ಚರ್ಚೆಪುಟ:ಗಾಂಧಿ ಜಯಂತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾತ್ಮ ಗಾಂಧಿ 150: ಬಾಪೂ ಬದುಕಿನ ಹಾದಿ...[ಬದಲಾಯಿಸಿ]

  • 1869 ಅ.2: ಗುಜರಾತಿನ ಪೋರ್‌ಬಂದರ್‌ನ ಕಾತಿಯಾವಾಡ್‌ನಲ್ಲಿ ಜನನ. ತಂದೆ ತಂದೆ ಕರಮಚಂದ ಗಾಂಧಿ ಮತ್ತು ತಾಯಿ ಪುತಲೀಬಾಯಿ
  • 1876: ರಾಜಕೋಟ್‌ನಲ್ಲಿ ಪ್ರಾಥಮಿಕ ಶಿಕ್ಷಣ
  • 1883: ಪೋರ್‌ಬಂದರ್‌ನಲ್ಲಿ ಕಸ್ತೂರ್‌ಬಾ ಜೊತೆ ವಿವಾಹ
  • 1888 ಸೆ.4: ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ
  • 1891 ಜ.12: ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣ
  • 1891 ಜೂ: ಬ್ಯಾರಿಸ್ಟರ್‌ ಪದವಿ ಪಡೆದು ಹೈಕೋರ್ಟ್‌ನಲ್ಲಿ ತರಬೇತಿ ಮುಗಿಸಿ ಭಾರತಕ್ಕೆ ವಾಪಸ್‌
  • 1892 ಮೇ 24: ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭ
  • 1893: ಪೋರ್‌ಬಂದರ್‌ ಕಂಪನಿಯೊಂದರ ಪರ ವಾದಿಸಲು ದಕ್ಷಿಣ ಆಫ್ರಿಕಾಕ್ಕೆ
  • 1893 ಜೂನ್‌: ಪೀಟರ್‌ರ್ಮಾರಿಟ್‌್ಜಬರ್ಗ್‌ ರೈಲ್ವೆ ನಿಲ್ದಾಣದಲ್ಲಿ ವರ್ಣ ತಾರತಮ್ಯ. ಮೊದಲ ದರ್ಜೆಯ ಟಿಕೆಟ್‌ ಇದ್ದರೂ ಸಾಮಾನ್ಯ ದರ್ಜೆಯಲ್ಲಿ ಹೋಗುವಂತೆ ಗಾಂಧೀಜಿಯನ್ನು ರೈಲಿನಿಂದ ಇಳಿಸಿದ ರೈಲ್ವೆ ಸಿಬ್ಬಂದಿ
  • 1894: ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಮತ್ತು ಕರಿಯ ವರ್ಣದವರ ಮೇಲೆ ನಡೆಯುತ್ತಿರುವ ವರ್ಣ ತಾರತಮ್ಯದ ವಿರುದ್ಧ ಹೋರಾಡಲು ಸಂಘಟನೆಯೊಂದರ ಸ್ಥಾಪನೆ ಪ್ರಸ್ತಾಪ
  • 1894 ಆ.22: ವರ್ಣ ತಾರತಮ್ಯದ ವಿರುದ್ಧ ಹೋರಾಡಲು ನತಾಲ್‌ ಇಂಡಿಯನ್‌ ಕಾಂಗ್ರೆಸ್‌ ಸ್ಥಾಪನೆ
  • 1894: ಕೋರ್ಟ್‌ ಕೇಸ್‌ ಮುಗಿದ ಬಳಿಕ ಭಾರತಕ್ಕೆ ಮರಳಲು ಸಿದ್ಧತೆ. ಆದರೆ, ಭಾರತೀಯ ಸಮುದಾಯದ ಒತ್ತಡದಿಂದ ಕೆಲ ಕಾಲ ದಕ್ಷಿಣ ಆಫ್ರಿಕಾದಲ್ಲೇ ಇದ್ದು, ಹೋರಾಟ ನಡೆಸಲು ನಿರ್ಧಾರ
  • 1896: ಆರು ತಿಂಗಳ ಮಟ್ಟಿಗೆ ಭಾರತಕ್ಕೆ ಮರಳಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ದ ಗಾಂಧೀಜಿ
  • 1899: ಬೋಯರ್‌ ಯದ್ಧದಲ್ಲಿ ಬ್ರಿಟೀಷರ ಪರ ಇಂಡಿಯನ್‌ ಆಂಬುಲೆನ್ಸ್‌ ಕಾಫ್ಸ್‌ರ್‍ ಸ್ಥಾಪನೆ
  • 1901: ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಮರಳಿದ ಗಾಂಧೀಜಿ, ಭಾರತದಲ್ಲೇ ವಕೀಲ ವೃತ್ತಿ
  • 1902: ಭಾರತೀಯ ಸಮುದಾಯದ ಒತ್ತಾಯದ ಮೇರೆಗೆ ಮತ್ತೊಮ್ಮೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಗಾಂಧೀಜಿ
  • 1903: ಜೋಹಾನ್ಸ್‌ಬರ್ಗ್‌ನಲ್ಲಿ ಕಾನೂನು ಕಚೇರಿ ಆರಂಭ
  • 1904: ಇಂಡಿಯನ್‌ ಒಪಿನಿಯನ್‌ ಸಾಪ್ತಾಹಿಕ ಪತ್ರಿಕೆ ಆರಂಭ
  • 1906: ದಕ್ಷಿಣ ಆಫ್ರಿಕಾದಲ್ಲಿ ಭಾರತ ವಿರೋಧಿ ಕಾನೂನಿನ ವಿರುದ್ಧ ಮೊದಲ ಬಾರಿಗೆ ಪ್ರತಿಭಟನೆ ಆಯೋಜಿಸಿದ ಗಾಂಧೀಜಿ
  • 1906: ದಕ್ಷಿಣ ಆಫ್ರಿಕಾದಲ್ಲಿ ಸೆರೆವಾಸ
  • 1915 ಜ.9: ಭಾರತಕ್ಕೆ ಮರಳಿದ ಗಾಂಧೀಜಿ
  • 1915 ಮೇ 25: ಗಾಂಧೀಜಿ ಮತ್ತು ಅವರ ಅನುಯಾಯಿಗಳಿಂದ ಅಹಮದಾಬಾದ್‌ನಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪನೆ
  • 1917 ಏಪ್ರಿಲ್‌: ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಚಳವಳಿ ಅರಂಭ
  • 1919 ಏ.6: ರೌಲತ್‌ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಹರತಾಳ, ಒಂದು ದಿನದ ಉಪವಾಸಕ್ಕೆ ಯಂಗ್‌ ಇಂಡಿಯಾ ಪತ್ರಿಕೆಯ ಮೂಲಕ ಕರೆ
  • 1919 ಆ.1: ದೇಶದೆಲ್ಲೆಡೆ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಗೆ ಗಾಂಧೀಜಿ ಕರೆ
  • 1922 ಮಾ.10: ದೇಶದ್ರೋಹ ಆರೋಪದ ಮೇಲೆ ಗಾಂಧೀಜಿ ಬಂಧನ, 6 ವರ್ಷ ಜೈಲು
  • 1924 ಮಾಚ್‌ರ್‍: ಅವಧಿಗೆ ಮುನ್ನವೇ ಜೈಲುವಾಸದಿಂದ ಬಿಡುಗಡೆ
  • 1924: ಡಿಸೆಂಬರ್‌ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್‌ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ
  • 1930 ಜ. 26: ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದ ಪ್ರತಿಜ್ಞೆ
  • 1930 ಮಾ.12: ಉಪ್ಪಿನ ಮೇಲೆ ತೆರಿಗೆ ಹೇರಿದ್ದದನ್ನು ವಿರೋಧಿಸಿ ಗಾಂಧೀಜಿ ನೇತೃತ್ವದಲ್ಲಿ ದಂಡಿ ಯಾತ್ರೆ ಆರಂಭ
  • 1930: ಉಪ್ಪಿನ ಸತ್ಯಾಗ್ರಹ ಕೈಗೊಂಡಿದ್ದಕ್ಕೆ ಬ್ರಿಟಿಷ್‌ ಆಡಳಿತದಿಂದ ಗಾಂಧೀಜಿ ಬಂಧನ
  • 1932 ಜ.1: ಬ್ರಿಟಿಷ್‌ ಸರ್ಕಾರಕ್ಕೆ ನಾಗರಿಕ ಅಸಹಕಾರದ ಕುರಿತು ಕಾಂಗ್ರೆಸ್‌ನಿಂದ ಗೊತ್ತುವಳಿ ಅಂಗೀಕಾರ
  • 1932: ಅಸ್ಪೃಶ್ಯತೆಯ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಗಾಂಧೀಜಿ
  • 1932: ದೇಶದಲ್ಲಿ ಗ್ರಾಮೀಣ ಕೈಗಾರಿಕೆಗಳ ಒಕ್ಕೂಟ ಸ್ಥಾಪನೆ
  • 1942 ಆ.8: ದೇಶವ್ಯಾಪಿ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭ. ಕಾಂಗ್ರೆಸ್‌ ಮುಖಂಡರ ಸೆರೆ. ಆಗಾ ಖಾನ್‌ ಅರಮನೆಯಲ್ಲಿ ಗಾಂಧೀಜಿಗೆ ಸೆರೆವಾಸ
  • 1943: ಜೈಲಿನಲ್ಲಿ ಇದ್ದುಕೊಂಡೇ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಗಾಂಧೀಜಿ ಉಪವಾಸ ಸತ್ಯಾಗ್ರಹ
  • 1944: ಫೆ.22: ಪತ್ನಿ ಕಸ್ತೂರ್‌ಬಾ ನಿಧನ
  • 1944 ಮೇ 6: ಆಗಾ ಖಾನ್‌ ಪ್ಯಾಲೇಸ್‌ನಿಂದ ಗಾಂಧೀಜಿ ಬಿಡುಗಡೆ
  • 1947 ಮಾಚ್‌: ಭಾರತ ಪಾಕಿಸ್ತಾನ ವಿಭಜನೆಗೊಳಿಸಿ ಸ್ವಾತಂತ್ರ್ಯ ಘೋಷಣೆಗೆ ಒಪ್ಪಿದ ಬ್ರಿಟಿಷ್‌ ಸರ್ಕಾರ
  • 1947: ಅಧಿಕೃತವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ
  • 1948 ಜ.13; ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಉಂಟಾದ ಹಿಂದು- ಮುಸ್ಲಿಂ ಕೋಮು ಗಲಭೆ ನಿಲ್ಲಿಸುವಂತೆ ಆಮರಣ ಉಪವಾಸ ಸತ್ಯಾಗ್ರಹ
  • 1948 ಜ.18: ಆಮರಣ ಉಪವಾಸ ಅಂತ್ಯ
  • 1948 ಜ.30: ನಾಥೂರಾಮ್‌ ಗೋಡ್ಸೆಯಿಂದ ಗಾಂಧೀಜಿ ಗುಂಡಿಕ್ಕಿ ಹತ್ಯೆ
  • ಮಹಾತ್ಮ ಗಾಂಧಿ 150: ಬಾಪೂ ಬದುಕಿನ ಹಾದಿ
  • ಗಾಂಧಿ 150: ಬಾಪೂ ಬದುಕಿನ ಹಾದಿ Bengaluru, First Published 2, Oct 2018,
  • Bschandrasgr (ಚರ್ಚೆ) ೦೯:೦೮, ೬ ಅಕ್ಟೋಬರ್ ೨೦೧೯ (UTC)