ಹಂಸಲೇಖ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಂಸಲೇಖ
ಹಿನ್ನೆಲೆ ಮಾಹಿತಿ
ಹೆಸರುಡಾ. ಹಂಸಲೇಖ
ಜನ್ಮನಾಮಗಂಗರಾಜು
ಜನನ೨೩ ಜೂನ್ ೧೯೫೧
ತುಳಸಿಕಟ್ಟೆ, ಅಕ್ಕಿಪೇಟೆ, ಬೆಂಗಳೂರು
ಮೂಲಸ್ಥಳಮೈಸೂರು, ಕರ್ನಾಟಕ
ಸಂಗೀತ ಶೈಲಿಚಿತ್ರ ಸಂಗೀತ
ರಂಗಭೂಮಿ
ವಿಶ್ವ ಸಂಗೀತ
ವೃತ್ತಿಸಂಗೀತ ಸಂಯೋಜನೆ, ವಾದ್ಯ ಸಂಗೀತ, ಸಾಹಿತಿ
ವಾದ್ಯಗಳುಕೀಬೋರ್ಡ್, ಗಿಟಾರ್, ಪಿಯಾನೋ, ಹಾರ್ಮೋನಿಯಂ, ತಾಳವಾದ್ಯ
ಸಕ್ರಿಯ ವರ್ಷಗಳು1981–ಈವರೆಗೆ

ಹಂಸಲೇಖ (ಜನನ: ಜೂನ್ ೨೩, ೧೯೫೧) ಅವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು "ಗಂಗರಾಜು". ೧೯೭೩ ರಲ್ಲಿ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಐನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.[೧][೨]

ಹಂಸಲೇಖ ಅವರ "ವಿಶ್ವರಂಗಭೂಮಿ" ಪರಿಕಲ್ಪನೆ.

ಹಂಸಲೇಖ ಅವರ "ವಿಶ್ವರಂಗಭೂಮಿ " ಪರಿಕಲ್ಪನೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ವಸತಿ ಮತ್ತು ವಿದ್ಯಾಲಯ ನಿರ್ಮಾಣ ಸಾಗಿದೆ. ಇನ್ನು ಎರಡು ವರ್ಷದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲೆ-ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕನಸಿದೆ. ಆ ವಿದ್ಯಾರ್ಥಿಗಳು ಸೃಷ್ಟಿಸಲಿರುವ ಬೃಹತ್ ದೇಸಿ ಸೊಗಡಿನ ನೃತ್ಯ ರೂಪಕಗಳು ಅಲ್ಲಿ ಪ್ರದರ್ಶಿಸಲ್ಪಡುತ್ತವೆ. ಮೈಸೂರನ್ನು ನೋಡ ಬಯಸುವ ಪ್ರವಾಸಿಗರಿಗೆ ನಡುವಿನಲ್ಲಿಯೇ ಒಂದು ಸಾಂಸ್ಕೃತಿಕ ಲೋಕದ ದರ್ಶನವನ್ನು ಹಂಸಲೇಖ ಅವರ "ವಿಶ್ವರಂಗಭೂಮಿ" ನೀಡಲಿದೆ.[೩]

ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ

(ಸೂಚನೆ: ಈ ಪಟ್ಟಿಯ ಬಹುತೇಕ ಚಿತ್ರಗಳಿಗೆ ಅವರದೇ ಸಾಹಿತ್ಯ ಕೂಡ ಆಗಿರುತ್ತದೆ)

ವರ್ಷ ಚಿತ್ರ
೧೯೭೩ ತ್ರಿವೇಣಿ = ನೀನಾ ಭಗವಂತ ಸಾಹಿತ್ಯ.
೧೯೮೧ ರಾಹು ಚಂದ್ರ.
೧೯೮೬ ಹೆಣ್ಣೇ ನಿನಗೇನು ಬಂಧನ, ನಾನು ನನ್ನ ಹೆಂಡತಿ (ಸಾಹಿತ್ಯ)
೧೯೮೭ ಪ್ರೇಮಲೋಕ, ಅಂತಿಮ ತೀರ್ಪು, ಬೇಡಿ, ದಿಗ್ವಿಜಯ, ದೈವ ಶಕ್ತಿ, ಮಿಸ್ಟರ್ ರಾಜ, ಸಂಗ್ರಾಮ.
೧೯೮೮ ಅಂಜದ ಗಂಡು, ಅವಳೇ ನನ್ನ ಹೆಂಡತಿ, ಬಾಳೊಂದು ಭಾವಗೀತೆ, ಧರ್ಮ ಪತ್ನಿ, ಕಿರಾತಕ, ಮಾತೃದೇವೋಭವ, ಪ್ರೇಮ ತಪಸ್ವಿ, ರಣಧೀರ, ರಣರಂಗ, ಸಾಂಗ್ಲಿಯಾನ , ವಿಜಯಖಡ್ಗ.
೧೯೮೯ ಅಮಾನುಷ, ಅನಂತನ ಅವಾಂತರ, ಅವನೇ ನನ್ನ ಗಂಡ, ಸಿ.ಬಿ.ಐ. ಶಂಕರ್ , ಇಂದ್ರಜೀತ್, ಕಿಂದರ ಜೋಗಿ, ನರಸಿಂಹ , ಒಂಟಿ ಸಲಗ, ಪರಶುರಾಮ, ಪೋಲಿ ಹುಡುಗ, ಪ್ರೇಮಾಗ್ನಿ, ಸಿಂಗಾರಿ-ಬಂಗಾರಿ, ಸುರಸುಂದರಾಂಗ, ಯುದ್ಧಕಾಂಡ, ಯುಗಪುರುಷ.
೧೯೯೦ ಆಟ ಬೊಂಬಾಟ , ಆವೇಶ, ಅಭಿಮನ್ಯು, ಅನಂತ ಪ್ರೇಮ, ಬಣ್ಣದ ಗೆಜ್ಜೆ, ಚಾಲೆಂಜ್, ಕಾಲೇಜ್ ಹೀರೋ, ಹೊಸ ಜೀವನ , ಕೆಂಪು ಗುಲಾಬಿ, ಮುತ್ತಿನ ಹಾರ, ನಮ್ಮೂರ ಹಮ್ಮೀರ, ನಿಗೂಢ ರಹಸ್ಯ , ಪ್ರತಾಪ್, ರಾಣಿ ಮಹಾರಾಣಿ, ಎಸ್.ಪಿ.ಸಾಂಗ್ಲಿಯಾನ (ಭಾಗ ೨) , ಸಿಡಿದೆದ್ದ ಗಂಡು, ತ್ರಿನೇತ್ರ.
೧೯೯೧ ಅಜಗಜಾಂತರ, ಅನಾಥ ರಕ್ಷಕ, ಭುಜಂಗಯ್ಯನ ದಶಾವತಾರ, ಗರುಡ ಧ್ವಜ, ಹತ್ಯಾಕಾಂಡ, ಕಲಿಯುಗ ಭೀಮ, ನಾಯಕ, ನವತಾರೆ, ನೀನು ನಕ್ಕರೆ ಹಾಲು ಸಕ್ಕರೆ, ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ, ಪುಂಡ ಪ್ರಚಂಡ ,ರಾಮಾಚಾರಿ, ರೌಡಿ ಮತ್ತು ಎಂ.ಎಲ್.ಎ, ಎಸ್.ಪಿ.ಭಾರ್ಗವಿ, ಶಾಂತಿ ಕ್ರಾಂತಿ, ಶಿವರಾಜ್, ತೇಜ, ವೀರ ಧೀರ
೧೯೯೨ ಅತಿ ಮಧುರ ಅನುರಾಗ, ಬೆಳ್ಳಿ ಕಾಲುಂಗುರ, ಚೈತ್ರದ ಪ್ರೇಮಾಂಜಲಿ, ಚಿಕ್ಕೆಜಮಾನ್ರು, ಚಿತ್ರಲೇಖ, ಗಂಧರ್ವ, ಗೋಪಿಕೃಷ್ಣ, ಗುರುಬ್ರಹ್ಮ, ಹಳ್ಳಿ ಮೇಷ್ಟ್ರು, ಹೊಸ ಕಳ್ಳ ಹಳೇ ಕುಳ್ಳ, ಝೇಂಕಾರ, ಕ್ಷೀರ ಸಾಗರ, ಮಲ್ಲಿಗೆ ಹೂವೆ, ಮಣ್ಣಿನ ದೋಣಿ, ಮರಣ ಮೃದಂಗ, ನನ್ನ ತಂಗಿ, ಪೋಲೀಸ್ ಫೈಲ್, ಪುರುಷೋತ್ತಮ, ಸಾಹಸಿ, ಸೋಲಿಲ್ಲದ ಸರದಾರ, ಶ್ರೀರಾಮಚಂದ್ರ, ವಜ್ರಾಯುಧ, ಎಂಟೆದೆ ಭಂಟ
೧೯೯೩ ಆಕಸ್ಮಿಕ, ಆತಂಕ, ಅಣ್ಣಯ್ಯ, ಅನುರಾಗದ ಅಲೆಗಳು, ಅಪೂರ್ವ ಜೋಡಿ, ಬಾ ನಲ್ಲೆ ಮಧುಚಂದ್ರಕೆ, ಬೇವು ಬೆಲ್ಲ, ಭಗವಾನ್ ಶ್ರೀ ಸಾಯಿಬಾಬಾ, ಚಿರಬಾಂಧವ್ಯ, ಗಡಿಬಿಡಿ ಗಂಡ, ಗೋಲಿಬಾರ್, ಹೂವು ಹಣ್ಣು, ಹೃದಯ ಬಂಧನ, ಜೈಲರ್ ಜಗನ್ನಾಥ್, ಕಾದಂಬರಿ, ಕಲ್ಯಾಣ ರೇಖೆ, ಕೆಂಪಯ್ಯ ಐ.ಪಿ.ಎಸ್, ಕುಂಕುಮ ಭಾಗ್ಯ, ಮಾಂಗಲ್ಯ ಬಂಧನ, ಮನೆ ದೇವ್ರು, ಮಿಡಿದ ಹೃದಯಗಳು, ಮೋಜಿನ ಮದುವೆ, ರಾಜಕೀಯ, ರೂಪಾಯಿ ರಾಜ, ಸರ್ಕಾರಕ್ಕೆ ಸವಾಲ್, ಶೃಂಗಾರ ರಾಜ, ವಾಂಟೆಡ್, ಶೃ೦ಗಾರ ಕಾವ್ಯ, ಮು೦ಜಾನೆಯ ಮ೦ಜು, ಮೌನ ಸ೦ಗ್ರಾಮ.
೧೯೯೪ ಚಿನ್ನ, ಚಿನ್ನ ನೀ ನಗುತಿರು, ಗೋಪಿ ಕಲ್ಯಾಣ, ಹಾಲುಂಡ ತವರು, ಹೊಂಗಿರಣ, ಜಾಣ, ಕರುಳಿನ ಕೂಗು, ಲಾಕಪ್ ಡೆತ್, ಮಹಾ ಕ್ಷತ್ರಿಯ, ಮಕ್ಕಳ ಸಾಕ್ಷಿ, ಮೇಘ ಮಾಲೆ, ಮುಸುಕು, ಮುತ್ತಣ್ಣ, ರಸಿಕ, ಸಾಮ್ರಾಟ್, ಸಮ್ಮಿಲನ, ಸಿಡಿದೆದ್ದ ಪಾಂಡವರು, ಟೈಮ್ ಬಾಂಬ್
೧೯೯೫ ಚಿರಂಜೀವಿ ರಾಜೇಗೌಡ, ದೀರ್ಘ ಸುಮಂಗಲಿ, ದೊರೆ, ಈಶ್ವರ್, ಗಾನಯೋಗಿ ಪಂಚಾಕ್ಷರಿ ಗವಾಯಿ, ಗೌರಿಶಂಕರ, ಹಿಮಪಾತ, ಕಲ್ಯಾಣೋತ್ಸವ, ಕೋಣ ಈದೈತೆ, ಮಧುರ ಮೈತ್ರಿ, ಮಿಸ್ಟರ್ ಅಭಿಷೇಕ್, ಮೋಜುಗಾರ ಸೊಗಸುಗಾರ, ಮಿಸ್ಟರ್ ವಾಸು, ಮುತ್ತಿನಂಥ ಹೆಂಡತಿ, ನವಿಲೂರ ನೈದಿಲೆ, ಓಂ, ಪ್ರೀತಿಯ ಉಡುಗೊರೆ(ಬಿಡುಗಡೆಯಾಗಿಲ್ಲ), ಪೋಲೀಸ್ ಪವರ್, ಪ್ರೊಫೆಸರ್, ಪುಟ್ನಂಜ, ಸತ್ಯಜ್ವಾಲೆ, ಶ್ರೀಗಂಧ, ತಾಯಿಲ್ಲದ ತವರು, ತುಂಗಭದ್ರ.
೧೯೯೬ ಸರ್ಕಲ್ ಇನಸ್ಪೆಕ್ಟರ್ , ಗೆಲುವಿನ ಸರದಾರ, ಹಲೋ ಡ್ಯಾಡಿ, ಹೆತ್ತವರು, ಕರ್ಪೂರದ ಗೊಂಬೆ, ಕರಡೀಪುರ, ಮೌನ ರಾಗ, ಪಾಳೇಗಾರ, ಪೂಜ, ಸಿಪಾಯಿ, ಸ್ತ್ರೀ, ಸ್ಟಂಟ್ ಮಾಸ್ಟರ್, ಸೂತ್ರಧಾರ, ತಾಳೀ ಪೂಜೆ, ವೀರಭದ್ರ.
೧೯೯೭ ಚೆಲುವ, ಹಳ್ಳಿಯಾದರೇನು ಶಿವ, ಕಲಾವಿದ, ಕೊಡಗಿನ ಕಾವೇರಿ, ಲೇಡಿ ಕಮಿಷನರ್, ಲಕ್ಷ್ಮಿ ಮಹಾಲಕ್ಷ್ಮಿ, ಮೊಮ್ಮಗ, ಪ್ರೇಮಗೀತೆ, ಶಿವರಂಜನಿ, ಸಿಂಹದ ಮರಿ.
೧೯೯೮ ಅಂಡಮಾನ್, ದಾಯಾದಿ, ಗಡಿಬಿಡಿ ಕೃಷ್ಣ, ಕೌರವ, ಪ್ರೀತ್ಸೋದ್ ತಪ್ಪಾ, ಸುವ್ವಿ ಸುವ್ವಲಾಲಿ, ತುತ್ತಾ ಮುತ್ತಾ, ಯಾರೇ ನೀನು ಚೆಲುವೆ.
೧೯೯೯ ಎ.ಕೆ.೪೭, ಅರುಣೋದಯ, ಚನ್ನಪ್ಪ ಚನ್ನೇಗೌಡ, ಕೂಲಿರಾಜ, ದಳವಾಯಿ, ದ್ರೋಣ, ಹಬ್ಬ, ಹೃದಯ ಹೃದಯ, ಖಳನಾಯಕ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ನನ್ನಾಸೆಯ ಹೂವೇ, ಪಟೇಲ, ಪ್ರೇಮಚಾರಿ, ರಂಭೆ ಊರ್ವಶಿ ಮೇನಕೆ, ಸದ್ದಾಂ(ಬಿಡುಗಡೆಯಾಗಿಲ್ಲ), ಸುಗ್ಗಿ(ಬಿಡುಗಡೆಯಾಗಿಲ್ಲ), ಸಂಭ್ರಮ, ಸ್ನೇಹಲೋಕ, ಟುವ್ವಿ ಟುವ್ವಿ ಟುವ್ವಿ, ವಿಶ್ವ.
೨೦೦೦ ಅಸ್ತ್ರ, ಭಾರತ ನಾರಿ, ಚಾಮುಂಡಿ, ದೇವರ ಮಗ, ಹಗಲು ವೇಷ, ಹ್ಯಾಟ್ಸ್ ಆಫ್ ಇಂಡಿಯಾ, ನಾಗದೇವತೆ, ನಕ್ಸಲೈಟ್, ಪ್ರೀತ್ಸೆ, ಶಬ್ದವೇಧಿ, ಸ್ಪರ್ಶ, ಸುಲ್ತಾನ್, ಸೂರಪ್ಪ, ಟೈಗರ್ ಪದ್ಮಿನಿ, ಯಾರಿಗೆ ಸಾಲುತ್ತೆ ಸಂಬಳ, ಯಾರೇ ನೀ ಅಭಿಮಾನಿ, ಬಣ್ಣದ ಹೆಜ್ಜೆ.
೨೦೦೧ ಅವರನ್ಬಿಟ್ಟು? ಇವರನ್ಬಿಟ್ಟು? ಅವರ್ಯಾರು?, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಗಟ್ಟಿಮೇಳ, ದಿಗ್ಗಜರು, ಪ್ರೇಮರಾಜ್ಯ, ಭಾವಭಾಮೈದ, ಮಿಸ್ಟರ್ ಹರಿಶ್ಚಂದ್ರ, ಶಾಪ, ಲಂಕೇಶ.
೨೦೦೨ ಕಂಬಾಲಹಳ್ಳಿ, ಚೆಲುವಿ, ಚೆಲುವೆ ಒಂದು ಹೇಳ್ತೀನಿ, ಜೂಟ್, ಟಪೋರಿ, ಡಕೋಟ ಏಕ್ಸ್‌ಪ್ರೇಸ್, ತವರಿಗೆ ಬಾ ತಂಗಿ, ನಾಗರಹಾವು, ಪರ್ವ, ಪ್ರೀತಿಮಾಡೋ ಹುಡುಗರಿಗೆಲ್ಲಾ, ಬಲಗಾಲಿಟ್ಟು ಒಳಗೆ ಬಾ, ರೋಜ, ರೋಮಿಯೋ ಜೂಲಿಯೆಟ್, ಸೂಪರ್ ಸ್ಟಾರ್.
೨೦೦೩ ಒಂದಾಗೋಣ ಬಾ, ಕತ್ತೆಗಳು ಸಾರ್ ಕತ್ತೆಗಳು, ಕಿಚ್ಚ, ಜೋಗುಳ, ತಾಯಿ ಇಲ್ಲದ ತಬ್ಬಲಿ, ದುಂಬಿ, ದೇವರ ಮಕ್ಕಳು, ನಂಜುಂಡಿ, ಬಾಲಶಿವ, ಬೆಂಗಳೂರು ಬಂದ್, ರಾಮಸ್ವಾಮಿ ಕೃಷ್ಣಸ್ವಾಮಿ, ಲವ್ವೇ ಪಾಸಾಗಲಿ, ಶ್ರೀ.ರೇಣುಕಾದೇವಿ, ಹೃದಯವಂತ, ಬಲರಾಮ.
೨೦೦೪ ಗೌಡ್ರು, ದುರ್ಗಿ, ಧರ್ಮ, ಸಾರ್ವಭೌಮ.
೨೦೦೫ ಶಾಂತಿ, ನೆನಪಿರಲಿ, ಅಣ್ಣ ತಂಗಿ.
೨೦೦೬ ತವರಿನ ಸಿರಿ, ತುತ್ತೂರಿ, ಮೋಹಿನಿ ೯೮೮೬೭೮೮೮೮೮, ಪಾಂಡವರು, ಕಲ್ಲರಳಿ ಹೂವಾಗಿ.
೨೦೦೭ ಸಿಕ್ಸರ್, ಶ್ರೀ ದಾನಮ್ಮ ದೇವಿ, ಜನಪದ, ಸೌಂದರ್ಯ, ಕೈವಾರ ತಾತಯ್ಯ, ಮೀರಾ ಮಾಧವ ರಾಘವ, ಗುಣವಂತ, ನಾನು ನೀನು ಜೋಡಿ.
೨೦೦೮ ಹೊ೦ಗನಸು, ಯುಗ ಯುಗಗಳೇ ಸಾಗಲಿ, ನವಶಕ್ತಿ ವೈಭವ, ತಾಯಿ, ಬ೦ಧು ಬಳಗ, ದರೋಡೆ, ಸ೦ಗಾತಿ.
೨೦೦೯ ನ೦ಯಜಮಾನ್ರು, ಕಿರಣ್ ಬೇಡಿ, ಯೋಧ, ಕಬಡ್ಡಿ, ರಜನಿ, ಮುಖಪುಟ, ದೇವರು ಕೊಟ್ಟ ತಂಗಿ, ಪ್ರೇಮಿಸಂ.
  1. ನಾನು ನನ್ನ ಕನಸು
  2. ಅಪ್ಪು ಮತ್ತು ಪಪ್ಪು
  3. ರಾಜಾಹುಲಿ
  4. ಸಕುತ್ಲೆ
  5. ಕದ್ದು ಮುಚ್ಚಿ 2018
  6. ಮದಕರಿ ನಾಯಕ 2018

ಕಥೆ

  1. ೧೯೮೯ ಅವನೇ ನನ್ನ ಗಂಡ
  2. ೧೯೯೩ ಗಂಧರ್ವ
  3. ೧೯೯೪ ನನ್ನ ತಂಗಿ
  4. ೨೦೦೧ ಶಾಪ

ಚಿತ್ರಕಥೆ

  1. ಅವನೇ ನನ್ನ ಗಂಡ
  2. ಗಂಧರ್ವ

ಸಂಭಾಷಣೆ

  1. ಪ್ರೇಮಲೋಕ
  2. ರಣಧೀರ
  3. ಯುಗಪುರುಷ
  4. ಅವನೇ ನನ್ನ ಗಂಡ
  5. ಹಳ್ಳಿಮೇಷ್ಟ್ರು
  6. ಗಂಧರ್ವ

ಹಿನ್ನೆಲೆ ಗಾಯಕ

ವರ್ಷ ಚಿತ್ರ ಹಾಡು
೧೯೮೯ ಕಿಂದರಿ ಜೋಗಿ ಬಂದ ಬಂದ ಕಿಂದರಿ ಜೋಗಿ
೨೦೦೦ ಹಗಲು ವೇಷ ಬಾರೋ ಬಾ ಬಾರೋ ಶಿವಶಿವನೇ
೨೦೦೧ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ನಿನ್ನ ಅತ್ತೆ ಕಾಟ ತಾಳದಿದ್ರೆ

ಪ್ರಶಸ್ತಿ/ಪುರಸ್ಕಾರಗಳು

ಅತ್ಯುತ್ತಮ ಸಂಗೀತ ನಿರ್ದೇಶಕ - ರಾಷ್ಟ್ರಪ್ರಶಸ್ತಿ
ವರ್ಷ ಚಿತ್ರ
೧೯೯೫ ಗಾನಯೋಗಿ ಪಂಚಾಕ್ಷರ ಗವಾಯಿ
ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜ್ಯಪ್ರಶಸ್ತಿ
  1. ೧೯೯೪ - ಹಾಲುಂಡ ತವರು
  2. ೧೯೯೫ - ಗಾನಯೋಗಿ ಪಂಚಾಕ್ಷರ ಗವಾಯಿ
ಅತ್ಯುತ್ತಮ ಸಾಹಿತ್ಯ - ರಾಜ್ಯಪ್ರಶಸ್ತಿ
  1. 1994 - ಹಾಲುಂಡ ತವರು
  2. ೨೦೦೧ - ಶ್ರೀ ಮಂಜುನಾಥ
ಫಿಲ್ಮ್‍ಫೇರ್ ಪ್ರಶಸ್ತಿ
  1. ೧೯೯೨ - ರಾಮಾಚಾರಿ
  2. ೧೯೯೫ - ಓಂ
  3. ೨೦೦೫ - ನೆನಪಿರಲಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

೨೦೦೬ - ಕರ್ನಾಟಕ ಸರಕಾರದ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ.

ಇತರ ಪ್ರಶಸ್ತಿಗಳು

  1. ೨೦೦೬ - ಕೆಂಪೇಗೌಡ ಪ್ರಶಸ್ತಿ
  2. ಉದಯ ಟಿವಿಯ Sunfeast Udaya film awards -ಅತ್ಯುತ್ತಮ ಗೀತರಚನೆ - ಚಿತ್ರ:ನೆನಪಿರಲಿ

ವಿವಾದಗಳು

ಹಂಸಲೇಖ ಅವರು ಕೀರ್ತಿಶೇಷ ಪೇಜಾವರ ಶ್ರೀಗಳು ದಲಿತರ ಉದ್ಧಾರಕ್ಕೆ ಕೆಲಸ ಮಾಡಿದ್ದು ಕೇವಲ ಬೂಟಾಟಿಕೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.[೪] ನಂತರ ಆ ಬಗ್ಗೆ ಕ್ಷಮೆ ಕೇಳಿದ್ದಾರೆ.[೫]

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ


ಉಲ್ಲೇಖಗಳು

  1. "ಆರ್ಕೈವ್ ನಕಲು". Archived from the original on 2018-02-10. Retrieved 2018-08-27.
  2. "ಆರ್ಕೈವ್ ನಕಲು". Archived from the original on 2022-08-10. Retrieved 2018-08-27.
  3. https://www.filmibeat.com/celebs/hamsalekha/biography.html
  4. "ದೊಡ್ಡ ಬೂಟಾಟಿಕೆ ನಡೀತಾ ಇದೆ". ಪ್ರಜಾವಾಣಿ. ಪ್ರಜಾವಾಣಿ. Retrieved 18 November 2021.
  5. "ಕ್ಷಮೆ ಯಾಚಿಸಿದ ಹಂಸಲೇಖ". ಪ್ರಜಾವಾಣಿ. ಪ್ರಜಾವಾಣಿ. Retrieved 18 November 2021.
"https://kn.wikipedia.org/w/index.php?title=ಹಂಸಲೇಖ&oldid=1184814" ಇಂದ ಪಡೆಯಲ್ಪಟ್ಟಿದೆ