ಉತ್ತರ ಕರ್ನಾಟಕದ ದೇವಾಲಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಕರ್ನಾಟಕದ ಇತಿಹಾಸವನ್ನು ನೋಡಿದರೆ ಅಲ್ಲಿ ಹಲವಾರು ದೇವಾಲಯಗಳ ಕುರುಹುಗಳಿವೆ. ಅವುಗಳಲ್ಲಿ ಇನ್ನೂ ಉಳಿದಿರುವ ಸ್ಮಾರಕಗಳು ಕ್ರಿಸ್ತಶಕ ೭ನೇ ಶತಮಾನದಷ್ಟು ಹಿಂದಿನವುಗಳೆಂದು ಗುರುತಿಸಲಾಗಿದೆ. ಅಲ್ಲಿಯ ಕಲ್ಲಿನ ಗುಹೆಗಳು ಮತ್ತು ಪ್ರಾಚೀನ ದೇವಾಲಯಗಳ ಸಂಕೀರ್ಣ ಶಿಲ್ಪಗಳನ್ನು ಬಾದಾಮಿಯ ಚಾಲುಕ್ಯರು ನಿರ್ಮಿಸಿದರು. ಪಟ್ಟದಕಲ್ಲಿನಲ್ಲಿದೇವಾಲಯಗಳು ದ್ರಾವಿಡ ಶೈಲಿಯಲ್ಲಿ ಹಾಗೂ ಪೂರ್ವ ಮತ್ತು ಮಧ್ಯ ಭಾರತದಲ್ಲಿ ನಂತರ ಅಳವಡಿಸಿಕೊಂಡ ಶಿಲ್ಪಶೈಲಿಗಳಲ್ಲಿ ಕಂಡುಬರುತ್ತವೆ. ಈ ದೇವಾಲಯಗಳಲ್ಲಿನ ಶಿಲ್ಪಕಲಾ ಗುಣಮಟ್ಟವು ಉತ್ತಮವಾಗಿದೆ. ಬಾದಾಮಿ ಚಾಲುಕ್ಯರ ನಂತರ ರಾಷ್ಟ್ರಕೂಟರು ಮತ್ತು ಕಲ್ಯಾಣಿಯ ಚಾಲುಕ್ಯರು ಅಧಿಕಾರಕ್ಕೆ ಬಂದರು. ವಿಜಯನಗರ ಸಾಮ್ರಾಜ್ಯವು ಕರ್ನಾಟಕದಲ್ಲಿ ದೇವಾಲಯಗಳ ನಿರ್ಮಾಣ ಚಟುವಟಿಕೆಯ ಅವಧಿಯನ್ನು ಸಾರುತ್ತದೆ. ಈ ಸಮಯದಲ್ಲಿ ರೂಪಿತವಾದ ದೇವಾಲಯಗಳು, ಸ್ತಂಭಮಂಟಪಗಳು ಮತ್ತು ಎತ್ತರದ ಪ್ರವೇಶ ಗೋಪುರಗಳನ್ನು ಹೊಂದಿವೆ. ವಿಜಯನಗರ ಸಾಮ್ರಾಜ್ಯವು ೧೬ನೇ ಶತಮಾನದಲ್ಲಿ ದಖ್ಖನ್‍ನ ಸುಲ್ತಾನರುಗಳಿಂದ ನಾಶವಾಯಿತು ಮತ್ತು ಅದರ ಅವಶೇಷಗಳನ್ನು ಈಗಲೂ ಹಂಪಿಯಲ್ಲಿ ಕಾಣಬಹುದು.[೧]

ವಿರೂಪಾಕ್ಷ ದೇವಾಲಯ, ಹಂಪಿ
ವಿರೂಪಾಕ್ಷ ದೇವಾಲಯ, ಹಂಪಿ

ಕರಾವಳಿ ಪ್ರದೇಶದ ದೇವಾಲಯಗಳು ವಾಸ್ತುಶಿಲ್ಪ ಶೈಲಿಯಲ್ಲಿ ಗಮನಾರ್ಹವಾಗಿ ಭಿನ್ನವಾಗಿವೆ.

ಹಾವೇರಿ ಪ್ರದೇಶ[ಬದಲಾಯಿಸಿ]

  • ಹಾವೇರಿಯ ಬಸವಣ್ಣ ದೇವಸ್ಥಾನ
  • ಹಾವೇರಿಯ ಸಿದ್ಧದೇವರ ದೇವಸ್ಥಾನ
ಸಿದ್ಧೇಶ್ವರ ದೇವಸ್ಥಾನ, ಹಾವೇರಿ
ಹಾವೇರಿಯ ಸಿದ್ಧೇಶ್ವರ ದೇವಸ್ಥಾನದಲ್ಲಿರುವ ದೇಗುಲ ಮತ್ತು ಮಂಟಪದ ವಿವರ
  • ಕಾಗಿನೆಲೆಯ ಆದಿಕೇಶವ ದೇವಾಲಯ
  • ಕಾಗಿನೆಲೆಯ ಕಾಳಹಸ್ತೇಶ್ವರ ದೇವಸ್ಥಾನ
  • ಕಾಗಿನೆಲೆಯ ಲಕ್ಷ್ಮಿ ದೇವಸ್ಥಾನ
  • ಕಾಗಿನೆಲೆಯ ಸೋಮೇಶ್ವರ ದೇವಸ್ಥಾನ
  • ಕಾಗಿನೆಲೆಯಲ್ಲಿರುವ ವೀರಭದ್ರ ದೇವಸ್ಥಾನ
  • ಕಾಗಿನೆಲೆಯ ನರಸಿಂಹ ದೇವಸ್ಥಾನ
  • ಕಾಗಿನೆಲೆಯ ಸಂಗಮೇಶ್ವರ ದೇವಸ್ಥಾನ
  • ರಾಣೆಬೆನ್ನೂರು ಬಳಿಯ ಗುಡ್ಡ ಗುಡ್ಡಾಪುರದ ಮಲ್ಲಾರಿ ದೇವಸ್ಥಾನ
  • ಬಸವೇಶ್ವರ ದೇವಸ್ಥಾನ, ಕುರುವತ್ತಿ
  • ಗಳಗೇಶ್ವರ ದೇವಸ್ಥಾನ, ಗಳಗನಾಥ
  • ಚೌಡಯ್ಯದಾನಪುರದ ಚಾಲುಕ್ಯ ದೇವಾಲಯ

ಗದಗ ಪ್ರದೇಶ[ಬದಲಾಯಿಸಿ]

  • ಗದಗದಲ್ಲಿರುವ ತ್ರಿಕೂಟೇಶ್ವರ ದೇವಸ್ಥಾನ
  • ಗದಗದ ವೀರ ನಾರಾಯಣ ದೇವಸ್ಥಾನ
  • ಗದಗ ಸೋಮೇಶ್ವರ ದೇವಸ್ಥಾನ
  • ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ
  • ಲಕ್ಕುಂಡಿಯ ಭ್ರಮ ಜಿನಾಲಯ
  • ಲಕ್ಕುಂಡಿಯ ಸೂರ್ಯನಾರಾಯಣ ದೇವಸ್ಥಾನ
  • ಲಕ್ಷ್ಮೇಶ್ವರದಲ್ಲಿರುವ ಸೋಮೇಶ್ವರ ದೇವಸ್ಥಾನ
  • ಡಂಬಳದ ದೊಡ್ಡ ಬಸಪ್ಪ ದೇವಸ್ಥಾನ
  • ಅಣ್ಣಿಗೇರಿಯಲ್ಲಿರುವ ಅಮೃತೇಶ್ವರ ದೇವಸ್ಥಾನ
  • ಅಣ್ಣಿಗೇರಿಯ ಗಜಿನ ಬಸಪ್ಪ ದೇವಸ್ಥಾನ
  • ಅಣ್ಣಿಗೇರಿಯ ಹನುಮಾನ್ ದೇವಸ್ಥಾನ
  • ಅಣ್ಣಿಗೇರಿಯ ಬಸಪ್ಪ ದೇವಸ್ಥಾನ

ಬಾದಾಮಿ ಪ್ರದೇಶ[ಬದಲಾಯಿಸಿ]

ಬಾದಾಮಿಯಲ್ಲಿರುವ ದೇವಾಲಯಗಳು[ಬದಲಾಯಿಸಿ]

ಬಾದಾಮಿ ಬಾಗಲಕೋಟೆ ಜಿಲ್ಲೆಯಲ್ಲಿದೆ. ಹಿಂದೆ ವಾತಾಪಿ ಎಂದು ಕರೆಯಲ್ಪಡುತ್ತಿದ್ದ ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು. ಈ ತಾಣವು ಹಲವಾರು ದೇವಾಲಯಗಳನ್ನು ಹೊಂದಿದೆ.[೨] ಭೂತನಾಥ ಬೆಟ್ಟವು ೪ ದೇವಾಲಯಗಳನ್ನು ಹೊಂದಿದ್ದು, ಹಲವಾರು ಶಿಲ್ಪಗಳನ್ನು ಹೊಂದಿದೆ. ಇಲ್ಲಿನ ಗುಹಾಂತರ ದೇವಾಲಯಗಳು ೬ನೇ ಶತಮಾನದಷ್ಟು ಹಿಂದಿನವು. ದತ್ತಾತ್ರೇಯ ದೇವಸ್ಥಾನವು ೧೨ ನೇ ಶತಮಾನದಷ್ಟು ಹಿಂದಿನದು. ನಕ್ಷತ್ರಾಕಾರದ ಯೋಜನೆಯನ್ನು ಹೊಂದಿರುವ ಮಲ್ಲಿಕಾರ್ಜುನ ದೇವಾಲಯವು ೧೧ನೇ ಶತಮಾನದಷ್ಟು ಹಿಂದಿನದು.

ಬಾದಾಮಿಯ ಗುಹೆ ದೇವಾಲಯಗಳು[ಬದಲಾಯಿಸಿ]

ಬೆಟ್ಟದ ಬಂಡೆಯ ಮೇಲೆ ಮರಳುಗಲ್ಲಿನಿಂದ ಕೆತ್ತಿದ ಗುಹೆಯ ರೀತಿಯಲ್ಲಿರುವ ದೇವಾಲಯಗಳಿಗೆ ಬಾದಾಮಿ ಪ್ರಸಿದ್ಧವಾಗಿದೆ. ಈ ಪ್ರದೇಶವು ಪ್ರಾಚೀನ ನೀಲಿ ಸರೋವರ, ಪ್ರಸಿದ್ಧ ಪುರಾತನ ದೇವಾಲಯಗಳು, ವಸ್ತುಸಂಗ್ರಹಾಲಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಮತ್ತು ಜೈನ ಗುಹೆಗಳಿಂದ ಅಲಂಕರಿಸಲ್ಪಟ್ಟಿದೆ, ಮತ್ತು ಅವುಗಳನ್ನು ಮರಳುಗಲ್ಲಿನಿಂದ ಕೆತ್ತಲಾಗಿದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಮೂರನೇ ಗುಹೆ ದೇವಾಲಯವು ದೊಡ್ಡ ಮತ್ತು ಅಲಂಕಾರಿಕವಾಗಿದೆ. ಅಗಸ್ತ್ಯ ತೀರ್ಥ ಜಲಾಶಯವು ವಿಷ್ಣು ಮತ್ತು ಶಿವನಿಗೆ ಸಮರ್ಪಿತವಾದ ದೇವಾಲಯಗಳಿಂದ ತುಂಬಿದೆ. ಭೂತನಾಥ ದೇವಾಲಯವು ಗುಹೆ ದೇವಾಲಯಗಳ ಕೆಳಗಿರುವ ಸರೋವರಕ್ಕೆ ತಮ್ಮ ಹೆಸರನ್ನು ನೀಡುತ್ತದೆ.[೩]

ಐಹೊಳೆಯ ದೇವಾಲಯಗಳು[ಬದಲಾಯಿಸಿ]

ಐಹೊಳೆ ಬಾಗಲಕೋಟೆ ಜಿಲ್ಲೆಯ ದಕ್ಷಿಣ ಭಾಗದಲ್ಲಿದೆ. ಐಹೊಳೆಯಲ್ಲಿ ೧೦೦ಕ್ಕೂ ಹೆಚ್ಚು ದೇವಾಲಯಗಳಿವೆ.[೪] ದಖ್ಖನ್‍ನಲ್ಲಿರುವ ಹಿಂದೂ ರಚನಾತ್ಮಕ ದೇವಾಲಯಗಳು ಇಲ್ಲಿ ಹುಟ್ಟಿಕೊಂಡಿವೆ. ದುರ್ಗಾ ದೇವಾಲಯವು ಅದರ ಯೋಜನೆ, ಕೆತ್ತನೆಗಳು ಮತ್ತು ಅದರ ಗಳ ಮುಖಮಂಟಪಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಹೆಚ್ಚಿನ ದೇವಾಲಯಗಳು ೬ ಮತ್ತು ೭ನೇ ಶತಮಾನದಷ್ಟು ಹಿಂದಿನವು. ಇಲ್ಲಿರುವ ಎರಡನೇ ಹಂತದ ದೇವಾಲಯಗಳು ೧೨ ಮತ್ತು ೧೩ನೇ ಶತಮಾನದಷ್ಟು ಹಿಂದಿನವುಗಳಾಗಿವೆ.

ದುರ್ಗಾ ದೇವಸ್ಥಾನ, ಐಹೊಳೆ
ದುರ್ಗಾ ದೇವಸ್ಥಾನ, ಐಹೊಳೆ

ಬಾದಾಮಿ ಬಳಿಯಿರುವ ಬನಶಂಕರಿ ದೇವಸ್ಥಾನ[ಬದಲಾಯಿಸಿ]

ಬನಶಂಕರಿ ದೇವಿ ದೇವಸ್ಥಾನ (ಅಥವಾ ಬನಶಂಕರಿ ದೇವಸ್ಥಾನ) ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿಯ ಚೋಳಚಗುಡ್ಡದಲ್ಲಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ತಿಲಕಾರಣ್ಯ ಅರಣ್ಯದಲ್ಲಿ ನೆಲೆಸಿರುವುದರಿಂದ ಶಾಕಂಭರಿ, ಬನಶಂಕರಿ ಅಥವಾ ವನಶಂಕರಿ ಎಂದು ಕರೆಯುತ್ತಾರೆ. ದೇವಾಲಯದ ದೇವತೆಯನ್ನು ಪಾರ್ವತಿ ದೇವಿಯ ಅವತಾರವಾದ ಶಾಕಂಭರಿ ಎಂದು ಕರೆಯುತ್ತಾರೆ.

ಬನಶಂಕರಿ ದೇವಸ್ಥಾನ,ಬಾದಾಮಿ
ಬನಶಂಕರಿ ದೇವಸ್ಥಾನ,ಬಾದಾಮಿ

ಕೊಪ್ಪಳ ಪ್ರದೇಶ[ಬದಲಾಯಿಸಿ]

ಕನಕಗಿರಿಯಲ್ಲಿರುವ ಕನಕಾಚಲಪತಿ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಗಂಗಾವತಿ ಬಳಿ ಇದೆ. ಕನಕಗಿರಿ ನಾಯ್ಕರು ನಿರ್ಮಿಸಿದ ದೇವಾಲಯ ಇದಾಗಿದೆ. ಈ ದೇವಾಲಯವು ಹಲವಾರು ಕಲ್ಲಿನ ಮತ್ತು ಮರದ ಪ್ರತಿಮೆಗಳು ಮತ್ತು ಪ್ಲಾಸ್ಟರ್ ಮಾದರಿಗಳನ್ನು ಹೊಂದಿದೆ. ಇದು ಕೆತ್ತನೆಯ ಗೋಡೆಗಳಿಂದ ಆವೃತವಾದ ತೊಟ್ಟಿಯನ್ನು ಹೊಂದಿದೆ.

ಕೊಪ್ಪಳ ಜಿಲ್ಲೆಯ ಮಹಾದೇವ ದೇವಸ್ಥಾನ
ಕೊಪ್ಪಳ ಜಿಲ್ಲೆಯ ಮಹಾದೇವ ದೇವಸ್ಥಾನ
  • ಆನೆಗೊಂದಿಯಲ್ಲಿರುವ ರಂಗನಾಥ ದೇವಾಲಯ
  • ಹಂಪಿಯ ವಿರೂಪಾಕ್ಷ ದೇವಾಲಯ
  • ಹಂಪಿಯ ವಿಠಲ ದೇವಾಲಯ
  • ಕುಕನೂರಿನ ನವಲಿಂಗ ದೇವಾಲಯಗಳು
  • ಹಂಪಿಯ ಪಟ್ಟಾಭಿರಾಮ ದೇವಾಲಯ

ಪಟ್ಟಾಭಿರಾಮ ದೇವಾಲಯವು ಹಂಪಿ ನಗರದಲ್ಲಿದೆ. ರಾಮನು ಇಲ್ಲಿ ಪೂರ್ಣ ಸಮರ್ಪಣಾಭಾವದಿಂದ ಪೂಜಿಸಲ್ಪಡುವ ಪವಿತ್ರ ದೇವರು. ಈ ದೇವಾಲಯವು ವಿಜಯನಗರದ ಅವಧಿಗೆ ಹಿಂದಿನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ಕೆತ್ತಿದ ಕಂಬಗಳು, ಒಳಾಂಗಣ ಮತ್ತು ಶಿಖರವು ಇಲ್ಲಿನ ಮುಖ್ಯಾಂಶಗಳಾಗಿವೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವನ್ನು ಚಾಲುಕ್ಯರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಪ್ರದೇಶ[ಬದಲಾಯಿಸಿ]

  • ಬಂಕಾಪುರದ ರಂಗನಾಥ ನಗರೇಶ್ವರ ದೇವಸ್ಥಾನ
ಚಂದ್ರಮೌಳೇಶ್ವರ ದೇವಸ್ಥಾನ, ಹುಬ್ಬಳ್ಳಿ-ಧಾರವಾಡ
  • ಬಂಕಾಪುರದ ಸಿದ್ಧೇಶ್ವರ ದೇವಸ್ಥಾನ
  • ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ

ಉತ್ತರ ಕನ್ನಡ ಪ್ರದೇಶ[ಬದಲಾಯಿಸಿ]

ಅತಿದೊಡ್ಡ ದೇವಿಯ ವಿಗ್ರಹವನ್ನು ಹೊಂದಿರುವ ದೇವಾಲಯಗಳಲ್ಲಿ ಇದು ಒಂದಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ.

ರಾಯಚೂರು ಪ್ರದೇಶ[ಬದಲಾಯಿಸಿ]

  • ಕೂರ್ಮಗದ್ದೆ ನಾರದಗದ್ದೆ ದತ್ತಾತ್ರೇಯ ದೇವಸ್ಥಾನ
  • ಕಲ್ಲೂರಿನ ಮಾರ್ಕಂಡೇಶ್ವರ ದೇವಸ್ಥಾನ

ಕಲ್ಲೂರಿನ ಮಾರ್ಕಂಡೇಶ್ವರ ದೇವಸ್ಥಾನವು ಮಾರ್ಕಂಡೇಶ್ವರ (ಶಿವ) ದೇವರಿಗೆ ಸಮರ್ಪಿತವಾಗಿದೆ. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ತನ್ನ ಕುಟುಂಬದೊಂದಿಗೆ ಈ ದೇವಾಲಯಗಳಲ್ಲಿ ಪೂಜಿಸುತ್ತಿದ್ದ ಎಂಬ ಪ್ರತೀತಿಯಿದೆ. ಮಾರ್ಕಂಡೇಶ್ವರವು ಪುರಾತನವಾದ ದೇವಾಲಯವಾಗಿದೆ.

  • ನಾರದ ದೇವಸ್ಥಾನ ನಾರದಗದ್ದೆ

ನಾರದ ದೇವಾಲಯವು ಋಷಿ ನಾರದನಿಗೆ ಸಮರ್ಪಿತವಾಗಿದೆ. ಕೃಷ್ಣಾ ನದಿಯ ದ್ವೀಪಗಳಲ್ಲಿ ಒಂದಾದ ನಾರದಗದ್ದೆಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕದ ದೇವಾಲಯಗಳು
  2. ಬಾದಾಮಿಯ ದೇವಾಲಯಗಳು
  3. ಕರ್ನಾಟಕದ ದೇವಾಲಯಗಳು
  4. ಐಹೊಳೆಯ ದೇವಾಲಯಗಳು
  5. ಕನಕಚಲಪತಿ ದೇವಸ್ಥಾನ ಕನಕಗಿರಿ
  6. ಮಹಾದೇವ ದೇವಸ್ಥಾನ ಇಟಗಿ
  7. "Murudeshwar Temple". Archived from the original on 2022-01-25. Retrieved 2022-06-19.