ಅನಂತ ಕಲ್ಲೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಖ್ಯಾತ ಲೇಖಕರಾದ ಶ್ರೀ ಅನಂತ ಕಲ್ಲೋಳ ಇವರು ೧೯೩೭ ಮಾರ್ಚ ೨೪ರಂದು ತಮ್ಮ ತಾಯಿಯ ತವರೂರಾದ ಕೊಲ್ಲಾಪುರದಲ್ಲಿ ಜನಿಸಿದರು. ಇವರ ತಾಯಿ: ರಮಾಬಾಯಿ; ತಂದೆ: ಅಣ್ಣಾಜಿ.

ಶಿಕ್ಷಣ[ಬದಲಾಯಿಸಿ]

ಅನಂತ ಕಲ್ಲೋಳರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಹಾಗು ಎಲ್.ಎಲ್.ಬಿ. ಪದವಿಯನ್ನು ಪಡೆದಿದ್ದಾರೆ.

ಉದ್ಯೋಗ[ಬದಲಾಯಿಸಿ]

ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ೧೯೯೨ರಲ್ಲಿ ಅಸಿಸ್ಟಂಟ ಕಮಿಶನರ ಎಂದು ನಿವೃತ್ತಿ ಹೊಂದಿ, ಬೆಳಗಾವಿಯಲ್ಲಿ ನೆಲಸಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಹಾಸ್ಯ ಸಂಕಲನ[ಬದಲಾಯಿಸಿ]

  • ಬ್ರಹ್ಮ ಹಾಕಿದ ಗಂಟು
  • ರಾಜಾ ಪಾಯಿಂಟ್
  • ವೈಭೋಗದ ವೈಖರಿ
  • ತಾಮ್ರದ ಕಡಗ
  • ಹಗರಣ
  • ಕಂಡಲ್ಲಿ ಗುಂಡು
  • ತಂಡು ಮುಂಡು
  • ರೇಡಿಯೋದಿಂದ ವಿಡಿಯೋದವರೆಗೆ
  • ಮೂಗಿನ ತುದಿ
  • ಜೇನಿನ ಬಾಬು

ಚರಿತ್ರೆ[ಬದಲಾಯಿಸಿ]

  • ಕನಕದಾಸರು
  • ರಾಮದಾಸರು
  • ಸ್ವಾತಂತ್ರ್ಯವಿರ ಸಾವರಕರ
  • ಧೋಂಡೊ ಕೇಶವ ಕರ್ವೆ
  • ಬೆಳಗಿನ ಬೆಳಗು

ಏಕಾಂಕ ನಾಟಕ[ಬದಲಾಯಿಸಿ]

  • ಅದೇ ದಾರಿ
  • ಕುಂಟಕಾಲಿಗೆ ವೈದ್ಯ
  • ಕನ್ನಡ ಸಂಚು ೦೦೧

ಕಥಾಸಂಕಲನ[ಬದಲಾಯಿಸಿ]

  • ಕ್ಯಾಕ್ಟಸ್
  • ಮೋಹಮತ್ಸರ
  • ಕರೆ

ವೈಚಾರಿಕ[ಬದಲಾಯಿಸಿ]

  • ಚಿನ್ನ ನಿಯಂತ್ರಣ ಅಧಿನಿಯಮ
  • ಮಹಾಜನ ವರದಿ

ಅನುವಾದ[ಬದಲಾಯಿಸಿ]

  • ಒಡೆಯನುಲಿದ ಪಾಡು (ಭಗವದ್ಗೀತೆಯ ಕನ್ನಡಾನುವಾದ)
  • ಗಾಂಧಿ ಮತ್ತು ಅಂಬೇಡಕರ (ಮೂಲ ಮರಾಠಿ)

ಸಂಪಾದನೆ[ಬದಲಾಯಿಸಿ]

  • ಬೆಳಗಾವಿ ಕರ್ನಾಟಕ ಸಂಘ ಮತ್ತು ವಾಚನಾಲಯ ಸ್ಮರಣಸಂಚಿಕೆ
  • ಪ್ರಾ. ಪ್ರಹ್ಲಾದಕುಮಾರ ಭಾಗೋಜಿ ಸನ್ಮಾನ ಸಮಾರಂಭದ ಸ್ಮರಣ ಸಂಚಿಕೆ
  • ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದಶಮಾನೋತ್ಸವ ಸ್ಮರಣ ಸಂಚಿಕೆ: ಸದಭಿಮಾನ

ಪ್ರಶಸ್ತಿ, ಪುರಸ್ಕಾರ[ಬದಲಾಯಿಸಿ]

  • ೧೯೯೩ರಲ್ಲಿ “ಹಗರಣ” ವಿನೋದ ಲೇಖನ ಸಂಕಲನಕ್ಕೆ ವರ್ಷದ ಶ್ರೇಷ್ಠ ವಿನೋದ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.
  • “ತಂಡ ಮುಂಡು” ಸಂಕಲನಕ್ಕೆ ಗೊರೂರು ಸ್ಮಾರಕ ಪ್ರಶಸ್ತಿ ಬಂದಿದೆ.
  • ೧೯೯೪ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ದೊರೆತಿದೆ.
  • ೨೦೦೬ರಲ್ಲಿ “ಮಹಾಜನ ವರದಿ” ಪುಸ್ತಕಕ್ಕೆ ಶ್ರೀ ಎಸ್. ಎಮ್. ಕುಲಕರ್ಣಿ ಷಷ್ಟ್ಯಬ್ದಿ ಸ್ಮರಣೆಯ ಪುರಸ್ಕಾರ ದೊರೆತಿದೆ.
  • ೧೯೯೭ರಲ್ಲಿ ನಡೆದ ಚಿಕ್ಕೋಡಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದ ಗೌರವ.

ವೈಯಕ್ತಿಕ[ಬದಲಾಯಿಸಿ]

ಶ್ರೀ ಅನಂತ ಕಲ್ಲೋಳ ಇವರು ಬೆಳಗಾವಿಯಲ್ಲಿ ಕನ್ನಡದ ಕಟ್ಟಾಳು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮಡದಿ ಶೋಭಾ. ಇವರಿಗೆ ಇಬ್ಬರು ಮಕ್ಕಳು. ಮಗ ನಾಗೇಶ ಇಂಜನಿಯರ ಆಗಿ, ಬೆಳಗಾವಿಯಲ್ಲಿಯೆ ಸ್ವಂತ ಉದ್ಯೋಗದಲ್ಲಿದ್ದಾರೆ. ಮಗಳು ನಿರ್ಮಲಾ ಮದುವೆ ಆಗಿ ಗೃಹಿಣಿಯಾಗಿದ್ದಾರೆ.