ಶ್ಯಾನುಭೋಗ್ ಶ್ರೀ. ತಿಮ್ಮಪ್ಪಯ್ಯನವರು, ಕಾಳಘಟ್ಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತಿಮ್ಮಪ್ಪಯ್ಯನವರು

ಪರಿವಿಡಿ

[ಬದಲಾಯಿಸಿ] ವೃತ್ತಿಯಲ್ಲಿ ಹಳ್ಳಿಯಶ್ಯಾನುಭೋಗರು

ಕಾಳಘಟ್ಟದ ನಿವಾಸಿ, ಶ್ರೀ ತಿಮ್ಮಪ್ಪಯ್ಯನವರು, ಶ್ಯಾನುಭೋಗರ ವಂಶಸ್ತರು. ಅವರ ಕಾರ್ಯ-ವ್ಯಾಪ್ತಿ ಅಲ್ಲಿನ ಅಕ್ಕ-ಪಕ್ಕದ ಹಳ್ಳಿಗಳಿಗೆ ಸೀಮಿತವಾಗಿತ್ತು. ಇವರ ತಂದೆ, ಶ್ಯಾನುಭೋಗ್ ಶ್ರೀ ಶೇಷಪ್ಪನವರು, ತಾಯಿ, ಶ್ರೀಮತಿ ಗಂಗಮ್ಮನವರು. ಶ್ಯಾನುಭೋಗಿಕೆಯ ಎಲ್ಲ ವಿವರಗಳನ್ನು ಅತ್ಯಂತ ಸಮರ್ಥವಾಗಿ ವಿವರಿಸಿ, ವಿಶ್ಲೇಶಿಸಬಲ್ಲ ಸಾಮರ್ಥ್ಯ ಅವರಿಗಿತ್ತು. ಅವರು ತಮ್ಮ ವೃತ್ತಿಯನ್ನು ಒಂದು ಅಭ್ಯಾಸದ ತರಹ ಭಾವಿಸುತ್ತಿದ್ದರು. ವೃತ್ತಿಗೌರವ, ಅಲ್ಪತೃಪ್ತಿ, ಶಿಸ್ತು, ಸಂಯಮ, ಹಳ್ಳಿಯಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಸೇವಾ ಮನೋಭಾವದಿಂದ ತಮ್ಮ ಹಳ್ಳಿಗಳ ಜನರಲ್ಲದೆ,ಜಿಲ್ಲೆಯ ಹಲವಾರು ಜನ ಅವರನ್ನು ಭೇಟಿಮಾಡುತ್ತಿದ್ದರು. ಅವರ ಮೇಲಧಿಕಾರಿಗಳು ಹಳ್ಳಿಯ,ಮತ್ತು ಅಕ್ಕ-ಪಕ್ಕದ ಹಟ್ಟಿಗಳ ಪರಿಸರದ ಅಂಕಿ-ಅಂಶಗಳನ್ನು ತಿಮ್ಮಪ್ಪಯ್ಯನವರಿಂದಲೇ ಕೇಳಿಪಡೆಯುತ್ತಿದ್ದರು.

[ಬದಲಾಯಿಸಿ] ಅಪಾರ ದೈವಭಕ್ತಿ

’ತಾಳ್ಯದ ಆಂಜನೆಯಸ್ವಾಮಿಯ ಭಜನಾವಳಿ”ಯನ್ನು, "ಶ್ರೀ ಗುರುಚರಿತ್ರೆಯ ಸ್ತೊತ್ರಗಳ "ನ್ನೂ ಅಚ್ಚುಕಟ್ಟಾಗಿ, ಮುದ್ರಿಸಿ ಆ ಪುಟ್ಟ ಪುಸ್ತಕಗಳನ್ನು, ೬೦ ರ ದಶಕದಲ್ಲೇ ಭಕ್ತ-ಜನರಿಗೆ ಮುಟ್ಟಿಸಲು ಮಾಡಿದ ಪ್ರಯತ್ನ ಅನನ್ಯ.

[ಬದಲಾಯಿಸಿ] ಒಳ್ಳೆಯ ವಾಚಾಳಿಗಳು, ಎಲ್ಲದರಲ್ಲೂ ಮುಂದಾಳತ್ವ

ಇವರ ವಾಚಾಳತ್ವ ಮತ್ತು ಮಾಹಿತಿಗಳ ಸಂಗ್ರಹಗಳನ್ನು ಅತ್ಯಂತ ಸರಳವಾಗಿಯೂ ಸಂಕ್ಷೇಪವಾಗಿಯೂ ಮನಮುಟ್ಟುವಂತೆ ಕೊಡುವ ವಿವರಗಳನ್ನು ಗಮನಿಸಿ, "ಚಿತ್ರದುರ್ಗದ ಆಕಾಶವಾಣಿ ಕೇಂದ್ರ" ಒಂದು "ಸಂವಾದ ಕಾರ್ಯಕ್ರಮ" ವನ್ನು ಹಮ್ಮಿಕೊಂಡಿತ್ತು. ಸುಮಾರು ೧ ಗಂಟೆಯಕಾಲ, ಆಕಾಶವಾಣಿಯ ವಕ್ತಾರರು ಕೇಳಿದ ಹಲವಾರು ಪ್ರಶ್ನೆಗಳಿಗೆ, ಅತ್ಯಂತ ಸಮರ್ಪಕವಾಗಿ ಉತ್ತರಿಸಿದರು. ಸ್ವಾತಂತ್ರಪೂರ್ವದ ಶ್ಯಾನುಭೋಗ ವೃತ್ತಿಯ ಅನೇಕ ಮಜಲುಗಳನ್ನು ಯಥಾವತ್ತಾಗಿ ಉದಾಹರಣೆಗಳ ಸಮೇತ ಕೊಟ್ಟಿದ್ದನ್ನು ಜಿಲ್ಲೆಯ ಎಲ್ಲಾ, ಶ್ರೊತೃಗಳೂ ಕೇಳಿ ಆನಂದಿಸಿದರು. ಈ ಸಂವಾದದ ಧ್ವನಿಮುದ್ರಿತ ಕ್ಯಾಸೆಟ್ಟನ್ನು, ಅವರ ಮಕ್ಕಳ ಬಳಿ ಪಡೆದು ಆಲಿಸಬಹುದು. ಇಲವೇ ಚಿತ್ರದುರ್ಗದ ಆಕಾಶವಾಣಿಕೇಂದ್ರವನ್ನು ಸಂಪರ್ಕಿಸಬಹುದು.

[ಬದಲಾಯಿಸಿ] ಚಿತ್ರದುರ್ಗದ ಆಕಾಶವಾಣಿಗೆ ನೀಡಿದ ಸಂದರ್ಶನ

ಚಿತ್ರದುರ್ಗದ ಆಕಾಶವಾಣಿ, ಬಿಡುಗಡೆಮಾಡಿದ ಕ್ಯಾಸೆಟ್,ಶೀರ್ಷಿಕೆ : " ಸ್ವಾತಂತ್ರ್ಯಪೂರ್ವದ ಶ್ಯಾನುಭೋಗಿಕೆ ವೃತ್ತಿ ಮತ್ತು ಅದರ ಹಲವು ಮಜಲುಗಳು."

ಚಿತ್ರದುರ್ಗದ ಬ್ರಾಹ್ಮಣಸಂಘಖಜಾಂಚಿ, ಮತ್ತು ಸದಸ್ಯರಾಗಿದ್ದಕಾಲದಲ್ಲಿ ಪ್ರಸಿದ್ಧಗಮಕಿಗಳನ್ನು ಆಹ್ವಾನಿಸಿ,ಅವರಿಂದ ಗಮಕವಾಚನದ ಕಾರ್ಯಕ್ರಮಗಳನ್ನು ಏರ್ಪಾಡುಮಾಡಿದ್ದರು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ