ರಾಜನ್-ನಾಗೇಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜನ್-ನಾಗೇಂದ್ರ
ರಾಜನ್-ನಾಗೇಂದ್ರ ಸೋದರರು
ಜನನ
ರಾಜನ್ (1933)
ನಾಗೇಂದ್ರಪ್ಪ (1935)

ಶಿವರಾಮಪೇಟೆ, ಮೈಸೂರು
ಮರಣನಾಗೇಂದ್ರಪ್ಪ-4ನೇ ನವೆಂಬರ್ 2000 (ವಯಸ್ಸು 65)
ರಾಜನ್-11ನೇ ಅಕ್ಟೋಬರ್ 2020 (ವಯಸ್ಸು 87)
ರಾಷ್ಟ್ರೀಯತೆಭಾರತೀಯ
ಉದ್ಯೋಗಸಂಗೀತ ನಿರ್ದೇಶನ
ಸಕ್ರಿಯ ವರ್ಷಗಳು1952-1999

ರಾಜನ್-ನಾಗೇಂದ್ರ ಕನ್ನಡ ಚಿತ್ರರಂಗದ ಸಹೋದರ ಸಂಗೀತ ನಿರ್ದೇಶಕ ಜೋಡಿ. ಕನ್ನಡ, ತಮಿಳು, ತೆಲುಗು, ತುಳು ಹಾಗೂ ಸಿಂಹಳ ಭಾಷೆಗಳ ಒಟ್ಟು ೩೭೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವುಗಳಲ್ಲಿ ೨೦೦ಕ್ಕೂ ಹೆಚ್ಚಿನವು ಕನ್ನಡ ಚಿತ್ರಗಳಾದರೆ, ಇನ್ನುಳಿದವು ಇತರ ಭಾಷೆಗಳ ಚಿತ್ರಗಳಾಗಿವೆ.

ಬಾಲ್ಯದ ದಿನಗಳು[ಬದಲಾಯಿಸಿ]

ರಾಜನ್ (೧೯೩೩-೨೦೨೦) - ನಾಗೇಂದ್ರಪ್ಪ (೧೯೩೫) ಮೈಸೂರು ಜಿಲ್ಲೆಯ ಶಿವರಾಂಪೇಟೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಜಪ್ಪ ಸಂಗೀತ ಬಲ್ಲವರಾಗಿದ್ದು, ಹಾರ್ಮೋನಿಯಂ ವಾದಕರಾಗಿದ್ದರು. ಅಂದಿನ ಕಾಲದ ಕೆಲವು ಮೂಕಿ (ಮಾತಿಲ್ಲದ ಚಿತ್ರ) ಚಿತ್ರಗಳಿಗೆ ಸಂಗೀತ ನೀಡಿದ್ದರು. ನಂತರ ಮಾತಿನ ಚಿತ್ರಗಳ ಕಾಲ ಪ್ರಾರಂಭವಾದಾಗ ನಿರುದ್ಯೋಗಿಯಾದ ರಾಜಪ್ಪನವರು ಮನೆಯಲ್ಲೇ ಸಂಗೀತ ಕಲಿಸಲು ಪ್ರಾರಂಭಿಸಿದರು. ಇವರ ಮನೆಯ ಸಮೀಪವೇ ಪ್ರಸಿಧ್ಧ ಸಂಗೀತರಾರರಲ್ಲೊಬ್ಬರಾದ ಬಿಡಾರಂ ಕೃಷ್ಣಪ್ಪ ವಾಸಿಸುತ್ತಿದ್ದರು. ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಪ್ರಭಾವದಿಂದ ರಾಜನ್ ವಯೊಲಿನ್ ವಾದ್ಯದಲ್ಲಿಯೂ, ನಾಗೇಂದ್ರಪ್ಪನವರು ಜಲ ತರಂಗ ವಾದ್ಯ ನುಡಿಸುವುದರಲ್ಲಿಯೂ ಪರಿಣತರಾದರು.

ಚಿತ್ರ ಬದುಕು[ಬದಲಾಯಿಸಿ]

ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು, ಆಗಲೇ ಪ್ರಸಿದ್ಧ ಗಾಯಕರಾಗಿದ್ದ ಪಿ.ಕಾಳಿಂಗರಾವ್ ಅವರ ತಂಡದೊಡನೆ ಸೇರಿ, ಆಕಾಶವಾಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ರಾಜನ್ ಮತ್ತು ನಾಗೇಂದ್ರ ಸಹೋದರರು ಸಂಗೀತ ಕಲಿತದ್ದು ಬಿಡಾರಂ ಕೃಷ್ಣಪ್ಪನಂತಹವರ ಬಳಿ. ರಾಜನ್ ಅವರು ಸ್ವಯಂ ಟಿ. ಚೌಡಯ್ಯನವರಲ್ಲಿ ಪಿಟೀಲು ವಾದನ ಕಲಿತರು. ನಾಗೇಂದ್ರರು 'ಜಲತರಂಗ' ವಾದನ ಕಲಿತರು. ಈ ಸೋದರರು ಕಾಳಿಂಗರಾಯರ ತಂಡ ಮತ್ತು ಇತರ ವಾದ್ಯ ತಂಡಗಳಲ್ಲಿ ಕಾರ್ಯ ನಿರ್ವಹಿಸಿ, ೧೯೫೨ರಲ್ಲಿ ಸೌಭಾಗ್ಯಲಕ್ಷ್ಮಿ ಎಂಬ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊಮ್ಮಿದರು. ನಂತರ ಸುಮಾರು ನಾಲ್ಕು ದಶಕಗಳು ವಿವಿಧ ಭಾಷೆಗಳಲ್ಲಿ ನೂರಾರು ಚಿತ್ರಗಳಿಗೆ ಸಂಗೀತ ನೀಡಿ, ಯಶಸ್ವಿ ಜೋಡಿ ಎನಿಸಿದ್ದಾರೆ. ಕೇಳುಗರು 'ರಾಜನ್-ನಾಗೇಂದ್ರ' ಎಂದರೆ ಒಬ್ಬರೇ ಎಂದುಕೊಳ್ಳುವ ಮಟ್ಟಿಗೆ ಈ ಇಬ್ಬರು ಜನಪ್ರಿಯತೆ ಪಡೆದಿದ್ದಾರೆ.

ಇತರ ವಿಷಯಗಳು[ಬದಲಾಯಿಸಿ]

  • ಹಿಂದಿ ಚಿತ್ರರಂಗದ ಪ್ರಮುಖ ಗಾಯಕ ಕಿಶೋರ್ ಕುಮಾರ್ ಹಾಡಿರುವ ಕುಳ್ಳ ಏಜೆಂಟ್ ೦೦೦ ಚಿತ್ರಕ್ಕೂ ಈ ಜೋಡಿಯೇ ಸಂಗೀತ ನೀಡಿದ್ದರು.
  • ರಾಜನ್ ಮತ್ತು ನಾಗೇಂದ್ರ ಅನ್ನಪೂರ್ಣ ಚಿತ್ರದ ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನುಡಿಯು ಹಾಡಿನಲ್ಲಿ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಂಡಿದ್ದರು.
  • ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಎನಗೆ ಗೋವಿಂದ" ಕೃತಿಯನ್ನು ಎರಡು ಚಲನಚಿತ್ರಗಳಲ್ಲಿ ಉಪಯೋಗಿಸಿದರು, ಮಂತ್ರಾಲಯ ಮಹಾತ್ಮೆ ಹಾಗೂ ಎರಡು ಕನಸು.
  • ರಾಜನ್-ನಾಗೇಂದ್ರ ಜೋಡಿಯಲ್ಲಿ, ನಾಗೇಂದ್ರ ಅವರು ನವೆಂಬರ್ ೪,೨೦೦೦ ನಿಧನ ಹೊಂದಿದರು.[೧] ರಾಜನ್ ಅವರು ೧೨ಅಕ್ಟೋಬರ್೨೦೨೦ರಂದು ನಿಧನರಾದರು.

ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿರುವ ಕೆಲವು ಪ್ರಮುಖ ಚಿತ್ರಗಳು[ಬದಲಾಯಿಸಿ]

೧. ನ್ಯಾಯವೇ ದೇವರು

೨. ಕುಳ್ಳ ಏಜೆಂಟ್ ೦೦೦

೩. ಕೌಬಾಯ್ ಕುಳ್ಳ

೪. ಬೋರೇಗೌಡ ಬೆಂಗಳೂರಿಗೆ ಬಂದ

೫. ರತ್ನಮಂಜರಿ

೬. ಭಾಗ್ಯವಂತರು

೭. ಮೇಯರ್ ಮುತ್ತಣ್ಣ

೮. ದೇವರಗುಡಿ

೯. ಭಲೇ ಹುಚ್ಚ

೧೦.ಸ್ವಯಂವರ (ಚಲನಚಿತ್ರ)

೧೧.ಕಳ್ಳ ಕುಳ್ಳ

೧೨.ಕಿಟ್ಟು ಪುಟ್ಟು

೧೩.ಕುಳ್ಳ ಕುಳ್ಳಿ

೧೪.ದೇವರ ದುಡ್ಡು

೧೫.ನಾರಿ ಮುನಿದರೆ ಮಾರಿ

೧೬.ಮಹಾತ್ಯಾಗ

೧೭.ಹೊಂಬಿಸಿಲು

೧೮.ರಾಮ ಲಕ್ಷ್ಮಣ (ಚಲನಚಿತ್ರ)

೧೯.ಪುಟಾಣಿ ಏಜೆಂಟ್ ೧೨೩

೨೦.ಯಾರಿವನು

೨೧.ನಾನೊಬ್ಬ ಕಳ್ಳ

೨೨.ಗಿರಿಕನ್ಯೆ

೨೩. ಚಂದನದ ಗೊಂಬೆ

೨೪. ನಾನಿರುವುದೆ ನಿನಗಾಗಿ (ಚಲನಚಿತ್ರ)

೩೫. ಗಂಧದ ಗುಡಿ

೨೬. ಗಂಧದ ಗುಡಿ - ೨

೨೭. ನಾನಿನ್ನ ಬಿಡಲಾರೆ

೨೮. ನಾನಿನ್ನ ಮರೆಯಲಾರೆ

೨೯. ಗಾಳಿ ಮಾತು

೩೦. ಮುನಿಯನ ಮಾದರಿ

೩೧. ಇಬ್ಬನಿ ಕರಗಿತು

೩೨. ಎರಡು ಕನಸು

33. ಬೆಟ್ಟದ ಹೂವು

34.ಅವಳ ಹೆಜ್ಜೆ

35.ಯಾವ ಹೂವು ಯಾರ ಮುಡಿಗೋ

36.ಅನ್ನಪೂರ್ಣ

37.ಅನುರಾಧ

38.ಮಂತ್ರಾಲಯ ಮಹಾತ್ಮೆ

39.ಸುಪ್ರಭಾತ (ಚಲನಚಿತ್ರ)

40.ಹೊಸಿಲು ಮೆಟ್ಟಿದ ಹೆಣ್ಣು

41.ಮಾಂಗಲ್ಯ ಭಾಗ್ಯ

42.ಪಾವನ ಗಂಗಾ

43.ಅನುರಾಗ ಸಂಗಮ

44.ಪ್ರೀತಿ ಮಾಡು ತಮಾಶೆ ನೋಡು

45.ಕರುಣಾಮಯಿ

46.ಜೀವನ ಚಕ್ರ

47.ನಮ್ಮೂರ ರಾಜ

48.ಜೀವಕ್ಕೆ ಜೀವ

49.ಆಟೋ ರಾಜ

50.ಒಂದು ಸಿನಿಮಾ ಕಥೆ

52.ಶ್ರೀನಿವಾಸ ಕಲ್ಯಾಣ

53.ಬಯಸದೇ ಬಂದ ಭಾಗ್ಯ

54.ಮಧುರ ಸಂಗಮ

55.ರಾಮ ಪರಶುರಾಮ

56.ಬೆಂಕಿಯ ಬಲೆ

57.ಕೂಡಿ ಬಾಳಿದರೆ ಸ್ವರ್ಗ ಸುಖ

58.ಪ್ರೇಮ ಪರ್ವ

59.ಪರಾಜಿತ

60.ಸತಿ ಸುಕನ್ಯ

61.ಮಂಕು ತಿಮ್ಮ

62.ಬಯಲು ದಾರಿ

63.ವೀರ ಸಂಕಲ್ಪ

64. ಗುರಿ

65. ಒಂದೇ ಗುರಿ

66. ಬಿಳಿಗಿರಿಯ ಬನದಲ್ಲಿ

67. ಮೃಗಾಲಯ

68. ಕನ್ನಿಕಾ ಪರಮೇಶ್ವರಿ ಕಥೆ

69. ಪರಸಂಗದ ಗೆಂಡೆ ತಿಮ್ಮ

70. ಚಲಿಸುವ ಮೋಡಗಳು

71. ಉಷ

72. ಪ್ರೇಮಾನುಬಂಧ

73. ಬೆಳುವಲದ ಮಡಿಲಲ್ಲಿ

74. ಹೃದಯ ಗೀತೆ

75. ಟೋನಿ

76. ಮೂರು ಜನ್ಮ

77. ಬೆತ್ತಲೆ ಸೇವೆ

78. ಪ್ರೇಮ ಪಲ್ಲವಿ

79. ಪ್ರೀತಿ ವಾತ್ಸಲ್ಯ

80. ವಿಜಯ ವಾಣಿ

81. ಮಧುರ ಸಂಗಮ

82. ಮರಳು ಸರಪಣಿ

83. ಯಮಕಿಂಕರ

84. ಗಣೇಶನ ಮದುವೆ

85. ಕಾಡಿನ ರಾಜ

ಉಲ್ಲೇಖಗಳು[ಬದಲಾಯಿಸಿ]

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು[ಬದಲಾಯಿಸಿ]

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ