ಅನುರಾಧಾಪುರ ಸಾಮ್ರಾಜ್ಯ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಅನುರಾಧಾಪುರ ಸಾಮ್ರಾಜ್ಯ ಪ್ರಾಚೀನ ಶ್ರೀಲಂಕಾದ ಎರಡನೇ ಸ್ಥಾಪಿತ ಸಾಮ್ರಾಜ್ಯವಾಗಿತ್ತು. ಮಹಾವಂಶ ಕಾವ್ಯದ ಪ್ರಕಾರ, ಕ್ರಿ. ಪೂ. 437 ರಲ್ಲಿ ರಾಜ ಪಾಂಡುಕಾಭಾಯನು ಇದನ್ನು ಸ್ಥಾಪಿಸಿ ಅಧಿಕಾರವನ್ನು ದೇಶದಾದ್ಯಂತ ವಿಸ್ತರಿಸಿದನು.[೧]
ಅನುರಾಧಾಪುರದ ಅವಧಿಯಲ್ಲಿ ಬೌದ್ಧಧರ್ಮ ಅದರ ಸಂಸ್ಕೃತಿ, ಕಾನೂನುಗಳು ಮತ್ತು ಆಡಳಿತದ ವಿಧಾನಗಳ ಮೇಲೆ ಪ್ರಭಾವ ಬೀರಿ ಪ್ರಮುಖ ಪಾತ್ರ ವಹಿಸಿತು. [ಎನ್ 1] ರಾಜ ದೇವನಾಂಪಿಯ ತಿಸ್ಸನ ಆಳ್ವಿಕೆಯಲ್ಲಿ ಬೌದ್ಧಧರ್ಮವನ್ನು ಪರಿಚಯಿಸಿದಾಗ ಸಮಾಜ ಮತ್ತು ಸಂಸ್ಕೃತಿಯಲ್ಲಿ ಕ್ರಾಂತಿಯಾಯಿತು. ಬುದ್ಧನ ದಂತ ಅವಶೇಷದ ಆಗಮನ ಮತ್ತು ಆಡಳಿತಗಾರರು ನೀಡಿದ ಪ್ರೋತ್ಸಾಹದಿಂದ ಶ್ರೀಲಂಕಾದಲ್ಲಿನ ಸಾಂಸ್ಕೃತಿಕ ಬದಲಾವಣೆಯು ಮತ್ತಷ್ಟು ಬಲಗೊಂಡಿತು.
ಅನುರಾಧಾಪುರದ ಕಾಲದಲ್ಲಿ, ದಕ್ಷಿಣ ಭಾರತೀಯರು ಹಲವಾರು ಬಾರಿ ಈ ದೇಶದ ಮೇಲೆ ಆಕ್ರಮಣ ಮಾಡಿದ್ದರು. ದಕ್ಷಿಣ ಭಾರತದ ಆಕ್ರಮಣಕಾರರನ್ನು ಸೋಲಿಸಿ ದೇಶವನ್ನು ಒಗ್ಗೂಡಿಸಿದ್ದಕ್ಕಾಗಿ ದತ್ತಗಮಣಿ, ವಲ್ಗಂಬ ಮತ್ತು ಧತುಸೇನನಂತಹ ರಾಜರು ಹೆಸರುವಾಸಿಯಾಗಿದ್ದಾರೆ. ಸೇನಾ II ರಂತಹ ಇತರ ಆಡಳಿತಗಾರರು ದಕ್ಷಿಣ ಭಾರತಕ್ಕೆ ಸೈನ್ಯವನ್ನು ಕಳುಹಿಸಿ ಹಲವಾರು ವಿಜಯಗಳನ್ನು ಗಳಿಸುವುದರಲ್ಲಿ ಗಮನಾರ್ಹರಾಗಿದ್ದಾರೆ. ಇಂತಹ ಗೆಲುವುಗಳಲ್ಲಿ 862 ರಲ್ಲಿನ ಮಧುರೈ ಲೂಟಿ ಉಲ್ಲೇಖಾರ್ಹ.
ಈ ಸಾಮ್ರಾಜ್ಯವು ಹೆಚ್ಚಾಗಿ ಕೃಷಿಯನ್ನು ಆಧರಿಸಿತ್ತು, ಆದ್ದರಿಂದ ನೀರಾವರಿ ಕಾರ್ಯಗಳ ನಿರ್ಮಾಣವು ಅನುರಾಧಾಪುರ ಸಾಮ್ರಾಜ್ಯದ ಪ್ರಮುಖ ಸಾಧನೆಯಾಗಿದ್ದು, ಒಣ ವಲಯದಲ್ಲಿ ನೀರಿನ ಪೂರೈಕೆಯನ್ನು ಖಾತ್ರಿಪಡಿಸಿತು ಮತ್ತು ದೇಶವು ಹೆಚ್ಚಾಗಿ ಸ್ವಾವಲಂಬಿಯಾಗಲು ಸಹಾಯ ಮಾಡಿತು. ಅನುರಾಧಪುರ ಅವಧಿಯಲ್ಲಿ ಹಲವಾರು ರಾಜರು, ಮುಖ್ಯವಾಗಿ ವಾಸಭ ಮತ್ತು ಮಹಾಸೇನ, ದೊಡ್ಡ ಜಲಾಶಯಗಳು ಮತ್ತು ಕಾಲುವೆಗಳನ್ನು ನಿರ್ಮಿಸಿದರು, ರಾಜರತ ಪ್ರದೇಶದಾದ್ಯಂತ ವಿಸ್ತಾರವಾದ ಮತ್ತು ಅತ್ಯಾಧುನಿಕ ನೀರಾವರಿ ಜಾಲವನ್ನು ರೂಪಿಸಿದರು. ಈ ಸಾಧನೆಗಳ ಆ ಕಾಲದ ಮುಂದುವರಿದ ತಾಂತ್ರಿಕ ಪರಿಣತಿಯನ್ನು ಪ್ರತಿಬಿಂಬಿಸುತ್ತವೆ. ಸಿಗಿರಿಯಾದಲ್ಲಿರುವ ಪ್ರಸಿದ್ಧ ವರ್ಣಚಿತ್ರಗಳು ಮತ್ತು ರಚನೆಗಳು; ರುವಾನ್ವೆಲಿಸಾಯ ಮತ್ತು ಜೇತವನದಂತಹ ಸ್ಮಾರಕ ಸ್ತೂಪಗಳು; ಲೋವಮಹಾಪಾಯದಂತಹ ಭವ್ಯ ಕಟ್ಟಡಗಳು; ಮತ್ತು ಬುದ್ಧನ ಪ್ರತಿಮೆಗಳು ಸೇರಿದಂತೆ ಹಲವಾರು ಧಾರ್ಮಿಕ ಕೃತಿಗಳು ಅನುರಾಧಪುರ ಅವಧಿಯ ಗಮನಾರ್ಹ ಶಿಲ್ಪಕಲೆಯ ಸಾಧನೆಗಳನ್ನು ಪ್ರದರ್ಶಿಸುವ ಶಾಶ್ವತ ಹೆಗ್ಗುರುತುಗಳಾಗಿ ನಿಂತಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "The Consecrating of Pandukabhaya - King Pandukabhaya". 8 October 2011.