ಎಸ್.ಎಚ್. ರಾಝಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
S.H.Raza (ಎಸ್.ಎಚ್.ರಝಾ)

ಸೈಯದ್ ಹೈದರ್ ರಝ
ಹುಟ್ಟು ೧೯೨೨|೦೨|೨೨
ರಾಷ್ಟ್ರೀಯತೆ ಭಾರತೀಯ
ಕ್ಷೇತ್ರ ಪೇಂಟರ್
ಪುರಸ್ಕಾರಗಳು ಪದ್ಮಭೂಷಣ ೨೦೦೭
ಫೆಲೋಶಿಪ್ ಆಫ್ ದ ಲಲಿತ್ ಕಲಾ ಅಕಾಡೆಮಿ೧೯೮೧

ಸೈಯದ್ ಹೈದರ್ ರಾಝಾ ಅಲಿಯಾಸ್ ಎಸ್.ಎಚ್. ರಾಝಾ ,(ಜನನ ೨೨ ಫೆಬ್ರವರಿ ೧೯೨೨)[೧] ಒಬ್ಬ ಶ್ರೇಷ್ಠ ಭಾರತೀಯ ಮೂಲದ ಕಲಾವಿದರೆನಿಸಿದ್ದಾರೆ. ಇವರು ೧೯೫೦ರಿಂದಲೂ ಫ್ರಾನ್ಸ್ ನಲ್ಲಿ ವಾಸಿಸುವುದರ ಜೊತೆಗೆ ಅಲ್ಲೇ ಕೆಲಸ ಮಾಡುತ್ತಿದ್ದಾರೆ; ಆದರೆ ಭಾರತದೊಂದಿಗೆ ಒಂದು ಬಲವಾದ ನಂಟನ್ನೂ ಉಳಿಸಿಕೊಂಡಿದ್ದಾರೆ.

ಅವರ ಕೃತಿಗಳು ಮುಖ್ಯವಾಗಿ ತೈಲವರ್ಣದೊಂದಿಗೆ ಅಥವಾ ಅಕ್ರಿಲಿಕ್ ನಿಂದ ಅಮೂರ್ತವಾಗಿರುತ್ತವೆ. ಜೊತೆಗೆ ವರ್ಣಗಳ ಸಮೃದ್ಧ ಬಳಕೆ, ಭಾರತೀಯ ಕಲ್ಪನೆಯ ಬ್ರಹ್ಮಾಂಡ ಹಾಗು ತತ್ತ್ವಶಾಸ್ತ್ರದ ಪ್ರತಿಮಾರೂಪಗಳೊಂದಿಗೆ ಸಾದೃಶ್ಯವಾಗಿರುತ್ತವೆ.[೨][೩] ಇವರಿಗೆ ೧೯೮೧ರಲ್ಲಿ ಪದ್ಮಶ್ರೀ ಹಾಗು ಲಲಿತಕಲಾ ಅಕ್ಯಾಡೆಮಿಯ ಫೆಲೋಶಿಪ್,[೪] ಅದಲ್ಲದೇ ೨೦೦೭ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.[೫]

ಅವರ ೮೮ ರ ಇಳಿ ವಯಸ್ಸಿನಲ್ಲಿ 'ಸೌರಾಷ್ಟ್ರ' ಎಂಬ ಮೂಲ ಕೃತಿಯು ಕ್ರಿಸ್ಟಿ ಹರಾಜಿನಲ್ಲಿ ೧೬.೪೨ ಕೋಟಿಗೆ ($೩,೪೮೬,೯೬೫) ಮಾರಾಟ ಕಂಡಿತು; ಹೀಗೆ ಜೂನ್ ೧೦ ರ ೨೦೧೦ರ ಹೊತ್ತಿಗೆ ನಡೆದ ಸಮೀಕ್ಷೆಯಂತೆ ಇವರು ಭಾರತದ ಅತ್ಯಮೂಲ್ಯ ಆಧುನಿಕ ಕಲಾವಿದರೆನಿಸಿಕೊಂಡಿದ್ದಾರೆ.

ಜೀವನ ವೃತ್ತಾಂತ[ಬದಲಾಯಿಸಿ]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಸೈಯದ್ ಹೈದರ್ ರಾಝಾ,[೬] ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಬಾಬರಿಯಾದಲ್ಲಿ ಜಿಲ್ಲೆಯ ಉಪ ಅರಣ್ಯರಕ್ಷಣಾಧಿಕಾರಿ ಸಯದ್ ಮೊಹಮದ್ ರಾಜ್ಹಿ ಹಾಗು ತಾಹಿರಾ ಬೇಗಂ ದಂಪತಿಗಳ ಪುತ್ರನಾಗಿ ಜನಿಸಿದರು.[೭][೮] ಇಲ್ಲಿ ತಮ್ಮ ಬಾಲ್ಯದ ಕೆಲ ವರ್ಷಗಳನ್ನು ಕಳೆದ ನಂತರ ತಮ್ಮ ೧೨ನೇ ವಯಸ್ಸಿನಿಂದ ಚಿತ್ರಬರೆಯಲು ಆರಂಭಿಸಿದರು; ತಮ್ಮ ೧೩ನೇ ವಯಸ್ಸಿನಲ್ಲಿ ಮಧ್ಯಪ್ರದೇಶದಲ್ಲೇ ಇದ್ದ ದಮೊಹ್ ಎಂಬ ಪಟ್ಟಣಕ್ಕೆ ಸ್ಥಳಾಂತರಗೊಂಡು,[೯] ದಮೊಹ್ ನ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಶಾಲಾಶಿಕ್ಷಣ ಪೂರೈಸಿದರು.[೧೦]

ತಮ್ಮ ಪ್ರೌಢಶಾಲಾ ಶಿಕ್ಷಣದ ನಂತರ, ಮುಂದಿನ ವಿದ್ಯಾಭ್ಯಾಸವನ್ನು ನಾಗ್ಪುರದ ನಾಗ್ಪುರ್ ಸ್ಕೂಲ್ ಆಫ್ ಆರ್ಟ್ ನಲ್ಲಿ ಮುಂದುವರೆಸಿದರು. (೧೯೩೯–೪೩) ತರುವಾಯ ಬಾಂಬೆಯ ಸರ್ J. J. ಸ್ಕೂಲ್ ಆಫ್ ಆರ್ಟ್ ನಲ್ಲಿ(೧೯೪೩–೪೭) ಶಿಕ್ಷಣ ಪಡೆದರು[೧೧].ನಂತರ ಔಪಚಾರಿಕವಾಗಿ ೧೯೫೦-೧೯೫೩ರ ನಡುವಿನ ಶೈಕ್ಷಣಿಕ ಅವಧಿಗೆ ಫ್ರಾನ್ಸ್ ಸರ್ಕಾರದ ವಿದ್ಯಾರ್ಥಿವೇತನದ ನೆರವಿನಿಂದ ಪ್ಯಾರಿಸ್ ನ ಎಕೊಲೇ ನ್ಯಾಷಿಯೋನೆಲ್ ಸುಪೆರಿಯಯುರೆ ಡೆಸ್ ಬ್ಯೂಕ್ಸ್-ಆರ್ಟ್ಸ್ ನಲ್ಲಿ ಉನ್ನತ ಶಿಕ್ಷಣ ಪಡೆಯಲು ಅಕ್ಟೋಬರ್ ೧೯೫೦ರಲ್ಲಿ ಫ್ರಾನ್ಸ್ ಗೆ ತೆರಳಿದರು.[೧೨] ತಮ್ಮ ಅಧ್ಯಯನದ ನಂತರ, ಅವರು ಯುರೋಪ್ ನುದ್ದಕ್ಕೂ ಪ್ರವಾಸ ಮಾಡಿದರು. ಜೊತೆಗೆ ಪ್ಯಾರಿಸ್ ನಲ್ಲಿ ನೆಲೆಗೊಂಡು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಆರಂಭಿಸಿದರು.[೧೦] ಇವರಿಗೆ ಪ್ಯಾರಿಸ್ ನಲ್ಲಿ ಪ್ರಿಕ್ಸ್ ಡೆ ಲಾ ಕ್ರಿಟೀಕ್ ಪ್ರಶಸ್ತಿ ನೀಡಿ, ೧೯೫೬ರಲ್ಲಿ ಗೌರವಿಸಲಾಯಿತು. ಈ ಗೌರವ ಪಡೆದ ಫ್ರೆಂಚ್ ಯೇತರ ಮೊದಲ ಕಲಾವಿದ ಇವರಾಗಿದ್ದಾರೆ.[೧೩]

ಕಲಾವೃತ್ತಿ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಸಯದ್ ಹೈದರ್ ರಾಝಾ, ೧೯೪೬ರಲ್ಲಿ ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಬಾಂಬೆ ಆರ್ಟ್ ಸೊಸೈಟಿ ಸಾಲೊನ್ ನಲ್ಲಿ ನೀಡುತ್ತಾರೆ. ಅದರಿಂದಾಗಿ ಸೊಸೈಟಿಯ ರಜತ ಪದಕಕ್ಕೆ ಭಾಜನರಾಗುತ್ತಾರೆ.[೭]

ಇವರ ಕೃತಿಗಳು ಭಾವಾಭಿವ್ಯಕ್ತಿಪಂಥಿ ಭೂದೃಶ್ಯಗಳ ಚಿತ್ರಗಳಿಂದ ಹಿಡಿದು ಅಮೂರ್ತ ಚಿತ್ರರಚನೆಗಳ ಪರಿಕಲ್ಪನೆಯ ಮೂಸೆಯಿಂದ ಹೊರಹೊಮ್ಮಿವೆ. ಆಗ ೪೦ರ ದಶಕದಲ್ಲಿ ಸುಂದರವಾದ ಭೂದೃಶ್ಯಗಳು ಹಾಗು ನಗರದೃಶ್ಯಗಳ ರಚನೆಗೆ ಅವರು ಹೆಚ್ಚು ಒತ್ತು ನೀಡಿದ್ದರು.ಸಮೃದ್ಧವಾಗಿ ಬಳಸಿದ್ದ ಜಲವರ್ಣದಿಂದ ಮನಸ್ಸಿನ ಪ್ರತಿಬಿಂಬಗಳ ಚಿತ್ರಗಳ ಬಗ್ಗೆ ಹೆಚ್ಚು ಅರ್ಥಗರ್ಭಿತ ಭಾಷೆಯಲ್ಲಿ ಭಾವಾವೇಶದ ರೂಪ ನೀಡಿದ್ದಾರೆ.

ಅವರ ಪಾಲಿಗೆ ಈ ೧೯೪೭ ಬಹಳ ಪ್ರಮುಖ ಕಾಲಘಟ್ಟದ ವರ್ಷವಾಯಿತು.ವಿಷಾದಗಳು ಮತ್ತು ವಿವೇಚನೆಗಳಿಗೆ ಮೊದಲಾಯಿತೆನ್ನಬಹುದು. ಅವರ ತಾಯಿ ಇದೇ ವರ್ಷ ನಿಧನರಾದಾಗಿನ ವಿಷಾದ ಅವರ ಎದುರಿಗಿದೆ. ಜೊತೆಗೆ ಅದೇ ವರ್ಷ ಅವರು ಕ್ರಾಂತಿಕಾರಿ ಬಾಂಬೆ ಪ್ರೋಗ್ರೆಸ್ಸಿವ್ ಆರ್ಟಿಸ್ಟ್ಸ್ ಗ್ರೂಪ್(PAG)ನ್ನು (೧೯೪೭–೧೯೫೬)[೧೩] K.H. ಆರಾ ಹಾಗು F.N. ಸೋಜ(ಫ್ರಾನ್ಸಿಸ್ ನ್ಯೂಟನ್ ಸೌಜ)ರೊಂದಿಗೆ ಜೊತೆಗೂಡಿ ಆರಂಭಿಸಿದರು[೧೪]. ಭಾರತೀಯ ಕಲೆಯ ಮೇಲಾಗುತ್ತಿರುವ ಯುರೋಪಿಯನ್ ಯಥಾರ್ಥತೆಯ ಪ್ರಭಾವದಿಂದ ಅದನ್ನು ಮುಕ್ತಗೊಳಿಸಿ ಈ ಕಲೆಗೆ ಭಾರತೀಯ ಅಂತರ್ದೃಷ್ಟಿಯನ್ನು(ಅಂತರ್ಜ್ಞಾನ)ತರುವ ಉದ್ದೇಶದಿಂದ ಇದು ಸ್ಥಾಪನೆ ಕಂಡಿತು.[೧೫] ಇದರ ನಿರ್ಮಾತೃ ತಂಡವು ೧೯೪೮ರಲ್ಲಿ ತಮ್ಮ ಮೊದಲ ಪ್ರದರ್ಶನ ನೀಡಿತು,[೪] ಅದೇ ವರ್ಷ ಇವರ ತಂದೆ ಮಾಂಡ್ಲಾದಲ್ಲಿ ಕೊನೆಯುಸಿರೆಳೆದರು, ಅದರೊಂದಿಗೇ ನಾಲ್ವರು ಸಹೋದರರು ಹಾಗು ಒಬ್ಬ ಸಹೋದರಿ, ಭಾರತದ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು.

ಫ್ರಾನ್ಸ್ ನಲ್ಲಿ ನೆಲೆಗೊಂಡ ನಂತರ, ಪಾಶ್ಚಿಮಾತ್ಯ ಆಧುನಿಕತೆಯ ಪ್ರವಾಹದೊಂದಿಗೆ ಪ್ರಯೋಗಶೀಲತೆಯನ್ನು ಮುಂದುವರೆಸಿದರು. ಅಭಿವ್ಯಕ್ತಿಪಂಥೀ ಶಿಷ್ಟಾಚಾರದಿಂದ ಅಮೂರ್ತಿಕರಣದೆಡೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಅಂತಿಮವಾಗಿ ಭಾರತೀಯ ಗ್ರಂಥಗಳಿಂದ ಆಯ್ದುಕೊಂಡ ತಂತ್ರ-ಮಂತ್ರಗಳ ಅಂಶಗಳನ್ನು ಒಟ್ಟುಗೂಡಿಸಿಕೊಂಡರು.[೧೫][೧೬][೧೭] ಅವರ ಸಮಕಾಲೀನರು ರೂಪಾಕೃತಿಗಳ ರಚನೆಯಲ್ಲಿ ತೊಡಗಿದರೆ, ರಾಝಾ ೧೯೪೦ರ ಹಾಗು ೫೦ರಲ್ಲಿ ಕಂಡುಬರುತ್ತಿದ್ದ ಭೂದೃಶ್ಯಗಳ ರಚನೆಯ ಬಗ್ಗೆ ಗಮನ ಹರಿಸಿದರು, ಇದು ಭಾಗಶಃ ಫ್ರಾನ್ಸ್ ಗೆ ಅವರ ಸ್ಥಳಾಂತರದಿಂದ ಸ್ಪೂರ್ತಿ ಪಡೆದಂತಿದೆ.

ಅವರು ಫ್ರೆಂಚ್ ಕಲಾವಿದೆ ಜನೈನ್ ಮೊಂಗಿಲ್ಲೆಟ್ ರನ್ನು, ೧೯೫೯ರಲ್ಲಿ ಮದುವೆಯಾದರು, ಹಾಗು ಮೂರು ವರ್ಷಗಳ ಬಳಿಕ, ೧೯೬೨ರಲ್ಲಿ, USAನ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾದರು.[೧೮] ರಾಝಾ ಆರಂಭದಲ್ಲಿ ಫ್ರಾನ್ಸ್ ನ ಹಳ್ಳಿಗಾಡಿನ ಜೀವನದ ಬಗ್ಗೆ ಆಕರ್ಷಿತರಾದರು. ಎಗ್ಲಿಸೆ , ಈ ಸರಣಿಯ ಒಂದು ಭಾಗವಾಗಿದ್ದು, ಕಾಲದ ಜೊತೆಗೆ ಮುಂದುವರೆಯುತ್ತಿರುವ ಭೂಪ್ರದೇಶದ ಚಿತ್ರಣದ ಜೊತೆಗೆ ಈ ಪ್ರದೇಶದ ಕಣ್ಸೆಳೆಯುವ ಹಳ್ಳಿಗಾಡಿನ ಚಿತ್ರಣವನ್ನು ಸೆರೆಹಿಡಿಯುತ್ತದೆ. ಕಗ್ಗತ್ತಲ ರಾತ್ರಿಯಲ್ಲಿ ಕಂಡುಬರುವ ಮಸಿ ಬಣ್ಣದ ನೀಲಿ ಆಕಾಶದಿಂದ ಆವರಿಸಲ್ಪಟ್ಟ, ಸದ್ದುಗದ್ದಲದಿಂದ ಕೂಡಿದ ಚರ್ಚ್ ನ್ನು ಚಿತ್ರಿಸಲು, ರಾಝಾ ಭಾವಪೂರಿತ ಕುಂಚದ ಗೆರೆಗಳನ್ನು ಬಳಸುವುದರ ಜೊತೆಗೆ ಬಣ್ಣದ ಗಾಢ ಲೇಪನವನ್ನು, ಭಾವೋತ್ತೇಜಕ ಸಾಧನಗಳನ್ನು ಬಳಸುತ್ತಾರೆ. ಇದು ನಂತರ ೧೯೭೦ರಲ್ಲಿ ಅವರ ಚಿತ್ರಿಸಿದ ಅಮೂರ್ತಿಕರಣಗಳ ಬಗ್ಗೆ ಸೂಕ್ಷ್ಮ ಸಂಕೇತಗಳನ್ನು ನೀಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

'ಬಿಂದು' ಹಾಗು ಅದರಾಚೆ[ಬದಲಾಯಿಸಿ]

ರಾಝಾ ತಮ್ಮದೇ ಕೃತಿಗಳಿಂದಾಗಿ ೧೯೭೦ರ ಹೊತ್ತಿಗೆ ಹೆಚ್ಚು ಅತೃಪ್ತಿ ಹಾಗು ಅಶಾಂತಿಗೆ ಒಳಗಾದರು; ಅದರೊಂದಿಗೆಯೇ ತಮ್ಮ ಕೃತಿಗಳಲ್ಲಿ ಒಂದು ಹೊಸ ಸಂಚಲನೆ ಹಾಗು ಆಳವಾದ ಯಥಾರ್ಥತೆಯನ್ನು ಹುಡುಕಲು ಪ್ರಯತ್ನಿಸಿದರು. ಜೊತೆಗೆ ತಾವೇ ಕರೆಯುತ್ತಿದ್ದ 'ಪ್ಲ್ಯಾಸ್ಟಿಕ್ ಕಲೆ'ಯಿಂದ ದೂರವುಳಿಯಲು ನಿರ್ಧರಿಸಿದರು. ಭಾರತಕ್ಕೆ ಅವರು ನೀಡುತ್ತಿದ್ದ ಭೇಟಿ, ಅದರಲ್ಲೂ ವಿಶೇಷವಾಗಿ ಅಜಂತಾ - ಎಲ್ಲೋರಾ ಗುಹೆಗಳು, ಬನಾರಸ್, ಗುಜರಾತ್ ಹಾಗು ರಾಜಸ್ಥಾನಕ್ಕೆ ಅವರ ಪ್ರವಾಸಗಳು, ಅವರ ಮೂಲವನ್ನು ಅರಿಯುವಂತೆ ಮಾಡಿದವು. ಜೊತೆಗೆ ಭಾರತೀಯ ಸಂಸ್ಕೃತಿ ಹೆಚ್ಚು ನಿಕಟವಾಯಿತು.ಅದರ ಬಗ್ಗೆ ಹೆಚ್ಚು ತಿಳಿಯುವಂತೆಯೂ ಮಾಡಿತು. ಇದರ ಪರಿಣಾಮವಾಗಿ ಮೂಡಿಬಂದದ್ದೇ 'ಬಿಂದು',[೧೯] ಇದು ಒಂದು ವರ್ಣಚಿತ್ರಕಾರನಾಗಿ ಅವರ ಮರುಹುಟ್ಟನ್ನು ಸೂಚಿಸುತ್ತದೆ.[೨೦] ಹೀಗೆ ಜನ್ಮತಾಳಿದ ಬಿಂದು ೧೯೮೦ರಲ್ಲಿ ಅನಾವರಣಗೊಂಡಿತು; ತಮ್ಮ ಕೆಲಸವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿತು. ಜೊತೆಗೆ ಅವರ ಕೃತಿಗಳಲ್ಲಿ ಭಾರತದ ಬಗ್ಗೆ ಹೊಸ ದೃಷ್ಟಿಕೋನ ಹಾಗು ಭಾರತೀಯ ಜನಾಂಗೀಯತೆಯ ಬಗೆಗಿನ ವಿವರಣೆಯೂ ಕಂಡುಬಂದಿತು. 'ಬಿಂದು'ವಿನ ಅನಾವರಣದ ಹಿಂದಿರುವ ಕಾರಣಗಳಲ್ಲಿ, ಅವರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಭಾವವೂ ಒಂದಾಗಿದೆ. ಇವರ ಶಿಕ್ಷಕರಾಗಿದ್ದವರೊಬ್ಬರು, ರಾಝಾರು ಎದುರಿಸುತ್ತಿದ್ದ ಏಕಾಗ್ರತೆಯ ಕೊರತೆಯನ್ನು ಗಮನಿಸಿ, ಕಪ್ಪು ಹಲಗೆಯ ಮೇಲೆ ಸಣ್ಣ ಚುಕ್ಕೆಯನ್ನು ಇಟ್ಟು ಅದನ್ನು ತದೇಕಚಿತ್ತದಿಂದ ಗಮನಿಸಲು ಹೇಳುತ್ತಿದ್ದರು.[೨೧]

'ಬಿಂದು'ವಿನ ಅನಾವರಣದ ನಂತರ(ಒಂದು ಬಿಂದು ಅಥವಾ ಶಕ್ತಿಯ ಮೂಲ), ಅವರು ಮುಂದಿನ ದಶಕಗಳಲ್ಲಿ ತಮ್ಮ ವಿಷಯಾಧಾರಿತ ರಚನೆಗಳಿಗೆ ಇದರಿಂದಾಗಿ ಹೊಸ ಆಯಾಮ ನೀಡಿದರು. ಜೊತೆಗೆ ತ್ರಿಭುಜ ವನ್ನು (ತ್ರಿಕೋಣ) ಆಧರಿಸಿದ ರಚನೆಗಳು, ಕಾಲ ಹಾಗು ಅಂತರಗಳ ಬಗೆಗಿರುವ ಭಾರತೀಯ ಕಲ್ಪನೆಗಳನ್ನು ಎತ್ತಿ ಹಿಡಿದವು. ಇದರ ಜೊತೆಗೆ 'ಪ್ರಕೃತಿ'-'ಪುರುಷ'(ಸ್ತ್ರೀ ಹಾಗು ಪುರುಷ ಶಕ್ತಿ), ಅಭಿವ್ಯಕ್ತಿ ಪಂಥದಿಂದ ಅಮೂರ್ತಿಕರಣ ಹಾಗು ಗಂಭೀರತೆಯೆಡೆಗೆ ಅವರ ಪರಿವರ್ತನೆಯು ಪೂರ್ಣಗೊಂಡಿತು.[೧೫]

"My work is my own inner experience and involvement with the mysteries of nature and form which is expressed in colour, line, space and light".
- S. H. Raza

ಅವರ ಮುಂಚಿನ ಭೂದೃಶ್ಯಗಳಲ್ಲಿ ಕಂಡುಬರುತ್ತಿದ್ದ ಬಣ್ಣದೊಂದಿಗೆ ಪ್ರತಿಬಿಂಬಿಸುತ್ತಿದ್ದ ವಿಶಿಷ್ಟ ಶಕ್ತಿಯು ಇದೀಗ ಹೆಚ್ಚು ಸೂಕ್ಷ್ಮಗೊಂಡಿತು. ಆದರೆ ಸಮಾನವಾಗಿ, ಹೆಚ್ಚಲ್ಲದಿದ್ದರೂ ಕ್ರಿಯಾಶಕ್ತವಾಯಿತು. ರಾಝಾ, ಅಭಿವ್ಯಕ್ತಿವಾದದ ಭೂದೃಶ್ಯ ಚಿತ್ರರಚನೆಯನ್ನು ಜ್ಯಾಮಿತೀಯ ಅಮೂರ್ತಿಕರಣ ಹಾಗು 'ಬಿಂದು'ವಿನ ರಚನೆಗಾಗಿ ಪರಿತ್ಯಜಿಸಿದರು.[೪] ರಾಝಾ, ಬಿಂದುವನ್ನು ಸೃಷ್ಟಿಯ ಮೂಲವೆಂದು ಗ್ರಹಿಸುತ್ತಾರೆ, ಜೊತೆಗೆ ಈ ಅಸ್ತಿತ್ವವು, ಶೈಲಿ ಹಾಗು ಬಣ್ಣಗಳ ಜೊತೆಯಲ್ಲಿ ಶಕ್ತಿ, ಶಬ್ದ, ಅಂತರ ಹಾಗು ಕಾಲದೆಡೆಗೆ ಮುನ್ನಡೆಯುತ್ತದೆ ಎಂದು ಭಾವಿಸುತ್ತಾರೆ.

ಇವರ ಕೃತಿಗಳು ೨೦೦೦ದಲ್ಲಿ ಮತ್ತೊಂದಿಷ್ಟು ಹೆಚ್ಚುಗಾರಿಕೆ ಕಂಡವು. ಭಾರತೀಯ ಪಾರಮಾರ್ಥಿಕತೆಯ ಮೇಲೆ ಅವರ ಹೆಚ್ಚಿದ ಸೂಕ್ಷ್ಮ ದೃಷ್ಟಿಕೋನ ಹಾಗು ಚಿಂತನೆಗಳು ಅವರ ಕೃತಿಗಳಲ್ಲಿ ಕಂಡುಬರುತ್ತಿದ್ದವು.ಜೊತೆಗೆ ಕುಂಡಲಿನಿ, ನಾಗಾಗಳು ಹಾಗು ಮಹಾಭಾರತದ ಮೇಲೆ ಅವರು ಚಿತ್ರಗಳನ್ನು ರಚಿಸಿದರು.[೧೯]

ರಾಝಾ'ಸ್ ರೂನ್ಸ್(ಹೆಗ್ಗುರುತುಗಳು): ವಿಷನ್ಸ್ ಆಫ್ ದಿ ಸೆಲ್ಫ್ ಸ್ವಪ್ನಾ ವೋರಾರವರಿಂದ

ಚಿತ್ರವನ್ನು ಅಡಿಬರಹಗಳ ಸಹಿತ ದೊಡ್ಡದಾಗಿ ನೋಡಲು ಸಣ್ಣ ಚಿತ್ರದ ಮೇಲೆ ಕ್ಲಿಕ್ಕಿಸಿ).

ಸಯದ್ ಹೈದರ್ ರಾಝಾರ ಹೆರಿಂಗ್ ಬೋನ್ ಚಾಪೆಯಂತಹ ಹೆಣಿಗೆಗಳ ಆಕೃತಿಯ ತ್ರಿಕೋಣಗಳು, ನೀಲಿ ಚಂದ್ರ, ಜ್ವಾಲೆಯ ಕಬಳಿಕೆ ಹಾಗು ಅಂತರ್ ದೃಷ್ಟಿಪಥಗಳು ಕಲ್ಪನಾತ್ಮಕ ಅನುಭವಗಳನ್ನು ಉಂಟುಮಾಡುತ್ತವೆ. ಭಾರತದ ಅಚ್ಚುಮೆಚ್ಚಿನ ರಾಝಾರು ಮಧ್ಯ ಭಾರತದಲ್ಲಿ ಜನಿಸಿ ಕಾಡುಗಳೊಂದಿಗಿನ ಒಡನಾಟ ಹೊಂದಿದ್ದರು. ಮಧ್ಯಪ್ರದೇಶವು ಸಮುದ್ರದಿಂದ ಬಹಳ ದೂರವಿದ್ದು, ಇದು ಬೆಟ್ಟಗಳನ್ನು ಹೊಂದಿದೆ. ಆದರೆ ಇಲ್ಲಿ ಎತ್ತರದ ಪರ್ವತಗಳಿಲ್ಲ; ಜೊತೆಗೆ ಇವುಗಳು ಬಹುತೇಕ ಬುಡಕಟ್ಟಿನ ಮಾಂಡಲಿಕರನ್ನು ಹೊಂದಿರುವುದರ ಜೊತೆಗೆ ಶಾಂತಿಯ ಸುದೀರ್ಘತರಂಗಗಳನ್ನೂ ಹೊಂದಿತ್ತು. ಬಾಲ್ಯದಲ್ಲಿ, ರಾಝಾ ರಾತ್ರಿಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಪ್ರಾಣಿಗಳನ್ನು ಹಾಗು ಆರ್ದ್ರವಾದ ಅರಣ್ಯಗಳ ಹಾಗು ನಿರಾರ್ದ್ರ ಕಾಡುಗಳ ಮೂಲಕ ಹಾರಾಡುತ್ತಿದ್ದ ಇರುಳ ಪಕ್ಷಿಗಳನ್ನು ಕಂಡಿರಬೇಕು. ಹೀಗಾಗಿ ಅವರ ಆರಂಭಿಕ ರಚನೆಗಳು ಮುಖ್ಯವಾಗಿ ಭೂದೃಶ್ಯಗಳೇ ಆಗಿರುತ್ತಿದ್ದವು. ಇದಾದ ಬಹಳ ಸಮಯದ ನಂತರ, ಅವರ ರಚನೆ, ಅಥವಾ ಧೈರ್ಯವಾಗಿ ಹೇಳುವುದಾದರೆ, ಅವರ ಹೆಜ್ಜೆಗುರುತು 'ಬಿಂದು' ಎಂಬ ಕೃತಿಯಾಗಿ ಪರಿಣಮಿಸಿತು. ಬಿಂದು; ಎಂಬುದು ಅನಂತತೆಯಲ್ಲಿ ಮಿನುಗುವ, ಅತ್ಯಂತ ಸೂಕ್ಷ್ಮ ಚುಕ್ಕೆ,ಮಿಂಚು, ಕಿಡಿ, ನೀಲಿ ಮುತ್ತು, ಇದರ ಮೂಲಕ ಚಿತ್ರಕಲೆಗಾರನ ಜಗತ್ತುಗಳು, (ಹಾಗು ರಾಝಾರ ಜಗತ್ತು), ಬಿಚ್ಚಿಕೊಳ್ಳುವುದರ ಜೊತೆಗೆ ಸುರುಳಿಯಾಕಾರದಲ್ಲಿ ಹಿಂದಕ್ಕೆ ಬರುತ್ತದೆ. ಶಕ್ತಿ ಹಾಗು ಕಾಲ ಮತ್ತು ಬ್ರಹ್ಮಾಂಡವು ಇದೇ ಬಿಂದುವಿನಿಂದ ಹೊರಹೊಮ್ಮಿತೆಂದು ಹಿಂದೂ ಧಾರ್ಮಿಕ ಚಿಂತನೆ ಹೇಳುತ್ತದೆ. ಬಹುಶಃ ಮೊದಲ ಬೆಳಕಿನ ಕಣ ಹಾಗು ಮೊದಲ ಧ್ವನಿ ಶಬ್ದವು ಈ ಅನಂತತೆಯಿಂದ ಬಂದಿರಬಹುದು.

ಹಿಂದೂಗಳು ಏಕಾಗ್ರತೆಗೆ ನೆರವಾಗಲು ಬಿಂದುವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅವರು ಶಾಲಾ ಬಾಲಕರಾಗಿದ್ದಾಗ ರಾಝಾರಿಗೆ ಸಹ, ಅವರ ಗುರುಗಳು ಭಿತ್ತಿಯ ಮೇಲಿರುವ ಬಿಂದುವನ್ನು ತದೇಕಚಿತ್ತದಿಂದ ನೋಡಲು ಹೇಳುತ್ತಿದ್ದರು. ಆಗ ಇದು ಬಾಲಕನ ಚಂಚಲ ಮನಸ್ಸಿನ ನಿಯಂತ್ರಣಕ್ಕೆ ನೆರವಾಯಿತು. ಜೊತೆಗೆ ಸಂಭಾವ್ಯವಾಗಿ ಅದರ ಪ್ರಭಾವವನ್ನೂ ಅವರು ಮರೆಯಲಿಲ್ಲ. ವಿವೇಚಿಸುವ ಉತ್ಕೃಷ್ಠ ಆಲೋಚನೆ ಹಾಗು ಸೃಜನಾತ್ಮಕ ಪ್ರತಿಭೆಗಳು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಯಾವಾಗಲೂ ಆಸಕ್ತವಾಗಿರುತ್ತವೆ. ಅವು ಕಲ್ಪನೆಗಳನ್ನು ಅನುಭವಿಸುತ್ತವೆ. ಅಂತರಾತ್ಮದ ಯಾನವನ್ನು ಸುಖಿಸಿ ಆಸ್ವಾದಿಸುತ್ತವೆ, ಹಾಗು ಆ ಆತ್ಮಗತ ಚೇತನವನ್ನು ಸ್ಪರ್ಶಿಸುತ್ತವೆ. ಅವುಗಳು ಮೆದು ಮಾತುಗಳಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತವೆ: ಈ ಚೇತನಗಳು, ನಾನು ಎಲ್ಲಿಂದ ಬಂದೆ, ಹೇಗೆ ಮತ್ತು ಯಾವಾಗ ಬಂದೆ ಎಂಬುದನ್ನು ಅವು ತಮ್ಮ ಅರಿವಿಗೆ ಸ್ಪಷ್ಟಪಡಿಸುವ ದಿನ ಬಂದೇ ಬರುತ್ತದೆಯೇ? ಭಾರತೀಯರು ಸಾಮಾನ್ಯವಾಗಿ ಆಲೋಚನಾ ಮಗ್ನರಾಗುತ್ತಾರೆ: ಇವೆಲ್ಲವನ್ನೂ ಜೀವನದಲ್ಲಿ ಅನುಭವಿಸಲು ಸಾಧ್ಯವೇ? ಯಾರೊಬ್ಬರಿಗಾದರೂ ಮಾಂತ್ರಿಕತೆ, ರಸವಿದ್ಯೆಯನ್ನು ಹೇಗೆ ಪ್ರಮಾಣೀಕರಿಸಬೇಕೆಂಬುದು ತಿಳಿದಿದೆಯೇ? ಒಬ್ಬರ ಧ್ಯಾನಾಸಕ್ತದ ಕಥೆಗಳನ್ನು ಹೇಗೆ ಹೇಳಬಹುದು? ಮೌನದ ಬಗ್ಗೆ ಹೇಗೆ ಮಾತನಾಡಬಹುದು?

ರಾಝಾ ಈ ಎಲ್ಲಾ ತರಹದ ಅನ್ವೇಷಣೆಯಲ್ಲಿದ್ದರೆಂದು ಕಂಡುಬರುತ್ತದೆ. ಆತ್ಮಶೋಧನೆ ಹಾಗು ಅಂತಿಮವಾಗಿ ನಾಯಕನ ಪ್ರಯತ್ನದ ಅನ್ವೇಷಣೆಯು ಯಾವಾಗಲೂ ಶಾಶ್ವತ ಪರಮಾನಂದವನ್ನು ತರುತ್ತದೆ. ಅವರ ಕೃತಿಗಳು ಜೀವ ಹಾಗು ಸಂಕೇತಗಳ ಹುಟ್ಟನ್ನು ಪ್ರತಿನಿಧಿಸುತ್ತವೆ. ಇದನ್ನು ಬುಡಕಟ್ಟಿನ ವರ್ಣಚಿತ್ರಕಾರರು ಹಾಗು ಅತ್ಯಂತ ಸುಸಂಸ್ಕೃತ ಭಾರತೀಯ ತತ್ತ್ವಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ಸಹಸ್ರಾರು ವರ್ಷಗಳಿಂದ ಅಧ್ಯಯನ ನಡೆಸಿದ್ದಾರೆ. ಇದರೆಡೆಗೆ ಆಕರ್ಷಿತರಾಗಿ, ಪರ್ಯಾಲೋಚಿಸಿ ಸತತ ಚಿಂತನೆ ನಡೆಸಿದ್ದಾರೆ ಎಂಬುದು ಅವರ ಬಲವಾದ ನಂಬುಗೆಯಾಗಿದೆ. ಇವರ ಕೃತಿಗಳು ಆಧುನಿಕ ತಂತ್ರ-ಮಂತ್ರಗಳ ಮಾದರಿಯನ್ನು ಅನುರಣಿಸುತ್ತವೆ. ಆಶ್ಚರ್ಯ, ಆನಂದ ಹಾಗು ವೀಕ್ಷಕನಲ್ಲಿ ಧ್ಯಾನಾಸಕ್ತಿಯನ್ನು ಉಂಟುಮಾಡುತ್ತವೆ. ನನಗೆ, ಇದು ಕೇವಲ ಶಾಂತಿಯಲ್ಲ; ಆದರೆ ಇದೊಂದು ಕಂಪನ, ಮಿಡಿತ, ಸ್ಪಂದನೆ ಹಾಗು ಶಾಂತಿಯುತ ಆವಾಹನೆ ಎನಿಸಿದೆ. ಕಾಶ್ಮೀರಿ ಶಿವನ ದರ್ಶನಕ್ಕಾಗಿ ತವರಿಗೆ ಮರಳಿ ಬಂದ ಸಂದರ್ಭ ನನಗೆ ಪ್ರಿಯವೆನಿಸಿದೆ. ತ್ರಿಕೋಣಗಳಲ್ಲಿ ಶಿವನ ಆ ಕ್ಷಣದ ದರ್ಶನ, ಬಿಂದುಗಳು, ಭಾವಭಂಗಿಯ ಆರೋಹಣ ಮತ್ತು ಅವರೋಹಣ ಇಂದೂ ಮನಸ್ಸಿನಾಳದಲ್ಲಿ ಅಚ್ಚೊತ್ತಿದಂತಿವೆ. ಹೌದು, ಸೃಷ್ಟಿ, ಲಯ, ರಕ್ಷಣೆಯ ಎಂಬ ಅಸಾಧಾರಣ ಪವಾಡಗಳಿವೆ, ಎಲ್ಲರೂ ಇದರ ಬಗ್ಗೆ ಅರಿತಿದ್ದಾರೆ. ರಾಝಾ ಅವರು ಹೇಳುವ ಇತರ ಎರಡು ಅಸಾಧಾರಣ ಪವಾಡಗಳೆಂದರೆ ನಿಯಂತ್ರಣ,ರಮ್ಯತೆ ಹಾಗು ಮನಮೋಹಕತೆಗಳು ಇದರಲ್ಲಿವೆ. ಇದರಿಂದ ನಮಗೆ ದೃಢವಾಗುವುದೇನೆಂದರೆ, ಒಂದು ಸಣ್ಣ ಬಿಂದು ಆರಂಭಗೊಂಡು ಅದೇ ಕೊನೆಗೊಳ್ಳುತ್ತದೆ. ಅದಲ್ಲದೇ ಪ್ರಕೃತಿಯ ವಿಸ್ಮಯದಂತೆ ಮತ್ತೆ ಆರಂಭಗೊಳ್ಳುತ್ತದೆ. ಇದು 'ನಮ್ಮ ಇಚ್ಛೆ ಎಂಬ ಬೆಚ್ಚಗಿನ ಅಪೇಕ್ಷೆಯ ಮುಖಾಂತರ ಉಸಿರಾಡುತ್ತದೆ, … ಭೂಕಂಪ, ಗಾಳಿ ಹಾಗು ಬೆಂಕಿಯ ಮೂಲಕ ಮಾತನಾಡುತ್ತದೆ, ಓಹ್, ಇಷ್ಟಾದರೂ ಇದು ಪ್ರಶಾಂತತೆಯ ಸಣ್ಣ ದನಿ' ಎಂಬುದು ಕಲಾರಾಧಕನ ಉದ್ಘಾರವಾಗಿದೆ. ಹೌದು, ಅವರ ಕೃತಿಯನ್ನು ಮೌನವಾಗಿ ವೀಕ್ಷಿಸಿದಾಗ, ತಲೆಬಾಗಿಸಿ ಪ್ರಾರ್ಥಿಸಬೇಕೆನಿಸುತ್ತದೆ. ಜೊತೆಗೆ ಇತರ ಮಿಡಿತ, ಇತರ ಆಯಾಮಗಳನ್ನು ನಿಧಾನವಾಗಿ ಅನುಭವಿಸಬೇಕೆನಿಸುತ್ತದೆ. ಹೋಳಿ ಬಣ್ಣದಿಂದ ಪವಿತ್ರಗೊಂಡ ಸಣ್ಣ ಭಕ್ತಸಮುದಾಯದ ದೇವಾಲಯಗಳು, ಧರ್ಮಗಳು ಹುಟ್ಟುವ ಮುಂಚೆಯೇ ಅಸ್ತಿತ್ವಕ್ಕೆ ಬಂದಿವೆ, ಇವುಗಳು ಇವರ ವರ್ಣಚಿತ್ರಗಳನ್ನು ಎತ್ತಿ ಹಿಡಿಯುವಂತಿವೆ. ಬಹುಶಃ ಇವೆಲ್ಲವೂ ಆರಂಭದ ಸಂಕೇತಗಳು: ತ್ರಿಕೋಣಗಳು, ಸ್ತ್ರೀ-ಪುರುಷ, ದೇವರು, ಮಾನವನಿಂದ ದೇವರಿಗೆ ಅಲಂಕಾರ ಹಾಗು ಪುನಃ ಸ್ವಸ್ಥಿತಿ, ಆರು ತೀಕ್ಷ್ಣವಾದ ಬಿಂದುಗಳು, ವಿಶುದ್ಧ ಚಕ್ರ. ರಾಝಾರಿಂದ ಪ್ರವಹಿಸಿದ ಯಥಾರ್ಥತೆಯ ಈ ಮುಂದುವರೆಯುತ್ತಿರುವ ನಿರೂಪಣೆಗಳಿಗೆ ಹೊಸತಾದ ಹಾಗು ಅಷ್ಟೇನೂ ಹೊಸತಲ್ಲದ ಆಶ್ರಯ ತಾಣದಂತಹ ಮಂದಿರಗಳ ಅಗತ್ಯವಿದೆ. ಪರಿಭಾವನೆಯ ಸುರುಳಿ ವಿನ್ಯಾಸ, ಹಾಗು ಭಿತ್ತಿಗಳ ಮೇಲೆ ಜಾಗರೂಕತೆಯಿಂದ ಚಿತ್ರಿತ ನೀಲಿ ಜ್ವಾಲೆಗಳು ಆಹ್ಲಾದಕರ ಶಾಂತಿ ಹಾಗು ಒಳದೃಷ್ಟಿಯನ್ನು, ಎಲ್ಲವೂ ಸಮರ್ಪಕವಾಗಿದ್ದಾಗ ಹಾಗು ವರ್ಣಿಸಲು ಶಬ್ದಗಳೇ ಇಲ್ಲದಿದ್ದಾಗ ಉಂಟುಮಾಡುತ್ತವೆ. ಶ್ರೀಮಂತಿಕೆ ತುಂಬಿದ ಒಂದು ಮನೆಯ ವಾತಾವರಣಗಿಂತ ಹೆಚ್ಚಾಗಿ, ದೂರದಲ್ಲಿರುವ ಆಹ್ಲಾದಕರ ಗ್ಯಾಲರಿಯಲ್ಲಿ ಮೂಡಿದ ಅವರ ಕೃತಿಯು ಉತ್ತಮವಾಗಿ ಕಾಣಿಸುತ್ತದೆ.ಇದು ಮನಸ್ಸಿಗೆ ಅನಿಸುತ್ತದೆ, ಒಂದು ಕಲ್ಲಿನ ದೇವಾಲಯದಲ್ಲಿ ನಮ್ಮೊಳಗೇ ಮೂಡುವ ಪರಿಭಾವನೆ ಹಾಗು ದರ್ಶನ ಯಾತ್ರೆ ಮುಗಿಸಿಕೊಂಡು ಇಳಿಜಾರಿನಲ್ಲಿ ಶಾಂತಿಯಿಂದ ಹಿಂದುರುಗಿದ ಭಾವನೆ ಮೂಡುತ್ತದೆ. ಆರಂಭದಲ್ಲಿ ಒಂದು ಚುಕ್ಕೆ, ಹೇಳಲಾಗದ ಶಬ್ದ, ಅನುಭವಕ್ಕೆ ನಿಲುಕದ, ನೋಡಲಾಗದ ಕಂಪನ ಹಾಗು ನಾವು, ದೇವರುಗಳು ಬೆಳಕಿನ ಜಾಗದಲ್ಲಿ ಕಂಡುಬರುತ್ತೇವೆ. ಅಲ್ಲದೇ ಅದ್ಭುತವಾದ ಜಗತ್ತಿನೊಳಗೆ ಹುಟ್ಟುತ್ತೇವೆ ಹಾಗು ಧೂಳಿನ ಒಂದು ಕಣದಿಂದ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ, ಒಂದು ಮಿನುಗುವ ಮೌನದ ಆವಾಹನೆಯಾಗಿರುತ್ತದೆ.

ಈ ಪ್ರಯಾಣವನ್ನು ನಾವೆಲ್ಲರೂ ಮಾಡುತ್ತೇವೆ, ಕೆಲವೊಂದು ಬಾರಿ ಅದ್ಭುತ ಸಾಧಕ ವಸ್ತುವಿನೊಂದಿಗೆ ಮಾಡಿದರೆ, ಕೆಲವೊಂದು ಬಾರಿ ಭಯದಿಂದ ಹಾಗು ಏಕಾಂಗಿಯಾಗಿ ಮಾಡುತ್ತೇವೆ. ಇನ್ನು ಕೆಲವೊಂದು ಬಾರಿ ಪ್ರಶಾಂತವಾಗಿ ಹಾಗು ಚಿಂತನಾಶೀಲತೆಯಿಂದ ಮಾಡುತ್ತೇವೆ. ಮಾಗಿಯ ಮಾದರಿಯೇ, ಎಸ್ ಎಚ್ ರಾಝಾರ ಮಾದರಿ

ಅವರ ಭಾರತೀಯ ತೈಲಚಿತ್ರಗಳು ಹಾಗು ಆರಂಭಿಕ ಫ್ರೆಂಚ್ ಚಿತ್ರಗಳು ಯಥಾರ್ಥವಾಗಿರುತ್ತಿದ್ದವು, ಕಣ್ಣಿಗೆ ಕಾಣುವ ಜಗತ್ತಿನ ಮಾದರಿ, ದಿನನಿತ್ಯವೂ ನಾವು ಕಾಣುವ ದೃಶ್ಯಗಳಿಗೆ ಸದೃಶವಾಗಿರುತ್ತದೆ. ನಂತರದಲ್ಲಿ ಅವರು ಬಿಂದುವನ್ನು ಗುರುತಿಸಿ ಅದನ್ನು ಚಿತ್ರಿಸಿದರು. ಜೊತೆಗೆ ನಂತರದಲ್ಲಿ ವೈಟ್ ಪೀರಿಯಡ್ ಗೆ(ಜಿಂಕ್ ಬಿಳಿ ಬಣ್ಣದ ಸಮೃದ್ಧ ಬಳಕೆ) ಪ್ರವೇಶಿಸಿದರು. ಅವರ ಪ್ರಾಥಮಿಕ ಬಣ್ಣಗಳಾದ(ನೀಲಿ ಜ್ವಾಲೆ) ಬೆಂಕಿ ಹಾಗು ಸಮುದ್ರದ (ನೀಲಿ)ಬಣ್ಣವು ಬಾಹ್ಯ ಜಗತ್ತಿನ ಬಣ್ಣವಾಗಿದೆ, ಬೆಳಕು; ನಿರೂಪಣಾ ವಿಷಯವಾಗಿದ್ದರೆ ಗಾಢ ನೀಲಿ ಹಾಗು ಹಳದಿ ಬಣ್ಣಗಳ ಬಳಕೆಯಾಗುತ್ತಿತ್ತು. ಹೆಚ್ಚಿನ ಭಾರತೀಯ ಪ್ರವಾಸಿಗಳ ಮಾದರಿ, ರಾಝಾ ಪೂರ್ವ ಹಾಗು ಪಶ್ಚಿಮಗಳ ನಡುವೆ ತಮ್ಮ ಕೃತಿಗಳ ಮೂಲಕ ನಿರಾತಂಕವಾಗಿ ಹಾಗು ನಿಕಟವಾಗಿ ಸಂಚರಿಸುತ್ತಾರೆ, ನಾವು ಇತರ ಸ್ಥಳಗಳನ್ನು ಕೇವಲ ನಮ್ಮ ಮನೆ ಹಾಗು ನಮ್ಮದೇ ವಿಸ್ತರಣೆಗಳಾಗಿ ನೋಡುತ್ತೇವೆ.ಕಲಾವಿದ ಹಾಗಾಗಲಾರನು.

ರಾಝಾರ "ಸಿಟಿಸ್ಕೇಪ್"(೧೯೪೬) ಹಾಗು "ಬಾರಾಮುಲ್ಲ ಇನ್ ರುಯಿನ್ಸ್"(೧೯೪೮) ಹಿಂದೂಸ್ತಾನದ ವಿಭಜನೆಯಿಂದ ಅವರಿಗುಂಟಾದ ನೋವು ಹಾಗು ದುಖಃವನ್ನು ಹಾಗು ದಂಗೆಯ ಸಮಯದಲ್ಲಿ ಮುಂಬಯಿನಲ್ಲಿ ಮುಸ್ಲಿಮರ ವೇದನೆಯನ್ನು ನಿರೂಪಿಸುತ್ತದೆ. ಅಲ್ಪಸಂಖ್ಯಾತರಾಗಿ ಜನಿಸುವುದು, ಖಂಡನೆಗೆ ಒಳಗಾಗುವುದು ಹಾಗು ಅದನ್ನು ಮೌನವಾಗಿ ಸಹಿಸಿಕೊಳ್ಳುವುದು ಜಗತ್ತಿನಾದ್ಯಂತ ಹಲವು ಕಡೆಗಳಲ್ಲಿ ಪ್ರತಿನಿತ್ಯವೂ ಕಂಡುಬರುತ್ತದೆ. ರಾಝಾರ ವರ್ಣಚಿತ್ರವು ಜನರಿಂದ ದೋಚಲ್ಪಟ್ಟ ಪಟ್ಟಣಗಳು, ಕಟ್ಟಡಗಳಿಂದ ಭರಿತವಾದ ಪ್ರದೇಶಗಳು ಹಾಗು ಕೇಳಿಬರದ ಪಕ್ಷಿಗಳ ಕಲರವವನ್ನು ಪ್ರದರ್ಶಿಸುತ್ತದೆ. ಏಕಾಂಗಿಯಾದ ನಗರದೃಶ್ಯಗಳು, ಬಹುಶಃ ದೆವ್ವಗಳಿಂದ ನಿಬಿಡವಾಗಿರುತ್ತವೆ, ನಿಶಬ್ದವಾಗಿ ಸತ್ತ ಅಸ್ತಿಪಂಜರಗಳನ್ನು ಪ್ರಶ್ನಿಸುತ್ತವೆ: ಈಗ ಹೇಳಿ, ಈಗಲೂ ಕೂಡ ನೀವೊಬ್ಬ ಮುಸ್ಲಿಮ್ಮೆ? ಈಗಲೂ ನೀವೊಬ್ಬ ಹಿಂದುವೇ?

ದೇಶದ ವಿಭಜನೆಯ ಸಮಯದಲ್ಲಿ ಹಾಗು ಅದರ ನಂತರ ನಮ್ಮೆಲ್ಲಾ ವೇದನೆಯ ಬಗ್ಗೆ ಮಾತನಾಡುತ್ತಾರೆ, "ಒಂದು ಕಡೆಯಲ್ಲಿ ರಾಷ್ಟ್ರದಲ್ಲಿ ವಿಷಾದ ಸಂಗತಿ ನಡೆದಿತ್ತು. ನಮ್ಮ ಕುಟುಂಬದ ವೈಯಕ್ತಿಕ ಇತಿಹಾಸವಾಗಿ, ೧೯೪೭ರಿಂದ ಹಿಡಿದು ೧೯೪೮ರವರೆಗಿನ ನಿರ್ಣಾಯಕ ವರ್ಷಗಳು ವಿಷಾದ ಹಾಗು ಬೇರ್ಪಡುವಿಕೆಯೊಂದಿಗೆ ಕೂಡಿವೆ. ಜುಲೈ ೧೯೪೭ರಲ್ಲಿ ಬಾಂಬೆಯಲ್ಲಿರುವ ನಮ್ಮ ಮನೆಯಲ್ಲಿ ನಮ್ಮ ತಾಯಿ ನಿಧನರಾದರು; ಅದರ ಮರುವರ್ಷ ೧೯೪೮ರಲ್ಲಿ, ನಮ್ಮ ತಂದೆ ಮಾಂಡ್ಲಾದಲ್ಲಿ ನಿಧನರಾದರು. ದಂಗೆಗಳು ಹಾಗು ಹತ್ಯೆಗಳು ಹಾಗು ವೈಮನಸ್ಯದಿಂದ ಕೂಡಿದ ಈ ಅವಧಿಯೊಂದಿಗೆ ತಳುಕು ಹಾಕಿದರೆ ನನ್ನ ವೈಯಕ್ತಿಕ ಚರಿತ್ರೆಯಲ್ಲಿ ಹಾಗು ನನಗೆ ವೈಯಕ್ತಿಕವಾಗಿ ನಷ್ಟ ಉಂಟಾಗಿದೆ."(ಗೀತಿ ಸೇನ್ ರ ಬಿಂದು, ಸ್ಪೇಸ್ ಅಂಡ್ ಟೈಮ್ ಇನ್ ರಾಝಾ'ಸ್ ವಿಷನ್ ನಲ್ಲಿ ಉಲ್ಲೇಖಿತವಾಗಿದೆ). ಪ್ಯಾರಿಸ್ ನಲ್ಲಿನ ಅವರ ವರ್ಣಚಿತ್ರಗಳು "ಬ್ಲಾಕ್ ಸನ್"(೧೯೫೩), "ಹೌಟ್ ಡೆ ಕಾಜ್ಞೆಸ್" (೧೯೫೧) ಮನೆಗಳು ಹಾಗು ಕೆಲಸದ ಸ್ಥಳಗಳು ತೀರ ಸಮೀಪದಲ್ಲಿದ್ದು ಶಾಖದಿಂದ, ಅಸೌಕರ್ಯದಿಂದ ಹಾಗು ಏಕಾಂತದಿಂದ ಕೂಡಿರುತ್ತಿದ್ದವು. ಫ್ರಾನ್ಸ್ ಇವರಿಗೆ ಕುಶಲತೆಗಳನ್ನು ಕಲಿಸುವುದರ ಜೊತೆಗೆ ಸ್ಥಳಾವಕಾಶವನ್ನೂ ನೀಡಿತು. ಆದಾಗ್ಯೂ ಅವರ ಕೆಲಸದಲ್ಲಿ ಭಾರತೀಯ ಛಾಪು ಎದ್ದು ಕಾಣುತ್ತಿದ್ದು ಅದು ಸ್ಪಷ್ಟವಾಗಿ ಭಾರತೀಯವಾಗೇ ಉಳಿಯಲಿದೆ. ವರ್ಷಾಂತರಗಳಲ್ಲಿ ಅವರ ಹೊಸ ಕೃತಿಗಳು, ಅಮೂರ್ತ ಜೀವಿಯ ಲೂನಾರ್ ಹಾಗು ಸೋಲಾರ್ ಸ್ಕೇಪ್, ಅಪರಿವರ್ತನೀಯ ವರ್ತುಲ, ಚುಕ್ಕೆಗಳು, ತ್ರಿಕೋಣಗಳು ಹಾಗು ಪರಿಭಾವನೆ, ಪ್ರಶಾಂತತೆ, ಜ್ವಾಲೆಯ ಕೆನ್ನಾಲಿಗೆಗಳನ್ನು ಉಂಟುಮಾಡುತ್ತಿರುವುದನ್ನು ಪ್ರದರ್ಶಿಸುತ್ತವೆ. ಯಾವಾಗಲೂ ಎಲ್ಲರೂ ಪ್ರಳಯವನ್ನು ಸ್ಮರಿಸುತ್ತಾರೆ, ಹಾಗು ಪ್ರತಿದಿನವೂ ಬಹುಶಃ ಅಂತಿಮ ತೀರ್ಪಿನ ದಿನವಾಗಿರುತ್ತದೆ.(ಪ್ರಳಯದ ತರುವಾಯ ದೇವರು ನಡೆಸುವ ಮಹಾವಿಚಾರಣೆಯ ದಿನ).

ಸಯದ್ ಹೈದರ್ ರಾಝಾರ ಕಲೆ ಇಪ್ಪತ್ತರ ದಶಕಗಳಲ್ಲಿ ಬೇರುಬಿಟ್ಟಿತು, ಈ ಅವಧಿಯಲ್ಲಿ ಹಿಂದೂಸ್ತಾನವು ವಸಾಹತಿಗೆ ಒಳಪಟ್ಟಿತ್ತು, ಇದು ಸಂಪೂರ್ಣವಾಗಿ ದುರ್ಬಲಗೊಂಡು ಜನರು ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದರು. ಕಲಾವಿದರು ತಮ್ಮ ಸರಿಯಾದ ಮಾರ್ಗವೆಂದು ಹೇಳಲಾಗುತ್ತಿದ್ದ ವಿಕ್ಟೋರಿಯನ್ ಮಾರ್ಗ ಹಾಗು ಸ್ಲೇಡ್ ಸ್ಕೂಲ್ ನ ವಿಧಾನದಿಂದ ಬೇಸತ್ತಿದ್ದರು. ಬುಡಕಟ್ಟಿನ ಸಂಕೇತಗಳು, ಪ್ಯಾರಿಸ್ ನ ಕನಸುಗಳು, ಸ್ವಾತಂತ್ರ್ಯ ಹಾಗು ಬಣ್ಣಗಳ ಬಗೆಗಿನ ತತ್ತ್ವಗಳು, ಪ್ರೋಗ್ರೆಸ್ಸಿವ್ ಆರ್ಟ್ಸ್ ಗ್ರೂಪ್ ನಲ್ಲಿದ್ದ ರಾಝಾ ಹಾಗು ಇತರರು ವಸಾಹತು ನೆಲೆಯ ರಚನೆಗಳಿಂದ ಮುಕ್ತಗೊಂಡು ಆಧುನಿಕ ಭಾರತೀಯ ಕಲೆಯ ಹುಟ್ಟಿಗೆ ಕಾರಣರಾದರು. ಬ್ರಿಟಿಷರಿಂದ ಉಪೇಕ್ಷೆಗೆ ಒಳಪಟ್ಟಿದ್ದ ಪುರಾತನ ಕಲಾತಂತ್ರಗಳು ಹಾಗು ಸಂಕೇತಗಳು, ಮತ್ತೊಮ್ಮೆ ಭಾರತೀಯ ಕಲಾವಿದರ ರಚನೆಗಳಲ್ಲಿ ಕಂಡುಬರುವುದರ ಜೊತೆಗೆ ಹೊಸ ರೂಪವನ್ನು ಪಡೆದವು. ಅದೇ ವೇಳೆಗೆ ಕಲಾತಂತ್ರದ ಗುರುವೆಂದು ಫ್ರಾನ್ಸ್ ದೇಶವನ್ನು ಮನ್ನಣೆಗೆ ಪಾತ್ರ ಮಾಡಲಾಯಿತು.

ಎಸ್ ಎಚ್ ರಾಝಾ ಭಾರತಕ್ಕೆ ನಿಯಮಿತವಾಗಿ ಭೇಟಿ ನೀಡಿ ಭಾರತವನ್ನು ಸ್ಮರಿಸಿ ಇಲ್ಲಿನ ಬದುಕು, ಇಲ್ಲಿರುವ ಹಲವರ ಬದುಕಿಗಾಗಿ ಹಾರೈಸುತ್ತಾರೆ. ಹಲವು ಭಾರತೀಯರಿಗೆ, ಮುಖ್ಯವಾಹಿನಿ ಹಿಂದೂಗಳ ಕಲ್ಪನೆಗಳು ಹಾಗು ಮುಸ್ಲಿಮರ ನಂಬಿಕೆಗಳು, ವಿಶ್ವಾಸ ಹಾಗು ವಾಸ್ತವಿಕತೆಯ ಪ್ರತಿನಿತ್ಯದ ಅಂಶಗಳಾಗಿವೆ, ಒಬ್ಬರು ಮತ್ತೊಬ್ಬರಿಗೆ ಪರಕೀಯರಲ್ಲ. ಈ ರೀತಿಯಾಗಿ ರಾಝಾ, ಹುಸೈನ್, ಗುಲಾಂ ರಸೂಲ್ ಸಂತೋಷ್ ರಂತಹ ಮುಸ್ಲಿಮರು ಹಿಂದೂ ಸಂಕೇತಗಳನ್ನು ಸರಾಗವಾಗಿ ಹಾಗು ಸ್ವಾಭಾವಿಕವಾಗಿ ಬಳಕೆ ಮಾಡುತ್ತಾರೆ, ಇದನ್ನೇ ಅವರು ಪ್ರತಿನಿತ್ಯವೂ ಅನುಭವಿಸುತ್ತಾರೆ. ಇಲ್ಲಿ ಯಾರೂ ಅಪರಿಚಿತರಲ್ಲ ಅಥವಾ ಇಲ್ಲಿ ಯಾವುದೇ ವಿದೇಶಿ ವಿವಾದಗಳಿಲ್ಲ, ಇಲ್ಲಿ ಕೇವಲ ಜ್ಞಾನದ ಹಂಚಿಕೆಯಾಗುತ್ತದೆ.

ರಾಝಾ, ಕ್ಯಾಲಿಫೋರ್ನಿಯಾದಲ್ಲಿ ಬೇಸಿಗೆಯ ಒಂದು ಅವಧಿಯಲ್ಲಿ ಬೋಧನೆ ಮಾಡುವಾಗ;ಪೊಲಾಕ್ ನ(ಒಂದು ಬಗೆಯ ಮೀನು) ಉತ್ಸಾಹಭರಿತ ಚಟುವಟಿಕೆ ಹಾಗು ರೋಥ್ಕೋನ ರಹಸ್ಯಮಯ ಕೃತಿಗಳೊಂದಿಗೆ ಮುಖಾಮುಖಿಯಾದರು. ಆದಾಗ್ಯೂ ಒಬ್ಬ ವ್ಯಕ್ತಿಯು ಗ್ರಹಿಸಬಲ್ಲ ಯಾವುದೇ ಪ್ರಭಾವವನ್ನು ವಿನಾಕರಣ ಹುಡುಕುತ್ತಾನೆ.

ಮಾನವನು ಮಾಡುವ ವೀರೋಚಿತ ಅನ್ವೇಷಣೆಯ ಅವರು ಮಾಡುತ್ತಾರೆ: ನಾನು ಇಲ್ಲೇಕೆ ಇದ್ದೇನೆ, ನಾನು ಎಲ್ಲಿಗೆ ಹೋಗುತ್ತಿದ್ದೇನೆ, ಏಕೆ, ಅರಿವು, ಜಾಗೃತಿ ಎಂಬ ಆಶ್ಚರ್ಯಕರ ಸಂಗತಿಗಳೆಂದರೆ ಏನು. ನಾವು ಹೀಗೆ ಸುತ್ತಮುತ್ತಲು ಓಡಾಡಿಕೊಂಡಿದ್ದರೆ, ಇದರ ಬಗ್ಗೆ ನಮಗೆ ಹೇಗಾದರೂ ತಿಳಿಯಬಹುದೇ? ರಾಝಾ ಬಿಂದುವನ್ನು ಸೃಷ್ಟಿ ಹಾಗು ಅಸ್ತಿತ್ವದ ಹುಟ್ಟುವಿನಲ್ಲಿ ಕೃತಿಗಳನ್ನು ಸಮರ್ಥಕವಾಗಿ ಚಿತ್ರಿಸುತ್ತಾರೆ. ಅಲ್ಲಿ ಆಕಾರಗಳು, ಜ್ಯಾಮಿತಿ ಹಾಗು ಬಣ್ಣದೆಡೆಗೆ ಚಲಿಸಿ, ಅಂತರ, ಶಬ್ದ ಹಾಗು ಕಾಲದ ಬಗೆಗಿನ ಎರಡು ಆಯಾಮಗಳುಳ್ಳ ನಿರೂಪಣೆಗಳನ್ನು ವಿಶ್ಲೇಷಣೆ ಮಾಡುತ್ತಾರೆ.

ಉಲ್ಲೇಖಗಳು: "ಬರಹಗಾರರು ಅಥವಾ ವರ್ಣಚಿತ್ರಕಾರರ ಕಲ್ಪನೆಗಳು ನನಗೆ ಸ್ಪೂರ್ತಿಯಾಗಿವೆ, ಹಾಗು ಉಸ್ತಾದ್ ರಂತಹ ಸಂಗೀತಗಾರರು ಸಹ, 'ನಿಮ್ಮ ಕಿವಿಗಳಿಂದ ನೋಡಿ, ಕಣ್ಣುಗಳಿಂದ ಆಲಿಸಿ' ಎಂದು ಹೇಳಿದ್ದಾರೆ. - ಸಯದ್ ಹೈದರ್ ರಾಝಾ

"ನನ್ನ ಕೃತಿಯು ನನ್ನದೇ ಆದ ಅನುಭವಗಳಿಂದ ಹಾಗು ಈ ನಿಸರ್ಗ ರಚನೆ ತನ್ನೊಳಗೆ ಅಡಗಿಸಿಕೊಂಡಿರುವ ರಹಸ್ಯಗಳಿಂದ ಹುಟ್ಟಿಕೊಂಡಿದೆ, ಇದು ಬಣ್ಣ, ರೇಖೆ, ಅಂತರ ಹಾಗು ಬೆಳಕಿನಿಂದ ವಿವರಿಸಲ್ಪಡುತ್ತದೆ".

"ಅಸ್ತಿತ್ವದ ಬಗೆಗಿನ ಅನ್ವೇಷಣೆಯು ನನ್ನನ್ನು ಎಡೆಬಿಡದೆ ಕಾಡಿತು. ಭಾರತೀಯ ಕಲ್ಪನೆಗಳ ಬಗ್ಗೆ ದಿವ್ಯಜ್ಞಾನ, ಪ್ರತಿಮಾಶಾಸ್ತ್ರ, ಸಂಕೇತಗಳು ಹಾಗು ಚಿಹ್ನೆಗಳು ಶೋಧನೆಗೆ ಉತ್ತೇಜನ ನೀಡಿದವು. 'ಪ್ರಕೃತಿ'ಯು, ಸರ್ವೋತ್ಕೃಷ್ಟವಾದ ವಿಕಾಸ ಶಕ್ತಿಯಾಗಿದ್ದು, ಮೂಲಾವಸ್ಥೆಯ ಶಕ್ತಿಯು ಬೀಜದಲ್ಲಿರುತ್ತದೆ, ಪುರುಷ-ಸ್ತ್ರೀ ಧ್ರುವೀಯತೆ, ನಿಸರ್ಗದಲ್ಲಿ ಎಂದಿಗೂ ಅಸ್ತಿತ್ವದಲ್ಲಿರುವ ಪ್ರಕೃತಿಯ ಘಟನೆಗಳಾದ - ಅಂಕುರಣ, ಗರ್ಭಾವಸ್ಥೆ ಹಾಗು ಜನನ - 'ಗೋಚರ-ಪ್ರಕೃತಿಯಿಂದ' 'ಕಲ್ಪಿತ-ಪ್ರಕೃತಿಗೆ' ನನ್ನ ಕಲ್ಪನೆಯನ್ನು ಬದಲಾವಣೆ ಮಾಡಿದವು".

"ನಾನು ಫ್ರಾನ್ಸ್ ಗೆ ಏಕೆ ಹೋದೆನೆಂದರೆ ಆ ದೇಶವು ನನಗೆ ಕಲಾತಂತ್ರ ಹಾಗು ವರ್ಣಚಿತ್ರ ವಿಜ್ಞಾನವನ್ನು ಕಲಿಸಿತು. ಫ್ರಾನ್ಸ್ ನ ಅಮರ ಕಲಾವಿದರುಗಳಾದ ಸಿಜೇನ್ ನಂತವರು ವರ್ಣಚಿತ್ರ ರಚನೆಯ ರಹಸ್ಯವನ್ನು ಬಲ್ಲವರು... . ಆದರೆ ನನ್ನ ಫ್ರೆಂಚ್ ಅನುಭವದ ಹೊರತಾಗಿಯೂ, ನನ್ನ ವರ್ಣಚಿತ್ರಗಳ ವಿಷಯಗಳು ನೇರವಾಗಿ ಭಾರತದಿಂದ ತೆಗೆದುಕೊಳ್ಳಲಾಗಿದೆ."

ಟಿಪ್ಪಣಿಗಳು: ಸೋಥೆಬಿ'ಸ್ ಮಾರ್ಚ್ ೨೯ರಂದು ಭಾರತೀಯ ಹಾಗು ಆಗ್ನೇಯ ಏಷಿಯಾದ ಚಿತ್ರವನ್ನು $೧೩,೬೩೩,೮೨೦ಕ್ಕೆ ಮಾರಾಟ ಮಾಡಿತು, ಇದರಲ್ಲಿ ಬಹುತೇಕವಾಗಿ ಆಧುನಿಕ ಭಾರತೀಯ ಕಲೆಯ ವರ್ಣಚಿತ್ರಗಳಿದ್ದವು. ತಪೋವನ್, (೧೯೭೨) ಸಯದ್ ಹೈದರ್ ರಾಝಾ(ಜನನ. ೧೯೨೨), $೧,೪೭೨,೦೦೦ಕ್ಕೆ ಮಾರಾಟ. ಡಿಸೆಂಬರ್ ೧೯೭೮ರಲ್ಲಿ ಭಾರತದ ಮಧ್ಯಪ್ರದೇಶ ಸರ್ಕಾರವು ಅವರಿಗೆ ವಿಶೇಷ ಹಾಗು ಕೃತಜ್ಞತಾಪೂರ್ವಕ ಗೌರವಾರ್ಪಣೆ ನೀಡುವುದರ ಜೊತೆಗೆ ಭೂಪಾಲ್ ನಲ್ಲಿ ಅವರ ಕಲಾಸಂಗ್ರಹವನ್ನು ನಿರಂತರವಾಗಿ ಪ್ರದರ್ಶಿಸುತ್ತದೆ. r೬೫೬ ೫೮೫ytuytuytutyyutrddr೬

ಸಾರ್ವಜನಿಕ ಕೊಡುಗೆಗಳು[ಬದಲಾಯಿಸಿ]

ಭಾರತೀಯ ಯುವಜನರ ನಡುವೆ ಕಲೆಯನ್ನು ಉತ್ತೇಜಿಸಲು ಇವರು ಭಾರತದಲ್ಲಿಯೂ ಸಹ 'ರಾಝಾ ಪ್ರತಿಷ್ಠಾನ'ವನ್ನು ಸ್ಥಾಪಿಸಿದ್ದಾರೆ. ಪ್ರತಿಷ್ಠಾನವು ಯುವ ಕಲಾವಿದರಿಗೆ ವಾರ್ಷಿಕ ರಾಝಾ ಪ್ರತಿಷ್ಠಾನ ಪ್ರಶಸ್ತಿಯನ್ನೂ ಸಹ ನೀಡುತ್ತದೆ.[೨೨]

ವೈಯಕ್ತಿಕ ಜೀವನ[ಬದಲಾಯಿಸಿ]

ಎಸ್. ಎಚ್. ರಾಝಾ, ಪ್ಯಾರಿಸ್ ನ ಎಕೊಲೇ ಡೆ ಬ್ಯೂಕ್ಸ್ ಆರ್ಟ್ಸ್ ನಲ್ಲಿ ತಮ್ಮ ಸಹಪಾಠಿಯಾಗಿದ್ದ ಜನೈನ್ ಮೊಂಗಿಲ್ಲಟ್ ರನ್ನು ವರಿಸಿದರು. ತರುವಾಯ ಒಬ್ಬ ಕಲಾವಿದ ಹಾಗು ಶಿಲ್ಪಿಯಾಗಿ ಪ್ರಸಿದ್ಧರಾದರು. ಇವರಿಬ್ಬರೂ ೧೯೫೯ರಲ್ಲಿ ಮದುವೆಯಾಗುತ್ತಾರೆ ಹಾಗು ಫ್ರಾನ್ಸ್ ನ್ನು ತೊರೆಯಬಾರದೆಂಬ ಆಕೆಯ ತಾಯಿಯ ಕೋರಿಕೆಯ ಮೇರೆಗೆ, ರಾಝಾ ಅಲ್ಲೇ ಉಳಿಯಲು ನಿರ್ಧರಿಸುತ್ತಾರೆ.[೨೩] ಹಿಂದುಸ್ತಾನ್ ಟೈಮ್ಸ್, ಮಾಸ್ಟರ್ ಸ್ಟ್ರೋಕ್ಸ್, HT ಸಿಟಿ, ದಿ ಆರ್ಟ್ಸ್, ಪುಟ.೧೦, ಫೆಬ್ರವರಿ ೨೩, ೨೦೦೮. ೫ ಏಪ್ರಿಲ್ ೨೦೦೨ರಲ್ಲಿ ಪ್ಯಾರಿಸ್ ನಲ್ಲಿ ಜನೈನ್ ಮೊಂಗಿಲ್ಲಾಟ್ ನಿಧನರಾದರು. [೨೪]

ಪ್ರಶಸ್ತಿಗಳು[ಬದಲಾಯಿಸಿ]

  • ೧೯೪೬: ರಜತ ಪದಕ, ಬಾಂಬೆ ಆರ್ಟ್ ಸೊಸೈಟಿ, ಮುಂಬಯಿ
  • ೧೯೪೮: ಸ್ವರ್ಣ ಪದಕ, ಬಾಂಬೆ ಆರ್ಟ್ ಸೊಸೈಟಿ, ಮುಂಬಯಿ
  • ೧೯೫೬: ಪ್ರಿಕ್ಸ್ ಡೆ ಲಾ ಕ್ರಿಟೀಕ್, ಪ್ಯಾರಿಸ್
  • ೧೯೮೧ - ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ
  • ೧೯೮೧: ಲಲಿತಕಲಾ ಅಕ್ಯಾಡೆಮಿಯ ಫೆಲೋಶಿಪ್, ನವದೆಹಲಿ
  • ೧೯೮೧: ಕಾಳಿದಾಸ ಸಮ್ಮಾನ, ಮಧ್ಯಪ್ರದೇಶ ಸರ್ಕಾರ
  • ೨೦೦೭: ಪದ್ಮಭೂಷಣ; ಭಾರತ ಸರ್ಕಾರ

ವಸ್ತುಪ್ರದರ್ಶನಗಳು[ಬದಲಾಯಿಸಿ]

  • ೨೦೧೦ ಫ್ಲೋರಾ ಜಾನ್ಸೆಮ್ ಗ್ಯಾಲರಿ, ರಾಝಾ ಸೆರಾಮಿಕ್ಸ್, ಪ್ಯಾರಿಸ್
  • ೨೦೧೦ ಆಕಾರ್ ಪ್ರಕಾರ್ ಆರ್ಟ್ ಗ್ಯಾಲರಿ,ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ್ ಇಂಡಿಯಾ ೨೦೧೦ರಲ್ಲಿ
  • ೨೦೦೮ ಆರ್ಟ್ ಅಲೈವ್ ಗ್ಯಾಲರಿ, ಭಾರತ, ಇಂಡಿಯಾ ೨೦೦೮ರಲ್ಲಿ
  • ಆರ್ಟ್ ಅಲೈವ್ ಗ್ಯಾಲರಿಯಲ್ಲಿ ವ್ಯೂ ಎಕ್ಸಿಬಿಷನ್ ಮ್ಯಾಗ್ನಿಫಿಸೆಂಟ್ ಸೆವೆನ್ Archived 2018-12-15 ವೇಬ್ಯಾಕ್ ಮೆಷಿನ್ ನಲ್ಲಿ.
  • ೧೯೯೭ ರೂಪಂಕರ್ ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್, ಭಾರತ್ ಭವನ್, ಭೋಪಾಲ್
  • ೧೯೯೭ ಜಹಂಗೀರ್ ಆರ್ಟ್ ಗ್ಯಾಲರಿ ಮುಂಬಯಿ
  • ೧೯೯೭ ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್, ನವದೆಹಲಿ.
  • ೧೯೯೪ ದಿ ಆರ್ಟ್ ರೆಂಟಲ್ ಕಾರ್ಪೊರೇಟ್, ಗ್ರೂಪ್ ಮೈಕೆಲ್ ಫೆರ್ರಿಯೆರ್, ಎಚಿರೋಲ್ಲ್ಸ್, ಗ್ರೆನೋಬಲ್
  • ೧೯೯೨ ಜಹಂಗೀರ್ ನಿಕೋಲ್ಸನ್ ಮ್ಯೂಸಿಯಂ, ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಮುಂಬಯಿ
  • ೧೯೯೨ ಕೋರ್ಸಸ್ ಆರ್ಟ್ಸ್ ಲಲೌವೆಸ್ಕ್, ಫ್ರಾನ್ಸ್
  • ೧೯೯೧ ಗ್ಯಾಲರಿ ಎಟರ್ಸೊ, ಕ್ಯಾನೆಸ್ ರೆಟ್ರೋಸ್ಪೆಕ್ಟಿವ್: ೧೯೫೨-೯೧, ಪಲಾಜ್ಜೋ ಕಾರ್ನೋಲ್ಸ್
  • ೧೯೯೧ ಮ್ಯೂಸಿಯಂ ಆಫ್ ಮೆನ್ಟನ್, ಫ್ರಾನ್ಸ್
  • ೧೯೯೦ ಚೆಮೌಲ್ಡ್ ಗ್ಯಾಲರಿ, ಬಾಂಬೆ
  • ೧೯೮೮ ಚೆಮೌಲ್ಡ್ ಗ್ಯಾಲರಿ, ಬಾಂಬೆ; ಕೊಲೋರಿಟ್ಟನ್ ಗ್ಯಾಲರಿ, ಸ್ಟಾವಂಜರ್, ನಾರ್ವೆ
  • ೧೯೮೭ ದಿ ಹೆಡ್ ಆಫ್ ದಿ ಆರ್ಟಿಸ್ಟ್, ಗ್ರೆನೋಬಲ್
  • ೧೯೮೫ ಗಾಲರಿ ಪಿಯೆರ್ರೆ ಪರತ್, ಪ್ಯಾರಿಸ್
  • ೧೯೮೪ ಚೆಮೌಲ್ಡ್ ಗ್ಯಾಲರಿ, ಬಾಂಬೆ
  • ೧೯೮೨ ಗ್ಯಾಲರಿ ಲೋಯೆಬ್, ಬರ್ನ್, ಸ್ವಿಟ್ಜರ್ಲ್ಯಾಂಡ್; ಗ್ಯಾಲರಿ JY ನೋಬ್ಲೆಟ್, ಗ್ರೆನೋಬಲ್
  • ೧೯೮೦ ಗ್ಯಾಲರಿಯಟ್, ಓಸ್ಲೋ

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಪ್ಯಾಷನ್: ಲೈಫ್ ಅಂಡ್ ಆರ್ಟ್ ಆಫ್ ರಾಝಾ , ಸಯದ್ ಹೈದರ್ ರಾಝಾರಿಂದ, ಅಶೋಕ್ ವಾಜಪೇಯಿ (ಸಂಪಾದನೆ.). ೨೦೦೫, ರಾಜಕಮಲ್ ಬುಕ್ಸ್. ISBN ೮೧೨೬೭೧೦೪೦೩
  • ರಾಝಾ: ಏ ಲೈಫ್ ಇನ್ ಆರ್ಟ್ , ಅಶೋಕ್ ವಾಜಪೇಯಿ ಅವರಿಂದ, ೨೦೦೭, ಆರ್ಟ್ ಅಲೈವ್ ಗ್ಯಾಲರಿ, ನವದೆಹಲಿ. ISBN ೯೭೮-೮೧-೯೦೧೮೪೪-೪-೧.
  • ಬಿಂದು: ಸ್ಪೇಸ್ ಅಂಡ್ ಟೈಮ್ ಇನ್ ರಾಝಾ'ಸ್ ವಿಷನ್ , ಗೀತಿ ಸೇನ್ ರಿಂದ. ಮೀಡಿಯಾ ಟ್ರಾನ್ಸ್ಸಾಸಿಯ, ೧೯೯೭. ISBN ೯೬೨೭೦೨೪೦೬೬
  • ರಾಝಾ [೨೫] ಅಲೈನ್ ಬೋನ್ಫಂಡ್, ಲೆಸ್ ಎಡಿಶನ್ಸ್ ಡೆ ಲಾ ಡಿಫರೆನ್ಸ್, ಪ್ಯಾರಿಸ್, ೨೦೦೮.

(ಫ್ರೆಂಚ್ ಹಾಗು ಇಂಗ್ಲಿಷ್ ಆವೃತ್ತಿ. ಶಿಲಾಮುದ್ರಣಗಳು [೧] Archived 2010-02-07 ವೇಬ್ಯಾಕ್ ಮೆಷಿನ್ ನಲ್ಲಿ. ಎಡಿಶನ್ಸ್ ಲಾ ಡಿಫರೆನ್ಸ್, ಪ್ಯಾರಿಸ್ ಸಂಪಾದಿಸಿದೆ)

ಉಲ್ಲೇಖಗಳು[ಬದಲಾಯಿಸಿ]

  1. 85ನೇ ವರ್ಷಕ್ಕೆ ಕಾಲಿರಿಸಿದ ಸಯದ್ ಹೈದರ್ ರಾಝಾ Archived 2007-04-10 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ, ಫೆಬ್ರವರಿ ೨೧, ೨೦೦೭.
  2. ವರ್ಣಚಿತ್ರವು ಒಂದು ಸಾಧನೆಯಿದ್ದಂತೆ... dnaಇಂಡಿಯಾ, ಸೆಪ್ಟೆಂಬರ್ ೧೮, ೨೦೦೫.
  3. ಆರ್ಟ್ಸ್ಟ್ ಡೀಟೈಲ್ಸ್ Archived 2009-07-12 ವೇಬ್ಯಾಕ್ ಮೆಷಿನ್ ನಲ್ಲಿ. serigraphstudio.com.ನಲ್ಲಿ ರಾಝಾ
  4. ೪.೦ ೪.೧ ೪.೨ ಲಲಿತಕಲಾ ರತ್ನ ಪ್ರೊಫೈಲ್ ಗಳು Archived 2008-01-05 ವೇಬ್ಯಾಕ್ ಮೆಷಿನ್ ನಲ್ಲಿ. lalitkala.gov.in.ನಲ್ಲಿ ಪ್ರಶಸ್ತಿ ಪಡೆದವರ ಅಧಿಕೃತ ಪಟ್ಟಿ
  5. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
  6. ಜೀವನಚರಿತ್ರೆ Archived 2008-01-08 ವೇಬ್ಯಾಕ್ ಮೆಷಿನ್ ನಲ್ಲಿ. shraza.net, ಅಧಿಕೃತ ಜಾಲತಾಣ.
  7. ೭.೦ ೭.೧ ಆರ್ಟಿಸ್ಟ್ ಬಯೋ Archived 2008-03-06 ವೇಬ್ಯಾಕ್ ಮೆಷಿನ್ ನಲ್ಲಿ. ರಾಝಾ ರೆಟ್ರೋಸ್ಪೆಕ್ಟಿವ್ ೨೦೦೭, ನ್ಯೂಯಾರ್ಕ್.
  8. ಪ್ರೊಫೈಲ್ಸ್ Archived 2009-01-30 ವೇಬ್ಯಾಕ್ ಮೆಷಿನ್ ನಲ್ಲಿ. delhiartgallery.com.ನಲ್ಲಿ ಎಸ್ ಎಚ್ ರಾಝಾ
  9. ಪ್ರೊಫೈಲ್ ಆಫ್ ದಿ ಮಂತ್ Archived 2011-04-21 ವೇಬ್ಯಾಕ್ ಮೆಷಿನ್ ನಲ್ಲಿ. indianartcircle.com.ನಲ್ಲಿ ಸಯದ್ ಹೈದರ್ ರಾಝಾ
  10. ೧೦.೦ ೧೦.೧ ಆರ್ಟಿಸ್ಟ್ ಸಮ್ಮರಿ artfact.com.ನಲ್ಲಿ ಸಯದ್ ಹೈದರ್ ರಾಝಾ
  11. "ಕಲಾವಿದರ ಹಿನ್ನೆಲೆ". Archived from the original on 2005-02-09. Retrieved 2011-02-02.
  12. ಕಲಾವಿದರ ನಿರ್ದೇಶಿಕೆ Archived 2008-03-04 ವೇಬ್ಯಾಕ್ ಮೆಷಿನ್ ನಲ್ಲಿ. art.in.ನಲ್ಲಿ ಎಸ್ ಎಚ್ ರಾಝಾ
  13. ೧೩.೦ ೧೩.೧ ಪ್ರೊಫೈಲ್ Archived 2012-03-01 ವೇಬ್ಯಾಕ್ ಮೆಷಿನ್ ನಲ್ಲಿ. vadehraart.com.ನಲ್ಲಿ ಎಸ್ ಎಚ್ ರಾಝಾ
  14. ಕಲಾವಿದರ ವಿವರಗಳು Archived 2007-11-10 ವೇಬ್ಯಾಕ್ ಮೆಷಿನ್ ನಲ್ಲಿ. saffronart.com.ನಲ್ಲಿ ರಾಝಾ
  15. ೧೫.೦ ೧೫.೧ ೧೫.೨ ಕಲೆ & ಸಂಸ್ಕೃತಿ Archived 2012-02-25 ವೇಬ್ಯಾಕ್ ಮೆಷಿನ್ ನಲ್ಲಿ. indiaenews.com, ಫೆಬ್ರವರಿ ೨೦, ೨೦೦೮.
  16. ಇಂಡಿಯನ್ ಹೀರೋಸ್ iloveindia.com.ನಲ್ಲಿ ಎಸ್ ಎಚ್ ರಾಝಾ
  17. ರಾಝಾ'ಸ್ ರುನೆಸ್: ವಿಷನ್ಸ್ ಆಫ್ ದಿ ಸೆಲ್ಫ್ asianart.com.ನಲ್ಲಿ ಸ್ವಪ್ನ ವೋರಾ
  18. ಕಲಾವಿದರ ಜೀವನಚರಿತ್ರೆ Archived 2008-07-24 ವೇಬ್ಯಾಕ್ ಮೆಷಿನ್ ನಲ್ಲಿ. osbornesamuel.com.ನಲ್ಲಿ ರಾಝಾ
  19. ೧೯.೦ ೧೯.೧ ರೆಟ್ರೋಸ್ಪೆಕ್ಟೀವ್ 2007 Archived 2008-01-31 ವೇಬ್ಯಾಕ್ ಮೆಷಿನ್ ನಲ್ಲಿ. saffronart.com.ನಲ್ಲಿ ರಾಝಾರೊಂದಿಗೆ ಮಾತುಕತೆ
  20. ಮುನ್ನುಡಿ Archived 2008-03-04 ವೇಬ್ಯಾಕ್ ಮೆಷಿನ್ ನಲ್ಲಿ. ರಾಝಾ ರೆಟ್ರೋಸ್ಪೆಕ್ಟೀವ್, ೨೦೦೭.
  21. ಒಂದು ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸುವ ತಮ್ಮ ಉದ್ದೇಶವನ್ನು ಎಸ್ ಎಚ್ ರಾಝಾ ಬಹಿರಂಗಪಡಿಸುತ್ತಾರೆ Archived 2011-07-13 ವೇಬ್ಯಾಕ್ ಮೆಷಿನ್ ನಲ್ಲಿ. indianartcollectors.com, ೦೭ ಫೆಬ್ರವರಿ ೨೦೦೮.
  22. ನ್ಯೂಸ್ ಮೇಕರ್ಸ್ ದಿ ಮಿಲ್ಲಿ ಗೆಜೆಟ್ ಆನ್ಲೈನ್, ಏಪ್ರಿಲ್ ೨೦೦೫.
  23. Cultural India, S.H.Raza
  24. "ಜನೈನ್ ಮೊಂಗಿಲ್ಲಾಟ್ ಪ್ಯಾರಿಸ್ ನಲ್ಲಿ ನಿಧನರಾದರು. ದಿ ಹಿಂದೂ, ಏಪ್ರಿಲ್ ೦೯, ೨೦೦೨". Archived from the original on 2011-06-07. Retrieved 2011-02-02.
  25. "Editions de la Difference, Raza m Auteur :Bonfand, Alain". Archived from the original on 2011-07-21. Retrieved 2015-03-03.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಆನ್‌ಲೈನ್‌ ಕಾರ್ಯಗಳು[ಬದಲಾಯಿಸಿ]