ಸದಸ್ಯ:Shreya Kamath 238/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                       ಶ್ಯಾಮಶಾಸ್ತ್ರಿ

ಕರ್ನಾಟಕ ಸಂಗೀತ ತ್ರಿಮೂರ್ತಿಗಳೆನಿಸಿ,ಕರ್ನಾಟಕ ಸಂಗೀತಕ್ಕೆ ಸೇವೆ ಸಲ್ಲಿಸಿದ ಶ್ರೀ ತ್ಯಾಗರಾಜರು , ಶ್ರೀ ಮುತ್ತುಸ್ವಮಿ ದೀಕ್ಶಿತರು,ಶ್ರೀ ಶ್ಯಾಮಶಾಸ್ತ್ರಿಗಳು, ಇವರಲ್ಲಿ ಶಾಸ್ತ್ರಿಗಳೇ ವಯೋಜ್ಯ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ಚಿತ್ರಭಾನು ಸಂವತ್ಸರದ ಮೇಶ ರವಿ ಕೃತಿಕಾ ನಕ್ಷತ್ರದ ಅಂದರೆ ೧೭೬೨ನ ಏಪ್ರಿಲ್ ೨೬ರಂದು ಶ್ಯಾಮಶಾಸ್ತ್ರಿಗಳು ಜನ್ಮ ತಾಳಿದರು. ದ್ರಾವಿಡ ಸ್ಮಾರ್ತ ಬ್ರಾಹ್ಮಣರಲ್ಲಿ ವಡಮರ ಪಂಗದಡಕ್ಕೆ ಸೇರಿದವರು. ಗೌತಮ ಗೋತ್ರ, ಭೋಧಯಾನ ಸೂತ್ರದವರು ತಂದೆ ವಿಶ್ವನಾಥಯೈರ್. ಶಿಶುವಿಗೆ 'ವೆಂಕಟಸುಬ್ರಮಣ್ಯ' ನೆಂದು ನಾಮಕರಣ ಮಾಡಿದರು. ಮುದ್ದಿಗಾಗಿ 'ಶ್ಯಾಮ' ಎಂದು ಕರೆಯುತ್ತಿದ್ದುದರಿಂದ ಶ್ಯಾಮಶಾಸ್ತ್ರಿಗಳೆಂದೇ ಅವರು ಖ್ಯಾತರಾಗಿದ್ದಾರೆ. ಯುಕ್ತ ವಯಸ್ಸಿನಲ್ಲಿ ವಿಶ್ವನಾಥರವರು ಮಗನಿಗೆ ವೇದಾಧ್ಯಯನವನ್ನು ಮಾಡಿಸಿ, ಸಂಸ್ಕ್ರುತ ಮತ್ತು ತೆಲುಗು ಭಾಷೆಗಳನ್ನು ಕಲಿಸಿದರು. ಶ್ಯಾಮ ಶಾಸ್ತ್ರಿಗಳು ಹದಿನೆಂಟು ವಯಸ್ಸಿನವರಾದಾಗ ತಂದೆ ತಾಯಿಗಳೊಡನೆ ತಂಜಾವೂರಿಗೆ ಬಂದು ನೆಲೆಸಿದರು. ಇವರ ವಂಶಿಕರು ಸಂಗೀತಗಾರರಾಗಿರಲಿಲ್ಲ. ಸಂಗೀತಭ್ಯಾಸವನ್ನು ಹುರಿದುಂಬಿಸುತಿರಲಿಲ್ಲ. ಇವರಿಗೆ ಮಧುರವಾದ ಧ್ವನಿ ಮತ್ತು ಶಾರೀರ ಸಂಪತ್ತು ಇದ್ದರೂ ಸಹ, ಇವರ ತಾಯಿ ತಂದೆಯರು ಸಂಗೀತವನ್ನು ಹೇಳಿಸಲು ಪ್ರಯತ್ನ ಪಡಲಿಲ್ಲ. ದೈವ ಸಹಾಯದಿಂದ, ಸಂಗೀತವನ್ನು ಕಲಿಯಲು ಅವಕಾಶವು ತಾನೇ ತಾನಾಗಿ ಒದಗಿ ಬಂತು. ಸಂಗೀತ ಸ್ವಾಮಿ ಗಳಂಬ ಆಂಧ್ರ ಬ್ರಾಹ್ಮಣ ಸನ್ಯಾಸಿಗಳು ತೀರ್ಥಯಾತ್ರೆಯ ಸಲುವಾಗಿ ತಂಜಾವೊರಿಗೆ ಬಂದರು. ಚಾತುರ್ಮಸ ವ್ರತಾಚರಣೆಗಾಗಿ ಅಲ್ಲೇ ಉಳಿದುಕೊಂಡರು. ಇವರು ಸಂಗೀತ ಮತ್ತು ನಾಟ್ಯ ಕಲೆಗಳಲ್ಲಿ ನಿಪುಣರಾಗಿದ್ದರು. ಕಾಶಿ ವಿಶ್ವನಾಥನೆದುರಿನಲ್ಲಿ ಪ್ರತಿದಿನವೂ ನರ್ತನ ಮಾಡುತಿದ್ದರು. ವಿಶ್ವನಾಥಯ್ಯರ್ ರವರು ಸ್ವಾಮಿಗಳನ್ನು ಒಂದು ದಿನ ಅಹ್ವಾನಿಸಿ, ಶ್ಯಾಮಶಾಸ್ತ್ರಿಗಳನ್ನೇ ಅವರ ಪರಿಚರ್ಯಗೆ ನಿಯಮಿಸಿದರು. ಸಂಸ್ಕ್ರತ ಮತ್ತು ತೆಲುಗು ಭಾಶೆಗಳ ಪಾಂಡಿತ್ಯವನ್ನು ಪಡೆದಿದ್ದುರಿಂದಲೂ, ಒಳ್ಳೆಯ ಮೇಧಶಕ್ತಿಯನ್ನು ಹೂಂದಿದ್ದರಿಂದಲೂ, ಶಾಸ್ತ್ರಿಗಳು ಬಹು ಬೇಗನೆ ರಾಗ, ತಾಳ ಮತ್ತು ಸ್ವರ ಪ್ರಸಾರಗಳಲ್ಲಿ ಪಾಂಡಿತ್ಯವನ್ನು ಪಡೆದರು.ಸ್ವಾಮಿಗಳು ಶಿಶ್ಯನಿಗೆ ಸಂಗೀತ ಶಾಸ್ತ್ರ ಮರ್ಮಗಳನ್ನು, ಗಾನಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವನ್ನು ಅನುಗ್ರಹಿಸಿ, ಆಶೀರ್ವದಿಸಿದರು. ಹೊರಡುವಾಗ, ನೀನು ಸಂಗೀತಶಾಸ್ತ್ರದಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವೆ, ಈಗ ನೀನು ಒಳ್ಳಯ ಸಂಗೀತವನ್ನು ಕೇಳಬೇಕು.ಪಚ್ಚಿಮರಿ ಆದಿ ಅಪ್ಪಯ್ಯನವರ ಸಂಗೀತವನ್ನು ಕೇಳು, ಎಂಬುದಾಗಿ ಹೇಳಿ, ಆಶೀರ್ವದಿಸಿ, ಕಾಶಿಗೆ ಹಿಂದಿರುಗಿದರು. ಗುರುಗಳ ಆಗ್ನೆಗೆ ಅನುಸಾರವಾಗಿ ಆದೆಪ್ಪಯ್ಯನವರನ್ನೂ ಸಂದರ್ಶಿಸಿ, ಅವರ ಎದುರಿನಲ್ಲಿ ಆಗಾಗ್ಗೆ ತಾವು ಹಾಡುತ್ತಲೂ ಆ ಹಿರಿಯ ವಿದ್ವಾಂಸರ ಗಾಯನವನ್ನು ಕೇಳುತ್ತಲೂ ಇದ್ದರು. ಶ್ಯಾಮಶಾಸ್ತ್ರಿಗಳು ಜೀವನವ್ರತ್ತಿಗಾಗಿ ಸಂಗೀತವನ್ನು ಕಲಿತವರಲ್ಲ. ತಂದೆಯ ನಂತರ ಶ್ಯಾಮಶಾಸ್ರ್ತಿಗಳೇ "ಬಂಗಾರು ಕಾಮಾಕ್ಷಿ" ಸೇವೆಗೆ ನಿಂತರು.ಸ್ವಲ್ಪ ಕಾಲದ ನಂತರ ಇವರ ರಚನೆ ಮತ್ತು ಗಾಯನವು ಆಗಿನ ವಿದ್ವನ್ಮಂಡಳಿಯಲ್ಲೇ ಉನ್ನತ ಸ್ಥಾನವನ್ನು ಪಡೆಯಿತು. ಇವರು ಅತಿ ಕಷ್ಟವಾದ ತಾಳಗಳನ್ನು ನಿರ್ವಹಿಸುತ್ತಿದ್ದರು. ಅಪೂರ್ವ ರಾಗಗಳನ್ನು ಸಾಮಾನ್ಯ ರಾಗಗಳಂತೆ ಸರಾಗವಾಗಿ ಹಾಡುತ್ತಿದ್ದರು.ಪರಮ ಸ್ನೇಹಿತರಾದ ತ್ಯಾಗರಾಜರು ಶ್ಯಾಮಶಾಸ್ತಿಗಳ ಸಮ್ಮುಖದಲ್ಲೇ ಇವರ ಕೃತಿಗಳ ಬಗ್ಗೆ ಮೆಚ್ಛುಗೆಯನ್ನು ವ್ಯಕ್ತಪಡಿಸುತ್ತಿದ್ದುದೇ ಇದಕ್ಕೆ ನಿದರ್ಶನ. ಇವರ ಮೊದಲನೆ ಕೃತಿ "ಜನನಿ ನತಜನಪರಿಪಾಲಿನಿ" ಸಾವೇರಿ ರಾಗದಲ್ಲಿದ್ದು, ಸಂಸ್ಕೃತದಲ್ಲಿದೆ. ಸಂಗೀತವಲ್ಲದೆ, ಜ್ಯೋತಿಶ್ಯ ಶಾಸ್ರ್ತದಲ್ಲೂ ಶ್ಯಾಮಶಾಸ್ತ್ರಿಗಳಿಗೆ ಪಾಂಡಿತ್ಯವಿತ್ತು. ದೇವಿಯ ಉಪಾಸಕರಾಗಿದ್ದ ಇವರು ಶಾಪನುಗ್ರಹ ಶಕ್ತಿಯನ್ನು ಪಡೆದಿದ್ದರು. ತಮ್ಮ ಅಂತ್ಯಕಾಲವನ್ನು ಪೂರ್ವಭಾವಿಯಾಗಿಯೇ ಅರಿತಿದ್ದ, ಇವರನ್ನು, ತಮ್ಮ ಸಹಧರ್ಮಿಣಿ ಸ್ವರ್ಗಸ್ಥಾಳಾದ ಆರನೆಯ ದಿನವೇ ಅಂದರೆ ೧೮೨೭ನೇ ಫ಼ೇಬ್ರವರಿ ಒಂದರಂದು ೬೫ನೇ ವಯಸ್ಸಿನಲ್ಲಿ ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಮುಕ್ತರಾದರು. ಶ್ರೀ ಕಾಮಾಕ್ಶಿ ದೇವಿಯ ಅನನ್ಯ ಭಕ್ತರಿವರು. ದೇವಿಯ ಜೊತೆಯಲ್ಲಿ ಸಂಭಾಶಣೆ ನಡೆಸಿದ ಮಹಾಜನರು. ಆಕೆಯನ್ನು ಮನಸಾರ ಅರ್ಚಿಸಿ, ವರ್ಣಿಸಿ ಹಾಡುವುದೇ, ಇವರ ಸಂಗೀತದ ಗುರಿ. ಇವರ ಕೃತಿಗಳು ಅಪಾರ ಪಾಂಡಿತ್ಯದಿಂದಲೂ, ಭಕ್ತಿ ಭಾವದಿಂದಲೂ ಕೊಡಿವೆ. ತಮ್ಮ ರಚನೆಗಳನ್ನು ಜನತೆಯಲ್ಲಿ ಪ್ರಚಾರ ಪಡಿಸಬೇಕೆಂಬ ಆತುರವು ಅವರಲ್ಲಿರಲಿಲ್ಲ. ಆದುದರಿಂದಲೇ ಇವರು ರಚಿಸಿರುವ ಸ್ವರಜತಿ, ವರ್ಣ್, ಕೃತಿಗಳು ಮುನ್ನೂರಕ್ಕೆ ಮೇಲಿತ್ತು, ಕೇವಲ ೩೫ ಕೃತಿಗಳು ಪ್ರಚಾರದಲ್ಲಿದೆ.ಇದರಲ್ಲಿ ಮಧುರೆ ಮೇಲೆ ರಚಿಸಿರುವ ಒಂಬತ್ತು ಕೃತಿಗಳಿಂದ ಕೂಡಿರುವ ನವರತ್ನ ಮಾಲಿಕೆಯು ಸೇರಿದೆ. ಇವರು ಸಂಸ್ಕೃತ, ತೆಲುಗು ಮತ್ತು ತಮಿಳಲ್ಲಿ ಕೃತಿಗಳನ್ನು ರಚಿಸಿದ್ದರೆ. 'ಶ್ಯಾಮಕೃಶ್ಣ' ಎಂಬ ಅಂಕಿತವು ಇವರ ರಚನೆಗಳಲ್ಲಿ ಕಂಡುಬರುತ್ತದೆ. ಇವರ ಶೈಲಿಯು ಕದಳೀಪಾಕವೆನಿಸಿದೆ. ಶ್ಯಾಮಶಾಸ್ತ್ರಿಗಳ ಶಿಶ್ಯರಲ್ಲಿ ಪ್ರಮುಖರಾದವರು, ಅವರ ಮಗನಾದ ಸುಬ್ಬರಾಯಶಾಸ್ತ್ರಿ, ತರಂಗಂಬಾಡಿ ಪಂಚನದಯ್ಯರ್ ಮತ್ತು ದಾಸರಿ.

ಶ್ಯಾಮಶಾಸ್ತ್ರಿಗಳ ಕೃತಿಗಳು:

  • ಶಂಕರಿ ಶಂಕರು ಚಂದ್ರ ಮುಖಿ
  • ಕನಕ ಶೈಲ ವಿಹಾರಿಣಿ
  • ಬಿರಾಣ ವಾರಲಿಕ್ಕಿ ಬ್ರೊವಾವೆ
  • ಹಿಮಾದ್ರಿ ಸುತೆ ಪಾಹಿಮಂ
  • ಓ ಜಗದಂಬ ನನ್ನು
  • ಪಾರ್ವತಿ ನೀನು ನೇ ನೇರ ನಮ್ಮಿತಿ
  • ಸರೊಜ ದಳ ನೇತ್ರಿ ಹಿಮಗಿರಿ ಪುತ್ರಿ

ಸ್ವರ ಜಾತಿ:

  • ಕಾಮಾಕ್ಶಿ ಅನುದಿನಮು ಮರುವಕನೇ
  • ಕಾಮಾಕ್ಶಿ ಪದಯುಗಮೆ ಸ್ಥಿರಮನಿನೇ
  • ರಾವೇ ಹಿಮಗಿರಿ ಕುಮಾರಿ

ಇವರು ಆದಿ ತಾಳ, ಮಿಸ್ರ ಕಾಪು, ಮುಂತಾದ ತಾಳಗಳಲ್ಲಿ ಬರಿಯುತ್ತಿದ್ದರು.

ಉಲ್ಲೇಖನ[ಬದಲಾಯಿಸಿ]

ಕರ್ನಾಟಕ ಸಂಗೀತ ದರ್ಪಣ ಭಗ ೧ ಲೇಖಕಿಯರು ತಿರುಮಲೈ ಸೋದರಿಯರು ಡಾ||ಟಿ.ಶಚೀದೇವಿ, ವಿದೂಶಿ ಟಿ.ಶಾರದಾ