ಸದಸ್ಯ:Dattaraj86/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದತ್ತರಾಜ್ ದೇಶಪಾಂಡೆ
[[File:
ಚಿತ್ರ:.jpg
Dattaraj Deshpande
|frameless|center=yes|alt=]]
ಜನನ೧೭-೦೭-೧೯೮೬
ಮುಳಮುತ್ತಲ, ಧಾರವಾಡ ಜಿಲ್ಲೆ
ವೃತ್ತಿಮಾರ್ಕೆಟಿಂಗ್ ಮ್ಯಾನೇಜರ್, ಹಾಗೂ ಬರಹಗಾರರು
ಭಾಷೆಕನ್ನಡ ತೆಲುಗು, ಹಿಂದೀ, ಸಂಸ್ಕೃತ
ವಿದ್ಯಾಭ್ಯಾಸಋಗ್ವೇದ ಘನಪಾಠಿ
ಪ್ರಕಾರ/ಶೈಲಿಗುರು ಶಿಷ್ಯ ಪರಂಪರೆ

ದತ್ತರಾಜ್ ದೇಶಪಾಂಡೆ[ಬದಲಾಯಿಸಿ]

ದತ್ತರಾಜ್ ದೇಶಪಾಂಡೆ ಕರ್ನಾಟಕದ ಮೌಖಿಕ ಪರಂಪರೆಯ ಋಗ್ವೇದ ಘನಪಾಠೀ ಯಾಗಿದ್ದು ಪ್ರಸಿದ್ಡ ವೈದಿಕ ವಿದ್ವಾಂಸರಾಗಿದ್ದಾರೆ. ಸಂಪೂರ್ಣ ಋಗ್ವೇದ ಸಂಹಿತೆಯ ಮೂಲ, ಪದ ಪಾಠ, ಕ್ರಮ ಪಾಠ ಹಾಗೂ ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ಹಾಗೂ ಘನಪಾಠಗಳನ್ನು ಪುಸ್ತಕದ ಸಹಾಯವಿಲ್ಲದೆ ನಿರರ್ಗಳವಾಗಿ ಸ್ವರಸಂಚಾರ ಸಹಿತವಾಗಿ ಪಠಿಸಬಲ್ಲ, ಸಂಪೂರ್ಣ ವೇದವನ್ನು ಹಾಗೂ ಅದರ ಮೂರು ಪ್ರಕೃತಿ ಪಾಠಗಳು ಹಾಗೂ ಎಂಟು ವಿಕೃತಿ ಪ್ರಕಾರಗಳನ್ನೂ ಕಂಠಸ್ಥ ಹೊಂದಿರುವ ಕರ್ನಾಟಕದ ಬೆರಳೆಣಿಕೆಯಷ್ಟು ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಪ್ರಾಥಮಿಕ ಶಾಲೆಯ ಎರಡನೇ ತರಗತಿನ್ನು ಅರ್ಧಕ್ಕೆ ಬಿಟ್ಟು ಮುಂದೆ ಶಾಲಾ-ಕಾಲೇಜುಗಳಿಗೆ ಹೋಗದೇ ಇದ್ದರೂ ಸಪ್ರಯತ್ನದಿಂದ ಭಾಷೆಯನ್ನ ಕಲಿತು ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬರಹಗಾರ ಹಾಗೂ ಅನುವಾದಕರಾಗಿ ಅನೇಕ ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

ಹಿನ್ನೆಲೆ - ಬಾಲ್ಯ[ಬದಲಾಯಿಸಿ]

ಹುಟ್ಟಿದ್ದು ಧಾರವಾಡ ಜಿಲ್ಲೆಯ ಮುಳಮುತ್ತಲ ದಲ್ಲಿ. ನಾಲ್ಕನೇ ವಯಸ್ಸಿಗೆ ಇವರ ತಾಯಿ ಇವರನ್ನು ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಇಟ್ಟಿದ್ದರು. ಅಲ್ಲಿಯೇ ಬೆಳೆದು ಶಾಲೆಗೆ ಹೊರಟರು. ಶಾಲೆಗಿಂತ ಮನೆಗೆಲಸ, ದನ ಕಾಯುವುದು ತೋಟ ಕಾಯುವುದನ್ನು ಮಾಡಿದ್ದೇ ಹೆಚ್ಚು. ಹತ್ತನೇ ವಯಸ್ಸಿಗೆ ಸಂಬಂಧಿಕರ ಮನೆಯಿಂದ ಓಡಿ ಹೋಗಿ ಹೊಸಪೇಟೆಯ ವಿದ್ಯಾರಣ್ಯ ವಿದ್ಯಾಪೀಠ ಸೇರಿದರು. ಅಲ್ಲಿ ಮೌಖಿಕ ಪರಂಪರೆಯಲ್ಲಿ ವೇದಾಧ್ಯಯನ ಪ್ರಾರಂಭವಾಯಿತು ಆದರೆ ಶಾಲೆಯ ಶಿಕ್ಷಣ ನಿಂತು ಹೋಯಿತು. ವಿದ್ಯಾಪೀಠ ತೊರೆದು ಮುಂದೆ ಆಂಧ್ರದ ಕೆಲಕಡೆ, ಹಾಗೂ ತಮಿಳುನಾಡಿನ ವಿದ್ವಾಂಸರ ಮನೆಗಳಲ್ಲಿ ಇದ್ದುಕೊಂಡು ಗುರುಸೇವೆ ಮಾಡಿಕೊಂಡು ವೇದಾಧ್ಯಯನ ಮುಂದುವರೆಸಿದರು.

ವೃತ್ತಿ ಬದುಕು[ಬದಲಾಯಿಸಿ]

ಅಧ್ಯಯನ ಕಾಲದಲ್ಲಿಯೇ ಮನೆಗೆ ದುಡ್ಡು ಕಳಿಸಬೇಕಾದಾಗ ಹದಿನಾಲ್ಕನೆಯ ವಯಸ್ಸಿನಲ್ಲಿ ದೇವಸ್ಥಾನವೊಂದರ ಬೆಳಗಿನ ಪೂಜಾರಿಯಾಗಿ ವೃತ್ತಿಜೀವನ ಪ್ರಾರಂಭ. ಮಧ್ಯಕಾಲದಲ್ಲಿ ಅಂಗಡಿಗಳಿಗೆ ತರಕಾರಿ, ಹಣ್ಣುಗಳನ್ನ ಹಾಕಿ ಬರುವುದು, ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರ, ಪೌರೋಹಿತ್ಯದಂಥ ಕೆಲ ಕೆಲಸಗಳನ್ನು ಮಾಡಿಕೊಂಡೇ ಬೆಳೆದರು. ೨೦೦೪ ರಲ್ಲಿ ಘನಾಂತದ ವರೆಗೆ ಅಧ್ಯಯನ ಮುಗಿದ ಕೂಡಲೇ ಬೀದರ್ ಜಿಲ್ಲೆಯ ಮಾಣಿಕಪ್ರಭು ವೇದ ಪಾಠಶಾಲೆಯಲ್ಲಿ ಅಧ್ಯಾಪಕರಾದರು.೨೦೦೪-೨೦೧೦ ಈ ಆರು ವರ್ಷಗಳಲ್ಲಿ ೨೬ ವಿದ್ಯಾರ್ಥಿಗಳಿಗೆ ಸಂಪೂರ್ಣ ಋಗ್ವೇದ ಸಂಹಿತೆಯನ್ನು ಪಾಠ ಮಾಡಿ ಮುಗಿಸಿ ರಾಷ್ಟ್ರ ಮಟ್ಟದ ಮೌಖಿಕ ಪರೀಕ್ಷೆಗಳಿಗೆ ಆ ವಿದ್ಯಾರ್ಥಿಗಳನ್ನು ಕಳಿಸಿದರು. ಈ ಸಾಧನೆಗೆ ಭಾರತ ಸರ್ಕಾರದ ಅಧೀನ ಸಂಸ್ಥೆ ಮಹರ್ಷಿ ಸಾಂದಿಪನಿ ರಾಷ್ಟೀಯ ವೇದ ವಿದ್ಯಾ ಪ್ರತಿಷ್ಥಾನವು ಋಗ್ವೇದ ಅಭಿಜ್ಞ ಪುರಸ್ಕಾರವನ್ನು ನೀಡಿತು. ಮಹಾರಾಷ್ಟ್ರದ ಸಾಂಗ್ಲಿಯ ಜಯಂತಿ ವಾಸುದೇವ್ ಸ್ಮಾರಕ ಸಂಸ್ಥೆಯು ೨೦೧೦ ನೇ ಸಾಲಿನ ಪುರುಷೋತ್ತಮ್ ಪುರಸ್ಕಾರವನ್ನು ನೀಡಿ ಗೌರವಿಸಿತು. ೨೦೦೭ರಲ್ಲಿ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದ ವಿಶ್ವ ವೇದ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಆಧುನಿಕ ಭಾರತದಲ್ಲಿ ಮೌಖಿಕ ಪರಂಪರೆಯ ಸ್ಥಿತಿಗತಿಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ್ದಾರೆ. ಆ ಸಮ್ಮೇಳನದಲ್ಲಿ ಭಾಗವಹಿಸಿದ ಅತೀ ಕಿರಿಯ ವಯಸ್ಸಿನ ವಿದ್ವಾಂಸರಾಗಿದ್ದಾರೆ. ೨೦೧೦ ರಲ್ಲಿ ಬೆಂಗಳೂರಿಗೆ ಬಂದು ಜೀವನ ನಿರ್ವಹಣೆಗೆ ಗೃಹಬಳಕೆ ವಸ್ತುಗಳ ವ್ಯಾಪಾರ, ಅಫಿಲಿಯೇಟ್ ಮಾರ್ಕೆಟಿಂಗ್, ಫ್ರೀಲ್ಯಾನ್ಸ್ ಅನುವಾದ ಮುಂತಾದ ಕೆಲಸಗಳನ್ನು ಮಾಡಿ ಈಗ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಸೇಲ್ಸ್ ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದಿಗೂ ಮನೆಯಲ್ಲಿಯೇ ಹಾಗೂ ಸ್ಕೈಪ್ ಮೂಲಕ ನೂರಕ್ಕೂ ಹೆಚ್ಚು ಆಸಕ್ತರಿಗೆ ವೇದ ಪಾಠವನ್ನು ಉಚಿತವಾಗಿ ಹೇಳಿಕೊಡುವುದನ್ನು ಮುಂದುವರೆಸಿದ್ದಾರೆ.

ಬರವಣಿಗೆ[ಬದಲಾಯಿಸಿ]

೨೦೦೫ ರಿಂದ ೨೦೧೦ ರ ವರೆಗೆ ಮಾಣಿಕ ರತ್ನ ಎಂಬ ಆಧ್ಯಾತ್ಮಿಕ ಮಾಸಪತ್ರಿಕೆಯ ತೆಲುಗು ಅವತರಣಿಕೆಯ ಅನುವಾದ/ಸಂಪಾದನೆ
ಹಿಂದೀ ಮಿಲಾಪ್, ಸಂಯುಕ್ತ ಕರ್ನಾಟಕ, ಬೋಧಿವೃಕ್ಷ, ಕರ್ಮವೀರ, ಮುಂತಾದ ಪತ್ರಿಕೆಗಳಿಗೆ ನೂರಕ್ಕೂ ಹೆಚ್ಚು ಲೇಖನ ಬರಹ.
ವಾಕ್ಚಿತ್ರ ಡಾಟ್ ಕಾಂ, ಕೆಂಡ ಸಂಪಿಗೆ, ಅವಧಿ, ವಾರ್ತಾ ಭಾರತಿ ಮುಂತಾದ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ೨೫ ಕ್ಕೂ ಹೆಚ್ಚು ಸಿನೆಮಾ ಕುರಿತ ಬರಹಗಳು
ಕನ್ನಡ ಮತ್ತು ಹಿಂದೀ ಭಾ‍ಷೆಗಳಲ್ಲಿ ನೂರಕ್ಕೂ ಹೆಚ್ಚು ಕವಿತೆಗಳು

ಪುಸ್ತಕಗಳು[ಬದಲಾಯಿಸಿ]

೨೦೦೭ ಗಾಯತ್ರಿ ಮಂತ್ರ್- ಏಕ್ ಲಘು ಪರಿಚಯ್ ( ಪರಿಚಯಾತ್ಮಕ ಗ್ರಂಥ ಹಿಂದಿಯಲ್ಲಿ)
೨೦೦೮ ಖಿಲ್ತೆ ಹೈ ಗುಲ್ ಯಹಾಂ (ಹಿಂದೀ ಕವಿತೆಗಳು)
೨೦೦೮ ಶ್ರೀ ಮಾಣಿಕ ಪ್ರಭು ಚರಿತ್ರೆ (ಅನುವಾದ)
೨೦೧೨ ಬಿಡುಗಡೆಯ ಹಾದಿ

ವೈಯಕ್ತಿಕ ಆಸಕ್ತಿ ಮತ್ತು ಹವ್ಯಾಸಗಳು[ಬದಲಾಯಿಸಿ]

ಅನೇಕ ಭಾಷೆಗಳ ಸಿನೆಮಾಗಳನ್ನು ನೋಡುವುದು, ಅವುಗಳ ಬಗ್ಗೆ ಬರೆಯುವುದು, ಸ್ಟ್ರೀಟ್ ಫೋಟೋಗ್ರಫಿ, ಭಗವದ್ಗೀತೆ, ಬ್ರಹ್ಮಸೂತ್ರ ಹಾಗೂ ಉಪನಿಷತ್ತುಗಳ ಮೇಲೆ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಅಧ್ಯಯನ ಮಾಡುವುದು, ಯೋಗಸಾಧನೆ, ರಾಮನಾಮ ಜಪಸಾಧನೆ ಮುಂತಾದವುಗಳು ಇವರ ವೈಯಕ್ತಿಕ ಆಸಕ್ತಿ ಹಾಗೂ ಅಭಿರುಚಿಗಳು