ವಸಂತ ಕವಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸಂತ ಕವಲಿಯವರು ೧೯೩೦ ಅಕ್ಟೋಬರ್ ೧೨ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿಯಲ್ಲಿರುವ ಕದರಮಂಡಲಗಿಯಲ್ಲಿ ಜನಿಸಿದರು. ಇವರು ಆಕಾಶವಾಣಿಯಲ್ಲಿ ಅಧಿಕಾರಿಯಾಗಿದ್ದರು. ಇವರು ಆಕಾಶವಾಣಿಗಾಗಿ ಅನೇಕ ನಾಟಕಗಳನ್ನು ರಚಿಸಿದ್ದಾರೆ ಹಾಗು ನಿರ್ದೇಶಿಸಿದ್ದಾರೆ. ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ನಿರ್ದೇಶಕಗಾಗಿ ಸೇವೆ ಸಲ್ಲಿಸಿದ್ದರು.


ಇವರ ಕೃತಿಗಳು:

  • ಅಲಂಕಾರ
  • ಎನ್ನ ಮುದ್ದಿನ ಮುದ್ದಣ
  • ಘನ ಆನಂದ
  • ನಾದೋಪಾಸನೆ
  • ಬೇರೆ ಕೊಂಚ ಮಧು ಪಾತ್ರಕ್ಕೆ ಹಾಕು

ವಸಂತ ಕವಲಿಯವರು ೧೯೮೮ ನವೆಂಬರ್ ೧೭ರಂದು ನಿಧನರಾದರು.