2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ[ಬದಲಾಯಿಸಿ]

ಕನ್ನಡದ ಖ್ಯಾತ ಲೇಖಕ, ವಿಮ­ರ್ಶಕ ಡಾ.ಜಿ.ಎಚ್‌. ನಾಯಕ ಅವರು ೨೦೧೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರ­ರಾಗಿ­ದ್ದಾರೆ. ಅವರ ‘ಉತ್ತರಾರ್ಧ’ ಪ್ರಬಂಧ ಕೃತಿ ಪ್ರಶಸ್ತಿ ಸಿಕ್ಕಿದೆ.

ಪ್ರಶಸ್ತಿಯು ರೂ.೧ ಲಕ್ಷ ನಗದು, ತಾಮ್ರದ ಫಲಕ, ಶಾಲು ಒಳಗೊಂಡಿದೆ. ೨೦೧೫ರ ಮಾರ್ಚ್‌ ೯ ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎ. ವಿವೇಕ ರೈ, ಪ್ರೊ. ಪ್ರಧಾನ ಗುರುದತ್ತ ಹಾಗೂ ವೀರಣ್ಣ ದಂಡೆ ತೀರ್ಪುಗಾರರಾಗಿ­ದ್ದರು.

ಖಗೋಳ ವಿಜ್ಞಾನಿ ಜಯಂತ ನಾರ­ಲೀಕರ್‌ (ಮರಾಠಿ), ರಾಜಪಲೆಂ ಚಂದ್ರ­ಶೇಖರ ರೆಡ್ಡಿ (ತೆಲುಗು), ಮಾಧವಿ ಸರ­ದೇಸಾಯಿ (ಕೊಂಕಣಿ), ಸುಭಾಷ್‌­ಚಂದ್ರನ್‌ (ಮಲಯಾಳಂ), ಪೂಮಣಿ (ತಮಿಳು) ಸೇರಿ ೨೨ಭಾಷೆಗಳ ಲೇಖಕ­ರನ್ನೂ ಪ್ರಶಸ್ತಿಗೆ ಆಯ್ಕೆ ಮಾಡ­ಲಾ­ಗಿದೆ. ಸಂಸ್ಕೃತ ಮತ್ತು ಮಣಿ­ಪುರಿ ಲೇಖಕರನ್ನು 15 ದಿನ­ದೊ­ಳಗೆ ಆಯ್ಕೆ ಮಾಡುವುದಾಗಿ ತಿಳಿದು ಬಂದಿದೆ.

ಪ್ರಸಿದ್ಧ ಕವಿ-ವಿಜೇತರು: ಈ ವರ್ಷ ಉತ್ಪಲ್ ಕುಮಾರ್ ಬಸು (ಬಂಗಾಳಿ), ಉಕ್ರವೋ ಗವರಾ ಬ್ರಹ್ಮ (ಬೋಡೊ), ಆದಿಲ್ ಜುಸ್ವಾಲಾ (ಇಂಗ್ಲೀಷ್), ಶಾದ್ ರಮ್ಜಾನ್ (ಕಾಶ್ಮೀರಿ),ಗೋಪಾಲ ಕೃಷ್ಣ ರಥ್(ಒಡಿಯಾ), ಜಸ್ವಿಂದರ್ (ಪಂಜಾಬಿ), ಗೋಪೆಯನ್ನು ಕಮಲ್ (ಸಿಂಧಿ) ಮತ್ತು ಮುನವ್ವಾರ್ ರಾಣಾ (ಉರ್ದು). ಶೈಲೇಂದರ್ಸಿಂಗ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ, ಇತರ ಪ್ರಖ್ಯಾತ ಕಾದಂಬರಿಕಾರರ ರಮೇಶ್ ಚಂದ್ರ ಶಾ (ಹಿಂದಿ) ಮತ್ತು ಆಶಾ ಮಿಶ್ರಾ (ಮೈಥಿಲಿ) ಜೊತೆಗೆ, ಡೋಗ್ರಿ ತಮ್ಮ ಕಾದಂಬರಿ ಪ್ರಶಸ್ತಿ ದೊರಕಿತು.

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]