ವೀರನಾರಾಯಣ ದೇವಸ್ಥಾನ, ಗದಗ

ವಿಕಿಪೀಡಿಯ ಇಂದ
(ವೀರನಾರಾಯಣ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೀರ ನಾರಾಯಣ ದೇವಸ್ಥಾನ

ವೀರನಾರಾಯಣ ದೇವಸ್ಥಾನ ಗದಗನಲ್ಲಿದೆ. ಚತುರಶಿಲ್ಪಿ ಜಕಣಾಚಾರಿ ಕೆತ್ತಿದನೆಂದು ಹೇಳಲಾಗುವ ಈ ದೇವಸ್ಥಾನದ ಗೋಪುರ ನೋಡುಗರ ಕಣ್ಮನ ಸೆಳೆಯುತ್ತದೆ. ಗದುಗಿನ ಮಹಾಭಾರತ ಅಥವಾ ಕರ್ಣಾಟ ಭಾರತ ಕಥಾಮಂಜರಿ ರಚಿಸಿದ ಕುಮಾರವ್ಯಾಸ ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ರಚಿಸಿದನೆಂದು ಹೇಳಲಾಗುತ್ತದೆ. ಆತ ದೇವಸ್ಥಾನದ ಯಾವ ಕಂಬದ ಕೆಳಗೆ ಕುಳಿತು ಪ್ರತಿದಿನ ಮಹಾಭಾರತ ಬರೆಯುತ್ತಿದ್ದನೋ ಇವತ್ತಿಗೂ ಅದು ಕುಮಾರವ್ಯಾಸ ಕಂಬವೆಂದೇ ಪ್ರಸಿದ್ದಿಯಾಗಿದೆ.

ಆಸಕ್ತಿಕರ ಮಾಹಿತಿ [ಬದಲಾಯಿಸಿ]

  • ಇಂದಿಗೂ ಪೂಜೆಗೊಳ್ಳುವ ಈ ದೇವಾಲಯದ ಮೂಲವಿಗ್ರಹ ಕೈಯಲ್ಲಿ ಚೆಂಡನ್ನು ಹಿಡಿದಿದೆ.
  • ದೇವಾಲಯದ ಗೋಪುರದ ಗೋಡೆಯ ಮೇಲೆ ಪುರುಷಾರ್ಥವಾದ ಕಾಮವನ್ನು ಪ್ರತಿನಿಧಿಸುವ ಮಿಥುನ ಶಿಲ್ಪಗಳಿವೆ.