ಶಂಕರ್ ನಾಗ್
Wikipedia ಇಂದ
ಶಂಕರ್ ನಾಗ್ (೧೯೫೪ - ೧೯೯೦) ಕನ್ನಡ ಚಿತ್ರರಂಗದ ಮತ್ತು ರಂಗಭೂಮಿಯ ಪ್ರಮುಖ ನಾಯಕ ನಟ ಮತ್ತು ನಿರ್ದೇಶಕರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ತಮ್ಮ ಸಹೋದರ ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ.
ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಅರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು" ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ.
ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್. ಮಗಳು ಕಾವ್ಯ.
ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.
ಸೆಪ್ಟೆಂಬರ್ ೩೦, ೧೯೯೦ ರಂದು ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನಿಗೂಡ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.
[ಬದಲಾಯಿಸಿ] ಶಂಕರ್ನಾಗ್ ಅಭಿನಯಿಸಿರುವ ಇತರ ಚಿತ್ರಗಳು
- ಸಿ.ಬಿ.ಐ.ಶಂಕರ್
- ಆಟೋ ರಾಜ
- ಮೊಗನ ಸೇಡು]]
- ಸೀತಾ ರಾಮು
- ಗೆದ್ದ ಮಗ
- ಅಪೂರ್ವ ಸಂಗಮ
- ಐ ಲವ್ ಯೂ
- ನ್ಯಾಯ ಗೆದ್ದಿತು
- ಹೊಸ ಜೀವನ
- ಬೆಂಕಿ ಚೆಂಡು
- ಸಾಂಗ್ಲಿಯಾನ
- ಎಸ್.ಪಿ. ಸಾಂಗ್ಲಿಯಾನ-೨
- ಇಂದಿನ ಭಾರತ
- ರಕ್ತ ತಿಲಕ
- ಕೆರಳಿದ ಹೆಣ್ಣು
- ತಾಳಿಯಭಾಗ್ಯ
- ತಾಯಿಯ ಕನಸು
- ಹೊಸ ತೀರ್ಪು
- ಮಾನವ ದಾನವ
- ಮಕ್ಕಳಿರಲವ್ವ ಮನೆತುಂಬ
- ನ್ಯಾಯ ಎಲ್ಲಿದೆ?
- ಹಣಬಲವೋ ಜನಬಲವೋ
- ಆರದ ಗಾಯ
- ನೋಡಿ ಸ್ವಾಮಿ ನಾವಿರೋದು ಹೀಗೆ
- ಜೀವಕ್ಕೆ ಜೀವ
- ಸಂಸಾರದ ಗುಟ್ಟು
- ರಸ್ತೆ ರಾಜ
- ಕರಿನಾಗ
- ಈ ಬಂಧ ಅನುಬಂಧ
- ಲಾರಿ ಡ್ರೈವರ್
- ಮುನಿಯನ ಮಾದರಿ
- ಕಾರ್ಮಿಕ ಕಳ್ಳನಲ್ಲ
- ಭಲೇ ಚತುರ
- ಸುಂದರಕಾಂಡ
- ನಗಬೇಕಮ್ಮ ನಗಬೇಕು
- ತರ್ಕ
- ಭರ್ಜರಿ ಬೇಟೆ
- ಬೆದರುಬೊಂಬೆ
- ಮಧುಚಂದ್ರ
- ರುಸ್ತುಂ ಜೋಡಿ
- ಆಟ ಬೊಂಬಾಟ
- ಪ್ರೀತಿ ಮಾಡು ತಮಾಷೆ ನೋಡು.
- ಒಂದು ಹೆಣ್ಣು ಆರು ಕಣ್ಣು
- ಗಿರೀಶ್ ಕಾರ್ನಾಡ್ ನಿರ್ದೇಶನದ ಉತ್ಸವ್ ಎಂಬ ಹಿಂದಿ ಚಿತ್ರದಲ್ಲಿಯೂ ಶಂಕರ್ ನಾಗ್ ಅಭಿಯಯಿಸಿದ್ದರು.
|
|||||