್ತವನ್ನು ಕುಡಿದು, ಆ ಸ್ಥಳದಿಂದ ಹೊರಟು ವಡಕರ ಕುಟ್ಟೋತ್ ಮೂಲಕ ಲೋಕನಾರ್ಕವು ತಲುಪಿದನು.[]

ವಯನಾಡು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಕುಟ್ಟಿಚತನ್ ಥೆಯ್ಯಂ ಪ್ರದರ್ಶಿಸಲಾಯಿತು

ವೇಷ ಭೂಷಣ

[ಬದಲಾಯಿಸಿ]

ಆಯತಾಕಾರವಾಗಿ ಉದ್ದವಾಗಿರವ ಆಕರವನ್ನು ಸೊಂಟದ ಸುತ್ತ ಧರಿಸಿರುವ ಕುಟ್ಟಿಚಾತನ್ ಥೆಯ್ಯಂನ ಶಿರಸ್ತ್ರಾಣದಲ್ಲಿ ಕೆನ್ನೆಗಳ ಎರಡೂ ಬದಿಗಳಲ್ಲಿ ಎರಡು ಮರದ ತುಂಡುಗಳನ್ನು ಕಿವಿಗಳ ಆಕರದಲ್ಲಿ ಅಳಡಿಸುತ್ತಾರೆ.[] ತೆಯ್ಯಂ ಕಲಾವಿದರು ತಮ್ಮ ಕಣ್ಣುಗಳನ್ನು ಲೋಹದ ಟೋಪಿಯಿಂದ ಮುಚ್ಚಿಕೊಳ್ಳುತ್ತಾರೆ. ಕಣ್ಣುಗಳಿಗಾಗಿ ಮಧ್ಯದಲ್ಲಿ ಸಣ್ಣ ರಂಧ್ರವಿಡುತ್ತಾರೆ.[] ಈ ವೇಷಭೂಷಣದಲ್ಲಿ ಬೆನ್ನಿನ ಮೇಲೆ ನವಿಲಿನಂತಹ ಆಕರಗಳನ್ನು ಸಹ ಹೊಂದಿದೆ.[] ಒಟ್ಟಾರೆಯಾಗಿ ಎಲ್ಲವೂ ಕೆಂಪು ಬಣ್ಣದ್ದಾಗಿದೆ .

ಕುಟ್ಟಿಚತನ್ ಮತ್ತು ಬೌದ್ಧ ಧರ್ಮದ ನಡುವಿನ ಸಂಬಂಧ

[ಬದಲಾಯಿಸಿ]

ಚಾತನ್ ಎಂಬುದು ಬುದ್ಧನ ಪಾಲಿ ಪದದ ಮಲಯಾಳಂ ಅನುವಾದವಾಗಿದೆ.[] 'ಕುಟ್ಟಿಚಾತನ್' ಪದದ ಅಕ್ಷರಶಃ 'ಮಕ್ಕಳ ಚಾತನ್' ಎಂದರ್ಥ. ಆರಂಭಿಕ ಬೌದ್ಧ ದೇವಾಲಯಗಳನ್ನು ತಮ್ಮದಾಗಿಸಿಕೊಂಡಾಗ ಅಲ್ಲಿ ಅಸ್ತಿತ್ವದಲ್ಲಿದ್ದ ಅನೇಕ ಬೌದ್ಧ ಪದ್ಧತಿಗಳನ್ನು ಹಿಂದೂಗಳು ಅನುಕರಿಸಿಕೊಂಡಿರಬಹುದು ಎಂದು ನಂಬಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Sasthappan (Kuttichathan) Theyyam". Wandering Ruminations.
  2. ೨.೦ ೨.೧ ೨.೨ ೨.೩ "ബുദ്ധമതവും കുട്ടിച്ചാത്തൻ തെയ്യവും തമ്മിലുള്ള ബന്ധം! വീഡിയോ കാണാം". Samayam (in ಮಲಯಾಳಂ). The Times of India. Archived from the original on 2022-02-01. Retrieved 2022-02-16.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ "കുട്ടിച്ചാത്തന്‍ തെയ്യം". Janmabhumi (in ಇಂಗ್ಲಿಷ್). Archived from the original on 2022-02-16. Retrieved 2022-02-16.
  4. "കുട്ടിച്ചാത്തന്‍ തെയ്യം". Janmabhumi (in ಇಂಗ್ಲಿಷ್). Archived from the original on 2022-02-16. Retrieved 2022-02-16."കുട്ടിച്ചാത്തന്‍ തെയ്യം". Janmabhumi. Archived from the original on 2022-02-16. Retrieved 2022-02-16.
  5. ೫.೦ ೫.೧ "ബുദ്ധമതവും കുട്ടിച്ചാത്തൻ തെയ്യവും തമ്മിലുള്ള ബന്ധം! വീഡിയോ കാണാം". Samayam (in ಮಲಯಾಳಂ). The Times of India. Archived from the original on 2022-02-01. Retrieved 2022-02-16."ബുദ്ധമതവും കുട്ടിച്ചാത്തൻ തെയ്യവും തമ്മിലുള്ള ബന്ധം! വീഡിയോ കാണാം". Samayam (in Malayalam). The Times of India. Archived from the original on 2022-02-01. Retrieved 2022-02-16.
  6. ೬.೦ ೬.೧ ೬.೨ ೬.೩ പ്രദീപ്, എഴുത്ത്: ആമി അശ്വതി / ചിത്രങ്ങള്‍: എന്‍ എം. "പ്രതിഷ്ഠയ്ക്ക് മാത്രമല്ല പ്രത്യേകത... കല്ലേരിയിലെ കുട്ടിച്ചാത്തന്‍ ക്ഷേത്രത്തിലെ കൗതുക കാഴ്ചകള്‍". Mathrubhumi (in ಇಂಗ್ಲಿಷ್). Archived from the original on 2021-11-28. Retrieved 2022-02-16.
  7. ೭.೦ ೭.೧ ೭.೨ Raj, Tanya (2019-10-26). "Sasthappan (Kuttichathan) Theyyam". Wandering Ruminations (in ಅಮೆರಿಕನ್ ಇಂಗ್ಲಿಷ್). Archived from the original on 2022-02-16. Retrieved 2022-02-16.Raj, Tanya (2019-10-26). "Sasthappan (Kuttichathan) Theyyam" Archived 2022-02-16 ವೇಬ್ಯಾಕ್ ಮೆಷಿನ್ ನಲ್ಲಿ.. Wandering Ruminations. Retrieved 2022-02-16.


ಬಾಹ್ಯ ಕೊಂಡಿಗಳು

[ಬದಲಾಯಿಸಿ]