ಕಂಪಿಲಿದೇವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಂಪಿಲಿದೇವ
ಕಂಪಿಲಿ ಸಂಸ್ಥಾನದ ಎರಡನೆಯ ಹಾಗೂ ಕೊನೆಯ ದೊರೆ
ಆಳ್ವಿಕೆ ಕ್ರಿ.ಶ. ೧೩೦೦ -೧೩೨೭/೧೩೨೮
ಪೂರ್ವಾಧಿಕಾರಿ ಮೂರನೆಯ ಸಿಂಗೆಯ ನಾಯಕ (ಕ್ರಿ.ಶ. ೧೨೮೦-೧೩೦೦)
ಉತ್ತರಾಧಿಕಾರಿ ರಾಜಪ್ರಭುತ್ವ ನಶಿಸಲ್ಪಟ್ಟಿತು
ಸಂತಾನ
ಕುಮಾರರಾಮ, ಮಾರವ್ವೆ ನಾಯಕ್ತಿ
ತಂದೆ ಮೂರನೆಯ ಸಿಂಗೆಯ ನಾಯಕ (ಕ್ರಿ.ಶ.೧೨೮೦-೧೩೦೦)
ಕಂಪಿಲಿ ಸಾಮ್ರಾಜ್ಯದ ದೊರೆ ಕಂಪಿಲಿ ರಾಯನು ನಿರ್ಮಿಸಿದ ಹಂಪಿಯ ಹೇಮಕೂಟ ಬೆಟ್ಟದ ಮೇಲಿರುವ ಶಿವ ದೇವಾಲಯ.

ಕಂಪಿಲಿದೇವನು ಕಂಪಿಲಿ ಸಾಮ್ರಾಜ್ಯದ ಎರಡನೆಯ ಮತ್ತು ಕೊನೆಯ ಅಲ್ಪಾವಧಿಯ ರಾಜನಾಗಿದ್ದನು. ಅವನ ಮಗ, ರಾಜಕುಮಾರ ಕುಮಾರ ರಾಮನು ವಾರಂಗಲ್‌ನ ಕಾಕತೀಯ ರಾಜವಂಶ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನ ಮುಹಮ್ಮದ್ ಬಿನ್ ತುಘಲಕ್ ವಿರುದ್ಧ ಯುದ್ಧಗಳನ್ನು ಮಾಡಲು ತನ್ನ ತಂದೆಗೆ ನಿರಂತರ ಸಹಾಯ ಮಾಡಿದನು. ಕಂಪಿಲಿದೇವ ಮತ್ತು ಅವನ ಮಗ ಕುಮಾರ ರಾಮ ಮಹಮ್ಮದ್ ಬಿನ್ ತುಘಲಕ್‌ನ ಬೃಹತ್ ಪಡೆಗಳೊಂದಿಗೆ ಹೋರಾಡಿ ಮಡಿದರು. [೧] [೨] [೩]

ಆಳ್ವಿಕೆ[ಬದಲಾಯಿಸಿ]

ಕಂಪಿಲಿದೇವ ತನ್ನ ತಂದೆ ಮೂರನೇ ಸಿಂಗೇಯ ನಾಯಕನ (ಕ್ರಿ.ಶ. ೧೨೮೦-೧೩೦೦) ನಂತರ ಕ್ರಿ.ಶ ೧೩೦೦ ರಲ್ಲಿ ಉತ್ತರಾಧಿಕಾರಿಯಾದನು. ಅವನು ದೆಹಲಿ ಸುಲ್ತಾನರ ಜೊತೆ ಗಡಿ ವಿವಾದದಲ್ಲಿದ್ದನು. ಸಮರ್ಥ ಸೇನಾ ನಾಯಕನಾಗಿದ್ದ ಅವನ ಮಗ ರಾಜಕುಮಾರ ಕುಮಾರ ರಾಮ, ವಾರಂಗಲ್‌ನ ಕಾಕತೀಯ ರಾಜವಂಶ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನ ಮುಹಮ್ಮದ್ ಬಿನ್ ತುಘಲಕ್ ವಿರುದ್ಧ ತನ್ನ ತಂದೆಗೆ ನಿರಂತರ ಯುದ್ಧಗಳನ್ನು ನಡೆಸಲು ಸಹಾಯ ಮಾಡಿದನು. ಅವರು ಪ್ರಬಲವಾಗಿ ದೆಹಲಿ ಸುಲ್ತಾನರನ್ನು ವಿರೋಧಿಸಿದ ಯಶಸ್ವಿ ಮತ್ತು ಧೈರ್ಯಶಾಲಿ ಆಡಳಿತಗಾರಲ್ಲಿ ಪ್ರಮುಖರಾಗಿದ್ದಾರೆ.

[೩]

ಮರಣ[ಬದಲಾಯಿಸಿ]

ಕ್ರಿ.ಶ ೧೩೨೭/೧೩೨೮ ರಲ್ಲಿ, ಉತ್ತರ ಭಾರತದಿಂದ ಮುಹಮ್ಮದ್ ಬಿನ್ ತುಘಲಕ್‌ನ ಬೃಹತ್ ಸೈನ್ಯಗಳು ಕಂಪಿಲಿದೇವ ಸಾಮ್ರಾಜ್ಯದ ಮೇಲೆ ದಾಳಿ ಮಾಡಿತು, ಅಂದರೆ ಕಂಪಿಲಿ ಸಾಮ್ರಾಜ್ಯವು ಭರತಖಂಡದ ಕೊನೆಯ ಸ್ವತಂತ್ರ ಹಿಂದೂ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು. ಒಂದು ನಿರ್ದಿಷ್ಟ ಸೋಲನ್ನು ಎದುರಿಸಿದಾಗ ರಾಜಮನೆತನದ ಮಹಿಳೆಯರು ಜೌಹರ್ ಮಾಡಿದರು. [೧] [೪] ಕಂಪಿಲಿದೇವ ಮತ್ತು ಅವನ ಮಗ, ಕುಮಾರ ರಾಮ, ಯುದ್ಧಭೂಮಿಯಲ್ಲಿ ಧೈರ್ಯದಿಂದ ಹೋರಾಡುತ್ತಿರುವಾಗ ಮರಣಹೊಂದಿದರು. ಅವರ ಧೈರ್ಯ ಮತ್ತು ಶೌರ್ಯಕ್ಕಾಗಿ ಇಂದು ಸ್ಮರಣೀಯರಾಗಿದ್ದಾರೆ. ಇದಾದ ನಂತರ ಶೀಘ್ರದಲ್ಲೇ ಹರಿಹರ ಮತ್ತು ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಉಲ್ಲೇಖಗಳು[ಬದಲಾಯಿಸಿ]

[೩] [೫]

  1. ೧.೦ ೧.೧ Mary Storm (2015). Head and Heart: Valour and Self-Sacrifice in the Art of India. Taylor & Francis. p. 311. ISBN 978-1-317-32556-7. ಉಲ್ಲೇಖ ದೋಷ: Invalid <ref> tag; name "Storm2015p311" defined multiple times with different content
  2. Kanhaiya L Srivastava (1980). The position of Hindus under the Delhi Sultanate, 1206-1526. Munshiram Manoharlal. p. 202.
  3. ೩.೦ ೩.೧ ೩.೨ Burton Stein (1989). The New Cambridge History of India: Vijayanagara. Cambridge University Press. pp. 18–19. ISBN 978-0-521-26693-2. ಉಲ್ಲೇಖ ದೋಷ: Invalid <ref> tag; name "Stein1989p18" defined multiple times with different content
  4. Kanhaiya L Srivastava (1980). The position of Hindus under the Delhi Sultanate, 1206-1526. Munshiram Manoharlal. p. 202.
  5. David Gilmartin; Bruce B. Lawrence (2000). Beyond Turk and Hindu: Rethinking Religious Identities in Islamicate South Asia. University Press of Florida. pp. 300–306, 321–322. ISBN 978-0-8130-3099-9.