ಗೋಕರ್ಣನಾಥೇಶ್ವರ ದೇವಾಲಯ

Coordinates: 12°52′34″N 74°49′54″E / 12.876119°N 74.831554°E / 12.876119; 74.831554
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಕರ್ಣನಾಥೇಶ್ವರ ಮಂದಿರ
ಗೋಕರ್ಣನಾಥೇಶ್ವರ ಮಂದಿರದ ಪ್ರವೇಶದ್ವಾರ
ಗೋಕರ್ಣನಾಥೇಶ್ವರ ಮಂದಿರದ ಪ್ರವೇಶದ್ವಾರ
ಭೂಗೋಳ
ಕಕ್ಷೆಗಳು12°52′34″N 74°49′54″E / 12.876119°N 74.831554°E / 12.876119; 74.831554
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ಸ್ಥಳಕುದ್ರೋಳಿ, ಮಂಗಳೂರು
ಸಂಸ್ಕೃತಿ
ಮುಖ್ಯ ದೇವರುಲಿಂಗರೂಪಿ ಈಶ್ವರ (ಗೋಕರ್ಣನಾಥ)
ಪ್ರಮುಖ ಉತ್ಸವಗಳುಮಹಾ ಶಿವರಾತ್ರಿ, ನವರಾತ್ರಿ, ದೀಪಾವಳಿ, ನಾರಾಯಣ ಗುರು ಜಯಂತಿ
ಇತಿಹಾಸ ಮತ್ತು ಆಡಳಿತ
ಸೃಷ್ಟಿಕರ್ತನಾರಾಯಣ ಗುರು
ಅಧೀಕೃತ ಜಾಲತಾಣhttp://www.kudroligokarnanatha.com/

ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಮಂಗಳೂರಿನಲ್ಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಕುದ್ರೋಳಿ. ಕಾರಣಿಕ ಕ್ಷೇತ್ರವೆಂದೇ ಖ್ಯಾತವಾದ ಇಲ್ಲಿ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವಿದೆ. ಕ್ರಾಂತಿಪುರುಷ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡ ದೇವಾಲಯಗಳ ಪೈಕಿ ಈ ದೇವಾಲಯ ಬಹಳ ಮಹತ್ವವಾದದ್ದು.

ಶತಮಾನಗಳಷ್ಟು ಹಳೆಯದಾದ ಈ ದೇವಾಲಯ ನಿರ್ಮಾಣಕ್ಕೆ ಹತ್ತೂ ಸಮಸ್ತರ ಪೈಕಿ ಕುದ್ರೋಳಿಯ ನಿವಾಸಿ ಜಾರಪ್ಪನವರೂ ಕಾರಣೀಭೂತರು. ಈಗ ದೇವಾಲಯ ಪಡೆದಿರುವ ಭವ್ಯತೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪರಿಶ್ರಮವೇ ಕಾರಣ. ಇವರೊಂದಿಗೆ ದೇಗುಲದ ಅಭಿವೃದ್ಧಿಗೆ ದುಡಿದವರು ಸೋಮಸುಂದರಂ, ವಿಶ್ವನಾಥ್, ದಾಮೋದರ ಸುವರ್ಣ ಹಾಗೂ 1908ರಲ್ಲಿ ದೇವಾಲಯ ನಿರ್ಮಾಣಕ್ಕೆ ಟೊಂಕಕಟ್ಟಿ ಶ್ರಮಿಸಿದವರಲ್ಲಿ ಒಬ್ಬರಾದ ಕೊರಗಪ್ಪನವರ ಮೊಮ್ಮಗ ಎಚ್.ಎಸ್. ಸಾಯಿರಾಂ. ಸದಾಭಕ್ತರಿಂದ ತುಂಬಿತುಳುಕುವ ಈ ದೇವಾಲಯ ಇತ್ತೀಚೆಗೆ ನಿರ್ಮಾಣವಾದ ಭವ್ಯ ಕಟ್ಟಡ.

ದ್ರಾವಿಡ ಶೈಲಿಯ ಈ ದೇವಾಲಯದ ಮುಭಾಗದಲ್ಲಿ ಭವ್ಯವಾದ ರಾಜಗೋಪುರವಿದೆ. ಎತ್ತರವಾದ ಆನೆಯ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ. ವಿಶಾಲವಾದ ಪ್ರಾಕಾರವಿರುವ ದೇವಾಲಯದ ಗೋಪುರಗಳಲ್ಲಿ ಈಶ್ವರ, ಶಿವಗಣಗಳು ಸೇರಿದಂತೆ ದೇವಾನು ದೇವತೆಗಳ ಗಾರೆ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಗೋಕರ್ಣನಾಥೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ. ಶಿರದ ಮೇಲೆ ಗಂಗೆಯ ಧರಿಸಿದ ಶಿವಮುಖವಾಡದಲ್ಲಿ ಗೋಕರ್ಣನಾಥೇಶ್ವರನನ್ನು ನೋಡಲು ಎರಡು ಕಣ್ಣು ಸಾಲದು ಎನಿಸುತ್ತದೆ. ದೇವಾಲಯದ ಪ್ರಾಕಾರದಲ್ಲಿ ಗಣಪತಿ, ಕೃಷ್ಣ ಹಾಗೂ ನಾರಾಯಣ ಗುರುಗಳ ಪ್ರತ್ಯೇಕ ಮಂದಿರಗಳಿವೆ.

ಹೊರ ಆವರಣದಲ್ಲಿ ಶುದ್ಧ ನೀರಿನ ಕೊಳ, ಹಚ್ಚ ಹಸುರಿನ ಉದ್ಯಾನವನ, ಕೈಲಾಸಗಿರಿ, ಮುಗಿಲಿನತ್ತ ಎತ್ತರ ಎತ್ತರ ಚಿಮ್ಮುವ ಕಾರಂಜಿ, ವಾಚನಾಲಯ ಎಲ್ಲವೂ ಇದೆ. ಇಲ್ಲಿ ನವರಾತ್ರಿಯ ವೇಳೆ ನವದುರ್ಗೆಯರನ್ನು ಕೂರಿಸಿ ಮಾಡುವ ಭವ್ಯ ಮೆರವಣಿಗೆ ವಿಶೇಷ ಪೂಜೆಗಳು ಜನಾಕರ್ಷಣೆಯ ಕೇಂದ್ರವಾಗಿವೆ. ಈಗ ಇದು ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿದೆ. ಶಿವರಾತ್ರಿಯ ಸಮಯದಲ್ಲಿ ಕೂಡ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.