ಸಮುದ್ರ ಮಂಥನ
Wikipedia ಇಂದ
ಸಮುದ್ರ ಮಂಥನ ಹಿಂದೂ ಪುರಾಣಗಳ ಅತ್ಯಂತ ಪ್ರಖ್ಯಾತ ಮತ್ತು ಪ್ರಮುಖ ಪ್ರಸಂಗಗಳಲ್ಲಿ ಒಂದು. ಈ ಪ್ರಸಂಗವನ್ನು ಪ್ರತಿ ೧೨ ವರ್ಷಕೊಮ್ಮೆ ಕುಂಭ ಮೇಳದಲ್ಲಿ ಆಚರಿಸಲಾಗುತ್ತದೆ. ದೇವತೆಗಳು ಮತ್ತು ರಾಕ್ಷಸರು ಜತೆಗೂಡಿ ಮೇರುಗಿರಿ ಪರ್ವತವನ್ನು ಕಡೆಗೋಲಾಗಿಸಿ ಸಮುದ್ರವನ್ನು ಕಡೆದಾಗ ಅನೇಕ ಜೀವಿ/ವಸ್ತುಗಳು ಹೊರಹೊಮ್ಮಿದವು. ಕಟ್ಟಕಡೆಯದಾಗಿ ಹೊರಬಂದಿದ್ದೇ ಅಮೃತವೆಂದು ಹೇಳಲಾಗುತ್ತದೆ. ಈ ಘಟನೆಗೆ ಸಮುದ್ರ ಮಂಥನ (ಮಥನ)ವೆಂದು ವಿಶ್ಲೇಷಿಸಲಾಗುತ್ತದೆ.