೨ನೇ ಜಾಗತಿಕ ಸಮರದ ಅವಧಿಯಲ್ಲಿನ ಭಾರತೀಯ ಸೇನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತರ ಅವಧಿಗಳಿಗಾಗಿ, ನೋಡಿ: ಭಾರತೀಯ ಸೇನೆ (೧೮೯೫–೧೯೪೭)

British Indian Army

British Raj Red Ensign
ಸಕ್ರಿಯ ೧೮೫೭–೧೯೪೭
ದೇಶ British Raj
ನಿಷ್ಠೆ British Crown
Type Army
ಗಾತ್ರ ೨.೫ million men in ೧೯೪೫
Part of British Empire
Garrison/HQ GHQ India (Delhi)
ಕದನಗಳು Second Afghan War
Third Afghan War
Second Burmese War
Third Burmese War
Second Opium War
1882 Anglo-Egyptian War
1868 Expedition to Abyssinia
First Mohmand Campaign
Boxer Rebellion
Tirah Campaign
British expedition to Tibet
Sudan Campaign
World War I
Waziristan campaign 1919–1920
Waziristan campaign 1936–1939
World War II
North West Frontier
ದಂಡನಾಯಕರು
ಗಮನಾರ್ಹ
ದಂಡನಾಯಕರು
Frederick Roberts, 1st Earl Roberts
Herbert Kitchener, 1st Earl Kitchener
William Birdwood, 1st Baron Birdwood
Archibald Wavell, 1st Earl Wavell
Claude Auchinleck

೧೯೩೯ರಲ್ಲಿನ ೨ನೇ ಜಾಗತಿಕ ಸಮರದ ಅವಧಿಯಲ್ಲಿನ ಭಾರತೀಯ ಸೇನೆ ಯು ಕೇವಲ ೨೦೦,೦೦೦ ಸಂಖ್ಯೆಗೂ ಕೆಳಗಿದ್ದ ಸೈನಿಕರನ್ನು ಒಳಗೊಂಡಿತ್ತು.[೧] ಯುದ್ಧದ ಅಂತ್ಯದ ವೇಳೆಗೆ, ೧೯೪೫ರ ಆಗಸ್ಟ್‌ನಲ್ಲಿ ಈ ಸಂಖ್ಯೆಯು ೨.೫ ದಶಲಕ್ಷಷ್ಟು ಸೈನಿಕರಿಗೆ ಏರಿಕೆಯಾಗುವ ಮೂಲಕ, ಇದು ಇತಿಹಾಸದಲ್ಲಿನ ಅತಿದೊಡ್ಡ ಸ್ವಯಂಸೇವಕ ಸೇನೆಯೆನಿಸಿಕೊಂಡಿತು.[೧][೨] ಪದಾತಿಸೈನ್ಯ, ರಕ್ಷಾಕವಚದ ಯುದ್ಧ ವಾಹನಗಳು ಮತ್ತು ಒಂದು ಮರಿಹಕ್ಕಿ ವಾಯುಗಾಮಿ ಪಡೆಯ ತುಕಡಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಆಫ್ರಿಕಾ, ಯುರೋಪ್‌ ಮತ್ತು ಏಷ್ಯಾದಂಥ ಮೂರು ಭೂಖಂಡಗಳಲ್ಲಿ ಹೋರಾಡಿದರು.[೧]

ಭಾರತೀಯ ಸೇನೆಯು ಇಟಲಿಯ ಸೇನೆಯ ವಿರುದ್ಧ ಇಥಿಯೋಪಿಯಾದಲ್ಲಿ ಹೋರಾಡಿತು, ಈಜಿಪ್ಟ್‌, ಲಿಬಿಯಾ ಮತ್ತು ಟ್ಯುನಿಷಿಯಾಗಳಲ್ಲಿ ಇಟಲಿಯ ಸೇನೆ ಹಾಗೂ ಜರ್ಮನ್‌ ಸೇನೆಗಳೆರಡರ ವಿರುದ್ಧ ಹೋರಾಡಿತು, ಮತ್ತು ಇಟಲಿಯ ಶರಣಾಗತಿಯ ನಂತರ ಇಟಲಿಯಲ್ಲಿ ಜರ್ಮನ್‌ ಸೇನೆಯ ವಿರುದ್ಧ ಹೋರಾಡಿತು. ಆದಾಗ್ಯೂ, ಜಪಾನಿಯರ ಸೇನೆಯೊಂದಿಗೆ ಹೋರಾಡುವುದಕ್ಕೆ ಭಾರತೀಯ ಸೇನೆಯ ಬಹುಭಾಗವು ಬದ್ಧವಾಗಿತ್ತು; ಮೊದಲನೆಯದು ಮಲಯದಲ್ಲಿನ ಸೋಲು ಹಾಗೂ ಬರ್ಮಾದಿಂದ ಭಾರತೀಯ ಗಡಿಯೆಡೆಗಿನ ಹಿಮ್ಮೆಟ್ಟಿಕೆಯ ಸಂದರ್ಭವಾಗಿತ್ತು. ಆಮೇಲೆ, ವಿಶ್ರಾಂತಿ ತೆಗೆದುಕೊಂಡು ಮತ್ತು ಪುನಸ್ಸಜ್ಜುಗೊಳಿಸಿಕೊಂಡು ಬರ್ಮಾದೊಳಗೆ ವಿಜೋತ್ಸಾಹದ ಮುನ್ನಡೆಯನ್ನು ದಾಖಲಿಸಿದ ನಂತರ, ಬ್ರಿಟಿಷ್‌ ಸಾಮ್ರಾಜ್ಯದ ಅತಿದೊಡ್ಡ ಸೇನೆಯ ಭಾಗವು ಸರ್ವದಾ ರೂಪುಗೊಂಡಿತು. ಈ ದಂಡಯಾತ್ರೆಗಳಿಂದಾಗಿ ೩೬,೦೦೦ಕ್ಕೂ ಹೆಚ್ಚಿನ ಭಾರತೀಯ ಬಂಟರು ತಮ್ಮ ಪ್ರಾಣವನ್ನು ಕಳೆದುಕೊಂಡರೆ, ೩೪,೩೫೪ಕ್ಕೂ ಹೆಚ್ಚಿನ ಬಂಟರು ಗಾಯಗೊಂಡರು,[೩] ಮತ್ತು ೬೭,೩೪೦ ಮಂದಿ ಯುದ್ಧ ಕೈದಿಗಳು ಎನಿಸಿಕೊಂಡರು.[೪] ೪,೦೦೦ ಪ್ರಶಸ್ತಿ-ಭೂಷಣಗಳನ್ನು ಪ್ರದಾನ ಮಾಡುವುದರೊಂದಿಗೆ ಅವರ ಪರಾಕ್ರಮವು ಗುರುತಿಸಲ್ಪಟ್ಟಿತು ಹಾಗೂ ಭಾರತೀಯ ಸೇನೆಯ ೩೮ ಸದಸ್ಯರು ವಿಕ್ಟೋರಿಯಾ ಕ್ರಾಸ್‌ ಅಥವಾ ಜಾರ್ಜ್‌ ಕ್ರಾಸ್‌ ಪ್ರಶಸ್ತಿಯಿಂದ ಪುರಸ್ಕೃತರಾದರು.

ಮೂರನೇ ಆಫ್ಘನ್‌ ಯುದ್ಧದಲ್ಲಿ ಮತ್ತು ೧೯೧೯–೧೯೨೦ ಮತ್ತು ೧೯೩೬–೧೯೩೯ರ ಅವಧಿಯಲ್ಲಿ ವಾಜಿರಿಸ್ತಾನ್‌‌‌ನಲ್ಲಿನ ಎರಡು ಪ್ರಮುಖ ದಂಡಯಾತ್ರೆಗಳಲ್ಲಿ, ಹಾಗೂ Iನೇ ಜಾಗತಿಕ ಸಮರವಾದಂದಿನಿಂದಲೂ ವಾಯವ್ಯ ಗಡಿನಾಡಿನಲ್ಲಿ ತಲೆದೋರುತ್ತಿದ್ದ ಸಣ್ಣಪುಟ್ಟ ವಿವಾದಗಳಲ್ಲಿ ಹೋರಾಡುವ ಮೂಲಕ ಭಾರತೀಯ ಸೇನೆಯು ಒಂದು ಅನುಭವಸ್ಥ ಪಡೆ ಎನಿಸಿಕೊಂಡಿತ್ತು. ಸೈನ್ಯಕ್ಕೆ ಸೇರಿಕೊಳ್ಳುವಂತೆ ಕರೆನೀಡುವಷ್ಟರ ಮಟ್ಟಿಗಿನ ಮಾನವಶಕ್ತಿಯ ಕೊರತೆಯೇನೂ ಅಲ್ಲಿ ಕಂಡುಬರಲಿಲ್ಲವಾದರೂ, ಪರಿಣತ ತಾಂತ್ರಿಕ ಸಿಬ್ಬಂದಿಯ ಕೊರತೆಯು ಅಲ್ಲಿ ಕಂಡುಬಂದಿತು. ಅಶ್ವಸೈನ್ಯ ಪಡೆಯು ಯಂತ್ರಸಜ್ಜಿತಗೊಳಿಸಲ್ಪಟ್ಟ ಒಂದು ಟ್ಯಾಂಕ್‌ ಪಡೆಯಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯು ಕೇವಲ ಆಗಷ್ಟೇ ಶುರುವಾಗಿತ್ತು, ಮತ್ತು ಸಾಕಷ್ಟಿರುವ ಸಂಖ್ಯೆಗಳಲ್ಲಿ ಟ್ಯಾಂಕ್‌ಗಳು ಮತ್ತು ಕವಚಿತ ಯುದ್ಧವಾಹನಗಳನ್ನು ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದ ಅಸಾಮರ್ಥ್ಯದಿಂದಾಗಿ ಈ ಪ್ರಕ್ರಿಯೆಗೆ ತಡೆಯೊಡ್ಡಿದಂತಾಗಿತ್ತು.

ಸಂಘಟನೆ[ಬದಲಾಯಿಸಿ]

೧೯೩೯ರ ಭಾರತೀಯ ಸೇನೆಯು Iನೇ ಜಾಗತಿಕ ಸಮರದ ಅವಧಿಯಲ್ಲಿದ್ದ ಭಾರತೀಯ ಸೇನೆಗಿಂತ ವಿಭಿನ್ನವಾಗಿತ್ತು, ಇದು ೧೯೨೨ರಲ್ಲಿ ಸುಧಾರಣೆಗೊಂಡಿತ್ತು ಮತ್ತು ಏಕೈಕ ಪಟಾಲಂನ ಸೇನಾಪಡೆಗಳಿಂದ ಬಹು-ಪಟಾಲಂನ ಸೇನಾಪಡೆಗಳೆಡೆಗೆ ಸಾಗುವ ಮೂಲಕ ಹೊರಳುದಾರಿಯನ್ನು ತುಳಿದಿತ್ತು.[೫] ಒಟ್ಟಾರೆಯಾಗಿ ಹೇಳುವುದಾದರೆ, ಅಶ್ವಸೈನ್ಯದ ೨೧ ಸೇನಾಪಡೆಗಳು ಮತ್ತು ಪದಾತಿಸೈನ್ಯದ ೧೦೭ ಪಟಾಲಂಗಳಿಗೆ ಸೇನೆಯು ತಗ್ಗಿಸಲ್ಪಟ್ಟಿತ್ತು.[೬] ರಣರಂಗದ ಸೇನೆಯು ಈಗ ಪದಾತಿಸೈನ್ಯದ ನಾಲ್ಕು ತುಕಡಿಗಳು ಮತ್ತು ಅಶ್ವಸೈನ್ಯದ ಐದು ಸೇನಾದಳಗಳನ್ನು ಒಳಗೊಂಡಿತ್ತು.[೭] ಹಠಾತ್‌ ದಾಳಿಗಳಿಂದ ವಾಯವ್ಯ ಗಡಿನಾಡನ್ನು ಸಂರಕ್ಷಿಸುವುದಕ್ಕಾಗಿ ಪದಾತಿಸೈನ್ಯದ ೧೨ ಸೇನಾದಳಗಳ ಒಂದು ಸಂರಕ್ಷಕ ಪಡೆಯು ಅಸ್ತಿತ್ವದಲ್ಲಿತ್ತು. ಅಷ್ಟೇ ಅಲ್ಲ, ಪದಾತಿಸೈನ್ಯದ ಸುಮಾರು ಮೂರನೇ ಒಂದು ಭಾಗದಷ್ಟನ್ನು, ಅಂದರೆ ೪೩ ಪಟಾಲಂಗಳನ್ನು ಆಂತರಿಕ ಭದ್ರತೆಗಾಗಿ ಮತ್ತು ನಾಗರಿಕ ಶಕ್ತಿಗೆ ನೆರವಾಗಲೆಂದು ನಿಯೋಜಿಸಲಾಯಿತು.[೭] ೧೯೩೦ರ ದಶಕದಲ್ಲಿ, ಆಧುನಿಕೀಕರಣದ ಕಾರ್ಯಕ್ರಮವೊಂದನ್ನು ಭಾರತೀಯ ಸೇನೆಯು ಶುರುಮಾಡಿತು; ಅಷ್ಟು ಹೊತ್ತಿಗೆ ಸೇನೆಯು ತನ್ನದೇ ಆದ ಭಾರತೀಯ ಫಿರಂಗಿದಳ ಸೇನಾಪಡೆ ಎಂಬ ಫಿರಂಗಿದಳವನ್ನು ಹೊಂದಿತ್ತು ಹಾಗೂ ಅಶ್ವಸೈನ್ಯವು ಯಂತ್ರಸಜ್ಜಿತಗೊಳಿಸುವಿಕೆಯ ಪ್ರಕ್ರಿಯೆಗೆ ಒಡ್ಡಿಕೊಂಡಿತ್ತು.[೮] ೧೯೩೬ರ ವೇಳೆಗೆ, ಯುದ್ಧಕಾಲದಲ್ಲಿ ಸಿಂಗಪೂರ್‌, ಪರ್ಷಿಯಾದ ಕೊಲ್ಲಿ, ಕೆಂಪು ಸಮುದ್ರ, ಬರ್ಮಾ ಮೊದಲಾದ ತಾಣಗಳಿಗೆ ತಲಾ ಒಂದೊಂದು ಸೇನಾದಳವನ್ನೂ ಮತ್ತು ಈಜಿಪ್ಟ್‌‌ಗಾಗಿ ಎರಡು ಸೇನಾದಳವನ್ನೂ ಪೂರೈಕೆ ಮಾಡುವುದಕ್ಕೆ ಭಾರತೀಯ ಸೇನೆಯು ಬದ್ಧವಾಗಿತ್ತು.[೯] ಆದರೆ ಕೈಗೊಳ್ಳಲಾದ ಮತ್ತಷ್ಟು ತಗ್ಗಿಸುವಿಕೆಗಳಿಂದಾಗಿ ೧೯೩೯ರ ವೇಳೆಗೆ ಭಾರತೀಯ ಸೇನೆಯ ಗಾತ್ರವು ಅಶ್ವಸೈನ್ಯದ ೧೮ ಸೇನಾಪಡೆಗಳು ಮತ್ತು ಪದಾತಿಸೈನ್ಯದ ೯೬ ಪಟಾಲಂಗಳಿಗೆ ತಗ್ಗಿಸಲ್ಪಟ್ಟಿತ್ತು ಹಾಗೂ ೩೪,೧೫೫ ಅಸೈನಿಕರನ್ನು ಒಳಗೊಂಡಂತೆ ಇದು ಒಟ್ಟು ೧೯೪,೩೭೩ ಸೈನಿಕರನ್ನು ಹೊಂದಿತ್ತು.[೧೦] ಭಾರತೀಯ ಸೇನೆಗೆ ಸೇರಿಕೊಳ್ಳುವಂತೆ ಗಡಿನಾಡಿನ ಅನಿಯತ ಪಡೆಗೆ ಸೇರಿದ ೧೫,೦೦೦ ಸೈನಿಕರಿಗೆ, ಯುರೋಪಿನ ಮತ್ತು ಆಂಗ್ಲ-ಭಾರತೀಯ ಸ್ವಯಂಸೇವಕರನ್ನು ಒಳಗೊಂಡಿದ್ದ ಬೆಂಬಲಸೈನ್ಯ ಪಡೆಗೆ (ಭಾರತ) ಸೇರಿದ್ದ ೨೨,೦೦೦ ಸೈನಿಕರಿಗೆ, ಭಾರತೀಯ ಪ್ರಾದೇಶಿಕ ಸೈನಿಕ ಪಡೆಗೆ ಸೇರಿದ್ದ ೧೯,೦೦೦ ಮಂದಿಗೆ ಹಾಗೂ ಭಾರತೀಯ ಸಂಸ್ಥಾನದ ಪಡೆಗಳಿಗೆ ಸೇರಿದ್ದ ೫೩,೦೦೦ ಮಂದಿಗೆ ಅದು ಕರೆನೀಡಿತು.[೧೦]

ಸಂಪೂರ್ಣ ಸಜ್ಜುಗೊಳ್ಳದೆಯೇ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಕೊರತೆಯಿರುವಂತೆಯೇ ಭಾರತೀಯ ಸೇನೆಯು IIನೇ ಜಾಗತಿಕ ಸಮರವನ್ನು ಆರಂಭಿಸಿತು.[೪] ಯಾವುದೇ ಯುದ್ಧದ ಕಾರ್ಯಾಚರಣೆಗಳಲ್ಲಿ ಅದು ತೊಡಗಿಸಿಕೊಳ್ಳುವುದೆಂದು ನಿರೀಕ್ಷಿಸಲ್ಪಟ್ಟಿರಲಿಲ್ಲ ಮತ್ತು ಯುರೋಪ್‌ನಲ್ಲಿ ಯುದ್ಧದ ಹಠಾತ್‌ ಆರಂಭವಾದ ನಂತರ ಅದರ ಅವಶ್ಯಕತೆ ಕಂಡುಬರುವುದು ಅಸಂಭವವಾಗಿರುತ್ತದೆ ಎಂಬುದಾಗಿ ಬ್ರಿಟಿಷ್‌ ಸರ್ಕಾರವು ಸಲಹೆಯನ್ನು ನೀಡಿತ್ತು.[೪] ಆದ್ದರಿಂದ, ಉತ್ತರ ಆಫ್ರಿಕಾದ ದಂಡಯಾತ್ರೆ ಮತ್ತು ಪೂರ್ವ ಆಫ್ರಿಕಾದ ದಂಡಯಾತ್ರೆಗಳಲ್ಲಿ ಸೇವೆ ಸಲ್ಲಿಸುವಂತೆ ೪ನೇ ಪದಾತಿಸೈನ್ಯ ಮತ್ತು ೫ನೇ ಪದಾತಿಸೈನ್ಯದ ತುಕಡಿಗಳಿಗೆ ಮನವಿಮಾಡಿಕೊಂಡಾಗ ಮತ್ತು ಫ್ರಾನ್ಸ್‌ನಲ್ಲಿನ ಬ್ರಿಟಿಷ್‌ ದಂಡಯಾತ್ರೆಯ ಪಡೆಗೆ ಸೇರಿಕೊಳ್ಳುವಂತೆ ನಾಲ್ಕು ಹೇಸರಗತ್ತೆ ಉಪಭಾಗಗಳಿಗೆ ಕೇಳಿಕೊಂಡಾಗ, ಅದು ಒಂದಷ್ಟು ಅಚ್ಚರಿಯನ್ನು ಉಂಟುಮಾಡಿತ್ತು.[೪]

೧೯೪೦[ಬದಲಾಯಿಸಿ]

ಮತ್ತೆ ಪದಾತಿಸೈನ್ಯದ ಐದು ತುಕಡಿಗಳು ಮತ್ತು ಕವಚಿತ ಯುದ್ಧವಾಹನಗಳ ಒಂದು ತುಕಡಿಯನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ ಬ್ರಿಟಿಷ ಸರ್ಕಾರ ಮತ್ತು ಭಾರತೀಯ ಸರ್ಕಾರಗಳ ನಡುವೆ ೧೯೪೦ರ ಮೇ ತಿಂಗಳಲ್ಲಿ ಒಂದು ಒಡಂಬಡಿಕೆಯು ಏರ್ಪಟ್ಟಿತು; ಇದರಿಂದಾಗಿ ಪದಾತಿಸೈನ್ಯದ ೬ನೇ, ೭ನೇ, ೮ನೇ, ೯ನೇ, ೧೦ನೇ ತುಕಡಿಗಳು ಹಾಗೂ ೩೧ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿಗಳು ಅಸ್ತಿತ್ವಕ್ಕೆ ಬಂದವು.[೧೧] ಮಲಯ (೯ನೇ ತುಕಡಿ) ಮತ್ತು ಇರಾಕ್‌‌‌ನ (೬ನೇ, ೮ನೇ ಮತ್ತು ೧೦ನೇ ತುಕಡಿಗಳು) ರಕ್ಷಣಾಕಾರ್ಯದಲ್ಲಿ ಬಳಸಲ್ಪಡಲು ಈ ಹೊಸ ತುಕಡಿಗಳನ್ನು ಮೀಸಲಿಡಲಾಗಿತ್ತು.[೧೧] ಕವಚಿತ ಯುದ್ಧವಾಹನಗಳ ತುಕಡಿಗೆ ಸೇರಿದ ೩ನೇ ಭಾರತೀಯ ಮೋಟಾರು ಚಾಲಿತ ಸೇನಾದಳವು ಈಜಿಪ್ಟ್‌ಗೆ ಹೋಗಬೇಕಿತ್ತಾದರೂ, ಕವಚಿತ ಯುದ್ಧವಾಹನಗಳ ವಾಹನಗಳ ಕೊರತೆಯಿಂದಾಗಿ, ಕವಚಿತ ಯುದ್ಧವಾಹನಗಳ ತುಕಡಿಯ ಉಳಿದ ಭಾಗದ ರಚಿಸುವಿಕೆಯನ್ನು ಪಕ್ಕಕ್ಕಿರಿಸಲಾಯಿತು.[೧೧]

೧೯೪೧[ಬದಲಾಯಿಸಿ]

೧೯೪೧ರ ಮಾರ್ಚ್‌ನಲ್ಲಿ, ಭಾರತಕ್ಕೆ ಸಂಬಂಧಿಸಿದ ರಕ್ಷಣಾ ಯೋಜನೆಯನ್ನು ಭಾರತದ ಸರ್ಕಾರವು ಪರಿಷ್ಕರಿಸಿತು. ಜಪಾನಿಯರು ಏನು ಯೋಜನೆಯನ್ನು ಹಾಕುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿ ಆಸ್ಥೆ ವಹಿಸುವುದರೊಂದಿಗೆ ಮತ್ತು ಸಾಗರೋತ್ತರ ವಲಯಕ್ಕೆ ಕಳಿಸಲಾದ ತುಕಡಿಗಳ ಜಾಗಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಬೇಕಾದ ಅವಶ್ಯಕತೆಯನ್ನು ಮನಗಂಡು ರೂಪುಗೊಂಡ ಪದಾತಿಸೈನ್ಯದ ಐದು ಹೊಸ ತುಕಡಿಗಳಿಗೆ ಸಂಬಂಧಿಸಿದಂತೆ ಏಳು ಹೊಸ ಕವಚಿತ ಯುದ್ಧವಾಹನಗಳ ಸೇನಾಪಡೆಗಳು ಮತ್ತು ಪದಾತಿಸೈನ್ಯದ ೫೦ ಹೊಸ ಪಟಾಲಂಗಳು ಅಗತ್ಯವಾಗಿದ್ದವು. ಹೀಗೆ ರೂಪುಗೊಂಡವುಗಳಲ್ಲಿ ೧೪ನೇ, ೧೭ನೇ, ೧೯ನೇ, ೨೦ನೇ, ೩೪ನೇ ತುಕಡಿಗಳು ಮತ್ತು ಎರಡು ಕವಚಿತ ಯುದ್ಧವಾಹನಗಳ ರಚನೆಗಳಾದ ೩೨ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿ ಮತ್ತು ೫೦ನೇ ಭಾರತೀಯ ಟ್ಯಾಂಕ್‌ ಸೇನಾದಳಗಳು ಸೇರಿದ್ದವು.[೧೨]

೧೯೪೨[ಬದಲಾಯಿಸಿ]

ಹಿಂದೆ ರೂಪುಗೊಂಡ ತುಕಡಿಗಳು ೧೯೪೨ರಲ್ಲಿನ ಸಾಗರೋತ್ತರ ಕಾರ್ಯಾಚರಣೆಗಳಿಗೆ ಬಹುತೇಕವಾಗಿ ಬದ್ಧವಾಗಿದ್ದರಿಂದ, ಮತ್ತೊಮ್ಮೆ ಪದಾತಿಸೈನ್ಯದ ನಾಲ್ಕು ತುಕಡಿಗಳು (೨೩ನೇ, ೨೫ನೇ, ೨೮ನೇ, ೩೬ನೇ ತುಕಡಿಗಳು) ಮತ್ತು ೪೩ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿಯನ್ನು ಸೇನೆಯು ರೂಪಿಸಿತು.[೧೩] ಆದಾಗ್ಯೂ, ೧೯೪೨ರ ಅವಧಿಯಲ್ಲಿ ಸಂಭವಿಸಿದ ಘಟನೆಗಳು, ಮತ್ತು ಜಪಾನಿಯರ ವಿಜಯಗಳು ೨೮ನೇ ತುಕಡಿಯು ರೂಪುಗೊಳ್ಳಲಿಲ್ಲ ಎಂಬುದನ್ನು ತೋರಿಸಿದವು ಹಾಗೂ ಮತ್ತೊಂದು ಸ್ಥಳದಲ್ಲಿ ಬಳಸಲ್ಪಡುವುದಕ್ಕಾಗಿ ಈ ಘಟಕಗಳು ಮೀಸಲಿಡಲ್ಪಟ್ಟವು. ೩೬ನೇ ತುಕಡಿಯು ಅಪೂರ್ವವೆಂಬಂತೆ ಒಂದು ಬ್ರಿಟಿಷ್‌ ಭಾರತೀಯ ಸೇನಾ ರಚನೆಯಾಗಿ ಸೃಷ್ಟಿಸಲ್ಪಟ್ಟಿತಾದರೂ, ಮಡಗಾಸ್ಕರ್‌‌ ದಂಡಯಾತ್ರೆಯಿಂದ ಮತ್ತು ಬ್ರಿಟನ್‌ನಿಂದ ಭಾರತವನ್ನು ತಲುಪಿದ್ದ ಬ್ರಿಟಿಷ್‌ ಸೇನಾದಳಗಳಿಂದ ಅದು ರೂಪುಗೊಂಡಿತ್ತು. ೧೯೪೨ರಲ್ಲಿ ರೂಪುಗೊಂಡ ಅಂತಿಮ ತುಕಡಿಯು ೨೬ನೇ ಭಾರತೀಯ ಪದಾತಿಸೈನ್ಯ ತುಕಡಿ ಎನಿಸಿಕೊಂಡಿತು ಹಾಗೂ ಕಲ್ಕತ್ತಾದ ಸಮೀಪದಲ್ಲಿ ಬೀಡುಬಿಟ್ಟಿದ್ದ ಅಥವಾ ತರಬೇತಿಯಲ್ಲಿ ಪಾಲ್ಗೊಂಡಿದ್ದ ನಾನಾಬಗೆಯ ಘಟಕಗಳಿಂದ ಇದನ್ನು ತರಾತುರಿಯಿಂದ ರೂಪಿಸಲಾಗಿತ್ತು.[೧೩]

೧೯೪೨ರಲ್ಲಿ ಮಲಯ ಮತ್ತು ಬರ್ಮಾದಲ್ಲಿ ನಡೆದ ಕದನಗಳಲ್ಲಿ ಹೊಮ್ಮಿದ ಕಳಪೆ ಪ್ರದರ್ಶನಗಳನ್ನು ಗ್ರಹಿಸಿದ ನಂತರ, ಅಸ್ತಿತ್ವದಲ್ಲಿದ್ದ ಪದಾತಿಸೈನ್ಯ ತುಕಡಿಗಳು ಮಿತಿಮೀರಿದ ಪ್ರಮಾಣದಲ್ಲಿ ಯಂತ್ರಸಜ್ಜಿತಗೊಳಿಸಲ್ಪಟ್ಟಿವೆ ಎಂಬುದಾಗಿ ನಿರ್ಧರಿಸಲಾಯಿತು. ಇದನ್ನು ಎದುರಿಸುವುದಕ್ಕಾಗಿ ಲಘು ತುಕಡಿಗಳಾಗಿ ಕಾರ್ಯನಿರ್ವಹಿಸಲು ೧೭ನೇ ಮತ್ತು ೩೯ನೇ ತುಕಡಿಗಳನ್ನು ಆಯ್ಕೆಮಾಡಲಾಯಿತು; ಇವು ಕೇವಲ ಎರಡು ಸೇನಾದಳಗಳನ್ನು ಹೊಂದಿದ್ದು, ಪ್ರಾಣಿಗಳ ಮೇಲೆ ಮತ್ತು ನಾಲ್ಕು-ಚಕ್ರ-ಚಾಲನೆಯ ಸಾರಿಗೆಯ ಮೇಲೆ ಅವು ನೆಚ್ಚಿಕೊಂಡಿದ್ದವು.[೧೩]

ಆಕ್ರಮಣಕಾರಿ ದಾಳಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಭಾರತವು ನೆಲೆಯಾಗಬೇಕು ಎಂಬ ಒಡಂಬಡಿಕೆಯನ್ನು ೧೯೪೨ರ ಡಿಸೆಂಬರ್‌ ವೇಳೆಗೆ ಮಾಡಿಕೊಳ್ಳಲಾಯಿತು. ೩೪ ತುಕಡಿಗಳಿಗೆ ಸಂಬಂಧಿಸಿದಂತೆ ಯಥೋಚಿತವಾದ ಬೆಂಬಲವನ್ನು ನೀಡಬೇಕು; ಈ ತುಕಡಿಗಳಲ್ಲಿ ಎರಡು ಬ್ರಿಟಿಷ್ ತುಕಡಿಗಳು, ಪಶ್ಚಿಮ ಆಫ್ರಿಕಾದ ಒಂದು ತುಕಡಿ, ಪೂರ್ವ ಆಫ್ರಿಕಾದ ಒಂದು ತುಕಡಿ ಹಾಗೂ ಹನ್ನೊಂದು ಭಾರತೀಯ ತುಕಡಿಗಳು, ಮತ್ತು ಬರ್ಮಾ ಸೇನೆಯ ಉಳಿದ ಭಾಗಗಳು ಸೇರಿಕೊಂಡಿರಬೇಕು ಎಂಬುದು ಈ ಒಡಂಬಡಿಕೆಯ ಸಾರವಾಗಿತ್ತು.[೧೪]

೧೯೪೩[ಬದಲಾಯಿಸಿ]

೧೯೪೩ಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ, ಪದಾತಿಸೈನ್ಯದ ಮತ್ತೊಂದು ತುಕಡಿ, ಒಂದು ವಾಯುಗಾಮಿ ತುಕಡಿ ಹಾಗೂ ಕವಚಿತ ಯುದ್ಧವಾಹನಗಳ ಒಂದು ಭಾರೀ ಸೇನಾದಳ ಇವುಗಳ ರಚಿಸುವಿಕೆಯು ಸೇರಿತ್ತು. ೩೩ನೇ ಮತ್ತು ೪೩ನೇ ಕವಚಿತ ಯುದ್ಧವಾಹನಗಳ ತುಕಡಿಗಳ ಸಂಯೋಜಿಸುವಿಕೆಯಿಂದ ಕೇವಲ ೪೪ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿಯು ರೂಪುಗೊಂಡಿತು.[೧೩] ಪದಾತಿಸೈನ್ಯದ ತುಕಡಿಯ ರಚನಾ ಪ್ರಕ್ರಿಯೆಗೆ ಪದಾತಿಸೈನ್ಯದ ಎರಡು ಹೆಚ್ಚುವರಿ ಪಟಾಲಂಗಳನ್ನು ವಿಭಾಗೀಯ ತುಕಡಿಗಳಾಗಿ ಸೇರ್ಪಡೆ ಮಾಡಿದಾಗ, ಅಲ್ಲೊಂದು ಬದಲಾವಣೆ ಕಂಡುಬಂದಂತಾಯಿತು.[೧೩]

ಸೇನೆಯ ಸನ್ನದ್ಧತೆಯ ಕುರಿತಾದ ವರದಿಯನ್ನು ನೀಡಲೆಂದು ಹಾಗೂ ಸುಧಾರಣೆಗಳನ್ನು ಸೂಚಿಸಲೆಂದು ೧೯೪೩ರಲ್ಲಿ ಸಮಿತಿಯೊಂದನ್ನು ಸ್ಥಾಪಿಸಲಾಯಿತು. ಇದರ ಶಿಫಾರಸುಗಳು ಹೀಗಿದ್ದವು:

  1. ಮರಿಯೋಧ ಅಧಿಕಾರಿಗಳು ಮತ್ತು ವಿದ್ಯಾವಂತ ಅನನುಭವಿ ಸಿಪಾಯಿಗಳ ಮೇಲೆ ಪದಾತಿಸೈನ್ಯವು ಮೊದಲ ಹಕ್ಕುಗಳನ್ನು ಹೊಂದಿರಬೇಕು, ಅಧಿಕಾರಿಗಳು ಮತ್ತು ಸನ್ನದುರಹಿತ ಅಧಿಕಾರಿಗಳ (NCO) ಗುಣಮಟ್ಟವು ಸುಧಾರಿಸಲ್ಪಡಬೇಕು ಹಾಗೂ ವೇತನದಲ್ಲಿ ಒಂದು ಹೆಚ್ಚಳವಾಗಬೇಕು.
  2. ಮೂಲಭೂತ ತರಬೇತಿಯನ್ನು ಒಂಬತ್ತು ತಿಂಗಳುಗಳಿಗೆ ಹೆಚ್ಚಿಸಬೇಕು, ಇದಾದ ನಂತರ ಎರಡು ತಿಂಗಳುಗಳ ಅವಧಿಯ ಅರಣ್ಯ ಪ್ರದೇಶದ ವಿಶೇಷಜ್ಞತೆಯ ತರಬೇತಿಯನ್ನು ನೀಡಬೇಕು.
  3. ಸೈನ್ಯ ಬಲವರ್ಧನಾ ವ್ಯವಸ್ಥೆಯು ಸುಧಾರಿಸಲ್ಪಡಬೇಕು ಮತ್ತು ವಿಶೇಷಪಡೆಗಳಲ್ಲಿ ಅನುಭವಸ್ಥ NCOಗಳಿರಬೇಕು.
  4. ಒಂದು ಬ್ರಿಟಿಷ್‌ ಪಟಾಲಂ, ಒಂದು ಭಾರತೀಯ ಪಟಾಲಂ ಹಾಗೂ ಒಂದು ಗೂರ್ಖಾ ಪಟಾಲಂನ್ನು ಪದಾತಿಸೈನ್ಯದ ಸೇನಾದಳಗಳು ಒಳಗೊಂಡಿರಬೇಕು.[೧೫]

೧೯೪೩ರ ಜುಲೈನಿಂದ ಆರಂಭವಾದ ಪದಾತಿಸೈನ್ಯದ ಅರಣ್ಯ ಪ್ರದೇಶ ತರಬೇತಿಯಲ್ಲಿ ನೆರವಾಗಲೆಂದು, ೧೪ನೇ ಮತ್ತು ೩೯ನೇ ತುಕಡಿಗಳನ್ನು ತರಬೇತಿಯ ತುಕಡಿಗಳಾಗಿ ಮಾರ್ಪಡಿಸಲಾಯಿತು.[೧೫] ೩೯ನೇ ತುಕಡಿಯ ಭಾಗವಾಗಿದ್ದ ೧೧೬ನೇ ಭಾರತೀಯ ಪದಾತಿಸೈನ್ಯದ ಸೇನಾದಳವು ಅರಣ್ಯ ಪ್ರದೇಶದ ಪರಿವರ್ತನೆಯ ವಿಶೇಷಜ್ಞತೆಯ ತರಬೇತಿಯನ್ನು ಒದಗಿಸಿತು. ಹೋರಾಟ ನಡೆಸುತ್ತಿರುವ ತುಕಡಿಗಳ ಪೈಕಿ ಒಂದರಲ್ಲಿನ ದಣಿದ ಪಟಾಲಂ ಒಂದಕ್ಕೆ ಬದಲಿಯಾಗಿ ನೇಮಿಸಲ್ಪಡಲು ಮುಂಚೂಣಿಗೆ ಕಳಿಸಲ್ಪಡುವುದಕ್ಕೆ ಮುಂಚಿತವಾಗಿ, ಪದಾತಿಸೈನ್ಯದ ಪಟಾಲಂ ಒಂದು ಸೇನಾದಳದೊಂದಿಗೆ ನಾಲ್ಕರಿಂದ ಆರು ತಿಂಗಳುಗಳವರೆಗೆ ಸಮಯ ವಿನಿಯೋಗಿಸಬೇಕು.[೧೫] ಬರ್ಮಾ ಮುಂಚೂಣಿಯಲ್ಲಿ ಅಷ್ಟುಹೊತ್ತಿಗಾಗಲೇ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಪಟಾಲಂಗಳಿಗೆ ಸಂಬಂಧಿಸಿದ ಸೈನ್ಯ ಬಲವರ್ಧನೆಗಳ ವಿಶೇಷಪಡೆಗಳಿಗಾಗಿ ೧೪ನೇ ತುಕಡಿಯ ಸೇನಾದಳಗಳು ಮತ್ತು ಘಟಕಗಳು ಅರಣ್ಯ ಪ್ರದೇಶದ ತರಬೇತಿಯನ್ನು ಒದಗಿಸಿದವು.[೧೬]

೧೯೪೪[ಬದಲಾಯಿಸಿ]

ಯೋಜಿತ ೪೪ನೇ ಭಾರತೀಯ ವಾಯುಗಾಮಿ ತುಕಡಿಯು ೪೪ನೇ ಕವಚಿತ ಯುದ್ಧವಾಹನಗಳ ತುಕಡಿಯಿಂದ ಅಂತಿಮವಾಗಿ ರೂಪುಗೊಂಡಿತು. ಇದರಿಂದಾಗಿ ೩೧ನೇ ಕವಚಿತ ಯುದ್ಧವಾಹನಗಳ ತುಕಡಿಯು ಸೇನೆಯ ಏಕೈಕ ಕವಚಿತ ಯುದ್ಧವಾಹನಗಳ ತುಕಡಿ ಎನಿಸಿಕೊಂಡಿತು.[೧೩] ಪದಾತಿಸೈನ್ಯದ ತುಕಡಿಯ ರಚನಾ ಪ್ರಕ್ರಿಯೆಯು ಮತ್ತೊಮ್ಮೆ ಬದಲಾಯಿಸಲ್ಪಟ್ಟಿತು; ಪದಾತಿಸೈನ್ಯದ ತಲಾ ಮೂರು ಸೇನಾದಳಗಳನ್ನು ಮತ್ತು ವಿಭಾಗೀಯ ತುಕಡಿಗಳು ಎಂಬುದಾಗಿ ಹೆಸರಿಸಲ್ಪಟ್ಟ ಪದಾತಿಸೈನ್ಯದ ಮೂರು ಪಟಾಲಂಗಳನ್ನು ಹೊಂದುವುದರೊಂದಿಗೆ ಅವು ಈಗ ಪ್ರಮಾಣಕವಾಗಿಸಲ್ಪಟ್ಟವು.[೧೩]

ಅರಣ್ಯ ಪ್ರದೇಶದ ಯುದ್ಧಸ್ಥಿತಿಗೆ ಸಂಬಂಧಿಸಿದಂತೆ ತರಬೇತಿ ಪಡೆಯುತ್ತಿದ್ದ ೧೧೬ನೇ ಸೇನಾದಳದ ಯಶಸ್ಸು ಗುರುತಿಸಲ್ಪಟ್ಟಿತು. ರಿಸಲ್‌ಪುರ್‌ ತರಬೇತಿ ಸೇನಾದಳದಿಂದ ಮಾರ್ಪಡಿಸಲ್ಪಟ್ಟಿದ್ದ, ಹದಿನಾಲ್ಕನೇ ಸೇನೆ ಮತ್ತು ೧೫೦ನೇ ಸೇನಾದಳಕ್ಕಾಗಿ ಉದ್ದೇಶಿಸಲಾಗಿದ್ದ ೧೧೬ನೇ ಸೇನಾದಳದ ತರಬೇತಿ ಪಡೆದ ಘಟಕಗಳು, ದಕ್ಷಿಣದ ಸೇನೆಗಾಗಿ ಉದ್ದೇಶಿಸಲಾಗಿದ್ದ ಘಟಕಗಳಿಗೆ ೧೯೪೪ರ ಮೇ ತಿಂಗಳಿನಿಂದ ತರಬೇತಿ ನೀಡಿತು.[೧೭] ಪಾಶ್ಚಾತ್ಯ ಯುದ್ಧಕ್ಷೇತ್ರಗಳಿಗಾಗಿ ಉದ್ದೇಶಿಸಲಾಗಿದ್ದ ಘಟಕಗಳಿಗೆ ಸಂಬಂಧಿಸಿದಂತೆ ತರಬೇತಿಯನ್ನು ಒದಗಿಸಲೆಂದು ೧೫೫ನೇ ಭಾರತೀಯ ಪದಾತಿಸೈನ್ಯದ ಸೇನಾದಳವು ರೂಪುಗೊಂಡಿತು.[೧೫]

ಪದಾತಿಸೈನ್ಯದ ತುಕಡಿಗಳು[ಬದಲಾಯಿಸಿ]

೧೯ನೇ ತುಕಡಿಯ ಪಡೆಗಳು ಜಪಾನಿಯರ ಪ್ರಬಲ ತಾಣವೊಂದರ ಮೇಲೆ ಗುಂಡಿನ ದಾಳಿಯನ್ನು ನಡೆಸುತ್ತಿರುವುದು.

ಪದಾತಿಸೈನ್ಯದ ಮೂರು ಸೇನಾದಳಗಳು, ಪದಾತಿಸೈನ್ಯದ ಮೂರು ಪಟಾಲಂಗಳನ್ನು ಪದಾತಿಸೈನ್ಯದ ತುಕಡಿಗಳು ಒಳಗೊಂಡಿದ್ದವು. ಸಾಮಾನ್ಯವಾಗಿ, ಪ್ರತಿ ಸೇನಾದಳದಲ್ಲಿನ ಒಂದು ಪಟಾಲಂ ಬ್ರಿಟಿಷರದಾಗಿರುತ್ತಿತ್ತು ಹಾಗೂ ಎರಡು ಪಟಾಲಂಗಳು ಭಾರತೀಯರ ಅಥವಾ ಗೂರ್ಖಾಗಳಿಗೆ ಸಂಬಂಧಪಟ್ಟಿರುತ್ತಿದ್ದವು. ಸಂಪೂರ್ಣವಾಗಿ ಗೂರ್ಖಾ ಪಟಾಲಂಗಳನ್ನು ಒಳಗೊಂಡಿರುವ ಮೂರು ಸೇನಾದಳಗಳು ರೂಪಿಸಲ್ಪಟ್ಟವು. ನಂತರದ ಯುದ್ಧದ ಸಂದರ್ಭದಲ್ಲಿ, ಬ್ರಿಟಿಷ್‌ ಪದಾತಿಸೈನ್ಯದ ಸೈನ್ಯ ಬಲವರ್ಧನೆಗಳು ಹೆಚ್ಚು ವಿರಳವಾಗುತ್ತಿದ್ದಂತೆ, ಅದರಲ್ಲೂ ನಿರ್ದಿಷ್ಟವಾಗಿ ಆಗ್ನೇಯ ಏಷ್ಯಾದ ಕ್ಷೇತ್ರದಲ್ಲಿ ಈ ಸನ್ನಿವೇಶವು ತಲೆದೋರಲು ಶುರುವಾಗುತ್ತಿದ್ದಂತೆ, ಬರ್ಮಾದಲ್ಲಿ ಹೋರಾಟ ನಡೆಸುತ್ತಿದ್ದ ಸೇನಾದಳಗಳಲ್ಲಿನ ಬ್ರಿಟಿಷ್‌ ಪಟಾಲಂಗಳನ್ನು ಭಾರತೀಯ ಘಟಕಗಳ ಬದಲಾಗಿ ತರಲಾಯಿತು.

ಒಂದು ಗುಣಮಟ್ಟದ MT (ಯಾಂತ್ರಿಕ ಸಾರಿಗೆ) ಸಿಬ್ಬಂದಿಯನ್ನು ಹೊಂದಿದ್ದ ತುಕಡಿಯೊಂದರಲ್ಲಿ, ವಿಭಾಗೀಯ ಘಟಕಗಳು ಶತ್ರುನೆಲೆ ಪತ್ತೆದಾರಿಕೆಯ ಒಂದು ಘಟಕವೆನಿಸಿಕೊಂಡಿದ್ದವು; ಒಂದು ಯಂತ್ರಸಜ್ಜಿತ ಅಶ್ವಸೈನ್ಯದ ಸೇನಾಪಡೆ, ಹಾಗೂ ವಿಕರ್ಸ್‌ ಯಂತ್ರಫಿರಂಗಿಯೊಂದಿಗೆ ಸಜ್ಜುಗೊಂಡಿದ್ದ ಯಂತ್ರಫಿರಂಗಿಯ ಒಂದು ಭಾರೀ ಪಟಾಲಂನ್ನು ಇದಕ್ಕೆ ಒದಗಿಸಲಾಗಿತ್ತು. (ಭಾರತೀಯ ಸೇನೆಯ ಪ್ರತಿಯೊಂದು ಸೇನಾಪಡೆಯು ತನ್ನ ಪದಾತಿಸೈನ್ಯದ ಪಟಾಲಂಗಳ ಜೊತೆಯಲ್ಲಿ ಒಂದು ಯಂತ್ರಫಿರಂಗಿ ಪಟಾಲಂನ್ನು ಪೋಷಿಸಿ ರೂಪಿಸಿತ್ತು.) ರಣರಂಗದ ಫಿರಂಗಿದಳದ ಮೂರು ಸೇನಾಪಡೆಗಳು, ಒಂದು ಟ್ಯಾಂಕ್‌-ನಿರೋಧಕ ಮತ್ತು ಒಂದು ವಿಮಾನ-ನಿರೋಧಕ ಸೇನಾಪಡೆಯನ್ನು ವಿಭಾಗೀಯ ಫಿರಂಗಿದಳವು ಒಳಗೊಂಡಿತ್ತು. ಅಲ್ಲಿ ನಿರ್ಮಾಣಕ್ಷೇತ್ರದ ಮೂರು ಉಪಭಾಗಗಳು ಮತ್ತು ನಿರ್ಮಾಣಕ್ಷೇತ್ರದ ಒಂದು ಸೇನಾಉಗ್ರಾಣ ಉಪಭಾಗವಷ್ಟೇ ಅಲ್ಲದೇ ಸಂಕೇತಗಳ ಘಟಕ, ವೈದ್ಯಕೀಯ ಘಟಕ ಮತ್ತು ಸಾರಿಗೆ ಘಟಕಗಳಿದ್ದವು.[೧೮]

ಪಾತ್ರವನ್ನು ಅವಲಂಬಿಸಿ, ಪದಾತಿಸೈನ್ಯದ ರಚಿಸುವಿಕೆಯ ಕುರಿತಾದ ಮಾರ್ಪಾಡುಗಳನ್ನು ಅಲ್ಲಿ ಕಾಣಬಹುದಾಗಿತ್ತು. ೧೯೪೨ರಲ್ಲಿ ಲಘು ತುಕಡಿಗಳಾಗಿ (೧೪ನೇ, ೧೭ನೇ ಮತ್ತು ೩೯ನೇ) ರೂಪುಗೊಂಡ ಘಟಕಗಳು ಕೇವಲ ಎರಡು ಸೇನಾದಳನ್ನಷ್ಟೇ ಹೊಂದಿದ್ದವು ಮತ್ತು ಸಾಕಷ್ಟು ಭಾರಿಯ ಸಲಕರಣೆಯ ಕೊರತೆಯನ್ನು ಅವು ಎದುರಿಸಿದವು. ಆರು ಹೇಸರಗತ್ತೆಯ ಉಪಭಾಗಗಳು ಮತ್ತು ನಾಲ್ಕು ಜೀಪ್‌ ಉಪಭಾಗಗಳಿಂದ ಸಾರಿಗೆ ಸೌಕರ್ಯವು ಒದಗಿಸಲ್ಪಟ್ಟಿತು. ಈ ಬಗೆಯ ತುಕಡಿಯನ್ನು ನಂತರದಲ್ಲಿ ಕೈಬಿಡಲಾಯಿತು. ಪ್ರಾಣಿಗಳ ಮತ್ತು ಯಂತ್ರಸಜ್ಜಿತ ಸಾರಿಗೆಯ ತುಕಡಿಗಳು (A & MT) (೭ನೇ, ೨೦ನೇ ಮತ್ತು ೨೩ನೇ ಮತ್ತು ನಂತರದಲ್ಲಿ ೫ನೇ ತುಕಡಿಗಳು) ಹೆಸರೇ ಸೂಚಿಸುವಂತೆ ಪ್ರಾಣಿ ಮತ್ತು ವಾಹನ ಸಾರಿಗೆಯ ಒಂದು ಮಿಶ್ರಣವನ್ನು ಹೊಂದಿದ್ದವು.[೧೯] ನಿರ್ದಿಷ್ಟವಾಗಿ ಹೇಳುವುದಾದರೆ, ವಾಹನದಿಂದ-ಎಳೆಯಲ್ಪಡುವ ರಣರಂಗದ ಫಿರಂಗಿದಳದ ಸೇನಾಪಡೆಗಳ ಪೈಕಿ ಒಂದನ್ನು, ಹೇಸರಗತ್ತೆಗಳ ಮೇಲೆ ಸಾಗಿಸಲಾಗುವ ಪರ್ವತ ಫಿರಂಗಿದಳದ ಸೇನಾಪಡೆಯೊಂದರಿಂದ ಬದಲಿಸಲಾಯಿತು. ಲಘುವಾಗಿ ಸಜ್ಜುಗೊಂಡಿದ್ದ ಪದಾತಿಸೈನ್ಯದ ಒಂದು ಪಟಾಲಂನಿಂದ ಶತ್ರುನೆಲೆ ಪತ್ತೆದಾರಿಕೆಯ ವಿಭಾಗೀಯ ಘಟಕವನ್ನು ಬದಲಿಸಲಾಯಿತು, ಮತ್ತು ಮತ್ತೊಂದು ಪ್ರಮಾಣಕ ಪದಾತಿಸೈನ್ಯದ ಪಟಾಲಂ, HQ ರಕ್ಷಣಾ ಘಟಕವಾಗಿ ಕಾರ್ಯನಿರ್ವಹಿಸಿತು.

೧೯೪೪ರ ಮೇ ೨೭ರಂದು, ಜನರಲ್‌ ಜನರಲ್‌ ಗಿಫಾರ್ಡ್‌ (೧೧ನೇ ಸೇನಾ ಗುಂಪಿನ ದಳಪತಿ) ಆದೇಶವೊಂದನ್ನು ನೀಡಿ, ಬರ್ಮಾದಲ್ಲಿ ಹೋರಾಡುತ್ತಿರುವ ಎಲ್ಲಾ ಭಾರತೀಯ ತುಕಡಿಗಳು A & MT ಸಿಬ್ಬಂದಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ.[೨೦] ಆದಾಗ್ಯೂ ಅದೇ ವರ್ಷದ ಅಂತ್ಯಭಾಗದಲ್ಲಿ, ಲೆಫ್ಟಿನೆಂಟ್‌ ಜನರಲ್‌ ವಿಲಿಯಂ ಸ್ಲಿಮ್‌ (ಹದಿನಾಲ್ಕನೇ ಸೇನೆಯ ಅಧಿಪತ್ಯ ವಹಿಸಿದ್ದವ) ಎಂಬಾತ ಎರಡು ತುಕಡಿಗಳನ್ನು (೫ನೇ ಮತ್ತು ೧೭ನೇ) ಮಾರ್ಪಾಡುಮಾಡಿ, ಎರಡು ಮೋಟಾರು-ಚಾಲಿತ ಸೇನಾದಳಗಳು ಹಾಗೂ ವಿಮಾನದಲ್ಲಿ ಸಾಗಿಸಬಹುದಾದ ಒಂದು ಸೇನಾದಳದ ಒಂದು ಸಮ್ಮಿಶ್ರಿತ ಘಟಕದ ರೂಪವನ್ನು ಅದಕ್ಕೆ ನೀಡಿದ; ತುಲನಾತ್ಮಕವಾಗಿ ಮುಕ್ತವಾಗಿರುವ ಕೇಂದ್ರಸ್ಥ ಬರ್ಮಾದ ಭೂಪ್ರದೇಶದಲ್ಲಿ ಯಂತ್ರಸಜ್ಜಿತ ಕಾರ್ಯಾಚರಣೆಗಳು ನಡೆಯುವುದರ ನಿರೀಕ್ಷೆಯಲ್ಲಿ ಆತ ಈ ಕ್ರಮವನ್ನು ಕೈಗೊಂಡ.[೨೧] ೧೯೪೫ರ ಏಪ್ರಿಲ್‌ನಲ್ಲಿ, ೨೦ನೇ ತುಕಡಿಯನ್ನೂ ಸಹ ಭಾಗಶಃವಾಗಿ ಮೋಟಾರು-ಚಾಲಿತವಾಗಿರುವ ಒಂದು ಘಟಕವಾಗಿ ಮಾರ್ಪಡಿಸಲಾಯಿತು; ಬರ್ಮಾದಿಂದ ಸೇನಾಸಿಬ್ಬಂದಿಗಳನ್ನು ಹಿಂತೆಗೆದುಕೊಳ್ಳುತ್ತಿದ್ದ ಬ್ರಿಟಿಷ್‌ ತುಕಡಿಯೊಂದರಿಂದ ವಾಹನಗಳನ್ನು ಪಡೆದುಕೊಳ್ಳುವ ಮೂಲಕ ಇದನ್ನು ನೆರವೇರಿಸಲಾಯಿತು.[೨೨]

ಕವಚಿತ ಯುದ್ಧವಾಹನಗಳ ತುಕಡಿಗಳು[ಬದಲಾಯಿಸಿ]

9ನೇ ರಾಯಲ್‌ ಡೆಕ್ಕನ್‌ ಹಾರ್ಸ್‌ನ ಷೆರ್ಮಾನ್‌ ಟ್ಯಾಂಕ್‌, 255ನೇ ಭಾರತೀಯ ಟ್ಯಾಂಕ್‌ ಸೇನಾದಳ, ಬರ್ಮಾ 1945

೧೯೪೦, ೧೯೪೧ ಮತ್ತು ೧೯೪೨ರ ಅವಧಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಕವಚಿತ ಯುದ್ಧವಾಹನಗಳ ಒಂದು ತುಕಡಿಯನ್ನು ರೂಪಿಸಲು ಉದ್ದೇಶಿಸಲಾಯಿತು. ಆದಾಗ್ಯೂ, ಭಾರತೀಯ ಕವಚಿತ ಯುದ್ಧವಾಹನಗಳ ರಚನಾ ಪ್ರಕ್ರಿಯೆಗಳಿಗೆ ಸಲಕರಣೆಗಳ ಕೊರತೆಯೊಂದು ಎದುರಾಯಿತು. ೧೯೪೦ರಲ್ಲಿ ಕಂಡುಬಂದ ಟ್ಯಾಂಕ್‌ಗಳ ಕೊರತೆಯು ೩೧ನೇ ಕವಚಿತ ಯುದ್ಧವಾಹನಗಳ ತುಕಡಿಯ ಸಂಘಟನೆಯಲ್ಲಿ ಪ್ರತಿಫಲಿಸಿತು; ಈ ತುಕಡಿಯು ಮೊದಲಿಗೆ ಕವಚಿತ ಯುದ್ಧವಾಹನಗಳ ಒಂದು ಸೇನಾದಳ ಮತ್ತು ಎರಡು ಮೋಟಾರು-ಚಾಲಿತ ಸೇನಾದಳಗಳನ್ನು ಹೊಂದಿತ್ತು. ೧೯೪೦ರ ಅಂತ್ಯದ ವೇಳೆಗೆ, ಕವಚಿತ ಯುದ್ಧವಾಹನಗಳ ಎರಡು ಸೇನಾದಳ ಮತ್ತು ಒಂದು ಮೋಟಾರು-ಚಾಲಿತ ಸೇನಾದಳದ ಸ್ವರೂಪಕ್ಕೆ ಬದಲಾಯಿಸಲ್ಪಟ್ಟಿತು.[೨೩] ೩ನೇ ಭಾರತೀಯ ಮೋಟಾರು-ಚಾಲಿತ ಸೇನಾದಳವು ಈಜಿಪ್ಟ್‌ಗೆ ಕಳಿಸಲ್ಪಟ್ಟಾಗ, ಕವಚಿತ ಯುದ್ಧವಾಹನಗಳ ಎರಡು ಸೇನಾದಳಗಳು ಹಾಗೂ ಒಂದು ಬೆಂಬಲ ಗುಂಪನ್ನು ಒಳಗೊಂಡಿದ್ದ ಕವಚಿತ ಯುದ್ಧವಾಹನಗಳ ತುಕಡಿಯ ಬ್ರಿಟಿಷ್‌ ಸಂಘಟನೆಯನ್ನು ಅಳವಡಿಸಿಕೊಳ್ಳಲಾಯಿತು.

೧೯೪೨ರ ಜೂನ್‌ನಲ್ಲಿ, ತುಕಡಿಯ ರೂಢವ್ಯವಸ್ಥೆಯನ್ನು ಕವಚಿತ ಯುದ್ಧವಾಹನಗಳ ಒಂದು ಸೇನಾದಳ ಹಾಗೂ ಒಂದು ಪದಾತಿಸೈನ್ಯದ ಸೇನಾದಳವಾಗಿ ನಿಗದಿಪಡಿಸಲಾಯಿತು. ಕವಚಿತ ಯುದ್ಧವಾಹನಗಳ ಹೆಚ್ಚುವರಿ ಸೇನಾದಳಗಳು (೫೦ನೇ, ೨೫೪ನೇ, ೨೫೫ನೇ ಮತ್ತು ೨೬೭ನೇ ಸೇನಾದಳಗಳು) ಸ್ವತಂತ್ರ ಸೇನಾದಳಗಳಾದವು ಹಾಗೂ ಬರ್ಮಾ ದಂಡಯಾತ್ರೆಯಲ್ಲಿ ಅವು ಸೇವೆ ಸಲ್ಲಿಸಿದವು.[೨೩] ತಾಂತ್ರಿಕ ಸಿಬ್ಬಂದಿಯ ಕೊರತೆ ಕಂಡುಬಂದಿದ್ದರಿಂದಾಗಿ ೧೯೪೩ರ ಮಾರ್ಚ್‌ನಲ್ಲಿ, ಕವಚಿತ ಯುದ್ಧವಾಹನಗಳ ಪಡೆಯ ಮತ್ತೊಂದು ಅವಲೋಕನವನ್ನು ನಡೆಸಬೇಕಾಗಿ ಬಂತು ಹಾಗೂ ಕವಚಿತ ಯುದ್ಧವಾಹನಗಳ ೩೨ನೇ ಮತ್ತು ೪೩ನೇ ತುಕಡಿಗಳು ಸಂಯೋಜಿಸಲ್ಪಟ್ಟು ೪೪ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿಯು ರೂಪುಗೊಂಡಿತು.[೨೩] ೧೯೪೪ರ ಮಾರ್ಚ್‌ನಲ್ಲಿ ನಡೆಸಲಾದ ಮತ್ತೊಂದು ಅವಲೋಕನವು ಕವಚಿತ ಯುದ್ಧವಾಹನಗಳ ಪಡೆಯನ್ನು ಒಂದು ತುಕಡಿಗೆ (ಇದು ಮಧ್ಯಪ್ರಾಚ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ೩೧ನೇ ಕವಚಿತ ಯುದ್ಧವಾಹನಗಳ ತುಕಡಿಯಾಗಿತ್ತು) ಹಾಗೂ ಮೂರು ಟ್ಯಾಂಕ್‌ ಸೇನಾದಳಗಳಿಗೆ (ಇವು ಬರ್ಮಾದಲ್ಲಿ ಸೇವೆ ಸಲ್ಲಿಸುತ್ತಿದ್ದ ೫೦ನೇ, ೨೫೪ನೇ ಮತ್ತು ೨೫೫ನೇ ಸೇನಾದಳಗಳಾಗಿದ್ದವು) ತಗ್ಗಿಸಿತು.[೨೩]

ವಾಯುಗಾಮಿ ತುಕಡಿಗಳು[ಬದಲಾಯಿಸಿ]

೧೯೪೧ರ ಅಕ್ಟೋಬರ್‌ ೨೯ರಂದು ೫೦ನೇ ಭಾರತೀಯ ಸ್ವತಂತ್ರ ಧುಮುಕುಕೊಡೆ ಸೇನಾದಳವು ರೂಪುಗೊಂಡಿತು; ೧೫೧ನೇ ಬ್ರಿಟಿಷ್‌ ಧುಮುಕುಕೊಡೆ ಪಟಾಲಂ, ೧೫೨ನೇ ಭಾರತೀಯ ಧುಮುಕುಕೊಡೆ ಪಟಾಲಂ ಮತ್ತು ೧೫೩ನೇ ಗೂರ್ಖಾ ಧುಮುಕುಕೊಡೆ ಪಟಾಲಂಗಳು ಇದರಲ್ಲಿ ಸಂಯೋಜಿಸಲ್ಪಟ್ಟಿದ್ದು, ಒಂದು ಮಧ್ಯಮ ಯಂತ್ರಫಿರಂಗಿಯ ಉಪಭಾಗ ಮತ್ತು ಒಂದು ಮಧ್ಯಮ ಸಣ್ಣ-ಫಿರಂಗಿಯ ವಿಶೇಷದಳದ ಸ್ವರೂಪವನ್ನು ಇದು ತನ್ನದಾಗಿಸಿಕೊಂಡಿತು. ೧೫೧ನೇ ಪಟಾಲಂಗೆ ನಂತರದಲ್ಲಿ ೧೫೬ನೇ ಪಟಾಲಂ ಎಂಬ ಹೊಸ ಕ್ರಮಾಂಕವನ್ನು ನೀಡಲಾಯಿತು ಹಾಗೂ ಬ್ರಿಟನ್‌ಗೆ ಅದನ್ನು ಹಿಂದಿರುಗಿಸಲಾಯಿತು; ಮತ್ತೊಂದು ಗೂರ್ಖಾ ಪಟಾಲಂ (೧೫೪ನೆಯದು) ರೂಪುಗೊಂಡಿತಾದರೂ, ಅದು ಸೇನಾದಳವನ್ನು ಸೇರಿಕೊಂಡಿರಲಿಲ್ಲ; ಇದು ೧೯೪೪ರ ಮಾರ್ಚ್‌ನಲ್ಲಿ ನಡೆದ ಸ್ಯಾಂಗ್‌ಶಾಕ್‌ ಕದನದಲ್ಲಿ ಆ ಪಟಾಲಂ ಅತೀವವಾಗಿ ತೊಡಗಿಸಿಕೊಂಡಿದ್ದ ಸಂದರ್ಭವಾಗಿತ್ತು.[೨೪][೨೫]

೪೪ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿಯ ಕೇಂದ್ರಕಾರ್ಯಾಲಯವನ್ನು ೧೯೪೪ರ ಏಪ್ರಿಲ್‌ನಲ್ಲಿ ೯ನೇ ಭಾರತೀಯ ವಾಯುಗಾಮಿ ತುಕಡಿಯಾಗಿ ಮಾರ್ಪಡಿಸಲಾಯಿತು ಹಾಗೂ ಇದು ಕೆಲವೇ ವಾರಗಳ ನಂತರದಲ್ಲಿ ೪೪ನೇ ವಾಯುಗಾಮಿ ತುಕಡಿ ಎಂದು ಮರುನಾಮಕರಣಗೊಂಡಿತು.[೨೬] ಭಾರತದ ಮೇಲಿನ ಜಪಾನಿಯರ ಆಕ್ರಮಣದ ಕಾರಣದಿಂದುಂಟಾದ ಒಂದು ವಿಳಂಬದ ನಂತರ, ತುಕಡಿಯು ಜುಲೈನಲ್ಲಿ ರೂಪುಗೊಳ್ಳುವಿಕೆಯನ್ನು ಪುನರಾರಂಭಿಸಿತು. ೫೦ನೇ ಧುಮುಕುಕೊಡೆ ಸೇನಾದಳವನ್ನು ಇದು ಸೇರಿಸಿಕೊಂಡಿತು, ಮತ್ತು ಮಿತ್ರರಾಷ್ಟ್ರಗಳ ಸೈನಿಕ ಪಡೆಯ[೨೭] ವಿಸರ್ಜಿಸುವಿಕೆಯಿಂದ ರೂಪುಗೊಂಡ ಎರಡು ಸೇನಾದಳಗಳು ನಂತರದಲ್ಲಿ ಇದನ್ನು ಸೇರಿಕೊಂಡವು; ೫೦ನೇ, ೭೭ನೇ ಧುಮುಕುಕೊಡೆ ಸೇನಾದಳಗಳು ಮತ್ತು ೧೪ನೇ ವಾಯು ಅವರೋಹಣ ಸೇನಾದಳ, ರಣರಂಗ ಫಿರಂಗಿದಳದ ಎರಡು ಸೇನಾಪಡೆಗಳು, ಎರಡು ವಿಮಾನ-ನಿರೋಧಕ ಸೇನಾಪಡೆಗಳು ಮತ್ತು ಒಂದು ಜಂಟಿ ವಿಮಾನ-ನಿರೋಧಕ ಮತ್ತು ಟ್ಯಾಂಕ್‌-ನಿರೋಧಕ ಸೇನಾಪಡೆಯನ್ನು ತುಕಡಿಯು ಈಗ ಒಳಗೊಂಡಿತ್ತು.[೨೮]

ಫಿರಂಗಿದಳ[ಬದಲಾಯಿಸಿ]

ಭಾರತೀಯ ಸೇನಾ ರಚನೆಗಳಿಗಾಗಿ ಅಗತ್ಯವಾಗಿದ್ದ ಫಿರಂಗಿದಳದ ಒಂದಷ್ಟು ಭಾಗವನ್ನು ರಾಜಾಶ್ರಯದ ಫಿರಂಗಿದಳವು ಇನ್ನೂ ಒದಗಿಸಿತು, ಆದರೆ ಭಾರತೀಯ ಫಿರಂಗಿದಳದ ಸೇನಾಪಡೆಯು ೧೯೩೫ರಲ್ಲಿ ರೂಪುಗೊಂಡಿತ್ತು ಮತ್ತು ಆರಂಭದಲ್ಲಿ ಇದು ಕುದುರೆಯು-ಎಳೆಯುವ ನಾಲ್ಕು ಫಿರಂಗಿಗಳನ್ನು ಒಳಗೊಂಡಿತ್ತು.[೨೯] ಯುದ್ಧದ ಸಂದರ್ಭದಲ್ಲಿ ಸೇನಾಪಡೆಯು ವಿಸ್ತರಿಸಲ್ಪಟ್ಟಿತು ಮತ್ತು ೧೯೪೫ರ ವೇಳೆಗೆ ರಣರಂಗದ ಫಿರಂಗಿದಳದ ೧೦ ಸೇನಾಪಡೆಗಳು, ಪರ್ವತ ಫಿರಂಗಿದಳದ ೧೩ ಸೇನಾಪಡೆಗಳು, ಟ್ಯಾಂಕ್-ನಿರೋಧಕ ಫಿರಂಗಿದಳದ ೧೦ ಸೇನಾಪಡೆಗಳನ್ನು ಇದು ರೂಪಿಸಿತ್ತು. ಸೃಷ್ಟಿಸಲ್ಪಟ್ಟಿದ್ದ ಭಾರೀ ವಿಮಾನ-ನಿರೋಧಕ ಫಿರಂಗಿದಳದ ನಾಲ್ಕು ಸೇನಾಪಡೆಗಳು ಮತ್ತು ಲಘು ವಿಮಾನ-ನಿರೋಧಕ ಫಿರಂಗಿದಳದ ಐದು ಸೇನಾಪಡೆಗಳಿಂದ ಮೂರು ವಿಮಾನ-ನಿರೋಧಕ ಸೇನಾದಳಗಳು ರೂಪುಗೊಂಡವು.[೩೦] ಯುದ್ಧದ ಸಂದರ್ಭದಲ್ಲಿ ಸೇನಾಪಡೆಗಳು ಸಲ್ಲಿಸಿದ ಸೇವೆಗಾಗಿ ಅವಕ್ಕೆ ರಾಜಾಶ್ರಯದ ಭಾರತೀಯ ಫಿರಂಗಿದಳ ಎಂಬ ವಿಶಿಷ್ಟನಾಮವನ್ನು ೧೯೪೫ರಲ್ಲಿ ನೀಡಲಾಯಿತು.[೨೯]

ಸೇನಾಸೌಕರ್ಯದ ನಿರ್ಮಾತೃಗಳು[ಬದಲಾಯಿಸಿ]

ಭಾರತೀಯ ಸೇನಾಸೌಕರ್ಯದ ನಿರ್ಮಾತೃಗಳು ಸೇನೆಯಲ್ಲಿನ ಪ್ರತಿಯೊಂದು ತುಕಡಿಯ ಒಂದು ಭಾಗವಾಗಿದ್ದವು. ಸೇನಾ ತುಕಡಿಗಳ ಎರಡು ಉಪಭಾಗಗಳು, ರಣರಂಗದ ೧೧ ಉಪಭಾಗಗಳು ಮತ್ತು ರಣರಂಗ ಸೇನಾಉಗ್ರಾಣದ ಒಂದು ಉಪಭಾಗದೊಂದಿಗೆ ಸೇನಾಸೌಕರ್ಯದ ನಿರ್ಮಾತೃಗಳ ವಿಶೇಷ ದಳವು ಯುದ್ಧವನ್ನು ಆರಂಭಿಸಿತು. ಯುದ್ಧದ ಸಂದರ್ಭದಲ್ಲಿ ಆದ ವಿಸ್ತರಣೆಯಿಂದಾಗಿ ಸೇನಾಸೌಕರ್ಯದ ನಿರ್ಮಾತೃಗಳ ಒಟ್ಟು ಸಂಖ್ಯೆಯಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡುಬಂದವು; ಅಂದರೆ, ಸೇನಾ ತುಕಡಿಗಳ ಐದು ಉಪಭಾಗಗಳು, ರಣರಂಗದ ೬೭ ಉಪಭಾಗಗಳು, ರಣರಂಗದ ಸೈನ್ಯದಳದ ಆರು ಸ್ವತಂತ್ರ ಉಪಭಾಗಗಳು ಹಾಗೂ ರಣರಂಗದ ಸೇನಾಉಗ್ರಾಣದ ಸೈನ್ಯದಳದ ಎರಡು ಸ್ವತಂತ್ರ ಮುಖ್ಯವಿಭಾಗಗಳು ಈ ಕ್ರಮದಿಂದಾಗಿ ರೂಪುಗೊಂಡವು.[೩೧]

ಮಹಿಳೆಯರ ಬೆಂಬಲಸೈನ್ಯದ ವಿಶೇಷ ದಳ[ಬದಲಾಯಿಸಿ]

ಮಹಿಳೆಯರ ಬೆಂಬಲಸೈನ್ಯದ ವಿಶೇಷ ದಳವು ೧೯೪೨ರ ಮೇ ತಿಂಗಳಿನಲ್ಲಿ ರೂಪುಗೊಂಡಿತು. ಇದಕ್ಕೆ ನೇಮಕಗೊಳ್ಳುವ ಅನನುಭವಿ ಸಿಪಾಯಿಗಳು ೧೮ ವರ್ಷಗಳಷ್ಟು ಕನಿಷ್ಟ ವಯಸ್ಸನ್ನು ಹೊಂದಿರಬೇಕಿತ್ತು ಹಾಗೂ ಗುಮಾಸ್ತರ ಕರ್ತವ್ಯಗಳು ಅಥವಾ ಗೃಹಬಳಕೆಯ ಕರ್ತವ್ಯಗಳನ್ನು ಅವರು ನಿರ್ವಹಿಸಬೇಕಿತ್ತು. ೧೯೪೨ರ ಡಿಸೆಂಬರ್‌ನಲ್ಲಿ, ಕನಿಷ್ಟ ವಯಸ್ಸನ್ನು ೧೭ ವರ್ಷಗಳಿಗೆ ತಗ್ಗಿಸಲಾಯಿತು ಹಾಗೂ ಯುದ್ಧದ ಅಂತ್ಯದ ವೇಳೆಗೆ ೧೧,೫೦೦ರಷ್ಟು ಮಹಿಳೆಯರು ಸೈನ್ಯಕ್ಕೆ ಸೇರಿಸಲ್ಪಟ್ಟಿದ್ದರು.[೨೩] ಸ್ಥಳೀಯ ಸೇವೆ ಅಥವಾ ಸಾರ್ವತ್ರಿಕ ಸೇವೆಯ ಷರತ್ತುಗಳ ಆಧಾರದ ಮೇಲೆ ಸ್ವಯಂಸೇವಕರು ಸೈನ್ಯಕ್ಕೆ ಸೇರಿಕೊಳ್ಳಬಹುದಾಗಿತ್ತು. ಸಾರ್ವತ್ರಿಕ ಸೇವೆಯಲ್ಲಿರುವವರನ್ನು ಭಾರತದಲ್ಲಿನ ಯಾವುದೇ ಮೂಲೆಗೆ ಸೇವೆ ಸಲ್ಲಿಸಲು ಕಳಿಸಬಹುದಾಗಿತ್ತು.[೩೨] ಎರಡು ದಶಲಕ್ಷಕ್ಕೂ ಹೆಚ್ಚಿನ ಸೈನಿಕರಿಗೆ ಹೋಲಿಸಿದಾಗ, ೧೧,೫೦೦ರಷ್ಟು ಮಹಿಳೆಯರನ್ನು ಒಳಗೊಂಡಿದ್ದ ಒಂದು ವಿಶೇಷ ದಳವು 'ಓಹೋ' ಎನ್ನಿಸುವಂತೆ ಇಲ್ಲದಿದ್ದರೂ ಸಹ, ಜಾತಿ ಮತ್ತು ಕೋಮುವಾರು ಪ್ರತಿಬಂಧಗಳಿಂದಾಗಿ ಇದಕ್ಕೆ ಸಂಬಂಧಿಸಿದ ನೇಮಕಾತಿಗೆ ಯಾವಾಗಲೂ ತಡೆಯೊಡ್ಡಲ್ಪಡುತ್ತಿತ್ತು. ಆ ಸಮಯದಲ್ಲಿದ್ದ ಭಾರತೀಯ ಮಹಿಳೆಯರು ಸಾಮಾಜಿಕವಾಗಿಯಾಗಲೀ ಅಥವಾ ಸೈನಿಕರೊಂದಿಗೆ ಕೆಲಸಮಾಡುವ ಸಂದರ್ಭದಲ್ಲಾಗಲೀ ಸಮರ್ಥವಾಗಿ ಬೆರೆಯಲಿಲ್ಲ ಮತ್ತು ವಿಶೇಷ ದಳದ ಒಂದು ದೊಡ್ಡ ಭಾಗವು ಆಂಗ್ಲ–ಏಷ್ಯಾದ ಸಮುದಾಯದಿಂದ ರೂಪುಗೊಂಡಿತ್ತು.[೩೩]

ಭಾರತೀಯ ಸಂಸ್ಥಾನಗಳ ಪಡೆಗಳು[ಬದಲಾಯಿಸಿ]

ಭಾರತೀಯ ಸಂಸ್ಥಾನಗಳು ಅಥವಾ ರಾಜನ ಸಂಸ್ಥಾನಗಳು ಯುದ್ಧದ ಸಂದರ್ಭದಲ್ಲಿ ೨೫೦,೦೦೦ ಸೈನಿಕರನ್ನು ಒದಗಿಸಿದವು.[೩೪] ಅಶ್ವಸೈನ್ಯದ ಐದು ಸೇನಾಪಡೆಗಳು ಮತ್ತು ಪದಾತಿಸೈನ್ಯದ ೩೬ ಪಟಾಲಂಗಳ[೩೫] ಕೊಡುಗೆಯನ್ನು ಅವರು ನೀಡಿದರು; ಅವುಗಳ ನಡುವೆ ಪದಾತಿಸೈನ್ಯದ ೧೬ ಪಟಾಲಂಗಳೇ ಅಲ್ಲದೇ, ಸಂಕೇತ, ಸಾರಿಗೆ ಮತ್ತು ಪಥನಿರ್ಮಾಪಕರ ಉಪಭಾಗಗಳೂ ಸಹ ಸಕ್ರಿಯ ಸೇವೆಯಲ್ಲಿದ್ದವು.[೩೪] ಅವರ ಸೈನಿಕರಲ್ಲಿ ಒಬ್ಬನಾದ ಕ್ಯಾಪ್ಟನ್‌ ಮಹಮೂದ್‌ ಖಾನ್‌ ದುರಾನಿ ಎಂಬಾತನಿಗೆ, ಅವನು ಜಪಾನಿಯರ ಬಂಧನದಲ್ಲಿದ್ದ ಸಂದರ್ಭದಲ್ಲಿ ಜನರಲ್‌ ಕ್ರಾಸ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.[೩೬]

ಮಿತ್ರರಾಷ್ಟ್ರಗಳ ಸೈನಿಕರು (ಚಿಂಡಿಟ್‌‌ಗಳು)[ಬದಲಾಯಿಸಿ]

ಮಿತ್ರರಾಷ್ಟ್ರಗಳ ಸೈನಿಕರು ಅಥವಾ ಚಿಂಡಿಟ್‌ಗಳು (ಒಂದು ಪೌರಾಣಿಕ ಚತುಷ್ಪಾದಿಯ ಹೆಸರನ್ನು ಇವರಿಗೆ ಇಡಲಾಗಿದ್ದು, ಅದರ ಪ್ರತಿಮೆಗಳು ಬರ್ಮೀಯರ ದೇವಾಲಯಗಳಿಗೆ ಕಾವಲಿರುತ್ತಿದ್ದವು) ಬ್ರಿಗೆಡಿಯರ್‌ ಓರ್ಡ್‌ ವಿಂಗೇಟ್‌ ಎಂಬಾತನ ಮಿದುಳಿನ ಶಿಶುವಾಗಿದ್ದರು; ಬರ್ಮಾದಲ್ಲಿನ ಜಪಾನಿಯರ ವಿರುದ್ಧವಾಗಿ, ಶತ್ರುವ್ಯೂಹಗಳ ಹಿಂಭಾಗದಿಂದ ನಡೆಸುವ ದೂರ-ವ್ಯಾಪ್ತಿಯ ಭೇದಿಸಿ ನುಗ್ಗುವಿಕೆಯ ದಾಳಿಗಳು ಒಂದು ಮುಖ್ಯ ಪ್ರಯತ್ನವಾಗಿ ಪರಿಣಮಿಸುತ್ತವೆ ಎಂಬುದಾಗಿ ಅವನು ಆಶಿಸಿದ್ದ.[೩೭] ೧೯೪೩ರಲ್ಲಿ, ೭೭ನೇ ಭಾರತೀಯ ಪದಾತಿಸೈನ್ಯ ಸೇನಾದಳದ ನೆರವಿನಿಂದ ಅವನು ಲಾಂಗ್‌ಕ್ಲಾತ್‌ ಎಂಬ ಕಾರ್ಯಾಚರಣೆಗೆ ಚಾಲನೆನೀಡಿದ. ೧೯೪೪ರಲ್ಲಿ ಒಂದು ಸಾಕಷ್ಟು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಅವರು ಹೂಡಿದರು ಮತ್ತು ೭೦ನೇ ಬ್ರಿಟಿಷ್‌ ಪದಾತಿಸೈನ್ಯ ತುಕಡಿಯ ಚೆದುರಿಸುವಿಕೆಯು ಇದರಲ್ಲಿ ಸೇರಿತ್ತು. ಇದರ ಮೂರು ಸೇನಾದಳಗಳನ್ನು ಮತ್ತೆ ಮೂರು ಸೇನಾದಳಗಳೊಂದಿಗೆ ಒಟ್ಟಾಗಿ ಗುಂಪಾಗಿಸಿ, ವಿಶೇಷ ಪಡೆ ಎಂದು ಅದಕ್ಕೆ ಕರೆಯಲಾಯಿತು ಹಾಗೂ ೩ನೇ ಭಾರತೀಯ ಪದಾತಿಸೈನ್ಯ ತುಕಡಿಯ ರೀತಿಯಲ್ಲಿ ರಕ್ಷಣಾ ಉದ್ದೇಶಗಳಿಗಾಗಿ ಅದನ್ನು ಶಿಫಾರಸು ಮಾಡಲಾಯಿತು. ಮಿತ್ರರಾಷ್ಟ್ರಗಳ ಸೈನಿಕರು ವಾಸ್ತವವಾಗಿ ಪದಾತಿಸೈನ್ಯದ ಸಾಧಾರಣವಾದ ಅಂಗಗಳಾಗಿದ್ದರು ಮತ್ತು ಅವರ ಲಭ್ಯತೆಯ ಆಧಾರದ ಮೇಲೆ ಕಾರ್ಯಾಚರಣೆಗಾಗಿ ಮನಸೋಇಚ್ಛೆಯಂತೆ ಆಯ್ಕೆಯಾದವರಾಗಿದ್ದರು. ಅಲ್ಲಿ ಯಾವುದೇ ಕಮ್ಯಾಂಡೊ, ವಾಯುಗಾಮಿ ಅಥವಾ ಇತರ ಆಯ್ಕೆಯ ಕಾರ್ಯವಿಧಾನವಿರಲಿಲ್ಲ,[೩೮] ಆದರೂ ಸಹ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ತರಬೇತಿಯನ್ನು ನೀಡುವಾಗ ಕಡಿಮೆ ಸಮರ್ಥರಾದ ಸಿಬ್ಬಂದಿಯನ್ನು "ಬೇಡವೆಂದು ತೆಗೆದುಹಾಕುವ" ಒಂದಷ್ಟು ಕ್ರಮಗಳು ಅಲ್ಲಿ ಚಾಲ್ತಿಯಲ್ಲಿದ್ದವು.

ಮಿತ್ರರಾಷ್ಟ್ರಗಳ ಸೈನಿಕರ ಸಮೂಹವನ್ನು ೧೯೪೫ರ ಫೆಬ್ರುವರಿಯಲ್ಲಿ ವಿಸರ್ಜಿಸಲಾಯಿತು.[೨೭] ಮಿತ್ರರಾಷ್ಟ್ರಗಳ ಸೈನಿಕ ಕಾರ್ಯಾಚರಣೆಗಳ ಪೈಕಿಯ ಅನೇಕ ಮಾಜಿ-ಭಟರನ್ನು ಹಾಗೂ ಸೇನಾದಳ ಕೇಂದ್ರಕಾರ್ಯಾಲಯಗಳ ಪೈಕಿಯ ಹಲವರನ್ನು ಸುಧಾರಣೆಗೆ ಒಳಪಡಿಸಲಾಯಿತು ಹಾಗೂ ೪೪ನೇ ವಾಯುಗಾಮಿ ತುಕಡಿಯೊಳಗೆ ವಿಲೀನಗೊಳಿಸಲಾಯಿತು; ಅದೇ ವೇಳೆಗೆ ಪಡೆಯ ಕೇಂದ್ರಕಾರ್ಯಾಲಯ ಮತ್ತು ಸಂಕೇತಗಳ ಘಟಕಗಳು XXXIV ಭಾರತೀಯ ವಿಶೇಷ ದಳದ ತಿರುಳು-ಭಾಗವಾಗಿ ರೂಪುಗೊಂಡವು.

ಸೇನೆಗಳು[ಬದಲಾಯಿಸಿ]

ಈ ಕೆಳಕಂಡ, ಒಕ್ಕೂಟಕ್ಕೆ ಸೇರಿದ ಸೇನೆಗಳಿಗೆ ಸಂಬಂಧಿಸಿದ ಸೇನಾವ್ಯೂಹಗಳನ್ನು ಭಾರತೀಯ ಸೇನೆಯು ಒದಗಿಸಿತು:

ಎಂಟನೆಯ ಸೇನೆ[ಬದಲಾಯಿಸಿ]

ಪಾಶ್ಚಾತ್ಯ ಮರುಭೂಮಿಯ ಪಡೆಯಿಂದ ಎಂಟನೆಯ ಸೇನೆಯು ೧೯೪೧ರ[೩೯] ಸೆಪ್ಟೆಂಬರ್‌ನಲ್ಲಿ ರೂಪುಗೊಂಡಿತು; ಲೆಫ್ಟಿನೆಂಟ್‌ ಜನರಲ್‌ ಸರ್‌‌ ಅಲನ್‌ ಕನ್ನಿಂಗ್‌ಹ್ಯಾಂ ಎಂಬಾತ ಇದರ ಅಧಿಪತ್ಯವನ್ನು ವಹಿಸಿಕೊಂಡಿದ್ದ.[೪೦] ಕಾಲಾನಂತರದಲ್ಲಿ ಎಂಟನೆಯ ಸೇನೆಯ ಅಧಿಪತ್ಯವನ್ನು ಜನರಲ್‌ಗಳಾದ ನೀಲ್‌ ರಿಚಿ, ಕ್ಲೌಡೆ ಔಚಿನ್‌ಲೆಕ್‌ ಮತ್ತು ಬರ್ನಾರ್ಡ್‌ ಮಾಂಟ್‌ಗೊಮೆರಿ ವಹಿಸಿಕೊಂಡರು.[೪೦] ಯುದ್ಧದ ಆರಂಭಿಕ ವರ್ಷಗಳಲ್ಲಿ, ಎಂಟನೆಯ ಸೇನೆಯು ಕಳಪೆ ನಾಯಕತ್ವದಿಂದ ಬಳಲಬೇಕಾಗಿ ಬಂತು ಹಾಗೂ ಅದೃಷ್ಟಪರೀಕ್ಷೆಯ ಪ್ರಯತ್ನಗಳು ಪದೇಪದೇ ತಲೆಕೆಳಗಾಗುವುದಕ್ಕೆ ಇದು ಸಾಕ್ಷಿಯಾಗಬೇಕಾಯಿತು; ಆದರೆ ಎಲ್‌ ಅಲಮೀನ್‌ನ ಎರಡನೇ ಕದನದ ವೇಳೆಗೆ ಸನ್ನಿವೇಶವು ಬದಲಾಯಿತು ಹಾಗೂ ಈ ಅವಧಿಯಲ್ಲಿ ಎಂಟನೆಯ ಸೇನೆಯು ಲಿಬಿಯಾವನ್ನು ದಾಟಿಕೊಂಡು ಟ್ಯುನಿಷಿಯಾಗೆ ಮುಂದುವರಿಯಿತು.[೪೦]

ಒಂಬತ್ತನೆಯ ಸೇನೆ[ಬದಲಾಯಿಸಿ]

ಮ್ಯಾಂಡೇಟ್‌ ಪ್ಯಾಲೆಸ್ಟೀನ್‌ ಮತ್ತು ಟ್ರಾನ್ಸ್‌ಜೋರ್ಡಾನ್‌‌‌ನಲ್ಲಿ ಬ್ರಿಟಿಷ್‌ ತುಕಡಿಗಳ ಕೇಂದ್ರಕಾರ್ಯಾಲಯವು ಮರು-ನಿಯೋಜನೆಯಾಗುವುದರೊಂದಿಗೆ, ೧೯೪೧ರ ನವೆಂಬರ್‌ ೧ರಂದು ಒಂಬತ್ತನೆಯ ಸೇನೆಯು ರೂಪುಗೊಂಡಿತು. ಪೂರ್ವಭಾಗದ ಮೆಡಿಟರೇನಿಯನ್‌ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್‌ ಮತ್ತು ಕಾಮನ್‌ವೆಲ್ತ್‌‌ ಭೂಸೈನ್ಯಗಳನ್ನು ಇದು ನಿಯಂತ್ರಿಸಿತು. ಜನರಲ್‌ ಸರ್‌‌ ಹೆನ್ರಿ ಮೈಟ್‌ಲ್ಯಾಂಡ್‌ ವಿಲ್ಸನ್‌ ಮತ್ತು ಲೆಫ್ಟಿನೆಂಟ್‌-ಜನರಲ್‌ ಸರ್‌‌ ವಿಲಿಯಂ ಜನರಲ್‌ ಹೋಮ್ಸ್‌, ಇದರ ದಳಪತಿಗಳಾಗಿದ್ದರು.[೪೧][೪೨][೪೩]

ಹತ್ತನೆಯ ಸೇನೆ[ಬದಲಾಯಿಸಿ]

ಹತ್ತನೆಯ ಸೇನೆಯು ಇರಾಕ್‌‌ನಲ್ಲಿ ರೂಪುಗೊಂಡಿತು; ಆಂಗ್ಲ-ಇರಾಕಿ ಯುದ್ಧದ ನಂತರ ಪೈಫೋರ್ಸ್‌‌ನ ಪ್ರಮುಖ ಭಾಗದಿಂದ ಇದು ರೂಪುಗೊಂಡಿತು. ಲೆಫ್ಟಿನೆಂಟ್‌-ಜನರಲ್‌ ಸರ್‌‌ ಎಡ್ವರ್ಡ್‌ ಕ್ವಿನನ್‌ ಎಂಬಾತನ ಅಧಿಪತ್ಯದ ಅಡಿಯಲ್ಲಿ ಇದು ೧೯೪೨–೧೯೪೩ರ ಅವಧಿಯಲ್ಲಿ ಸಕ್ರಿಯವಾಗಿತ್ತು ಮತ್ತು III ವಿಶೇಷ ದಳ ಹಾಗೂ XXI ಭಾರತೀಯ ವಿಶೇಷ ದಳವನ್ನು ಇದು ಒಳಗೊಂಡಿತ್ತು.[೪೪] ಪರ್ಷಿಯಾದ ಕೊಲ್ಲಿಯಿಂದ ಕ್ಯಾಸ್ಪಿಯನ್‌ವರೆಗಿನ ಸಂಪರ್ಕಮಾರ್ಗಗಳ ಸಂವಹನೆಯನ್ನು ಸೋವಿಯತ್‌ ಒಕ್ಕೂಟದೆಡೆಗೆ ಕಲ್ಪಿಸುವುದರ ನಿರ್ವಹಣೆಯು ಇದರ ಮುಖ್ಯ ಕಾರ್ಯಭಾರವಾಗಿತ್ತು. ಅಷ್ಟೇ ಅಲ್ಲ, ತನ್ನ ಅಮೆರಿಕಾದ್ದಲ್ಲದ ಮೂಲದಿಂದ ಪಡೆದ ತೈಲವನ್ನು ಬ್ರಿಟನ್‌ಗೆ ಒದಗಿಸಿದ ದಕ್ಷಿಣ ಪರ್ಷಿಯಾದ ಮತ್ತು ಇರಾಕಿ ತೈಲಕ್ಷೇತ್ರಗಳ ಸಂರಕ್ಷಣೆಯೂ ಇದರ ಹೊಣೆಗಾರಿಕೆಯಲ್ಲಿ ಸೇರಿತ್ತು.[೪೫]

ಹನ್ನೆರಡನೆಯ ಸೇನೆ[ಬದಲಾಯಿಸಿ]

ಬರ್ಮಾದಲ್ಲಿನ ಕಾರ್ಯಾಚರಣೆಗಳ ನಿಯಂತ್ರಣವನ್ನು ಹದಿನಾಲ್ಕನೇ ಸೇನೆಯಿಂದ ಪಡೆದುಕೊಳ್ಳುವುದಕ್ಕಾಗಿ, ಹನ್ನೆರಡನೆಯ ಸೇನೆಯನ್ನು ೧೯೪೫ರ ಮೇ ತಿಂಗಳಲ್ಲಿ ಸುಧಾರಣೆ ಮಾಡಲಾಯಿತು. ಲೆಫ್ಟಿನೆಂಟ್‌-ಜನರಲ್‌ ಸರ್‌‌ ಮೊಂಟಾಗು ಸ್ಟಾಪ್‌ಫೋರ್ಡ್‌ ಎಂಬಾತನ ಅಧಿಪತ್ಯದಲ್ಲಿ XXXIII ಭಾರತೀಯ ವಿಶೇಷ ದಳದ ಕೇಂದ್ರಕಾರ್ಯಾಲಯವನ್ನು ಮರುನಿಯೋಜಿಸುವ ಮೂಲಕ, ಸೇನಾ ಕೇಂದ್ರಕಾರ್ಯಾಲಯವು ಸೃಷ್ಟಿಸಲ್ಪಟ್ಟಿತು.[೪೬]

ಹದಿನಾಲ್ಕನೆಯ ಸೇನೆ[ಬದಲಾಯಿಸಿ]

ಹದಿನಾಲ್ಕನೆಯ ಸೇನೆಯು ಒಂದು ಬಹುರಾಷ್ಟ್ರೀಯ ಪಡೆಯಾಗಿದ್ದು, ಕಾಮನ್‌ವೆಲ್ತ್‌‌ ದೇಶಗಳಿಗೆ ಸೇರಿದ ಘಟಕಗಳನ್ನು ಒಳಗೊಂಡಿತ್ತು; ಅದರ ಅನೇಕ ಘಟಕಗಳು ಭಾರತೀಯ ಸೇನೆಗೆ ಮಾತ್ರವೇ ಅಲ್ಲದೇ ಬ್ರಿಟಿಷ್‌ ಘಟಕಗಳಿಗೂ ಸೇರಿದವಾಗಿದ್ದವು ಮತ್ತು ಆಫ್ರಿಕಾದ ೮೧ನೇ, ೮೨ನೇ ಮತ್ತು ೧೧ನೇ ತುಕಡಿಗಳಿಂದಲೂ ಇದಕ್ಕೆ ಗಣನೀಯ ಕೊಡುಗೆಗಳು ದೊರೆತಿದ್ದವು. ಇದನ್ನು ಅನೇಕವೇಳೆ "ಮರೆತುಹೋದ ಸೇನೆ" ಎಂಬುದಾಗಿ ಉಲ್ಲೇಖಿಸಲಾಗುತ್ತದೆ, ಏಕೆಂದರೆ ಬರ್ಮಾ ದಂಡಯಾತ್ರೆಯಲ್ಲಿ ಇದು ನಿರ್ವಹಿಸಿದ ಕಾರ್ಯಾಚರಣೆಗಳನ್ನು ಸಮಕಾಲೀನ ಪತ್ರಿಕೆಗಳು ಉಪೇಕ್ಷಿಸಿದವು, ಮತ್ತು ಯುದ್ಧವಾದ ಬಹಳ ಕಾಲದವರೆಗೂ ಯುರೋಪ್‌ನಲ್ಲಿ ಅದಕ್ಕೆ ಸಂವಾದಿಯಾಗಿರುವ ಇತರ ಸೇನಾವ್ಯೂಹಗಳಿಗಿಂತ ಹೆಚ್ಚು ಅಸ್ಪಷ್ಟವಾಗಿ ಇದು ಉಳಿದುಕೊಂಡಿತು.[೪೭] ಲೆಫ್ಟಿನೆಂಟ್‌ ಜನರಲ್‌ ವಿಲಿಯಂ ಸ್ಲಿಮ್‌ ಎಂಬಾತನ ಅಧಿಪತ್ಯದಲ್ಲಿ ಇದು ೧೯೪೩ರಲ್ಲಿ ರೂಪುಗೊಂಡಿತು. ಹದಿನಾಲ್ಕನೆಯ ಸೇನೆಯು ಯುದ್ಧದ ಸಂದರ್ಭದಲ್ಲಿ ಕಂಡುಬಂದಿದ್ದ ಅತಿದೊಡ್ಡ ಕಾಮನ್‌ವೆಲ್ತ್‌‌ ಸೇನೆಯಾಗಿದ್ದು, ೧೯೪೪ರ ಅಂತ್ಯದ ವೇಳೆಗೆ ಸರಿಸುಮಾರು ಒಂದು ದಶಲಕ್ಷ ಸೈನಿಕರನ್ನು ಅದು ಹೊಂದಿತ್ತು. ಹಲವಾರು ಸಮಯಗಳಲ್ಲಿ, ನಾಲ್ಕು ವಿಶೇಷ ದಳಗಳನ್ನು ಸೇನೆಗೆ ವಹಿಸಲಾಗಿತ್ತು. ಅವುಗಳೆಂದರೆ: IV ವಿಶೇಷ ದಳ, XV ಭಾರತೀಯ ವಿಶೇಷ ದಳ, XXXIII ಭಾರತೀಯ ವಿಶೇಷ ದಳ ಮತ್ತು XXXIV ಭಾರತೀಯ ವಿಶೇಷ ದಳ.[೪೬]

ದಕ್ಷಿಣದ ಸೇನೆ[ಬದಲಾಯಿಸಿ]

ದಕ್ಷಿಣದ ಸೇನೆಯು ೧೯೪೨ರಲ್ಲಿ ದಕ್ಷಿಣದ ಸೈನ್ಯದ ದಳದಿಂದ ರೂಪುಗೊಂಡಿತು ಮತ್ತು ೧೯೪೫ರ ಆಗಸ್ಟ್‌ನಲ್ಲಿ ವಿಸರ್ಜಿಸಲ್ಪಟ್ಟಿತು. ಆಂತರಿಕ ಭದ್ರತೆಗೆ ಮತ್ತು ಸೇನಾಮುಖದ ಹೊರಗಿರುವ ಘಟಕಗಳಿಗೆ ಸಂಬಂಧಿಸಿದ ಒಂದು ಬ್ರಿಟಿಷ್‌ ಸೇನಾವ್ಯೂಹವಾಗಿ ಇದು ಬಹುತೇಕವಾಗಿ ಬಳಸಲ್ಪಟ್ಟಿತು. ೧೯೪೨ರಿಂದ ೧೯೪೪ರವರೆಗಿನ ಅವಧಿಯಲ್ಲಿ ೧೯ನೇ ಭಾರತೀಯ ಪದಾತಿಸೈನ್ಯದ ತುಕಡಿಯು ಇದರ ಘಟಕಗಳಲ್ಲಿ ಒಂದಾಗಿತ್ತು.[೪೮]

ವಾಯವ್ಯ ಭಾಗದ ಸೇನೆ[ಬದಲಾಯಿಸಿ]

ವಾಯವ್ಯ ಭಾಗದ ಸೇನೆಯು ೧೯೪೨ರ ಏಪ್ರಿಲ್‌ನಲ್ಲಿ ವಾಯವ್ಯ ಭಾಗದ ಸೈನ್ಯದ ದಳದಿಂದ ರೂಪುಗೊಂಡಿತು. ತಾನು ನಿಯಂತ್ರಿಸುತ್ತಿದ್ದ ವಾಯವ್ಯ ಗಡಿನಾಡಿನ ಭಾಗಗಳಾದ ಕೋಹಟ್‌, ಪೆಶಾವರ್‌, ರಾವಲ್ಪಿಂಡಿ, ಬಲೂಚಿಸ್ತಾನ್‌ ಮತ್ತು ವಾಜಿರಿಸ್ತಾನ್‌ ಜಿಲ್ಲೆಗಳನ್ನು ಕಾವಲುಕಾಯು ಇದು ರೂಪುಗೊಂಡಿತು.[೪೯]

ಮಧ್ಯಪ್ರಾಚ್ಯ ಮತ್ತು ಆಫ್ರಿಕಾ[ಬದಲಾಯಿಸಿ]

ಉತ್ತರ ಆಫ್ರಿಕಾ[ಬದಲಾಯಿಸಿ]

ಆಪರೇಷನ್‌ ಕ್ರುಸೇಡರ್‌ ಕಾರ್ಯಾಚರಣೆಯ ಸಂದರ್ಭದಲ್ಲಿನ ಸಿಖ್‌ ಪದಾತಿಸೈನ್ಯದ ಒಂದು ವಿಭಾಗ.

ಯುದ್ಧದ ಘೋಷಣೆಯಾಗುವುದಕ್ಕೆ ಸ್ವಲ್ಪವೇ ಮುಂಚಿತವಾಗಿ, ಈಜಿಪ್ಟ್‌ನಲ್ಲಿನ ಬ್ರಿಟಿಷ್‌ ಕಾವಲುಪಡೆಯ ಬಲವರ್ಧಿಸಲೆಂದು ಭಾರತೀಯ ಪದಾತಿಸೈನ್ಯದ ಒಂದು ಸೇನಾದಳವು ಕಳಿಸಲ್ಪಟ್ಟಿತು. ೧೯೩೯ರ ಅಕ್ಟೋಬರ್‌ನಲ್ಲಿ, ಎರಡನೇ ಸೇನಾದಳವೊಂದು ಕಳಿಸಲ್ಪಟ್ಟಿತು ಮತ್ತು ಎರಡನ್ನೂ ಒಟ್ಟಾಗಿಸಿ ಅದನ್ನು ೪ನೇ ಭಾರತೀಯ ಪದಾತಿಸೈನ್ಯದ ತುಕಡಿ ಎಂದು ಕರೆಯಲಾಯಿತು.[೧೦] ೧೯೪೦ರ ಮಾರ್ಚ್‌ ವೇಳೆಗೆ, ಎರಡು ಹೆಚ್ಚುವರಿ ಸೇನಾದಳಗಳು ಮತ್ತು ಕೇಂದ್ರಕಾರ್ಯಾಲಯದ ಒಂದು ವಿಭಾಗೀಯ ಸೈನ್ಯವನ್ನು ಈಜಿಪ್ಟ್‌ಗೆ ಕಳಿಸಲಾಯಿತು ಮತ್ತು ಅವು ಒಟ್ಟಾಗಿ ಸೇರಿ ೫ನೇ ಭಾರತೀಯ ಪದಾತಿಸೈನ್ಯದ ತುಕಡಿ ಎಂದು ಕರೆಸಿಕೊಂಡವು.[೧೦]

‌ಆಪರೇಷನ್‌ ಕಂಪಾಸ್ (೪ನೇ ಭಾರತೀಯ ಮತ್ತು ೭ನೇ ಕವಚಿತ ಯುದ್ಧವಾಹನಗಳ ತುಕಡಿ) ಎಂಬುದು ಎರಡನೇ ಜಾಗತಿಕ ಸಮರದ ಅವಧಿಯಲ್ಲಿ ಪಾಶ್ಚಾತ್ಯ ಮರುಭೂಮಿಯ ದಂಡಯಾತ್ರೆಗೆ ಸಂಬಂಧಿಸಿದ, ಒಕ್ಕೂಟಕ್ಕೆ ಸೇರಿದ ಮೊದಲ ಪ್ರಮುಖ ಸೇನಾ ಕಾರ್ಯಾಚರಣೆಯಾಗಿತ್ತು. ಲಿಬಿಯಾದ ಒಂದು ಮಹಾನ್‌ ವಿಸ್ತಾರದ ಉದ್ದಕ್ಕೂ ಬ್ರಿಟಿಷ್‌ ಮತ್ತು ಕಾಮನ್‌ವೆಲ್ತ್‌‌ ಪಡೆಗಳು ದಾರಿಮಾಡಿಕೊಂಡು ಹೋಗುವ ಕಾರ್ಯಾಚರಣೆಗೆ ಇದು ಕಾರಣವಾಯಿತು; ಇದರ ಫಲವಾಗಿ ಸೈರೆನೇಷಿಯಾದ ಹೆಚ್ಚೂಕಮ್ಮಿ ಎಲ್ಲಾ ಭಾಗಗಳು, ಇಟಲಿಯ ೧೧೫,೦೦೦ದಷ್ಟು ಯೋಧರು ಹಾಗೂ ನೂರಾರು ಟ್ಯಾಂಕ್‌ಗಳು ಮತ್ತು ಫಿರಂಗಿದಳದ ತುಕಡಿಗಳು, ೧,೧೦೦ಕ್ಕೂ ಹೆಚ್ಚಿನ ವಿಮಾನಗಳು ಕಾರ್ಯಾಚರಣೆಯ ವಶವಾದವು. ತೀರಾ ಅಲ್ಪವೆನ್ನಬಹುದಾದ ಸಾವುನೋವುಗಳೂ ಈ ಸಂದರ್ಭದಲ್ಲಿ ಸಂಭವಿಸಿದವು.[೫೦]

ಎಲ್‌ ಅಲಮೀನ್‌ನ ಎರಡನೇ ಕದನದ ಮುನ್ನಾದಿನದಂದು ರುವೇಸಾಟ್‌ ರಿಡ್ಜ್‌ ಮೇಲೆ 4ನೇ ತುಕಡಿಯನ್ನು ಸಜ್ಜುಗೊಳಿಸುತ್ತಿರುವುದು.

ಇಟಲಿಯ ಸೈನಿಕರ ವಿರುದ್ಧ ಮಿತ್ರರಾಷ್ಟ್ರಗಳು ಸಾಧಿಸಿದ ಯಶಸ್ಸಿನಿಂದಾಗಿ ಜರ್ಮನ್ನರು ಉತ್ತರ ಆಫ್ರಿಕಾದ ಸೈನ್ಯದ ಬಲವರ್ಧನೆಯನ್ನು ಮಾಡಬೇಕಾಗಿ ಬಂತು. ಎರ್ವಿನ್‌ ರೋಮೆಲ್‌ ಎಂಬಾತನ ಅಧಿಪತ್ಯವನ್ನು ಹೊಂದಿದ್ದ ಆಫ್ರಿಕಾ ವಿಶೇಷ ದಳವು ೧೯೪೧ರ ಮಾರ್ಚ್‌ನಲ್ಲಿ ದಾಳಿಮಾಡಿತು. ಏಪ್ರಿಲ್ ೬ರಂದು ಒಂದು ವಿಳಂಬಗೊಳಿಸುವ ಕದನವನ್ನು ೩ನೇ ಭಾರತೀಯ ಮೋಟಾರು ಚಾಲಿತ ಸೇನಾದಳವು ಹೋರಾಡಿತು; ಇದರಿಂದಾಗಿ ೯ನೇ ಆಸ್ಟ್ರೇಲಿಯಾದ ತುಕಡಿಯು ಟೋಬ್ರಕ್‌‌‌ಗೆ ಸುರಕ್ಷಿತವಾಗಿ ಹಿಂದೆಗೆದುಕೊಳ್ಳಲು ಅವಕಾಶ ಸಿಕ್ಕಿತು.[೫೧]

‌೧೯೪೧ರ ಜೂನ್‌ನಲ್ಲಿ ನಡೆದ ಆಪರೇಷನ್‌ ಬ್ಯಾಟಲ್‌ಆಕ್ಸ್ (೪ನೇ ಭಾರತೀಯ ಮತ್ತು ೭ನೇ ಕವಚಿತ ಯುದ್ಧವಾಹನಗಳ ಪಡೆ) ಎಂಬ ಕಾರ್ಯಾಚರಣೆಯು ಜರ್ಮನ್‌ ಮತ್ತು ಇಟಲಿಯ ಪಡೆಗಳಿಗೆ ಸೇರಿದ್ದ ಪೂರ್ವಭಾಗದ ಸೈರೆನೇಷಿಯಾವನ್ನು ನಿವಾರಿಸುವ ಗುರಿ ಹೊಂದಿತ್ತು; ಈ ಕಾರ್ಯಾಚರಣೆಯಿಂದ ಆದ ಮುಖ್ಯ ಪ್ರಯೋಜನಗಳ ಪೈಕಿ ಒಂದೆಂದರೆ, ಟೋಬ್ರಕ್‌ ದಿಗ್ಬಂಧನವು ಇದರಿಂದ ಅಂತ್ಯಗೊಂಡಿತು. ಮೊದಲ ದಿನವೇ ತನ್ನ ಟ್ಯಾಂಕುಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ಕಳೆದುಕೊಂಡ ಕಾರ್ಯಾಚರಣೆಯು ಯಶಸ್ವಿಯಾಗಲಿಲ್ಲ; ಮತ್ತು ಮೂರು ನುಗ್ಗುದಾಳಿಗಳ ಪೈಕಿ ಕೇವಲ ಒಂದರಲ್ಲಿ ಮಾತ್ರವೇ ಅದು ವಿಜಯವನ್ನು ಸಾಧಿಸಿತು. ಎರಡನೇ ದಿನದಂದು ಅದು ತನ್ನ ಪಶ್ಚಿಮ ಭಾಗದ ಪಕ್ಕಕ್ಕೆ ತಳ್ಳಲ್ಪಡುವ ಮೂಲಕ ಮಿಶ್ರಿತ ಫಲಿತಾಂಶಗಳನ್ನು ಸಾಧಿಸಿತಾದರೂ, ತನ್ನ ಕೇಂದ್ರಭಾಗದಲ್ಲಿ ಒಂದು ಗಣನೀಯ ಮಟ್ಟದ ಜರ್ಮನ್‌ ಪ್ರತಿ-ದಾಳಿಯನ್ನು ಅದು ಹಿಮ್ಮೆಟ್ಟಿಸಿತು. ಮೂರನೇ ದಿನದಂದು, ಸಾರಾಸಗಟಾದ ಸಂಪೂರ್ಣಸೋಲನ್ನು ಬ್ರಿಟಿಷರು ಕೂದಲೆಳೆಯಲ್ಲಿ ತಪ್ಪಿಸಿದರು; ಸುರಕ್ಷಿತ ಸ್ಥಳದಿಂದ ಆಚೆಗೆ ತಮ್ಮನ್ನು ಹಠಾತ್ತಾಗಿ ಮುಗಿಸಬಲ್ಲಂಥ ಜರ್ಮನ್ನರ ಒಂದು ಸುತ್ತುವರೆಯುವ ಚಲನೆಯಿಂದ ಸ್ವಲ್ಪವೇ ಮುಂಚಿತವಾಗಿ ಸೇನೆಯನ್ನು ಯಶಸ್ವಿಯಾಗಿ ಹಿಂದೆಗೆದುಕೊಳ್ಳುವ ಮೂಲಕ ಅವರು ತಪ್ಪಿಸಿಕೊಂಡರು.[೫೧]

‌ಆಪರೇಷನ್‌ ಕ್ರುಸೇಡರ್ (೪ನೇ ಭಾರತೀಯ, ೭ನೇ ಕವಚಿತ ಯುದ್ಧವಾಹನಗಳ, ೧ನೇ ದಕ್ಷಿಣ ಆಫ್ರಿಕಾದ, ೨ನೇ ನ್ಯೂಜಿಲೆಂಡ್‌ ಮತ್ತು ೭೦ನೇ ಬ್ರಿಟಿಷ್‌ ತುಕಡಿಗಳು) ಎಂಬ ಕಾರ್ಯಾಚರಣೆಯು ೧೯೪೧ರ ನವೆಂಬರ್‌ ೧೮ ಮತ್ತು ಡಿಸೆಂಬರ್‌ ೩೦ರ ನಡುವೆ ನಡೆಯಿತು. ತನ್ನ ಪದಾತಿಸೈನ್ಯವನ್ನು ಮುಂದುವರೆಸುವುದಕ್ಕೆ ಮುಂಚಿತವಾಗಿ, ಆಕ್ಸಿಸ್‌ ಕವಚಿತ ಯುದ್ಧವಾಹನಗಳ ಪಡೆಯನ್ನು ನಾಶಪಡಿಸುವುದು ಆರಂಭಿಕ ಯೋಜನೆಯಾಗಿತ್ತು. ೭ನೇ ಕವಚಿತ ಯುದ್ಧವಾಹನಗಳ ತುಕಡಿಗಳು ಸಿದಿ ರೆಝೆಗ್‌ ಎಂಬಲ್ಲಿ ಆಫ್ರಿಕಾ ವಿಶೇಷದಳದಿಂದ ಅತೀವವಾಗಿ ಸೋಲುಂಡವು. ಈಜಿಪ್ಟಿನ ಗಡಿಯ ಮೇಲಿನ ಆಕ್ಸಿಸ್‌ ಸೈನಿಕ ರಕ್ಷಾವರಣದ ಸೇನೆಯ ಠಾಣ್ಯಗಳಿಗೆ ತನ್ನ ಕವಚಿತ ಯುದ್ಧವಾಹನಗಳ ತುಕಡಿಗಳನ್ನು ತರುವಾಯದಲ್ಲಿ ಮುನ್ನಡೆಸುವ ರೋಮೆಲ್‌ನ ತಂತ್ರವು, ಒಕ್ಕೂಟಕ್ಕೆ ಸೇರಿದ ಪದಾತಿಸೈನ್ಯದ ಮುಖ್ಯಭಾಗವನ್ನು ಕಂಡುಕೊಳ್ಳುವಲ್ಲಿ ವಿಫಲಗೊಂಡಿತು; ಒಕ್ಕೂಟಕ್ಕೆ ಸೇರಿದ ಪದಾತಿಸೈನ್ಯವು ಸೈನಿಕ ರಕ್ಷಾವರಣಗಳನ್ನು ದಾಟಿಕೊಂಡು ಹೋಗಿ ಟೋಬ್ರಕ್‌ ಕಡೆಗೆ ಚಲಿಸಿತ್ತು. ಆದ್ದರಿಂದ ಟೋಬ್ರಕ್‌ನಲ್ಲಿನ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ರೋಮೆಲ್‌ ತನ್ನ ಕವಚಿತ ಯುದ್ಧವಾಹನಗಳ ಘಟಕಗಳನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದಿತ್ತು. ಟೋಬ್ರಕ್‌ನಲ್ಲಿ ಒಂದಷ್ಟು ಯುದ್ಧತಂತ್ರದ ಯಶಸ್ಸುಗಳನ್ನು ಸಾಧಿಸುವುದನ್ನು ಲೆಕ್ಕಿಸದೆ ತನ್ನ ಉಳಿದಿರುವ ಪಡೆಗಳನ್ನು ಸಂರಕ್ಷಿಸುವ ಅಗತ್ಯವನ್ನು ಮನಗಂಡ ರೋಮೆಲ್‌, ಟೋಬ್ರಕ್‌ನ ಪಶ್ಚಿಮ ಭಾಗಕ್ಕಿರುವ ಗಝಾಲಾದಲ್ಲಿ ರಕ್ಷಣಾತ್ಮಕ ಶ್ರೇಣಿಗೆ ತನ್ನ ಸೇನೆಯನ್ನು ಹಿಂದೆಗೆದುಕೊಂಡ, ಮತ್ತು ಆಮೇಲೆ ಎಲ್‌ ಅಘೇಲಿಯಾಗೆ ಮರಳಿದ.[೫೧]

ಸೈಪ್ರಸ್‌ ಮತ್ತು ಸಿರಿಯಾವನ್ನು ತಲುಪಲು ೧೯೪೨ರ ಏಪ್ರಿಲ್‌ನಲ್ಲಿ ೪ನೇ ತುಕಡಿಯು ಮರುಭೂಮಿಯಿಂದ ಹೊರಟಿತು. ೧೯೪೨ರ ಮೇ ತಿಂಗಳ ವೇಳೆಗೆ, ಅದರ ೧೧ನೇ ಸೇನಾದಳವು ಟೋಬ್ರಕ್‌ನ ದಕ್ಷಿಣದಲ್ಲಿ ಹೋರಾಡುತ್ತಿರುವ ೫ನೇ ಭಾರತೀಯ ತುಕಡಿಯ ಜೊತೆಗೆ ಸೇರಿಸಲ್ಪಟ್ಟು ಹಿಂದಿರುಗಿತ್ತು.[೫೨] ಅದರ ೫ನೇ ಸೇನಾದಳವು ೧೯೪೨ರ ಜೂನ್‌ನಲ್ಲಿ ಹಿಂದಿರುಗಿತು ಮತ್ತು ಅದು ಮೆರ್ಸಾ ಮಾಟ್ರುಹ್‌‌ನಲ್ಲಿ ಹೋರಾಡಿತು.[೫೩] ೧೯೪೨ರ ಮೇ–ಜೂನ್‌ ಅವಧಿಯಲ್ಲಿ ನಡೆದ ಗಝಾಲಾದ ಕದನದಲ್ಲಿ ಪಾಲ್ಗೊಳ್ಳಲು ೧೦ನೇ ಭಾರತೀಯ ಪದಾತಿಸೈನ್ಯದ ತುಕಡಿಯು ಸಿರಿಯಾದಿಂದ ಆಗಮಿಸಿತು, ಆಮೇಲೆ ಎಲ್‌ ಅಲಮೀನ್‌ನ ಮೊದಲ ಕದನದಲ್ಲಿ ೭೨ ಗಂಟೆಗಳವರೆಗೆ ಆಕ್ಸಿಸ್‌ ಪಡೆಗಳನ್ನು ಹಿಡಿದಿಟ್ಟುಕೊಂಡು, ಎಂಟನೆಯ ಸೇನೆಯು ಸುರಕ್ಷಿತವಾಗಿ ಹಿಂದೆಗೆದುಕೊಳ್ಳಲು ಅವಕಾಶ ಕಲ್ಪಿಸಿತ್ತು.[೫೪] ಎಲ್‌ ಅಲಮೀನ್‌ನ ಎರಡನೇ ಕದನಕ್ಕಾಗಿ ಹಿಂದಿರುಗಿದ ೪ನೇ HQ ತುಕಡಿಯು ಎಂಟನೆಯ ಸೇನೆಯ ವ್ಯೂಹದ ಕೇಂದ್ರಭಾಗದಲ್ಲಿ ರುವೇಸಾಟ್‌ ರಿಡ್ಜ್‌‌ನ್ನು ತಡೆಹಿಡಿದುಕೊಂಡು, ಮುಂಚೂಣಿ ಪಡೆಯ ಕೇಂದ್ರಭಾಗದ ಗಮನವನ್ನು ವಿಚಲಿಸುವ ಸಲುವಾಗಿ ಉದ್ದೇಶಿಸಲಾದ ಒಂದು ಅಣಕು ದಾಳಿ ಮತ್ತು ಎರಡು ಸಣ್ಣ ದಾಳಿಗಳನ್ನು ನಡೆಸಿತು.[೫೩]

‌ಆಪರೇಷನ್‌ ಪ್ಯೂಜಿಲಿಸ್ಟ್ (೪ನೇ ಭಾರತೀಯ, ೨ನೇ ನ್ಯೂಜಿಲೆಂಡ್‌ ಮತ್ತು ೫೦ನೇ ನಾರ್ಥಂಬುಬ್ರಿಯನ್‌ ತುಕಡಿಗಳು) ಎಂಬುದು ಟ್ಯುನಿಷಿಯಾದ ದಂಡಯಾತ್ರೆಯಲ್ಲಿನ ಒಂದು ಕಾರ್ಯಾಚರಣೆಯಾಗಿತ್ತು. ಮಾರೆಥ್‌ ರೇಖೆಯಲ್ಲಿ ಆಕ್ಸಿಸ್‌ ಪಡೆಗಳನ್ನು ನಾಶಪಡಿಸುವುದು, ಮತ್ತು ಎಸ್‌ಫ್ಯಾಕ್ಸ್‌ನ್ನು ವಶಮಾಡಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಪ್ಯೂಜಿಲಿಸ್ಟ್‌ ಸ್ವತಃ ಡೋಲಾಯಮಾನವಾಗಿತ್ತು ಮತ್ತು ಒಂದು ನಿರ್ಣಾಯಕ ವ್ಯೂಹಭಂಗವನ್ನು ಕೈಗೊಳ್ಳುವಲ್ಲಿ ಅದು ವಿಫಲಗೊಂಡಿತು. ಆದಾಗ್ಯೂ, ದಾಳಿಯ ಒಂದು ಪರ್ಯಾಯವಾದ ಮಾರ್ಗವನ್ನು ನೆಲೆಗೊಳಿಸುವಲ್ಲಿ ಅದು ಯಶಸ್ವಿಯಾಯಿತು ಮತ್ತು ತನ್ಮೂಲಕ ಟೆಬಾಗಾ ಅಂತರದ ಮೂಲಕ ಸಾಗುವ ಒಂದು ದಿಕ್ಕುಗೆಡಿಸುವ ಕುಶಲ ಚಲನೆಯಾದ ಸೂಪರ್‌ಚಾರ್ಜ್‌ II ಎಂಬ ಕಾರ್ಯಾಚರಣೆಗೆ ನೆಲೆಗಟ್ಟನ್ನು ಇರಿಸಿತು.[೫೫]

ಪೂರ್ವ ಆಫ್ರಿಕಾ[ಬದಲಾಯಿಸಿ]

ಎರಿಟ್ರಿಯಾದಲ್ಲಿನ ಕೆರೆನ್‌ನ್ನು ವಶಮಾಡಿಕೊಳ್ಳುವುದಕ್ಕೆ ಮುಂಚಿತವಾಗಿ ಭಾರತೀಯ ಫಿರಂಗಿದಳವು ಕಾರ್ಯಾಚರಣೆಯಲ್ಲಿ ತೊಡಗಿರುವುದು.

೧೯೪೦ರ ಆಗಸ್ಟ್‌ ೩ರಂದು ಆರಂಭಗೊಂಡ, ಬ್ರಿಟಿಷ್‌ ಸೋಮಾಲಿಲ್ಯಾಂಡ್‌ನ್ನು ಇಟಲಿಯನ್ನರು ವಶಪಡಿಸಿಕೊಳ್ಳುವ ಹೋರಾಟದ ಸಂದರ್ಭದಲ್ಲಿ ೩/೧೫ನೇ ಪಂಜಾಬ್‌ ಸೇನಾಪಡೆಯು ವಶದಲ್ಲಿರುವ ಪಡೆಗಳ ಪೈಕಿ ಸೇರಿತ್ತು ಮತ್ತು ಆಗಸ್ಟ್‌ ೭ರಂದು ೧/೨ನೇ ಪಂಜಾಬ್‌ ಸೇನಾಪಡೆ ವತಿಯಿಂದ ಏಡನ್‌ನಿಂದ ಅದು ಕ್ಷಿಪ್ರವಾಗಿ ಬಲವರ್ಧನೆಗೆ ಒಳಗಾಯಿತು. ಟಗ್‌ ಆರ್ಗಾನ್‌ ಕದನದ ನಂತರ ಬ್ರಿಟಿಷ್‌ ಪಡೆಯು ಬಲವಂತವಾಗಿ ಹಿಂದೆಗೆದುಕೊಳ್ಳಬೇಕಾಗಿ ಬಂತು; ಹಾಗೂ ೩/೧೫ನೇ ಪಂಜಾಬ್‌ ಸೇನಾಪಡೆಯು ಹಿಂರಕ್ಷಣಾ ಸೈನ್ಯದ ಭಾಗವಾಗಿ ರೂಪುಗೊಡಿತು. ಆಗಸ್ಟ್‌ ೧೯ರ ವೇಳೆಗೆ, ಬ್ರಿಟಿಷ್‌ ಮತ್ತು ಭಾರತೀಯ ಪಟಾಲಂಗಳು ತೆರವುಗೊಳಿಸಲ್ಪಟ್ಟು ಏಡನ್‌ಗೆ ಕಳಿಸಲ್ಪಟ್ಟಿದ್ದವು. ಬ್ರಿಟಿಷ್‌ ಪಡೆಯ ಪೈಕಿ ೩೮ ಮಂದಿ ಸಾಯಿಸಲ್ಪಟ್ಟರು, ೧೦೨ ಮಂದಿ ಗಾಯಗೊಂಡರು, ಮತ್ತು ೧೨೦ ಮಂದಿ ಕಣ್ಮರೆಯಾದರು. ಅದೇ ವೇಳೆಗೆ ಇಟಲಿಯ ಪಡೆಯ ಪೈಕಿ ೪೬೫ ಮಂದಿ ಸಾಯಿಸಲ್ಪಟ್ಟರು, ೧,೫೩೦ ಮಂದಿ ಗಾಯಗೊಂಡರು, ಮತ್ತು ೩೪ ಮಂದಿ ಕಣ್ಮರೆಯಾದರು.[೫೬]

ಸೂಡಾನ್‌‌ನಲ್ಲಿರುವ ೫ನೇ ಭಾರತೀಯ ಪದಾತಿಸೈನ್ಯ ತುಕಡಿಯನ್ನು ಸೇರಿಕೊಳ್ಳಲು ೪ನೇ ಭಾರತೀಯ ಪದಾತಿಸೈನ್ಯ ತುಕಡಿಯು ೧೯೪೦ರ ಡಿಸೆಂಬರ್‌ನಲ್ಲಿ ಈಜಿಪ್ಟ್‌ನಿಂದ ಧಾವಿಸಿತು. ೧೯೪೧ರ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಕೆರೆನ್‌ ಕದನದಲ್ಲಿ[೫೦] ಭಾರತೀಯ ಪದಾತಿಸೈನ್ಯದ ೪ನೇ ಮತ್ತು ೫ನೇ ತುಕಡಿಗಳು ಪಾಲ್ಗೊಂಡವು. ದಂಡಯಾತ್ರೆಯ ಅಂತ್ಯದ ವೇಳೆಗೆ, ಇಟಲಿಯ ಪಡೆಗಳನ್ನು ಎರಿಟ್ರಿಯಾ ಮತ್ತು ಅಬಿಸ್ಸೀನಿಯಾದಿಂದ ವಿಲೇವಾರಿ ಮಾಡಲಾಗಿತ್ತು ಹಾಗೂ ಸದರಿ ಪಡೆಗಳಿಗೆ ಸೇರಿದ್ದ ೨೨೦,೦೦೦ ಮಂದಿ ಯುದ್ಧ ಕೈದಿಗಳಾದರು.[೫೦]

ಇರಾಕ್‌ ಮತ್ತು ಪರ್ಷಿಯಾ[ಬದಲಾಯಿಸಿ]

ಸೋವಿಯತ್‌ ಒಕ್ಕೂಟದೆಡೆಗಿನ ಭೂಮಾರ್ಗದ ಪೂರೈಕೆ ಮಾರ್ಗವನ್ನು ರಕ್ಷಿಸುವ ಸಲುವಾಗಿದ್ದ ಆಂಗ್ಲ-ಇರಾಕಿ ಯುದ್ಧದಲ್ಲಿ ಭಾಗವಹಿಲು ೧೯೪೧ರಲ್ಲಿ ಪಡೆಗಳ ಅಗತ್ಯ ಕಂಡುಬಂತು.[೪] ೮ನೇ ಭಾರತೀಯ ಪದಾತಿಸೈನ್ಯ ತುಕಡಿಯು ಏಪ್ರಿಲ್‌ನಲ್ಲಿ ಬಸ್ರಾದಲ್ಲಿ ಬಂದಿಳಿಯಿತು ಮತ್ತು ಒಕ್ಕೂಟಕ್ಕೆ ಸೇರಿದ ಕಾರಣಕ್ಕಾಗಿ, ಜರ್ಮನ್‌ ಪರವಾಗಿದ್ದ ರಷೀದ್‌ ಆಲಿಯಿಂದ[೫೦] ಇರಾಕ್‌ನ್ನು ಪಡೆದುಕೊಳ್ಳುವ ಸಲುವಾಗಿ ಬಾಗ್ದಾದ್‌ ಕಡೆಗೆ ಅದು ಮುಂದುವರಿಯಿತು. ೧೯೪೧ರ ಜೂನ್‌ನಲ್ಲಿ ನಡೆದ, ಸೋವಿಯತ್‌ ಒಕ್ಕೂಟದ ಮೇಲಿನ ಜರ್ಮನ್‌ ಆಕ್ರಮಣವಾದ ಆಪರೇಷನ್‌ ಬಾರ್ಬರೋಸಾ ಕಾರ್ಯಾಚರಣೆಯಲ್ಲಿ, ಮುಂದುವರೆಯುತ್ತಿದ್ದ ಜರ್ಮನ್‌ ಸೇನೆಯಿಂದಾಗಿ ಪರ್ಷಿಯಾದ ತೈಲ ಕ್ಷೇತ್ರಗಳು ಅಪಾಯದಲ್ಲಿ ಸಿಲುಕಿದವು. ೧೯೪೧ರ ಆಗಸ್ಟ್‌ನಲ್ಲಿ, ತೈಲ ಸ್ಥಾಪನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಭಾರತೀಯ ಪದಾತಿಸೈನ್ಯದ ೮ನೇ ಮತ್ತು ೧೦ನೇ ತುಕಡಿಗಳು ದಕ್ಷಿಣ ಪರ್ಷಿಯಾದ ಮೇಲೆ ಆಕ್ರಮಣ ಮಾಡಿದವು.[೫೦]

ಭಾರತೀಯ ಪದಾತಿಸೈನ್ಯದ ೮ನೇ ಮತ್ತು ೧೦ನೇ ತುಕಡಿಗಳು, ೨ನೇ ಭಾರತೀಯ ಕವಚಿತ ಯುದ್ಧವಾಹನಗಳ ಸೇನಾದಳ ಮತ್ತು ಬ್ರಿಟಿಷರ ೪ನೇ ಅಶ್ವಸೈನ್ಯ ಸೇನಾದಳ ಇವೆಲ್ಲವೂ ಕ್ಷಿಪ್ರವಾಗಿದ್ದ ಮತ್ತು ಸರಾಗವಾಗಿ ನಿರ್ವಹಿಸಲ್ಪಟ್ಟ ಇರಾನ್‌ ಮೇಲಿನ ಆಂಗ್ಲ-ಸೋವಿಯತ್‌ ಆಕ್ರಮಣದಲ್ಲಿ (೧೯೪೧ರ ಆಗಸ್ಟ್‌–ಸೆಪ್ಟೆಂಬರ್‌) ಪಾಲ್ಗೊಂಡಿದ್ದವು. ಶತ್‌ ಅಲ್‌-ಅರಬ್‌‌ನ ಒಂದು ಉಭಯಚರ-ಸ್ವರೂಪದ ದಾಟುವಿಕೆಯನ್ನು ಕೈಗೊಂಡಿದ್ದ ೨೪ನೇ ಭಾರತೀಯ ಸೇನಾದಳದ ೮ನೇ ತುಕಡಿಗಳಿಗೆ ಸೇರಿದ ಎರಡು ಪಟಾಲಂಗಳು, ಅಬದಾನ್‌ನಲ್ಲಿನ ಪೆಟ್ರೋಲಿಯಂ ಸ್ಥಾಪನೆಗಳನ್ನು ದಕ್ಷಿಣ ಭಾಗದಿಂದ ವಶಮಾಡಿಕೊಂಡವು.[೫೭] ೮ನೇ ತುಕಡಿಯು ಆಮೇಲೆ ಬಸ್ರಾದಿಂದ ಕಸರ್‌ ಶೇಖ್‌ ಕಡೆಗೆ ಮುಂದುವರಿಯಿತು ಮತ್ತು ಆಗಸ್ಟ್‌ ೨೮ರ ವೇಳೆಗೆ ಅದು ಅಹ್ವಾಜ್‌‌‌‌ನ್ನು ತಲುಪಿತು; ಈ ವೇಳೆಗೆ ಯುದ್ಧದ ಕಾರ್ಯಾಚರಣೆಗಳನ್ನು ಕೈಬಿಡುವಂತೆ ಷಾ ಆದೇಶಿಸಿದ.[೫೮] ಮೇಜರ್‌‌-ಜನರಲ್‌ ವಿಲಿಯಂ ಸ್ಲಿಮ್‌ ಎಂಬಾತನ ಅಧಿಪತ್ಯದಲ್ಲಿ ಬ್ರಿಟಿಷರ ಮತ್ತು ಭಾರತೀಯ ತುಕಡಿಗಳ ಎಂಟು ಪಟಾಲಂಗಳು ಮತ್ತಷ್ಟು ಉತ್ತರಕ್ಕೆ ಖಾನಾಕಿನ್‌‌‌ನಿಂದ ನಫ್ತ್‌‌-ಇ-ಷಾ ತೈಲಕ್ಷೇತ್ರದೊಳಗೆ ಮತ್ತು ನಂತರದಲ್ಲಿ ಪೈ ತಕ್‌ ಪಾಸ್‌ ಕಡೆಗೆ ಮುಂದುವರಿದವು. ತನ್ಮೂಲಕ ಕೆರ್ಮಾನ್‌ಷಾ ಮತ್ತು ಹಮದಾನ್‌ ಕಡೆಗೆ ಅವು ಸಾಗಿದಂತಾಯಿತು. ರಕ್ಷಕರು ರಾತ್ರಿಯಲ್ಲಿ ಹಿಂದೆಗೆದುಕೊಂಡ ನಂತರ, ಆಗಸ್ಟ್‌ ೨೭ರಂದು ಪಾಯ್‌ ತಕ್‌ ಸೇನಾ ಠಾಣ್ಯವನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಆಗಸ್ಟ್‌ ೨೯ರಂದು ಮಾಡಬೇಕೆಂದುಕೊಂಡಿದ್ದ ಕೆರ್ಮಾನ್‌ಷಾ ಮೇಲಿನ ಯೋಜಿತ ಆಕ್ರಮಣವನ್ನು ರದ್ದುಪಡಿಸಲಾಯಿತು; ಶರಣಾಗತಿಯ ಷರತ್ತುಗಳ ಕುರಿತಾಗಿ ಸಂಧಾನ ನಡೆಸಲೆಂದು ಒಂದು ಕದನ ವಿರಾಮದ ಕರೆಯನ್ನು ರಕ್ಷಕರು ನೀಡ್ದರಿಂದ ಈ ರದ್ದಿಯಾತಿಯನ್ನು ಕೈಗೊಳ್ಳಲಾಯಿತು.[೫೯]

ಯುದ್ಧದ ಕಾರ್ಯಾಚರಣೆಗಳು ಅಂತ್ಯಗೊಂಡ ನಂತರ, ೨ನೇ ಭಾರತೀಯ ಪದಾತಿಸೈನ್ಯದ ತುಕಡಿ, ೬ನೇ ಭಾರತೀಯ ಪದಾತಿಸೈನ್ಯದ ತುಕಡಿ ಮತ್ತು ೧೨ನೇ ಭಾರತೀಯ ಪದಾತಿಸೈನ್ಯದ ತುಕಡಿ ಇವೆಲ್ಲವೂ ಆಂತರಿಕ ಭದ್ರತಾ ಕರ್ತವ್ಯಗಳ ಮೇಲೆ ಆ ಪ್ರದೇಶದಲ್ಲಿಯೇ ಉಳಿದುಕೊಂಡವು.[೧]

ಸಿರಿಯಾ ಮತ್ತು ಲೆಬನಾನ್‌[ಬದಲಾಯಿಸಿ]

೫ನೇ ಸೇನಾದಳವಾದ, ೪ನೇ ಭಾರತೀಯ ಪದಾತಿಸೈನ್ಯದ ತುಕಡಿಯನ್ನು ಭಾರತೀಯ ಸೇನೆಯು ಒದಗಿಸಿತು. ಇದು ಆಸ್ಟ್ರೇಲಿಯಾದ I ವಿಶೇಷ ದಳದೊಂದಿಗೆ ದಕ್ಷಿಣ ಭಾಗದಿಂದ ದಾಳಿಮಾಡಿತು; ೧೭ನೇ ಭಾರತೀಯ ಪದಾತಿಸೈನ್ಯದ ಸೇನಾದಳ, ಅಧಿಪತ್ಯದ ಅಡಿಯಲ್ಲಿನ ೮ನೇ ಭಾರತೀಯ ಪದಾತಿಸೈನ್ಯ ತುಕಡಿಯನ್ನೂ ಹೊಂದಿದ್ದ ೧೦ನೇ ಭಾರತೀಯ ಪದಾತಿಸೈನ್ಯದ ತುಕಡಿಯು, ಉತ್ತರ ಭಾಗದಿಂದ ಆದ ಇರಾಕ್‌ಪಡೆಯ ದಾಳಿ ಹಾಗೂ ಪೂರ್ವದಿಂದ ಆದ ಕೇಂದ್ರಸ್ಥ ಸಿರಿಯಾದ ದಾಳಿಯ ಭಾಗವಾಗಿತ್ತು. ೧೯೪೧ರ ಜೂನ್‌ನಲ್ಲಿ ನಡೆದ ದಮಾಸ್ಕಸ್‌ ಕದನ ಹಾಗೂ ಕಿಸ್ಸೌವೆ ಕದನದಲ್ಲಿ ೫ನೇ ಸೇನಾದಳ ಪಾಲ್ಗೊಂಡಿತು, ಮತ್ತು ಜುಲೈನಲ್ಲಿ ನಡೆದ ಡೇರ್‌ ಎಜ್‌-ಜೋರ್‌ ಕದನದಲ್ಲಿ ೧೦ನೇ ತುಕಡಿಯು ಪಾಲ್ಗೊಂಡಿತು.[೫೦]

ಆಗ್ನೇಯ ಏಷ್ಯಾ[ಬದಲಾಯಿಸಿ]

ಹಾಂಕಾಂಗ್[ಬದಲಾಯಿಸಿ]

೧೯೪೧ರ ಡಿಸೆಂಬರ್‌ ೮ರಂದು, ಜಪಾನಿಯರ ಸೇನೆಯು ಹಾಂಕಾಂಗ್‌ ಮೇಲೆ ದಾಳಿಮಾಡಿತು; ಇದು ಸದರಿ ಸೇನೆಯು ಮಾಡಿದ ಪರ್ಲ್‌ ಹಾರ್ಬರ್‌ ಮೇಲಿನ ದಾಳಿಯ ನಂತರದ ಎಂಟು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ನಡೆಯಿತು. ಸದರಿ ಆಕ್ರಮಣವನ್ನು ಎದುರಿಸುವುದರಲ್ಲಿ ತೊಡಗಿಸಿಕೊಂಡವರಲ್ಲಿ ೫/೭ನೇ ರಜಪೂತ ಸೇನಾಪಡೆ ಮತ್ತು ೨/೧೪ನೇ ಪಂಜಾಬ್‌ ಸೇನಾಪಡೆಗಳು ಸೇರಿದ್ದವು. ಶರಣಾಗತಿಯನ್ನು ವ್ಯಕ್ತಪಡಿಸಬೇಕೆಂದು ಒತ್ತಾಯಕ್ಕೊಳಗಾಗುವುದಕ್ಕೆ ಮುಂಚಿತವಾಗಿ ಕಾವಲುಪಡೆಯು ೧೮ ದಿನಗಳವರೆಗೆ ಪಟ್ಟುಹಿಡಿದು ಕೂತಿತ್ತು.[೫೧]

ಮಲಯ[ಬದಲಾಯಿಸಿ]

1941ರ ನವೆಂಬರ್‌ನಲ್ಲಿ, ಹೊಸದಾಗಿ ಆಗಮಿಸಿದ ಭಾರತೀಯ ತುಕಡಿಗಳು ಸಿಂಗಪೂರ್‌ನಲ್ಲಿನ ರೇವುಕಟ್ಟೆಯ ಪ್ರದೇಶದ ಮೇಲೆ ಪಥಸಂಚಲನವನ್ನು ನಡೆಸುತ್ತಿರುವುದು.

ಈಜಿಪ್ಟ್‌ನಲ್ಲಿ ನಡೆದಂತೆಯೇ, ಯುದ್ಧವು ಆರಂಭವಾಗುವುದಕ್ಕೆ ಸ್ವಲ್ಪ ಮುಂಚಿತವಾಗಿ ಭಾರತೀಯ ಸೇನೆಯು ಪದಾತಿಸೈನ್ಯದ ಒಂದು ಸೇನಾದಳವನ್ನು ಮಲಯಕ್ಕೆ ರವಾನೆ ಮಾಡಿತು.[೧೦] ೧೯೪೧ರ ವೇಳೆಗೆ, ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಹೋರಾಡುವುದಕ್ಕೆ ಸಂಬಂಧಿಸಿದ ಎಲ್ಲಾ ತರಬೇತಿ ಮತ್ತು ಸಲಕರಣೆಗಳು ಸರಿಹೊಂದಿಸಲ್ಪಟ್ಟವು; ಮತ್ತು ಪಶ್ಚಿಮದಲ್ಲಿನ ಪಡೆಗಳ ಸೈನ್ಯ ಬಲವರ್ಧನೆಗಳಿಗೆ ಪೂರೈಕೆ ಮಾಡುವ ಸಲುವಾಗಿ ಬರ್ಮಾ ಮತ್ತು ಮಲಯದಲ್ಲಿನ ಪಡೆಗಳು ಕುಗ್ಗಿಸಲ್ಪಟ್ಟಿದ್ದವು.[೪] ಆದ್ದರಿಂದ, ೧೯೪೧ರ ವಸಂತಕಾಲದಲ್ಲಿ ೯ನೇ ಭಾರತೀಯ ಪದಾತಿಸೈನ್ಯದ ತುಕಡಿಯು ಮಲಯಕ್ಕೆ[೬೦] ಕಳಿಸಲ್ಪಟ್ಟಿತು.

ಡಿಸೆಂಬರ್ ೮ರಂದು ಜಪಾನಿಯರ ಸೇನೆಯು ಮಲಯದ ಪರ್ಯಾಯದ್ವೀಪದ[೫೧] ಮೇಲೆ ದಾಳಿಮಾಡಿತು; ಆಕ್ರಮಣ ತಡೆಯುವ ರಕ್ಷಕರಲ್ಲಿ ಈಗ ೯ನೇ ಭಾರತೀಯ ತುಕಡಿ ಹಾಗೂ ೧೧ನೇ ಭಾರತೀಯ ಪದಾತಿಸೈನ್ಯದ ತುಕಡಿಗಳು, ೧೨ನೇ ಭಾರತೀಯ ಪದಾತಿಸೈನ್ಯದ ಸೇನಾದಳ ಮತ್ತು III ಭಾರತೀಯ ವಿಶೇಷ ದಳದಲ್ಲಿದ್ದ ಸಾಮ್ರಾಜ್ಯದ ಸೇವಾ ತುಕಡಿಗಳ ಹಲವಾರು ಸ್ವತಂತ್ರ ಪಟಾಲಂಗಳು ಮತ್ತು ಘಟಕಗಳು ಸೇರಿದ್ದವು. ಡಿಸೆಂಬರ್ ೧೧–೧೩ರ ಅವಧಿಯಲ್ಲಿ ನಡೆದ ಜಿಟ್ರಾ ಕದನ, ಡಿಸೆಂಬರ್ ೩೦ರಿಂದ ಜನವರಿ ೨ರವರೆಗೆ ನಡೆದ ಕಂಪಾರ್‌ ಕದನ, ೧೯೪೨ರ ಜನವರಿ ೬–೮ರ ಅವಧಿಯಲ್ಲಿ ನಡೆದ ಸ್ಲಿಮ್‌ ನದಿಯ ಕದನದಲ್ಲಿ ೧೧ನೇ ಭಾರತೀಯ ತುಕಡಿಯು ಹೋರಾಡಿತು. ೪೪ನೇ ಭಾರತೀಯ ಪದಾತಿಸೈನ್ಯದ ಸೇನಾದಳ ಮತ್ತು ೪೫ನೇ ಭಾರತೀಯ ಪದಾತಿಸೈನ್ಯದ ಸೇನಾದಳಗಳು ಸೈನ್ಯದ ಬಲವರ್ಧನೆಯ ಸ್ವರೂಪದಲ್ಲಿ ೧೯೪೨ರ ಜನವರಿಯಲ್ಲಿ ಆಗಮಿಸಿದ್ದವು. ಜನವರಿ ೧೪–೨೨ರ ಅವಧಿಯಲ್ಲಿ ನಡೆದ ಮುವಾರ್‌ ಕದನದಲ್ಲಿ ೪೫ನೇ ಸೇನಾದಳವು ಹೋರಾಡಿತು; ಸೇನಾದಳದಲ್ಲಿದ್ದ ೪,೦೦೦ ಸೈನಿಕರ ಪೈಕಿ ಕೇವಲ ೮೦೦ ಮಂದಿ ಮಾತ್ರವೇ ಕದನದಲ್ಲಿ ಬದುಕುಳಿದರು.[೬೧]

ಸಿಂಗಪೂರ್‌‌[ಬದಲಾಯಿಸಿ]

ಜನವರಿ ೩೧ರಿಂದ ಫೆಬ್ರುವರಿ ೧೫ರವರೆಗೆ ನಡೆದ ಸಿಂಗಪೂರ್‌ ಕದನವು, ೯ನೇ ಮತ್ತು ೧೧ನೇ ಭಾರತೀಯ ತುಕಡಿಗಳು ಹಾಗೂ ೧೨ನೇ, ೪೪ನೇ ಮತ್ತು ೪೫ನೇ ಸೇನಾದಳಗಳನ್ನು ವಶಮಾಡಿಕೊಳ್ಳುವುದರೊಂದಿಗೆ ಅಂತ್ಯಗೊಂಡಿತು; ಇದರಲ್ಲಿ ೫೫,೦೦೦ ಮಂದಿ ಭಾರತೀಯ ಬಂಟರನ್ನು ಯುದ್ಧ ಕೈದಿಗಳನ್ನಾಗಿಸಲಾಯಿತು.[೬೨]

ಸಿಂಗಪೂರ್‌ ಕದನದ ಸಂದರ್ಭದಲ್ಲಿ, ಬುಕಿತ್‌ ತಿಮಾಹ್‌ ಕದನ ಮತ್ತು ಪಾಸಿರ್‌ ಪಂಜಾಂಗ್‌ ಕದನಗಳಲ್ಲಿ ಭಾರತೀಯ ಘಟಕಗಳು ಹೋರಾಡಿದವು.[೬೩]

ಬರ್ಮಾ[ಬದಲಾಯಿಸಿ]

೧೯೪೧ರ ವಸಂತಕಾಲದಲ್ಲಿ ಮಲಯದಲ್ಲಿನ ಬಲವರ್ಧನೆಗಾಗಿ ೯ನೇ ತುಕಡಿಯು ಕಳಿಸಲ್ಪಟ್ಟ ಅದೇ ಸಮಯದಲ್ಲಿಯೇ, ಬರ್ಮಾದಲ್ಲಿ ಬಲವರ್ಧನೆಯನ್ನು ಕೈಗೊಳ್ಳಲು ಪದಾತಿಸೈನ್ಯದ ಸೇನಾದಳವೊಂದು ಕಳಿಸಲ್ಪಟ್ಟಿತು; ನಂತರ ಅದೇ ವರ್ಷದಲ್ಲಿ ಇದನ್ನನುಸರಿಸಿಕೊಂಡು ಎರಡನೇ ಸೇನಾದಳವೊಂದನ್ನು ಕಳಿಸಲಾಯಿತು.[೬೦] ಡಿಸೆಂಬರ್‌ ೮ರಂದು, ಜಪಾನಿಯರ ಸೇನೆಯು ಸಿಯಾಮ್‌ ಕಡೆಯಿಂದ ಬರ್ಮಾದ ಮೇಲೆ ಆಕ್ರಮಣ ಮಾಡಿತು.[೫೧] ಭಾರತಕ್ಕೆ ಹಿಂದೆಗೆದುಕೊಳ್ಳುವಾಗ ಕೊನೆಯ ಬ್ರಿಟಿಷ್‌ ಮತ್ತು ಭಾರತೀಯ ತುಕಡಿಯು ೧೯೪೨ರ ಜುಲೈನಲ್ಲಿ ಬರ್ಮಾದಿಂದ ತಪ್ಪಿಸಿಕೊಂಡಿತು.[೫೧]

ಬರ್ಮಾವನ್ನು ವಶಪಡಿಸಿಕೊಂಡ ಜಪಾನಿಯರು[ಬದಲಾಯಿಸಿ]

೧೯೪೨ರ ಫೆಬ್ರುವರಿಯಲ್ಲಿ ೧೭ನೇ ಭಾರತೀಯ ಪದಾತಿಸೈನ್ಯದ ತುಕಡಿಯು ಬಿಲಿನ್‌ ನದಿಯ ಕದನದಲ್ಲಿ ಹೋರಾಡಿತು. ಅರಣ್ಯ ಪ್ರದೇಶದಲ್ಲಿನ ಅತಿ-ಸಾಮೀಪ್ಯದ ಹೋರಾಟದಲ್ಲಿ, ೧೭ನೇ ತುಕಡಿಯು ಜಪಾನಿಯರನ್ನು ಬಿಲಿನ್‌ ನದಿಯ ಬಳಿ ಎರಡು ದಿನಗಳವರೆಗೆ ಹಿಡಿದಿಟ್ಟಿತ್ತು. ಜಪಾನಿಯರ ಯುದ್ಧತಂತ್ರಗಳು ಅನಿರೀಕ್ಷಿತ ಕಾರ್ಯಾಚರಣೆಯಿಂದ ದಿಕ್ಕುಗೆಡಿಸುವಂತಿದ್ದವು, ಮತ್ತು ಅಂತಿಮವಾಗಿ ಸುತ್ತುವರಿಯುವಿಕೆಯು ಸನ್ನಿಹಿತವಾಗುತ್ತಿದ್ದಂತೆ, ಹಿಮ್ಮೆಟ್ಟಲು ಅವರಿಗೆ ಅನುಮತಿ ನೀಡಲಾಯಿತು. ಕತ್ತಲೆಯ ಮರೆಯಲ್ಲಿ ತುಕಡಿ ವರ್ಗಾಯಿಸಲ್ಪಟ್ಟಿತು ಮತ್ತು ಧೂಳುತುಂಬಿದ ಮತ್ತು 30 miles (48 km)ನಷ್ಟಿದ್ದ ಒಂದು ಹಿಮ್ಮೆಟ್ಟಿಕೆಯನ್ನು ಸಿಟ್ಟಾಂಗ್‌ ಸೇತುವೆ‌ಯ ಕಡೆಗಿನ ಧೂಳುತುಂಬಿದ ಹಾದಿಯುದ್ದಕ್ಕೂ ಆರಂಭಿಸಿತು.[೬೪] ೧೭ನೇ ತುಕಡಿಯು ತನ್ನ ಬಹುಪಾಲು ಫಿರಂಗಿದಳ, ವಾಹನಗಳು ಮತ್ತು ಇತರ ಭಾರೀ ಸಲಕರಣೆಗಳನ್ನು ಕಳೆದುಕೊಳ್ಳುವುದಕ್ಕೆ ಕಾರಣವಾದ ಸಿಟ್ಟಾಂಗ್‌ ಸೇತುವೆ‌ಯ ಕದನವು ಇದನ್ನು ಅನುಸರಿಸಿಕೊಂಡು ಬಂದಿತು.[೬೫] ಇದರ ಪದಾತಿಸೈನ್ಯದ ಮಾನವಶಕ್ತಿಯು ೩,೪೮೪ರಷ್ಟಿದ್ದು, ಇದು ಅದರ ಸಿಬ್ಬಂದಿ ಸಂಖ್ಯೆಗಿಂತ ಕೇವಲ ೪೦%ನಷ್ಟು ಹೆಚ್ಚಿತ್ತಾದರೂ, ಕದನವು ಆರಂಭವಾಗುವುದಕ್ಕೆ ಮುಂಚೆಯೇ ಅದರ ಬಲವು ಸಾಕಷ್ಟು ಕುಗ್ಗಿತ್ತು.[೬೬] ಮಾರ್ಚ್‌ನಲ್ಲಿ ನಡೆದ ಪೆಗು ಕದನವು ೧೭ನೇ ತುಕಡಿಯ ಉಳಿದಿರುವ ಘಟಕಗಳಿಂದ ಮತ್ತು ಮಧ್ಯಪ್ರಾಚ್ಯದಿಂದ ಆಗಷ್ಟೇ ಆಗಮಿಸಿದ್ದ ೭ನೇ ಬ್ರಿಟಿಷ್‌ ಕವಚಿತ ಯುದ್ಧವಾಹನಗಳ ಸೇನಾದಳಿಂದ ನಿರ್ವಹಿಸಲ್ಪಟ್ಟಿತು.[೬೭] ಯೆನನ್‌ಗ್ಯೌಂಗ್‌ ತೈಲಕ್ಷೇತ್ರಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ೭ನೇ ಕವಚಿತ ಯುದ್ಧವಾಹನಗಳ ಸೇನಾದಳ, ೪೮ನೇ ಭಾರತೀಯ ಪದಾತಿಸೈನ್ಯದ ಸೇನಾದಳ ಮತ್ತು ೧ನೇ ಬರ್ಮಾ ತುಕಡಿಗಳ ನಡುವೆ ಏಪ್ರಿಲ್‌ನಲ್ಲಿ ಯೆನನ್‌ಗ್ಯೌಂಗ್‌ ಕದನವು ನಡೆಯಿತು. ಕದನದ ಸಂದರ್ಭದಲ್ಲಿ ಜಪಾನಿಯರು ಭಾರೀ ಸಾವುನೋವುಗಳು-ನಷ್ಟಗಳನ್ನು ಅನುಭವಿಸಿದರಾದರೂ, ತೈಲಕ್ಷೇತ್ರಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಒಕ್ಕೂಟಕ್ಕೆ ಸೇರಿದ ಪಡೆಗಳು ತೀರಾ ದುರ್ಬಲವಾಗಿದ್ದವು. ಹೀಗಾಗಿ ಅವು ಉತ್ತರದೆಡೆಗೆ ಹಿಮ್ಮೆಟ್ಟಬೇಕಾಯಿತು. ಭಾರತಕ್ಕೆ ಸಂಬಂಧಿಸಿದಂತೆ ಹೋರಾಟದ ಹಿಮ್ಮೆಟ್ಟಿಕೆಯು ಮೇ ತಿಂಗಳಲ್ಲಿ ಯಶಸ್ವಿಯಾಗಿ ಸಂಪೂರ್ಣಗೊಂಡಿತು ಹಾಗೂ ಮಳೆಮಾರುತಗಳು ಅವರನ್ನು ನಜ್ಜುಗುಜ್ಜಾಗಿಸುವ ಮುಂಚೆಯೇ ಅದು ಸಂಪೂರ್ಣಗೊಂಡಿತು ಎಂಬುದು ಗಮನಾರ್ಹ ಅಂಶ.[೬೭] ೪೦,೦೦೦ ಮಂದಿ ಭಾರತೀಯ ಯುದ್ಧ ಕೈದಿಗಳ ಪೈಕಿ ಒಂದೋ ಮಲಯದ ದಂಡಯಾತ್ರೆಯ ಅವಧಿಯಲ್ಲಿ ಸೆರೆಹಿಡಿಯಲ್ಪಟ್ಟಿದ್ದ ಅಥವಾ ಸಿಂಗಪೂರ್‌ನಲ್ಲಿ ಶರಣಾಗಿದ್ದ ಸರಿಸುಮಾರು ೧೨,೦೦೦ ಮಂದಿ, ಮೋಹನ್‌ ಸಿಂಗ್‌ ನೇತೃತ್ವದಲ್ಲಿ ಮೊದಲ ಭಾರತೀಯ ರಾಷ್ಟ್ರೀಯ ಸೇನೆಯಾಗಿ ಮುನ್ನಡೆಸಲ್ಪಟ್ಟರು; ಆದರೆ ಇದು ೧೯೪೨ರ ಡಿಸೆಂಬರ್‌ನಲ್ಲಿ ವಿಘಟಿಸಲ್ಪಟ್ಟಿತು.

೧೯೪೩ರ ಬರ್ಮಾ ದಂಡಯಾತ್ರೆ[ಬದಲಾಯಿಸಿ]

ಪೂರ್ವಸಿದ್ಧತೆಯಿಲ್ಲದೆ ಅನುವುಗೊಳಿಸಿದ ಒಂದು ಸೇನಾವ್ಯೂಹ ಎಂದು ಆ ಸಮಯದಲ್ಲಿ ಕರೆಯಲ್ಪಟ್ಟಿದ್ದ ೧೪ನೇ ಭಾರತೀಯ ಪದಾತಿಸೈನ್ಯದ ತುಕಡಿಯಿಂದ ನಿರ್ವಹಿಸಲ್ಪಟ್ಟಿದ್ದ ಮತ್ತು ೧೯೪೨ರ ಡಿಸೆಂಬರ್‌ನಲ್ಲಿ ಆರಂಭವಾದ ಅರಾಕನ್‌ ದಂಡಯಾತ್ರೆಯು ಒಂದು ವಿಫಲಯತ್ನವೆನಿಸಿಕೊಂಡಿತು. ಅರಣ್ಯ ಪ್ರದೇಶದಲ್ಲಿ ಹೋರಾಡುವುದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್‌ ಮತ್ತು ಭಾರತೀಯ ಪಡೆಗಳ ಸಾಧಾರಣ ಯೋಧರಿಗೆ ಸೂಕ್ತವಾಗಿ ತರಬೇತಿ ನೀಡಿರಲಿಲ್ಲ; ಇದರ ಜೊತೆಗೆ ಮರುಕಳಿಸಿದ ಸೋಲುಗಳೂ ಸೇರಿಕೊಂಡು ಅವು ಶಿಸ್ತುಪಾಲನೆಯ ನೈತಿಕಸ್ಥಿತಿಯ ಮೇಲೆ ಪ್ರತಿಕೂಲವಾಗಿ ಪ್ರಭಾವ ಬೀರಿದವು. ಸೈನ್ಯದ ಅತ್ಯಂತ ಹಿಂಭಾಗದ ಪ್ರದೇಶಗಳಲ್ಲಿ ಕಂಡುಬಂದ ಕಳಪೆ ಆಡಳಿತದಿಂದಾಗಿ ಇದು ಮತ್ತಷ್ಟು ಉಲ್ಬಣಗೊಳಿಸಲ್ಪಟ್ಟಿತು. ಕೆಲವೊಂದು ನಿದರ್ಶನಗಳಲ್ಲಂತೂ ಸೈನ್ಯ ಬಲವರ್ಧನೆಗಳಿಗೆಂದು ಕಳಿಸಲಾದ ವಿಶೇಷಪಡೆಗಳು ಮೂಲಭೂತ ತರಬೇತಿಯನ್ನೂ ಸಹ ಸಂಪೂರ್ಣಗೊಳಿಸದಿದ್ದುದು ಕಂಡುಬಂತು.[೬೮] ಭಾರತೀಯ ಸೇನೆಯ ಉನ್ನತ ಅಧಿಪತ್ಯದ ಸಾಮರ್ಥ್ಯದ ಕುರಿತಾಗಿಯೂ ಅಲ್ಲಿ ಒಂದಷ್ಟು ಪ್ರಶ್ನೆಗಳೆದ್ದಿದ್ದವು; ಪರಮೋಚ್ಚ ಒಕ್ಕೂಟಕ್ಕೆ ಸೇರಿದ ದಳಪತಿಯಾದ ಆಗ್ನೇಯ ಏಷ್ಯಾ ಪ್ರಭುತ್ವದ ಸ್ಥಾನವೊಂದರ ಸೃಷ್ಟಿಗೆ ಇದು ಕಾರಣವಾಯಿತು ಮತ್ತು ಸೇನೆಯ ಉನ್ನತ ಅಧಿಪತ್ಯವು ಆಂತರಿಕ ಭದ್ರತೆ ಮತ್ತು ಆಡಳಿತದ ಕುರಿತಾಗಿ ಗಮನಹರಿಸಬೇಕಾಗಿ ಬಂತು.[೬೯] ಇಂಫಾಲ್‌ನ ದಕ್ಷಿಣ ಭಾಗದಲ್ಲಿ ಸ್ಥಳಶೋಧಕ ದಳದ ನಿರಂತರವಾದ ಚಟುವಟಿಕೆ ಮತ್ತು ಮಂದ-ಮಟ್ಟದ ಹೋರಾಟವು ಕಂಡುಬಂದಿತ್ತಾದರೂ, ನಿರ್ಣಾಯಕ ಕಾರ್ಯಾಚರಣೆಗಳಿಗೆ ಚಾಲನೆನೀಡಬಲ್ಲ ಸಾಧನ-ಸಂಪತ್ತುಗಳನ್ನು ಯಾವೊಂದು ಸೇನೆಯೂ ಹೊಂದಿರಲಿಲ್ಲ. ಇಂಫಾಲ್‌ನ ದಕ್ಷಿಣ ಭಾಗದಲ್ಲಿ 100 miles (160 km) ಇರುವ ಟಿಡ್ಡಿಮ್‌ ಪಟ್ಟಣದ ಸುತ್ತಲಿನ ಸೇನಾಠಾಣ್ಯಗಳನ್ನು ೧೭ನೇ ತುಕಡಿಯು ಹಿಡಿದಿಟ್ಟುಕೊಂಡಿತ್ತು ಮತ್ತು ೩೩ನೇ ಜಪಾನಿಯರ ತುಕಡಿಯ ಘಟಕಗಳೊಂದಿಗೆ ಅದು ಚಕಮಕಿಯನ್ನು ನಡೆಸಿತ್ತು. ಚಿಂದ್ವಿನ್‌ ನದಿಯ ಮೇಲಿನ ಕಲೇವಾ ಬಂದರಿನಿಂದ ಜಪಾನಿಯರ ಸೇನೆಯು ಒಂದು ಅಲ್ಪ ಅಂತರದ ಮತ್ತು ಸುಲಭವಾದ ಪೂರೈಕೆಯ ಸಂಪರ್ಕವನ್ನು ಹೊಂದಿತ್ತು ಮತ್ತು ೧೯೪೨ ಹಾಗೂ ೧೯೪೩ರ ಅವಧಿಯ ಬಹುಭಾಗಕ್ಕೆ ಸಂಬಂಧಿಸಿದಂತೆ ಅದು ಮೇಲುಗೈ ಸಾಧಿಸಿತ್ತು.[೭೦]

೧೯೪೪ರ ಬರ್ಮಾ ದಂಡಯಾತ್ರೆ[ಬದಲಾಯಿಸಿ]

ಇಂಫಾಲ್‌ ಕದನದ ಸಂದರ್ಭದಲ್ಲಿ ಗೂರ್ಖಾಗಳು ಮತ್ತು ಟ್ಯಾಂಕ್‌ಗಳು ಮುನ್ನಡೆಯುತ್ತಿರುವುದು.

ಫೆಬ್ರುವರಿಯಲ್ಲಿ ನಡೆದ ಅಡ್ಮಿನ್‌ ಬಾಕ್ಸ್‌ ಕದನವು (೫ನೇ, ೭ನೇ ಮತ್ತು ೨೬ನೇ ಭಾರತೀಯ ತುಕಡಿ, ೮೧ನೇ (ಪಶ್ಚಿಮ ಆಫ್ರಿಕಾ) ತುಕಡಿ, ೩೬ನೇ ಬ್ರಿಟಿಷ್‌ ಪದಾತಿಸೈನ್ಯದ ತುಕಡಿ) ಒಕ್ಕೂಟಕ್ಕೆ ಸೇರಿದ ಪಡೆಯ ಒಂದು ಸೀಮಿತ ಆಕ್ರಮಣಕಾರಿ ದಾಳಿಯ ನಂತರ ಸಂಭವಿಸಿತು. ೭ನೇ ತುಕಡಿಯ ವ್ಯಾಪಕವಾಗಿ ಚೆದುರಿಹೋಗಿದ್ದ ವ್ಯೂಹಗಳಲ್ಲಿ ಜಪಾನಿಯರು ಒಳನುಸುಳಿಕೊಂಡಿದ್ದರು, ಮತ್ತು ಕಂಡುಹಿಡಿಯಲಾಗದಂತೆ ಅವರು ಉತ್ತರ ದಿಕ್ಕಿನಡೆ ಸಾಗಿದರು, ಕಾಲಾಪಂಜಿನ್‌ ನದಿಯನ್ನು ದಾಟಿದರು ಹಾಗೂ ಪಶ್ಚಿಮ ಮತ್ತು ದಕ್ಷಿಣದೆಡೆಗೆ ತಿರುಗಿದರು ಹಾಗೂ ೭ನೇ ತುಕಡಿಯ HQ ಮೇಲೆ ದಾಳಿಮಾಡಿದರು. ಹಿಮ್ಮೆಟ್ಟಿಕೆಯ ಬದಲಿಗೆ ತಮ್ಮ ಸೇನೆಯ ಠಾಣ್ಯಗಳನ್ನು ಭದ್ರಮಾಡಿಕೊಳ್ಳುವಂತೆ ಹಾಗೂ ಹಿಡಿದಿಟ್ಟುಕೊಳ್ಳುವಂತೆ ಮುಂದಿನ ತುಕಡಿಗಳಿಗೆ ಆದೇಶಿಸಲಾಯಿತು; ಅದೇ ವೇಳೆಗೆ ಮೀಸಲು ತುಕಡಿಗಳು ಅವುಗಳ ಬಿಡುಗಡೆಗೆಂದು ಮುಂದುವರಿದವು. ಕದನರಂಗದಲ್ಲಿ, ಅಡ್ಮಿನ್‌ ಬಾಕ್ಸ್‌ಗೆ ಸಂಬಂಧಿಸಿದ ಹೋರಾಟವು ತೀವ್ರವಾಗಿತ್ತು ಮತ್ತು ಜಪಾನಿಯರ ಗುಂಡಿನ ದಾಳಿಯು ಕಿಕ್ಕಿರಿದಿದ್ದ ರಕ್ಷಣಾ-ಸನ್ನಿವೇಶಗಳಲ್ಲಿ ಭಾರೀ ಸಾವುನೋವುಗಳನ್ನು ಉಂಟುಮಾಡಿದವು ಹಾಗೂ ಯುದ್ಧಸಾಮಗ್ರಿಯ ಹಂಗಾಮಿ ಕೋಠಿಗಳಿಗೆ ಎರಡು ಬಾರಿ ಬೆಂಕಿಹಚ್ಚಿದವು. ಆದಾಗ್ಯೂ, ಆಕ್ರಮಣ ತಡೆಯುವ ರಕ್ಷಕರನ್ನು ಸದೆಬಡಿಯುವಲ್ಲಿನ ಎಲ್ಲಾ ಪ್ರಯತ್ನಗಳು ೨೫ನೇ ಅಶ್ವಸೈನಿಕರು ಟ್ಯಾಂಕ್‌ಗಳಿಂದ ಅಡ್ಡಿಪಡಿಸಲ್ಪಟ್ಟವು. ಜಪಾನಿಯರ ಪಡೆಗೆ ಹೋಲಿಸಿದಾಗ, ಒಕ್ಕೂಟಕ್ಕೆ ಸೇರಿದ ಪಡೆಯಲ್ಲಿ ಸಂಭವಿಸಿದ ಸಾವುನೋವುಗಳು ಹೆಚ್ಚಿನ ಮಟ್ಟದಲ್ಲಿದ್ದವಾದರೂ, ಜಪಾನಿಯರು ತಮ್ಮ ಪಡೆಗೆ ಸೇರಿದ ಗಾಯಗೊಂಡವರ ಪೈಕಿ ಅನೇಕರನ್ನು ಸಾಯವುದಕ್ಕೆ ಬಿಟ್ಟುಬಿಡಬೇಕಾಗಿ ಬಂತು. ಬರ್ಮಾ ದಂಡಯಾತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಜಪಾನಿಯರ ಯುದ್ಧತಂತ್ರಗಳು ಎದುರಿಸಲ್ಪಟ್ಟವು ಮತ್ತು ಅವರ ವಿರುದ್ಧವೇ ತಿರುಗಿಸಲ್ಪಟ್ಟವು; ಮತ್ತು ಜಪಾನಿಯರ ಒಂದು ಪ್ರಮುಖ ದಾಳಿಯನ್ನು ಬ್ರಿಟಿಷ್‌ ಮತ್ತು ಭಾರತೀಯ ಯೋಧರು ಹಿಡಿದಿಟ್ಟಿದ್ದರು ಹಾಗೂ ಸೋಲಿಸಿದ್ದರು.[೨೪]

ಇಂಫಾಲ್‌ ಕದನ ಮತ್ತು ಸ್ಯಾಂಗ್‌ಶಾಕ್‌ ಕದನಗಳು (೧೭ನೇ, ೨೦ನೇ, ೨೩ನೇ ಭಾರತೀಯ ತುಕಡಿಗಳು, ೫೦ನೇ ಭಾರತೀಯ ಧುಮುಕುಕೊಡೆ ಸೇನಾದಳ ಮತ್ತು ೨೫೪ನೇ ಭಾರತೀಯ ಟ್ಯಾಂಕ್‌ ಸೇನಾದಳ) ಈಶಾನ್ಯ ಭಾರತದಲ್ಲಿನ ಮಣಿಪುರ ರಾಜ್ಯದ ರಾಜಧಾನಿಯಾದ ಇಂಫಾಲ್‌ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ೧೯೪೪ರ ಮಾರ್ಚ್‌ನಿಂದ ಜುಲೈವರೆಗೆ ನಡೆದವು. ಒಕ್ಕೂಟಕ್ಕೆ ಸೇರಿದ ಪಡೆಗಳನ್ನು ಇಂಫಾಲ್‌ನಲ್ಲಿ ನಾಶಪಡಿಸಲು ಮತ್ತು ಭಾರತವನ್ನು ಆಕ್ರಮಿಸಿಕೊಳ್ಳಲು ಜಪಾನಿಯರ ಸೇನೆಗಳು ಪ್ರಯತ್ನಿಸಿದವು, ಆದರೆ ಭಾರೀ ನಷ್ಟಗಳನ್ನು ಉಂಟುಮಾಡುವುದರೊಂದಿಗೆ ಅವನ್ನು ಬರ್ಮಾದೊಳಗೆ ಓಡಿಸಲಾಯಿತು.[೭೧]

ಕೊಹಿಮಾ ಕದನವು (೫೦ನೇ ಭಾರತೀಯ ಧುಮುಕುಕೊಡೆ ಸೇನಾದಳ ೫ನೇ, ೭ನೇ ಭಾರತೀಯ ತುಕಡಿ ಮತ್ತು ೨ನೇ ಬ್ರಿಟಿಷ್‌ ತುಕಡಿ) ಜಪಾನಿಯರ U Go ಆಕ್ರಮಣದ ನಿರ್ಣಾಯಕ ಘಟ್ಟವಾಗಿತ್ತು. ಇಂಫಾಲ್‌ನಲ್ಲಿದ್ದ ಬ್ರಿಟಿಷರ ಮತ್ತು ಭಾರತೀಯರ ಪ್ರಮುಖ ತುಕಡಿಗಳಿಗೆ ಪೂರೈಕೆಗಳು ತಲುಪುವಲ್ಲಿನ ರಸ್ತೆಯನ್ನು ಮೀರಿಸಿ ಮೇಲುಗೈ ಸಾಧಿಸಿದ ಒಂದು ವಿಶಿಷ್ಟ ಲಕ್ಷಣವಾದ ಕೊಹಿಮಾ ಏಣನ್ನು ವಶಮಾಡಿಕೊಳ್ಳಲು ಜಪಾನಿಯರು ಪ್ರಯತ್ನಿಸಿದರು. ಜಪಾನಿಯರು ವಶಮಾಡಿಕೊಂಡಿದ್ದ ಸೇನಾಠಾಣ್ಯಗಳಿಂದ ಅವರನ್ನು ಓಡಿಸಲೆಂದು ಬ್ರಿಟಿಷ್‌ ಮತ್ತು ಭಾರತೀಯ ಸೈನ್ಯದ ಬಲವರ್ಧನೆಗಳು ಪ್ರತಿ-ದಾಳಿಮಾಡಿದವು. ಜಪಾನಿಯರು ಏಣನ್ನು ಬಿಟ್ಟುಬಿಟ್ಟರಾದರೂ, ಕೊಹಿಮಾ-ಇಂಫಾಲ್‌ ರಸ್ತೆಯನ್ನು ತಡೆಗಟ್ಟುವುದನ್ನು ಮುಂದುವರಿಸಿದರು. ಮೇ ೧೬ರಿಂದ ಜೂನ್ ೨೨ರವರೆಗೆ, ಹಿಮ್ಮೆಟ್ಟುತ್ತಿದ್ದ ಜಪಾನಿಯರನ್ನು ಬ್ರಿಟಿಷ್‌ ಮತ್ತು ಭಾರತೀಯ ತುಕಡಿಗಳು ಬೆನ್ನಟ್ಟಿಹೋದವು ಮತ್ತು ರಸ್ತೆಯನ್ನು ಮತ್ತೆ ಮುಕ್ತಗೊಳಿಸಿದವು. ಕದನವು ಜೂನ್‌ ೨೨ರಂದು ಅಂತ್ಯಗೊಂಡಾಗ, ಕೊಹಿಮಾ ಮತ್ತು ಇಂಫಾಲ್‌ನಿಂದ ಬಂದ ಬ್ರಿಟಿಷ್‌ ಮತ್ತು ಭಾರತೀಯ ತುಕಡಿಗಳು ೧೦೯ನೇ[೭೨] ಮೈಲುಗಲ್ಲಿನ ಬಳಿ ಭೇಟಿಯಾದವು.

೧೯೪೫ರ ಬರ್ಮಾ ದಂಡಯಾತ್ರೆ[ಬದಲಾಯಿಸಿ]

ಚಿತ್ರ:Royal Indian Army.jpg
1945ರ ಜನವರಿ 27ರಂದು ಇರ್ರಾವ್ಯಾಡಿ ನದಿಯನ್ನು ಗೂರ್ಖಾ ರೈಫಲ್ಸ್‌ ದಾಟುತ್ತಿರುವುದು.

೧೯೪೫ರ ಜನವರಿ ಮತ್ತು ಮಾರ್ಚ್‌ ನಡುವೆ ನಡೆದ ಮೀಕ್‌ಟಿಲಾ ಮತ್ತು ಮಂಡಾಲೆಯ ಕದನಗಳು (೫ನೇ ೭ನೇ, ೧೭ನೇ, ೧೯ನೇ, ೨೦ನೇ ಭಾರತೀಯ ತುಕಡಿಗಳು, ೨ನೇ ಬ್ರಿಟಿಷ್‌ ತುಕಡಿ ಮತ್ತು ೨೫೪ನೇ ಮತ್ತು ೨೫೫ನೇ ಭಾರತೀಯ ಟ್ಯಾಂಕ್‌ ಸೇನಾದಳಗಳು) ಬರ್ಮಾ ದಂಡಯಾತ್ರೆಯ ಅಂತ್ಯದ ಸಮೀಪದಲ್ಲಿ ಕಂಡುಬಂದ ನಿರ್ಣಾಯಕ ಕದನಗಳಾಗಿದ್ದವು. ಸಾಗಣೆಯ ವ್ಯವಸ್ಥಾಪನಾ ತಂತ್ರದ ತೊಡಕುಗಳ ಹೊರತಾಗಿಯೂ, ಕೇಂದ್ರಸ್ಥ ಬರ್ಮಾದಲ್ಲಿ ಕವಚಿತ ಯುದ್ಧವಾಹನಗಳ ಮತ್ತು ಯಂತ್ರಸಜ್ಜಿತ ದೊಡ್ಡ ಪಡೆಗಳನ್ನು ಸಜ್ಜುಗೊಳಿಸುವಲ್ಲಿ ಮಿತ್ರರಾಷ್ಟ್ರಗಳು ಸಮರ್ಥವಾಗಿದ್ದವು, ಮತ್ತು ವಾಯುದಾಳಿಯ ಪರಮಾಧಿಪತ್ಯವನ್ನೂ ಅವು ಹೊಂದಿದ್ದವು. ಬರ್ಮಾದಲ್ಲಿನ ಜಪಾನಿಯರ ಬಹುಪಾಲು ಪಡೆಗಳು ಕದನಗಳ ಸಂದರ್ಭದಲ್ಲಿ ನಾಶಪಡಿಸಲ್ಪಟ್ಟಿದ್ದವು; ಇದರಿಂದಾಗಿ ರಾಜಧಾನಿಯಾದ ರಂಗೂನ್‌ನ್ನು ಮಿತ್ರರಾಷ್ಟ್ರಗಳು ನಂತರದಲ್ಲಿ ಮರುವಶಮಾಡಿಕೊಳ್ಳುವುದು ಸಾಧ್ಯವಾಗಿತ್ತು, ಮತ್ತು ಅಲ್ಪಪ್ರಮಾಣದ ಸಂಘಟಿತ ಪ್ರತಿರೋಧದ ನಡುವೆಯೂ ದೇಶದ ಬಹುಭಾಗವನ್ನು ಮರುಆಕ್ರಮಿಸಿಕೊಳ್ಳುವುದಕ್ಕೂ ಇದು ಅನುವುಮಾಡಿಕೊಟ್ಟಿತ್ತು.[೭೩]

ರಾಮ್ರೀ ದ್ವೀಪದ ಕದನವು (೨೬ನೇ ಭಾರತೀಯ ಪದಾತಿಸೈನ್ಯದ ತುಕಡಿ) ೧೯೪೫ರ ಜನವರಿ ಮತ್ತು ಫೆಬ್ರುವರಿಯ ಅವಧಿಯಲ್ಲಿ ಆರು ವಾರಗಳವರೆಗೆ ನಡೆಯಿತು; ಇದು ಬರ್ಮಾ ದಂಡಯಾತ್ರೆಯ ದಕ್ಷಿಣದ ಮುಂಚೂಣಿ ಸೇನೆಯ ಮೇಲೆ ೧೯೪೪–೪೫ರ ಸಮಯದಲ್ಲಿ XV ಭಾರತೀಯ ವಿಶೇಷ ದಳವು ಮಾಡಿದ ಆಕ್ರಮಣದ ಒಂದು ಭಾಗವಾಗಿತ್ತು. ರಾಮ್ರೀ ದ್ವೀಪವು ಬರ್ಮಾ ಕರಾವಳಿಯ ಆಚೆಗೆ ನೆಲೆಗೊಂಡಿದೆ. ೧೯೪೨ರಲ್ಲಿ ಕ್ಷಿಪ್ರವಾಗಿ ಮುಂದುವರೆಯುತ್ತಿದ್ದ ಚಕ್ರಾಧಿಪತ್ಯದ ಜಪಾನಿಯರ ಸೇನೆಯಿಂದ, ದಂಡಯಾತ್ರೆಯ ಆರಂಭಿಕ ಹಂತಗಳ ಸಂದರ್ಭದಲ್ಲಿ ಬರ್ಮಾದ ದಕ್ಷಿಣಭಾಗದ ಇತರ ಪ್ರದೇಶಗಳ ಜೊತೆಯಲ್ಲಿ ಈ ದ್ವೀಪವನ್ನೂ ವಶಮಾಡಿಕೊಳ್ಳಲಾಗಿತ್ತು. ೧೯೪೫ರ ಜನವರಿಯಲ್ಲಿ, ರಾಮ್ರೀ ಮತ್ತು ಅದರ ನೆರೆಹೊರೆಯ ಚೆದುಬಾವನ್ನು ಪುನಃ ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ದಾಳಿಗಳಿಗೆ ಚಾಲನೆನೀಡಲು ಮಿತ್ರರಾಷ್ಟ್ರಗಳು ಸಮರ್ಥವಾದವು; ಸಮುದ್ರಮಾರ್ಗದ-ಪೂರೈಕೆಯ ವಾಯುನೆಲೆಗಳನ್ನು ಅವುಗಳ ಮೇಲೆ ನಿರ್ಮಿಸುವ ಆಶಯವು ಇದರ ಹಿಂದೆ ಅಡಗಿತ್ತು.[೭೪]

ಆಪರೇಷನ್‌ ಡ್ರಾಕುಲಾ ಮತ್ತು ಎಲಿಫೆಂಟ್‌ ಪಾಯಿಂಟ್‌ ಕದನ (೫ನೇ, ೧೭ನೇ ಪದಾತಿಸೈನ್ಯ, ಮತ್ತು ೪೪ನೇ ಭಾರತೀಯ ವಾಯುಗಾಮಿ ತುಕಡಿ ೨ನೇ, ೩೬ನೇ ಬ್ರಿಟಿಷ್‌ ತುಕಡಿ ಮತ್ತು ೨೫೫ನೇ ಟ್ಯಾಂಕ್‌ ಸೇನಾದಳ) ಎಂಬುದು ರಂಗೂನ್‌ ಮೇಲೆ ಬ್ರಿಟಿಷ್‌ ಮತ್ತು ಭಾರತೀಯ ಪಡೆಗಳ ವತಿಯಿಂದ ನಡೆಸಲಾದ ಒಂದು ವಾಯುಗಾಮಿ ಮತ್ತು ಉಭಯ-ಪಡೆಯ ನೆರವಿನ ದಾಳಿಗೆ ನೀಡಲಾದ ಹೆಸರಾಗಿತ್ತು. ಇದಕ್ಕೆ ಚಾಲನೆನೀಡಿದಾಗ, ಚಕ್ರಾಧಿಪತ್ಯದ ಜಪಾನಿಯರ ಸೇನೆಯು ನಗರವನ್ನಾಗಲೇ ಬಿಟ್ಟುಬಿಟ್ಟಿತ್ತು.[೭೫]

ಮಲಯ ಮತ್ತು ಸಿಂಗಪೂರ್‌ಗೆ ವಾಪಸಾಗುವಿಕೆ[ಬದಲಾಯಿಸಿ]

1945ರ ಸೆಪ್ಟೆಂಬರ್‌ನಲ್ಲಿ ಸಿಂಗಪೂರ್‌ನಲ್ಲಿ 5ನೇ ತುಕಡಿಯ ಯೋಧರು ಜಪಾನಿ ಕೈದಿಗಳನ್ನು ಕಾವಲುಕಾಯುತ್ತಿರುವುದು.

೩ ಕಮ್ಯಾಂಡೊ ಸೇನಾದಳದೊಂದಿಗೆ ೨೫ನೇ ಭಾರತೀಯ ಪದಾತಿಸೈನ್ಯದ ತುಕಡಿಯು ೧೯೪೫ರ ಜನವರಿಯಲ್ಲಿ ಆಗ್ನೇಯ ಏಷ್ಯಾದಲ್ಲಿ ನಡೆದ ಉಭಯ-ಪಡೆಯ ನೆರವಿನ ಮೊದಲ ದೊಡ್ಡ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿತು. ಅಕ್ಯಾಬ್‌ ದ್ವೀಪದ ಉತ್ತರ ಭಾಗದ ಕಡಲತೀರಗಳ ಮೇಲಿನ ಭೂಭಾಗಕ್ಕೆ ನಾಲ್ಕು ಮೈಲುಗಳಷ್ಟು ವ್ಯಾಪಕವಾಗಿದ್ದ ಮಾಯು ನದೀಮುಖದ ಉದ್ದಕ್ಕೂ ಜಲಮಾರ್ಗದ ಮೂಲಕ ಈ ಪಡೆಗಳು ಸಾಗಿಸಲ್ಪಟ್ಟವು; ವಾರಗಳವರೆಗೆ ನಡೆದ ಈ ಯಾನದ ಅವಧಿಯಲ್ಲಿ ಮಿರ್‌ಬಾ ಮತ್ತು ರುಯ್‌ವಾವನ್ನು ಅವು ಆಕ್ರಮಿಸಿಕೊಂಡವು.[೭೬] ೧೯೪೫ರ ಏಪ್ರಿಲ್‌ನಲ್ಲಿ, ಆಕ್ರಮಣದ ಅವರೋಹದ ಪಾತ್ರಕ್ಕಾಗಿ ಆರಿಸಲ್ಪಟ್ಟಿದ್ದ ಮಲಯದ ಮೇಲಿನ ದಾಳಿಗೆ ಸಂಬಂಧಿಸಿದ ಆಪರೇಷನ್‌ ಝಿಪ್ಪರ್‌ ಎಂಬ ಕಾರ್ಯಾಚರಣೆಗಾಗಿ ದಕ್ಷಿಣ ಭಾರತಕ್ಕೆ ಸದರಿ ತುಕಡಿಯನ್ನು ಹಿಂದೆಗೆದುಕೊಳ್ಳಲಾಯಿತು. ಯುದ್ಧಸ್ಥಿತಿಗಳನ್ನು ಆಗ ಕೈಬಿಡಲಾಯಿತಾದರೂ, ಯೋಜಿಸಲ್ಪಟ್ಟಂತೆ ಕಾರ್ಯಾಚರಣೆಯು ಮುಂದುವರಿಯಿತು; ಸೆಪ್ಟೆಂಬರ್‌ ೯ರಂದು ಮಲಯದಲ್ಲಿ ಬಂದಿಳಿಯುವಲ್ಲಿ ೨೩ನೇ ಮತ್ತು ೨೫ನೇ ತುಕಡಿಗಳು ಮೊದಲನೇ ಸೇನಾವ್ಯೂಹಗಳೆನಿಸಿದವು, ಹಾಗೂ ಜಪಾನಿಯರ ಸೇನೆಯ ಶರಣಾಗತಿಯನ್ನು ಸ್ವೀಕರಿಸುವಲ್ಲಿಯೂ ಇವು ಮೊದಲಿಗರೆನಿಸಿಕೊಂಡವು.[೭೭]

ಸಿಂಗಪೂರ್‌ನೆಡೆಗೆ ತೆರಳಲು ಆಗಸ್ಟ್‌ ೨೧ರಂದು ತುಕಡಿಗಳು ಟ್ರಿಂಕಾಮಲೀ ಮತ್ತು ರಂಗೂನ್‌ನಿಂದ ಸಮುದ್ರಯಾನವನ್ನು ಆರಂಭಿಸಿದಾಗ, ಆಪರೇಷನ್‌ ಟೈಡ್‌ರೇಸ್‌ (೫ನೇ ಭಾರತೀಯ ಪದಾತಿಸೈನ್ಯದ ತುಕಡಿ) ಕಾರ್ಯಾಚರಣೆಯು ಆರಂಭಗೊಂಡಿತು.[೭೮] ೧೯೪೫ರ ಸೆಪ್ಟೆಂಬರ್‌ ೪ರಂದು ನೌಕಾತಂಡವು ಸಿಂಗಪೂರ್‌ಗೆ ಆಗಮಿಸಿತು, ಮತ್ತು ಸಿಂಗಪೂರ್‌ನಲ್ಲಿದ್ದ ಜಪಾನಿಯರ ಪಡೆಗಳು ೧೯೪೫ರ ಸೆಪ್ಟೆಂಬರ್‌ ೧೨ರಂದು ಪ್ರಧಾನ ನೌಕಾಬಲಾಧಿಪತಿ ಲಾರ್ಡ್‌ ಲೂಯಿಸ್‌ ಮೌಂಟ್‌ಬ್ಯಾಟನ್‌‌‌ಗೆ ಅಧಿಕೃತವಾಗಿ ಶರಣಾದವು; ಮೌಂಟ್‌ಬ್ಯಾಟನ್ ಆಗ್ನೇಯ ಏಷ್ಯಾ ಪ್ರಭುತ್ವದ ಒಕ್ಕೂಟಕ್ಕೆ ಸೇರಿದ ಪರಮೋಚ್ಚ ದಳಪತಿಯಾಗಿದ್ದರು.[೭೯]

ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವಿಕೆ[ಬದಲಾಯಿಸಿ]

ಜಪಾನಿಯರ ಶರಣಾಗತಿಯ ನಂತರ, ಜಪಾನಿಯರನ್ನು ನಿರಸ್ತ್ರಗೊಳಿಸಲು ಹಾಗೂ ಸ್ಥಳೀಯ ಸರ್ಕಾರಗಳಿಗೆ ನೆರವಾಗಲು ಒಂದಷ್ಟು ತುಕಡಿಗಳನ್ನು ಕಳಿಸಲಾಯಿತು. ೭ನೇ ತುಕಡಿಯು ಥೈಲೆಂಡ್‌ಗೆ ತೆರಳಿ, ಅಲ್ಲಿ ಜಪಾನಿಯರ ಆಕ್ರಮಿಸಿಕೊಳ್ಳುವ ಸೇನೆಯ ಶಸ್ತ್ರಬಲವನ್ನು ತಗ್ಗಿಸಿತು, ಮತ್ತು ಒಕ್ಕೂಟಕ್ಕೆ ಸೇರಿದ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ವಾಪಾಸು ಕಳಿಸಿತು.[೮೦] ಇಂಡೋ ಚೈನಾಕ್ಕೆ ೨೦ನೇ ತುಕಡಿಯು ಕಳಿಸಲ್ಪಟ್ಟಿತು ಹಾಗೂ ಅದು ದೇಶದ ದಕ್ಷಿಣದ ಭಾಗವನ್ನು ಆಕ್ರಮಿಸಿಕೊಂಡಿತು. ವಿಯೆಟ್‌ ಮಿನ್ಹ್‌ ಜೊತೆಗಿನ ಹಲವಾರು ಕದನಗಳು ಅಲ್ಲಿ ಅಸ್ತಿತ್ವದಲ್ಲಿದ್ದು, ಸ್ವಾತಂತ್ರ್ಯವನ್ನು ಸಾಧಿಸುವ ಕುರಿತಾದ ಆಶಯವನ್ನು ಅವು ಹೊಂದಿದ್ದವು.[೮೧] ಜಾವಾಗೆ ೨೩ನೇ ತುಕಡಿಯು ಕಳಿಸಲ್ಪಟ್ಟಿತು; ಅಲ್ಲಿ ಯುದ್ಧದ ಅಂತ್ಯವು ವ್ಯಾಪಕವಾಗಿ ಹಬ್ಬಿದ ಅವ್ಯವಸ್ಥೆಗೆ ಹಾಗೂ ಡಚ್‌ ವಸಾಹತಿನ ಆಳ್ವಿಕೆ ಮತ್ತು ಸ್ವಾತಂತ್ರ್ಯ-ಪರವಾದ ಆಂದೋಲನಗಳ ನಡುವಿನ ಘರ್ಷಣೆಗೆ ಕಾರಣವಾಗಿತ್ತು.[೮೨]

ಯುರೋಪ್‌[ಬದಲಾಯಿಸಿ]

ಫ್ರಾನ್ಸ್‌‌[ಬದಲಾಯಿಸಿ]

IIನೇ ಜಾಗತಿಕ ಸಮರದ ಅವಧಿಯಲ್ಲಿ ಭಾರತೀಯ ಸೇನೆಯ ಯಾವುದೇ ಘಟಕದ ಅತ್ಯಂತ ಅಸಾಮಾನ್ಯವಾದ ನೇಮಿಸುವಿಕೆಯು ಪ್ರಾಯಶಃ ೧೯೪೦ರಲ್ಲಿ ಕಂಡುಬಂತು; ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಸೇವಾ ವಿಶೇಷ ದಳದ ನಾಲ್ಕು ಹೇಸರಗತ್ತೆ ಉಪಭಾಗಗಳು ಫ್ರಾನ್ಸ್‌‌ನಲ್ಲಿನ ಬ್ರಿಟಿಷ್‌ ದಂಡಯಾತ್ರೆಯ ಪಡೆಯನ್ನು (BEF) ಸೇರಿಕೊಂಡವು, ಮತ್ತು BEFನ ಉಳಿದ ಘಟಕಗಳೊಂದಿಗೆ ಅವು ೧೯೪೦ರಲ್ಲಿ[೪] ಡನ್‌ಕಿರ್ಕ್‌ನಿಂದ ತೆರವುಗೊಳಿಸಲ್ಪಟ್ಟವು ಹಾಗೂ ೧೯೪೨ರ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ಇನ್ನೂ ಬೀಡುಬಿಟ್ಟಿದ್ದವು.[೮೩]

ಇಟಲಿ[ಬದಲಾಯಿಸಿ]

೧೯೪೩ರ ಸೆಪ್ಟೆಂಬರ್‌ ೯ರಂದು ಇಟಲಿಯಲ್ಲಿ ಬಂದಿಳಿದ ಮಿತ್ರರಾಷ್ಟ್ರಗಳ ಪಡೆಗಳಾದ ೪ನೇ, ೮ನೇ ೧೦ನೇ ತುಕಡಿಗಳು ಮತ್ತು ೪೩ನೇ ಸ್ವತಂತ್ರ ಗೂರ್ಖಾ ಪದಾತಿಸೈನ್ಯದ ಸೇನಾದಳ ಇವೆಲ್ಲವೂ ದಂಡಯಾತ್ರೆಯ[೫೧][೮೪] ಸಂದರ್ಭದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು. ಏಡ್ರಿಯಾಟಿಕ್‌ ಮುಂಚೂಣಿಯಲ್ಲಿ ಹೋರಾಡುತ್ತಿದ್ದ ೮ನೇ ಭಾರತೀಯ ತುಕಡಿಯು ೧೯೪೩ರ ಅಕ್ಟೋಬರ್‌ನಲ್ಲಿ ಬಾರ್ಬರಾ ರೇಖೆಯನ್ನು ತಲುಪಿತು ಮತ್ತು ಈ ರೇಖೆಯು ನವೆಂಬರ್ ಆರಂಭದಲ್ಲಿ ಉಲ್ಲಂಘಿಸಲ್ಪಟ್ಟಿತು.[೮೫] ಜರ್ಮನ್‌ ರಕ್ಷಣೆಯ ಬೆರ್ನ್‌ಹಾರ್ಟ್‌ ರೇಖೆಯ ಮೇಲಿನ ಆಕ್ರಮಣದ ನೇತೃತ್ವವನ್ನು ೮ನೇ ತುಕಡಿಯು ವಹಿಸಿಕೊಂಡಿತು, ಸಾಂಗ್ರೋ ನದಿಯನ್ನು ಅದು ದಾಟಿತು ಹಾಗೂ ಪೆಸ್ಕಾರಾದಿಂದ ಸ್ವಲ್ಪವೇ ದೂರದಲ್ಲಿದ್ದ ಪ್ರದೇಶಕ್ಕೆ ಮುಂದುವರಿಯಿತು; ವಸಂತಕಾಲದಲ್ಲಿನ ಒಂದು ಉತ್ತಮ ಹವಾಮಾನ-ಸನ್ನಿವೇಶಕ್ಕಾಗಿ ಎಂಟನೆಯ ಸೇನೆಯು ಇಲ್ಲಿ ತಂಗಿತ್ತು.[೮೬]

೪ನೇ ಭಾರತೀಯ ತುಕಡಿಯು ಮಾಂಟೆ ಕ್ಯಾಸಿನೊದ ಎರಡನೇ ಕದನದಲ್ಲಿ[೮೭] ಪಾಲ್ಗೊಂಡಿತು. ಮೇ ೧೧ರಂದು ಎಂಟನೆಯ ಸೇನೆಯ ಮುಂಚೂಣಿ ಪಡೆಯ ಮೇಲೆ ನಡೆದ ಅಂತಿಮ ಮಾಂಟೆ ಕ್ಯಾಸಿನೊದ ನಾಲ್ಕನೇ ಕದನದಲ್ಲಿ, ೪ನೇ ಬ್ರಿಟಿಷ್‌ ಪದಾತಿಸೈನ್ಯ ತುಕಡಿ ಮತ್ತು ೮ನೇ ಭಾರತೀಯ ತುಕಡಿ ವತಿಯಿಂದ ಮಾಡಲ್ಪಟ್ಟ, ಪ್ರಬಲವಾಗಿ ವಿರೋಧಿಸಲ್ಪಟ್ಟ ರ್ಯಾಪಿಡೊದ ಎರಡು ದಾಟುವಿಕೆಗಳನ್ನು XIII ವಿಶೇಷ ದಳವು ಕೈಗೊಂಡಿತ್ತು.[೮೮] ಮೇ ತಿಂಗಳ ೧೮ರ ವೇಳೆಗೆ, ಜರ್ಮನ್ನರು ಹಿಂದೆಗೆದುಕೊಂಡು ತಮ್ಮ ಮುಂದಿನ ಶ್ರೇಣಿಯೆಡಗೆ ಸಾಗಿದ್ದರು.[೮೯]

ಗಾಥಿಕ್‌ ರೇಖೆಯು ಅಪೆನೈನ್‌ ಪರ್ವತಗಳ ಶೃಂಗಗಳ ಉದ್ದಕ್ಕೂ ಯುದ್ಧದ ಅಂತಿಮ ಹಂತಗಳಲ್ಲಿ ಕೊನೆಯ ಪ್ರಮುಖ ರಕ್ಷಣಾರೇಖೆಯನ್ನು ರೂಪಿಸಿದ್ದವು. ಆಗಸ್ಟ್‌ನಲ್ಲಿ ನಡೆದ ಗೆಮ್ಮಾನೊ ಕದನದ ಅವಧಿಯಲ್ಲಿ (ಗ್ರೀಸ್‌ಗೆ ತೆರಳುವುದಕ್ಕೆ ಮುಂಚಿತವಾಗಿ ೪ನೇ ಭಾರತೀಯ ತುಕಡಿಗಳು ಹೋರಾಡಿದ ಕೊನೆಯ ಕದನ), ಏಡ್ರಿಯಾಟಿಕ್‌ ಮತ್ತು ಕೇಂದ್ರಸ್ಥ ಅಪೆನೈನ್‌ ಮುಂಚೂಣಿ ಸೇನೆಗಳೆರಡರಿಂದಲೂ ಗಾಥಿಕ್‌ ರೇಖೆ ಉಲ್ಲಂಘಿಸಲ್ಪಟ್ಟಿತ್ತು.[೯೦] ೫ನೇ ಸೇನೆಯ ದೂರದ ಬಲಪಾರ್ಶ್ವದಲ್ಲಿ, XIII ವಿಶೇಷ ದಳದ ಮುಂಚೂಣಿ ಸೇನೆಯ ಬಲಭಾಗದಲ್ಲಿ, ಹಾದಿಯಿಲ್ಲದ ನೆಲದಾದ್ಯಂತವೂ ಹೋರಾಡುತ್ತಿದ್ದ ೮ನೇ ಭಾರತೀಯ ತುಕಡಿಯು ಫೆಮಿನಾ ಮೋರ್ಟಾ ದಿಣ್ಣೆಗಳನ್ನು ವಶಮಾಡಿಕೊಂಡಿತ್ತು, ಮತ್ತು ೬ನೇ ಬ್ರಿಟಿಷ್‌ ಕವಚಿತ ಯುದ್ಧವಾಹನಗಳ ತುಕಡಿಯು ಮಾರ್ಗ ೬೭ರ ಮೇಲಿನ ಸ್ಯಾನ್‌ ಗೊಡೆಂಜೊ ಪಾಸ್‌ನ್ನು ವಶಪಡಿಸಿಕೊಂಡು ಫಾರ್ಲಿಗೆ ಸಾಗಿತ್ತು; ಇವೆರಡೂ ಕಾರ್ಯಾಚರಣೆಗಳು ಸೆಪ್ಟೆಂಬರ್ ೧೮ರಂದು ನಡೆದಿದ್ದವು. ಬ್ರಿಟಿಷ್‌ X ವಿಶೇಷ ದಳದಿಂದ ೧}ಬ್ರಿಟಿಷ್‌ V ವಿಶೇಷ ದಳಕ್ಕೆ ವರ್ಗಾಯಿಸಲ್ಪಟ್ಟಿದ್ದ ೧೦ನೇ ಭಾರತೀಯ ತುಕಡಿಯು ಅಕ್ಟೋಬರ್‌ ೫ರಂದು, ಬೆಟ್ಟಗಳಲ್ಲಿನ ಉನ್ನತ ಭಾಗದಲ್ಲಿದ್ದ ಫಿಯುಮಿಸಿನೊ ನದಿಯನ್ನು ದಾಟಿದ್ದವು ಮತ್ತು ನದಿಯ ಮೇಲಿನ ಜರ್ಮನ್‌ ರಕ್ಷಣಾತ್ಮಕ ರೇಖೆಯ ಬಳಿ ಜರ್ಮನ್‌ ಹತ್ತನೆಯ ಸೇನಾ ಘಟಕಗಳನ್ನು ನದಿಯ ಹರಿವಿನ ದಿಕ್ಕಿನಲ್ಲಿ ಹಿಮ್ಮೆಟ್ಟುವಂತೆ ಮಾಡಿ ಬೊಲೊಗ್ನಾ ಕಡೆಗೆ ಓಡಿಸಿದವು. ೧೯೪೫ರ ವಸಂತಕಾಲದ ಆಕ್ರಮಣದಲ್ಲಿ, ಮುಂಭಾಗ ಮತ್ತು ಹಿಂಭಾಗದಲ್ಲಿ ರಕ್ಷಣಾತ್ಮಕ ಸುರಂಗಗಳು ಮತ್ತು ನೆಲಗೂಡುಗಳಿಂದ ತೂತು ತೂತಾಗಿ ಮಾಡಲ್ಪಟ್ಟ ಸೆನಿಯೊವನ್ನು ಪರಿಣಾಮಕಾರಿಯಾಗಿ ವಶಪಡಿಸಿಕೊಳ್ಳುವ ನಿರ್ಣಾಯಕ ಪಾತ್ರವನ್ನು ೮ನೇ ಭಾರತೀಯ ತುಕಡಿಗೆ ನೀಡಲಾಯಿತು; ಮಾಂಟೆ ಕ್ಯಾಸಿನೊ ಅಂತಿಮ ಕದನದಲ್ಲಿ ರ್ಯಾಪಿಡೊವನ್ನು ದಾಟುವಾಗ ಅವರು ನಿರ್ವಹಿಸಿದ ಪಾತ್ರವನ್ನು ಇದು ಪುನರಾವರ್ತಿಸುವಂತಿತ್ತು.[೯೧] ೧೯೪೫ರ ಏಪ್ರಿಲ್‌ ೨೯ರಂದು, ಶರಣಾಗತಿಯ ಒಂದು ದಸ್ತಾವೇಜಿಗೆ ಜರ್ಮನ್ನರು ಸಹಿಹಾಕಿದರು, ಮತ್ತು ಇಟಲಿಯಲ್ಲಿನ ಯುದ್ಧದ ಕಾರ್ಯಾಚರಣೆಗಳನ್ನು ಮೇ ೨ರಂದು ಔಪಚಾರಿಕವಾಗಿ ಕೈಬಿಡಲಾಯಿತು.[೯೧]

ಗ್ರೀಸ್‌[ಬದಲಾಯಿಸಿ]

ಜರ್ಮನ್‌ ವಾಪಸಾತಿಯ ನಂತರ ದೇಶವನ್ನು ಸ್ಥಿರಗೊಳಿಸುವಲ್ಲಿ ಸಹಾಯ ಮಾಡುವುದಕ್ಕಾಗಿ, ೧೯೪೪ರ ಅಕ್ಟೋಬರ್‌ ೨೪ರಂದು ೪ನೇ ಭಾರತೀಯ ಪದಾತಿಸೈನ್ಯದ ತುಕಡಿಯನ್ನು ಗ್ರೀಸ್‌ಗೆ ಸಾಗಿಸಲಾಯಿತು.[೯೨] ಯೋಜನೆಯ ಅನುಸಾರ, ೪ನೇ ತುಕಡಿಯು ವ್ಯಾಪಕವಾಗಿ ಚದುರಿಹೋಗಿದ್ದ ಮೂರು ಪ್ರದೇಶಗಳಲ್ಲಿ ಹೆಚ್ಚೂಕಮ್ಮಿ ಸಮನಾಗಿ ಹರಡಿಕೊಳ್ಳುವ ಕ್ರಮವನ್ನು ಅನುಸರಿಸಬೇಕಾಯಿತು. ವಿಭಾಗೀಯ ತುಕಡಿಗಳ ಜೊತೆಗಿನ ೭ನೇ ಭಾರತೀಯ ಸೇನಾದಳಕ್ಕೆ ಗ್ರೀಕ್‌ ಮ್ಯಾಸಿಡೋನಿಯಾ, ಥ್ರೇಸ್‌ ಮತ್ತು ಥೆಸ್ಸಾಲಿ ಪ್ರದೇಶಗಳನ್ನು ಹಂಚಲಾಯಿತು ಮತ್ತು ಯುಗೋಸ್ಲಾವಿಯಾ ಹಾಗೂ ಬಲ್ಗೇರಿಯಾದ ಗಡಿಗಳ ಮೇಲೆ ನಿಗಾ ಇರಿಸುವಂತೆ ಸೂಚನೆಗಳನ್ನೂ ನೀಡಲಾಯಿತು. ಪಶ್ಚಿಮ ಗ್ರೀಸ್‌ನ ಹಾಗೂ ಅಯೋನಿಯಾದ ದ್ವೀಪಗಳ ಪಟ್ಟಣಗಳನ್ನು ಕಾವಲುಕಾಯುವ ಹೊಣೆಯನ್ನು ೧೧ನೇ ಭಾರತೀಯ ಸೇನಾದಳಕ್ಕೆ ವಹಿಸಲಾಯಿತು. ಎಜಿಯನ್‌ ಪ್ರದೇಶ ಮತ್ತು ಸೈಕ್ಲೇಡ್ಸ್‌ನ ಹೊಣೆಗಾರಿಕೆಯನ್ನು ೫ನೇ ಭಾರತೀಯ ಸೇನಾದಳಕ್ಕೆ ವಹಿಸಲಾಯಿತು, ಮತ್ತು ಕ್ರೀಟ್‌ ದ್ವೀಪದಲ್ಲಿನ ಶತ್ರು ಕಾವಲುಪಡೆಗಳು ಶರಣಾಗತರಾದಾಗ ಅಲ್ಲಿಗೆ ಸಾಗುವಂತೆಯೂ ಅವಕ್ಕೆ ಸೂಚನೆ ನೀಡಲಾಯಿತು.[೯೧]

ಡಿಸೆಂಬರ್‌ ೩ರಂದು ಗ್ರೀಕ್‌ ಸರ್ಕಾರದ ELAS ಸದಸ್ಯರು ರಾಜೀನಾಮೆ ನೀಡಿದರು. ಸಾರ್ವತ್ರಿಕ ಮುಷ್ಕರವೊಂದು ಘೋಷಿಸಲ್ಪಟ್ಟಿತು, ಮತ್ತು ಪ್ರತಿಭಟನಾಕಾರರ ಮೇಲೆ ಆರಕ್ಷಕರು ಗುಂಡಿನ ದಾಳಿ ಮಾಡಿದರು. ಇಟಲಿಯಲ್ಲಿ, ೪ನೇ ಬ್ರಿಟಿಷ್‌ ಪದಾತಿಸೈನ್ಯದ ತುಕಡಿ ಮತ್ತು ೪೬ನೇ ಬ್ರಿಟಿಷ್‌ ಪದಾತಿಸೈನ್ಯದ ತುಕಡಿಗಳಿಗೆ ಗ್ರೀಸ್‌ಗೆ ತೆರಳುವಂತೆ ಆದೇಶಿಸಲಾಯಿತು. ಜನವರಿ ೧೫ರಂದು ಅಥೆನ್ಸ್‌ನಲ್ಲಿ ಕದನ ವಿರಾಮವೊಂದು ಕುದುರಿಸಲ್ಪಟ್ಟಿತು. ಇದರ ಷರತ್ತುಗಳ ಅನುಸಾರವಾಗಿ ರಾಜಧಾನಿ ಮತ್ತು ಸಲೋನಿಕಾದಿಂದ ELAS ಹಿಂದೆಗೆದುಕೊಳ್ಳಬೇಕಾಗಿ ಬಂತು ಹಾಗೂ ಗ್ರಾಮೀಣ ಕೇಂದ್ರೀಕರಣದ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಬೇಕಾಗಿ ಬಂತು. ಪ್ರತ್ಯೇಕಿಸಲ್ಪಟ್ಟ ಘಟನೆಗಳನ್ನು ಹೊರತುಪಡಿಸಿ, ಈ ಕದನ ವಿರಾಮವು ಗ್ರೀಸ್‌ನಲ್ಲಿನ ಕಾರ್ಯಾಚರಣೆಗಳನ್ನು ಅಂತ್ಯಗೊಳಿಸಿತು.[೯೧]

ಭಾರತ[ಬದಲಾಯಿಸಿ]

೧೪ನೇ ಭಾರತೀಯ ಪದಾತಿಸೈನ್ಯದ ತುಕಡಿ ಮತ್ತು ೩೯ನೇ ಭಾರತೀಯ ಪದಾತಿಸೈನ್ಯದ ತುಕಡಿಗಳನ್ನು ತರಬೇತಿ ನೀಡುವ ಸೇನಾವ್ಯೂಹಗಳಾಗಿ ೧೯೪೩ರಲ್ಲಿ ಮಾರ್ಪಡಿಸಲಾಯಿತು, ಮತ್ತು ಯುದ್ಧದ ಅಂತ್ಯದವರೆಗೂ ಅವು ಭಾರತದಲ್ಲಿ ಉಳಿದುಕೊಂಡವು. ಕೇವಲ ಭಾರತದಲ್ಲಷ್ಟೇ ಸೇವೆ ಸಲ್ಲಿಸಿದ ಇತರ ಘಟಕಗಳಲ್ಲಿ ೩೨ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿ ಮತ್ತು ೪೩ನೇ ಭಾರತೀಯ ಕವಚಿತ ಯುದ್ಧವಾಹನಗಳ ತುಕಡಿಗಳು ಸೇರಿದ್ದು, ಅವು ೧೯೪೩ರಲ್ಲಿ ೪೪ನೇ ಭಾರತೀಯ ವಾಯುಗಾಮಿ ತುಕಡಿಯಾಗಿ ಮಾರ್ಪಡಿಸಲ್ಪಡುವುದಕ್ಕೆ ಮುಂಚಿತವಾಗಿ ಎಂದಿಗೂ ಅವಕ್ಕೆ ತರಬೇತಿನೀಡಿ ಸಂಪೂರ್ಣರೂಪವನ್ನು ನೀಡಿರಲಿಲ್ಲ. ೪೪ನೇ ವಾಯುಗಾಮಿ ತುಕಡಿಯನ್ನು ರಚಿಸುವುದಕ್ಕಾಗಿ ಅಸ್ಸಾಂ ಮೂಲದ ೨೧ನೇ ಭಾರತೀಯ ಪದಾತಿಸೈನ್ಯದ ತುಕಡಿಯನ್ನು ೧೯೪೪ರಲ್ಲಿ ವಿಘಟಿಸಲಾಯಿತು. ಸಿಲೋನ್‌‌‌ಗೆ ಸಂಬಂಧಿಸಿದ ಕಾವಲುಪಡೆಯನ್ನು ೩೪ನೇ ಭಾರತೀಯ ಪದಾತಿಸೈನ್ಯದ ತುಕಡಿಯು ಒದಗಿಸಿತು, ಮತ್ತು ಯುದ್ಧದ ಅವಧಿಯಲ್ಲಿ ಅಲ್ಲಿಯೇ ಅದು ಉಳಿದುಕೊಂಡಿತು; ೧೯೪೫ರಲ್ಲಿ ಅದು ವಿಸರ್ಜಿಸಲ್ಪಟ್ಟಿತು ಹಾಗೂ ಮತ್ತೆಂದಿಗೂ ಸಕ್ರಿಯ ಸೇವೆಯಲ್ಲಿ ಕಾಣಿಸಿಕೊಳ್ಳಲಿಲ್ಲ.[೧]

ವಿಕ್ಟೋರಿಯಾ ಕ್ರಾಸ್‌[ಬದಲಾಯಿಸಿ]

ಭಾರತೀಯ ಸಿಬ್ಬಂದಿಯು ತಾವು ಮೆರೆದ ಶೌರ್ಯಕ್ಕಾಗಿ ೪,೦೦೦ ಪ್ರಶಸ್ತಿಗಳನ್ನು, ಹಾಗೂ ೩೧ ವಿಕ್ಟೋರಿಯಾ ಕ್ರಾಸ್‌ ಮಾನ್ಯತೆಗಳನ್ನು ಸ್ವೀಕರಿಸಿದ್ದಾರೆ.[೩] ವಿಕ್ಟೋರಿಯಾ ಕ್ರಾಸ್‌ (VC) ಎಂಬುದು ಅತ್ಯುನ್ನತ ಸೇನಾ ಭೂಷಣವಾಗಿದ್ದು, ಯೋಧರು "ಶತ್ರುವಿಗೆ ಅಭಿಮುಖವಾಗಿ ತೋರುವ" ಪರಾಕ್ರಮಕ್ಕಾಗಿ ಇದನ್ನು ಪ್ರದಾನ ಮಾಡಲಾಗಿದೆ ಅಥವಾ ಪ್ರದಾನ ಮಾಡಲಾಗುತ್ತದೆ; ಕಾಮನ್‌ವೆಲ್ತ್‌‌ ದೇಶಗಳು, ಮತ್ತು ಹಿಂದಿನ ಬ್ರಿಟಿಷ್‌ ಸಾಮ್ರಾಜ್ಯದ ಪ್ರದೇಶಗಳ ಸಶಸ್ತ್ರ ಪಡೆಗಳ ಸದಸ್ಯರಿಗೆ ಇದು ಮೀಸಲಾಗಿದೆ. ವಿಕ್ಟೋರಿಯಾ ಕ್ರಾಸ್‌ ಪ್ರಶಸ್ತಿಯನ್ನು ಈ ಕೆಳಗೆ ನಮೂದಿಸಿದ ಶೌರ್ಯ-ಪರಾಕ್ರಮಕ್ಕಾಗಿ ಪ್ರದಾನ ಮಾಡಲಾಗುತ್ತದೆ

... most conspicuous bravery, or some daring or pre-eminent act of valour or self-sacrifice, or extreme devotion to duty in the presence of the enemy.[೯೩]

ಭಾರತೀಯ ಸೇನೆಯ ಈ ಕೆಳಕಂಡ ಸದಸ್ಯರು IIನೇ ಜಾಗತಿಕ ಸಮರದ ಅವಧಿಯಲ್ಲಿ ವಿಕ್ಟೋರಿಯಾ ಕ್ರಾಸ್‌ ಪ್ರಶಸ್ತಿಯ ಪುರಸ್ಕೃತರಾಗಿದ್ದರು:

ಪೂರ್ವ ಆಫ್ರಿಕಾದ ದಂಡಯಾತ್ರೆಯ ಪ್ರಶಸ್ತಿಗಳು[ಬದಲಾಯಿಸಿ]

  • ಎರಡನೇ-ಲೆಫ್ಟಿನೆಂಟ್‌ ಪ್ರೇಮಿಂದ್ರ ಸಿಂಗ್‌ ಭಗತ್‌, ಭಾರತೀಯ ಸೇನಾಸೌಕರ್ಯ ನಿರ್ಮಾತೃಗಳ ವಿಶೇಷ ದಳ
೧೯೪೧ರ ಜನವರಿ ೩೧ರ ರಾತ್ರಿ - ಫೆಬ್ರುವರಿ ೧ರಂದು ಮೆತೆಮ್ಮಾವನ್ನು ವಶಪಡಿಸಿಕೊಂಡ ನಂತರ ಅನುಸರಿಸಿಕೊಂಡು ಬಂದ ಶತ್ರುವಿನ ಬೆನ್ನಟ್ಟುವಿಕೆಯ ಅವಧಿಯಲ್ಲಿ, ಅವರು ತೋರಿದ ಏಕನಿಷ್ಠ ಸಾಧನೆ (ಮುಂಜಾವಿನಿಂದ ಸಂಜೆಯವರೆಗೆ ಕೆಲಸಮಾಡುತ್ತಾ, ೯೬ ಗಂಟೆಗಳಿಗೂ ಹೆಚ್ಚಿನ ಒಂದು ಅವಧಿಗೆ ನಿರಂತರವಾಗಿ ತೊಡಗಿಸಿಕೊಂಡದ್ದು) ಮತ್ತು ಶೌರ್ಯಕ್ಕಾಗಿ, ೧೫ ಸಿಡಿಗುಂಡು ಪ್ರದೇಶಗಳ ನಿವಾರಿಸುವಿಕೆಯಲ್ಲಿ ವೈಯಕ್ತಿಕವಾಗಿ ಮೇಲ್ವಿಚಾರಣೆ ವಹಿಸಿದ್ದನ್ನು ಪರಿಗಣಿಸಿ ಈ ಗೌರವವನ್ನು ಇವರಿಗೆ ನೀಡಲಾಯಿತು.[೯೪]
  • ‌‌ಸುಬೇದಾರ್ ರಿಚ್‌ಪಾಲ್‌ ರಾಮ್‌, ೬ನೇ ರಜಪೂತನಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
೧೯೪೧ರ ಫೆಬ್ರುವರಿ ೭ರಂದು ಎರಿಟ್ರಿಯಾದ ಕೆರೆನ್‌ನಲ್ಲಿ ಶತ್ರುಗಳ ಮೇಲಿನ ಒಂದು ಯಶಸ್ವೀ ದಾಳಿಯ ನೇತೃತ್ವವನ್ನು ರಿಚ್‌ಪಾಲ್‌ ರಾಮ್‌ ವಹಿಸಿದ್ದರು, ಮತ್ತು ತರುವಾಯದಲ್ಲಿ ಆರು ಪ್ರತಿ-ದಾಳಿಗಳನ್ನು ಹಿಮ್ಮೆಟ್ಟಿಸಿದ್ದರು; ಮತ್ತು ನಂತರದಲ್ಲಿ ತನ್ನ ಉಪಭಾಗದಲ್ಲಿ ಬದುಕುಳಿದಿದ್ದ ಕೆಲವೇ ಮಂದಿಯನ್ನು ಕಾಳಜಿವಹಿಸಿ ಮರಳಿ ಕರೆದುಕೊಂಡು ಬಂದಿದ್ದರು. ಐದು ದಿನಗಳ ನಂತರ, ಮತ್ತೊಂದು ದಾಳಿಯ ನೇತೃತ್ವವನ್ನು ವಹಿಸುವಾಗ ಅವರ ಬಲಗಾಲಿನ ಪಾದವು ತುಂಡಾದರೂ ಸಹ, ತಾವು ಮರಣಿಸುವ ತನಕವೂ ತಮ್ಮ ಸೈನಿಕರನ್ನು ಉತ್ತೇಜಿಸುವುದನ್ನು ಅವರು ಮುಂದುವರಿಸಿದರು.[೯೫]

ಮಲಯದ ದಂಡಯಾತ್ರೆಯ ಪ್ರಶಸ್ತಿಗಳು[ಬದಲಾಯಿಸಿ]

  • ಲೆಫ್ಟಿನೆಂಟ್‌ ಕರ್ನಲ್‌ ಅರ್ಥರ್‌ ಎಡ್ವರ್ಡ್‌ ಕ್ಯುಮಿಂಗ್‌, ೧೨ನೇ ಗಡಿನಾಡು ಪಡೆಯ ಸೇನಾಪಡೆ
೧೯೪೨ರ ಜನವರಿ ೩ರಂದು, ಮಲಯದ ಕುವಾಂತನ್ ಸಮೀಪದಲ್ಲಿ ಜಪಾನಿಯರು ಪಟಾಲಂ ಮೇಲೆ ಒಂದು ಉಗ್ರಸ್ವರೂಪದ ದಾಳಿಯನ್ನು ಮಾಡಿದರು ಮತ್ತು ಪ್ರಬಲವಾದ ಶತ್ರು ಪಡೆಯೊಂದು ಸೇನಾಠಾಣ್ಯವನ್ನು ಭೇದಿಸಿಕೊಂಡು ಹೋಯಿತು. ಸೈನಿಕರ ಒಂದು ಸಣ್ಣ ತುಕಡಿಯೊಂದಿಗೆ ಕ್ಯುಮಿಂಗ್‌ ತತ್‌ಕ್ಷಣವೇ ಒಂದು ಪ್ರತಿ-ದಾಳಿಯನ್ನು ನಡೆಸಿದರು. ಅವರ ಎಲ್ಲಾ ಸೈನಿಕರು ಸಾವಿಗೀಡಾಗಿ, ಸ್ವತಃ ಅವರ ಹೊಟ್ಟೆಗೇ ಬಯನೆಟ್‌ ತಿವಿತದ ಎರಡು ಗಾಯಗಳಾದರೂ ಸಹ, ಸನ್ನಿವೇಶವನ್ನು ಪೂರ್ವಸ್ಥಿತಿಗೆ ತರುವಲ್ಲಿ ಅವರು ಸಾಕಷ್ಟು ಹೆಣಗಾಡಿದರು; ಪಟಾಲಂನ ಪ್ರಮುಖ ಭಾಗ ಮತ್ತು ಅದರ ವಾಹನಗಳು ಯಶಸ್ವಿಯಾಗಿ ಹಿಂದೆಗೆದುಕೊಳ್ಳುವಲ್ಲಿ ಅವರು ಶ್ರಮಿಸಿದರು. ಭಾರೀ ಗುಂಡಿನ ದಾಳಿ ಆರಂಭವಾದಾಗ, ವಾಹಕವೊಂದರಲ್ಲಿ ಅವರು ಅಲ್ಲಿಂದ ನಿರ್ಗಮಿಸುವ ಸಂದರ್ಭದಲ್ಲಿ ತಮ್ಮ ಸೈನಿಕರ ಪ್ರತ್ಯೇಕಿಸಲ್ಪಟ್ಟ ವಿಶೇಷದಳಗಳನ್ನು ಒಟ್ಟುಗೂಡಿಸುತ್ತಾ ಹೋದರು ಹಾಗೂ ಮತ್ತೊಮ್ಮೆ ಗಾಯಗೊಂಡರು. ಸೇನಾದಳವು ಸುರಕ್ಷಿತವಾಗಿ ಹಿಂದೆಗೆದುಕೊಳ್ಳುವಲ್ಲಿ ಅವರ ಪ್ರತಾಪಶಾಲಿ ಕ್ರಮಗಳು ಸಹಾಯಮಾಡಿದವು.[೯೬]

ಟ್ಯುನಿಷಿಯಾದ ದಂಡಯಾತ್ರೆಯ ಪ್ರಶಸ್ತಿಗಳು[ಬದಲಾಯಿಸಿ]

  • ಉಪಭಾಗ ಹವಾಲ್ದಾರ್‌ ಮೇಜರ್‌‌ ಛೇಲೂ ರಾಮ್‌, ೬ನೇ ರಜಪೂತನಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
೧೯೪೩ರ ಏಪ್ರಿಲ್‌ ೧೯–೨೦ರಂದು ರಾತ್ರಿಯಲ್ಲಿ, ಟ್ಯುನಿಷಿಯಾದ ಜೆಬೆಲ್‌ ಗಾರ್ಸಿ ಎಂಬಲ್ಲಿ, ಗಾಯಗೊಂಡಿದ್ದರೂ ಸಹ ಅವರು ತಮ್ಮ ಉಪಭಾಗದ ಅಧಿಪತ್ಯವನ್ನು ವಹಿಸಿಕೊಂಡು, ಕೈ-ಕೈ ಮಿಲಾಯಿಸುವ ಹೋರಾಟದಲ್ಲಿ ಅವರ ನೇತೃತ್ವವನ್ನು ವಹಿಸಿದರು. ಮತ್ತೊಮ್ಮೆ ಗಾಯಗೊಂಡರೂ ಸಹ, ತಾವು ಸಾಯುವವರೆಗೂ ತಮ್ಮ ಸೈನಿಕರನ್ನು ಹುರಿದುಂಬಿಸಿ ಪುನಶ್ಚೇತನಗೊಳಿಸುವುದನ್ನು ಅವರು ನಿಲ್ಲಿಸಲಿಲ್ಲ.[೯೭]
  • ಸುಬೇದಾರ್‌‌ ಲಾಲ್‌ಬಹದ್ದೂರ್‌ ಥಾಪಾ, ೨ನೇ ಗೂರ್ಖಾ ರೈಫಲ್ಸ್‌
೧೯೪೩ರ ಏಪ್ರಿಲ್‌ ೫–೬ರಂದು, ಟ್ಯುನಿಷಿಯಾದ ರಸ್‌-ಎಸ್‌-ಜೌವಾಯಿಯ ಮೇಲೆ ಸದ್ದಿಲ್ಲದ ದಾಳಿಯನ್ನು ನಡೆಸುವ ಸಂದರ್ಭದಲ್ಲಿ, ಲಾಲ್‌ಬಹದ್ದೂರ್‌ ಥಾಪಾ ಎರಡು ವಿಭಾಗಗಳ ಅಧಿಪತ್ಯ ವಹಿಸಿದ್ದರು; ಶತ್ರು ಸಿಪಾಯಿಗಳ ನೆಲೆಗಳು ದಟ್ಟವಾಗಿ ಹರಡಿಕೊಂಡಿರುವ ಒಂದು ಕಿರಿದಾದ ಬಿರುಕನ್ನು ಸುತ್ತಿಕೊಂಡು ಮೇಲೇರುವ ಹಾದಿಯೊಂದರ ಬುಡದಲ್ಲಿ ಶತ್ರುಗಳೊಂದಿಗೆ ಅವರ ಮೊದಲ ಮುಖಾಮುಖಿಯಾಯಿತು. ಹೊರಠಾಣೆಗಳ ಕಾವಲುಪಡೆಯ ಯೋಧರನ್ನೆಲ್ಲಾ ಸುಬೇದಾರ್‌‌ ಮತ್ತು ಅವರ ಸೈನಿಕರು ತಮ್ಮ ಕುಕ್ರಿ ಅಥವಾ ಬಯನೆಟ್‌ನಿಂದ ಸಾಯಿಸಿದರು ಮತ್ತು ಮುಂದೆ ಎದುರಾದ ಮೆಷೀನ್‌-ಗನ್‌ ಸಿಪಾಯಿಗಳ ನೆಲೆಗಳನ್ನೂ ಇದೇ ರೀತಿಯಲ್ಲಿ ನಿಭಾಯಿಸಲಾಯಿತು. ಗುಂಡಿನ-ಸುರಿಮಳೆಗೆ ಒಳಗಾದ ಪ್ರವೇಶಮಾರ್ಗಗಳ ಮೂಲಕ ದಾರಿಮಾಡಿಕೊಂಡು ಹೋದ ಈ ಅಧಿಕಾರಿಯು ಬೆಟ್ಟದ ತುದಿಯನ್ನು ತಲುಪಿದರು; ಅಲ್ಲಿ ಅವರು ಹಾಗೂ ಅವರೊಂದಿಗಿದ್ದ ಬಂದೂಕುಧಾರಿ ಸಿಪಾಯಿಗಳು ನಾಲ್ವರನ್ನು ಸಾಯಿಸಿದರು - ಉಳಿದವರು ಪಲಾಯನಮಾಡಿದರು. ಇಡೀ ತುಕಡಿಯು ಮುನ್ನಡೆಯನ್ನು ಸಾಧಿಸಲು ಈ ಕ್ರಮವು ನೆರವಾಯಿತು.[೯೮]

ಬರ್ಮಾ ದಂಡಯಾತ್ರೆಯ ಪ್ರಶಸ್ತಿಗಳು[ಬದಲಾಯಿಸಿ]

  • ಕ್ಯಾಪ್ಟನ್‌ ಮೈಕೇಲ್‌ ಆಲ್ಮಾಂಡ್‌. ೬ನೇ ಗೂರ್ಖಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ೧೯೪೪ರ ಜೂನ್‌ ೧೧ರಂದು, ಮೈಕೇಲ್‌ರವರ ದಳದ ತುಕಡಿಯು ಪಿನ್‌ ಹ್ಮಿ ರಸ್ತೆ ಸೇತುವೆ‌ಯ ಇಪ್ಪತ್ತು ಗಜಗಳ ವ್ಯಾಪ್ತಿಯೊಳಗೆ ಬಂದಾಗ, ಭಾರೀ ಪ್ರಮಾಣದ ಮತ್ತು ಕರಾರುವಾಕ್ಕಾದ ಗುಂಡಿನ ದಾಳಿಯನ್ನು ಶತ್ರುಗಳು ಪ್ರಾರಂಭಿಸಿದರು. ಇದು ತೀವ್ರ ಸಾವುನೋವುಗಳಿಗೆ ಕಾರಣವಾಗಿದ್ದೇ ಅಲ್ಲದೇ, ಸೈನಿಕರು ಆಶ್ರಯವನ್ನು ಬಯಸಬೇಕಾಗಿ ಬಂತು. ಆದಾಗ್ಯೂ, ಕ್ಯಾಪ್ಟನ್‌ ಆಲ್ಮಾಂಡ್‌ ಅತೀವವಾದ ಶೌರ್ಯವನ್ನು ಸ್ವತಃ ಆವಾಹಿಸಿಕೊಂಡು ಶತ್ರುಗಳ ಫಿರಂಗಿ ಸೇನಾಠಾಣ್ಯಗಳೆಡೆಗೆ ಕೈಬಾಂಬುಗಳನ್ನು ಬೀಸಿ ಎಸೆದರು ಮತ್ತು ಸ್ವತಃ ತಮ್ಮ ಕುಕ್ರಿಯಿಂದ ಮೂರು ಜಪಾನಿಯರನ್ನು ಕೊಂದರು. ತಮ್ಮ ದಳದ ತುಕಡಿಯ ಅಧಿಪತಿಯ ಅತ್ಯದ್ಭುತ ಉದಾಹರಣೆಯಿಂದ ಪ್ರೇರೇಪಿಸಲ್ಪಟ್ಟ ಬದುಕುಳಿದಿರುವ ಸೈನಿಕರು ಅವನ ಆದರ್ಶವನ್ನೇ ಅನುಸರಿಸಿದರು ಮತ್ತು ತಮ್ಮ ಗುರಿಯ ನೆಲೆಯನ್ನು ವಶಮಾಡಿಕೊಂಡರು. ತನ್ನ ತುಕಡಿಯ ಅಧಿಕಾರಿಗಳ ಪೈಕಿ ಸಂಭವಿಸಿದ ಸಾವುನೋವುಗಳ ಕಾರಣದಿಂದ ಉಪಭಾಗದ ಅಧಿಪತ್ಯವನ್ನು ಎರಡು ದಿನಗಳ ನಂತರ ಕೈಗೆತ್ತಿಕೊಂಡ ಕ್ಯಾಪ್ಟನ್‌ ಆಲ್ಮಾಂಡ್, ಅಲ್ಲಿಂದ ಮೂವತ್ತು ಗಜಗಳಷ್ಟು ಮುಂದಕ್ಕೆ ರಭಸದಿಂದ ನುಗ್ಗುತ್ತಾ ಹುಲ್ಲಿನ ಮತ್ತು ಜವುಗು ಭೂಮಿಯಂಥ ನೆಲದ ಮೂಲಕ ಹಾದುಹೋದರು. ಆ ನೆಲವು ಯಂತ್ರಫಿರಂಗಿ ಗುಂಡಿನ ದಾಳಿಯಿಂದ ತತ್ತರಿಸಿಹೋಗಿತ್ತು. ಖುದ್ದಾಗಿ ತಾನೇ ಶತ್ರುಪಾಳಯದ ಹಲವಾರು ಯಂತ್ರಫಿರಂಗಿದಾರರನ್ನು ಕೊಂದ ಅವರು ತಮ್ಮ ಸೈನಿಕರನ್ನು ಉನ್ನತ ಮಟ್ಟದ ಏಣಿನ ಬಳಿಗೆ ಕರೆದುಕೊಂಡು ಬಂದ. ಅವರು ವಶಪಡಿಸಿಕೊಳ್ಳಬೇಕೆಂದು ಆದೇಶಿಸಲ್ಪಟ್ಟಿದ್ದ ಗುರಿಯ-ನೆಲೆ ಅದೇ ಆಗಿತ್ತು. ಮತ್ತೊಮ್ಮೆ ಜೂನ್‌ ೨೩ರಂದು, ಮೊಗೌಂಗ್‌ನಲ್ಲಿನ ರೇಲ್ವೆ ಸೇತುವೆ‌ಯ ಮೇಲೆ ನಡೆದ ಅಂತಿಮ ದಾಳಿಯಲ್ಲಿ, ಕ್ಯಾಪ್ಟನ್‌ ಆಲ್ಮಾಂಡ್‌ ಕಂದಕ-ಕಾಲುರೋಗದಿಂದ ಬಳಲುತ್ತಿದ್ದು ನಡೆದಾಡುವುದಕ್ಕೂ ಪ್ರಯಾಸಪಡುತ್ತಿದ್ದರೂ ಸಹ, ಆಳವಾದ ಕೆಸರುಮಣ್ಣು ಮತ್ತು ಷೆಲ್ಲುಗಳ ದಾಳಿಯಿಂದಾದ ಗುಂಡಿಗಳ ಹಾದಿಯಲ್ಲಿ ಏಕಾಂಗಿಯಾಗಿ ಮುಂದೆ ಸಾಗಿದರು ಹಾಗೂ ಜಪಾನಿಯರ ಯಂತ್ರಫಿರಂಗಿಯ ನೆಲೆಯೊಂದರ ಮೇಲೆ ಏಕಾಂಗಿಯಾಗಿ ದಾಳಿಮಾಡಿದರು. ಆದರೆ ಈ ಪ್ರಯತ್ನದಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಅವರು ಅದಾದ ಕೆಲವೇ ಹೊತ್ತಿನಲ್ಲಿ ಮರಣಿಸಿದರು.[೯೯]
  • ಮೇಜರ್‌ ಫ್ರಾಂಕ್‌ ಜೆರಾಲ್ಡ್‌ ಬ್ಲೇಕರ್‌ ೯ನೇ ಗೂರ್ಖಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ೧೯೪೪ರ ಜುಲೈ ೯ರಂದು, ಮೇಜರ್‌ ಬ್ಲೇಕರ್‌ರವರು ಉಪಭಾಗವೊಂದರ ಅಧಿಪತ್ಯವನ್ನು ವಹಿಸಿದ್ದರು. ಈ ಉಪಭಾಗವು ಒಂದು ಪ್ರಮುಖ ಮುನ್ನಡೆಯ ಸಂದರ್ಭದಲ್ಲಿ, ಮಧ್ಯಮ ಮತ್ತು ಲಘು ಮೆಷೀನ್‌-ಗನ್‌ಗಳಿಂದ ನಡೆದ ಸಮೀಪ-ವ್ಯಾಪ್ತಿಯ ಗುಂಡುಹಾರಿಸುವಿಕೆಯಿಂದಾಗಿ ಹಿಡಿದಿಡಲ್ಪಟ್ಟಿತ್ತು. ಗುಂಡಿನ ದಾಳಿಯು ಭೀಕರವಾಗಿ ನಡೆಯುತ್ತಿದ್ದರೂ ತನ್ನ ಸೈನಿಕರನ್ನು ದಾಟಿಕೊಂಡು ಮುಂದಕ್ಕೆ ಸಾಗಿದ ಮೇಜರ್‌ ತಮ್ಮ ತೋಳಿಗೆ ತೀವ್ರವಾಗಿ ಗಾಯವಾದರೂ ಸಹ ಮೆಷೀನ್‌-ಗನ್ನುಗಳ ನೆಲೆಯನ್ನು ಪತ್ತೆಹಚ್ಚಿದರು ಹಾಗೂ ಏಕಾಂಗಿಯಾಗಿ ಸೇನಾಠಾಣ್ಯದ ಮೇಲೆ ದಾಳಿಮಾಡಿದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಸಂದರ್ಭದಲ್ಲಿಯೂ ಸಹ, ಅವರು ನೆಲದಲ್ಲಿ ಬಿದ್ದಿರುವಂತೆಯೇ ತಮ್ಮ ಸೈನಿಕರನ್ನು ಹುರಿದುಂಬಿಸುವುದನ್ನು ಮುಂದುವರಿಸಿದರು. ಭಯವನ್ನೇ ಹೊಂದಿರದ ಅವರ ನಾಯಕತ್ವದಿಂದ ಪ್ರೇರೇಪಿಸಲ್ಪಟ್ಟ ಅವರ ಸೈನಿಕರು ರಭಸದಿಂದ ಮುನ್ನುಗ್ಗಿದರು ಹಾಗೂ ತಮ್ಮ ಗುರಿಯ-ನೆಲೆಯನ್ನು ವಶಮಾಡಿಕೊಂಡರು.[೧೦೦]
  • ‌ನಾಯಕ್ ಫಜಲ್‌ ದಿನ್‌, ೧೦ನೇ ಬಲೂಚ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ೧೯೪೫ರ ಮಾರ್ಚ್‌ ೨ರಂದು ನಡೆದ ದಾಳಿಯೊಂದರ ಸಂದರ್ಭದಲ್ಲಿ, ಶತ್ರುಪಾಳಯದ ನೆಲಗೂಡುಗಳಿಂದ ಆದ ಗುಂಡಿನ ದಾಳಿಯಿಂದಾಗಿ ನಾಯಕ್‌ ಫಜಲ್‌ ದಿನ್‌ರವರ ವಿಭಾಗವು ಹಿಡಿದಿಡಲ್ಪಟ್ಟಿತ್ತು; ಮರುಕ್ಷಣವೇ ಅತ್ಯಂತ ಸನಿಹದ ನೆಲಗೂಡಿನ ಮೇಲೆ ಖುದ್ದಾಗಿ ದಾಳಿಮಾಡಿದ ಅವರು ಅದರ ಸದ್ದಡಗಿಸಿದರು, ಮತ್ತು ನಂತರದಲ್ಲಿ ಇತರರ ವಿರುದ್ಧದ ಹೋರಾಟಕ್ಕೆ ತನ್ನ ಸೈನಿಕರನ್ನು ಮುನ್ನಡೆಸಿದರು. ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಆರು ಮಂದಿ ಜಪಾನಿಯರು ಕತ್ತಿಗಳನ್ನು ಝಳಪಿಸುತ್ತಾ ತತ್‌ಕ್ಷಣವೇ ದಾಳಿಮಾಡಿದರು ಹಾಗೂ ಅವರಲ್ಲೊಬ್ಬ ನಾಯಕ್‌ ಫಜಲ್‌ ದಿನ್‌ರವರ ಎದೆಗೆ ಕತ್ತಿಯಿಂದ ತಿವಿದ. ಕತ್ತಿಯು ಎದೆಯಿಂದ ಹಿಂದೆಗೆದುಕೊಳ್ಳಲ್ಪಡುತ್ತಿದ್ದಂತೆಯೇ ಅವನ ಕೈಯಿಂದ ಅದನ್ನು ಕಿತ್ತುಕೊಂಡ ನಾಯಕ್‌, ಅದರಿಂದಲೇ ಅವನನ್ನು ಸಾಯಿಸಿದರು. ಕತ್ತಿಯನ್ನು ಎತ್ತರದಲ್ಲಿ ಬೀಸುವ ಮೂಲಕ ಮತ್ತೋರ್ವ ಜಪಾನಿ ಯೋಧನನ್ನು ಅವರು ಸಾಯಿಸಿದರು ಮತ್ತು ತಮ್ಮ ಸೈನಿಕರನ್ನು ಉತ್ತೇಜಿಸುತ್ತಲೇ ಹೋದರು; ಆದರೆ ಕೆಲಹೊತ್ತಿಗೆ ತತ್ತರಗೊಳ್ಳುತ್ತಾ ಹಿಂದಕ್ಕೆ ಕುಸಿದು ಅಸುನೀಗಿದರು.[೧೦೧]
  • ಹವಾಲ್ದಾರ್‌ ಗಜೆ ಘಾಲೆ, ೫ನೇ ಗೂರ್ಖಾ ರೈಫಲ್ಸ್‌
    • ೧೯೪೩ರ ಮೇ ೨೪–೨೭ರ ಅವಧಿಯಲ್ಲಿ, ಜಪಾನಿಯರ ಒಂದು ಪ್ರಬಲವಾದ ಸೇನಾಠಾಣ್ಯದ ಮೇಲೆ ದಾಳಿಮಾಡುವಲ್ಲಿ ತೊಡಗಿಸಿಕೊಂಡಿದ್ದ ಯುವ ಯೋಧರ ದಳದ ತುಕಡಿಯೊಂದರ ಉಸ್ತುವಾರಿಯನ್ನು ಹವಾಲ್ದಾರ್‌ ಗಜೆ ಘಾಲೆ ವಹಿಸಿಕೊಂಡಿದ್ದರು. ತೋಳು, ಎದೆ ಮತ್ತು ಕಾಲುಗಳಲ್ಲಿ ಗಾಯಗೊಂಡರೂ ಸಹ, ಆಕ್ರಮಣದ ಮೇಲೆ ಆಕ್ರಮಣವನ್ನು ನಡೆಸುವುದನ್ನು ಅವರು ಮುಂದುವರಿಸಿದರು ಹಾಗೂ ಗೂರ್ಖಾಗಳ ರಣಗರ್ಜನೆಯನ್ನು ಕೂಗುವ ಮೂಲಕ ತಮ್ಮ ಸೈನಿಕರನ್ನು ಉತ್ತೇಜಿಸುತ್ತಾ ಸಾಗಿದರು. ತಮ್ಮ ನಾಯಕನ ತಡೆಯಲಾಗದ ಸಂಕಲ್ಪಶಕ್ತಿಯಿಂದ ಪ್ರಚೋದಿಸಲ್ಪಟ್ಟ ದಳದ ತುಕಡಿಯು ಬಿರುಗಾಳಿಯಂತೆ ಮುನ್ನುಗ್ಗಿತು ಹಾಗೂ ಸೇನಾಠಾಣ್ಯವನ್ನು ವಶಮಾಡಿಕೊಂಡಿತು; ಆಮೇಲೆ ಅದನ್ನು ಹವಾಲ್ದಾರ್‌ ಹಿಡಿದಿಟ್ಟುಕೊಂಡರು. ಸೈನಿಕರು ಭಾರೀ ಗುಂಡಿನ ದಾಳಿಯಡಿಯಲ್ಲಿ ಪ್ರದೇಶವನ್ನು ಕ್ರೋಢೀಕರಿಸುತ್ತಾ ಹೋದರು ಮತ್ತು ತಮಗೆ ಆದೇಶ ಬರುವವರೆಗೂ ಸೇನಾಪಡೆಯ ನೆರವಿನ ನೆಲೆಗೆ ಹೋಗಲು ನಿರಾಕರಿಸಿದರು.[೧೦೨]
  • ಬಂದೂಕುಧಾರಿ ಸಿಪಾಯಿ ಭಾನ್‌ಭಾಗ್ತಾ ಗುರುಂಗ್‌, ೨ನೇ ಗೂರ್ಖಾ ರೈಫಲ್ಸ್‌
    • ೧೯೪೫ರ ಮಾರ್ಚ್‌ ೫ರಂದು, ದೂರದ ಮರೆಯಿಂದ ಗುಂಡುಹಾರಿಸುವ ಓರ್ವ ಶತ್ರುವಿನಿಂದಾಗಿ ಅವರ ಉಪಭಾಗವು ಕಟ್ಟಿಹಾಕಲ್ಪಟ್ಟಿತು ಹಾಗೂ ಅದರಲ್ಲಿನ ಸೈನಿಕರು ಸಾವುನೋವುಗಳಿಗೆ ಈಡಾದರು. ದೂರದ ಮರೆಯಿಂದ ಗುಂಡುಹಾರಿಸುವ ಶತ್ರುಸೈನಿಕನು ಈ ವಿಭಾಗದಲ್ಲಿ ಸಾವುನೋವುಗಳನ್ನು ಉಂಟುಮಾಡುತ್ತಿರುವಂತೆ, ತಾವು ನೆಲೆಗೊಂಡಿದ್ದ ಸೇನಾಠಾಣ್ಯದಿಂದ ಗುಂಡಿನ ದಾಳಿಯನ್ನು ಮಾಡಲು ಅಸಮರ್ಥರಾಗಿದ್ದ ಬಂದೂಕುಧಾರಿ ಸಿಪಾಯಿ ಭಾನ್‌ಭಾಗ್ತಾ ಗುರುಂಗ್, ಎದ್ದುನಿಂತು ಭಾರೀ ಗುಂಡಿನ ದಾಳಿಗೆ ಸಂಪೂರ್ಣವಾಗಿ ಒಡ್ಡಿಕೊಂಡರು ಹಾಗೂ ತಮ್ಮ ಬಂದೂಕಿನ ನೆರವಿನಿಂದ ದೂರದ ಮರೆಯಿಂದ ಗುಂಡುಹಾರಿಸುವ ಶತ್ರುಸೈನಿಕನನ್ನು ಸಾಯಿಸಿದರು; ತಮ್ಮ ವಿಭಾಗವು ಮತ್ತಷ್ಟು ಸಾವುನೋವುಗಳಿಗೆ ಈಡಾಗದಂತೆ ಅವರು ಈ ರೀತಿಯಲ್ಲಿ ಕಾಪಾಡಿದರು.ಅವರ ವಿಭಾಗವು ಮತ್ತೆ ಮುಂದುವರಿಯಿತಾದರೂ, ಮತ್ತೊಮ್ಮೆ ಭಾರೀ ಗುಂಡಿನ ದಾಳಿಗೆ ಈಡಾಯಿತು. ಆದೇಶಗಳಿಗಾಗಿ ಕಾಯದೆಯೇ ದಾಳಿಮಾಡಲು ಗುರುಂಗ್‌ ರಭಸದಿಂದ ನುಗ್ಗಿದರು ಹಾಗೂ ಶತ್ರುವಿನ ಮೊದಲ ನೆಲಗಂಡಿಯ ಮೇಲೆ ದಾಳಿಮಾಡಿದರು. ಎರಡು ಕೈಬಾಂಬುಗಳನ್ನು ಎಸೆಯುವ ಮೂಲಕ ಅಲ್ಲಿನ ಎರಡು ವಾಸಿಗರನ್ನು ಅವರು ಸಾಯಿಸಿದರು ಮತ್ತು ಮನಸ್ಸಿನಲ್ಲಿ ಯಾವುದೇ ಸಂದಿಗ್ದತೆಯನ್ನು ಇಟ್ಟುಕೊಳ್ಳದೆಯೇ ಶತ್ರುವಿನ ಮುಂದಿನ ನೆಲಗಂಡಿಯೆಡೆಗೆ ರಭಸದಿಂದ ನುಗ್ಗಿದರು ಹಾಗೂ ಅದರಲ್ಲಿದ್ದ ಜಪಾನಿಯರನ್ನು ತಮ್ಮ ಬಯನೆಟ್‌ನಿಂದ ಇರಿದು ಸಾಯಿಸಿದರು. ಬಯನೆಟ್‌ ಮತ್ತು ಕೈಬಾಂಬುಗಳನ್ನು ಬಳಸಿಕೊಂಡು ಮುಂದಿನ ಎರಡು ನೆಲಗಂಡಿಗಳನ್ನು ಅವರು ನಿರ್ಮೂಲಗೊಳಿಸಿದರು. "ಶತ್ರುಗಳಿಗೆ ಸೇರಿದ ಈ ನಾಲ್ಕು ನೆಲಗಂಡಿಗಳ ಮೇಲೆ ಏಕಾಂಗಿಯಾಗಿ ದಾಳಿಗಳನ್ನು ಮಾಡುವಾಗ, ಬಂದೂಕುಧಾರಿ ಸಿಪಾಯಿ ಭಾನ್‌ಭಾಗ್ತಾ ಗುರುಂಗ್‌ ಸಾಕಷ್ಟು ಗುಂಡಿನದಾಳಿಗೆ ಈಡಾಗಿದ್ದರು; ತಮ್ಮ ಗುರಿಯ-ನೆಲೆಯ ಉತ್ತರದ ತುದಿಯಲ್ಲಿದ್ದ ನೆಲಗೂಡು ಒಂದರಿಂದ ಹೆಚ್ಚೂಕಮ್ಮಿ ನಿರಂತರವಾಗಿ ಮತ್ತು ಸಮೀಪ-ವ್ಯಾಪ್ತಿಯಲ್ಲಿ ಹಾರಿದ ಲಘು ಯಂತ್ರಫಿರಂಗಿ ಗುಂಡಿನ ದಾಳಿಗೆ ಅವರು ಬೆದರದೆ ಮುಂದೆ ಸಾಗಿದರು." ಐದನೇ ಬಾರಿಗೆ, ಗುರುಂಗ್‌ "ಈ ಸೇನಾಠಾಣ್ಯವನ್ನು ಹೊಡೆದುರುಳಿಸುವ ಉದ್ದೇಶದಿಂದ ಏಕಾಂಗಿಯಾಗಿ ಮುನ್ನುಗ್ಗಿ, ಭಾರೀ ಪ್ರಮಾಣದಲ್ಲಿದ್ದ ಶತ್ರುಗಳ ಗುಂಡಿನ ದಾಳಿಯನ್ನು ಎದುರಿಸಿದರು. ದುಪ್ಪಟ್ಟು ಪ್ರಮಾಣದಲ್ಲಿ ಮುನ್ನುಗ್ಗಿದ ಅವರು, ನೆಲಗೂಡಿನ ಛಾವಣಿಯ ಮೇಲೆ ಜಿಗಿದರು. ಅಲ್ಲಿಂದ ತಮ್ಮ ಕೈ ಕೈಬಾಂಬುಗಳ ದಾಳಿಯನ್ನು ಆರಂಭಿಸಿದ ಅವರು, ಅದು ಮುಗಿಯುತ್ತಿದ್ದಂತೆ ನೆಲಗೂಡಿನ ಬಿರುಕಿನೊಳಗೆ ಸಂ.೭೭ರ ಎರಡು ಹೊಗೆ-ಕೈಬಾಂಬುಗಳನ್ನು ಬೀಸಿ ಎಸೆದರು." ನೆಲಗೂಡಿನಿಂದ ಆಚೆಗೆ ಓಡುತ್ತಿದ್ದ ಇಬ್ಬರು ಜಪಾನಿ ಯೋಧರನ್ನು ತಮ್ಮ ಕುಕ್ರಿಯಿಂದ ಗುರುಂಗ್‌ ಸಾಯಿಸಿದರು, ಮತ್ತು ಇಕ್ಕಟ್ಟಿನಲ್ಲಿರಿಸಲ್ಪಟ್ಟ ನೆಲಗೂಡಿನೊಳಗೆ ನಂತರ ಮುಂದುವರಿದ ಅವರು, ಉಳಿದಿರುವ ಜಪಾನಿ ಯೋಧರನ್ನು ಸಾಯಿಸಿದರು. ನೆಲಗೂಡಿನಲ್ಲಿ ಸೂಕ್ತಸ್ಥಾನದಲ್ಲಿ ಸಜ್ಜುಗೊಳ್ಳಲು ಇತರ ಮೂವರಿಗೆ ಗುರುಂಗ್‌ ಆದೇಶಿಸಿದರು. "ಕೆಲವೇ ಕ್ಷಣದಲ್ಲಿ ಶತ್ರುಗಳ ಕಡೆಯಿಂದ ಪ್ರತಿ-ದಾಳಿಯು ಶುರುವಾಯಿತು, ಆದರೆ ಬಂದೂಕುಧಾರಿ ಸಿಪಾಯಿ ಭಾನ್‌ಭಾಗ್ತಾ ಗುರುಂಗ್‌ರವರ ಅಧಿಪತ್ಯವನ್ನು ಹೊಂದಿದ್ದು ನೆಲಗೂಡಿನಲ್ಲಿ ಅಡಗಿಕೊಂಡಿದ್ದ ಸಣ್ಣಘಟಕವು ಶತ್ರುಗಳಿಗೆ ಭಾರೀ ನಷ್ಟವನ್ನು ಉಂಟುಮಾಡಿ ಅವರನ್ನು ಹಿಮ್ಮೆಟ್ಟಿಸಿತು. ಬಂದೂಕುಧಾರಿ ಸಿಪಾಯಿ ಭಾನ್‌ಭಾಗ್ತಾ ಗುರುಂಗ್‌ ಮಹೋನ್ನತವಾದ ಕಲಿತನವನ್ನು ಪ್ರದರ್ಶಿಸಿದರು ಮತ್ತು ತಮ್ಮದೇ ಸುರಕ್ಷತೆಯನ್ನು ಸಂಪೂರ್ಣವಾಗಿ ಉಪೇಕ್ಷಿಸಿದರು. ಶತ್ರು ಸೇನೆಯ ಐದು ಠಾಣ್ಯಗಳನ್ನು ಏಕಾಂಗಿಯಾಗಿ ನಿವಾರಿಸಿದ ಅವರ ಎದೆಗಾರಿಕೆಯು ಗುರಿಯ-ನೆಲೆಯನ್ನು ವಶಮಾಡಿಕೊಳ್ಳುವಲ್ಲಿನ ನಿರ್ಣಾಯಕ ಹೆಜ್ಜೆ ಎನಿಸಿಕೊಂಡಿತ್ತು ಮತ್ತು ತಮ್ಮ ಉಪಭಾಗದ ಉಳಿದ ಯೋಧರಿಗೆ ಪ್ರೇರೇಪಕ ಉದಾಹರಣೆಯಾಗಿ ಅವರು ನಿಂತಿದ್ದು ವೇಗವಾಗಿ ಈ ಯಶಸ್ಸನ್ನು ಒಗ್ಗೂಡಿಸುವುದಕ್ಕೆ ಸಾಧ್ಯವಾಯಿತು.[೧೦೩]
  • ಬಂದೂಕುಧಾರಿ ಸಿಪಾಯಿ ಲಚ್ಚಿಮಾನ್‌ ಗುರುಂಗ್‌, ೮ನೇ ಗೂರ್ಖಾ ರೈಫಲ್ಸ್‌
    • ೧೯೪೫ರ ಮೇ ೧೨–೧೩ರಂದು, ಬಂದೂಕುಧಾರಿ ಸಿಪಾಯಿ ಲಚ್ಚಿಮಾನ್‌ ಗುರುಂಗ್‌ ತಮ್ಮ ದಳದ ತುಕಡಿಯ ಅತ್ಯಂತ ಮುಂದಿದ್ದ ಸಿಪಾಯಿ ನೆಲೆಗೆ ಉತ್ಸಾಹವನ್ನು ತುಂಬುತ್ತಿದ್ದರು; ಈ ತುಕಡಿಯು ಶತ್ರುಪಾಳಯಕ್ಕೆ ಸೇರಿದ ಕನಿಷ್ಟಪಕ್ಷ ೨೦೦ ಮಂದಿ ಯೋಧರಿಂದ ಆದ ದಾಳಿಯೊಂದರ ಬಿರುಸನ್ನು ತಡೆದುಕೊಂಡಿತ್ತು. ಕೈಬಾಂಬುಗಳನ್ನು ಲಚ್ಚಿಮಾನ್‌ ಎರಡುಬಾರಿ ಬೀಸಿ ಎಸೆದಾಗ ಅದು ಅವರ ಕಂದಕದ ಮೇಲೆಯೇ ಬಿದ್ದಿತ್ತು, ಆದರೆ ಮೂರನೆಯದು ಅವರ ಬಲಗೈಯಲ್ಲೇ ಸ್ಫೋಟಿಸಿ ಅವರ ಬೆರಳುಗಳು ಛಿದ್ರವಾದವು; ಅಷ್ಟೇ ಅಲ್ಲ, ಅವರ ತೋಳು ಜರ್ಜರಿತವಾಯಿತು ಮತ್ತು ಅವರ ಮುಖ, ಶರೀರ ಮತ್ತು ಬಲಗಾಲಿನಲ್ಲಿ ತೀವ್ರಸ್ವರೂಪದ ಗಾಯಗಳುಂಟಾದವು. ಅವರ ಇಬ್ಬರು ಜೊತೆಗಾರರು ಕೂಡಾ ತೀವ್ರವಾಗಿ ಗಾಯಗೊಂಡರು. ಆದರೆ ಈಗ ಏಕಾಂಗಿಯಾಗಿದ್ದು ತನ್ನ ಗಾಯಗಳನ್ನು ಉಪೇಕ್ಷಿಸಿದ್ದ ಈ ಬಂದೂಕುಧಾರಿ ಸಿಪಾಯಿಯು ಬಂದೂಕಿಗೆ ಗುಂಡುಗಳನ್ನು ಭರ್ತಿಮಾಡಿ, ತಮ್ಮ ಎಡಗೈನಿಂದಲೇ ನಾಲ್ಕು ಗಂಟೆಗಳವರೆಗೆ ಗುಂಡಿನ ಮಳೆಗರೆದರು. ಸಮೀಪದಲ್ಲಿ ಹಾರಿಸಿದ ವ್ಯಾಪ್ತಿಯಲ್ಲಿ, ತಾನು ಎದುರುಗೊಂಡ ಪ್ರತಿಯೊಂದು ಗುಂಡಿನ ದಾಳಿಗೂ ಶಾಂತಿಯಿಂದ ಕಾಯುತ್ತಾ ದಾಳಿಮಾಡಿದರು. ಅದಾದ ನಂತರದಲ್ಲಿ, ಸಾವುನೋವುಗಳನ್ನು ಎಣಿಸಿದಾಗ, ತಮ್ಮ ಏಕೈಕ ತೋಳಿನಿಂದಲೇ ಅವರು ತಮ್ಮ ಸೇನಾಠಾಣ್ಯದ ಸುತ್ತಲೂ ೩೧ ಮಂದಿ ಜಪಾನಿಯರನ್ನು ಹೊಡೆದುರುಳಿಸಿದ್ದು ತಿಳಿದುಬಂದಿತು.[೧೦೪]
  • ‌‌ಜಮಾದಾರ್ ಅಬ್ದುಲ್‌ ಹಫೀಜ್‌, ೯ನೇ ಜಾಟ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ಶತ್ರುಪಾಳಯವು ಹೊಂದಿದ್ದ ಎದ್ದುಕಾಣುವ ಸೇನಾಠಾಣ್ಯವೊಂದರ ಮೇಲೆ ತಮ್ಮ ದಳದ ತುಕಡಿಯೊಂದಿಗೆ ದಾಳಿಮಾಡಬೇಕೆಂದು ೧೯೪೪ರ ಏಪ್ರಿಲ್‌ ೬ರಂದು ಜಮಾದಾರ್‌‌ ಅಬ್ದುಲ್‌ ಹಫೀಜ್‌ರಿಗೆ ಆದೇಶಿಸಲಾಯಿತು. ಒಂದು ಅಲ್ಪಮಟ್ಟದ ಇಳುಕಲು ಮತ್ತು ನಂತರದಲ್ಲಿ ಮೇಲೆ ಸಾಗುವ ಒಂದು ಅತ್ಯಂತ ಕಡಿದಾದ ಬಂಡೆ ಇವೇ ಆ ಸೇನಾಠಾಣ್ಯಕ್ಕೆ ಇದ್ದ ಏಕೈಕ ಪ್ರವೇಶಮಾರ್ಗವಾಗಿತ್ತು. ಆಕ್ರಮಣದ ನೇತೃತ್ವವನ್ನು ವಹಿಸಿಕೊಂಡ ಜಮಾದಾರ್‌, ಶತ್ರುಪಾಳಯದ ಹಲವರನ್ನು ಸ್ವತಃ ಕೊಲ್ಲುತ್ತಾ ಹೋದರು; ಮತ್ತೊಂದು ಕಡೆಯಿಂದ ಬಂದ ಮೆಷೀನ್‌-ಗನ್‌ ಗುಂಡಿನ ದಾಳಿಯನ್ನು ಲೆಕ್ಕಿಸದೆ ಒತ್ತರಿಸಿಕೊಂಡು ದಾಳಿ ಮಾಡುತ್ತಲೇ ಹೋದರು. ಈ ನಿಟ್ಟಿನಲ್ಲಿ ಅವರಿಗೆ ಎರಡು ಗಾಯಗಳಾದವು. ಅವುಗಳ ಪೈಕಿಯ ಎರಡನೇ ಗಾಯವು ಮಾರಣಾಂತಿಕವಾಗಿದ್ದರೂ ಸಹ, ಬೃಹತ್ತಾಗಿ ಮೇಲ್ಮಟ್ಟದ ಸಂಖ್ಯೆಗಳಲ್ಲಿದ್ದ ಶತ್ರುಗಳ ಪಾಳಯದ ಮೇಲೆ ದಾಳಿಮಾಡಲು ಅವರು ಮುನ್ನಡೆದರು ಹಾಗೂ ಅತ್ಯಂತ ಪ್ರಮುಖವಾದ ಸೇನಾಠಾಣ್ಯವೊಂದನ್ನು ವಶಮಾಡಿಕೊಂಡರು.[೧೦೫]
  • ಲೆಫ್ಟಿನೆಂಟ್‌ ಕರಮ್‌ಜೀತ್‌ ಸಿಂಗ್‌ ಜಡ್ಜ್‌, ೧೫ನೇ ಪಂಜಾಬ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ಉಪಭಾಗವೊಂದರ ಒಂದು ದಳದ ತುಕಡಿಯ ದಳಪತಿಯಾಗಿದ್ದ ಲೆಫ್ಟಿನೆಂಟ್‌ ಕರಮ್‌ಜೀತ್‌ ಸಿಂಗ್‌ ಜಡ್ಜ್‌, ಹತ್ತಿಯ ಗಿರಣಿಯೊಂದನ್ನು ವಶಮಾಡಿಕೊಳ್ಳಲು ೧೯೪೫ರ ಮಾರ್ಚ್‌ ೧೮ರಂದು ಆದೇಶಿಸಿದರು; ಶೌರ್ಯಕ್ಕೆ ಸಂಬಂಧಿಸಿದ ನಾನಾಬಗೆಯ ಪ್ರದರ್ಶನಗಳನ್ನು ನೀಡುವ ಮೂಲಕ ಅವರು ರಣರಂಗದಲ್ಲಿ ಮೇಲುಗೈ ಸಾಧಿಸಿದರು. ಶತ್ರುಗಳ ಪಾಳಯಕ್ಕೆ ಸೇರಿದ್ದ ಹತ್ತು ನೆಲಗೂಡುಗಳನ್ನು ನಿರ್ಮೂಲಗೊಳಿಸಿದ ನಂತರ, ಮತ್ತೊಂದು ಟ್ಯಾಂಕ್‌ನಿಂದ ೨೦ ಗಜಗಳಷ್ಟು ಅಂತರದಲ್ಲಿರುವಂತೆ ಒಂದು ಟ್ಯಾಂಕ್‌ಗೆ ಅವರು ನಿರ್ದೇಶಿಸಿದರು ಮತ್ತು ಗುಂಡಿನ ದಾಳಿಯನ್ನು ಕೈಬಿಡುವಂತೆ ಟ್ಯಾಂಕ್‌ ದಳಪತಿಗೆ ಕೇಳಿಕೊಂಡು, ಅದೇ ಸಮಯಕ್ಕೆ ಉಳಿದಿರುವ ಶತ್ರುಸೈನಿಕರನ್ನು ದಮನಮಾಡಿ ಪ್ರದೇಶವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡರು. ಹೀಗೆ ಮಾಡುವಾಗ ಅವರು ಮಾರಣಾಂತಿಕವಾಗಿ ಗಾಯಗೊಂಡರು.[೧೦೬]
  • ಬಂದೂಕುಧಾರಿ ಸಿಪಾಯಿ ಗಂಜು ಲಾಮಾ, ೭ನೇ ಗೂರ್ಖಾ ರೈಫಲ್ಸ್‌
    • ೧೯೪೪ರ ಜೂನ್‌ ೧೨ರಂದು, 'B' ಉಪಭಾಗವು ಭಾರೀ ಮೆಷೀನ್‌-ಗನ್‌ ದಾಳಿ ಮತ್ತು ಟ್ಯಾಂಕ್‌ ಮೆಷೀನ್‌-ಗನ್‌ ಗುಂಡಿನ ದಾಳಿಯ ಅಡಿಯಲ್ಲಿ ಸಿಕ್ಕಿಕೊಂಡಾಗ, ಶತ್ರುಗಳ ಮುನ್ನಡೆಯನ್ನು ನಿರೋಧಿಸಲು ಪ್ರಯತ್ನಿಸುತ್ತಿತ್ತು. ತನ್ನ ಸ್ವಂತದ ಸುರಕ್ಷತೆಯನ್ನು ಸಂಪೂರ್ಣ ಉಪೇಕ್ಷಿಸಿದ ಬಂದೂಕುಧಾರಿ ಸಿಪಾಯಿ ಗಂಜು ಲಾಮಾ, ತಮ್ಮ PIAT ಬಂದೂಕನ್ನು ಕೈಗೆತ್ತಿಕೊಂಡು ಮುಂದಕ್ಕೆ ತೆವಳುತ್ತಾ ಹೋದರು ಮತ್ತು ಶತ್ರು ಟ್ಯಾಂಕ್‌ಗಳಿಗೆ ೩೦ ಗಜಗಳಷ್ಟಿರುವ ವ್ಯಾಪ್ತಿಯಲ್ಲಿ ಗುಂಡಿನದಾಳಿ ಮಾಡುವ ಮೂಲಕ, ಇಬ್ಬರು ಶತ್ರುಗಳನ್ನು ಹೊಡೆದುರುಳಿಸಿದರು. ಅವರ ಮಣಿಕಟ್ಟು ಮುರಿದಿದ್ದು, ಬಲ ಮತ್ತು ಎಡ ಕೈಗಳಿಗೆ ಗಂಭೀರಸ್ವರೂಪದ ಇತರ ಎರಡು ಗಾಯಗಳಾಗಿದ್ದರೂ ಸಹ, ಅವರು ಹಿಂದೆಗೆಯದೆ ಮುಂದುವರಿದು, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಟ್ಯಾಂಕ್‌ ತಂಡವನ್ನು ಎದುರಿಸಿದರು. ಅವರೆಲ್ಲರನ್ನೂ ಮುಗಿಸುವ ತನಕವೂ ತಮ್ಮ ಗಾಯಗಳಿಗೆ ಔಷಧ ಹಚ್ಚಿ ಪಟ್ಟಿಯನ್ನು ಕಟ್ಟಲು ಅವರು ಒಪ್ಪಿಗೆ ನೀಡಿರಲಿಲ್ಲ.[೧೦೭]
  • ಬಂದೂಕುಧಾರಿ ಸಿಪಾಯಿ ತಲ್‌ ಬಹದ್ದೂರ್‌ ಪನ್‌, ೬ನೇ ಗೂರ್ಖಾ ರೈಫಲ್ಸ್‌
    • ೧೯೪೪ರ ಜೂನ್‌ ೨೩ರಂದು, ರೇಲ್ವೆ ಸೇತುವೆ‌ಯ ಮೇಲೆ ನಡೆದ ದಾಳಿಯೊಂದರ ಸಂದರ್ಭದಲ್ಲಿ ದಳದ ತುಕಡಿಗಳ ಪೈಕಿ ಒಂದರ ವಿಭಾಗವೊಂದು ನಾಶಗೊಳಿಸಲ್ಪಟ್ಟಿತು; ಆದರೆ ಬಂದೂಕುಧಾರಿ ಸಿಪಾಯಿ ತಲ್‌ ಬಹದ್ದೂರ್‌ ಪನ್‌, ಅವರ ವಿಭಾಗದ ದಳಪತಿ ಮತ್ತು ಇನ್ನೋರ್ವ ಸಿಪಾಯಿ ಇದರಿಂದ ತಪ್ಪಿಸಿಕೊಂಡಿದ್ದರು. ವಿಭಾಗದ ದಳಪತಿಯು ತತ್‌ಕ್ಷಣವೇ ಶತ್ರುವಿನ ಸೇನಾಠಾಣ್ಯದ ಮೇಲೆ ಒಂದು ದಾಳಿಯನ್ನು ನಡೆಸಿದರೂ ಸಹ, ಅವರು ಹಾಗೂ ಅವರ ಮೂರನೇ ಸಿಪಾಯಿ ಇಬ್ಬರೂ ಒಂದೇ ಸಲಕ್ಕೆ ತೀವ್ರವಾಗಿ ಗಾಯಗೊಂಡರು. ಬಂದೂಕುಧಾರಿ ಸಿಪಾಯಿ ಪನ್‌ ಒಂದು ಬ್ರೆನ್‌ ಫಿರಂಗಿಯನ್ನೆತ್ತಿಕೊಂಡು ಏಕಾಂಗಿಯಾಗಿ ದಾಳಿಯನ್ನು ಮುಂದುವರಿಸಿದರು, ಎದುರಿನಿಂದ ಜರ್ಜರಿತಗೊಳಿಸುವ ಗುಂಡಿನ ದಾಳಿಯಾಗುತ್ತಿದ್ದರೂ ಲೆಕ್ಕಿಸಲಿಲ್ಲ; ಸೇನಾಠಾಣ್ಯವನ್ನು ತಲುಪಿದ ಅವರು ಅಲ್ಲಿನ ಮೂವರು ವಾಸಿಗರನ್ನು ಸಾಯಿಸಿದರು ಹಾಗೂ ಐವರನ್ನು ಅಲ್ಲಿಂದ ಓಡಿಸಿದರು. ಈ ಕಾರ್ಯಾಚರಣೆಯ ಅವಧಿಯಲ್ಲಿ ಅವರು ಎರಡು ಲಘು ಮೆಷೀನ್‌-ಗನ್‌ಗಳು ಹಾಗೂ ಸಾಕಷ್ಟು ಯುದ್ಧಸಾಮಗ್ರಿಯನ್ನು ವಶಮಾಡಿಕೊಂಡರು. ನಂತರದಲ್ಲಿ ಅವರು ಕರಾರುವಾಕ್ಕಾದ ಗುಂಡಿನ ದಾಳಿಯ ಬೆಂಬಲವನ್ನು ನೀಡಿದರು ಹಾಗೂ ತನ್ಮೂಲಕ ತಮ್ಮ ದಳದ ತುಕಡಿಯ ಇತರರು ಅವರ ಉದ್ದೇಶಿತ ಗುರಿಯನ್ನು ತಲುಪಲು ಅನುವುಗೊಳಿಸಿದರು.[೧೦೮]
  • ಬಂದೂಕುಧಾರಿ ಸಿಪಾಯಿ ಅಗಾನ್‌ಸಿಂಗ್‌ ರಾಯ್‌, ೫ನೇ ಗೂರ್ಖಾ ರೈಫಲ್ಸ್‌
    • ೧೯೪೪ರ ಜೂನ್‌ ೨೬ರಂದು, ಗುಂಡಿನ ದಾಳಿಯು ಶಕ್ತಿಗುಂದುತ್ತಿದ್ದ ಹಿನ್ನೆಲೆಯಲ್ಲಿ ಅಗಾನ್‌ಸಿಂಗ್‌ ರಾಯ್‌ ಮತ್ತು ಅವರ ದಳದವರು ಒಂದು ಮೆಷೀನ್‌-ಗನ್ ದಾಳಿಯನ್ನು ಆರಂಭಿಸಿದರು. ಅಗಾನ್‌ಸಿಂಗ್‌ ರಾಯ್‌ ಸ್ವತಃ ಶತ್ರುತಂಡದ ಮೂವರನ್ನು ಸಾಯಿಸಿದರು. ಮೊದಲ ಸೇನಾಠಾಣ್ಯವನ್ನು ವಶಪಡಿಸಿಕೊಂಡಾಗ, ಅರಣ್ಯ ಪ್ರದೇಶದಿಂದ ಅವರು ಒಂದು ರಭಸದ ಮೆಷೀನ್‌-ಗನ್‌ ಗುಂಡಿನ ದಾಳಿಯನ್ನು ನಿರ್ವಹಿಸಿ, ಶತ್ರುತಂಡದ ಮೂವರನ್ನು ಸಾಯಿಸಿದರು ಮತ್ತು ಉಳಿದವರನ್ನು ಅವರ ಸೈನಿಕರು ದಮನಮಾಡಿದರು. ತರುವಾಯದಲ್ಲಿ ಅವರು ಪ್ರತ್ಯೇಕಿಸಲ್ಪಟ್ಟ ನೆಲಗೂಡೊಂದನ್ನು ಏಕಾಂಗಿಯಾಗಿ ನಿಭಾಯಿಸಿ, ಅದರಲ್ಲಿದ್ದ ನಾಲ್ಕೂ ಮಂದಿಯನ್ನು ಸಾಯಿಸಿದರು. ಈಗ ನಿಜವಾಗಿಯೂ ಸ್ಥೈರ್ಯಗೆಟ್ಟ ಶತ್ರುಗಳು ಅಲ್ಲಿಂದ ಪಲಾಯನಮಾಡಿದರು ಹಾಗೂ ಎರಡನೇ ಸಿಪಾಯಿ ನೆಲೆಯನ್ನು ಮರುವಶಮಾಡಿಕೊಳ್ಳಲಾಯಿತು.[೧೦೯]
  • ಸಿಪಾಯಿ ಭಂಡಾರಿ ರಾಮ್‌, ೧೦ನೇ ಬಲೂಚ್‌ ಸೇನಾಪಡೆ
    • ೧೯೪೪ರ ನವೆಂಬರ್‌ ೨೨ರಂದು, ಸಿಪಾಯಿ ಭಂಡಾರಿ ರಾಮ್‌ರವರ ದಳದ ತುಕಡಿಯು ಮೆಷೀನ್‌-ಗನ್‌ ಗುಂಡಿನ ದಾಳಿಯಿಂದ ಕಟ್ಟಿಹಾಕಲ್ಪಟ್ಟಿತು. ಈ ದಾಳಿಯಲ್ಲಿ ಅವರು ಗಾಯಗೊಂಡಿದ್ದರೂ ಸಹ ತೆವಳಿಕೊಂಡು ಹೋಗುತ್ತಿದ್ದಾಗ ಜಪಾನಿಯರ ಒಂದು ಲಘು ಮೆಷೀನ್‌-ಗನ್‌ನ ದೃಷ್ಟಿಗೆ ಬಿದ್ದರು ಹಾಗೂ ಮತ್ತೊಮ್ಮೆ ಗಾಯಗೊಂಡರು; ಆದರೆ ತಮ್ಮ ತೆವಳಿಕೆಯನ್ನು ಮುಂದುವರಿಸಿಕೊಂಡು ಹೋಗಿ, ತಮ್ಮ ಉದ್ದೇಶಿತ ನೆಲೆಯ ೫ ಗಜಗಳಷ್ಟು ವ್ಯಾಪ್ತಿಯ ಅಂತರಕ್ಕೆ ತಲುಪಿದರು. ನಂತರ ಸೇನಾಠಾಣ್ಯದೊಳಗೆ ಒಂದು ಕೈಬಾಂಬನ್ನು ಅವರು ಎಸೆಯುವ ಮೂಲಕ, ಫಿರಂಗಿದಾರ ಮತ್ತು ಇತರ ಇಬ್ಬರನ್ನು ಸಾಯಿಸಿದರು. ಈ ಕ್ರಮದಿಂದಾಗಿ ಪ್ರೇರೇಪಿಸಲ್ಪಟ್ಟ ಅವರ ತುಕಡಿಯು ಶೌರ್ಯದಿಂದ ಮುನ್ನುಗ್ಗಿತು ಹಾಗೂ ಶತ್ರು ಸೇನಾಠಾಣ್ಯವನ್ನು ವಶಮಾಡಿಕೊಂಡಿತು. ಆಗ ಮಾತ್ರವೇ ತಮ್ಮ ಗಾಯಗಳಿಗೆ ಔಷಧ ಹಚ್ಚಿ ಪಟ್ಟಿ ಕಟ್ಟಲು ಅವರು ಅವಕಾಶ ನೀಡಿದರು.[೧೦೬]
  • ‌ಈಟಿರಾವುತ ಷೇರ್‌ ಷಾ, ೧೬ನೇ ಪಂಜಾಬ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ೧೯೪೫ರ ಜನವರಿ ೧೯–೨೦ರಂದು, ಈಟಿರಾವುತ ಷೇರ್‌ ಷಾ ತಮ್ಮ ದಳದ ತುಕಡಿಯ ಒಂದು ಎಡ ಮುಂಚೂಣಿಯ ವಿಭಾಗದ ಅಧಿಪತ್ಯವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜಪಾನಿಯರು ಪ್ರಚಂಡವಾದ ಸಂಖ್ಯೆಯಲ್ಲಿ ಅದರ ಮೇಲೆ ದಾಳಿಮಾಡಿದರು. ಶತ್ರುಗಳ ನಡುವೆಯೇ ಬಲಭಾಗದಲ್ಲಿ ತೆವಳುತ್ತಾ ಅವರು ಎರಡು ದಾಳಿಗಳನ್ನು ಧ್ವಂಸಮಾಡಿದರು ಮತ್ತು ಸಮೀಪದ ವ್ಯಾಪ್ತಿಯಲ್ಲಿ ಗುಂಡಿನದಾಳಿಯನ್ನು ಶುರುಮಾಡಿದರು. ಎರಡನೇ ಸಂದರ್ಭದಲ್ಲಿ ಅವರ ಮೇಲೆ ತೀವ್ರ ದಾಳಿ ನಡೆದು, ಅವರ ಕಾಲು ಜರ್ಜರಿತಗೊಂಡಿತು. ಆದರೂ ಸಹ ತಮ್ಮ ಗಾಯವು ತೀರಾ ಲಘುವಾಗಿದೆ ಎಂದೇ ಅವರು ಸಮರ್ಥಿಸಿಕೊಂಡರು. ಮೂರನೇ ದಾಳಿಯು ಎದುರಾದಾಗ, ಅವರು ಮತ್ತೊಮ್ಮೆ ಮುಂದಕ್ಕೆ ತೆವಳುತ್ತಾ ಶತ್ರುವನ್ನು ಎದುರಿಸತೊಡಗಿದರು. ಕೊನೆಗೊಮ್ಮೆ ಶತ್ರುಗಳು ಅವರ ತಲೆಗೆ ಗುಂಡಿಟ್ಟು ಸಾಯಿಸಿದರು.[೧೦೬]
  • ನಾಯಕ್‌ ಗಿಯಾನ್‌ ಸಿಂಗ್‌, ೧೫ನೇ ಪಂಜಾಬ್‌ ಸೇನಾಪಡೆ
    • ತಮ್ಮ ದಳದ ತುಕಡಿಯ ಅಗ್ರಗಣ್ಯ ವಿಭಾಗದ ಉಸ್ತುವಾರಿಯನ್ನು ಹೊತ್ತಿದ್ದ ನಾಯಕ್‌ ಗಿಯಾನ್‌ ಸಿಂಗ್‌ ೧೯೪೫ರ ಮಾರ್ಚ್‌ ೨ರಂದು, ತಮ್ಮ ಟಾಮಿ ಫಿರಂಗಿಯ ನೆರವಿನೊಂದಿಗೆ ಏಕಾಂಗಿಯಾಗಿ ಗುಂಡುಹಾರಿಸಲು ತೊಡಗಿದರು, ಮತ್ತು ಶತ್ರುಪಾಳಯದ ನೆಲೆಗಂಡಿಗಳೆಡೆಗೆ ರಭಸದಿಂದ ಧಾವಿಸಿದರು. ಈ ಸಂದರ್ಭದಲ್ಲಿ ಅವರ ತೋಳಿಗೆ ಗಾಯವಾದರೂ ಸಹ ಅವರು ಕೈಬಾಂಬುಗಳನ್ನು ಬೀಸಿ ಎಸೆಯುತ್ತಲೇ ಹೋದರು. ಜಾಣತನದಿಂದ ಗೋಪ್ಯವಾಗಿಟ್ಟಿದ್ದ ಟ್ಯಾಂಕ್‌-ನಿರೋಧಕ ಫಿರಂಗಿಯೊಂದರ ಸಿಬ್ಬಂದಿಯ ಮೇಲೆ ಅವರು ದಾಳಿಮಾಡಿ ಸಾಯಿಸಿದರು, ಮತ್ತು ನಂತರದಲ್ಲಿ ತಮ್ಮ ಸೈನಿಕರ ನೇತೃತ್ವವನ್ನು ವಹಿಸಿಕೊಂಡು ಮುನ್ನುಗ್ಗುತ್ತಾ, ಶತ್ರು ಸೇನೆಯ ಎಲ್ಲಾ ಠಾಣ್ಯಗಳನ್ನು ನಿವಾರಿಸುತ್ತಾ ಹೋದರು. ಸದರಿ ಕಾರ್ಯಾಚರಣೆಯು ತೃಪ್ತಿಕರವಾಗಿ ಸಂಪೂರ್ಣಗೊಳ್ಳುವವರೆಗೂ ಅವರು ತಮ್ಮ ವಿಭಾಗದ ನೇತೃತ್ವವನ್ನು ವಹಿಸಿಕೊಂಡಿದ್ದರು.[೧೧೦]
  • ನಾಯಕ್‌ ನಂದ್‌ ಸಿಂಗ್‌, ೧೧ನೇ ಸಿಖ್‌ ಸೇನಾಪಡೆ
    • ದಾಳಿಯ ಅಗ್ರಗಣ್ಯ ವಿಭಾಗವೊಂದರ ಅಧಿಪತ್ಯ ವಹಿಸಿದ್ದ ನಾಯಕ್‌ ನಂದ್‌ ಸಿಂಗ್‌ರವರಿಗೆ ೧೯೪೪ರ ಮಾರ್ಚ್‌ ೧೧–೧೨ರಂದು ಆದೇಶವೊಂದನ್ನು ನೀಡಿ, ಶತ್ರುಪಾಳಯದಿಂದ ಗಳಿಸಲ್ಪಟ್ಟ ಸೇನಾಠಾಣ್ಯವೊಂದನ್ನು ಮರುವಶಮಾಡಿಕೊಳ್ಳುವಂತೆ ಸೂಚಿಸಲಾಯಿತು. ಶತ್ರುಗಳ ಪಾಳಯದಿಂದ ಭಾರೀ ಎನ್ನಬಹುದಾದ ಮೆಷೀನ್‌-ಗನ್‌ ಮತ್ತು ಬಂದೂಕು ಗುಂಡಿನ ದಾಳಿಯು ನಡೆಯುತ್ತಿದ್ದರೂ ಸಹ, ಚೂರಿಯ-ಏಣಿನಂಥ ಕಡಿದಾದ ಏಣಿನ ಪ್ರದೇಶದೆಡೆಗೆ ತಮ್ಮ ವಿಭಾಗವನ್ನು ಅವರು ಕರೆದುಕೊಂಡು ಸಾಗಿದರು; ಈ ಸಂದರ್ಭದಲ್ಲಿ ಅವರಿಗೆ ತೊಡೆಯಲ್ಲಿ ಗಾಯವಾದರೂ ಸಹ, ಮೊದಲ ಕಂದಕವನ್ನು ವಶಮಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ನಂತರದಲ್ಲಿ ಅವರು ಮುಂದಕ್ಕೆ ಏಕಾಂಗಿಯಾಗಿ ತೆವಳಿದರು, ಮತ್ತು ಅವರಿಗೆ ಮತ್ತೊಮ್ಮೆ ಮುಖ ಮತ್ತು ಭುಜದಲ್ಲಿ ಗಾಯಗಳಾದವು; ಆದರೂ ಲೆಕ್ಕಿಸದೆ ಎರಡನೇ ಮತ್ತು ಮೂರನೇ ಕಂದಕಗಳನ್ನು ವಶಪಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.[೧೧೧]
  • ಹವಾಲ್ದಾರ್‌ ಪರ್ಕಾಶ್‌ ಸಿಂಗ್‌, ೮ನೇ ಪಂಜಾಬ್‌ ಸೇನಾಪಡೆ
    • ೧೯೪೩ರ ಜನವರಿ ೬ರಂದು, ಹವಾಲ್ದಾರ್‌ ಪರ್ಕಾಶ್‌ ಸಿಂಗ್‌ ತಮ್ಮದೇ ವಾಹಕವನ್ನು ಮುಂದಕ್ಕೆ ಸಾಗಿಸಿದರು ಹಾಗೂ ಭಾರೀ ಗುಂಡಿನ ದಾಳಿಯಾಗುತ್ತಿದ್ದರೂ ಸಹ ಲೆಕ್ಕಿಸದೆ, ಅಸಮರ್ಥವಾಗಿಸಲ್ಪಟ್ಟಿದ್ದ ಎರಡು ವಾಹಕಗಳ ಸಿಬ್ಬಂದಿಯನ್ನು ಕಾಪಾಡಿದರು. ಮತ್ತೊಮ್ಮೆ ಜನವರಿ ೧೯ರಂದು, ಮತ್ತದೇ ಪ್ರದೇಶದಲ್ಲಿ ಮತ್ತೆರಡು ವಾಹಕಗಳನ್ನು ಅವರು ಕಾಪಾಡಿದರು; ಈ ವಾಹಕಗಳನ್ನು ಶತ್ರುಪಾಳಯದ ಟ್ಯಾಂಕ್‌-ನಿರೋಧಕ ಫಿರಂಗಿಯೊಂದು ಅಸಮರ್ಥವಾಗಿಸಿತ್ತು. ಅವರು ಅಷ್ಟಕ್ಕೇ ನಿಲ್ಲದೇ ಮತ್ತೊಮ್ಮೆ ಮುಂದುವರಿದು, ಗಾಯಗೊಂಡ ಇಬ್ಬರು ಸೈನಿಕರನ್ನು ಒಳಗೊಂಡಿದ್ದ ಮತ್ತು ಅಸಮರ್ಥವಾಗಿಸಲ್ಪಟ್ಟಿದ್ದ ಮತ್ತೊಂದು ವಾಹಕವನ್ನು ಸುರಕ್ಷಿತ ನೆಲೆಗಟ್ಟಿಗೆ ತಂದುನಿಲ್ಲಿಸಿದರು.[೧೧೨]
  • ಜಮಾದಾರ್‌‌ ಪ್ರಕಾಶ್‌ ಸಿಂಗ್‌, ೧೩ನೇ ಗಡಿನಾಡು ಪಡೆ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ೧೯೪೫ರ ಫೆಬ್ರುವರಿ ೧೬/೧೭ರಂದು, ಜಮಾದಾರ್‌‌ ಪ್ರಕಾಶ್‌ ಸಿಂಗ್‌ ದಳದ ತುಕಡಿಯೊಂದರ ಅಧಿಪತ್ಯ ವಹಿಸಿದ್ದರು. ಶತ್ರುಪಾಳಯದಿಂದ ಆದ ಉಗ್ರಸ್ವರೂಪದ ದಾಳಿಗಳ ಬಹುಭಾಗವನ್ನು ಇದು ಸ್ವೀಕರಿಸಿತ್ತು. ಅವರ ಎರಡೂ ಕಣಕಾಲುಗಳಿಗೆ ಗಾಯಗಳಾಗಿದ್ದರಿಂದ ಸೇನಾಧಿಪತ್ಯದಿಂದ ಅವರನ್ನು ಬಿಡುಗಡೆಮಾಡಲಾಯಿತು. ಆದರೆ ಅವರ ಅಧೀನದ ದ್ವಿತೀಯಾಧಿಕಾರಿಯೂ ಸಹ ಗಾಯಗೊಂಡಾಗ ಹೋರಾಟಕ್ಕೆ ಮರಳಿದ ಜಮಾದಾರ್‌ ಪ್ರಕಾಶ್ ಸಿಂಗ್‌, ತಮ್ಮ ಘಟಕದ ಲಗಾಮನ್ನು ಮತ್ತೊಮ್ಮೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು; ಕಾರ್ಯಾಚರಣೆಗಳಿಗೆ ನಿರ್ದೇಶನ ನೀಡುತ್ತಾ, ತಮ್ಮ ಸೈನಿಕರನ್ನು ಉತ್ತೇಜಿಸಲು ತೊಡಗಿದರು. ಅವರಿಗೆ ಎರಡನೇ ಬಾರಿಗೆ ಎರಡೂ ಕಾಲುಗಳಲ್ಲಿ ಗಾಯಗಳಾದವು. ಆದರೂ ಸಹ ಪಟ್ಟುಬಿಡದ ಅವರು ರಕ್ಷಣಾ ಕಾರ್ಯಾಚರಣೆಗೆ ನಿರ್ದೇಶನ ನೀಡುವುದನ್ನು ಮುಂದುವರಿಸುತ್ತಾ, ಸ್ಥಳದಿಂದ ಸ್ಥಳಕ್ಕೆ ತಮ್ಮ ಕೈಗಳಿಂದಲೇ ತಮ್ಮನ್ನು ಎಳೆದುಕೊಂಡುಹೋಗಲು ಪ್ರಾರಂಭಿಸಿದರು. ಮೂರನೆಯ ಹಾಗೂ ಕೊನೆಯ ಬಾರಿಗೆ ಅವರಿಗೆ ಗಾಯಗಳಾದಾಗ, ಡೋಗ್ರಾ ರಣಘೋಷವನ್ನು ಕೂಗುತ್ತಲೇ ಕೆಳಗೆ ಬಿದ್ದು ಅವರು ಮರಣಿಸಿದರು; ಈ ಘೋಷದಿಂದ ಪ್ರೇರೇಪಿಸಲ್ಪಟ್ಟ ಅವರ ಉಪಭಾಗವು ಅಂತಿಮವಾಗಿ ಶತ್ರುಗಳನ್ನು ಬಡಿದೋಡಿಸಿತು.[೧೦೬]
  • ಹವಾಲ್ದಾರ್‌ ಉಮ್ರಾವ್‌ ಸಿಂಗ್‌, ಭಾರತೀಯ ಫಿರಂಗಿದಳ ಸೇನಾಪಡೆ
    • ೧೯೪೪ರ ಡಿಸೆಂಬರ್‌ ೧೫–೧೬ರಂದು, ಹವಾಲ್ದಾರ್‌ ಉಮ್ರಾವ್‌ ಸಿಂಗ್‌ ರಣರಂಗ ಫಿರಂಗಿ ವಿಶೇಷದಳದ ಓರ್ವ ದಳಪತಿಯಾಗಿದ್ದರು. ಇದು ಭಾರತೀಯ ಫಿರಂಗಿದಳದ ೩೦ನೇ ಪರ್ವತ ಸೇನಾಪಡೆಯ ಒಂದು ಮುಂದುವರಿದ ವಿಭಾಗದಲ್ಲಿದ್ದ ವಿಶೇಷದಳವಾಗಿದ್ದು, ೮೧ನೇ ಪಶ್ಚಿಮ ಆಫ್ರಿಕಾದ ತುಕಡಿಗೆ ಸೇರ್ಪಡೆಯಾಗಿತ್ತು. ಮುಂದುವರಿದ ಸೂಕ್ತಸ್ಥಾನವೊಂದರಲ್ಲಿದ್ದ ಸಿಂಗ್‌ರವರ ಫಿರಂಗಿಯು ೮ನೇ ಗೋಲ್ಡ್‌ ಕೋಸ್ಟ್‌ ಸೇನಾಪಡೆಯನ್ನು ಬೆಂಬಲಿಸುತ್ತಿತ್ತು. ೭೫ ಮಿ.ಮೀ. ಫಿರಂಗಿಗಳು ಮತ್ತು ಸಣ್ಣ ಫಿರಂಗಿಗಳ ನೆರವಿನಿಂದ ೯೦ ನಿಮಿಷಗಳ ಅವಧಿಯ ಒಂದು ಅವಿಶ್ರಾಂತವಾದ ಫಿರಂಗಿದಾಳಿಯನ್ನು ನಡೆಸಿದ ನಂತರ, ಸಿಂಗ್‌ರವರ ಫಿರಂಗಿ ಸೇನಾಠಾಣ್ಯದ ಮೇಲೆ ಜಪಾನಿಯರ ಪದಾತಿಸೈನ್ಯದ ಕನಿಷ್ಟಪಕ್ಷ ಎರಡು ಉಪಭಾಗಗಳು ದಾಳಿಮಾಡಿದವು. ಒಂದು ಬ್ರೆನ್‌ ಲಘು ಯಂತ್ರಫಿರಂಗಿಯನ್ನು ಬಳಸುವ ಮೂಲಕ, ಫಿರಂಗಿದಾರರ ಬಂದೂಕು ಗುಂಡಿನ ದಾಳಿಯನ್ನು ಅವರು ನಿರ್ದೇಶಿಸಿದರು, ಆಕ್ರಮಣವನ್ನು ಹಿಮ್ಮೆಟ್ಟಿಸಿದರು; ಆದರೆ ಈ ಪ್ರಯತ್ನದಲ್ಲಿ ಅವರ ಮೇಲೆ ಬಿದ್ದ ಎರಡು ಕೈಬಾಂಬುಗಳಿಂದ ಅವರು ಗಾಯಗೊಂಡರು. ದಾಳಿಕಾರರ ವತಿಯಿಂದ ಹೊರಹೊಮ್ಮಿದ ಎರಡನೇ ಸುತ್ತಿನ ದಾಳಿಯು ಸಿಂಗ್‌ ಮತ್ತು ಇತರ ಇಬ್ಬರು ಫಿರಂಗಿದಾರರನ್ನು ಹೊರತುಪಡಿಸಿ ಮಿಕ್ಕೆಲ್ಲರನ್ನೂ ಸಾಯಿಸಿತಾದರೂ, ಅದನ್ನೂ ಸಹ ಸದೆಬಡಿಯಲಾಯಿತು. ಮೂವರು ಯೋಧರ ಬಳಿಯಲ್ಲಿ ಕೇವಲ ಕೆಲವೇ ಗುಂಡುಗಳು ಉಳಿದಿದ್ದವು, ಮತ್ತು ದಾಳಿಕಾರರು ನಡೆಸಿದ ಮೂರನೇ ಸುತ್ತಿನ ಆಕ್ರಮಣದ ಆರಂಭಿಕ ಹಂತಗಳಲ್ಲಿ ಅವೂ ಸಹ ಕ್ಷಿಪ್ರವಾಗಿ ಬರಿದಾದವು. ಇದರಿಂದ ಎದೆಗುಂದದ ಸಿಂಗ್‌ ಒಂದು "ಫಿರಂಗಿ ಧಾರಕ"ವನ್ನು (ಒಂದು ಗಡಪಾರೆಯನ್ನು ಹೋಲುವಂತಿದ್ದ ಒಂದು ಭಾರೀ ಕಬ್ಬಿಣದ ಸಲಾಕೆ) ಎತ್ತಿಕೊಂಡರು ಮತ್ತು ಕೈ-ಕೈ ಮಿಲಾಯಿಸಿ ನಡೆಸುವ ಹೋರಾಟದಲ್ಲಿನ ಒಂದು ಶಸ್ತ್ರಾಸ್ತ್ರದಂತೆ ಅದನ್ನು ಬಳಸಿದರು. ಹೊಡೆತಗಳ ಒಂದು ಸುರಿಮಳೆಗೆ ತುತ್ತಾಗುವುದಕ್ಕೆ ಮುಂಚಿತವಾಗಿ, ಮೂವರು ಪದಾತಿ ಸೈನಿಕರನ್ನು ಅವರು ಹೊಡೆದುರುಳಿಸಿದ್ದು ಕಂಡುಬಂತು. ಆರು ಗಂಟೆಗಳ ನಂತರದಲ್ಲಿ, ಒಂದು ಪ್ರತಿ-ದಾಳಿಯಾದ ಮೇಲೆ, ತಮ್ಮ ಫಿರಂಗಿದಳ ತುಕಡಿಯ ಸಮೀಪದಲ್ಲಿ ಅವರು ಜೀವಂತವಾಗಿ ಬಿದ್ದಿರುವುದು ಕಂಡುಬಂದಿತಾದರೂ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರ ತಲೆಗೆ ತೀವ್ರಸ್ವರೂಪದ ಗಾಯವಾಗಿದ್ದರಿಂದ ಬಹುಪಾಲು ಅವರನ್ನು ಗುರುತಿಸಲು ಅಸಾಧ್ಯವಾಗಿತ್ತು; ಇಷ್ಟಾಗಿಯೂ ಅವರು ತಮ್ಮ ಫಿರಂಗಿ ಧಾರಕವನ್ನು ಭದ್ರವಾಗಿ ಹಿಡಿದುಕೊಂಡಿದ್ದರು. ಹತ್ತಿರದಲ್ಲಿಯೇ ಹತ್ತು ಮಂದಿ ಜಪಾನಿ ಯೋಧರು ಸತ್ತುಬಿದ್ದಿದ್ದರು. ಅದೇ ದಿನದ ನಂತರದ ಅವಧಿಯಲ್ಲಿ, ಅವರ ರಣರಂಗ ಫಿರಂಗಿಯು ಮತ್ತೊಮ್ಮೆ ಕಾರ್ಯಾಚರಣೆಗೆ ಇಳಿಯಿತು.
  • ಸುಬೇದಾರ್‌‌ ರಾಮ್‌ ಸರೂಪ್‌ ಸಿಂಗ್‌, ೧ನೇ ಪಂಜಾಬ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ನಿರ್ದಿಷ್ಟವಾಗಿ ಪ್ರಬಲವಾಗಿರುವ ಶತ್ರುವಿನ ಸೇನಾಠಾಣ್ಯವೊಂದರ ಮೇಲೆ ದಾಳಿಮಾಡುವಂತೆ ದಳದ ಎರಡು ತುಕಡಿಗಳಿಗೆ ೧೯೪೪ರ ಅಕ್ಟೋಬರ್‌ ೨೫ರಂದು ಆದೇಶಿಸಲಾಯಿತು. ಸುಬೇದಾರ್‌‌ ರಾಮ್‌ ಸರೂಪ್‌ ಸಿಂಗ್‌ರವರ ಅಧಿಪತ್ಯವನ್ನು ಹೊಂದಿದ್ದ ದಳದ ತುಕಡಿಯು ಶತ್ರುವನ್ನು ಸಂಪೂರ್ಣವಾಗಿ ಸದೆಬಡಿಯುವ ಮೂಲಕ ತನ್ನ ಉದ್ದೇಶವನ್ನು ಸಾಧಿಸಿತು; ಈ ಹೋರಾಟದಲ್ಲಿ ಸುಬೇದಾರ್‌ರವರ ಎರಡೂ ಕಾಲುಗಳಿಗೆ ಗಾಯಗಳಾದರೂ ಸಹ, ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಅವರು ಒತ್ತಾಯ ಮಾಡಿದರು. ನಂತರದಲ್ಲಿ, ಶತ್ರುವಿನ ಪಾಳಯದಿಂದ ಹೊರಹೊಮ್ಮಿದ ಉಗ್ರಸ್ವರೂಪದ ಪ್ರತಿ-ದಾಳಿಯನ್ನು ಸುಬೇದಾರ್‌‌ ರಾಮ್‌ ಸರೂಪ್‌ ಸಿಂಗ್ ತಮ್ಮ ರಭಸದಿಂದ ನುಗ್ಗುವ ಪ್ರತಿದಾಳಿಯಿಂದ ಸದೆಬಡಿದರು. ಈ ಸಂದರ್ಭದಲ್ಲಿ ಅವರು ಸ್ವತಃ ನಾಲ್ವರು ಶತ್ರುಸೈನಿಕರನ್ನು ಸಾಯಿಸಿದರು. ಅವರಿಗೆ ತೊಡೆಯಲ್ಲಿ ಮತ್ತೊಮ್ಮೆ ಗಾಯಗಳಾದರೂ ಸಹ, ತಮ್ಮ ಸೈನಿಕರ ನೇತೃತ್ವವನ್ನು ಅವರು ಮುಂದುವರಿಸಿದರು; ಇನ್ನಿಬ್ಬರು ಶತ್ರುಸೈನಿಕರನ್ನು ಕೊಂದ ನಂತರ, ಅವರು ಮಾರಣಾಂತಿಕವಾಗಿ ಗಾಯಗೊಂಡರು.[೧೦೬]
  • ಹಂಗಾಮಿ ಸುಬೇದಾರ್‌ ನೇತ್ರಬಹದ್ದೂರ್‌ ಥಾಪಾ, ೫ನೇ ಗೂರ್ಖಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ೧೯೪೪ರ ಜೂನ್‌ ೨೫–೨೬ರಂದು, ಹಂಗಾಮಿ ಸುಬೇದಾರ್‌ ಥಾಪಾ, ಬರ್ಮಾದ ಬಿಷೆನ್‌ಪುರ್‌ನಲ್ಲಿನ ಒಂದು ಸಣ್ಣದಾದ ಪ್ರತ್ಯೇಕಿಸಲ್ಪಟ್ಟ ಬೆಟ್ಟದ ಸಿಪಾಯಿನೆಲೆಯ ಅಧಿಪತ್ಯವನ್ನು ವಹಿಸಿದ್ದರು; ಈ ಸಂದರ್ಭದಲ್ಲಿ ಜಪಾನಿಯರ ಸೇನೆಯು ದೊಡ್ಡ ಪ್ರಮಾಣದಲ್ಲಿ ದಾಳಿಮಾಡಿತು. ಮೇಲ್ಪಂಕ್ತಿಯಾಗಿ ನಿಂತ ತಮ್ಮ ನಾಯಕನಿಂದ ಪ್ರೇರೇಪಿಸಲ್ಪಟ್ಟ ಸೈನಿಕರು, ತಮ್ಮ ನೆಲೆಯನ್ನು ಪಟ್ಟಾಗಿ ಹಿಡಿದುಕೊಂಡರು ಮತ್ತು ಶತ್ರುಗಳನ್ನು ಸದೆಬಡಿದರು. ಆದರೆ ಹೋರಾಟದಲ್ಲಿ ಸಾವುನೋವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿದವು ಹಾಗೂ ಸೈನ್ಯ ಬಲವರ್ಧನೆಗಳಿಗಾಗಿ ಮನವಿಯನ್ನು ಸಲ್ಲಿಸಲಾಯಿತು. ಕೆಲಗಂಟೆಗಳ ನಂತರ ಹೆಚ್ಚುವರಿ ಸೈನ್ಯವೂ ಬಂದಿತಾದರೂ, ಅದೂ ಸಹ ಭಾರೀ ಸಾವುನೋವುಗಳನ್ನು ಕಾಣಬೇಕಾಗಿ ಬಂತು. ಸೈನ್ಯ ಬಲವರ್ಧನೆಗಳ ಯುದ್ಧಸಾಮಗ್ರಿಯನ್ನು ಸ್ವತಃ ಮತ್ತೆಗಳಿಸಿದ ಥಾಪಾ, ಕೈಬಾಂಬುಗಳು ಮತ್ತು ಕುಕ್ರಿಗಳನ್ನು ಬಳಸಿಕೊಂಡು ಒಂದು ಆಕ್ರಮಣಕಾರಿ ದಾಳಿಗೆ ಚಾಲನೆನೀಡಿದರು. ಆದರೂ ಕೊನೆಗೊಮ್ಮೆ ಅವರು ಸಾಯಿಸಲ್ಪಟ್ಟರು.[೧೧೩]

ಇಟಲಿಯ ದಂಡಯಾತ್ರೆಯ ಪ್ರಶಸ್ತಿಗಳು[ಬದಲಾಯಿಸಿ]

  • ನಾಯಕ್‌ ಯಶವಂತ್‌ ಘಾಡ್ಗೆ, ೫ನೇ ಮರಾಠಾ ಲಘು ಪದಾತಿಸೈನ್ಯ (ಮರಣೋತ್ತರ ಪ್ರಶಸ್ತಿ)
    • ೧೯೪೪ರ ಜುಲೈ ೧೦ರಂದು, ನಾಯಕ್‌ ಯಶವಂತ್‌ ಘಾಡ್ಗೆ ಅಧಿಪತ್ಯದ ಒಂದು ಬಂದೂಕು ವಿಭಾಗವು, ಸಮೀಪದ-ವ್ಯಾಪ್ತಿಯಲ್ಲಿ ಒಂದು ಭಾರೀ ಮೆಷೀನ್‌-ಗನ್‌ ಗುಂಡಿನ ದಾಳಿಗೆ ಈಡಾಯಿತು. ಈ ಘಟನೆಯಲ್ಲಿ ದಳಪತಿಯನ್ನು ಹೊರತುಪಡಿಸಿ ವಿಭಾಗದ ಎಲ್ಲಾ ಸದಸ್ಯರು ಸಾಯಿಸಲ್ಪಟ್ಟರು ಅಥವಾ ಗಾಯಗೊಂಡರು. ಮನಸ್ಸಿನಲ್ಲಿ ಯಾವುದೇ ಸಂದಿಗ್ದತೆಯನ್ನು ಹೊಂದಿರದ ನಾಯಕ್‌ ಯಶವಂತ್‌ ಘಾಡ್ಗೆ ಮೆಷೀನ್‌-ಗನ್‌ ಸೇನಾಠಾಣ್ಯದೆಡೆಗೆ ಬಿರುಸಿನಿಂದ ಧಾವಿಸಿದರು; ಮೊದಲಿಗೆ ಒಂದು ಕೈಬಾಂಬನ್ನು ಅವರು ಎಸೆದಾಗ, ಅದು ಮೆಷೀನ್‌-ಗನ್‌ ಸೈನಿಕರು ಮತ್ತು ಗುಂಡುಹಾರಿಸುವವರನ್ನು ಹೊಡೆದುರುಳಿಸಿತು. ನಂತರದಲ್ಲಿ ಫಿರಂಗಿ ತಂಡದ ಓರ್ವನನ್ನು ಅವರು ಹೊಡೆದುರುಳಿಸಿದರು. ಅಂತಿಮವಾಗಿ, ತಮ್ಮ ಬಂದೂಕುಕೋಶವನ್ನು ಬದಲಿಸಲು ಸಮಯವಿರದ ಕಾರಣದಿಂದ, ತಂಡದ ಉಳಿದೆರಡು ಸದಸ್ಯರನ್ನು ದೊಣ್ಣೆಯಿಂದ ಬಡಿಯುವಂತೆ ಬಡಿದು ಅವರು ಸಾಯಿಸಿದರು. ದೂರದ ಮರೆಯಿಂದ ಗುಂಡುಹಾರಿಸುವ ಶತ್ರುಪಾಳಯದವನ ಗುಂಡೇಟಿಗೆ ಸಿಲುಕಿದ ಅವರು ಮಾರಣಾಂತಿಕವಾಗಿ ಗಾಯಗೊಂಡು ಕೆಳಗೆ ಬಿದ್ದರು.[೧೧೪]
  • ಬಂದೂಕುಧಾರಿ ಸಿಪಾಯಿ ಥಾಮನ್‌ ಗುರುಂಗ್‌, ೫ನೇ ಗೂರ್ಖಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ೧೯೪೪ರ ನವೆಂಬರ್‌ ೧೦ರಂದು, ಬಂದೂಕುಧಾರಿ ಸಿಪಾಯಿ ಥಾಮನ್‌ ಗುರುಂಗ್‌, ಹೋರಾಡುವ ಸ್ಥಳಶೋಧಕ ದಳವೊಂದಕ್ಕೆ ಓರ್ವ ಅನ್ವೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಾಸ್ತವವಾಗಿ ಬೃಹತ್‌ ಸಂಖ್ಯೆಯ ನಷ್ಟಗಳು ಸಂಭವಿಸುವ ಸಾಧ್ಯತೆಯಿದ್ದರೂ, ನಿಸ್ಸಂದೇಹವಾಗಿ ಅವರ ಅದ್ಭುತವಾದ ಶೌರ್ಯದ ಕಾರಣದಿಂದಲೇ ಅವರ ದಳದ ತುಕಡಿಯು ಹೆಚ್ಚಿನ ಸಾವುನೋವುಗಳು ಇಲ್ಲದೆಯೇ ಅತ್ಯಂತ ಕಷ್ಟಕರವಾದ ಸೇನಾಠಾಣ್ಯವೊಂದರಿಂದ ಹಿಂದೆಗೆದುಕೊಳ್ಳುವಲ್ಲಿ ಸಮರ್ಥವಾಗಿತ್ತು; ಅಷ್ಟೇ ಅಲ್ಲ, ಅವರ ಶೌರ್ಯದ ಕಾರಣದಿಂದಲೇ ಒಂದಷ್ಟು ಅತ್ಯಂತ ಮೌಲ್ಯಯುತ ಮಾಹಿತಿ ದೊರೆಯಿತು ಹಾಗೂ ಮೂರು ದಿನಗಳ ನಂತರ ಉದ್ದೇಶಿತ-ಗುರಿಯನ್ನು ವಶಪಡಿಸಿಕೊಳ್ಳುವಲ್ಲಿ ಈ ಮಾಹಿತಿಯು ನೆರವಾಯಿತು. ಬಂದೂಕುಧಾರಿ ಸಿಪಾಯಿಯ ಕಲಿತನವೇ ಅವರ ಜೀವಕ್ಕೆ ಎರವಾಯಿತೆನ್ನಬಹುದು.[೧೧೫]
  • ಸಿಪಾಯಿ ಆಲಿ ಹೈದರ್‌, ೧೩ನೇ ಗಡಿನಾಡು ಪಡೆ ರೈಫಲ್ಸ್‌
    • ೧೯೪೫ರ ಏಪ್ರಿಲ್‌ ೯ರಂದು, ಸೆನಿಯೊ ನದಿಯನ್ನು ದಾಟುವ ಸಂದರ್ಭದಲ್ಲಿ, ಕೇವಲ ಸಿಪಾಯಿ ಆಲಿ ಹೈದರ್‌ ಮತ್ತು ಅವರ ವಿಭಾಗದ ಇನ್ನಿಬ್ಬರು ಸೈನಿಕರು, ಭಾರೀ ಮೆಷೀನ್‌-ಗನ್‌ ಗುಂಡಿನ ದಾಳಿಯ ನಡುವೆಯೇ ದಾಟುವಿಕೆಯನ್ನು ನಿಭಾಯಿಸಿದರು. ಆಮೇಲೆ, ಇನ್ನಿಬ್ಬರು ಅವರನ್ನು ಸುತ್ತುವರೆದ ಸಂದರ್ಭದಲ್ಲಿ, ಅತ್ಯಂತ ಸನಿಹದ ಪ್ರಬಲಘಟ್ಟದಲ್ಲೇ ಸಿಪಾಯಿಗಳು ದಾಳಿಮಾಡಿದರು, ಮತ್ತು ಈ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರೂ ಸಹ ಅದನ್ನವರು ಲೆಕ್ಕಿಸಲಿಲ್ಲ. ಎರಡನೇ ಪ್ರಬಲ-ಘಟ್ಟವೊಂದರ ಮೇಲೆ ದಾಳಿಮಾಡುವ ಸಂದರ್ಭದಲ್ಲಿ ಅವರು ಮತ್ತೊಮ್ಮೆ ತೀವ್ರವಾಗಿ ಗಾಯಗೊಂಡರಾದರೂ, ನಿಕಟವಾಗಿ ತೆವಳಿಕೊಂಡು ಹೋಗುವಲ್ಲಿ ಅವರು ನಿಭಾಯಿಸಿದರು. ಒಂದು ಕೈಬಾಂಬನ್ನು ಎಸೆದು ಶತ್ರುನೆಲೆಯ ಮೇಲೆ ದಾಳಿಮಾಡಿದರು; ಅವರ ದಾಳಿಯಿಂದ ಶತ್ರುಗಳ ಪೈಕಿ ಇಬ್ಬರು ಗಾಯಗೊಂಡರೆ, ಉಳಿದಿಬ್ಬರು ಶರಣಾಗತರಾದರು. ಉಪಭಾಗದ ಉಳಿದ ಸೈನಿಕರು ಆಗ ನದಿಯನ್ನು ದಾಟುವುದಕ್ಕೆ ಮತ್ತು ಒಂದು ಸೇತುಶಿರವನ್ನು ನೆಲೆಗೊಳಿಸುವುದಕ್ಕೆ ಸಾಧ್ಯವಾಯಿತು.[೧೧೬]
  • ಸಿಪಾಯಿ ನಾಮದೇವ ಜಾದವ್‌, ೫ನೇ ಮರಾಠಾ ಲಘು ಪದಾತಿಸೈನ್ಯ
    • ೧೯೪೫ರ ಏಪ್ರಿಲ್‌ ೯ರಂದು, ಇಟಲಿಯಲ್ಲಿ, ನದಿಯ ಪೂರ್ವ ಪ್ರವಾಹದಡದ ಮೇಲಿನ ಆಕ್ರಮಣವೊಂದರಲ್ಲಿ ಸಣ್ಣದೊಂದು ಪಡೆಯು ಬಹುಪಾಲು ನಾಶಗೊಳಿಸಲ್ಪಟ್ಟಾಗ, ಸಿಪಾಯಿ ನಾಮದೇವ ಜಾದವ್‌ ಇಬ್ಬರು ಗಾಯಗೊಂಡ ಸೈನಿಕರನ್ನು ಭಾರೀ ಗುಂಡಿನ ದಾಳಿಯ ನಡುವೆಯೂ ಆಳವಾದ ನೀರಿನ ಮೂಲಕ ಮತ್ತು ಕಡಿದಾದ ದಡವೊಂದನ್ನು ಏರಿಕೊಂಡು ಸಾಗಿಸಿದರು ಮತ್ತು ಈ ನಿಟ್ಟಿನಲ್ಲಿ ಸುರಕ್ಷತೆಗೆಂದು ಅವರು ಸಿಡಿಗುಂಡು-ಪಟ್ಟಿಯೊಂದನ್ನು ಬಳಸಿದರು. ಆಮೇಲೆ, ಅಸುನೀಗಿದ ತಮ್ಮ ಜೊತೆಗಾರರ ಸಾವಿಗೆ ಸೇಡುತೀರಿಸಿಕೊಳ್ಳುವ ಸಲುವಾಗಿ, ಶತ್ರುಪಾಳಯದ ಮೂರು ಮೆಷೀನ್‌-ಗನ್‌ ನೆಲೆಗಳನ್ನು ಅವರು ನಿರ್ಮೂಲಗೊಳಿಸಿದರು. ಅಂತಿಮವಾಗಿ, ದಡದ ತುದಿಭಾಗವನ್ನು ಅವರು ಹತ್ತುತ್ತಾ ಮರಾಠಾ ರಣಘೋಷವನ್ನು ಕೂಗಿದರು ಹಾಗೂ ದಾಟುತ್ತಿದ್ದ ಉಳಿದಿರುವ ಉಪಭಾಗಗಳನ್ನು ಅವರು ತನ್ಮೂಲಕ ಉತ್ತೇಜಿಸಿದರು. ಅವರು ಅನೇಕರ ಜೀವಗಳನ್ನಷ್ಟೇ ಉಳಿಸಲಿಲ್ಲ, ಸೇತುಶಿರವನ್ನು ಪಡೆದುಕೊಳ್ಳುವುದಕ್ಕೆ ಮತ್ತು ಅಂತಿಮವಾಗಿ ಆ ಪ್ರದೇಶದಲ್ಲಿನ ಎಲ್ಲಾ ಶತ್ರು ಪ್ರತಿರೋಧವನ್ನು ಸದೆಬಡಿಯುವುದಕ್ಕೆ ಪಟಾಲಂನ್ನು ಅನುವುಗೊಳಿಸಿದರು.[೧೦೬]
  • ಸಿಪಾಯಿ ಕಮಲ್‌ ರಾಮ್‌, ೮ನೇ ಪಂಜಾಬ್‌ ಸೇನಾಪಡೆ
    • ೧೯೪೪ರ ಮೇ ೧೨ರಂದು, ಮುಂಚೂಣಿಯಲ್ಲಿ ಮತ್ತು ಪಕ್ಕಗಳಲ್ಲಿ ನೆಲೆಗೊಂಡಿದ್ದ ನಾಲ್ಕು ಸಿಪಾಯಿ ನೆಲೆಗಳಿಂದ ನಡೆದ ಭಾರೀ ಮೆಷೀನ್‌-ಗನ್‌ ಗುಂಡಿನ ದಾಳಿಯಿಂದಾಗಿ ಉಪಭಾಗದ ಮುನ್ನಡೆಯು ತಡೆಹಿಡಿಯಲ್ಪಟ್ಟಿತು. ಸೇನಾಠಾಣ್ಯವನ್ನು ವಶಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿತ್ತು. ಬಲಭಾಗದ ಸಿಪಾಯಿ ನೆಲೆಯ ಹಿಂಭಾಗಕ್ಕೆ ಸ್ವತಃ ಉಪಾಯವಾಗಿ ಬರುವಲ್ಲಿ ಸಿಪಾಯಿ ಕಮಲ್‌ ರಾಮ್‌ ಯಶಸ್ವಿಯಾದರು ಮತ್ತು ಅದರ ಸದ್ದಡಗಿಸಿದರು. ಮೊದಲ ಎರಡು ಸಿಪಾಯಿ ನೆಲೆಗಳ ಮೇಲೆ ಅವರು ಏಕಾಂಗಿಯಾಗಿ ದಾಳಿಮಾಡಿ, ಅಲ್ಲಿನ ವಾಸಿಗರನ್ನು ಕೊಂದರು ಇಲ್ಲವೇ ಯುದ್ಧಕೈದಿಗಳನ್ನಾಗಿಸಿದರು ಮತ್ತು ಓರ್ವ ಹವಾಲ್ದಾರ್‌ ಜೊತೆಗೆ ಒಟ್ಟಾಗಿ, ಮೂರನೇ ನೆಲೆಯನ್ನು ಅವರು ಸಂಪೂರ್ಣವಾಗಿ ನಾಶಪಡಿಸಿದರು. ಕದನದ ಒಂದು ನಿರ್ಣಾಯಕ ಅವಧಿಯಲ್ಲಿ ಹೊರಹೊಮ್ಮಿದ ಅವರ ಮಹೋನ್ನತವಾದ ಕಲಿತನವು, ಒಂದು ಕಷ್ಟಕರ ಸನ್ನಿವೇಶವನ್ನು ಪ್ರಶ್ನಾತೀತವಾಗಿ ಉಳಿಸಿತು.[೧೧೭]
  • ಬಂದೂಕುಧಾರಿ ಸಿಪಾಯಿ ಷೇರ್‌ ಬಹದ್ದೂರ್‌ ಥಾಪಾ, ೯ನೇ ಗೂರ್ಖಾ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ೧೯೪೪ರ ಸೆಪ್ಟೆಂಬರ್‌ ೧೮–೧೯ರಂದು, ಜರ್ಮನ್ನರಿಂದ ಸಜ್ಜುಗೊಂಡಿದ್ದ ಸೇನಾಠಾಣ್ಯವೊಂದರಿಂದ ಹೊರಹೊಮ್ಮಿದ ಕಟುವಾದ ಪ್ರತಿರೋಧವನ್ನು ೯ನೇ ಗೂರ್ಖಾ ರೈಫಲ್ಸ್‌ನ ಉಪಭಾಗವೊಂದು ಎದುರಿಸಬೇಕಾಗಿ ಬಂದಾಗ, ಬಂದೂಕುಧಾರಿ ಸಿಪಾಯಿ ಷೇರ್‌ ಬಹದ್ದೂರ್‌ ಥಾಪಾ ಮತ್ತು ಅವರ ವಿಭಾಗದ ದಳಪತಿಯು ತೀವ್ರ ಹೋರಾಟವನ್ನು ನಡೆಸಿ, ಶತ್ರುವಿನ ಮೆಷೀನ್‌-ಗನ್‌ನ ಸದ್ದಡಗಿಸಿದರು. ಈ ಹೋರಾಟದ ಸಂದರ್ಭದಲ್ಲಿ ತದನಂತರದಲ್ಲಿ ಸದರಿ ವಿಭಾಗದ ದಳಪತಿಯು ತೀವ್ರವಾಗಿ ಗಾಯಗೊಂಡರು. ಆ ಪ್ರದೇಶದಲ್ಲಿನ ಏಣೊಂದರ ಒಡ್ಡಿಕೊಂಡ ಭಾಗಕ್ಕೆ ಏಕಾಂಗಿಯಾಗಿ ತೆರಳಿದ ಈ ಬಂದೂಕುಧಾರಿ ಸಿಪಾಯಿ, ಗುಂಡುಗಳ ಸುರಿಮಳೆಯನ್ನು ಲೆಕ್ಕಿಸದೆ ಬಹಳಷ್ಟು ಮೆಷೀನ್‌-ಗನ್‌ಗಳ ಸದ್ದಡಗಿಸಿದರು, ವಾಪಸಾತಿಯೊಂದಕ್ಕೆ ರಕ್ಷಣೆ ನೀಡಿದರು ಮತ್ತು ತಾವು ಶತ್ರುಗಳಿಂದ ಸಾಯಿಸಲ್ಪಡುವುದಕ್ಕೆ ಮುಂಚಿತವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರನ್ನು ಕಾಪಾಡಿದರು.[೧೧೮]

ಜನರಲ್‌ ಕ್ರಾಸ್‌[ಬದಲಾಯಿಸಿ]

ಜನರಲ್‌ ಕ್ರಾಸ್‌ (GC) ಎಂಬುದು ವಿಕ್ಟೋರಿಯಾ ಕ್ರಾಸ್‌ ಪ್ರಶಸ್ತಿ ಮತ್ತು ನಾಗರಿಕರಿಗೆ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿಗೆ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯ ಪ್ರತಿರೂಪವಾಗಿದೆ; ಸದರಿ ಕಾರ್ಯಾಚರಣೆಗಳು ಶತ್ರುವಿಗೆ ಅಭಿಮುಖವಾಗಿರುವಂಥದ್ದಾಗಿರಬಾರದು ಅಥವಾ ಅವು ಅಪ್ಪಟವಾದ ಸೇನಾ ಗೌರವಗಳು ಸಾಮಾನ್ಯವಾಗಿ ನೀಡಲ್ಪಡದಂಥ ಕಾರ್ಯಾಚರಣೆಗಳಾಗಿರಬೇಕು. ಭಾರತೀಯ ಸೇನೆಯ ಈ ಕೆಳಕಂಡ ಸದಸ್ಯರು IIನೇ ಜಾಗತಿಕ ಸಮರದ ಅವಧಿಯಲ್ಲಿ ಜನರಲ್‌ ಕ್ರಾಸ್‌ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು:

  • ಕ್ಯಾಪ್ಟನ್‌ ಮತೀನ್‌ ಅಹ್ಮದ್‌ ಅನ್ಸಾರಿ, ೭ನೇ ರಜಪೂತ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ೧೯೪೧ರ ಡಿಸೆಂಬರ್‌ನಲ್ಲಿ ಜಪಾನಿಯರು ಹಾಂಕಾಂಗ್‌ ಮೇಲೆ ಆಕ್ರಮಣ ಮಾಡಿದಾಗ ಅವರನ್ನು ಯುದ್ಧಕೈದಿಯನ್ನಾಗಿ ತೆಗೆದುಕೊಳ್ಳಲಾಗಿತ್ತು. ಅವರು ರಾಜನ ಸಂಸ್ಥಾನಗಳ ಪೈಕಿ ಒಂದರ ರಾಜನಿಗೆ ಸಂಬಂಧಪಟ್ಟಿರುವ ವ್ಯಕ್ತಿ ಎಂಬುದನ್ನು ಜಪಾನಿಯರು ಪತ್ತೆಹಚ್ಚಿದ ನಂತರ, ಬ್ರಿಟಿಷರೆಡೆಗಿನ ತಮ್ಮ ರಾಜನಿಷ್ಠೆಯನ್ನು ಅವರು ವಿಧಿವತ್ತಾಗಿ ತ್ಯಜಿಸಬೇಕೆಂದು ಹಾಗೂ ಕೈದಿಗಳ ಬಿಡಾರಗಳಲ್ಲಿರುವ ಭಾರತೀಯ ಕೈದಿಗಳ ಶ್ರೇಣಿಗಳಲ್ಲಿ ಅಸಮಾಧಾನದ ಚಿತಾವಣೆ ಮಾಡಬೇಕೆಂದು ಜಪಾನಿಯರು ಬೇಡಿಕೆ ಸಲ್ಲಿಸಿದರು. ಅವರು ಅದನ್ನು ನಿರಾಕರಿಸಿದಾಗ, ೧೯೪೨ರ ಮೇ ತಿಂಗಳಲ್ಲಿ ಅವರನ್ನು ಕುಖ್ಯಾತ ಸ್ಟಾನ್ಲೆ ಸೆರೆಮನೆಯೊಳಗೆ ದೂಡಲಾಯಿತು; ಅವರನ್ನು ಅಲ್ಲಿ ಉಪವಾಸ ಕೆಡವಲಾಯಿತು ಮತ್ತು ಅವರಿಗೆ ಪಶುಪ್ರಾಯವಾದ ಸ್ಥಿತಿಯನ್ನು ತಂದೊಡ್ಡಲಾಯಿತು. ಕೈದಿಗಳ ಬಿಡಾರಗಳಿಗೆ ಹಿಂದಿರುಗುವಾಗ, ಬ್ರಿಟಿಷರೆಡೆಗಿನ ತಮ್ಮ ರಾಜನಿಷ್ಠೆಯು ಅಚಲವಾಗಿರುವುದರ ಕುರಿತು ಅವರು ದೃಢವಾಗಿ ಹೇಳಿದಾಗ, ಅವರನ್ನು ಮತ್ತೊಮ್ಮೆ ಸ್ಟಾನ್ಲೆ ಸೆರೆಮನೆಯಲ್ಲಿ ಬಂಧಿಸಿಡಲಾಯಿತು; ಅಲ್ಲಿ ಅವರನ್ನು ಉಪವಾಸ ಕೆಡವಲಾಯಿತು ಮತ್ತು ಐದು ತಿಂಗಳುಗಳವರೆಗೆ ಅವರಿಗೆ ಚಿತ್ರಹಿಂಸೆ ನೀಡಲಾಯಿತು. ಆಮೇಲೆ ಅವರು ಮೂಲ ಶಿಬಿರಕ್ಕೆ ಹಿಂದಿರುಗಿದರು. ಅಲ್ಲಿಯೂ ಅವರು ಬ್ರಿಟಿಷರೆಡೆಗಿನ ತಮ್ಮ ರಾಜನಿಷ್ಠೆಯನ್ನು ಮುಂದುವರಿಸಿದರು. ಅಷ್ಟೇ ಅಲ್ಲ, ಇತರ ಕೈದಿಗಳಿಂದ ಮಾಡಲ್ಪಟ್ಟ ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನು ವ್ಯವಸ್ಥೆಗೊಳಿಸುವಲ್ಲಿಯೂ ಅವರು ನೆರವಾದರು. ಮೂವತ್ತಕ್ಕೂ ಹೆಚ್ಚಿನ ಇತರ ಬ್ರಿಟಿಷ್‌, ಚೀನಾದ ಮತ್ತು ಭಾರತೀಯ ಕೈದಿಗಳ ಜೊತೆಯಲ್ಲಿ ಅವರಿಗೆ ಮರಣದಂಡನೆಯನ್ನು ವಿಧಿಸಲಾಯಿತು ಮತ್ತು ೧೯೪೩ರ ಅಕ್ಟೋಬರ್‌ ೨೦ರಂದು ಶಿರಚ್ಛೇದನ ಮಾಡಲಾಯಿತು.[೧೧೯]
  • ಸವಾರ ಡಿಟ್ಟೊ ರಾಮ್‌, ಸೆಂಟ್ರಲ್‌ ಇಂಡಿಯಾ ಹಾರ್ಸ್‌ (ಮರಣೋತ್ತರ ಪ್ರಶಸ್ತಿ)
    • ಇಟಲಿಯ ಮಾಂಟೆ ಕ್ಯಾಸಿನೊದಲ್ಲಿ ೧೯೪೪ರ ಜುಲೈ ೨೩ರಂದು, ಓರ್ವ ಗಾಯಗೊಂಡ ಜೊತೆಗಾರನಿಗೆ ಸಹಾಯಮಾಡುವಲ್ಲಿ ಸವಾರ ಡಿಟ್ಟೊ ರಾಮ್‌ರವರು ಮೆರೆದ ಶೌರ್ಯಕ್ಕಾಗಿ, ಅವರಿಗೆ ಜನರಲ್‌ ಕ್ರಾಸ್‌ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು.[೧೨೦]
  • ಲೆಫ್ಟಿನೆಂಟ್‌ ಕರ್ನಲ್‌ ಮಹಮೂದ್‌ ಖಾನ್‌ ದುರಾನಿ, ೧ನೇ ಬಹವಾಲ್‌ಪುರ್‌ ಪದಾತಿಸೈನ್ಯ, ಭಾರತೀಯ ಸಂಸ್ಥಾನ ಪಡೆಗಳು
    • ದುರಾನಿಯವರನ್ನು ಸೆರೆಹಿಡಿದ ಸಮಯದಲ್ಲಿ, ಭಾರತೀಯ ಸಂಸ್ಥಾನ ಪಡೆಗಳ ೧ನೇ ಬಹವಾಲ್‌ಪುರ್‌ ಪದಾತಿಸೈನ್ಯಕ್ಕೆ ಅವರನ್ನು ಸೇರ್ಪಡೆಮಾಡಲಾಗಿತ್ತು. ೧೯೪೨ರಲ್ಲಿ ಮಲಯದಲ್ಲಿನ ಹಿಮ್ಮೆಟ್ಟಿಕೆಯ ಸಂದರ್ಭದಲ್ಲಿ, ಅವರು ಮತ್ತು ಸಣ್ಣ ತುಕಡಿಯಲ್ಲಿನ ಯೋಧರು ತಮ್ಮ ತಾಣವು ಜಪಾನಿ ಪ್ರಾಯೋಜಿತ ಭಾರತೀಯ ರಾಷ್ಟ್ರೀಯತಾವಾದಿ ಸೇನೆಗೆ ರಹಸ್ಯವಾಗಿ ಪ್ರಕಟಿಸಲ್ಪಡುವುದಕ್ಕೆ ಮುಂಚಿತವಾಗಿ ಮೂರು ತಿಂಗಳುಗಳವರೆಗೆ ತಮ್ಮ ಸೆರೆಹಿಡಿಯುವಿಕೆಯನ್ನು ತಪ್ಪಿಸಿಕೊಂಡಿದ್ದರು. INA ಜೊತೆಯಲ್ಲಿ ಸಹಕರಿಸಲು ದುರಾನಿ ನಿರಾಕರಿಸಿದರು ಮತ್ತು ಭಾರತದೊಳಗೆ ಬೇಹುಗಾರರನ್ನು ಒಳನುಗ್ಗಿಸುವುದರೆಡೆಗಿನ ಅವರ ಪ್ರಯತ್ನಗಳಿಗೆ ತಡೆಯೊಡ್ಡಲು ದುರಾನಿ ಕಾರ್ಯನಿರ್ವಹಿಸಿದರು. ೧೯೪೪ರ ಮೇ ತಿಂಗಳಿನಲ್ಲಿ ಅವರನ್ನು ಜಪಾನಿಯರು ಬಂಧಿಸಿ, ವ್ಯವಸ್ಥಿತವಾಗಿ ಉಪವಾಸ ಕೆಡವಿದರು ಮತ್ತು ಚಿತ್ರಹಿಂಸೆಯನ್ನು ನೀಡಿದರು; ಆದರೆ ತಮ್ಮ ಜೊತೆಗಾರರಿಗೆ ನಂಬಿಕೆದ್ರೋಹಮಾಡಲು ದುರಾನಿ ನಿರಾಕರಿಸಿದರು. ಆಗ ಜಪಾನಿಯರು ಅವರನ್ನು INAಗೆ ವರ್ಗಾಯಿಸಿದರು. ಅಲ್ಲಿ ಅವರಿಗೆ ಮತ್ತೊಮ್ಮೆ ಪಾಶವೀಯವಾಗಿ ಚಿತ್ರಹಿಂಸೆ ನೀಡಲಾಯಿತು, ಮತ್ತು, ಒಂದು ಹಂತದಲ್ಲಿ, ಮರಣದಂಡನೆ ವಿಧಿಸಲಾಯಿತು. ತಮ್ಮ ಅಗ್ನಿಪರೀಕ್ಷೆಯ ಉದ್ದಕ್ಕೂ ಅವರು ವಿಚಲಿತರಾಗದೆ ತಮ್ಮ ನಿರ್ಣಯಕ್ಕೆ, ನಿಷ್ಠೆಗೆ ಬದ್ಧರಾಗಿದ್ದರು.[೩೬]
  • ಈಟಿರಾವುತ ಇಸ್ಲಾಂ-ಉದ್‌-ದಿನ್‌, ೯ನೇ ಜಾಟ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ಕೇಂದ್ರಸ್ಥ ಬರ್ಮಾದ ಪ್ಯಾಬ್ವೆ ಎಂಬಲ್ಲಿ ೧೯೪೫ರ ಏಪ್ರಿಲ್‌ ೧೨ರಂದು, ಇತರರನ್ನು ಉಳಿಸಲೆಂದು ಅವರು ತಮ್ಮ ಜೀವವನ್ನೇ ತ್ಯಾಗಮಾಡಿದರು.[೧೨೧]
  • ನಾಯಕ್‌ ಕಿರ್ಪಾ ರಾಮ್‌ ೧೩ನೇ ಗಡಿನಾಡು ಪಡೆ ರೈಫಲ್ಸ್‌ (ಮರಣೋತ್ತರ ಪ್ರಶಸ್ತಿ)
    • ಬೆಂಗಳೂರಿನಲ್ಲಿನ ಒಂದು ವಿಶ್ರಾಂತಿ ಶಿಬಿರದಲ್ಲಿ, ರಣರಂಗದಲ್ಲಿ ಗುಂಡುಹಾರಿಸುವುದರ ಕುರಿತಾದ ಅಭ್ಯಾಸಪಾಠವೊಂದನ್ನು ನಡೆಸುತ್ತಿರುವಾಗ, ಒಂದು ಬಂದೂಕು ಕೈಬಾಂಬು ವಿಫಲಗೊಂಡಿತು ಹಾಗೂ ಅವರ ವಿಭಾಗದಿಂದ ಕೇವಲ ೮ ಗಜಗಳಷ್ಟು ದೂರದಲ್ಲಿ ಬಿದ್ದಿತು. ಇಪ್ಪತ್ತೆಂಟು ವರ್ಷ ವಯಸ್ಸಿನ ಈ ಯೋಧ ಮುಂದಕ್ಕೆ ಧಾವಿಸಿ ಬಂದು, ರಕ್ಷಿಸಿಕೊಳ್ಳುವಂತೆ ಸೈನಿಕರೆಡೆಗೆ ಕೂಗುತ್ತಾ, ಒಂದು ಸುರಕ್ಷಿತ ಅಂತರಕ್ಕೆ ಅದನ್ನು ಎಸೆಯುವ ಪ್ರಯತ್ನಮಾಡಿದರು. ಆದರೆ ಅದು ಅವರ ಕೈಯಲ್ಲೇ ಸ್ಫೋಟಿಸಿತು ಮತ್ತು ಅವರಿಗೆ ಮಾರಣಾಂತಿಕವಾದ ಗಾಯಗಳನ್ನು ಉಂಟುಮಾಡಿತು.
ಆದರೆ ಅವರು ಮಾಡಿದ ತ್ಯಾಗದಿಂದ ಅವರ ಜೊತೆಗಾರರು ಅಪಾಯದಿಂದ ತಪ್ಪಿಸಿಕೊಳ್ಳುವಂತಾಯಿತು.[೧೨೨]
  • ಹವಾಲ್ದಾರ್‌ ಅಬ್ದುಲ್‌ ರಹಮಾನ್‌, ೯ನೇ ಜಾಟ್‌ ಸೇನಾಪಡೆ (ಮರಣೋತ್ತರ ಪ್ರಶಸ್ತಿ)
    • ಜಾವಾದಲ್ಲಿನ ಕ್ಲೆಟೆಕ್‌ ಎಂಬಲ್ಲಿ ೧೯೪೫ರ ಫೆಬ್ರುವರಿ ೨೨ರಂದು, ವಿಮಾನದ ಅಪ್ಪಳಿಸುವಿಕೆಯೊಂದರ ನಿದರ್ಶನದಲ್ಲಿ, ಕಾಪಾಡುವ ಪ್ರಯತ್ನ ಮಾಡುವ ಮೂಲಕ ಅವರು ತೋರಿಸಿದ ಶೌರ್ಯಕ್ಕಾಗಿ ಅವರಿಗೆ ಈ ಭೂಷಣವನ್ನು ಪ್ರದಾನ ಮಾಡಲಾಯಿತು.[೧೨೩]
  • ಲೆಫ್ಟಿನೆಂಟ್‌ ಸುಬ್ರಮಣಿಯನ್‌, ರಾಣಿ ವಿಕ್ಟೋರಿಯಾ’ಸ್‌ ಓನ್‌ ಮದ್ರಾಸ್‌ ಸ್ಯಾಪರ್ಸ್‌ ಅಂಡ್‌ ಮೈನರ್ಸ್‌ (ಮರಣೋತ್ತರ ಪ್ರಶಸ್ತಿ)
    • ಒಂದು ಸಿಡಿಗುಂಡಿನ ಸ್ಫೋಟವೊಂದರಿಂದ ಇತರರನ್ನು ಸಂರಕ್ಷಿಸುವ ಸಲುವಾಗಿ ಸ್ವತಃ ತನ್ನನ್ನೇ ಆ ಸಿಡಿಗುಂಡಿನ ಮೇಲೆ ಎಸೆದುಕೊಳ್ಳುವ ಮೂಲಕ, ೧೯೪೪ರ ಜೂನ್‌ ೨೪ರಂದು ಇವರು ತಮ್ಮ ಜೀವವನ್ನೇ ತ್ಯಾಗಮಾಡಿದರು.[೧೨೪]

ಪರಿಣಾಮಗಳು[ಬದಲಾಯಿಸಿ]

IIನೇ ಜಾಗತಿಕ ಸಮರದಿಂದಾಗಿ ೩೬,೦೦೦ಕ್ಕೂ ಹೆಚ್ಚಿನ ಭಾರತೀಯ ಬಂಟರು ತಮ್ಮ ಪ್ರಾಣಗಳನ್ನು ಕಳೆದುಕೊಂಡರೆ, ೩೪,೩೫೪ಕ್ಕೂ ಹೆಚ್ಚಿನ ಮಂದಿ ಗಾಯಗೊಂಡರು,[೩] ಮತ್ತು ೬೭,೩೪೦ ಮಂದಿ ಯುದ್ಧ ಕೈದಿಗಳು ಎನಿಸಿಕೊಂಡರು.[೪] ೧೯೪೭ರಲ್ಲಿ ಸ್ವಾತಂತ್ರ್ಯ ಮತ್ತು ದೇಶ-ವಿಭಜನೆಯು ಅನುಸರಿಸಿಕೊಂಡು ಬಂದಿದ್ದರಿಂದಾಗಿ, ಬ್ರಿಟಿಷ್‌ ಭಾರತೀಯ ಸೇನೆಯಾಗಿ ಭಾರತೀಯ ಸೇನೆಯು ಕೊನೆಯ ಬಾರಿಗೆ ಹೋರಾಡಿದ್ದು IIನೇ ಜಾಗತಿಕ ಸಮರದಲ್ಲಿಯೇ ಎನ್ನಬೇಕು.[೧೨೫] ವಿಭಜನೆಯ ನಂತರ, ಹೊಸ ಭಾರತೀಯ ಸೇನೆ ಮತ್ತು ಪಾಕಿಸ್ತಾನದ ಸೇನೆಯ ನಡುವೆ ಬ್ರಿಟಿಷ್‌ ಭಾರತೀಯ ಸೇನೆಯು ವಿಭಜಿಸಲ್ಪಟ್ಟಿತು. ೧೯೪೭ರ ಜೂನ್‌ ೩ರಂದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಉಪಖಂಡದ ವಿಭಜನೆಗೆ ಸಂಬಂಧಿಸಿದ ಯೋಜನೆಯನ್ನು ಬ್ರಿಟಿಷ್‌ ಸರ್ಕಾರವು ಪ್ರಕಟಿಸಿತು. ೧೯೪೭ರ ಜೂನ್‌ ೩೦ರಂದು, ಸಶಸ್ತ್ರ ಪಡೆಗಳ ವಿಭಜನೆಗೆ ಸಂಬಂಧಿಸಿದ ಕಾರ್ಯವಿಧಾನವನ್ನು ಪರಸ್ಪರ ಒಪ್ಪಿಗೆಯಿಂದ ನಿರ್ಧರಿಸಲಾಯಿತು. ಘಟಕಗಳು, ಉಗ್ರಾಣ ಮತ್ತು ಇನ್ನೂ ಅನೇಕ ಅಂಗಗಳ ವಿಭಜನೆಯು ಸರಾಗವಾಗಿ ನಡೆಯುವುದನ್ನು ಖಾತ್ರಿಪಡಿಸಲು, ಆಗ ಭಾರತದ ಪ್ರಧಾನ ದಂಡನಾಯಕನಾಗಿದ್ದ ಫೀಲ್ಡ್‌ ಮಾರ್ಷಲ್‌ ಕ್ಲೌಡೆ ಔಚಿನ್‌ಲೆಕ್‌‌‌ನನ್ನು ಪರಮೋಚ್ಚ ದಳಪತಿಯಾಗಿ ನೇಮಿಸಲಾಯಿತು. ೧೯೪೭ರ ಆಗಸ್ಟ್‌ ೧೫ರ ವೇಳೆಗೆ ಎರಡೂ ದೇಶಗಳು ತಮ್ಮ ತಮ್ಮ ಸಶಸ್ತ್ರ ಪಡೆಗಳ ಕಾರ್ಯಾತ್ಮಕ ನಿಯಂತ್ರಣವನ್ನು ಹೊಂದುತ್ತವೆ ಎಂಬುದಾಗಿ ೧೯೪೭ರ ಜುಲೈ ೧ರಂದು ಪ್ರಕಟಿಸಲಾಯಿತು.[೧೨೬]

ಇವನ್ನೂ ಗಮನಿಸಿ[ಬದಲಾಯಿಸಿ]

  • WWIIನಲ್ಲಿನ ಭಾರತೀಯ ತುಕಡಿಗಳ ಪಟ್ಟಿ

ಟಿಪ್ಪಣಿಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ‌ಸಮ್ನರ್‌, ಪುಟ ೨೫ ಉಲ್ಲೇಖ ದೋಷ: Invalid <ref> tag; name "su25" defined multiple times with different content
  2. "Commonwealth War Graves Commission Report on India 2007–2008" (PDF). Commonwealth War Graves Commission. Retrieved 2009-09-07.
  3. ೩.೦ ೩.೧ ೩.೨ Sherwood, Marika. "Colonies, Colonials and World War Two". BBC History. Retrieved 2009-10-08.
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ ಸಮ್ನರ್‌, ಪುಟ ೨೩
  5. ಸಮ್ನರ್‌, ಪುಟ ೧೫
  6. ಲೂಯಿಸ್‌ & ಬ್ರೌನ್‌, ಪುಟ ೨೮೪
  7. ೭.೦ ೭.೧ ಸಮ್ನರ್‌, ಪುಟ ೧೩
  8. ಲೂಯಿಸ್‌ & ಬ್ರೌನ್‌, ಪುಟ ೨೮೫
  9. ಪೆರ್ರಿ, ಪುಟ ೧೦೧
  10. ೧೦.೦ ೧೦.೧ ೧೦.೨ ೧೦.೩ ೧೦.೪ ಪೆರ್ರಿ, ಪುಟ ೧೦೨
  11. ೧೧.೦ ೧೧.೧ ೧೧.೨ ಪೆರ್ರಿ, ಪುಟ ೧೦೩
  12. ಪೆರ್ರಿ, ಪುಟಗಳು ೧೦೩–೧೦೪
  13. ೧೩.೦ ೧೩.೧ ೧೩.೨ ೧೩.೩ ೧೩.೪ ೧೩.೫ ೧೩.೬ ಪೆರ್ರಿ, ಪುಟ ೧೦೮
  14. ಪೆರ್ರಿ, ಪುಟ ೧೧೨
  15. ೧೫.೦ ೧೫.೧ ೧೫.೨ ೧೫.೩ ಪೆರ್ರಿ, ಪುಟ ೧೧೧
  16. ಜೆಫ್ರಿಸ್‌ & ಆಂಡರ್‌ಸನ್‌, ಪುಟಗಳು ೧೯–೨೦
  17. ಮೋರ್‌ಮನ್‌ (೨೦೦೫), ಪುಟ ೧೬೪
  18. ಜೆಫ್ರಿಸ್‌ & ಆಂಡರ್‌ಸನ್‌ ಪುಟ ೨೧
  19. ಜೆಫ್ರಿಸ್‌ & ಆಂಡರ್‌ಸನ್‌, ಪುಟ ೨೩
  20. ಜೆಫ್ರಿಸ್‌ & ಆಂಡರ್‌ಸನ್‌, ಪುಟ ೨೪
  21. ಸ್ಲಿಮ್‌, ಪುಟ ೩೭೯
  22. ಸ್ಲಿಮ್‌, ಪುಟ ೪೭೭
  23. ೨೩.೦ ೨೩.೧ ೨೩.೨ ೨೩.೩ ೨೩.೪ ಪೆರ್ರಿ, ಪುಟ ೧೧೧೪
  24. ೨೪.೦ ೨೪.೧ ಅಲೆನ್‌, ಪುಟಗಳು ೧೮೭–೧೮೮
  25. "50th Parachute Brigade". Order of Battle. Retrieved 2009-10-12.
  26. "44 Indian Airborne Division". Order of Battle. Archived from the original on 2007-09-30. Retrieved 2009-10-12.
  27. ೨೭.೦ ೨೭.೧ ಬ್ರೇಲಿ, ಪುಟ ೨೨
  28. "44 Indian Airborne Division". Order of Battle. Archived from the original on 2007-09-30. Retrieved 2009-10-10.
  29. ೨೯.೦ ೨೯.೧ "Regiment of Artillery". Global Security. Retrieved 2009-10-11.
  30. "Index data". Order of Battle. Archived from the original on 2008-06-14. Retrieved 2009-10-11.
  31. "Indian Engineers". Order of Battle. Retrieved 2009-10-12.
  32. ಬ್ರೌನ್‌, ಪುಟ ೧೪೦
  33. ಬ್ಲಂಟ್‌, ಪುಟ ೬೧
  34. ೩೪.೦ ೩೪.೧ ಬ್ರೌನ್‌, ಪುಟ ೧೩೪
  35. "Indian Corps unit index". Order of Battle. Archived from the original on 2010-02-10. Retrieved 2009-10-10.
  36. ೩೬.೦ ೩೬.೧ "Mahmood Khan Durrani". George Cross database. Archived from the original on 2008-05-31. Retrieved 2009-10-09.
  37. ಜಾಕ್ಸನ್‌, ಪುಟಗಳು ೩೭೬–೩೭೭
  38. ಸ್ಲಿಮ್‌, ಪುಟ ೨೧೬
  39. ಮೋರ್‌ಮನ್‌ & ಆಂಡರ್‌ಸನ್‌, ಪುಟ ೪
  40. ೪೦.೦ ೪೦.೧ ೪೦.೨ ಮೋರ್‌ಮನ್‌ & ಆಂಡರ್‌ಸನ್‌, ಪುಟ ೫
  41. "HQ British Troops Palestine and Transjordan". Order of Battle. Archived from the original on 2011-08-14. Retrieved 2008-12-14.
  42. "History and Commanders of 9 Army [British Commonwealth]". Order of Battle. Archived from the original on 2012-05-16. Retrieved 2008-12-14.
  43. "Commanders of the 9th Army". Order of Battle. Archived from the original on 2012-05-16. Retrieved 2008-12-14.
  44. ಲೈಮನ್‌ & ಗೆರಾರ್ಡ್‌, ಪುಟ ೧೯
  45. ಲೈಮನ್‌ & ಗೆರಾರ್ಡ್‌, ಪುಟಗಳು ೭–೮
  46. ೪೬.೦ ೪೬.೧ ಬ್ರೇಲಿ & ಚಾಪೆಲ್‌, ಪುಟ ೪
  47. ಬ್ರೇಲಿ & ಚಾಪೆಲ್‌, ಪುಟ ೫
  48. "Southern Army Subordinates". Order of Battle. Retrieved 2009-10-11.[ಶಾಶ್ವತವಾಗಿ ಮಡಿದ ಕೊಂಡಿ]
  49. "North Western Army". Order of Battle. Archived from the original on 2007-07-06. Retrieved 2009-10-14.
  50. ೫೦.೦ ೫೦.೧ ೫೦.೨ ೫೦.೩ ೫೦.೪ ೫೦.೫ ರಿಡಿಕ್‌, ಪುಟ ೧೧೫
  51. ೫೧.೦ ೫೧.೧ ೫೧.೨ ೫೧.೩ ೫೧.೪ ೫೧.೫ ೫೧.೬ ೫೧.೭ ರಿಡಿಕ್‌, ಪುಟ ೧೧೬
  52. ಬ್ರೌನ್‌, ಪುಟ ೯೮
  53. ೫೩.೦ ೫೩.೧ ಬ್ರೌನ್‌, ಪುಟ ೧೦೧
  54. ಫೋರ್ಡ್‌ & ವೈಟ್‌ ಪುಟ ೨೬
  55. ಬ್ರೌನ್‌, ಪುಟ ೧೦೩–೧೧೦
  56. "The Invasion of British Somaliland". Stone & Stone online database of World War II. Retrieved 2009-10-05.
  57. ಕಾಂಪ್ಟನ್‌ ಮೆಕೆಂಜೀ, ಪುಟ ೧೩೦
  58. ಕಾಂಪ್ಟನ್‌ ಮೆಕೆಂಜೀ, ಪುಟಗಳು ೧೩೨–೧೩೩
  59. ಕಾಂಪ್ಟನ್‌ ಮೆಕೆಂಜೀ, ಪುಟಗಳು ೧೩೦–೧೩೬
  60. ೬೦.೦ ೬೦.೧ ಪೆರ್ರಿ, ಪುಟ ೧೦೭
  61. ಚರ್ಚಿಲ್‌, ಪುಟ ೩೬
  62. ವಾರೆನ್‌, ಪುಟ ೨೭೫
  63. ಚರ್ಚಿಲ್‌, ಪುಟಗಳು ೮೭–೮೯
  64. ಸ್ಲಿಮ್‌, ಪುಟ ೧೭.
  65. ಸ್ಲಿಮ್‌, ಪುಟ ೧೮
  66. ಲಿಡ್ಲ್‌ ಹಾರ್ಟ್‌, ಪುಟ ೨೧೮
  67. ೬೭.೦ ೬೭.೧ "7th Armoured Brigade". Ministry of Defence. Archived from the original on 2009-08-21. Retrieved 2009-10-08.
  68. ಅಲೆನ್‌, ಪುಟ ೧೧೫
  69. ಪೆರ್ರಿ, ಪುಟ ೧೧೦
  70. ಸ್ಲಿಮ್‌, ಪುಟ ೨೮೪
  71. ಅಲೆನ್‌, ಪುಟಗಳು ೧೫೯–೧೬೨
  72. "Battle of Kohima" (PDF). Ministry of Defence.UK. Archived from the original (PDF) on 2008-03-12. Retrieved 2009-10-11.
  73. ‌ಮೋರ್‌ಮನ್ (೨೦೦೫), ಪುಟಗಳು ೧೭೫–೧೯೭
  74. ಮೋರ್‌ಮನ್‌ (೨೦೦೫), ಪುಟ ೧೮೧
  75. ಹೈನಿಂಗ್‌, ಪುಟಗಳು ೧೬೬–೧೬೭
  76. "25th Indian Division". Burma Star Association. Archived from the original on 2009-07-12. Retrieved 2009-10-14.
  77. ವಾರೆನ್‌, ಪುಟಗಳು ೨೯೭–೨೯೯
  78. ಹಾರ್ಪರ್‌‌, ಪುಟ ೧೫೪
  79. Wong, Gillian. "Singapore Marks Japan's WW II Surrender Anniversary". The Irrawaddy. Archived from the original on 2010-08-12. Retrieved 2009-10-15. {{cite web}}: Italic or bold markup not allowed in: |publisher= (help)
  80. ರೆನಾಲ್ಡ್ಸ್‌, ಪುಟ ೪೧೩
  81. ಡನ್‌, ಪುಟಗಳು ೧೭೬–೧೭೭
  82. ಮೆಕ್‌ಮಿಲನ್‌, ಪುಟ ೧೯
  83. ಜಾಕ್ಸನ್‌, ಪುಟ ೩೬೬
  84. ಚಾಪೆಲ್‌, ಪುಟ ೫೮
  85. ಕಾರ್ವರ್‌, ಪುಟ ೯೦
  86. ಕಾರ್ವರ್‌, ಪುಟ ೧೦೩
  87. ಮಜ್‌ಡಲಾನಿ, ಪುಟ ೧೨೮
  88. ಬಡ್ಸೆ, ಪುಟ ೧೫೦
  89. ಬಡ್ಸೆ, ಪುಟ ೧೫೪
  90. ಝೆಲ್ಕೆ, ಪುಟ ೩೪೦
  91. ೯೧.೦ ೯೧.೧ ೯೧.೨ ೯೧.೩ "The Tiger Triumphs". HMS Stationary Office for the Government of India. Archived from the original on 2008-12-01. Retrieved 2009-10-12. {{cite web}}: Text "year1946" ignored (help)
  92. ಹಾಯ್ಟ್‌, ಪುಟ ೧೮೬
  93. "Military Honours and Awards". Ministry of Defence. Retrieved 2007-01-30.
  94. "History Section - Sappers VCs". Royal Engineers Museum. Archived from the original on 2006-08-10. Retrieved 2009-10-09.
  95. "Richhpal Ram". National Archives. Retrieved 2009-10-09.
  96. "Arthur Edward Cumming". Find a grave. Retrieved 2009-10-09.
  97. "Chhelu Ram VC". Find a grave. Retrieved 2009-10-09.
  98. The London Gazette: (Supplement) no. 36053. p. 2719. 11 June 1943. Retrieved 2009-05-29.
  99. The London Gazette: (Supplement) no. 36764. p. 4900. 26 October 1944. Retrieved 2009-02-24.
  100. The London Gazette: (Supplement) no. 36715. p. 4423. 26 September 1944. Retrieved 2009-02-27.
  101. "Fazel Din". Burma Star Association. Archived from the original on 2009-07-20. Retrieved 2009-10-09.
  102. The London Gazette: (Supplement) no. 36190. p. 4347. 28 September 1943. Retrieved 2009-05-29.
  103. The London Gazette: (Supplement) no. 37107. p. 2831. 1 June 1945. Retrieved 2008-03-04.
  104. The London Gazette: (Supplement) no. 37195. p. 3861. 24 July 1945. Retrieved 2009-02-26.
  105. "Jemadar Abdul Hafiz". Ministry of Defence. Archived from the original on 2008-10-18. Retrieved 2009-10-09.
  106. ೧೦೬.೦ ೧೦೬.೧ ೧೦೬.೨ ೧೦೬.೩ ೧೦೬.೪ ೧೦೬.೫ "The Victoria Cross Registers". The National Archives. Retrieved 2009-10-09.
  107. The London Gazette: (Supplement) no. 36690. p. 4157-4158. 5 September 1944. Retrieved 2009-02-26.
  108. The London Gazette: (Supplement) no. 36785. p. 5129. 7 November 1944. Retrieved 2008-01-14.
  109. The London Gazette: (Supplement) no. 36730. p. 4569. 3 October 1944. Retrieved 2009-05-29.
  110. "Naik Gian Singh". Ministry of Defence. Archived from the original on 2009-03-29. Retrieved 2009-10-09.
  111. "Nand Singh". National Army Museum. Archived from the original on 2009-11-12. Retrieved 2009-10-09.
  112. ಶರ್ನಾ, ಪುಟ ೨೨೨
  113. The London Gazette: (Supplement) no. 36742. p. 4673. 10 October 1944. Retrieved 2009-05-29.
  114. "Yeshwant Ghadge". Find a grave. Retrieved 200-10-09. {{cite web}}: Check date values in: |accessdate= (help)
  115. The London Gazette: (Supplement) no. 36950. p. 1039. 20 February 1945. Retrieved 2009-05-29.
  116. "Ali Haidar VC". London: The Guardian. 27 July 1999. Retrieved 2009-10-09. {{cite news}}: Italic or bold markup not allowed in: |publisher= (help)
  117. "Sepoy Kamal Ram". Ministry of Defence. Archived from the original on 2009-10-25. Retrieved 2009-10-09.
  118. The London Gazette: (Supplement) no. 36860. p. 5933. 26 December 1944. Retrieved 2009-05-29.
  119. The London Gazette: (Supplement) no. 37536. p. 1949. 16 April 1946. Retrieved 2007-12-01.
  120. "Ditto Ram". George Cross database. Archived from the original on 2008-05-31. Retrieved 2009-10-09.
  121. "Islam-ud-Din". George Cross database. Archived from the original on 2008-05-31. Retrieved 2009-10-09.
  122. "Kirpa Ram". George Cross database. Archived from the original on 2008-05-31. Retrieved 2009-10-09.
  123. "Abdul Rahman". George Cross database. Archived from the original on 2007-11-16. Retrieved 2007-11-18.
  124. "Subramanian". George Cross database. Archived from the original on 2008-05-31. Retrieved 2009-10-09.
  125. ಪೆರ್ರಿ, ಪುಟ ೧೧೯
  126. Husain, Noor A. "The Evolution of The Pakistan Army". Pakdefence.info. Archived from the original on 2012-03-11. Retrieved 2009-10-06.

ಉಲ್ಲೇಖಗಳು[ಬದಲಾಯಿಸಿ]

  • Allen, Louis (1984). Burma: The Longest War. Dent Paperbacks. ISBN 0-460-02474-4.
  • Badsey, Stephen (2000). The Hutchinson atlas of World War Two battle plans: before and after. Taylor & Francis. ISBN 1579582656.
  • Blunt, Alison (2005). Domicile and diaspora: Anglo-Indian women and the spatial politics of home. Wiley Blackwell. ISBN 1405100559.
  • Brayley, Martin; Chappell, Mike (2002). The British Army 1939–45 (3): The Far East. Osprey Publishing. ISBN 1841762385.
  • Brown, F Yeats (2007). Martial India. Read Books. ISBN 1406733970.
  • Carver, Field Marshall Lord (2001). The Imperial War Museum Book of the War in Italy 1943-1945. Sidgwick & Jackson. ISBN 0330482300.
  • Chappell, Mike (1993). The Gurkhas. Osprey Publishing. ISBN 1855323575.
  • Churchill, Winston (1986). The Hinge of Fate Volume 4 of Second World War. Houghton Mifflin Harcourt. ISBN 0395410584.
  • Dunn, Peter M (1985). The first Vietnam War. C Hurst & Co. ISBN 0905838874.
  • Ford, Ken; White, John (2008). Gazala 1942: Rommel's Greatest Victory. Osprey Publishing. ISBN 1846032644.
  • Harper, Stephen (1985). Miracle of deliverance: the case for the bombing of Hiroshima and Nagasaki. Sidgwick & Jackson. ISBN 0283992824.
  • Haining, Peter (2007). The Banzai Hunters: The Forgotten Armada of Little Ships That Defeated the Japanese, 1944-45. Anova Books. ISBN 1844860523.
  • Hoyt, Edwin Palmer. Backwater war: the Allied campaign in Italy, 1943-1945. Greenwood Publishing Group. ISBN 0275974782.
  • Jackson, Ashley (2005). The British Empire and the Second World War. Continuum International Publishing Group. ISBN 1852854170.
  • Jeffreys, Alan; Anderson, Duncan (2005). The British Army in the Far East 1941-45. Osprey Publishing. ISBN 1841767905.
  • Liddle Hart, Basil (1970). History of the Second World War. G P Putnam. ISBN 0306809125.
  • Louis, William Roger; Brown, Judith M (2001). The Oxford History of the British Empire: The Twentieth Century Volume 4 of The Oxford History of the British Empire. Oxford University Press. ISBN 0199246793.
  • Lynan, Robert; Gerrard, Howard (2006). Iraq 1941: the battles for Basra, Habbaniya, Fallujah and Baghdad. Osprey Publishing. ISBN 1841769916.
  • McMillan, Richard (2005). The British occupation of Indonesia 1945-1946. Routledge. ISBN 0415355516.
  • Moreman, Tim; Anderson, Duncan (2007). Desert Rats: British 8th Army in North Africa 1941-43. Osprey Publishing. ISBN 1846031443.
  • Moreman, T R (2005). The jungle, the Japanese and the British Commonwealth armies at war, 1941-45. Routledge. ISBN 0714649708.
  • Perry, Frederick William (1988). The Commonwealth armies: manpower and organisation in two world wars. Manchester University Press ND. ISBN 0719025958.
  • Reynolds, Bruce E (2005). Thailand's secret war: the Free Thai, OSS, and SOE during World War II. Cambridge UNiversity. ISBN 0521836018.
  • Riddick, John F (2006). The history of British India. Greenwood Publishing Group. ISBN 0313322805.
  • Sharma, Gautam (1990). Valour and Sacrifice: Famous Regiments of the Indian Army. Allied Publishers. ISBN 817023140X.
  • Slim, William (1956). Defeat Into Victory. Buccaneer Books. ISBN 1568490771.
  • Sumner, Ian (2001). The Indian Army 1914-1947. Osprey Publishing. ISBN 1841761966.
  • Warren, Alan (2007). Britain's Greatest Defeat: Singapore 1942. Continuum International Publishing Group. ISBN 1852855975.