ಕವಡಿಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಡಿಕೆರೆ ಉತ್ತರ ಕನ್ನಡ ಜಿಲ್ಲೆಯಲ್ಲಾಪುರದಿಂದ ಸುಮಾರು ೮ ಕಿ.ಮೀ ದೂರದಲ್ಲಿದೆ. ಇಲ್ಲಿಯ ಪ್ರಮುಖ ಆಕರ್ಷಣೆ ದೇವಿಯ ಮಂದಿರ ಮತ್ತು ಒಂದು ದೊಡ್ಡ ಕೆರೆ. ಪುರಾಣಗಳ ಪ್ರಕಾರ ಇಲ್ಲಿ ಭೀಮನು ದೇವಿಯ ಮಂದಿರ ನಿರ್ಮಿಸಿದನೆಂದು ಪ್ರತೀತಿ ಇದೆ. ಯಲ್ಲಾಪುರದಿಂದ ಅಂಕೋಲ ರಸ್ತೆಯಲ್ಲಿ ಸುಮಾರು ೩ ಕಿ.ಮೀ ದೂರ ಕ್ರಮಿಸಿ ನಂತರ ಎಡಕ್ಕೆ ತಿರುಗಿ ೪ ಕಿ.ಮೀ ದೂರ ಹೋಗಬೇಕು. ನಂತರ ಮುಖ್ಯ ರಸ್ತೆಯಿಂದ ಎಡಕ್ಕೆ ೧ ಕಿ.ಮೀ ಚಲಿಸಿದರೆ ಈ ಸ್ಥಳವನ್ನು ತಲುಪಬಹುದು.ದೇಗುಲವು ಬೆಳಗ್ಗೆ ೮:೦೦ ರಿಂದ ಸಂಜೆ ೬:೦೦ಗಂಟೆವರಿಗೂ ವಾರದ ಎಲ್ಲಾ ದಿನಗಳು ತೆರೆದಿರುತ್ತದೆ.

ಮಾಗೋಡ್ ಜಲಪಾತ, ಜೇನುಕಲ್ಲು ಗುಡ್ಡ, ಗಂಟಿ ಗಣಪತಿ ಯ ದೇಗುಲ ಇತರೇ ಹತ್ತಿರದ ಪ್ರವಾಸಿತಾಣಗಳು.