ರವೀಂದ್ರ ಕಲಾಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತಕರ್ನಾಟಕದ ರಾಜಧಾನಿ ಬೆಂಗಳೂರು. ಬೆಂಗಳೂರಿನ ಜೀ ಸಿ ರಸ್ತೆ ಯಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಇರುವ ರವಿಂದ್ರ ಕಲಾಕ್ಷೇತ್ರ ಇ ಊರಿನ ಮುಖ್ಯವಾದ ಕಲಾ ರಾಜಧಾನಿಯಾಗಿದೆ.

ಇತಿಹಾಸ[ಬದಲಾಯಿಸಿ]

ಬೆಂಗಳೊರಿನ ಜನತೆಯು ರವೀಂದ್ರನಾಥ ಠಾಗೋರ್ ರವರ ನೆನಪಿನಲ್ಲಿ ರವಿಂದ್ರ ಕಲಾಕ್ಷೇತ್ರವನ್ನು ನಿರ್ಮಿಸಿದರು. ಈ ಜಗದಲ್ಲಿ ಕಲಾ ಹಾಗು ಸಾಹಿತ್ಯವನ್ನು ಪ್ರೋತ್ಸಾಹಿಸಲು ಒಂದು ವೇದಿಕೆ ಮಾಡಿದ್ದರೆ . ರವಿಂದ್ರ ಕಲಾಕ್ಷೇತ್ರದ ಅತ್ಯಾದುನಿಕ ಇಲೆಕ್ಟ್ರಾನಿಕ್ ಸಿಸ್ಟಮ್ ಗಳನ್ನೂ ಅಳವಡಿಸಲಾಗಿದೆ. ಹಲವರು ನಾಟಕ,ನೃತ್ಯ , ಸಂಗೀತ ಪ್ರದರ್ಶನಗಳನ್ನು ಸಹಜವಾಗಿ ಮತ್ತು ಸುಂದರವಾಗಿ ನಡೆಸಲು ಬೇಕಾಗುವ ಎಲ್ಲ ಸೌಲಭ್ಯತೆ ಇಲ್ಲಿ ಇವೆ. ಕರ್ನಾಟಕ ಮತ್ತು ದೇಶ ವಿದೇಶದ ಪ್ರಖ್ಯಾತ ಕಲಾವಿದರು ಈ ವೇದಿಕೆ ಯಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಿದ್ದಾರೆ.