ಸಿಂಧನೂರು
ವಿಕಿಪೀಡಿಯ ಇಂದ
ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲ್ಲೂಕು
ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ್ತವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು ಭತ್ತದ ಖಣಜ ಎಂದು ಕರೆಯಲಾಗುತ್ತದೆ. 2001 ನೇ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯು 360164 ಇದ್ದು ಸಾಕ್ಷರತೆ ಪ್ರಮಾಣ ಶೇ. 50.6 ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ 1567.70 ಚದರ ಕಿ.ಮೀ. ಇದೆ.
[ಬದಲಾಯಿಸಿ] ಭೌಗೋಳೀಕ ಲಕ್ಷಣಗಳು
ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಬೆಳೆಯಲು ಯೋಗ್ಯವಾಗಿದೆ.
[ಬದಲಾಯಿಸಿ] ರಾಜಕೀಯ
- ಶ್ರೀ ಶಿವರಾಮನ ಗೌಡ, ಸಂಸದರು, ಕೊಪ್ಪಳ ಕ್ಷೇತ್ರ ಇವರು ಗಂಗಾವತಿಯವರಾಗಿದ್ದು, ಬಿ ಜೆ ಪಿ ಪಕ್ಷದಿಂದ ಚುನಾಯಿತರಾಗಿದ್ದಾರೆ.
- ಶ್ರೀ ವೆಂಕಟರಾವ್ ನಾಡಗೌಡ, ಶಾಸಕರು, ಸಿಂಧನೂರು ವಿಧಾನ ಸಭಾ ಕ್ಷೇತ್ರ.
- ಶ್ರೀ ರಾಜಶೇಖರ್ ಪಾಟೀಲ್, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿಂಧನೂರು ಇವರು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ರಾಯಚೂರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.
[ಬದಲಾಯಿಸಿ] ವಿಶೇಷತೆಗಳು
- ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ/ ಉಪಯೋಗಿಸುವ ಕೇಂದ್ರವಾಗಿದೆ.
- ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.
- ಸಿಂದನೂರು ತಾಲೂಕಿನ,ಅಂಬಾಮಟ ಅಂಬಾದೇವಿಯ ಪ್ರಸಿದ್ದ ದೇವಾಲಯವಿರುತ್ತದೆ ಇದು ದೇಶದಲ್ಲಿಯೇ ಎರಡನೆ ಬಗಳಾಮುಖಿ ಆಗಿದ್ದು ,
- ಸ್ನೇಹ ಏಮು ಫಾರಂ ಮುಳ್ಳೂರಾ ಇ ಜೆ ಸೆಲ್.'೯೯೭೨೫೧೯೦೪೮' ೯೦೦೮೦೩೧೨೨೨
- ಸಿಂಧನೂರು ಅನೇಕ ವಿಶೇಷಗಳಲ್ಲಿ ವಿಶೇಷವಾದದ್ದು ಎಂದರೆ ಆಶ್ಛರ್ಯ ಪಡಬೇಕಾಗಿಲ್ಲ.ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಮುಂಚುಣಿಯಲ್ಲಿರುವ ಶ್ರೀ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿ,. ಸಿಂಧನೂರು ಎನ್ನುವ ಸಹಕಾರಿ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯನಿರ್ವಹಿಸುವ ಜೊತೆಗೆ ಈ ಭಾಗದಲ್ಲಿ ಬರುವ ಅನೇಕ ಸಹಕಾರಿ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಥುತರ್ಯ.
ಸಹಕಾರಿಯ ಮುಖ್ಯಕಾರ್ಯನಿರ್ವಾಹಕಾಗಿರುವ ಶ್ರೀ ಬಿ ರಾಜಶೇಖರ ಎನ್ನುವ ಕ್ರೀಯಾಶಿಲ ವ್ಯಕ್ತಿ ಸಂಸ್ಥೆಗೆ ಭೇಟಿ ನೀಡುವ ರಾಜ್ಯದ ಯಾವುದೆ ಸಹಕಾರಿಯ ಆಡಳಿತ ಮಂಡಳಿ, ಸಿಬ್ಬಂಧಿ ಅಥವಾ ಸಹಕಾರಿ ಕ್ಷೇತ್ರದ ಆಸಕ್ತರಿಗೆ ಅವರು ನೀಡುವ ಮಾಹಿತಿ ಉತ್ಕ್ರಷ್ಟವಾಗಿರುತ್ತದೆ. ಇವರು ನೀಡುವ ಸಲಹೆಗಳನ್ನು ಪಡೆದ ಅನೇಕ ಸಹಕಾರಿ ಸಂಘಗಳು ಪ್ರಗತಿಪತದಲ್ಲಿ ನಡೆಯುತ್ತಿವೆ.ಈ ಸಂಸ್ಥೆಯ ಸಾಧನೆಯನ್ನು ಪರಿಗಣಿಸಿ ೨೦೦೮ ನೇ ನವೆಂಬರ್ ನಲ್ಲಿ ಬಳ್ಳಾರಿ ಜಿಲ್ಲೆ ಹೊಸಪೆಟೆಯಲ್ಲಿ ರಾಷ್ರ್ಟೀಯ ಸಹಕಾರಿ ಪರಿಷತ್ತಿನ ಕಾರ್ಯಕ್ರಮದಲ್ಲಿ ರಾಜ್ಯದ ಉತ್ತಮ ಸಂಸ್ಥೆಯೆಂದು ಪರಿಗಣಿಸಿ ರಾಜ್ಯ ಸರ್ಕಾರ ಆಧರಿಸಿ ಸನ್ಮಾನಿಸಿದೆ.
ಎಲೆ ಮರೆಕಾಯಂತೆ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಯಾವುದೆ ಪ್ರಚಾರಕ್ಕೆ ಮನ್ನಣೆಯನ್ನ ಬಯಸದೆ ತೊಡಗಿರುವುದು ತನ್ನ ಸದಸ್ಯರ ಸೇವೆಯಲ್ಲಿ ಯಶಸನ್ನು ಕಾಣುತ್ತಿದೆ. ಎಲೆ ಮರೆಕಾಯಂತೆ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಯಾವುದೆ ಪ್ರಚಾರಕ್ಕೆ ಮನ್ನಣೆಯನ್ನ ಬಯಸದೆ ತೊಡಗಿರುವುದು ತನ್ನ ಸದಸ್ಯರ ಸೇವೆಯಲ್ಲಿ ಯಶಸನ್ನು ಕಂಡುಕೊಂಡಿದೆ.
- ಅತಿ ಹೆಚ್ಚು ವರದಿಗಾರರು ಇಲ್ಲಿದ್ದಾರೆ. ಅಶೋಕ ಬೆನ್ನೂರು ಪ್ರಮುಖರು ಇಲ್ಲಿದ್ದಾರೆ.
=====ಬಾಹ್ಯ ಸಂಪರ್ಕ ==
- ಸಿಂಧನೂರು ನಗರದ ಉಪಗ್ರಹ ಚಿತ್ರಣ, ಗೂಗಲ್ ಮಾಪ್ಸ್ ನ ಕಾಣಿಕೆ