ಕಮಲಾ ಹೆಮ್ಮಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಮಲಾ ಹೆಮ್ಮಿಗೆ ಇವರು ೧೯೫೨ ನವಂಬರ ೨೦ರಂದು ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ ಜನಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

೧೯೭೩ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ “ ಕನ್ನಡ:ಜಾನಪದ ”ವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿಯನ್ನು ಪಡೆದ ಕಮಲಾ ಹೆಮ್ಮಿಗೆಯವರು “ಸವದತ್ತಿ ಎಲ್ಲಮ್ಮ ಹಾಗು ದೇವದಾಸಿ ಪದ್ಧತಿ”ಯ ಮೇಲೆ ಮಹಾಪ್ರಬಂಧ ರಚಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು.ಇದಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೋಮಾ ಸಹ ಪಡೆದಿದ್ದಾರೆ.

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಪಲ್ಲವಿ
  • ವಿಷಕನ್ಯೆ
  • ಮುಂಜಾನೆ ಬಂದವನು
  • ನೀನೆ ನನ್ನ ಆಕಾಶ
  • ಮರ್ಮರ
  • ಕರಳ ಸಂವಾದ

ಕಾದಂಬರಿ[ಬದಲಾಯಿಸಿ]

  • ಬದುಕೆಂಬ ದಿವ್ಯ
  • ಆಖ್ಯಾನ
  • ಕಿಚಿಲ್ಲದ ಬೆಗೆ

ಸಣ್ಣ ಕತೆ[ಬದಲಾಯಿಸಿ]

  • ಮಾಘ ಮಾಸದ ದಿನ
  • ಬಿಸಿಲು ಮತ್ತು ಬೇವಿನ ಮರ
  • ನಾನು , ಅವನು ಮತ್ತು ಅವಳು
  • ಹನ್ನೊಂದು ಕಥೆಗಳು

ಸಂಶೋಧನೆ[ಬದಲಾಯಿಸಿ]

  • ಲಾವಣಿ-ಒಂದು ಹಕ್ಕಿ ನೋಟ
  • ಸವದತ್ತಿ ಎಲ್ಲಮ್ಮನ ಜಾತ್ರೆ
  • ಪಂಚಮುಖ
  • ಸವದತ್ತಿ ಎಲ್ಲಮ್ಮ ಹಾಗು ದೇವದಾಸಿ ಪದ್ಧತಿ: ಒಂದು ಅಧ್ಯಯನ

ಅನುವಾದ[ಬದಲಾಯಿಸಿ]

  • ಶಬ್ದಗರ್ಭಿತ ಆಕಾಶ (ಜ್ಞಾನಪೀಠ ಪ್ರಶಸ್ತಿವಿಜೇತ ಸೀತಾಕಾಂತ ಮಹಾಪಾತ್ರರ ಕವನಗಳು)
  • ಕತ್ತಲಲ್ಲಿ ಭಯವಿಲ್ಲ (ಶಶಿ ದೇಶಪಾಂಡೆಯವರ Dark holds no terror ಕಾದಂಬರಿಯ ಅನುವಾದ)

ಸಂಪಾದನೆ[ಬದಲಾಯಿಸಿ]

  • ಹನಿ ಹನಿ
  • ಹಾಡಿನ ಹಗೇವು
  • ಬಣ್ಣದ ಭರಣಿ
  • ದೇವರಿಗೆ ಶರಣೆನ್ನುವೆನೇ
  • ಮಂಗಳದ ಮಾಪೂರ
  • ಹೂವು ಬಿದ್ದಾವ ನೆಲಕ
  • ಪೊಳ್ಳಿನೊಳಗೆ ಪಕ್ಷಿ
  • ವೀರಭದ್ರ ದೇವರ ಒಡಬುಗಳು
  • ಕನಸ ಕೇಳವ್ವ

ಅಂಕಣ ಸಾಹಿತ್ಯ[ಬದಲಾಯಿಸಿ]

ಡಾ|ಕಮಲಾ ಹೆಮ್ಮಿಗೆಯವರು ಸಂಕ್ರಮಣ, ಅಗ್ನಿ, ಸಕಾಲಿಕ, ಭಾನುವಾರ, ಕರುಣಾ ಸಂಚಿಕೆ ಮುಂತಾದ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ; ಬರೆಯುತ್ತಿದ್ದಾರೆ.

ಪ್ರಶಸ್ತಿ/ಪುರಸ್ಕಾರ[ಬದಲಾಯಿಸಿ]

  • ೧೯೯೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗು ಕೆ.ಎಸ್.ಎನ್. ಪ್ರಶಸ್ತಿ ದೊರೆತಿವೆ.
  • ೨೦೦೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
  • ೨೦೦೪-೨೦೦೫ನೆಯ ವರ್ಷದ ಕರ್ನಾಟಕ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ದೊರೆತಿದೆ.
  • ಇದಲ್ಲದೆ ಸಾಹಿತ್ಯಕ್ಕಾಗಿ ಮುದ್ದಣ ಕಾವ್ಯ ಪ್ರಶಸ್ತಿ, ಗೊರೂರು, ರತ್ನಮ್ಮ ಹೆಗ್ಗಡೆ, ಅತ್ತಿಮಬ್ಬೆ ಪ್ರತಿಷ್ಠಾನ, ಚೆನ್ನಶ್ರೀ, ರುಕ್ಮಿಣಿಬಾಯಿ ಪ್ರಶಸ್ತಿ ಹಾಗು ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿಗಳು ಲಭಿಸಿವೆ.

ಇತರ[ಬದಲಾಯಿಸಿ]

  • ಡಾ|ಕಮಲಾ ಹೆಮ್ಮಿಗೆ ಇವರು ಬೆಂಗಳೂರು, ಧರ್ಮಸ್ಥಳ, ಹುಬ್ಬಳ್ಳಿ,ಬೀದರಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ.
  • ನ್ಯಾಶನಲ್ ಬುಕ್ ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
  • ಅಲ್ಲದೆ ಮುಕ್ತ ಪತ್ರಕರ್ತೆಯಾಗಿದ್ದಾರೆ.