ಶಂಕರಲಿಂಗ ಭಗವಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ.ಶ್ರೀ.ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು

ಜನನ ಮತ್ತು ಬಾಲ್ಯ[ಬದಲಾಯಿಸಿ]

ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನೂಲೇನೂರಿನವರು. ತಂದೆ ಶ್ರಿ. ಕೃಷ್ಣಶರ್ಮರು, ತಾಯಿ,ಸುಬ್ಬಮ್ಮ. ಅವರು ತಮ್ಮ ಪೂರ್ವಾಶ್ರಮದಲ್ಲಿ ಶ್ಯಾನುಭೋಗರಾಗಿದ್ದವರು. ಆಗ ಅವರ ಹೆಸರು ರಂಗಪ್ಪನವರೆಂದು. ಚಿದಂಬರ ವಂಶದಲ್ಲಿ, ಜಮದಗ್ನಿ ಗೋತ್ರದಲ್ಲಿ ಉದಿಸಿದ ಅವರು, ವಿವಾಹವಾಗಿ ಗೃಹಸ್ತ ಜೀವನವನ್ನು ನಡೆಸಿದರು.

ವೈರಾಗ್ಯದಿಂದ ಸನ್ಯಾಸಿಗಳಾದರು :[ಬದಲಾಯಿಸಿ]

ಮಕ್ಕಳೂ ಜನಿಸಿದರು. ಸ್ವಲ್ಪ ವರ್ಷಗಳ ನಂತರ ಅವರಿಗೆ ಗೃಹಸ್ತ ಜೀವನದಲ್ಲಿ ವೈರಾಗ್ಯ ಬಂದು ಸನ್ಯಾಸಿಯಾದರು. ನೂಲೇನೂರಿನ ಸುತ್ತಮುತ್ತಲ ಜನರ ಕಲ್ಯಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಆಶ್ರಮಗಳ ಸ್ಥಾಪನೆ[ಬದಲಾಯಿಸಿ]

ಅವರು ತಮ್ಮ ಪೂರ್ವಜರು ನಿರ್ಮಾಣಮಾಡಿದ್ದ ಮಾಳೇನಹಳ್ಳಿಯ, 'ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ'ದ ಜೀರ್ಣೋದ್ಧಾರ ಕಾರ್ಯವನ್ನು ಮಾಡಿದರು. ನೂಲೇನೂರಿನ ಆಶ್ರಮವಲ್ಲದೆ, ಹರಿಹರ ತಾಲ್ಲೂಕಿನ ಹೆಳವನಕಟ್ಟೆ ಕುಮಾರನಹಳ್ಳಿ ಯಲ್ಲಿ 'ರಂಗನಾಥಾಶ್ರಮ'ವನ್ನು ಸ್ಥಾಪಿಸಿದ್ದಾರೆ.ಅವರನ್ನು ಎಲ್ಲರೂ 'ಅಪ್ಪಾ'ವರೆಂದೇ ಸಂಬೊಧಿಸುತ್ತಿದ್ದರು. ಅವರ ಶಿಷ್ಯರಲ್ಲಿ 'ಜಾನಮ್ಮನವರು' ಪ್ರಮುಖರು. ಮಾಳೇನ ಹಳ್ಳಿಯಲ್ಲಿ ಪ್ರತಿವರ್ಷವೂ 'ರಥಸಪ್ತಮಿ' ಯ ಸಮಯದಲ್ಲಿ 'ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ,' ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀಗಳು ದೈವಧೀನರಾದ ಮೇಲೆಯೂ, ಜಾನಮ್ಮ ನವರು ಹಲವು ವರ್ಷಗಳಕಾಲ ಕುಮಾರನಹಳ್ಳಿಯ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಹೋದರು.

'ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ,' ಗಳಿಗೆ ಮಾರ್ಗ ದರ್ಶನ[ಬದಲಾಯಿಸಿ]

ಮಲ್ಲಾಡಿಹಳ್ಳಿಯ ರಾಘವೇಂದ್ರರಾಯರಿಗೆ, ಸಲಹೆ ಆಶೀರ್ವಾದಗಳನ್ನು ಕೊಟ್ಟು ಅವರು ಮಲ್ಲಾಡಿಹಳ್ಳಿಯಲ್ಲಿ ಸಕ್ರಿಯವಾಗಿ ನಿಂತು ಕೆಲಸ ಮಾಡಲು, ಭಗವಾನರು ಬಹಳ ನೆರವಾದರು.