ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾಜಿಕ ಸಂಶೊಧನೆಯಲ್ಲಿ ಸಂಶೊಧನಾ ಪ್ರಕ್ರಿಯೆಯು ಒಂದು. ವಿಚಾರಣೆಯು ಸಮಸ್ಯೆಯೆಂಬುವುದರಿಂದ ಪ್ರಾರಂಭವಾಗುತ್ತದೆ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಿಂತ ಕೆಲವೊಮ್ಮೆ ಸಮಸ್ಯೆಯನ್ನು ಕಂಡುಕೊಳ್ಳುವುದೇ ಕಷ್ಟದ ಕೆಲಸ. ಸಮಸ್ಯೆಯನ್ನು ರೂಪಿಸಲು ವಿಜ್ಞಾನಿ ಸಾಕಷ್ಟು ಯೊಚನೆ ಮಾಡಬೆಕಾಗುತ್ತದೆ. ಸಂಶೋಧಕನು ಪದ್ಧತಿಗಳ ಅನುಸಾರ ಉತ್ತರಿಸಲಾಗದ ಪ್ರಶ್ನೆಗಳನ್ನು ತಪ್ಪಿಸುವ ಬಗ್ಗೆ ಜಾಗರೂಕನಾಗಿರಬೇಕು. ಆಯ್ಕೆ ಮಾಡಿಕೊಂಡ ವಿಷಯವು ಲಭ್ಯವಿರುವ ಸಲಕರಣೆಗಳು ಮತ್ತು ತಂತ್ರಗಲ ಮೂಲ ವೈಜ್ಞಾನಿಕ ವಿಚಾರಣೆಗೆ ತನ್ನನ್ನು ಒಡ್ಡಿಕೊಲ್ಳುವಂತೆ ಇರಬೆಕು.

ಲಭ್ಯವಿರುವ ಸಾಹಿತ್ಯದ ಸಮೀಕ್ಷೆ[ಬದಲಾಯಿಸಿ]

ವೈಜ್ಞಾನಿಕ ವಿಚಾರಣೆಗೆ ಸಮಸ್ಯೆಯನ್ನು ಕಂಡುಕೊಂಡ ನಂತರ ಸಂಶೋಧಕನು ಅದರ ಬಗ್ಗೆ ಲಭ್ಯವಿರುವ ಪ್ರಕಟಿತ ಮತ್ತು ಅಪ್ರಕಟಿತ ಸಾಹಿತ್ಯದ ಬಗ್ಗೆ ವಿಚಾರಣೇ ನಡೆಸುತ್ತಾನೆ. ಇದೇ ರೀತಿಯ ಅಧ್ಯಯನಗಳು ಹಿಂದೆಯೇ ನಡೆದಿದ್ದಲ್ಲಿ ಅವುಗಳನ್ನು ಜಾಗರೂಕತೆಯಿಂದ ಗಣನೆಗೆ ತೆಗೆದುಕೊಳ್ಳಬೇಕು. ಮಾಹಿತಿಯನ್ನು ಸಂಗ್ರಹಣೆಯ ಎರಡು ಮೂಲಗಳು. ಅವುಯಾವುವೆಂದರೆ ೧. ಕ್ಷೇತ್ರೀಯ ಮೂಲಗಳು ಮತ್ತು ೨. ದಸ್ತಾವೇಜು ಮೂಲಗಳು. ಕ್ಷೇತ್ರಿಯ ಮೂಲಗಳು ಅಥವಾ ಪ್ರಾಥಮಿಕ ಮೂಲಗಳು ಸಂಶೋಧಕನು ತಾನೇ ಸ್ವತ: ವ್ಯಕ್ತಿಗಳಿಮದ ಸಂಗ್ರಹಿಸುವ ಮಾಹಿತಿಯನ್ನು ಒಲಗೊಂಡಿವೆ. ದಸ್ತಾವೇಜು ಒಟ್ಟು ಶ್ರೇಣಿಯ ಪ್ರಕಟಿತ ಮತ್ತು ಅಪ್ರಕಟಿತ, ಸಾವ‌ಜನಿಕ ಅಥವಾ ಖಾಸತಿ ದಾಖಲೆ ಪತ್ರಗಳು ಮತ್ತು ಇತರೆ ಸಾಹಿತ್ಯಕ ಮೂಲಕ ಮಾಹಿತಿಗಳು ಇತ್ಯಾದಿ.

ಪ್ರಾಕ್‌ ಕಲ್ಪನೆ ರೂಪಿಸುವುದು[ಬದಲಾಯಿಸಿ]

ಪ್ರಾಕ್‌ ಕಲ್ಪನೆ ರೂಪಿಸುವುದು ಇನ್ನೊಂದು ರೀತಿಯ ಬಗೆ. ಸಮಸ್ಯೆಯ ಬಗ್ಗೆ ತಾತ್ಕಾಲಿಕವಾಗಿ ಪರಿಹಾರವನ್ನು ಅಥವಾ ಊಹೆಯನ್ನು ರೂಪಿಸಿಕೊಳ್ಳುವುದಕ್ಕೆ ಪ್ರಾಕ್ಕಲ್ಪನೆ ಎನ್ನುತ್ತಾರೆ. ಸಂಶೋಧನೆಯಲ್ಲಿ ಪ್ರಾಕ್‌ ಕಲ್ಪನೆಗಳು ತುಂಬಾ ಪ್ರಮುಖವಾದವು. ಅವು ಪರೀಕ್ಷಣಾ ವಿಧಾನಗಳು ಮತ್ತು ವಿಶ್ಲೇಷಣೆಗೆ ಅಗತ್ಯವಾದ ಮಾಹಿತಿಯ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ಪ್ರಾಕ್ಕ್ ಲ್ಪನೆಗಳು ಸಂಶೋಧನೆಯ ಕ್ಷೇತ್ರವನ್ನು ಸೀಮಿತಗೊಳಿಸುವುದರ ಮೂಲಕ ಸಂಶೋಧನೆಗೆ ದಾರಿ ತೊರುತ್ತವೆ. ಅವು ಸಂಶೋಧಕನನ್ನು ಸರಿಯಾದ ದಾರಿಯಲ್ಲಿ ನಿಲ್ಲಿಸುತ್ತವೆ. ಆದರೂ ಸಂಶೋಧನೆಯ ಪ್ರಾರಂಭಕ್ಕೆ ಪ್ರಾಕ್ಕ್ ಲ್ಪನೆಗಳ ಅಗತ್ಯವೇನಿಲ್ಲ ಎಂಬುದನ್ನು ನೆನಪಿಡಬೇಕು.

ಸಂಶೋಧನಾ ವಿನ್ಯಾಸದ ತಯಾರಿಕೆ[ಬದಲಾಯಿಸಿ]

ಸಂಶೋಧನಾ ವಿನ್ಯಾಸದ ತಯಾರಿಕೆ ಸಂಶೊಧನೆಯಲ್ಲಿ ಬಹಳ ಪ್ರಮುಖವಾದುದು. ಸಂಶೋಧನಾ ವಿನ್ಯಾಸವು ಕಾಯ‍ವಿಧಾನಗಳ ಬಗ್ಗೆ ಸಂಶೋಧಕನ ತೀರ್ಮಾನಗಳನ್ನು ಒಳಗೊಂಡಿರುವ 'ನೀಲಿನಕ್ಷೆ' ಅಥವಾ ಯೋಜನೆ ಎನ್ನಬಹುದು. ಇದು ಅಧ್ಯಯನವೊಂದಕ್ಕೆ ಹೊಂದಿಕೊಂಡಂತೆ ಸಂಶೋಧನೆಯ ಕಾರ್ಯವಿಧಾನಗಳು, ನಮೂನೆ, ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಬಗ್ಗೆ ಸಂಶೋಧಕನ ತೀಮಾ‍ನಗಳ ಬಗ್ಗೆ ತಿಳೀಸುತ್ತದೆ. ಸಂಶೋಧನೆಯ ಧ್ಯೇಯವನ್ನು ನಾಲ್ಕು ವಿಧಾನಗಳನ್ನಾಗಿ ವಿಸ್ತರಿಸಬಹುದು.ಅವುಗಳೇಂದರೆ:

ಸಂಶೋಧನೆಯ ವಿನ್ಯಾಸವು ಕನಿಷ್ಠ ಶ್ರಮ, ವೇಳೆ ಮತ್ತು ಹಣದ ವೆಚ್ಚದಿಂದ ಗರಿಷ್ಟ ಮಾಹಿತಿ ಸಿಗುವಂತೆ ಸಂಶೋಧನೆಯನ್ನು ಹೆಚ್ಚು ದಕ್ಷವನ್ನಾಗಿಸುತ್ತದೆ. ಸಂಶೋಧನೆಯ ವಿನ್ಯಾಸವು ಅಂದಾಜು ಮಾಡಲಾಗದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಗತ್ಯವಾದ ಉದ್ದೇಶಪೂವ‍ಕವಾಗಿ ನಿರೀಕ್ಷೆಯ ಅವಕಾಶವನ್ನು ಹೆಚ್ಚಿಸುತ್ತದೆ.

ಮಾದರಿ ಅಥವಾ ನಮೂನೆ ವಿನ್ಯಾಸವನ್ನು ನಿಧ‍ರಿಸುವುದು[ಬದಲಾಯಿಸಿ]

ಸಂಶೋಧಕನು ಜನಸಂಖ್ಯೆಯಲ್ಲಿನ ಎಲ್ಲಾ ಅಂಶಗಳನ್ನೂ ಅಧ್ಯಯನ ಮಾಡಿ ಅವುಗಳ ಬಗ್ಗೆ ನಿಖರವಾದ ಮತ್ತು ನಂಬಿಕಾಹ‍ ಲಕ್ಷಣಗಳನ್ನು ತಿಳಿಯುವ ಅಗತ್ಯವಿಲ್ಲ. ಆದ್ದರಿಂದ ಅವನು ಮಾದರಿ ಅಥವಾ ನಮೂನೆ ವಿನ್ಯಾಸ ಪದ್ದತಿಯನ್ನು ಅನುಸರಿಸುತ್ತಾನೆ. ಅಧ್ಯಯನಕ್ಕಾಗಿ ಸಂಶೋಧಕನು ಆಯ್ಕೆ ಮಾಡಿಕೊಳ್ಳುವ ಜನಸಂಖ್ಯೆಯ ಒಂದು ಭಾಗವನ್ನು 'ಮಾದರಿ ಅಥವಾ ನಮೂನೆ' ಎನ್ನುತ್ತಾರೆ. ಮಾದರಿ ಸಿದ್ದಾಂತದಲ್ಲಿನ ಮೂಲಭೂತ ವ್ಯತ್ಯಾಸಗಳೆಂದರೆ ಸಂಭವನೀಯ ಮಾದರಿ ಮತ್ತು ಸಂಭವನೀಯವಲ್ಲದ ಮಾದರಿ.

ಮಾಹಿತಿ ಸಂಗ್ರಹಣೆ[ಬದಲಾಯಿಸಿ]

ಸಂಶೋಧಕನು ಅಗತ್ಯ ಪ್ರಮಾಣದ ಮಾದರಿಯನ್ನು 'ವಿಶ್ವ' ದಿಂದ ಪಡೆದುಕೊಂಡ ನಂತರ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸುತ್ತಾನೆ. ಪ್ರತ್ಯುತ್ತರರಾದ ಸಂಶೋಧಕನೇ ನೇರವಾಗಿ ಪಡೆದುಕೊಂಡ ಪ್ರಾಥಮಿಕ ಮಾಹಿತಿಯನ್ನು ಅವಲೋಕನೆ, ಪ್ರಶ್ನಾವಳಿ ಮತ್ತು ಸಂಧಶ‍ನದ ಮೂಲಕ ಸಂಗ್ರಹಿಸಲಾಗುತ್ತದೆ. ಸಾಂಕೇತಿಕ ವತ‍ನೆಯನ್ನು ವೈಜ್ಞಾನಿಕ ಮಾಹಿತಿಯನ್ನಾಗಿ ಪರಿವತಿ‍ಸುವ ಪ್ರಯತ್ನವೇ ವಿಷಯ ವಿಶ್ಲೇಷಣೆ. ಇದು ಅಧ್ಯಯನದ ಉದ್ದೇಶಕ್ಕೆ ಹೊಂದಿಕೊಂಡಂತೆ ಮಾಹಿತಿಯನ್ನು ವಗೀಕರಿಸುವ ಪದ್ಧತಿಯಾಗಿದೆ. ಕೋಷ್ಟಕಗಳನ್ನು ತಯಾರಿಸುವುದೆ ವಿಶ್ಲೇಷಣೆಯಲ್ಲಿನ ಮುಂದಿನ ಹಂತ. ವಗೀಕೃತ ಮಾಹಿತಿಗಳನ್ನು ಕೋಷ್ಟಕಗಳ ರೂಪದಲ್ಲಿ ನೀಡುವ ತಾಂತ್ರಿಕ ಕ್ರಮದ ಭಾಗವೇ ಕೋಷ್ಟಕಗಳ ತಯಾರಿಕೆ.

ಪ್ರಾಕ್ಕ್ ಲ್ಪನೆಯನ್ನು ಪರೀಕ್ಷಿಸಿಕೊಳ್ಳುವುದು[ಬದಲಾಯಿಸಿ]

ಮಾಹಿತಿಯ ವಿಶ್ಲೇಷಣೆಯ ನಂತರ ಸಂಶೋಧಕ ಪ್ರಾಕ್ಕ್ ಲ್ಪನೆಯನ್ನು, ಈ ಮೊದಲೇ ಹೊಂದಿದ್ದರೆ, ಪರೀಕ್ಷಿಸಿಕೊಳ್ಳಲು ಮುಂದಾಗುತ್ತಾನೆ. ವಿಶ್ಲೇಷಿತ ಮಾಹಿತಿಯ ಬೆಳಕಿನಲ್ಲಿ ಪ್ರಾಕ್ಕ್ ಲ್ಪನೆ ಸ್ವೀಕೃತವಾಗಬಹುದು ಅಥವಾ ತಿರಸ್ಕೃತವಾಗಬಹುದು.

ವರದಿ ಬರೆಯುವಿಕೆ[ಬದಲಾಯಿಸಿ]

ಸಂಶೋಧನಾ ಪ್ರಕ್ರಿಯೆ ಅದರ ಮೇಲೆ ವರದಿಯನ್ನು ಬರೆದಲ್ಲದೇ ಪೂಣ‍ವಾಗುವುದಿಲ್ಲ. ಸಂಶೋಧನೆಗೆ ಅಥವಾ ನಿದಿಷ್ಟ ವಸ್ತು ವಿಷಯ ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏನನ್ನು, ಹೇಗೆ ಮಾಡಲಾಗಿದೆ ಎಂಬುದರ ವಿಸ್ತೃತ ವಿವರಣೆಯೇ ವರದಿ.

ವಸ್ತುನಿಷ್ಠತೆಯ ಸಮಸ್ಯೆಗಳು[ಬದಲಾಯಿಸಿ]

ಸಾಮಾಜಿಕ ಸಂಶೋಧನೆಯಲ್ಲಿ ವಸ್ತುನಿಷ್ಠತೆಯನ್ನು ವ್ಯಕ್ತಿಯ ಅಥವಾ ಸಮೂಹವೊಂದರ ಸಾಪೇಕ್ಷವಾಗಿ ತಾತ್ಕಾಲಿಕವಾದ ಸಾಮಾಜಿಕ ಅಥವಾ ಮಾನಸಿಕವಾದ ಪಕ್ಷಪಾತಗಳಿಂದಾದ ಗ್ರಹಿಕೆಗಳು ಅಥವಾ ವಿವರಣೆಗಳ ವಿಕಾರಗಳನ್ನು ತೊಡೆದು ಹಾಕುವ ಪ್ರಯತ್ನಗಳಲ್ಲಿ ಪ್ರಕಟವಾಗುವ ಗುಣಲಕ್ಷಣಗತಳನ್ನು ಸೂಚಿಸಲು ಉಪಯೊಗಿಸಲಾಗಿದೆ.

ವಸ್ತುನಿಷ್ಟತೆಯನ್ನು ಪ್ರಭಾವಿಸುವ ಅಂಶಗಳು[ಬದಲಾಯಿಸಿ]

ಲಭ್ಯವಿರುವ ಪುರಾವೆಗಳ ಪೂಣ‍ ವಿವರಣೆ ಪಡೆದುಕೊಳ್ಳವುದರಿಂದ ಸಮಾಜ ವಿಜ್ಞಾನಿಯನ್ನು ತಡೆಯುವ ಅನೇಕ ಪ್ರಭಾವೀ ಅಂಶಗಳು. ಅವುಗಳೇಂದರೆ:

  • ವೈಯುಕ್ತಿಕ ಪ್ರೇರಣೆ.
  • ಪದ್ಧತಿ
  • ಸಾಮಾಜಿಕ ಸನ್ನವೇಶದ ಪ್ರತೀಕೂಲ ಪ್ರಭಾವಗಳನ್ನಾಗಿ ಸಾರಾಂಶಿಸಬಹುದು.
  • ವಸ್ತುನಿಷ್ಠತೆಯನ್ನು ಪ್ರಭಾವಿಸುವ ಇತರೆ ಅಂಶಗಳಂದರೇ:
  • ವೈಯಕ್ತಿಕ ಭಾವನೆಗಳು.
  • ಮೂಢನಂಬಿಕೆಗಳು
  • ಸ್ವ-ಹಿತಾಶಕ್ತಿ
  • ವಸ್ತುವಿಷಯದ ಸಂಕೀಣ‍ತೆ
  • ವಸ್ತು ವಿಷಯದ ವ್ಯಕ್ತಿನಿಷ್ಟ ಸ್ವಭಾವ
  • ಏಕರೂಪತೆಯ ಕೊರತೆ.
  • ಜ್ಞಾನದ ಕೊರತೆಯಿಂದಾದ ತಪ್ಪು ತಿಳುವಳಿಕೆ
  • ತರಾತುರಿಯ ಕಾಯ‍ನಿವ‍ಹಣೆ,
  • ನೈತಿಕ ಮೌಲ್ಯಗಳು
  • ಸ್ವಕುಲ ಅತ್ಯಾಭಿಮಾನ
  • ಬಾಹ್ಯ ಒತ್ತಡ
  • ಜ್ಞಾನ

ವಸ್ತುನಿಷ್ಟತೆಯ ಯಾವುದೇ ಅವಲಂಬನಾಹ‍ ಸೂಚಿಯ ಅನುಪಸ್ಥಿತಿಯಲ್ಲಿ ಸಾಮಾನ್ಯವಾಗಿ ಪರಿಗಣಿಸಲಾಗುವ ಕ್ರಮವೆಂದರೆ ಸಿದ್ಧಾಂತ ಎಷ್ಟರ ಜಮಟ್ಟಿಗೆ ವಿವೇಚನಾಯುಕ್ತವಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳವುದಾಗಿದೆ. ಹಾಗೆ ಅದು ಸಮಂಜಸವಾಗಿದ್ದರೆ ಅದನ್ನು ವಸ್ತುನಿಷ್ಠ ಎನ್ನುತ್ತಾರೆ. ವಸ್ತುನಿಷ್ಠತೆಯನ್ನು ಹೊಂದಲು ಈ ಕೆಳಗಿನ ಕ್ರಮಗಳು ಉಪಯೊಗವಾಗಬಹುದು.

  • ಪ್ರಮಾಣಬದ್ಧ ಪದಗಳು ಮತ್ತು ಕಲ್ಪನೆಗಳ ಬಳಕೆ
  • ಪ್ರಾಯೋಗಿಕ ಪದ್ಧತಿಯ ಬಳಕೆ.
  • ಪರಿಮಾಣಾತ್ಮಕ ಪದ್ಧತಿಯ ಬಳಕೆ
  • ಸಮೂಹ ಸಂಶೋಧನೆ
  • ಪ್ರಯೋಗಾತ್ಮಕ ಪದ್ಧತಿಯ ಬಳಕೆ
  • ಯಾದೃಚ್ಚಿಕ ನಮೂನೆ ಪದ್ಧತಿಯ ಬಳಕೆ
  • ಯಾಂತ್ರಿಕ ಸಾಧನಗಳ ಬಳಕೆ
  • ಅಂತರ ವಿಜ್ಞಾನ ತಂತ್ರದ ಬಳಕೆ
  • ಸಂಶೋಧನಾ ನಕ್ಷೆ, ವಿನ್ಯಾಸ

ಜ್ಞಾನ ಸಂಪಾದನೆಯ ಬಯಕೆ ಅಥವಾ ಸಮಸ್ಯೆಯೊಂದನ್ನು ವೈಜ್ಞಾನಿಕವಾಗಿ ಬಗೆಹರಿಸುವ ಅಗತ್ಯವೊಂದರಿಂದ ನಿದೇಶಿತನಾದ ಸಾಮಾಜಿಕ ಸಂಶೋಧಕನೊಬ್ಬ ಅಧ್ಯಯನದ ನಕ್ಷೆಯೊಂದನ್ನು ತಯಾರಿಸುತ್ತಾನೆ.

ವ್ಯಾಖ್ಯೆಗಳು[ಬದಲಾಯಿಸಿ]

ಸಂಶೋಧನಾ ವಿನ್ಯಾಸವನ್ನು ಅನೇಕ ಜನ ಸಮಾಜ ವಿಜ್ಞಾನಿಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಎಲ್ಲಾ ವ್ಯಾಖ್ಯೆಗಳೂ ಕ್ರಮದಲ್ಲಿ ಮಿತಿವ್ಯಯದೊಂದಿಗೆ ವಿಶ್ಲೇಷಣೆಗೆ ನಿಕರವಾದ ಮಾಹಿತಿಗಳನ್ನು ಸಂಗ್ರಹಿಸುವಾಗ ವ್ಯವಸ್ಥಿತವಾದ ಪದ್ಧತಿಗಳನ್ನು ಬಳಸುವುದರ ಮೇಲೆ ಒತ್ತು ಹೇರಿವೆ.

ಸಂಶೋಧನಾ ವಿನ್ಯಾಸದ ಮಹತ್ವ[ಬದಲಾಯಿಸಿ]

ಸಂಶೋಧನಾ ವಿನ್ಯಾಸವೊಂದು ಸಂಶೋಧನಾ ಸಮಸ್ಯೆ ಮತ್ತು ಅಧ್ಯಯನದ ನಿದಿ‍ಷ್ಟ ಉದ್ದೇಶಗಳನ್ನು ಒಳಗೊಂದಿದೆ. ವಿನ್ಯಾಸ ಪೂಣ‍ ಸಂಶೋಧನಾ ಕಾಯ‍ಕ್ರಮದ ಪ್ರಕ್ರಿಯೆ ಮತ್ತು ಸಂರಚನೆಯ ರೂಪುರೇಶೆಯಾಗಿದೆ. ಇಂತಹ ನಿದಿ‍ಷ್ಟ ಹಾಗೂ ಸ್ಪಷ್ಟವಾಗಿ ನಮುದಿಸಿದ ಕ್ರಿಯಾಯೋಜನೆಯ ಹೊರತಾಗಿ ಯಾವುದೇ ವೈಜ್ಞಾನಿಕ ಅಧ್ಯಯನ ಸಾಧ್ಯವಿಲ್ಲ ಮತ್ತು ಪಡೆದುಕೊಂಡ ಫಲಿತಾಂಶಗಳು ಕೂಡ ಸಪ್ರಮಾಣಿತ ಹಾಗೂ ಅವಲಂಬನಾಹಯ‍ವಾದವುಗಳು ಇರುವುದಿಲ್ಲ. ಇಂಡಿಯನ್ ಕೌನ್ಸಿಲ್ ಫಾರ್ ಸೈಮಟಿಫಿಕ್ ಸೋಷಿಯಲ್ ರಿಸಚ್‍ ಮಾಗ‍ದಶ‍ನ ಮಾಗ‍ದಶಿ‍ಕೆಯ ಪ್ರಕಾರ ಸಂಶೋಧನಾ ವಿನ್ಯಾಸ ಈ ಕೆಳಗಿನ ಹಂತಗಳನ್ನು ಒಳಗೊಳ್ಳಬೇಕು.

  • ಕಾರ್ಯ ಯೋಜನೆಯ ಶೀರ್ಷಿಕೆ.
  • ಸಮಸ್ಯೆಯನ್ನು ಸ್ಪಷ್ಟಪಡಿಸುವುದು
  • ಸಾಹಿತ್ಯದ ಪೂರ್ವಾವಲೋಕನ
  • ಕಲ್ಪನೆಗಳ ಚೌಕಟ್ಟು.
  • ಸಂಶೋಧನಾ ಪ್ರಶ್ನೆ ಅಥವಾ ಪ್ರಾಕ್ ಕಲ್ಪನೆ.
  • ಹರವು ಅಥವಾ ಸಂಶೋಧನೆ ಒಳಗೊಳ್ಳುವ ಕ್ಷೇತ್ರ.
  • ಮಾಹಿತಿ ಸಂಗ್ರಹಣೆ.
  • ಮಾಹಿತಿ ಪರಿಷ್ಕರಣೆ
  • ಕಾಲ ತೀಮಾ‍ನ.
  • ಸಂಘಟನೆಯ ಚೌಕಟ್ಟು
  • ವೆಚ್ಚದ ಅಂದಾಜು

ಪ್ರಾಯೋಗಿಕ ಸಂಶೋಧನಾ ವಿನ್ಯಾಸವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡೀಸಬಹುದು:

  • ನಮೂನೆ ವಿನ್ಯಾಸ
  • ಅವಲೋಕನಾ ವಿನ್ಯಾಸ
  • ಸಾಂಖ್ಯಿಕ ನಮೂನೆ
  • ಕಾರ್ಯಾತ್ಮಕ ವಿನ್ಯಾಸ

ಸಂಶೋಧನಾ ವಿನ್ಯಾಸದ ಪ್ರಕಾರಗಳು. ಅವು:[ಬದಲಾಯಿಸಿ]

  • ಪರಿಶೋಧಕ ಅಧ್ಯಯನ ನಕಾಶೆ
  • ವಿವರಣಾತ್ಮಕ ಅಧ್ಯಯನ ನಕಾಶೆ
  • ಚಿಕಿತ್ಸಕ ಅಧ್ಯಯನ ನಕಾಶೆ
  • ಪ್ರಾಯೋಗಿಕ ಅಧ್ಯಯನ ನಕಾಶೆ.

ಪರಿಶೋಧಕ ಅಧ್ಯಯನದ ಕ್ರಮಗಳು[ಬದಲಾಯಿಸಿ]

ಪರಿಶೋಧಕ ಅಧ್ಯಯನಕ್ಕೆ ಈ ಕೆಳಗಿನವು ಬಹಳ ಪ್ರಮುಖವಾದ ಕ್ರಮಗಳು

ಸಾಹಿತ್ಯದ ಸಮೀಕ್ಷೆ[ಬದಲಾಯಿಸಿ]

ಸಂಶೋಧನೆಗಳ ನಡುವಿನ ಅಂತರವನ್ನು ಕಂಡುಕೊಳ್ಳಲು ಸಾಹಿತ್ಯ ಸಮೀಕ್ಷೆ ಸಹಾಯ ಮಾಡುತ್ತದೆ. ಸಾಹಿತ್ಯದ ಅವಲೋನಕನದಿಂದ ಸಂಶೋಧಕ ನಿದಿ‍ಷ್ಟ ಸಮಸ್ಯೆಯ ಮೇಲೆ ಈಗಾಗಲೇ ಏನು ಆಗಿದೆ ಮತ್ತು ಇನ್ನು ಮಾಡಬೇಕಾದುದು ಏನು ಎಂಬುದನ್ನು ತಿಳಿದುಕೊಳ್ಲುತ್ತೇವೆ.

ಅನುಭವ ಸಮೀಕ್ಷೆ[ಬದಲಾಯಿಸಿ]

ಸಮಸ್ಯೆಯ ವಾಸ್ತವಿಕ ಅನುಭವ ಇರುವ ವ್ಯಕ್ತಿಗಳ ಸಮೀಕ್ಷೆ ಬಹಳಷ್ಟು ಫಲಕಾರಿಯಾಗಬಹದು. ಜ್ಞಾನಿಗಳು ಮತ್ತು ಅನುಭವಸ್ಥರನ್ನು ಸಂಶೋಧಕ ಕಡೆಗಣಿಸಲಾಗದು. ಸಂದಶ‍ನಕ್ಕೆ ಮೊದಲು ಸಂಶೋಧಕನಿಗೆ ಸಮಸ್ಯೆಯ ಸಾಕಷ್ಟು ಅರಿವು ಇರಬೇಕು. ಬಹಳ ಎಚ್ಚರಿಕೆಯಿಂದ ಸಂದಶಿ‍ತನಲ್ಲಿರಬಹುದಾದ ವ್ಯಕ್ತಿಗತ ಪೂವಾ‍ಗ್ರಹಗಳನ್ನು ಸಂಶೋಧಕ ಬಿಟ್ಟುಬಿಡುವ ಸಾಮಥ‍್ಯ ಹೊಂದಿರಬೇಕು. ಅನುಭವ ಸಮೀಕ್ಷೆ ಪ್ರಾಕ್ಕ್ ಲ್ಪನೆಯನ್ನು ಹುಟ್ಟು ಹಾಕುವುದರ ಜೊತೆಗೆ ಇನ್ನೂ ಅನೇಕ ಕೊಡುಗೆಗಳನ್ನು ನೀಡುತ್ತದೆ.

ವಿಷಯ ಅಧ್ಯಯನಗಳು[ಬದಲಾಯಿಸಿ]

ವಿಷಯ ಅಧ್ಯಯನ ಪದ್ಧತಿಯನ್ನು ವೈಜ್ಞಾನಿಕ ಸಾಮಾಜಿಕ ಸಂಶೋಧನೆಯಲ್ಲಿ ಪರಿಚಯಿಸಿದ ಕೀತಿ‍ ಫೆಡ್ರಿಕ್ ಲೀಪ್ಲೆಯವರಿಗೆ ಸಲ್ಲುತ್ತದೆ.ವಿಷಯ ಅಧ್ಯಯನ ಪದ್ಧತಿ ಎಂದರೆ ಸಾಮಾಜಿಕ ಘಟಕದ ಅಥವಾ ವಸ್ತುವಿಷಯದ ಅಂಶಿಕ ಲಕ್ಷಣವನ್ನು ಜೋಪಾನ ಮಾಡುವ ಸಲುವಾಗಿ ಸಾಮಾಜಿಕ ಮಾಹಿತಿಯನ್ನು ಸಂಘಟಿಸುವುದು . ವಿಷಯ ಅಧ್ಯಯನ ಪದ್ಧತಿಯು ತನ್ನದೇ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ. ಈ ಪದ್ಧತಿಯ ಸಾಮಾನ್ಯ ವಿಷಯಗಳಲ್ಲಿ ಹೊರಬರುವ ಮಾಹಿತಿಯೊಡನೆ ಹೋಲಿಸದ ಮತ್ತು ಅಪವತೀ, ಅಂಚಿನಲ್ಲಿರುವ ಅಂಶಗಳನ್ನು ಕಂಡುಹಿಡಿಯಲು ಸಹಕರಿಸುತ್ತದೆ.

ವಿವರಣಾತ್ಮಕ ಮತ್ತು ರೋಗಪರೀಕ್ಷಕ ಅಧ್ಯಯನಕ್ಕೆ ವಿನ್ಯಾಸ[ಬದಲಾಯಿಸಿ]

ವಿವರಣಾತ್ಮಕ ಮತ್ತು ಚಿಕಿತ್ಸಕ ಅಧ್ಯಯನ ಕ್ರಮಗಳಲ್ಲಿ ವ್ಯತ್ಯಾಸಗಳಿದ್ದಾಗ್ಯೂ ಅವು ಪರಸ್ಪರ ಸಂಬಂಧಿಸಿವೆ. ಅಧ್ಯಯನದ ವಿನ್ಯಾಸಕ್ಕೆ ಸಂಬಂಧಿಸಿದಂತೆ ಅವು ಕೆಲವೊಂದು ಸಾಮಾನ್ಯ ಅಂಶಗಳನ್ನು ಹಂಚಿಕೊಂಡಿವೆ. ಹಾಗಾಗಿಯೇ ಇವೆರಡೂ ಪ್ರಕಾರದ ಅಧ್ಯಯನಗಳನ್ನು ಒಂದೇ ಪ್ರಕಾರದ ಸಂಶೋದನಾ ವಿನ್ಯಾಸದಡಿಯಲ್ಲಿ ಸೇರಿಸಿರುವುದು. ಮಾಹಿತಿ ಸಂಗ್ರಹಣೆಯ ನಿದಿ‍ಷ್ಟ ಕ್ರಮದ ಔಚಿತ್ಯ ಅಧ್ಯಯನದ ಉದ್ದೇಶವನ್ನು ಆಧರಿಸುತ್ತದೆ. ಸಂಗ್ರಹಿತ ಮಾಹಿತಿಯನ್ನು ಸೂಕ್ತವಾಗಿ ಪರಿಷ್ಕರಿಸಿ ವಿಶ್ಲೇಷಿಸಬೇಕು. ಸಂಗ್ರಹಿತ ಮಾಹಿತಿಯನ್ನು ಯಾಂತ್ರಿಕವಾಗಿ ಪರಿಷ್ಕರಿಸಲಾಗುವುದೇ ಅಥವಾ ವ್ಯಕ್ತಿಗತ ನೆಲೆಯಲ್ಲಿ ಪರಿಷ್ಕರಿಸಲಾಗುವುದೇ ಎನ್ನುವುದನ್ನು ಮೊದಲಿಗೇ ನಿಧ‍ರಿಸಬೇಕು. ಪರಿಶೋಧಕ ಅಧ್ಯಯನ ವಿನ್ಯಾಸಕ್ಕೆ ಹೋಲಿಸಿದರೆ ವಿವರಣಾತ್ಮಕ ಚಿಕಿತ್ಸಕ ವಿನ್ಯಾಸ ಬಹಳ ಕ್ಲಿಷ್ಟಕರವಾದುದು.

ಪ್ರಯೋಗಾತ್ಮಕ ಅಧ್ಯಯನ[ಬದಲಾಯಿಸಿ]

ಪ್ರಯೋಗಾತ್ಮಕ ಅಧ್ಯಯನವನ್ನು ಕಾರಣೀಯ ಅಧ್ಯಯನ ಎನ್ನುತ್ತಾರೆ. ಎರಡು ಅಥವಾ ಹೆಚ್ಚು ವ್ಯತ್ಯಯಗಳ ನಡುವಿನ ಕಾರಣೀಯ ಸಂಬಂಧಗಳನ್ನು ಪರೀಕ್ಷಿಸಿಕೊಲ್ಳುವುದೇ ಇದರ ಮುಖ್ಯ ಉದ್ದೇಶ. ಇದನ್ನು ಸಾಮಾಜಿಕ ಸಂಶೋಧನೆಯ ಉತ್ತಮ ಹಂತ ಎಂದು ಪರಿಗಣಿಸಲಾಗುತ್ತದೆ. ಪ್ರಾಯೋಗಿಕ ಪದ್ಧತಿ ವೈಯುಕ್ತಿಕ ಪಕ್ಷಪಾತವನ್ನು ತಗ್ಗಿಸುವುದಷ್ಟೇ ಅಲ್ಲದೆ ಕಾರಣೀಯ ಸಂಬಂಧಗಳ ಬಗ್ಗೆ ಅನುಮಿತಿಸಲು ಸಹಾಯ ಮಾಡುತ್ತದೆ.

ಕಾರಣ ಎಂದರೇನು[ಬದಲಾಯಿಸಿ]

ಕಾರಣ ಎನ್ನುವುದು ಘಟನೆಯೊಂದರ ಅನಿವಾಯ‍ವಾದ ಪೂವ‍ಗಾಮಿ ಅಂಶವಾಗಿದೆ. ಕಾರಣಗಳು ಅನೇಕ. ಈ ಪದ್ಧತಿಯಲ್ಲಿ ನಿಯಂತ್ರಿತ ಸಮೂಹ ಮತ್ತು ಪ್ರಾಯೋಗಿಕ ಸಮೂಹಗಳೆರಡೆರ ಪ್ರಯೋಗಕ್ಕೆ ಮೊದಲಿನ ಮತ್ತು ನಂತರದ ಅಳತೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ನಂತರ ಉಂಟಾದ ಎಲ್ಲಕ್ಕೂ ಮೊದಲಿನ ಅಂಶಗಳೇ ಕಾರಣವೆಂದು ಅನುಮಿತಿಸಲಾಗದು.

ಪ್ರಾಯೋಗಿಕ ಮತ್ತು ನಿಯಂತ್ರಿತ ಸಮೂಹಗಳ ಆಯ್ಕೆ[ಬದಲಾಯಿಸಿ]

ಪ್ರಯೋಗದ ಸಪ್ರಮಾಣತೆಯು ಇವೆರಡು ಸಮೂಹಗಳ ನಡುವಿನ ಏಕರೂಪತೆಯ ಪ್ರಮಾಣವನ್ನು ಆಧರಿಸಿದೆ. ಪ್ರಯೋಗದ ಕೊನೆಯಲ್ಲಿ ಪ್ರಯೋಗದಿಂದಾದ ಪರಿಣಾಮವನ್ನು ಕಂಡುಕೊಳ್ಳಲು ಇವೆರಡೂ ಸಮೂಹಗಳನ್ನು ಹೋಲಿಸಿನೋಡಲಾಗುವುದು. ಇತರೆ ಸಾಧ್ಯ ವ್ಯತ್ಯಯಗಳ ಪ್ರಭಾವವನ್ನು ಪ್ರಯೋಗದ ಮೂಲಕ ನಾವು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇ ಎರಡು ಗುಂಪುಗಳ ನಡುವಿನ ವ್ಯತ್ಯಾಸವನ್ನು ಸ್ವತಂತ್ರ ವ್ಯತ್ಯಯದಿಂದ ಉಂಟಾದುದು ಎಂದು ತಿಳಿಯಲಾಗುತ್ತದೆ.

ಸ್ವತಂತ್ರ ಮತ್ತು ಅವಲಂಬಿತ ವ್ಯತ್ಯಯಗಳು[ಬದಲಾಯಿಸಿ]

ಕಾರಣೀಯ ಅಂಶವನ್ನು ಸ್ವತಂತ್ರ ವ್ಯತ್ಯಯವೆಂದೂ ಅದರಿಂದಾಗುವ ಪರಿಣಾಮವನ್ನು ಅವಲಂಬಿತ ವ್ಯತ್ಯಯವೆಂದು ಕರೆಯಲಾಗುತ್ತದೆ. ಮಧ್ಯೆ ಪ್ರವೇಶಿಸುವ ಮತ್ತೂ ಒಂದು ಪ್ರಕಾರದ ವ್ಯತ್ಯಯವಿದೆ. ಇದನ್ನು ಮಧ್ಯೆ ಹಾಯುವ ಅಥವಾ ಮಧ್ಯಸ್ಥಿಕೆಯ ವ್ಯತ್ಯಯ ಎನ್ನಲಾಗಿದೆ. ಇವು ಸ್ವತಂತ್ರ ಮತ್ತು ಅವಲಂಬಿತ ವ್ಯತ್ಯಯಗಳ ನಡುವಿನ ಸಂಬಂಧವನ್ನು ವಿರೂಪಗೊಳಿಸುವ ವ್ಯತ್ಯಯಗಳಾಗಿವೆ. ಆದ್ದರಿಂದ ಸ್ವತಂತ್ರ ಮತ್ತು ಅವಲಮಬಿತ ವ್ಯತ್ಯಯಗಳ ನಡುವಿನ ನಿಜವಾದ ಸಂಬಂಧವನ್ನು ಕಂಡುಕೊಳ್ಳಲು ಮಧ್ಯೆ ಪ್ರೌಏಶಿಸುವ ವ್ಯತ್ಯಯದ ಪ್ರಭಾವನ್ನು ನಿಯಂತ್ರಿಸಬೇಕು. ಹೀಗ ಪ್ರಯೋಗವೊಂದನ್ನು ನಡೆಸಲಾಗುತ್ತದೆ.

ಯಾದೃಚ್ಚೀಕರಣ ಮತ್ತು ಹೊಂದಿಸುವಿಕೆ[ಬದಲಾಯಿಸಿ]

ಪ್ರಯೋಗವೊಂದನ್ನು ನಡೆಸಲು ಪ್ರಯೋಗಿಕ ಮತ್ತು ನಿಯಂತ್ರಿತ ಸಮೂಹಗಳು ಒಮದೇ ರೀತಿ ಇರುವುದು ಅತ್ಯಗತ್ಯ. ಇವುಗಳನ್ನು ಒಮದೇ ರಿತಿ ಕಾಣುವಂತೆ ಮಾಡಲು ಎರಡು ತಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಅವುಗಳೆಮದರೆ ಯಾದೃಚ್ಚೀಕರಣ ಮತ್ತು ಹೊಂದಿಕೆ. ಸಂಶೋಧನಾ ಸಮಸ್ಯೆಗೆ ಸಂಬಂಧಿಸಿದ ವಿಶ್ವದಿಂದ ಆಯ್ಕೆಯಾಗಿ ಪ್ರಯೋಗಿಕ ಗುಂಪಿನಲ್ಲಿ ಸೇಫ‍ಡೆಯಾಗುವ ಅವಕಾಶವನ್ನು ಪ್ರತಿಯೊಂದು ಘಟಕವೂ ಹೊಂದುವಂತೆ ನೋಡಿಕೊಳ್ಳವು ತಂತ್ರವೇ ಯಾದೃಚ್ಚೀಕರಣ. ಎಲ್ಲ ಸಾಧ್ಯ ಪರಿಗಣೆಯ ಮೇಲೆ ವ್ಯವಸ್ಥಿತವಾಗಿ ಸಮನಾಗಿಸುವ ಮೂಲಕ ಎರಡು ಸಮೂಹಗಳಿಗೆ ವ್ಯಕ್ತಿಗಳನ್ನು ಹಾಕುವ ಪ್ರಕ್ರಿಯೆಯನ್ನು ಹೊಂದಿಸುವಿಕೆ ಎನ್ನಲಾಗಿದೆ. ಹೊಂದಿಸಲು ನಿನಾ‍ಯಕ ಗುಣ ಅಥವಾ ವ್ಯತ್ಯಯದ ಆಧಾರದಲ್ಲಿ ಜನಸಂಖ್ಯೆನ್ನು ಸಮನಾಗಿ ವಿಭಜಿಸಬೇಕು.

ಪ್ರಯೋಗ ನಡೆಸುವುದು[ಬದಲಾಯಿಸಿ]

ಈಗಾಗಲೇ ನಾವು ಹೇಳಿರುವಂತೆ ಪ್ರಯೋಗವೆಂದರೆ ನಿಯಂತ್ರಿತ ಸನ್ನವೇಶದಲ್ಲಿ ಮಾಡಲಾಗುವ ಅವಲೋಕನೆ. ಅದರ ಹಲವು ವಿಧಾನಗಳು.[೧]

  • ಒಪ್ಪಂದ ಪದ್ಧತಿ
  • ವ್ಯತ್ಯಾಸದ ಪದ್ಧತಿ
  • ಒಪ್ಪಂದ ಮತ್ತು ವ್ಯತ್ಯಾಸದ ಒಟ್ಟು ಪದ್ಧತಿ
  • ಉಳಿಕೆ ಪದ್ಧತಿ
  • ಸಹಗಾಮೀ ವ್ಯತ್ಯಾಸದ ಪದ್ಧತಿ
  • ಪ್ರಯೋಗಾತ್ಮಕ ವಿನ್ಯಾಸದ ಪ್ರಕಾರಗಳು
  • ಕೇವಲ ನಂತರದ ಪ್ರಾಯೋಗಿಕ ವಿನ್ಯಾಸ.
  • ಪೂವಾ‍ದ ಪ್ರಾಯೋಗಿಕ ವಿನ್ಯಾಸ
  • ಹಿಂದೆ ನಡೆದದ್ದಕ್ಕೂ ಅನ್ವಯಿಸುವ ವಿನ್ಯಾಸ.
  • ಅಂಕಣ ಅಧ್ಯಯನ ವಿನ್ಯಾಸ.

ಕೇವಲ ಪ್ರಯೋಗಾತ್ಮಕ ಸಮೂಹ ಮಾತ್ರ ಕಲ್ಪಿತ ಕಾರಣಿಯ ವ್ಯತ್ಯಯಕ್ಕೆ ತೆರೆದುಕೊಂಡಿದೆಯಾದರೂ ನಿಯಂತ್ರಿತ ಸಮೂಹ ಇದರಿಂದ ಕೊನೆಗೊಂಡದೆ. ಪ್ರಯೋಗದ ನಂತರ ಎರಡೂ ಗುಂಪುಗಳನ್ನು ಹೋಲಿಸಿ ನೋಡಲಾಗುತ್ತದೆ. ಕೇವಲ ನಮತರದ ವಿನ್ಯಾಸದಲ್ಲಿ ಎರಡೂ ಸಮೂಹಗಳನ್ನು ಏಕಪ್ರಕಾರವಾಗಿ ಸಮನಾದವು ಎಂದು ತಿಳಿಯಲಾಗಿದೆ. ಪೂವಾ‍ಪರ ಪ್ರಾಯೋಗಿಕ ವಿನ್ಯಾಸದಲ್ಲಿ ಅವಲಂಬಿತ ವ್ಯತ್ಯಯವನ್ನು ಅಂದರೆ ಪರಿಣಾಮವನ್ನು ಪ್ರಯೋಗಕ್ಕೆ ಸಮೂಹವನ್ನು ಅಥವಾ ಸಮೂಹಗಳನ್ನಜು ಒಳಪಡಿಸುವುದಕ್ಕೆ ಮೊದಲು ಮತ್ತು ಓಲಪಡಿಸಿದ ನಂತರ ಅಳೆಯಲಾಗುತ್ತದೆ. ಪ್ರಸಕ್ತದ ಸಮಸ್ಯೆಯೊಂದರಿಂದ ಈ ಮೊದಲಿನ ಕಲ್ಪಿತ ಕಾರಣವೊಂದಕ್ಕೆ ಅನ್ವಯಿಸಲು ಬಳಸಲಾಗುವ ವಿನ್ಯಾಸವನ್ನು ಎಕ್ಸ್ - ಪೋಸ್ಟ್ ಫ್ಯಾಕ್ಟೋ ವಿನ್ಯಾಸ ಎನ್ನುತ್ತಾರೆ. ಈ ವಿಧಾನದಲ್ಲಿ ಪ್ರಸಕ್ತದ ಮೂಲಕ ಗತಕಾಲವನ್ನು ಅಭ್ಯಸಿಸಲಾಗುತ್ತದೆ. ಈ ಪದ್ಧತಿ ಕೆಲವೊಂದು ಮಿತಿಗಳನ್ನು ಹೊಂದಿದೆ. ಹೋಲಿಸಬಹುದಾದ ಎರಡು ಏಕರೂಪದ ಸಮೂಹಗಳು ಅಥವಾ ದೇಶಗಳನ್ನು ಕಂಡುಕೊಳ್ಳುವುದು ಈ ಪದ್ಧತಿಯ ಮಿತಿಗಳಲ್ಲಿ ಒಂದಾಗಿದೆ. ಅಂತೆಯೇ ಹೋಲಿಕೆಗೆ ವಸ್ತುನಿಷ್ಠ ಆದಾರವೊಂದನ್ನು ಕಂಡುಕೊಳ್ಳುವುದು ಕೂಡಾ ಬಹಳ ಕಷ್ಟ. ಎರಡನೆಯದಾಗಿ ಅಧ್ಯಯನಕ್ಕಾಗಿ ನಿಯಂತ್ರಿತ ಪರಿಸ್ಥಿತಿಗಳನ್ನು ಹೊಂದುವುದು ಅಥವಾ ಕೃತಕ ಪರಿಸ್ಥಿತಿಗಳನ್ನು ನಿಮಾ‍ಣ ಮಾಡುವುದು ಸಾಧ್ಯವಿಲ್ಲ. ಈ ಪ್ರಕಾರದ ಅಧ್ಯಯನದಲ್ಲಿ ಪೂವಾ‍ಪರ ಪ್ರಕಾರದ ಅಧ್ಯಯನ ಸಾಧ್ಯವಿಲ್ಲ. [೨]

ಅಂಕಣ ಅಧ್ಯಯನ[ಬದಲಾಯಿಸಿ]

ಇದು ವಿಭಿನ್ನ ಪ್ರಕಾರದ ಮಾಹಿತಿಗಳನ್ನು ಬಳಸಿಕೊಂಡು ನಿದಿ‍ಷ್ಟ ವಿಷಯವನ್ನು ಕಾಲಾನುಕ್ರಮದಲ್ಲಿ ಅಭ್ಯಸಿಸುವ ಪದ್ಧತಿಯಾಗಿದೆ. ಈ ಪ್ರಕಾರದ ಅಧ್ಯಯನದಲ್ಲಿ ವ್ಯತ್ಯಯಗಳ ನಡುವೆ ಕಾಲ - ಸಂಬಂಧದ ಪ್ರತ್ಯಕ್ಷ ಸಾಕ್ಷಿಗಳನ್ನು ಸಂಶೋಧಕ ಪಡೆದುಕೊಳ್ಳಬಹುದು. ಈ ಪದ್ಧತಿ ಕಾಲದ ವಿಭಿನ್ನ ಅವಧಿಗಳಲ್ಲಿ ಒಂದೇ ವಸ್ತುವಿನ ಪುನರಾವತಿ‍ತ ಅವಲೋಕನವನ್ನು ಒಳಗೊಳ್ಳುತ್ತದೆ.

ಮಾಹಿತಿ ಸಂಗ್ರಹಣೆ[ಬದಲಾಯಿಸಿ]

ಒಂದು ರೀತಿಯಲ್ಲಿ ಮೊದಲಿನ ಸಮಾಜ ವಿಜ್ಞಾನಿಗಳು ವಿಷಯದ ಪ್ರಾಯೋಗಿಕ ಅನುಭವವಿಲ್ಲದೆ ಸಿದ್ದಾಂತಗಳನ್ನು ಮಾಡಿದ್ದರು. ಈಗ ಪ್ರಾಯೋಗಿಕ ಅಧ್ಯಯನ ಮಾಡಲು ಹೆಚ್ಚಾಗಿ ಇಷ್ಟಪಡುತ್ತಾರೆ. ಮೊದಲ ಭಾಗದಲ್ಲಿ ಸಂಶೋಧನೆ ಸಮಸ್ಯೆಯನ್ನು ತಿಳಿದುಕೊಂಡ ನಂತರ ಸಂಶೋಧಕ ತೆರೆದ ಸಾಹಿತ್ಯ ಸಮೀಕ್ಷೆ ನಡೆಸುತ್ತಾನೆ.ಇದೆಲ್ಲ ಸಿಕ್ಕ ನಂತರ ಸಂಶೋಧನೆ ಹಾಗೂ ನಮೂನೆ ವಿನ್ಯಾಸಗಳು ತಯಾರಾದನಂತರ ಸಂಶೋಧಕನು ಮಾಹಿತಿ ಕಲೆ ಹಾಕಲು ಪ್ರಾರಂಭಿಸುತ್ತಾನೆ.

ನಂಬಿಕಾರ್ಹ ಮೂಲಗಳು ಸಪ್ರಮಾಣಿಕ ನಿರ್ಣಯಗಳಿಗೆ ಹಾದಿಮಾಡುತ್ತದೆ. ಮಾಹಿತಿಗಳನ್ನು ಸಂಗ್ರಹಿಸಬಹುದಾದ ಎರಡು ಪ್ರಮುಖ ಮೂಲಗಳಿವೆ. ಅವುಗಳೆಂದರೆ:

  1. ದಸ್ತಾವೇಜು ಅಥವಾ ಪತ್ರ ಮೂಲಗಳು, ಮತ್ತು
  2. ಕ್ಷೇತ್ರ ಮೂಲಗಳು ಅಥವಾ ವ್ಯಕ್ತಿಮೂಲ

ನಿಜವಾದ ಸಂಶೋಧನೆಗಳು ಸತ್ಯ ಪ್ರಾಮಾಣಿಕತೆಗೆ ದಾರಿಯಾಗುತ್ತದೆ. ಪ್ರಪ್ರಥಮವಾಗಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಉಪಯೋಗಿಸಲು ಬಳಸಬಹುದಾದ ಸಾಧನೆಗಳೆಂದರೆ ಪ್ರಶ್ನಾವಳಿ ಹಾಗೂ ಸಂದರ್ಶನ.

ದಸ್ತಾವೇಜು ಮೂಲಗಳು[ಬದಲಾಯಿಸಿ]

ದಸ್ತಾವೇಜು ಮೂಲದ ಮಾಹಿತಿಯೆಂದರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಗ್ಗೆ ದೊರಕುವ ದಾಖಲೆಗಳಿಂದ ಸಿಗುವ ವಿಷಯಗಳಿಗೆ ದಸ್ತಾವೇಜು ಎನ್ನುತ್ತಾರೆ. ಇವು ಹಿಂದಿನ ಕಾಲದ ಮಾಹಿತಿಯಾಗಿರುತ್ತದೆ.

ವೈಯಕ್ತಿಕ ದಸ್ತಾವೇಜುಗಳು[ಬದಲಾಯಿಸಿ]

ಪ್ರತಿಯೊಬ್ಬ ವ್ಯಕ್ತಿಯ ವರ್ತನೆ, ಅನುಭವ ಮತ್ತು ನಂಬಿಕೆಗಳನ್ನು ಕುರಿತು ಸ್ವಂತವಾಗಿ ತನ್ನ ಇಚ್ಚೆಯಿಂದ ಬರೆದ ವಿವರಣೆಯಾಗಿರುತ್ತದೆ. ಇದರಲ್ಲಿ ಕೆಲವು ಪ್ರಾಯುಕ್ತವಾದುದು, ಯಾವುವೆಂದರೆ ಆತ್ಮಚರಿತ್ರೆ, ದಿನಚರಿಗಳು ಮತ್ತು ಪತ್ರಗಳು, ತುಂಬಾ ಮುಖ್ಯವಾದ ವೈಯಕ್ತಿಕ ದಸ್ತಾವೇಜುಗಳಾಗಿರುತ್ತದೆ.

ಆತ್ಮಚರಿತ್ರೆ[ಬದಲಾಯಿಸಿ]

ಆತ್ಮಚರಿತ್ರೆ ಎಂದರೆ ತಾನೇ ಬರೆದ ವ್ಯಕ್ತಿಯ ಸ್ವಂತ ಅನುಭವದ ಮೊಟ್ಟ ಮೊದಲ ವಿಷಯವಾಗಿರುತ್ತದೆ. ಕೆಲವು ಸಲ ಅವರ ಸ್ವಂತ ವಿಷಯಗಳನ್ನು ಮುಕ್ತವಾಗಿ ಹೇಳಲು ಇಚ್ಚಿಸದೆ, ಉದ್ದೇಶಪೂರಿತವಾಗಿ ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಆಗ ಅವಲಂಬನೆ ಕುಂಠಿತವಾಗುತ್ತದೆ. ಇದು ಹೇಳುವ ವ್ಯಕ್ತಿಯ ಹತ್ತಿರದ ಜೀವನದ ದೃಶ್ಯವಾಗಿರುತ್ತದೆ.

ದಿನಚರಿಗಳು[ಬದಲಾಯಿಸಿ]

ಎಲ್ಲೋ ಹಲವು ಮಂದಿ ಅವರ ಜೀವನದ ಮುಖ್ಯವಾದ ಸಂಗತಿಗಳನ್ನು ನೆನಪಿಸಿಕೊಳ್ಳಲು ದಿನಚರಿ ಬರೆಯುತ್ತಾರೆ. ಮತ್ತೆ ಕೆಲವರು ಬೇರೆಯವರಿಗೆ ಹೇಳಲು ಸಾಧ್ಯವಿಲ್ಲದ ವಿಷಯವನ್ನು ದಿನಚರಿಯಲ್ಲಿ ಬರೆದಿಟ್ಟಿರುತ್ತಾರೆ. ಇದು ಒಂದು ಸ್ವಂತವಾಗಿ ಬರೆಯುವ ಪದ್ಧತಿ.

ಪತ್ರಗಳು[ಬದಲಾಯಿಸಿ]

ಪತ್ರಗಳಲ್ಲಿ ಎರಡೂ ಕಡೆ ಕಾಗದ ಪತ್ರಗಳು ದೊರೆತರೆ ಅವು ನಿಜವಾದ ಸತ್ಯವಾದ ಮಾಹಿತಿಯೆಂದು ಕಂಡು ಹಿಡಿಯಬಹುದು. ಹಾಗೂ ನಿರೂಪಿಸಬಹುದು. ಭಾವನೆ, ಸ್ನೇಹ, ಪ್ರೀತಿ, ವೈವಾಹಿಕ ಸಂಬಂಧ, ಉದ್ವೇಗ ಇವುಗಳನ್ನು ತಿಳಿಯಬಹುದು.


ಸಾರ್ವಜನಿಕ ಅಥವಾ ಕಛೇರಿ ದಸ್ತಾವೇಜುಗಳು[ಬದಲಾಯಿಸಿ]

ಸಾರ್ವಜನಿಕ ದಸ್ತಾವೇಜುಗಳು ಮಾಧ್ಯಮಿಕ ಮೂಲದ ಮಾಹಿತಿಗಳ ಬಹುಮುಖ್ಯ ಭಾಗವಾಗಿದೆ. ಸರ್ಕಾರಿ ಸಂಸ್ಥೆಗಳಿಂದ ಸಂಗ್ರಹಿಸಿದ ಮಾಹಿತಿ ಇದಾಗಿದೆ. ಇವು ಪ್ರಕಟಿತ ಇಲ್ಲವೇ ಅಪ್ರಕಟಿತ ಇರಬಹುದು. ಈ ಕೆಳಗಿನವು ಕೆಲವೊಂದು ಪ್ರಮುಖ ಸಾರ್ವಜನಿಕ ದಸ್ತಾವೇಜುಗಳಾಗಿವೆ.

ಕಡತಗಳು[ಬದಲಾಯಿಸಿ]

ಎಲ್ಲಾ ರೀತಿಯಲ್ಲಿ ಸಾರ್ವಜನಿಕವಾಗಿ ದೊರಕುವ ದಾಖಲೆಗಳಿಗೆ ವಿಶಿಷ್ಟ ಸ್ಥಾನವಿದೆ. ಇವು ಸಂತೃಪ್ತಿಕರ ಮತ್ತು ಅವಲಂಬನೆಯಾಗಿರುತ್ತದೆ. ಇದರಲ್ಲಿ ಮುಖ್ಯವಾದುವು ಕಾನೂನಿನ ಕಡತ, ಪೊಲೀಸ್ ಕಡತ, ನ್ಯಾಯಾಲಯದ ಕಡತ, ವ್ಯಾಪಾರದ ಕಡತ, ಇಂತಹುವುಗಳು ಆಗಿವೆ. ಇವು ಉಪಯೋಗಕರ ಹಾಗೂ ನಂಬಿಕೆಗೆ ಅರ್ಹವಾದ ಮಾಹಿತಿಯನ್ನು ನೀಡಬಹುದಾಗಿದೆ.

ಪುಸ್ತಕಗಳು[ಬದಲಾಯಿಸಿ]

ಇವು ಹೆಚ್ಚು ಜ್ಞಾನವನ್ನು ಕೊಡುತ್ತದೆ. ಸಂಶೋಧನೆಗೆ ಈ ಪುಸ್ತಕಗಳು ಪ್ರಾಯೋಗಿಕ ವಿಷಯಗಳ ಬಗ್ಗೆ ಸಹಾಯ ಮಾಡುತ್ತವೆ. ಇದರ ಬಗ್ಗೆ ಜ್ಞಾನ ಸಂಪಾದಿಸಲುಸಂಶೋಧಕ ಪುಸ್ತಕ ಸಾಹಿತ್ಯಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು.

ಕಛೇರಿ ಪ್ರಕಟಣೆಗಳು[ಬದಲಾಯಿಸಿ]

ಸರ್ಕಾರಿ ಕಛೇರಿಗಳಾಗಿರಲಿ ಅಥವಾ ಖಾಸಗಿ ಕಛೇರಿಗಳಾಗಿರಲಿ ಪ್ರತಿಯೊಂದು ಕಾಲದಲ್ಲಿಯೂ ಪ್ರಕಟಿಸುವ ಔಪಚಾರಿಕ ಮಾಹಿತಿಗಳೇ ಕಛೇರಿ ಪ್ರಕಟಣೆಗಳಾಗಿರುತ್ತವೆ. ವಾರ್ಷಿಕ ಉತ್ಪನ್ನ, ಸರಾಸರಿ ಆದಾಯ, ರಾಷ್ಟ್ರೀಯ ಆದಾಯ, ವಿದೇಶೀ ವ್ಯಾಪಾರ, ವಿನಿಮಯ ದರ, ಅಪರಾಧ, ಜನನ ಪ್ರಮಾಣ ಮತ್ತು ಮರಣಪ್ರಮಾಣ, ವಿಚ್ಛೇಧನ ಇತ್ಯಾದಿ ವಿಷಯಗಳ ಮೇಲೆ ಇವು ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತವೆ. ಉದಾಹರಣೆ: "ಇಂಡಿಯಾ -ಎ ರೆಫರೆನ್ಸ್ ಅನ್ಯುಯಲ್".

ದಿನಪತ್ರಿಕೆಗಳು[ಬದಲಾಯಿಸಿ]

ದಿನನಿತ್ಯ ನಡೆಯುವ ಘಟನೆಗಳನ್ನು ಪತ್ರಕರ್ತ ಪತ್ರಿಕೆಗಳಿಗೆ ವರದಿ ನೀಡುತ್ತಾನೆ. ಈ ವರದಿಗಳು ಬಹು ಮುಖ್ಯವಾಗಿರುತ್ತದೆ. ಆದರೆ ವ್ಯಕ್ತವಾಗುವ ಘಟನೆಗಳ ವರದಿಯನ್ನು ಸಂಪೂರ್ಣವಾಗಿ ನಂಬಲಾಗದು. ಪತ್ರಿಕಾ ವರದಿಗಾರ ಹಲವಾರು ರೀತಿಯ ಒತ್ತಡಗಳಿಂದ ವರದಿ ನೀಡಿರುತ್ತಾನೆ.

ಸಮೀಕ್ಷೆ ವರದಿಗಳು[ಬದಲಾಯಿಸಿ]

ಖಾಸಗಿ, ಸರ್ಕಾರಿ ಮತ್ತು ಇತರೆ ಸಂಘ ಸಂಸ್ಥೆಗಳು ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು, ಶೈಕ್ಷಣಿಕ ಅಂತಸ್ತು, ಮಾರುಕಟ್ಟೆ ಪರಿಸ್ಥಿತಿಗಳು ಇತ್ಯಾದಿಗಳ ಮೇಲೆ ಇವು ಉಪಯುಕ್ತ ಮಾಹಿತಿ ನೀಡುವುದೇ ಸಮೀಕ್ಷೆ ವರದಿಯಾಗಿರುತ್ತದೆ. ಸಂಶೋಧಕ ಬಳಸಿಕೊಳ್ಳುವ ಬಹುಮುಖ್ಯ ಸಾರ್ವತ್ರಿಕ ದಾಖಲೆಯೆಂದರೆ "ರಾಷ್ಟ್ರೀಯ ನಮೂನೆ ಸಮೀಕ್ಷೆ ವರದಿಗಳು".

ಸಂಚಿಕೆಗಳು ಮತ್ತು ನಿಯತಕಾಲಿಕೆಗಳು[ಬದಲಾಯಿಸಿ]

ಈ ಸಂಚಿಕೆ ಮತ್ತು ನಿಯತಕಾಲಿಕೆಗಳು ತುಂಬಾ ವಿವಿಧ ರೀತಿಯ ವಿಷಯಗಳನ್ನೊಳಗೊಂಡಿರುತ್ತದೆ. ಹೆಚ್ಚಿನವು ಅವಲಂಬಿತಾರ್ಹವಾಗಿರುತ್ತದೆ. ಸಾಮಾಜಿಕ ಸಂಶೋಧನೆಗೆ ಬಳಸಲು ಉಪಯೋಗವಾಗುತ್ತದೆ. ಇದು ಬಹುಮುಖ್ಯ ಮಾಹಿತಿಗೆ ಮೂಲವಾಗಿದೆ.

ಪ್ರವಾಸ ಕಥನಗಳು[ಬದಲಾಯಿಸಿ]

ಇದು ವಿಶ್ವದ ವಿವಿಧ ಸ್ಥಳಗಳಿಗೆ ಹೋಗಿ ನೋಡಿ ಬಂದ ಪ್ರಯಾಣ ಅನುಭವಗಳ ಬಗ್ಗೆ ಬರೆಯುವ ವಿಚಾರಧಾರೆ. ಸಂಶೋಧನೆಗೆ ಬಹಳ ಉಪಯೋಗವಾದ ವಿಚಾರದ ಮಾಹಿತಿ ಕೊಡುತ್ತದೆ.

ಚಾರಿತ್ರಿಕ ದಾಖಲೆಗಳು[ಬದಲಾಯಿಸಿ]

ಹಲವಾರು ಘಟನೆಗಳು, ಸಂಗತಿಗಳು, ವ್ಯವಸ್ಥೆ ಅಥವಾ ಸಂಸ್ಥೆಯೊಂದರ ಚಾರಿತ್ರಿಕ ದಾಖಲೆಗಳು ಮತ್ತೊಂದು ಪ್ರವರ್ಗದ ಉಪಯುಕ್ತ ದಸ್ತಾವೇಜು ಮೂಲದ ಪುರಾವೆಗಳಾಗಿವೆ.

ಜೀವನ ಚರಿತ್ರೆಗಳು[ಬದಲಾಯಿಸಿ]

ಜೀವನ ಚರಿತ್ರೆಯೆಂದರೆ ವ್ಯಕ್ತಿಯೊಬ್ಬನ ತನ್ನ ಜೀವನದ ವಿಷಯವನ್ನು ಬೇರೆ ವ್ಯಕ್ತಿಯು ನೀಡಿದ ವಿವರಣೆಯಾಗಿರುತ್ತದೆ. ಇಂತಹ ಚರಿತ್ರೆಗಳು ಪ್ರಖ್ಯಾತ ವ್ಯಕ್ತಿಗಳನ್ನು ಕುರಿತದ್ದಾಗಿರುತ್ತದೆ. ಪ್ರಕಟಿಸಲೆಂದೇ ಹೆಚ್ಚು ಒತ್ತು ನೀಡಿ ನಾಟಕೀಯವಾಗಿ ಬರೆಯುತ್ತಾರೆ. ಕೇಳಲು, ಓದಲು ಕುತೂಹಲಕಾರಿಯಾಗಿರುವಂತೆ ಮಾಡುತ್ತಾರೆ. ಸತ್ತವರನ್ನು ರಕ್ಷಿಸಲು ಹೆಂಡತಿ, ಮಕ್ಕಳು ಚರಿತ್ರೆಗಳನ್ನು ಬೇರೆ ಬೇರೆ ರೀತಿಯಾಗಿ ಬರೆಯುತ್ತಾರೆ.

ಜನಗಣತಿ ವರದಿಗಳು ಮತ್ತು ಸಂಖ್ಯಾ ಮಾಹಿತಿಗಳು[ಬದಲಾಯಿಸಿ]

ಇವುಗಳನ್ನು ಪರಿಣಿತರು ತಯಾರು ಮಾಢುತ್ತಾರೆ. ಇದನ್ನು ಸಮಾಜ ಶಾಸ್ತ್ರಜ್ಞರು,ವಿಜ್ಞಾನಿಗಳು ಬಳಸುತ್ತಾರೆ.

ವರದಿಗಳು[ಬದಲಾಯಿಸಿ]

ವರದಿ ಮಾಡಿಕೊಳ್ಳುವ ಉದ್ದೇಶ ವಿಷಯಗಳನ್ನು ಸಂಗ್ರಹಿಸುವುದು. ಘಟನೆ ನಡೆದ ಮೇಲೆ ವರದಿ ಬರೆಯುತ್ತಾರೆ. ದಸ್ತಾವೇಜು ಮೂಲದ ವರದಿಯ ವಿಷಯಗಳು ಸಂಶೋಧನೆಗೆ ತನ್ನ ಕಾರ್ಯದ ಯೋಚನೆ ಮಾಡಲು ತಳಪಾಯವಾಗುತ್ತದೆ. ಪ್ರಶ್ನೆ ಮಾಡಿ ಅವಲೋಕನ ಮಾಡಿ, ಭೇಟಿ ಮಾಡಿ ಈ ಪದ್ದತಿಯನ್ನು ಅನುಸರಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಅವಲೋಕನೆ[ಬದಲಾಯಿಸಿ]

ಅವಲೋಕನವೆಂದರೆ ಸಂಶೋಧನೆಯ ಶಾಸ್ತ್ರೀಯ ಪದ್ದತಿಯೆಂದಾಗಿರುತ್ತದೆ.

ಅವಲೋಕನೆಯ ಬಗೆಗಳು[ಬದಲಾಯಿಸಿ]

  1. ಅನಿಯಂತ್ರಿತ ಅವಲೋಕನೆ ಮತ್ತು
  2. ನಿಯಂತ್ರಿತ ಅವಲೋಕನೆ

ಇಲ್ಲಿ ಅವಲೋಕನೆಯ ಪರಿಸ್ಥಿತಿಗಳು ವಿಧಿಬದ್ಧವಾಗಿದ್ದು ಪ್ರಶ್ನಾವಳಿ, ಅನುಸೂಚಿ, ನಕ್ಷೆ, ಭಾವಚಿತ್ರ ಇತ್ಯಾದಿ ಯಾಂತ್ರಿಕ ಸಾಧನಗಳನ್ನು ಬಳಸಲಾಗುತ್ತದೆ.

ಪ್ರಶ್ನಾವಳಿ[ಬದಲಾಯಿಸಿ]

ಪ್ರಶ್ನಾವಳಿಯೆಂಧರೆ ಹೊರಗಿನ ಸಂಗತಿಗಳನ್ನು ಅಭ್ಯಸಿಸಲು ಸಂಶೋಧನ ಪ್ರಶ್ನಾವಳಿ ಪದ್ದತಿಯನ್ನು ಬಳಸಲಾಗುತ್ತದೆ. ಮಾಹಿತಿಯನ್ನು ಸಂಗ್ರಹಿಸಲು ಪ್ರಶ್ನಾವಳಿಯನ್ನು ಉಪಯೋಗಿಸುತ್ತಾರೆ.

ಪ್ರಶ್ನಾವಳಿಯ ಪ್ರಕಾರಗಳು[ಬದಲಾಯಿಸಿ]

  1. ರಚಿತ ಪ್ರಶ್ನಾವಳಿ
  2. ಅರಚಿತ ಪ್ರಶ್ನಾವಳಿ

ರಚಿತ ಪ್ರಶ್ನಾವಳಿ ಸ್ಪಷ್ಟ ನಿರ್ದಿಷ್ಟ ಪೂರ್ವ ನಿರ್ಧರಿತ ಪ್ರಶ್ನೆಗಳನ್ನು ಹೊಂದಿದ ಪ್ರಶ್ನೆ ಮಾಲಿಕೆ.

ಅಂಚೆ ಪ್ರಶ್ನಾವಳಿ[ಬದಲಾಯಿಸಿ]

ಸಂದರ್ಶನಕ್ಕೆ ಜನರು ಸಿಗದೆ ಇದ್ದಾಗ ಬೇರೆ ಕಡೆ ಹರಡಿಕೊಂಡಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ಇರುವ ಸಾಧನವೆಂದರೆ ಅಂಚೆ ಪ್ರಶ್ನಾವಳಿ. ಇದನ್ನು ಉತ್ತರಿಸಿ ಅಂಚೆ ಮೂಲಕ ಪ್ರಶ್ನಾವಳಿಯನ್ನು ಕಳುಹಿಸಿಕೊಡಬಹುದು. ಅಂಚೆ ಪ್ರಶ್ನಾವಳಿ ವಿಧಾನವನ್ನು ಬಳಸುವ ಸಂಶೋಧಕ ಈ ಕೆಳಗಿನ ಅಂಶಗಳನ್ನು ಮೊದಲಿಗೇ ಗಮನಿಸಬೇಕು:

  1. ಬೇಕಾದ ಮಾಹಿತಿಯ ಪ್ರಕಾರ
  2. ತಲುಪಿದ ಸೂಚನದಾತನ ಪ್ರಕಾರ
  3. ಸೂಚನದಾತನ ಲಭ್ಯತೆ
  4. ಪ್ರಾಕ್ಕ್ ಲ್ಪನೆಯ ನಿಕರತೆ.

ಪ್ರಶ್ನಾವಳಿಯ ಅನುಕೂಲಗಳು[ಬದಲಾಯಿಸಿ]

ಶೀಘ್ರ ಅಂಚೆಯ ಮೂಲಕ ಕಳುಹಿಸಿಕೊಡುವುದು. ಒಂದು ವೇಳೆ ಹೆಚ್ಚು ಜನರನ್ನು ತಲುಪಿಸಲು ಸಾಧ್ಯವಾಗದೆ ಇದ್ದಾಗ ಅಂಚೆ ವಿಳಂಬ ಪದ್ಧತಿ ತಪ್ಪಿಸಿ ಶೀಘ್ರವಾಗಿ ಕಾಲ ಉಳಿಯುವುದು ಮತ್ತು ಇದರ ಹಣ, ಶ್ರಮ ಉಳಿಸಲು ಇದು ಉಪಯೋಗವಾಗುತ್ತದೆ.

ಪ್ರಶ್ನಾವಳಿಯ ಅನಾನುಕೂಲಗಳು[ಬದಲಾಯಿಸಿ]

ಅನಾನುಕೂಳ ಪ್ರಶ್ನಾವಳಿಯನ್ನು ಹಿಂದಕ್ಕೆ ಕಳುಹಿಸುವುದು ಅನೇಕ ಅಂಶಗಳಿಂದ ಕೂಡಿದೆ. ಕೆಲವು ಸಲ ಜನರು ಪ್ರಶ್ನಾವಳಿಗಳನ್ನು ಹಿಂತಿರುಗಿಸುವುದಿಲ್ಲ.

ಸಂದರ್ಶನ ಪದ್ಧತಿ[ಬದಲಾಯಿಸಿ]

ಸಾಧಾರಣ ಸಂದರ್ಶನವೆಂದರೆ ಮುಖಾ-ಮುಖಿಯಾಗಿ ಪ್ರಶ್ನಿ ಕೇಳುವುದು. ಇದರಲ್ಲಿ ಎರಡು ವಿಧಗಳು.

ಸಂದರ್ಶನದ ಬಗೆಗೆಳು[ಬದಲಾಯಿಸಿ]

  • ರಚಿತ

ರಚಿತ ಸಂದರ್ಶನವೆಂದರೆ ನಿರ್ಧೇಶಿತ, ನಿಯಂತ್ರಿತ ಸಂದರ್ಶನವೆನ್ನುತ್ತಾರೆ. ಮೊದಲೇ ಪ್ರಶ್ನೆಯನ್ನು ತಯಾರಿಟ್ಟುಕೊಂಡು ಪ್ರಶ್ನೆಗಳನ್ನು ಕೇಳುವುದೇ ರಚಿತ ಸಂದರ್ಶನವಾಗಿದೆ.

  • ಅರಚಿತ

ಅರಚಿತ ಸಂದರ್ಶನದಲ್ಲಿ ಬಳಸಿದ ತಂತ್ರಗಳು ತುಂಬಾ ನಿಜವಾಗಿ, ಸತ್ಯವಾಗಿರುವುದಿಲ್ಲ. ಏನು ವಿಷಯ ಮಾಹಿತಿಗಾಗಿ ಕೊಡುತ್ತೇವೆಂದು ಸಂದರ್ಶಕರಿಗೆ ಗೊತ್ತಿರುವುದಿಲ್ಲಿ. ಸಂದರ್ಶನ ಪದ್ಧತಿ ಸ್ವಂತವಾಗಿ ಹಾಗೂ ಪ್ರತ್ಯಕ್ಷ ಜ್ಞಾನವನ್ನು ಪಡೆಯಲು ಸಾಧನವಾಗಿದೆ. ಇದರಲ್ಲಿ ಕೊಡುವ ಮಾಹಿತಿ ನಂಬಿಕೆಗೆ ಅರ್ಹವಾಗಿರುತ್ತದೆ. ಇದರಿಂದ ಎಲ್ಲರನ್ನು ಸಂಪರ್ಕಿಸಬಹುದು ಹಾಗೂ ಎಲ್ಲರಿಗೂ ಉತ್ತರಿಸಬಹುದು.

ಇತರೆ ಪ್ರಕಾರದ ಸಂದರ್ಶನಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ[ಬದಲಾಯಿಸಿ]

  1. ಕೇಂದ್ರೀಕೃತ ಸಂದರ್ಶನ
  2. ಪುನರಾವರ್ತಿ‍ತ ಸಂದರ್ಶನ
  3. ರೋಗಶ್ಯ್ಯೆಯ ಸಂದರ್ಶನ
  4. ಅ-ನಿರ್ದೇಶಿತ ಸಂದರ್ಶನ
  5. ಆಳವಾದ, ಗಹನವಾದ ಸಂದರ್ಶನ
  6. ದೂರವಾಗಿ ಸಂದರ್ಶನ

ಸಂದರ್ಶನ ಪದ್ಧತಿಯ ಅನುಕೂಲಗಳು[ಬದಲಾಯಿಸಿ]

  • ಸಂದರ್ಶನ ಪದ್ಧತಿಯಲ್ಲಿ ವ್ಯಕ್ತಿಯು ಪ್ರತ್ಯಕ್ಷ ಜ್ಞಾನವನ್ನು ಪಡೆದುಕೊಳ್ಳುವ ಸಾಧನವಾಗಿರುವುದರಿಂದ ಮಾಹಿತಿ ಹೆಚ್ಚು ನಂಬಿಕಾರ್ಹವಾಗಿರುತ್ತದೆ.

ಸಂದರ್ಶನ ಪದ್ಧತಿಯ ಅನಾನುಕೂಲಗಳು ಅಥವಾ ದೋಷಗಳು[ಬದಲಾಯಿಸಿ]

  • ಸಂದರ್ಶನದ ಪರಿಣಾಮ ಸಂದರ್ಶಕನ ಕುಶಲತೆ ಹಾಗೂ ಬುದ್ಧಿಗೆ ಅವಲಂಬಿಸಿದೆ. ತರಬೇತಿಗೆ ತೀವ್ರ ನಿಗಾ ಕೂಡ ಇರಬೇಕು. ಇಲ್ಲದಿದ್ದರೆ ಅರ್ಧ ಮಾಹಿತಿ ಹಾಗೂ ಸರಿಯಾದ ಮಾಹಿತಿ ಸಿಗುವುದಿಲ್ಲ.
  • ಹೊಸಬರ ಮುಂದೆ ಸಂದರ್ಶನಕ್ಕೆ ಕುಳಿತುಕೊಳ್ಳಲು ಇಷ್ಟಪಡದೆ ಹಲವರು ಪ್ರಶ್ನಾವಳಿ ಭರ್ತಿಸಲು ಇಚ್ಚಿಸುತ್ತಾರೆ.

ವಿಷಯ ಅಧ್ಯಯನ ಪದ್ಧತಿ[ಬದಲಾಯಿಸಿ]

ಇದು ಒಂದು ಗುಣಾತ್ಮಕ ಚಿಂತನೆ ಹಾಗೂ ವಿವರಣೆಯಾಗಿದೆ. ಮನೋವಿಜ್ಞಾನ, ಶಿಕ್ಷಣ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಔಷಧಶಾಸ್ತ್ರ ಮುಂತಾದವುಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಹಳೆ ಮಾಹಿತಿ ಸಂಗ್ರಹಣೆಯ ಪದ್ಧತಿ. ಸಾಮಾಜಿಕ ಘಟಕದ ವಸ್ತು ವಿಷಯದ ಅಂಶವನ್ನು ಲಕ್ಷಣವನ್ನು ಜೋಪಾನ ಮಾಡಲು ಸಾಮಾಜಿಕ ಮಾಹಿತಿ ಒಟ್ಟಿಗೆ ಸೇರಿಸುತ್ತಾರೆ. ಈ ದಾರಿಯನ್ನು ವಿಷಯ ಅಧ್ಯಯನ ಪದ್ಧತಿ ಎನ್ನುತ್ತಾರೆ.

ವಿಷಯ ಅಧ್ಯಯನದ ಲಕ್ಷಣಗಳು[ಬದಲಾಯಿಸಿ]

  1. ಸಂಪೂರ್ಣ ಘಟಕದ ಅಧ್ಯಯನ
  2. ತೀವ್ರ, ಗಹನ ಅಧ್ಯಯನ
  3. ಬಹುಪದ್ಧತಿಗಳ ಬಳಕೆ
  4. ಏಕಾಂತಕವಾದುದು

ವಿಷಯ ಅಧ್ಯಯನವನ್ನು ಯೋಜಿಸುವುದು[ಬದಲಾಯಿಸಿ]

ಇದನ್ನು ಯೋಜಿಸುವುದೆಂದರೆ ಒಂದು ಪ್ರಾರಂಭಿಕ ಪ್ರಶ್ನೆಗಳ ನಿರೂಪಣೆ. ಇದು ಏಕೆ, ಯಾವಾಗ, ಎಲ್ಲಿ, ಹೇಗೆ, ಎಷ್ಟು ಎಂಬ ವಿಷಯಗಳ ಅಧ್ಯಯನವಾಗಿದೆ.

  1. ಪ್ರಾರಂಭಿಕ ಪ್ರಶ್ನೆಗಳ ರೂಪಣೆ
  2. ನಿರ್ದಿಷ್ಠ ಪ್ರಶ್ನೆಗಳು
  3. ವಿಶ್ಲೇಷಣೆಯ ಘಟಕ
  4. ವಿಶ್ಲೇಷಣೆ ಮತ್ತು ನಿರ್ಣಯ

ವಿಷಯ ಅಧ್ಯಯನದ ಅನುಕೂಲಗಳು[ಬದಲಾಯಿಸಿ]

ಸಾಮಾಜಿಕ ಸಂಶೋಧನೆಯ ಕ್ಷೇತ್ರದಲ್ಲಿ ವಿಷಯದ ತಿಳುವಳಿಕೆ ಮುಖ್ಯ ಸ್ಥಾನವನ್ನು ಪಡೆದಿದೆ. ಇದರಲ್ಲಿ ಹಲವಾರು ರೀತಿ ಇರುತ್ತದೆ. ಸ್ವಭಾವತಃ ತೀವ್ರವಾದುದು. ಇದು ವಿಷಯವನ್ನು ಸಂಪೂರ್ಣ‍ವಾಗಿ ಅಭ್ಯಸಿಸುತ್ತದೆ.

ವಿಷಯ ಅಧ್ಯಯನ ಪದ್ಧತಿಯ ದೋಷಗಳು[ಬದಲಾಯಿಸಿ]

ಇದರ ದೋಷಗಳೆಂದರೆ ವ್ಯಕ್ತಿನಿಷ್ಟ, ಪೂರ್ವ ಗ್ರಾಹಕಗಳು ಅಂದರೆ ತಾನು ಸಂಗ್ರಹಿಸಿದ ಮಾಹಿತಿಯನ್ನು ಸೇರಿಸುವ ಇಲ್ಲವೆ ಬಿಡುವ ಸ್ವಾತಂತ್ರ್ಯ ಅವನಿಗಿರುತ್ತದೆ. ಹೆಚ್ಚು ಹಣ ಮತ್ತು ಕಾಲದ ಅಭಿವೃದ್ಧಿ ತುಂಬಾ ಬೇಕಾಗುತ್ತದೆ. ಇದು ಇನ್ನೊಂದು ಅನಾನುಕೂಲ ಸಂಗತಿ. ಇದರಲ್ಲಿ ಘಟಕವನ್ನು ಎಲ್ಲಾ ತರಹದ ಮತ್ತು ಆಳವಾಗಿ ಅಭ್ಯಸಿಸಲಾಗುತ್ತದೆ. ಹಣ ಹೆಚ್ಚಾಗಿ ಬೇಕಾಗಿರುವುದರಿಂದ ಇದು ಒಂದು ದುಬಾರಿ ಪದ್ಧತಿ ಹಾಗೂ ಅನಾನುಕೂಲ ಪದ್ಧತಿಯಾಗಿರುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

  1. ಸಂಶೋಧನೆ

ಉಲ್ಲೇಖ[ಬದಲಾಯಿಸಿ]

  1. https://kn.warbletoncouncil.org/caracteristicas-reporte-investigacion-4745
  2. ಜಿ.ಸುಬ್ರಹ್ಮಣ್ಯ,(2007),ಸಾಮಾಜಿಕ ಸಂಶೋಧನೆ ಪದತಿಗಳು ಮತ್ತು ತಂತ್ರಗಳು,ಸಪ್ನಾ ಪಬ್ಲಿಷರ್ಸ್