ಸಂಪತ್ತಿಗೆ ಸವಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಪತ್ತಿಗೆ ಸವಾಲ್
ಸಂಪತ್ತಿಗೆ ಸವಾಲ್
ನಿರ್ದೇಶನಎ.ವಿ.ಶೇಷಗಿರಿರಾವ್
ನಿರ್ಮಾಪಕಎ.ಎನ್.ಮೂರ್ತಿ
ಕಥೆಪಿ.ಬಿ.ಧುತ್ತರಗಿ
ಪಾತ್ರವರ್ಗರಾಜಕುಮಾರ್ ಮಂಜುಳ ಎಂ.ವಿ.ರಾಜಮ್ಮ, ವಜ್ರಮುನಿ,,ರಾಜಾಶಂಕರ್,ಬಾಲಕೃಷ್ಣ,ಜೋಕರ್ ಶ್ಯಾಂ,ಬಿ.ಜಯ,
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೪
ಚಿತ್ರ ನಿರ್ಮಾಣ ಸಂಸ್ಥೆಪದ್ಮಶ್ರೀ ಎಂಟರ್‍ಪ್ರೈಸಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನರಾಜಕುಮಾರ್, ಡಾ. ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ
ಇತರೆ ಮಾಹಿತಿಈ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ಡಾ.ರಾಜ್ ಕುಮಾರ್ ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು. ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಅನಗತ್ಯ ಬದಲಾವಣೆಗಳಾಗಿರುವುದು ಬೇಸರದ ಸಂಗತಿ. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ.

ಸಂಪತ್ತಿಗೆ ಸವಾಲ್ 1974ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದರ ನಿರ್ದೇಶಕರು ಎ.ವಿ.ಶೇಷಗಿರಿ ರಾವ್. ಎ,ಎನ್ ಮೂರ್ತಿ ಇದನ್ನು ನಿರ್ಮಿಸಿದರು. ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಈ ಚಿತ್ರವು ಕನ್ನಡ ಸಿನಿ ವೀಕ್ಷಕರು ಮತ್ತೆ ಮತ್ತೆ ನೋಡಲು ಬಯಸುವ ಚಿತ್ರಗಳಲ್ಲಿ ಒಂದು, ಹಾಗಾಗಿ ಇದು ಎವರ್ ಗ್ರೀನ್ ಚಿತ್ರವೆಂದು ಇದು ಉತ್ತರ ಕರ್ನಾಟಕದಲ್ಲಿ ಆಡಲಾಗುತ್ತಿದ್ದ ಒಂದು ಕಂಪನಿ ನಾಟಕದ ಕತೆಯನ್ನು ಹೊಂದಿದೆ. ಬಿ.ಪಿ.ದುತ್ತರಗಿಯವರು ರಚಿಸಿದ ಈ ನಾಟಕದ ಸಂಭಾಷಣೆಗಳ ನೆಲೆಯಲ್ಲಿಯೇ, ಚಿ.ಉದಯಶಂಕರ್ ರಚಿಸಿದ ಈ ಚಿತ್ರದ ಸಂಭಾಷಣೆಗಳು ಯಾವ ಮಟ್ಟಕ್ಕೆ ಜನಪ್ರಿಯಗೊಂಡವೆಂದರೆ, ಈ ಚಿತ್ರದ ಹಾಡುಗಳ ಧ್ವನಿ ಸುರುಳಿಗಿಂತ ಸಂಭಾಷಣೆಗಳ ಧ್ವನಿ ಸುರುಳಿಯೇ ಪ್ರಸಿದ್ಧಿಯನ್ನು ಪಡೆಯಿತು. ಡಾ.ರಾಜ್ ಈ ಚಲನಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಜನಪ್ರಿಯಗೊಂಡರು.

ಚಲನಚಿತ್ರವಾಗಿದ್ದು ಹೇಗೆ;- 1973 ರಲ್ಲಿ ಶಾರದಾ ಸಂಗೀತ ನಾಟಕ ಮಂಡಳಿಯು ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಆಡಲಾಗುತ್ತಿತ್ತು. ಅದರ ಜನಪ್ರಿಯತೆಯನ್ನು ಕೇಳಿದ್ದ ಡಾ.ರಾಜಕುಮಾರ ಅವರು ಕನಕಪುರಕ್ಕೆ ಬಂದು ನಾಟಕವನ್ನು ಕಣ್ತುಂಬ ನೋಡಿ ಮೆಚ್ಚಿ ಅದನ್ನು ಸಿನೇಮಾ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯವನ್ನು ಕಂಪನಿಯ ಮಾಲೀಕ ಬಸವರಾಜಪ್ಪನವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ.ಧುತ್ತರಗಿಯವರಿಗೆ ತಿಳಿಸಿ ಅವರನ್ನು ಒಪ್ಪಿಸುತ್ತಾರೆ. 1974 ರಲ್ಲಿ ಚಲನಚಿತ್ರವಾಗಿ ಅದು ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸ ದಾಖಲಿಸುತ್ತದೆ. ಮುಂದೆ ತೆಲುಗು,ತಮಿಳು,ಹಾಗೂ ಹಿಂದಿ ಭಾಷೆಗಳಲ್ಲಿಯೂ ಚಿತ್ರೀಕರಣಗೊಂಡು ರಜತ ಪರದೆಯ ಮೇಲೆ ಮೆರೆಯುತ್ತದೆ.

ವರನಟ ರಾಜಕುಮಾರ ಅವರು ಸಂಪತ್ತಿಗೆ ಸವಾಲು ಸಿನೇಮಾದಲ್ಲಿ ನಟಿಸುವ ಕಲಾವಿದರಿಗೆ ಗೋಕಾಕ ಕಂಪನಿಯ ನಾಟಕವನ್ನು ನೋಡಿಕೊಂಡು ಬಂದೆ ನಟಿಸಬೇಕೆಂದು ಆಯಾ ಪಾತ್ರಧಾರಿಗಳಿಗೆ ನಿರ್ಬಂಧವಿಧಿಸಿದ್ದರಂತೆ, ಶಾರದಾ ಮಂಡಳಿಯ ಕಲಾವಿದರ ಅಭಿನಯವೆ ಅಷ್ಟೊಂದು ಅತ್ಯದ್ಭುತವಾಗಿತ್ತು.ಅವರು ಚಿತ್ರಕಲಾವಿರು ತಮ್ಮನ್ನು ಅನುಕರಿಸುವಷ್ಟರ ಮಟ್ಟಿಗೆ ನಟನೆಯಲ್ಲಿ ನೈಪುಣ್ಯತೆ ಹೊಂದಿದ್ದರು . ಅದಕ್ಕಾಗಿಯೇ ಡಾ.ರಾಜಕುಮಾರ ಅವರು ಚಿತ್ರನಟರಿಗೆ ಈ ಮಾತನ್ನು ಹೇಳಿದ್ದು.

ಇನ್ನು ಪಾತ್ರ ಪೋಷಣೆ ಹೇಗಿರಬೇಕೆಂಬ ಅ,ಆ,ಇ,ಈ ಗಳನ್ನು ಈ ಚಿತ್ರದಲ್ಲಿ ನಾವು ಕಾಣಬಹುದು. ಭದ್ರನಾಗಿ ಡಾ.ರಾಜ್, ದುರ್ಗಿಯಾಗಿ - ಮಂಜುಳಾ, ಸಾಹುಕಾರ್ ಸಿದ್ದಪ್ಪನಾಗಿ ವಜ್ರಮುನಿ, ಅವರ ಸಹಾಯಕನಾಗಿ ಬಾಲ ಕೃಷ್ಣ ವಾವ್,,,

ಡಾ.ರಾಜ್‍ರಂತಹ ಮೇರು ನಟನನ್ನು ಬೈಯ್ಯುವಂತಹ ಗಯ್ಯಾಳಿ ಪಾತ್ರ ಮಾಡಿ ಮಂಜುಳ ಸೈ ಎನಿಸಿಕೊಂಡರು.ನಾಯಕಿಗೆ ಬುದ್ಧಿ ಕಲಿಸುವ ರಾಜ್ ಇಲ್ಲಿ ನಿಜವಾದ ನಾಯಕನಾದರು ಇಂತಹ ಕತೆ ಮಾಡಿ ಜನರನ್ನು ಮೆಚ್ಚಿಸಿದ ತಂಡಕ್ಕೆ ಅಭಿನಂದನೆ ಸಲ್ಲಬೇಕು.

ಪ್ರಸಿದ್ಧ ಸಂಭಾಷಣೆಗಳು- ಭದ್ರ (ಡಾ.ರಾಜ್)- " ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ" ದುರ್ಗಿ- " ಲೇ, ನೀನು ಗಂಡಸೇ ಆಗಿದ್ರೇ, ನೀನು ನಿಮ್ಮಪ್ಪನ ಮಗನೇ ಆಗಿದ್ರೆ ,ಗಿಡಕ್ಕೆ ಕೈ ಹಾಕೋ ನೋಡೋಣ..." " ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ " ಸಾಹುಕಾರ್ ಸಿದ್ದಪ್ಪ- " ಮಹಾ ಜನಗಳೇ ನೀವೆಲ್ಲ ನಮಗೆ ಮಕ್ಕಳಿದ್ದಂತೆ, ನಾವು ನಿಮಗೆ ತಂದೆ ಇದ್ದಂತೆ" ಬಾಲಕೃಷ್ಣ- " ವಿಶ್ವನ ಹೆಗಲೇರ್ತು, ಶುಕ್ರವಾರದ ಮಾರನೇ ದಿನ"