ಶಂಕರ್ ಮಹಾದೇವನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಂಕರ್ ಮಹಾದೇವನ್
ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ
ಹಿನ್ನೆಲೆ ಮಾಹಿತಿ
ಜನನ೩ ಮಾರ್ಚ್ ೧೯೬೭ .
ಮುಂಬೈ, ಮಹಾರಾಷ್ಟ್ರ, ಭಾರತ[೧]
ಸಂಗೀತ ಶೈಲಿಭಾರತೀಯ ಸಂಗೀತ , ಹಿನ್ನೆಲೆ ಗಾಯನ .
ವೃತ್ತಿಗಾಯಕ , ಸಂಗೀತ ಸಂಯೋಜಕ .
ವಾದ್ಯಗಳುಗಾಯನ .
ಸಕ್ರಿಯ ವರ್ಷಗಳು೧೯೯೭ -
Associated actsಶಂಕರ್-ಎಹಸಾನ್-ಲಾಯ್
ಅಧೀಕೃತ ಜಾಲತಾಣwww.shankarmahadevan.com

ಶಂಕರ್ ಮಹಾದೇವನ್ ಒಬ್ಬ ಭಾರತೀಯ ಸಂಗೀತ ಮತ್ತು ಚಲನಚಿತ್ರ ಕಲಾವಿದ. ಭಾರತದ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ಹಾಡುತ್ತಿರುವ ಹಿನ್ನೆಲೆ ಗಾಯಕರಾಗಿದ್ದಾರೆ ಮತ್ತು ಭಾರತೀಯ ಚಲನಚಿತ್ರ ರಂಗದ ಸಂಗೀತ ಸಂಯೋಜಕತ್ರಯರಲ್ಲಿ (ಶಂಕರ್-ಎಹಸಾನ್-ಲಾಯ್) ಒಬ್ಬರು.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಶಂಕರ್ ಮಹಾದೇವನ್ ರವರು ೩ ಮಾರ್ಚ್ ೧೯೬೭ ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು.

ಶಂಕರ್ ಮಹಾದೇವನ್ ರವರು,ಭಾರತೀಯ ಚಿತ್ರರಂಗದಲ್ಲಿ ಹೆಸರುಮಾಡಿರುವ ಈ ಮುಂಬಯಿಕರ್, ಹುಟ್ಟಿನಿಂದ ತಮಿಳಿಗ. ಶಂಕರ್ ಮಹಾದೇವನ್ ಹುಟ್ಟಿದ್ದು ಆಗಿನ ಮಡ್ರಾಸ್ ನಲ್ಲಿ [ಚೆನ್ನೈ] ನ ತಮಿಳು ಪರಿವಾರವೊಂದರಲ್ಲಿ. ಬೊಂಬಾಯಿಗೆ ಬಂದರು. ಬಾಲ್ಯದಿಂದಲೇ ಭಾರತೀಯ ಶಾಸ್ತ್ರ್ರೀಯ ಸಂಗೀತ, ಹಾಗೂ ಕರ್ನಾಟಕ ಸಂಗೀತದ ಗೀಳು. ೫ ನೆಯ ವಯಸ್ಸಿನಲ್ಲೇ ವೀಣೆನುಡಿಸಲು ಪ್ರಾರಂಭಿಸಿದರು. ಆದರೆ ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದದ್ದು, ಮುಂಬಯಿನಲ್ಲೇ. ಚೆಂಬೂರಿನ ’ಆನಂದ್ ಭವನ್’ ಮನೆಯಲ್ಲಿ, ತಮ್ಮ ೧೧ ನೆ ವಯಸ್ಸಿನಲ್ಲಿ ಮೊದಲ ಸ್ಟೇಜ್ ಕಾರ್ಯಕ್ರಮ ಕೊಟ್ಟರು. ಮೊದಲ ಗುರು, ಟಿ ಆರ್. ಬಾಲಮಣಿ, ಉತ್ತರದ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ’ತಾರಾದೇವಿ’ ಯವರ ಬಳಿ ಕಲಿತರು. ೨೦ ವರ್ಷ ನಂತರ ಈಗ ’ನವಿ ಮುಂಬಯಿ’ ನಲ್ಲಿ ವಾಸ. ಮಕ್ಕಳು, ಸಿದ್ಧಾರ್ಥ್, ಮತ್ತು, ಶಿವಂ. ಸಿದ್ಧಾರ್ಥ್ ’ಬಂಟಿ ಔರ್ ಬಬ್ಲಿ’ ಚಿತ್ರದಲ್ಲಿ ಹಾಡಿದ್ದಾರೆ. ಹೆಂಡತಿ, ’ಸಂಗೀತಾ', ಶಂಕರ್ ಮಹಾದೇವನ್ ರನ್ನು ಪ್ರೀತಿಯಿಂದ ಐಸ್ ಬರ್ಗ್,’ ಎಂದು ಕರೆಯುತ್ತಾರೆ.

ಕಲಿತದ್ದು 'ಕಂಪ್ಯೂಟರ್ ತಂತ್ರಜ್ಞಾನ,' ಆದರೆ ಸಾಧಿಸಿದ್ದು, ಸಿನಿ-ಸಂಗೀತ ಕ್ಷೇತ್ರದಲ್ಲಿ[ಬದಲಾಯಿಸಿ]

'ಶಂಕರ್ ಮಹಾದೇವನ್', ಕಂಪ್ಯೂಟರ್ ಎಂಜಿನಿಯರ್ ನಲ್ಲಿ, ಬಿ. ಇ ಮುಗಿಸಿ, ’ಒರಾಕಲ್” ಕಂ’ ೯ ತಿಂಗಳಕಾಲ ’ಸಾಫ್ಟ್ ವೇರ್ ಇಂಜಿನಿಯರ್’ ಆಗಿ, ದುಡಿದು, ಸ್ವತಃ ನಿರ್ಧಾರದಿಂದ ತಮ್ಮ ಶ್ರೇಷ್ಟ ಸಾಫ್ಟ್ ವೇರ್ ಉದ್ಯಮದ ಅತಿ-ಹೆಚ್ಚು ಪಗಾರದ ನೌಕರಿ ತೊರೆದು, ಹಾಡುಗಾರಿಕೆಯನ್ನು ತಮ್ಮ ಜೀವನ ನಿರ್ವಹಣೆಯ ಕ್ಷೇತ್ರವನ್ನಾಗಿ ಆರಿಸಿಕೊಂಡರು. ಬಾಲ್ಯದಿಂದ ಹಾಡುಗಾರಿಕೆಯನ್ನೇ ತಮ್ಮ ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡರು. ’ಹಿಂದಿ-ಸಿನಿಮಾ ಹಿನ್ನೆಲೆ ಗಾಯಕ’, ’ಲೈವ್ ಶೋ,’ ಗಳಲ್ಲಿ ಭಾಗವಹಿಸುವ ಶಂಕರ್’ ಗೆ ಬೇಡಿಕೆ ಅಪಾರ. ಕಂಪೋಸರ್ ತಮಿಳು ಸಿನಿಮಾದ ಸಂಗೀತಕಾರ ಅತಿ ಶ್ರೇಯಸ್ಸು ಪಡೆದ, ಈಗ ’ಇಹ್ಸಾನ್ ನೂರಾನಿ’, ’ಲಾಯ್ ಮೆಂಡೊನ್ಸಾ’, ಮತ್ತು ಶಂಕರ್ ಒಂದು ಗುಂಪನ್ನು ಕಟ್ಟಿಕೊಂಡು ಮುಂಬಯಿನ ಗಲ್ಲಿ ಗಲ್ಲಿಗಳಲ್ಲಿ ಪ್ರದರ್ಶನ ನೀಡಿ ಮೇಲೆದ್ದ ಪ್ರತಿಭೆಯಿದು. ಬಹುಮುಖ ವ್ಯಕ್ತಿತ್ವದ ಶಂಕರ್, ಬಾಲಿವುಡ್ ಚಲನಚಿತ್ರಗಳಿಗೆ ಸಂಗೀತ-ಸಂಯೋಜನೆ ಮಾಡಿಕೊಡುತ್ತಾರ‍ೆ.

'ಶಂಕರ್ ಮಹಾದೇವನ್' ಶಾಸ್ತ್ರೀಯ ಸಂಗೀತವನ್ನು ಕಲಿತರು[ಬದಲಾಯಿಸಿ]

ಪಂ. ಭೀಮ್ ಸೇನ್ ಜೋಷಿ’, ಮತ್ತು ’ಲತಾ ಮಂಗೇಶ್ಕರ್’, ಹಾಡಿಗೆ ’ಶ್ರೀನಿವಾಸ ಕಾಳೆ,’ ಸಂಗೀತ ಸಂಯೋಜಿಸಿದ, ಗೀತೆಯನ್ನು ಪ್ರಥಮಬಾರಿಗೆ ಶಂಕರ್ ಮಹಾದೇವನ್ ವೀಣೆಯಲ್ಲಿ ನುಡಿಸಿದರು. ಆಗ ಅವರ ವಯಸ್ಸು ಕೇವಲ ೫ ವರ್ಷಗಳು. ಚೆಂಬೂರಿನ 'Our lady of perpetual succour School [OLPS High School in Chembur], ಸೇರಿಕೊಂಡರು. ಮುಂದೆ, (D Y Patil, Navi Mumbai), ಕಾಲೇಜಿನಿಂದ ೧೯೮೮ ರಲ್ಲಿ ’ಕಂಪ್ಯೂಟರ್ ಸೈನ್ಸ್ ವಿಷಯವನ್ನು ಕಲಿತು, ['R.A.I.T, ’ಮುಂಬಯಿ ವಿಶ್ವವಿದ್ಯಾಲಯ’]ದಿಂದ ಪದವಿ ಗಳಿಸಿದರು. ’ಸಾಫ್ಟ್ ವೇರ್ ಪದವಿ’ ಪಡೆದನಂತರ ಸ್ವಲ್ಪ ಸಮಯ, ’ಒರೇಕಲ್ ಕಾರ್ಪೊರೇಷನ್,’ ನಲ್ಲಿ ಕೆಲಸ. ಅದೇಕೋ ಆ ಕೆಲಸದಲ್ಲಿ ತೃಪ್ತಿ ದೊರೆಯಲಿಲ್ಲ. ಶಂಕರ್ ರವರಿಗೆ ತಮ್ಮ ಕಂಠ ಹಾಗೂ ಸಂಗೀತ ಪರಿಶ್ರಮದಲ್ಲಿ ಅಪಾರ ಆತ್ಮ ವಿಶ್ವಾಸ, ಮತ್ತು ಹೆಮ್ಮೆಯಿತ್ತು. ಹಿಂದಿ ಮತ್ತು ತಮಿಳು ಚಲನಚಿತ್ರರಂಗದ ಹಿಂಬದಿಗಾಯಕರಾಗಿ. ಮದ್ರಾಸ್ ನಲ್ಲಿ ಸಿಕ್ಕಿತು. ’ಎ. ಆರ್. ರೆಹಮಾನ್’ ಜೊತೆಗೂಡಿ, ’ಫಿಲ್ಮ್ ಫೇರ್ ಪ್ರಶಸ್ತಿ’ ದೊರೆಯಿತು. ’ಕಂಡುಕೊಂಡೇನ್’, ’ಕಂಡುಕೊಂಡೇನ್’ [೨೦೦೧] ತಮಿಳು ಚಿತ್ರ. ಶ್ರೇಷ್ಟ ಗಾಯಕ ಪ್ರಶಸ್ತಿ, ಇತ್ತೀಚಿನ ಚಿತ್ರ, ’ತಾರೆ ಜಮೀನ್ ಪರ್’, ೨೦೦೪ ರಲ್ಲಿ, ’ಕಲ್ ಹೊ ನ ಹೊ’, ಚಿತ್ರದ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ, ರಾಷ್ಟ್ರೀಯ, ನಿರ್ದೇಶನ, ’ಕೊಡಂಬಕಮ್ ಫಿಲ್ಮ್ ಇಂಡಸ್ಟ್ರಿ’. ಒಂದು ಆಲ್ಬಮ್ ಮಾಡಿದನಂತರ ಜನಪ್ರಿಯತೆ ಹೆಚ್ಚಿತು. ಶಂಕರ್, ’ಹಿಂದಿ’, ’ತಮಿಳು’, ’ಮಲಯಾಳಮ್’, ’ಕನ್ನಡ’, ’ತೆಲುಗು’, ಮತ್ತು ’ಮರಾಠಿ’ ಹಾಡುತ್ತಾರೆ.

’ಮ್ಯೂಸಿಕ್ ಕಂಪೋಸಿಂಗ್ ಫಿಲ್ಮೊಗ್ರಫಿ’[ಬದಲಾಯಿಸಿ]

'Breathless' ಸಂಗೀತ ನಿರ್ದೇಶನ ಅವರಿಗೆ ಪ್ರಿಯವಾಗಿತ್ತು.['The Shankar Ehsaan Loy trio],' ಸದಸ್ಯರಾದರು. ’ಬಾಲಿವುಡ್ ಚಿತ್ರಗಳಿಗೆ ’ಫ್ಯೂಶನ್ ಮ್ಯೂಸಿಕ್’ ರೂಪಿಸುವ ಕೆಲಸದಲ್ಲಿ ’ಜಾಝ್ ಬ್ಯಾಂಡ್’ ’ಸಿಲ್ಕ್ ಲೂಯಿಸ್ ಬ್ಯಾಂಕ್’ ರ ಜೊತೆಗೆ, ’ಕೀ ಮಣೆ’ ಗಳಮೇಲೆ, ಪಕ್ಕವಾದ್ಯಗಾರ ’ಶಿವಮಣಿ’ ಯರ ಜೊತೆಗೆ. ಮೃದಂಗಮ್ ನಲ್ಲಿ ’ಶ್ರೀಧರ ಪಾರ್ಥಸಾರಥಿ’, ಬಾಸ್ ಗಿಟಾರ‍್ ವಾದ್ಯದಲ್ಲಿ ’ಕಾರ್ಲ್ ಪೀಟರ್ಸ್’, ’ರಿಮೆಂಬರ್ ಶಕ್ತಿ’ ಯಂತಹ ಹಲವಾರು ಸಂಯೋಜಕರಾಗಿ, ತಮ್ಮ ಧ್ವನಿಯನ್ನು ನೀಡುವುದರ ಮೂಲಕ, ಅವರ ಸಹ-ಸಂಗೀತಗಾರರಾದ, ’ಝಾಕಿರ್ ಹುಸೇನ್’, ’ಜಾನ್ ಮ್ಯಾಕ್ ಲಾಲಿನ್’, ’ಯು. ಸ್ರೀನಿವಾಸ್’ ಮತ್ತು ’ಸೆಲ್ವಗಣೇಶ್ ವಿನಯಕ್ರಮ್’.

ಝೀ’-ಟೆಲೆವಿಶನ್’ ನಲ್ಲಿ ಅವರು ಒಂದು ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ[ಬದಲಾಯಿಸಿ]

ಝೀ’-ಟೆಲೆವಿಶನ್’ ರವರು, ಪ್ರಸ್ತುತಪಡಿಸುತ್ತಿರುವ, ’ಮ್ಯೂಸಿಕಲ್ ರಿಯಾಲಿಟಿ ಶೋ’- ಸಾ- ರೆ- ಗ- ಮ- ಪ- ಚಲೆಂಗೇ’ ೨೦೦೯,’ ಮೂಲ ಸ್ಥಾಪಕರು. ದೂರರ್ಶನ್ ನಲ್ಲಿ ಪ್ರಸಾರವಾದ, [ಡೀಡಿ] ಬಿತ್ತರಿಸಲ್ಪಡುವ ಸುಪ್ರಸಿದ್ಧ ’ ಚಲೇ ಹಮ್ ಹಾಡು,’ ಜನಪ್ರಿಯ ನಿರ್ದೆಶನವಲ್ಲದೆ, ತಾವೆ ಹಾಡಿದ್ದಾರೆ ಸಹಿತ.

’ಡಿಸ್ಕೊಗ್ರಫಿ’[ಬದಲಾಯಿಸಿ]

ಭಾವಗೀತೆಯನ್ನು , ಶ್ರೀನಿವಾಸ ಕಾಳೆ, ಗುರುಕುಲ ಪರಂಪರೆ, ತ್ರಿಮೂರ್ತಿಗಳು ನಿರಂತರ ಪ್ರಯೋಗಮಾಡುತ್ತಿದ್ದಾರೆ. ಶಂಕರ ಮಹಾದೇವನ್ ರವರು ಬಡೇಗುಲಾಂ ಆಲಿ, ಮೆಹ್ದಿ ಹಸನ್, ಲ್ಯೀಯಿಸ್ ಬ್ಯಾಂಕ್ಸ್, ಪಿಂಕ್ ಫ್ಲಾಯ್ಡ್, ಸ್ಟೀವ್ ವಂಡರ್, ಅಭಿಮಾನಿ, ಪೂದಿಂದ ಪಶ್ಚಿಮ ಇಂತಹ ಭರ್ಜರಿ ಪೈಪೋಟಿಯ ಮಧ್ಯೆ ತಮ್ಮ ಜಾದುವನ್ನು ಪ್ರದರ್ಶಿಸಿ, ಅಚ್ಚರಿಯ ಹಿಂದಿ ಚಿತ್ರರಂಗದ ಪ್ರತಿಭೆಗಳನ್ನು ಹಿಂದೆಹಾಕಿ, ಶ್ರೇಷ್ಠ ಸಾಧನೆಯೆಂದು ಗುರುತಿಸಲಾಗಿದೆ. ಸಂಗೀತಕ್ಕೆ ದೇಶ, ಭಾಷೆ, ಹಾಗೂ ಪ್ರಾಂತ್ಯಗಳ ಗಡಿಯಿಲ್ಲ. ಹಿಂದಿ ಬೆಳ್ಳಿತೆರೆಗೆ ಹಿನ್ನೆಲೆ ಗಾಯ್ಕನಾಗಿ, ಪಾದಾರ್ಪಣೆಮಾಡಿದ್ದು, ’ ಅಕೇಲೆ ಹಮ್ ಅಕೇಲೆ ತುಮ್ ' ಚಿತ್ರದಿಂದ, ೧೯೯೫ ರಲ್ಲಿ, ೧೯೯೯ ರಲ್ಲಿ, ಜನರ ಹೃದಯವನ್ನು ಮೀಟುವ ಗೀತೆಗಳು ದಕ್ಷಿಣದಲ್ಲಿ, ತಮಿಳುಚಿತ್ರ, ’ಮುದಲ್ವನ್’, ನಲ್ಲಿ ಜನಪ್ರಿಯತೆ, ಹಾಗೆಯೇ ಮುಂದೆ ಸಾಗಿ, ’ಕೌಫ್’ ಎಂಬ ಹಿಂದಿ ಚಿತ್ರಕ್ಕೆ, ಹಾಡುಗಳನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ, 'ಚಲ್ ಮೇರೆ ಭಾಯ್', ಯೆಂಬ ಹಿಂದಿ-ಚಿತ್ರದಲ್ಲಿ ನಟನೆಯ ಶಾಸ್ತ್ರವನ್ನೂ ಮಾಡಿಬಿಟ್ಟಿದ್ದಾರೆ. ವೇದಿಕೆಯ ಮೇಲೆ ಇದ್ದಾಗಲಂತೂ ರವರು ಅತ್ಯಂತ ಚಟುವಟಿಕೆಯಿಂದಿರುತ್ತಾರೆ. ಉತ್ಸಾಹಕ್ಕೆ ಎಲ್ಲೆ ಯಿಲ್ಲ.

ಪ್ರಶಸ್ತಿಗಳು[ಬದಲಾಯಿಸಿ]

  • ’ಸ್ವರಾಲಯ-ಕೈರಾಲಿ-ಯೇಸುದಾಸ್ ಅವಾರ್ಡ್-೨೦೦೭’ ಭಾರತೀಯ ಚಿತ್ರ ಸಂಗೀತ ಜಗತ್ತಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ, ನೀಡಲಾಯಿತು.
  • ’ನ್ಯಾಷನಲ್ ಫಿಲ್ಮ್ ಅವಾರ್ಡ್’ ೨೦೦೦ (’ಬೆಸ್ಟ್ ಮೇಲ್’)
  • ’ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್’
  • ’ಫಿಲ್ಮ್ ಫೇರ್ ಅವಾರ್ಡ್ಸ್’
  • ’ಸ್ಟಾರ್ ಸ್ಕ್ರೀನ್ ಅವಾರ್ಡ್ಸ್’

'ಅಮೀರ್ ಖಾನ್ ಲಾಂಛನ' ದಡಿಯಲ್ಲಿ ಅವರೇ ನಿರ್ಮಿಸಿ, ನಟಿಸಿದ, 'ತಾರೆ ಜಮೀನ್ ಪರ್' ಚಿತ್ರ, ಹೊಸ ವಿಕ್ರಮವನ್ನು ಸ್ಥಾಪಿಸಿತು[ಬದಲಾಯಿಸಿ]

'ಅಮೀರ್ ಖಾನ್ ಲಾಂಛನ', ದಡಿಯಲ್ಲಿ ಅಮೀರ್ ನಟಿಸಿ, ನಿರ್ಮಿಸಲ್ಪಟ್ಟ, 'ತಾರೆ ಜಮೀನ್ ಪರ್' ಚಿತ್ರದಲ್ಲಿ ಹಾಡಿದ 'ಮೇರೆ ಮಾ ಹಾಡು,' ಶಂಕರ್ ಮಹಾದೇವನ್ ರಿಗೆ, ಅತ್ಯಂತ ಪ್ರಿಯವಾದ ಸನ್ನಿವೇಶ. ಅವರನ್ನು ಕೆಲವು ಕ್ಷಣ ಸ್ಥಬ್ದವನ್ನಾಗಿ ಮಾಡುತ್ತದೆ. ಅದೊಂದು ಅತ್ಯಂತ ಪ್ರಾಮಾಣಿಕವಾಗಿ ಮೂಡಿಬಂದ ಸುಂದರ ಗೀತೆ. ಅವರನ್ನು ಭಾವುಕರನ್ನಾಗಿ ಮಾಡುತ್ತದೆ.’ಪ್ರಸೂನ್ ಜೋಶಿ,’ ಹಾಡಿನ ಸಾಹಿತ್ಯಕ್ಕೆ, 'ರಾಷ್ಟ್ರೀಯ ಪ್ರಶಸ್ತಿ,' ಗೆದ್ದಿದ್ದಾರೆ. ಶಂಕರ್ ಜೊತೆ ದನಿಗೂಡಿಸಿದ ಕಲಾವಿದರು, 'ಆಮೀರ್ ಖಾನ್', 'ರಮಣ್ ಮಹಾದೇವನ್', 'ಶಾನ್', 'ಶಂಕರ್ ಸಚ್ ದೇವ್', 'ಅಮೋಲ್ ಗುಪ್ತೆ', ಹಾಗೂ 'ಲಾಯ ಮೆಂಡೊಂಕಾ'.

ಸಾಧಾರಣ ಸಾಹಿತ್ಯ ರಚನೆಯ ಹಾಡನ್ನೂ ಅದ್ಭುತವಾಗಿ ಹಾಡಿ, ಅದಕ್ಕೆ ಅದ್ವಿತೀಯ-ಮೆರುಗುಕೊಟ್ಟವರು 'ಶಂಕರ್ ಮಹಾದೇವನ್'[ಬದಲಾಯಿಸಿ]

"ಮೈನೆ ಕಭಿ ಬತ್ಲಾತ ನಹಿ"

ಪರ್ ಅಂಧೇರೆ ಸೆ ಡರ್ತಾ ಹೂಂ ಮೈ ಮಾ

ಯೂ ತೊ ಮೈನೆ ದಿಖ್ಲಾತ ನಹಿ

ತೆರೆ ಪರ್ವಾಹ್ ಕರ್ತಾ ಹೂಂ, ಮೈ ಮಾ

ತುಝೆ ಸಬ್ ಹೈ ಪತಾ ; ಹೈ ನ ಮಾ

ಭೀಡ್ ಮೆ ಯೂಂ ನ ಛೊಡೋ ಮುಝೆ

ಘರ್ ಲೌಟ್ ಕೆ ಭಿ ಆನಾ ಪಾವೂಂ ಮಾ

ಭೇಜ್ ನ ಇತ್ನಾ ದೂರ್, ಮುಝ್ ಕೊ ತೂ

ಯಾದ್ ಭಿ ತುಝ್ ಕೊ ಆನಾ ಪಾಂ ಮಾ

"ಕ್ಯಾ ಇತ್ನಾ ಬುರಾ ಹೂಂ ಮೈ ಮಾ"

"ಕ್ಯಾ ಇತ್ನಾ ಬುರಾ ಮೇರಿ ಮಾ"

ಜಬ್ ಭೀ ಕಭೀ ಪಾಪಾ ಮುಝೆ

ಜೋರ್ ಸೆ ಝೂಲಾ ಝೂಲೇಂಗೆ ಹೈ ಮಾ

ಮೇರಿ ನಝರ್ ಢೂಂಢ್ತೆ, ತುಝೆ

ಸೋಚೂ ಯಹೀಂ, ತು ಆಕೆ ಥಾಮೆಗಿ ಮಾ

ಉನ್ಸೆ ಮೈ ಯೆ ಕೆಹ್ತಾ ನಹೀಂ

ಪರ್ ಮೈ ಸೆಹನ್ ಜಾತಾ ಹೂಂ ; ಮಾ

ಚೆಹರಾ ಪೆ ಆನಾ ದೇತಾ ನಹಿ

ದಿಲ್ ಹಿ ದಿಲ್ ಮೆ ಘಬರಾತಾ ಹೂಂ ಮಾ

ತುಝೆ ಸಬ್ ಹೈ ಪತಾ ; ಹೈ ನಾ ಮಾ

ತುಝೆ ಸಬ್ ಹೈ ಪತಾ ; ಮೇರಿ ಮಾ

ಮೈನೆ ಕಭಿ, ಬತ್ಲಾತ ನಹೀಂ

ಪರ್ ಅಂಧೇರೆ ಸೆ ಡರ್ತಾ ಹೂಂ ; ಮೈ ಮಾ

ಯೂಂ ತೊ ಮೈ ದಿಖ್ಲಾತಾ ನಹೀಂ

ತೇರೀ ಪರ್ವಾಹ್ ಕರ್ತಾ ಹೂಂ ; ಮೈ ಮಾ

"ತುಝೆ ಸಬ್ ಹೈ ಪತಾ ; ಹೈ ನ ಮಾ"

ಉಲ್ಲೇಖಗಳು[ಬದಲಾಯಿಸಿ]

  1. Puri, Amit (21 October 2002). "Nerd who started at 5 and still not Breathless". Tribune India. Archived from the original on 10 March 2007. Retrieved 20 November 2009. {{cite web}}: Unknown parameter |dead-url= ignored (help)