ವಿಭೂತಿ
ವಿಕಿಪೀಡಿಯ ಇಂದ
ಲಿಂಗಾಯತ ಧರ್ಮದ ಅಷ್ಟಾವರಣದಲ್ಲಿ ವಿಭೂತಿಯೂ ಒಂದಾಗಿದ್ದು ,ವಿಭೂತಿ ಅದ್ಭುತ ಶಕ್ತಿಯನ್ನು ಹೊಂದಿದೆ. ಹಣೆಗೆ ಮತ್ತು ದೇಹದ ಇತರ ಭಾಗಗಳಿಗೆ ವಿಭೂತಿ,ಧರಿಸುವ ಪದ್ದತಿ ಇದೆ. ವಿಭೂತಿ ಧರಿಸುವುದರಿಂದ ಚರ್ಮ ರಕ್ಷಣೆ ಆಗುತ್ತದೆ.
ಗುರು ಬಸವಣ್ಣನವರು ವಿಭೂತಿಯ ಮಹತ್ವವನ್ನು ಈ ಕೆಳಗಿನಂತೆ ವಿವರಿಸಿದ್ದಾರೆ.
ನೀರಿಂಗೆ ನೈದಿಲೇ ಶೃಂಗಾರ,
ಊರಿಂಗೆ ಆರವೆಯೇ ಶೃಂಗಾರ,
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.