ಸಮುದ್ರ ಮಂಥನ
ಹಿಂದೂ ಧರ್ಮದಲ್ಲಿ, ಸಮುದ್ರ ಮಂಥನ ಅಥವಾ ಕ್ಷೀರ ಸಮುದ್ರವನ್ನು ಕಡೆದ ಗಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗು ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ ಕುಂಭ ಮೇಳ ಎಂಬ ಹಬ್ಬವಾಗಿ ಆಚರಿಸಲಾಗುತದೆ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗು ವಿಷ್ಣು ಪುರಾಣದಲ್ಲಿ ಕಂಡು ಬರುತ್ತದೆ.
ಸಮುದ್ರ ಮಂಥನದ ಇತರ ಹೆಸರುಗಳು —
- ಸಮುದ್ರ ಮಂಥನಂ — ಮಂಥನಂ ಎಂದರೆ ಸಂಸ್ಕೃತದಲ್ಲಿ ಮಂಥನ ಅಥವಾ 'ಕಡೆಯುವುದು' ಎಂದರ್ಥ.
- ಸಾಗರ ಮಂಥನ — ಸಾಗರ ಸಮುದ್ರ ಕೆ ಇನ್ನೊಂದು ಹೆಸರು.
- ಕ್ಷಿರಸಾಗರ ಮಂಥನ — ಕ್ಷಿರಸಾಗರ ಎಂದರೆ ಹಾಲಿನ ಸಮುದ್ರವೆಂದು. ಕ್ಷಿರಸಾಗರ = ಕ್ಷೀರ (ಹಾಲು) + ಸಾಗರ (ಸಮುದ್ರ).
ಪರಿವಿಡಿ |
[ಬದಲಾಯಿಸಿ] ಸಮುದ್ರ ಮಂಥನದ ಕಥೆ
ದೇವತಾಗಳ ರಾಜ ಇಂದ್ರ, ತನ್ನ ಆನೆ ಮೇಲೆ ಸವಾರಿ ಮಾಡುವಾಗ , ದೂರ್ವಾಸಎಂಬ ಋಷಿ ಸಿಕ್ಕರೂ ಇವರು ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅನ್ನೆಯ ಸೊಂಡಿಲಿನ ಮೇಲೆ ಇಟ್ಟರು. ಆನೆಗೆ ಹೂ ಮಾಲೆ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೆಥವಾಗಿತ್ತು ಇದನ್ನು ಪ್ರಸಾದವಾಗಿ ಕಾಣಬೇಕಿತ್ತು, ಆದಕ್ಕೆ ಅಪಮಾನವಯಿತೆಂದು ಮುನಿಗಳು ಕ್ರೋಧಿತರಾದರು. ದೂರ್ವಾಸ ಮುನಿಗಳು ಇಂದ್ರ ಹಾಗು ಎಲ್ಲ ದೇವತೆಗಳಿಗೂ ಅವರ ಶಕ್ತಿ, ಸಾಮರ್ತ್ಯ ಹಾಗು ಭಾಗ್ಯಗಳನ್ನು ಕಳೆದುಕೊಳಲೆಂದು ಶಾಪ ನೀಡಿದರು.
ನಂತರ ದೇವರುಗಳು ಅಸುರರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು ಅಸುರರರಾಜ ಬಲಿ ಲೋಕವನ್ನು ತನ್ನ ವಶಕೆ ತೆಗೆದುಕೊಂಡ. ದೇವರು ವಿಷ್ಣುವಿನ ಮೂರೆಹೋದರು, ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲ್ಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು ಅಮೃತಕಾಗಿ ಕಡೆಯಲ್ಲೂ ನಿರ್ದಾರಿಸಿದರು, ಇದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ವಿಷ್ಣು ದೇವತೆಗಳು ಮಾತ್ರ ಅಮೃತವನ್ನು ಗಳಿಸುವಹಾಗೆ ಮಾಡುವುದಾಗಿ ದೇವತೆಗಳಿಗೆ ಹೇಳಿದ.
[ಬದಲಾಯಿಸಿ] ಕ್ಷೀರ ಸಾಗರದ ಮಂಥನ
ಕ್ಷೀರ ಸಾಗರದ ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಮಂದರನ್ಚಲ ಬೆಟ್ಟವನ್ನು ಕಡೆಯಲ್ಲೂ ಉಪಯೋಗಿಸಲಾಯಿತು ಹಾಗು ವಾಸುಕಿ, ಸರ್ಪಗಳ ರಾಜನನ್ನು ಹಗ್ಗವಾಗಿ ಬಳಸಲಾಯಿತು. ದೇವತೆಗಳು ಹಾವಿನ ಬಲವನ್ನು ಹಾಗು ಅಸುರರು ಹಾವಿನ ಎಡೆಯನ್ನು ಹಿಡಿದರು, ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು ಇದರಿಂದ ಬೆಟ್ಟವು ತಿರುಗತೊಡಗಿತು, ಹಾಗು ಸಮುದ್ರ ಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವನ್ನು ಸಾಗರದಲ್ಲಿ ಇಟ್ಟಕೂಡಲೇ ಆದು ಕುಸ್ಸಿಯತೊಡಗಿತು. ವಿಷ್ಣು ಒಂದು ಆಮೆಯಾಗಿ ಅವರ ಎರಡನೇ ಕೂರ್ಮಆವತಾರ ತಾಳಿ ಇವರನ್ನು ಪಾರುಮಾಡಲು, ತನ್ನ ಬೆನ್ನಿನ ಮೇಲೆ ಬೆಟ್ಟದ ಭಾರವನ್ನು ಹೊರಿದರು.
ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿ (ಭಾಗವತ, ಬ್ರಹ್ಮ-ವೈವರ್ತ)ನ ಕಥೆ ಯಿಂದ ಬಿನ್ನವಗಿದೆ. ಉದಹರಣೆಗೆ, ಮಹಾಭಾರತದಲ್ಲಿ, ಆಮೆಯ ಪಾತ್ರವನ್ನು ವಿಶ್ನುವಿನ್ನ ಕೂರ್ಮ ಅವತಾರ ಅಲ್ಲ, ಅಲ್ಲಿ ಆಮೆಗಳ ರಾಜ, ಅಕುಪರ, ದೇವತೆಗಳು ಹಾಗು ಅಸುರರ ಬೇಡಿಕೆಮೇಲೆ ಇದ್ದನ್ನು ನಿಭಾಯಿಸುತಾನೆ.
[ಬದಲಾಯಿಸಿ] ಹಾಲಾಹಲ ('ಕಳಕುಟ')
ದೇವತೆಗಳು ಹಾಗು ಅಸುರರು ಸಮುದ್ರ ಮಥನ ಮಾಡುವಾಗ, ಒಂದು ಕೊಡ ವಿಷವು , ಹಾಲಾಹಲ, ಕೂಡ ಸಮುದ್ರದಿಂದ ಹೊರಬಂತು. ಇದರಿಂದ ದೇವರು ಹಾಗು ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಶ್ರುಷ್ಟಿಯನೆ ನಾಶ ಮಾಡುವಷ್ಟು ಪ್ರಭಾವಶಾಲಿ. ವಿಷ್ಣುವಿನ ಸಲಹೆಮೇಲೆ, ದೇವತೆಗಳು ಶಿವನ ಬಳಿ ರಕ್ಷಣೆ ಹಾಗು ಸಹಾಯಕೆಳಲು ಹೋದರು. ಜೀವಕೋಟಿ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಇಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,ನೀಲ = "ನೀಲಿ", ಕಂಠ = "ಗಂಟಲು").
[ಬದಲಾಯಿಸಿ] ರತ್ನಗಳು
ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗು ಹದಿನಾಲ್ಕು ರತ್ನಗಲ್ಲು ಸಮುದ್ರದಿಂದ ಹೊರಬಂದಿತ್ತು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಎಳಲ್ಪಟರು, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:[೧]
- ಹಾಲಾಹಲ, ಶಿವನು ನುಂಗಿದ ವಿಷ
- ವರುನಿ ಅಥವಾ ಸುರ, ಮದ್ಯದ ದೇವತೆ. ಇವಲ್ಲನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲ್ಪಡುತ್ತದೆ.
- ಉಚ್ಹೈಶ್ರವಾಸ, ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ
- ಕುಸ್ತುಭ, ಜಗತ್ತಿನ ಅತಿಶ್ರೇಷ್ಠ ರತ್ಯಾಭರಣ, ಇದನ್ನು ವಿಷ್ಣು ಧರಿಸುತಾನೆ
- ಚಂದ್ರ
- ಲಕ್ಷ್ಮಿ, ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ
- ಅಪ್ಸರೆಯರು,ರಂಭಾ, ಮೇನಕ, ಪುನ್ಜಿಕಸ್ಥಳ ಇತರರು
- ಕಾಮಧೇನು ಅಥವಾ ಸುರಭಿ, ಕೋರಿದನ್ನು ನೀಡುವ ಹಸು
- ಪಾರಿಜಾತ, ಅತಿಶ್ರೇಷ್ಠವಾದ ಹೂವಿನ ಮರ ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ.
- ಅಯ್ರವತ, ಇಂದ್ರನ ಆನೆ
- ಧನ್ವಂತರಿ, ದೇವತೆಗಳ ವೈದ್ಯ ಅಮೃತದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಗಿ ಪರಿಗಣಿಸಲಾಯಿತು)
ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತದೆ,ಹಾಗು ರಾಮಾಯಣ ಮತ್ತು ಮಹಾಭಾರತದಲ್ಲಿಯು ಬಿನ್ನವಿದೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತದೆ:[೧]
- ಶಾರಂಗ,ವಿಷ್ಣುವಿನ ಬಿಲ್ಲು
- ಶಂಖ ವಿಷ್ಣುವಿನ ಶಂಖ
- ಜ್ಯೆಸ್ಥ -ದೌರ್ಭಾಗ್ಯದ ದೇವತೆ
- ವರುಣನು ತೆಗೆದುಕೊಂಡ ಕೊಡೆ
- ಅದಿತಿಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಹೊಲೆ
- ತುಳಸಿ ಗಿಡ
- ನಿದ್ರಾ ಅಥವಾ ಮೈಗಳ್ಳತನ
[ಬದಲಾಯಿಸಿ] ಚಿರಂತನತೆಯ ಪಾನೀಯ
ಕೊನೆಯಲ್ಲಿ , ಧನ್ವಂತರಿ, ಸ್ವರ್ಗಲೋಕದ ವೈದ್ಯ, ಅಮೃತ ಉಳ್ಳ ಕೊದದೊಂದಿಗೆ ಹೊರಬಂದ, ದೇವತೆಗಳು ಹಾಗು ಅಸುರರ ನಡುವೆ ಅಮ್ರುತಕಾಗಿ ಘೋರ ಯುಧನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಬೂಮಿಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - ಪ್ರಯಾಗ (ಅಲ್ಲಹಾಬಾದ್), ಹರಿದ್ವಾರ, ಉಜ್ಜೈನಿ ಹಾಗು ನಾಸಿಕ. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ.
ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಹರ್ಷದಿಂದ ಆಚರಿಸತೊಡಗಿದರು. ಭಯಬಿತರಾದ, ದೇವತೆಗಳು ವಿಷ್ಣುವಿಗೆ ಮನವಿ ಮಾಡಿದರು,ವಿಷ್ಣು ಮೋಹಿನಿ ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮ್ರುಹವನ್ನು ದೇವತೆಗಳಿಗೆ ಹಂಚಿದನು . ರಾಹುಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೆಜಸಿನಿಂದ, ಸೂರ್ಯ ಹಾಗು ಚಂದ್ರ ಇದನ್ನು ಗಮನಿಸಿ, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳೆಗಿಳಿಯುವ ಮುನ್ನ, ಮೋಹಿನಿಯು ಸುದರ್ಶನ ಚಕ್ರದಿಂದ ರಾಹುವಿನ ತೆಲೆ ಉರುಲಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳಲ್ಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತಾನೆ. ನಂತರ ಸೂರ್ಯ ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಯಗೊಳುತ್ತದೆ.
ಕಥೆಯಾ ಕೊನೆಯಲ್ಲಿ ಪುನರ್ಚೆತನಗೊಂಡ ದೇವತೆಗಳು ಅಸುರರನ್ನು ಸೋಲಿಸುತಾರೆ.
[ಬದಲಾಯಿಸಿ] ಆಕರಗಳು
- ↑ ೧.೦ ೧.೧ Wilson, Horace Hayman (1840). The Vishnu Purana.