ವಿರೂಪಾಕ್ಷ ರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿರೂಪಾಕ್ಷ ರಾಯ (1404-1405 CE) ವಿಜಯನಗರ ಸಾಮ್ರಾಜ್ಯ ದ ಓರ್ವ ಚಕ್ರವರ್ತಿ.

ವಿಜಯನಗರ ಸಾಮ್ರಾಜ್ಯ
ಸಂಗಮ ವಂಶ
ಹರಿಹರ I 1336–1356
ಬುಕ್ಕ ರಾಯ I 1356–1377
ಹರಿಹರ ರಾಯ II 1377–1404
ವಿರೂಪಾಕ್ಷ ರಾಯ 1404–1405
ಬುಕ್ಕ ರಾಯ II 1405–1406
ದೇವ ರಾಯ I 1406–1422
ರಾಮಚಂದ್ರ ರಾಯ 1422
ವೀರ ವಿಜಯ ಬುಕ್ಕ ರಾಯ 1422–1424
ದೇವ ರಾಯ II 1424–1446
ಮಲ್ಲಿಕಾರ್ಜುನ ರಾಯ 1446–1465
ವಿರೂಪಾಕ್ಷ ರಾಯ II 1465–1485
ಪ್ರೌಢ ರಾಯ 1485
ಸಾಳ್ವ ವಂಶ
ಸಾಳ್ವ ನರಸಿಂಹ ದೇವ ರಾಯ 1485–1491
ತಿಮ್ಮ ಭೂಪಾಲ 1491
ನರಸಿಂಹ ರಾಯ II 1491–1505
ತುಳುವ ವಂಶ
ತುಳುವ ನರಸ ನಾಯಕ 1491–1503
ವೀರ ನರಸಿಂಹ ರಾಯ 1503–1509
ಕೃಷ್ಣ ದೇವ ರಾಯ 1509–1529
ಅಚ್ಯುತ ದೇವ ರಾಯ 1529–1542
ವೆಂಕಟ I 1542
ಸದಶಿವ ರಾಯ 1542–1570
ಅರವೀಡು ವಂಶ
ಆಳಿಯ ರಾಮ ರಾಯ 1542–1565
ತಿರುಮಲ ದೇವ ರಾಯ 1565–1572
ಶ್ರೀರಂಗ I 1572–1586
ವೆಂಕಟ II 1586–1614
ಶ್ರೀರಂಗ II 1614
ರಾಮ ದೇವ ರಾಯ 1617–1632
ವೆಂಕಟ III 1632–1642
ಶ್ರೀರಂಗ III 1642–1646

1404ರಲ್ಲಿ,  ೨ನೇ ಹರಿಹರನ ಮರಣಾನಂತರ  ಸಿಂಹಾಸನವು ಆತನ ಮಕ್ಕಳಾದ ದೇವ ರಾಯ I, ಬುಕ್ಕ ರಾಯ II ಮತ್ತು ವಿರೂಪಾಕ್ಷ ರಾಯರ ನಡುವೆ ವಿವಾದವುಂಟಾಯಿತು. ವಿರೂಪಾಕ್ಷ ರಾಯ, ತನ್ನ ಮಕ್ಕಳಿಂದಲೇ ಹತ್ಯೆಯಾಗುವ ಮುನ್ನ, ಕೆಲವೇ ತಿಂಗಳುಗಳ ಕಾಲ ಮಾತ್ರ ರಾಜ್ಯಭಾರ ನಡೆಸಲು ಸಾಧ್ಯವಾಗುತ್ತದೆ.

ತದನಂತರ, ೨ ವರ್ಷಗಳ ಕಾಲ ಬುಕ್ಕ ರಾಯ II  ಆಡಳಿತ ನಡೆಸುತ್ತಾನೆ. ಆ ತರುವಾತ,  ದೇವರಾಯ I  ಸಹ ರಾಜ್ಯಭಾರ ನಡೆಸುತ್ತಾನೆ.

ವಿರೂಪಾಕ್ಷ ರಾಯನ ಆಡಳಿತ ಕೇವಲ ಕೆಲವೇ ತಿಂಗಳುಗಳಾದ್ದರಿಂದ, ಮಹತ್ವದ ಯಾವುದೇ ಘಟನೆಗಳು ಅಥವಾ ಬದಲಾವಣೆಗಳು ನಡೆಯಲಿಲ್ಲ. ಪ್ರವಾಸಿ ನುನಿಜ್ ಪ್ರಕಾರ, ವಿರೂಪಾಕ್ಷ ರಾಯನ ಅವಧಿಯಲ್ಲಿ, ಗೋವ, ಚೌಲ್ ಮತ್ತು ಧಾಭ್ಹೊಳ್ ಒಳಗೊಂಡಂತೆ ಹಲವು ಪ್ರಾಂತ್ಯಗಳನ್ನು ಮುಸ್ಲಿಮ್ ರಾಜರುಗಳಿಗೆ ಸೋತ. ಅಲ್ಲದೇ, ಬಹು ಕಠುಕನಾಗಿದ್ದನು ಮತ್ತು "ಮದಿರೆ ಮತ್ತು ಮಹಿಳೆಯರ ಜೊತೆ ಮೈಮರೆಯುತ್ತಿದ್ದ" ಎಂದೂ ಬರೆದಿದ್ದಾನೆ. 

ಪೂರ್ವಾಧಿಕಾರಿ
ಹರಿಹರ ರಾಯ II
ವಿಜಯನಗರ ಸಾಮ್ರಾಜ್ಯ
1404-1405
ಉತ್ತರಾಧಿಕಾರಿ
ಬುಕ್ಕ ರಾಯ II


ಬಾಹ್ಯ ಕೊಂಡಿಗಳು[ಬದಲಾಯಿಸಿ]

ಈ ಲೇಖನವನ್ನು ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ ಅಥವಾ ಸಂಪಾದಿಸಲಾಗಿದೆ.