ಅರುವತ್ತಮೂರು ಪುರಾತನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದಲ್ಲಿಅರುವತ್ತಮೂರು ಪುರಾತನರು : ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿ ರುವ ಶರಣರು, ಕನ್ನ ಡ ವಚನಕಾರರು ಇವರನ್ನು ಪುರಾತನರು, ಪ್ರಮಥರು ಎಂದೂ ತಮಿಳರು ನಾಯನಾರ್ ಎಂದೂ ಕರೆಯುವರು. ತಮಿಳುನಾಡಿನ ಶಿವದೇವಾಲಯಗಳಲ್ಲೂ ಕರ್ನಾಟಕದಲ್ಲಿ ನಂಜನಗೂಡು, ಚಾಮರಾಜನಗರದ ದೇವಾಲಯಗಳಲ್ಲೂ ಈ ಭಕ್ತರ ವಿಗ್ರಹಗಳಿವೆ. ಇವರಲ್ಲಿ ಮೂವರು ತೇವಾರ ಎಂಬ ತಮಿಳು ವೇದ ಬರೆದು ಪ್ರಸಿದ್ಧರಾಗಿದ್ದಾರೆ. ತಮಿಳು, ಕನ್ನ ಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಇವರನ್ನು ಕುರಿತು ಹಲವಾರು ಮಂದಿ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಹಂಪೆಯ ಹರೀಶ್ವರ, ಸುರಂಗಕವಿ, ವೀರಭದ್ರಕವಿ, ಚತುರ್ಮುಖ ಬೊಮ್ಮರಸ, ನಿಜಗುಣಶಿವಯೋಗಿ, ಬಸವಪ್ಪಶಾಸ್ತ್ರೀ−ಇವರು ಈ ಪುರಾತನರನ್ನುಕುರಿತು ಕಾವ್ಯಗಳನ್ನು ಬರೆದಿದ್ದಾರೆ. ಬಸವಪುರಾಣಾದಿ ಗ್ರಂಥಗಳಲ್ಲೂ ಇವರ ಉಲ್ಲೇಖವಿದೆ. ಇವರಲ್ಲಿ 15 ಮಂದಿ ಬ್ರಾಹ್ಮಣರು, 12 ಮಂದಿ ಕ್ಷತ್ರಿಯರು, 5 ಮಂದಿ ವೈಶ್ಯರು, ಒಬ್ಬ ಪಂಚಮ, 24 ಮಂದಿ ಶೂದ್ರರು ಇಬ್ಬರು ಸ್ತ್ರೀಯರಾದಿಯಾಗಿ ಎಲ್ಲ ಕುಲ ಜಾತಿ ಪಂಥದವರೂ ಇದ್ದಾರಂದೂ ಇವರ ಕಾಲ ಪಸಕ್ತಶಕದ ಆರಂಭದಿಂದ 10ನೆಯ ಶತಮಾನದವರೆಗೆ ಹೋಗುತ್ತದೆಂದೂ ವಿದ್ವಾಂಸರ ಅಭಿಪ್ರಾಯ. ಇವನ್ನು ಕುರಿತು ತಮಿಳಿನಲ್ಲಿ "ಪೆರಿಯಪುರಾಣ"ವನ್ನು ಬರೆದ ಕವಿಯ ಹೆಸರು "ಶೆಕ್ಕಿರಾರ್", ಈ ಗ್ರಂಥವನ್ನು ಚಿದಂಬರಂ ಕ್ಷೇತ್ರದಲ್ಲಿ ಬರೆದಂತೆ ಪ್ರತೀತಿಯಿದೆ.


63 ಹೆಸರುಗಳು ಈ ರೀತಿ ಇವೆ:

ಅ.ಕ್ರ ಪೆರಿಯಪುರಾಣದ ಪ್ರಕಾರ ಪೆರಿಯಪುರಾಣದ ಪ್ರಕಾರ
ತಿರುನೀಲಕಂಟ ತಿರುನೀಲಕಂಠ
ಇಯರ್‍ಪಗೈ ಯರ್ ಇಹಪ್ಪಗೆಯಾಂಡ
ಇಳೆಯಾನ್ ಕುಡಿಮಾರ ಇಳೆಯಾಂಡಗುಡಿಮಾರ
ಮೆಯ್‍ಪ್ಪೊರುಳರ್ ಸೇದಿರಾಜ
ವಿರನ್‍ಮಿಂಡರ್ ಮೆರೆಮಿಂಡ
ಅಮರನೀತಿ ಅಮರನೀತಿ
ಎರಿಪತ್ತರ್ ಇರಿಭಕ್ತ
ಏಣಾದಿನಾಥರ್ ಏಣಾಧಿನಾಥ
ಕಣ್ಣಪ್ಪರ್ ಕಣ್ಣಪ್ಪ
೧೦ ಕುಂಗುಲಿಯಕ್ಕಲಿಯರ್ ಕೊಂಗುಲಿಯ ಕಲಿಯರು
೧೧ ಮಾನಕ್ಕಂಜಾರರ್ ಮಾನಕಂಜರ
೧೨ ಅರಿವಾಳ್ತಾಯರ್ ಅರಿವಾಳ್ತಾಂಡ (ಅರಿವಾಟ್ಟಾಯರ್)
೧೩ ಆನಾಯರ್ ಅನಾಯನಾರ
೧೪ ಮೂರ್ತಿನಾಯನಾರ್ ಒಲಘಾಂಡಮೂರ್ತಿ
೧೫ ಮುರುಗರ್ ನಮಶ್ಶಿವಾಯ ಮುರುಘರು
೧೬ ರುದ್ರಪಶುಪತಿ ರುದ್ರಪಶುಪತಿ
೧೭ ತಿರುನಾಳೈಪ್ಪೋವರ್ ತಿರುನಾಳ್ಪೋವರು
೧೮ ತಿರುಕುರುಪ್ಪು ತೊಂಡರ್ ತಿರುಕುರುಂಪೆತೊಂಡ
೧೯ ಚಂಡೇಶ್ವರರ್ ಚಂಡೇಶ
೨೦ ತಿರುನಾವುಕ್ಕರಸರ್ (ಅಪ್ಪಾರ್) ವಾಗೀಶ
೨೧ ಕುಲಚ್ಚಿರೈಯಾರ್ ಕುಲಚೆರೆಯ
೨೨ ಪೆರುಮಿಳಲೈಕ್ಕುರುಂಬರ್ ಪೆರುಮಳಿಲೆಯ ಕುರುಂಬರು
೨೩ ಕಾರೈಕ್ಕಾಲ್ ಅಮ್ಮೆಯರ್ ಕಾರಿಕಾಲಮ್ಮೆ
೨೪ ಅಪ್ಪೊದಿಯಡಿಗಳ್ ಅಃಪೂತಿ ಅಡಿಗಳು
೨೫ ತಿರುನೀಲನಕ್ಕರ್ ತಿರುನೀಲನಕ್ಕರು
೨೬ ನಮಿನಂದಿಯಡಿಗಳ್ ನಮಿನಂದಿಯಡಿಗಳು
೨೭ ತಿರುಜ್ಞಾನಸಂಬಂಧರ್ ತಿರುಜ್ಞಾನಸಂಬಂಧರು
೨೮ ಏಯರ್‍ಕೋನ್-ಕಲಿಕ್ಕಾಮರ್ ಕಲಿಕಾಮ
೨೯ ತಿರುಮೂಲರ್ ತಿರುಮೂಲರು
೩೦ ತಂಡಿಯಡಿಗಳ್ ದಂಡೀಶ
೩೧ ಮೂಕ್ರ್ಕನಾಯನಾರ್ ಅಚ್ಯುತ
೩೨ ಸೋಮಾಸಿಮರರ್ ಸೋಮಾಸಿಮಾರ
೩೩ ಸಾಕ್ಕಿಯನಾಯನಾರ್ ಸಾಂಖ್ಯತೊಂಡ
೩೪ ಶಿರುಪ್ಪುಲಿನಾಯನಾರ್ ಚಿರುಪ್ಪುಲಿಯಾಂಡ
೩೫ ಶಿರುತ್ತೊಂಡರ್ ಚಿರುತೊಂಡ
೩೬ ಸೇರ್‍ಮಾನ್ ಪೆರುಮಾಳ್ ಚೇರಮ
೩೭ ಕಣನಾದರ್ ಗಣನಾಥ
೩೮ ಕುರುವನಾಯನಾರ್ ವೇಳೂತ
೩೯ ಪುಗಳ್‍ಚೋಳರ್ ಪಗಲ್ಚೋಳ
೪೦ ನರಸಿಂಗಮುನೈಯಾರೈಯಾರ್ ನರಸಿಂಗ ಮೊನೆಯರು
೪೧ ಆದಿಬತನಾಯನರ್ ಅತಿಭಕ್ತ
೪೨ ಕಲಿಕ್ಕಂಬರ್ ಕಲಿಕಂಬ
೪೩ ಕಲಿಯನಾಯನಾರ್ ಕಲಿಯನಾಯನಾರ
೪೪ ಸತ್ತಿನಾಯನಾರ್ ಕಲಿಚೆತ್ತಿಯಾಂಡರು
೪೫ ಐಯಡಿಗಳ್ ಕಾಡವರ್‍ಕೋನ್ ಅಯ್ಯಡಿ
೪೬ ಕಣಂಬುಲ್ಲನಾಯನಾರ್ ಕಣಂಬುಲ್ಲನಂಬಿ
೪೭ ಕಾರಿನಾಯನಾರ್ ಕಡವೂರಕಾರಿ
೪೮ ನೆಡುಮಾರನಾಯನಾರ್ ಸೌಂದರಪಾಂಡ್ಯರಾಜ (ಕೂನಪಾಂಡ್ಯ)
೪೯ ವಾಯಿಲಾರ್ ನಾಯನಾರ್ ವಾಹಿಲ್ಯ
೫೦ ಮುನೈಯಡುವರ್ ಮೊನೆಯಿಡುವರು
೫೧ ಕಳರ್ಚಿಂಗರ್ ಕಳಚೆಂಗರು
೫೨ ಇಡಂಗಳಿಯಾರ್ ಎಡಗಳೆಯರು
೫೩ ಸೆರುತುಣೈಯಾರ್ ಚಿರುತ್ತೊಣೆಯಾಂಡ
೫೪ ಪುಗಳ್ ತುಣೈನಾಯನಾರ್ ಪಗಲ್ತೊಣೆಯಾಂಡರು (ಎಡಗೆಳೆಯ)
೫೫ ಕೋಟ್ಟುಲಿನಾಯನಾರ್ ಕೊಲ್ಬುಲಿಯಾಂಡ
೫೬ ಪೂಸಲಾರ್ ಪೂಸಲೆಯಾಂಡ
೫೭ ಮುಂಗೈಯಕ್ರ್ಕರಸಿಯಾರ್ ಪಾಂಡ್ಯ ಮಹಾದೇವಿ
೫೮ ನೇಶನಯನಾರ್ ನೇಶರ್
೫೯ ಕೋಚ್ಚಂಗಣ್‍ಚೋಳರ್ ಕಲಚೆಂಗ ಪೆರುಮಾಳ್
೬೦ ತಿರುನೀಲಕಂಟಯಾಳ್ಪಾಣರ್ ತಿರುನೀಲಕಂಠಪಾಣರು
೬೧ ಶಡೈಯನಾಯನಾರ್ ಜಡೆಯನಾಯನಾರ್
೬೨ ಇಸೈಜ್ಞಾನಿಯಾರ್ ಯಸ್ಯಜ್ಞಾನಿದೇವಿಯರು
೬೩ ಸುಂದರಮೂರ್ತಿ

ನಂಬಿಯಣ್ಣ

ಇವರನ್ನು ಕುರಿತ ಮಂಟಪಪೂಜೆ ವೀರಶೈವರಲ್ಲಿ ಬಳಕೆಯಲ್ಲಿದೆ. ಧಾರವಾಡದ ಮುರುಘಾಮಠದಲ್ಲಿ 63 ಹೆಸರಿನ ಕೋಣೆಗಳಿವೆ. ಬೆಳಗಾಂವಿ ಜಿಲ್ಲೆಯ ಅಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು 63 ಮಂಟಪಗಳ ಸ್ಥಾಪನೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗರಹಳ್ಳಿ ಶ್ರೀ ಶರಣಬಸವೇಶ್ವರರ ದಾಸೊಹ ಮಠದಲ್ಲಿ ಕೂಡ ೬೩ ಮಂದಿ ಪುರಾತನರ ಮಂಟಪಗಳು ಇವೆ.