ಸೌಂದರ್ಯ (ಚಿತ್ರನಟಿ)
ಸೌಂದರ್ಯ (ನಿಧನ: ಮೇ, ೨೦೦೪) ದಕ್ಷಿಣ ಭಾರತ ಕಂಡ ಪ್ರಮುಖ ಚಿತ್ರನಟಿಯರಲ್ಲೊಬ್ಬರು. ಕನ್ನಡತಿ ಸೌಂದರ್ಯ "ಗಂಧರ್ವ" ಎಂಬ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟರು. ಆರಂಭದ ದಿನಗಳಲ್ಲಿ ಅವರ ಚಿತ್ರಗಳು ಕನ್ನಡದಲ್ಲಿ ಅಷ್ಟಾಗಿ ಜನಪ್ರಿಯವಾಗಲಿಲ್ಲ. ಇದರ ಪರಿಣಾಮವಾಗಿ, ತೆಲುಗು ಚಿತ್ರರಂಗಕ್ಕೆ ಹೋದ ಸೌಂದರ್ಯ, ಅಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದರು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ೯೦ ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಇವರು ನಟಿಸಿದ ಪ್ರಮುಖ ಚಿತ್ರಗಳು:
ಇವರು ನಿರ್ಮಿಸಿದ "ದ್ವೀಪ" ಚಿತ್ರಕ್ಕೆ ೨೦೦೨ ರಲ್ಲಿ ಅತ್ಯುತ್ತಮ ಚಿತ್ರವೆಂದು ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಲಭಿಸಿದೆ. ಅಲ್ಲದೇ, ಇದಕ್ಕೆ ಆ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಸಿಕ್ಕಿದೆ. ದೋಣಿ ಸಾಗಲಿ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಎಂದು ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿಯನ್ನೂ ಸೌಂದರ್ಯ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪ ನವರ "ಗೃಹಭಂಗ" ಕಾದಂಬರಿಯನ್ನು ದೂರದರ್ಶನಕ್ಕಾಗಿ ನಿರ್ಮಿಸಿದರು. ಗಿರೀಶ್ ಕಾಸರವಳ್ಳಿ ಈ ಧಾರಾವಾಹಿಯ ನಿರ್ದೇಶಕರು. ಒಂದು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯೂ ಇವರಿಗೆ ಲಭಿಸಿತ್ತು. ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾದ "ಆಪ್ತಮಿತ್ರ" ಚಿತ್ರದಲ್ಲಿ ಮರೆಯಲಾಗದ ಅಭಿನಯ ನೀಡಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.
[ಬದಲಾಯಿಸಿ] ನಿಧನ
೨೦೦೪ ರ ಮೇ ತಿಂಗಳಲ್ಲಿ, ಬಿ.ಜೆ.ಪಿ. ಯ ಚುನಾವಣಾ ಪ್ರಚಾರಕ್ಕೆಂದು ಹೊರಟ ಮಿನಿ ವಿಮಾನವು ಬೆಂಗಳೂರಿನ ಹೊರವಲಯದಲ್ಲಿ ಅಪಘಾತಕ್ಕೊಳಗಾಗಿ ತಮ್ಮ ಸೋದರ ಅಮರನಾಥ್ ಅವರೊಂದಿಗೆ ದುರ್ಮರಣಕ್ಕೀಡಾದರು.
|
|||||||
ಇವ್ರು
