ನಾಯಕ (ಜಾತಿ) ವಾಲ್ಮೀಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಾಯಕ (ಜಾತಿ) ಇಂದ ಪುನರ್ನಿರ್ದೇಶಿತ)
  • ನಾಯಕ ಇದು ಕರ್ನಾಟಕ ಮೂಲದ ಜಾತಿಯ ಹೆಸರು. ಬೇಡ, ನಾಯಕ, ವಾಲ್ಮೀಕಿ, ಬೇಡರು, ಬೋಯ, ರಾಯ ,ಪಾಳೇಗಾರ, ಬೇಡನಾಯಕ, ಹೀಗೆ ಸ್ಥಳೀಯವಾಗಿ ಹಲವಾರು ಪರ್ಯಾಯ ಹೆಸರುಗಳಿಂದ ಗುರುತಿಸಲ್ಪಡುವ ಈ ಜನಾಂಗವು, ಕರ್ನಾಟಕ ನೆಲಮೂಲದ ಏಕೈಕ ಕ್ಷತ್ರಿಯ ಜನಾಂಗವೆಂದು ಗುರುತಿಸಿಕೊಂಡಿದೆ.
  • ಬೇಡನಾಯಕ ಸಮುದಾಯದ ಇತಿಹಾಸ

ಬೇಡ ನಾಯಕ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ; ಇತಿಹಾಸವಿದೆ.

ಹಿಂದೂ ತತ್ತ್ವಶಾಸ್ತ್ರ

ಕ್ಷತ್ರಿಯ ಬೇಡನಾಯಕರು

ಆಚರಣೆಗಳು
ನಂಬಿಕೆ • ಹಿಂದೂ
ದೇವರು • ಶಿವ, ಸ್ಥಳೀಯ ದೇವರು
ಮೂಲ ಪುರುಷ · ವೇನ ಮಹಾರಾಜ
ಪ್ರಮುಖ ವ್ಯಕ್ತಿಗಳು
ರಾಮಾಯಣ ರಚಿಸಿದ ವಾಲ್ಮೀಕಿ
ಏಕಲವ್ಯ
ಬೇಡರ ಕಣ್ಣಪ್ಪ
ಸಾಮ್ರಾಟರು
ಹರಿಹರ ಬುಕ್ಕರಾಯ
ಮದಕರಿ ನಾಯಕರು
ಕುಮಾರ ರಾಮ
ಸಿಂಧೂರ ಲಕ್ಷ್ಮಣ

ಕರ್ನಾಟಕದಲ್ಲಿ ಬಹುದೊಡ್ಡ ಕ್ಷತ್ರಿಯ ಜನಾಂಗವಿದೆ. ಇದು ಕರ್ನಾಟಕದ ಏಕೈಕ ಮೂಲನಿವಾಸಿ ಕ್ಷತ್ರಿಯ ಜನಾಂಗ ಎಂಬುದಾಗಿ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಈ ಜನಾಂಗದವರ ಆಳ್ವಿಕೆ ಮಹಾಭಾರತದ ಕಾಲದಿಂದಲೂ ಇರುವುದಾಗಿ ತಿಳಿದುಬರುತ್ತದೆ. ಈ ಜನಾಂಗದವರು ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಮತ್ತು ಪಾಂಡವರ ಎರಡೂ ಪಕ್ಷಗಳ ಪರವಾಗಿ ಭಾಗವಹಿಸಿದ್ದರು. ಸಹದೇವನು ರಾಜಸೂಯ ಯಾಗದ ಪ್ರಯುಕ್ತ ತನ್ನ ದಕ್ಷಿಣ ಭಾರತದ ದಂಡಯಾತ್ರೆಯಲ್ಲಿ ಈ ಜನಾಂಗವನ್ನು ಸೋಲಿಸಿ ಕಪ್ಪ ಪಡೆದಿದ್ದಾಗಿ ಉಲ್ಲೇಖವಿದೆ. ಕರ್ನಾಟಕವನ್ನು ಆಳಿದ ಪುರಾಣಶ್ರೇಷ್ಠ ಚಕ್ರವರ್ತಿ ಚಂದ್ರಹಾಸನು ಇದೇ ಜನಾಂಗದವನು. ನಿಷಾದ ದೇಶದ ಚಕ್ರವರ್ತಿ ನಳ ಮಹಾರಾಜ, ಶೃಗಂಭೇರಪುರದ ರಾಜನಾದ ಹಿರಣ್ಯಧನುವಿನ ಪುತ್ರ ಮುಂತಾದ ಪೌರಾಣಿಕ ಅರಸರು ಈ ಜನಾಂಗದವರಾಗಿರುವರು.

ವಿಷ್ಣುಪುರಾಣ ಮತ್ತು ಕ್ಲದ ಪ್ರಕಾರ ಈ ಭೂಮಿಯ‌ ಮೊದಲ ಪಟ್ಟಾಭಿಷಿಕ್ತ ಚಕ್ರವರ್ತಿಯಾದ ಪೃಥುವಿನ ತಂದೆಯಾದ ವೇನ ಮಹಾರಾಜನು (ಪೃಥುವಿನಿಂದ ಈ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದೆ) ಬೇಡ ನಾಯಕರ ಮೂಲಪುರುಷನಾಗಿರುವನು. ಪರಶುರಾಮನು ಕ್ಷತ್ರಿಯರ ಸಂಹಾರ ಮಾಡುವ ಸಂದರ್ಭದಲ್ಲಿ ಕೆಲ ಕ್ಷತ್ರಿಯರು ಬೆದರಿ ಕಾಡು ಸೇರಿದರು. ಇವರು ಅರಣ್ಯ, ಬೆಟ್ಟಗುಡ್ಡ ಮತ್ತು ನೀರಿನ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. ಕಾಡಿನಲ್ಲಿ ವಾಸವಿದ್ದ ಋಷಿಮುನಿಗಳಿಗೆ ರಕ್ಷಣೆ ಒದಗಿಸಿದ್ದರಿಂದ, ವಿಷ್ಣುವಿನ ಪರ್ಯಾಯ ಹೆಸರಾದ ನಾಯಕ ಎಂಬ ಬಿರುದು ಪಡೆದರು. ಹಾಗಾಗಿ ಇಂದು ಕ್ಷತ್ರಿಯರ ಕೆಲ ಉಪಪಂಗಡಗಳನ್ನು ಕ್ಷತ್ರಿಯ ಬುಡಕಟ್ಟು ಜನಾಂಗ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ. ಅನೇಕರು ರ ಸಾಹಸಿಗಳಾಗಿ ಬಾಳಿ ಬದುಕಿ ಪಾಳೆಯಗಾರರಾಗಿ ರಾಜರೆನಿಸಿಕೊಂಡು, ಅಧಿಕಾರದಲ್ಲಿ ಮೆರೆದು, ಧೀಮಂತರೆನಿಸಿಕೊಂಡು ನಾಡಿನ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿ, ಧರ್ಮ ಪ್ರಭುಗಳಾಗಿ ರಾಷ್ಟ್ರ ಪ್ರೇಮಕ್ಕೆ, ಧೈರ್ಯಕ್ಕೆ, ಸಾಹಸಕ್ಕೆ, ಶೌರ್ಯ ಪರಾಕ್ರಮಗಳಿಗೆ ಹೆಸರುವಾಸಿಯಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳ ಪ್ರೋತ್ಸಾಹದಿಂದ ಹೆಸರುವಾಸಿಗಳಾಗಿದ್ದಾರೆ.

77 ಪಾಳೇಪಟ್ಟುಗಳನ್ನು ಆಳ್ವಿಕೆ ಮಾಡಿ ಪಾಳೆಗಾರರು ಎಂದೆನೆಸಿಕೊಂಡವರು ಇದೆ ನಾಯಕ ಜನಾಂಗ.ಇಂದಿಗೂ ಹಲವಾರು ಹಳ್ಳಿಗಳ ಹೆಸರುಗಳು ನಾಯಕ ಎಂಬ ಪದದಿಂದಲೆ ಅಂತ್ಯಗೊಳ್ಳುವುದನ್ನು ಕಾಣಬಹುದು,ನಾಯಕ ಪಾಳೆಗಾರರು ಆಳಿದ ಊರುಗಳು ಅವು. ಮಹರ್ಷಿ ವಾಲ್ಮೀಕಿ ಜನಿಸಿದ ಸಮುದಾಯ ಇದು.

ವಾಲ್ಮೀಕಿ ಸಮಾಜದ ಪ್ರಮುಖ ಗಣ್ಯರು

1 ಬೇಡರ ಕಣ್ಣಪ್ಪ

2 ಮಹಾತಾಯಿ ಶಬರಿ

3 ಧನುರ್ದಾರಿ ಏಕಲವ್ಯ

4 ಕುಮಾರ ರಾಮ

5 ಹರಿಹರ-ಬುಕ್ಕರಾಯ

6 ಶ್ರೀ ಕೃಷ್ಣದೇವರಾಯ

7 ಮದಕರಿ ನಾಯಕರು

8 ಶಿವಪ್ಪ ನಾಯಕರು

9 ಸಿಂಧೂರ ಲಕ್ಷ್ಮಣ

10 ಕೆಳದಿ ಚೆನ್ನಮ್ಮ

11 ಹಲಗಲಿ ಬೇಡರು [ಜಡಗ ಮತ್ತು ಬಾಲ]

12 ರಾಜಾ ವೆಂಕಟಪ್ಪ ನಾಯಕ

14 ರಾಜಾ ಇಮ್ಮಡಿ ಪುಲಕೆಶಿ

15 ಕನಕದಾಸರು [ತಿಮ್ಮಪ್ಪನಾಯಕ ]

16 ಎಚ್ಚಮ್ಮ ನಾಯಕ

17 ಕಂಪಿಲರಾಯರು

ಪ್ರಮುಖ ಸಮಾಜದ ಸಂಘಟನೆಗಳು

೧ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ [ರಿ]

೨ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘ [ರಿ] ಬೆಂಗಳೂರು

೩ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ [ರಿ]

೪ ರಾಜನಳ್ಳಿ ವಾಲ್ಮೀಕಿ ಗುರುಪೀಠ

ಪ್ರಸ್ತುತ ನಾಯಕರು

1.ಎನ್. ವೈ. ಗೋಪಾಲಕೃಷ್ಣ

2.ಶ್ರೀರಾಮುಲು

3. ರಮೇಶ್ ಜಾರಕಿಹೊಳೆ,

4 ರಾಜಾ ವೆಂಕಟೇಶ್ ನಾಯಕ,

5. ಪುಣ್ಯಾನಂದಪುರಿ ಸ್ವಾಮಿಗಳು

6 ರಾಜಾ ಮದನಗೋಪಾಲ ನಾಯಕ,

7ರಾಜುಗೌಡ(ನರಸಿಂಹ ನಾಯಕ)

8 ನಟ ಕಿಚ್ಚ ಸುದೀಪ,

9 ಉದಯೋನ್ಮುಖ ನಟ ಶಶಿಕುಮಾರ್

10 ಸತೀಶ ಜಾರಕಿಹೊಳೆ

11 ಕೆ. ನ್. ರಾಜಣ್ಣ

ಇವೆರೆಲ್ಲರೂ ಇದೇ ಸಮುದಾಯದವರು.

ಶೊರಪುರದ ನಾಯಕರು ಮತ್ತು ತಿರುಪತಿ ದೇವಾಲಯ

ಇಂದಿಗೂ ತಿರುಪತಿಯಲ್ಲಿ ಜರುಗುವ ಬ್ರಹ್ಮೋಸ್ತ್ಸವ ಸುರಪುರದ ನಾಯಕರ ಮೊದಲ ಪೂಜೆ ಸಲ್ಲಿಸಿದ ನಂತರವೇ ಆರಂಭಗೊಳ್ಳುವುದು ವಾಡಿಕೆ.