ರನ್ನ
ವಿಕಿಪೀಡಿಯ ಇಂದ
ಕವಿರತ್ನನೆಂದು ಓದುವ ಶ್ರವಣಬೆಳಗೊಳದಲ್ಲಿ ಕೆತ್ತಿದ ರನ್ನನ ಕೈಬರಹ
ರನ್ನನು ಕ್ರಿ.ಶ.೯೪೯ರಲ್ಲಿ ಮುದುವೊಳಲು (ಈಗಿನ ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು.ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲನ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು.ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ:
[ಬದಲಾಯಿಸಿ] ಕೃತಿಗಳು
* ಅಜಿತನಾಥ ಪುರಾಣ ತಿಲಕಮ್ - ೧೨ ಅಧ್ಯಾಯಗಳ ಪುಟ್ಟ ಕಾವ್ಯ.
- ಸಾಹಸಭೀಮ ವಿಜಯಂ (ಗದಾಯುದ್ಧ) - ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ,ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ.
- ಚಕ್ರೇಶ್ವರ ಚರಿತ - ಲಭ್ಯವಿಲ್ಲ.
- ಪರಶುರಾಮ ಚರಿತ - ಲಭ್ಯವಿಲ್ಲ.
- ರನ್ನಕಂದ - ೧೨ ಕಂದಪದ್ಯಗಳ ಅರ್ಥಕೋಶ.