ಜನಾರ್ದನ ಗುರ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಾರ್ದನ ಗುರ್ಕಾರ ಇವರು ದಕ್ಷಿಣ ಕನ್ನಡ ಜಿಲ್ಲೆಮೂಡುಬಿದಿರೆಯ ಸಮೀಪದ ಅಶ್ವತ್ಥಪುರ ಗ್ರಾಮದ ಮುದ್ರಬೆಟ್ಟು ಎಂಬಲ್ಲಿಯವರು. ಜನನ ೧೯೩೨ರಲ್ಲಿ. ರೈಲು ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ನಿವೃತ್ತಿಯ ನಂತರ ಮೈಸೂರಿನಲ್ಲಿ ನೆಲೆಸಿದರು. ಇವರು ೧೮ಕ್ಕೂ ಹೆಚ್ಚು ಕಾದಂಬರಿಗಳನ್ನು ಹಾಗೂ ಕಥೆಗಳನ್ನು ಬರೆದಿದ್ದಾರೆ. ೧೯೯೮ರಲ್ಲಿ ಅಶ್ವತ್ಥಪುರದಲ್ಲಿ ನಡೆದ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕಥಾಸಂಕಲನಗಳು:

  • ಕಂಬದ ಹುಚ್ಚು
  • ಬೆಳ್ಳಿಯ ಬಟ್ಟಲು

ಕಾದಂಬರಿಗಳು:

  • ಕಾಂತೆಯರ ಕನಸು
  • ರಾಯರ ಚಾಳು
  • ಗಂಗಾವತಾರ
  • ದಂಬನ ನಾಯಿ
  • ಬಾವಿ ನೋಡಿದವರು
  • ಶೃಂಗ ಕಂಕಣ (೨೦೦೭ರ ವರ್ಧಮಾನ ಪ್ರಶಸ್ತಿ ವಿಜೇತ ಕೃತಿ).