ಮುಳುಬಾಗಿಲು
ಮುಳುಬಾಗಿಲು - ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿನ ಒಂದು ಊರು. ಆಂಧ್ರ ಪ್ರದೇಶದಗಡಿಯಲ್ಲಿರುವ ಜಿಲ್ಲೆ. ಇಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳನ್ನುಮಾತನಾಡುತ್ತಾರೆ. ಪೂರ್ವ ದಿಕ್ಕಿನಿಂದ ಕರ್ನಾಟಕವನ್ನು ಪ್ರವೇಶಿಸಲು ಇದು ಬಾಗಿಲು. ಕರ್ನಾಟಕದ ಮೂಡಣ ಬಾಗಿಲು - ಮೂಡು ಬಾಗಿಲು - ಮುಂದೆ ಅದು ಮುಳುಬಾಗಿಲು ಎನಿಸಿಕೊಂಡಿದೆ. ಇಲ್ಲಿ ಅನೇಕ ದೇವಸ್ಥಾನಗಳಿವೆ. ಈ ಊರಿಗೆ ಮುಳಬಾಗಿಲು ಎಂಬ ಹೆಸರೂ ರೂಢಿಯಲ್ಲಿದೆ.
ಪರಿವಿಡಿ |
ಭೂಗೋಳ [ಬದಲಾಯಿಸಿ]
ಮುಳುಬಾಗಿಲು ಬೆಂಗಳೂರಿನಿಂದ ಸುಮಾರು ೧೦೦ ಕಿ ಮೀ ದೂರದಲ್ಲಿರುವ ಈ ಊರು, ಕರ್ನಾಟಕ - ಆಂಧ್ರ ಪ್ರದೇಶ ಸರಹದ್ದಿಗೆ ೧೭ ಕಿ. ಮಿ. ಪಶ್ಛಿಮಕ್ಕಿದೆ. ಈ ಕಾರಣದಿಂದ ಇಲ್ಲಿ ತೆಲುಗು ಮಾತನಾಡುವವರು ಬಹಳ ಸಂಖ್ಯೆಯಲ್ಲಿ ಇದ್ದಾರೆ.ಇಲ್ಲಿಂದ ಬಂಗಾರುಪೇಟೆ ತಾಲ್ಲೋಕಿನ ಬಂಗಾರುತಿರುಪತಿ(ಗುಟ್ಠಹಳ್ಳಿ)ಗೆ ಹೋಗಲು ಬಸ್ಸಿನ ಸೌಕರ್ಯ ವಿದೆ.
ಮುಳುಬಾಗಿಲು
ಪ್ರವಾಸೀ ಕ್ಷೇತ್ರ [ಬದಲಾಯಿಸಿ]
ಈ ಊರಿನಲ್ಲಿ ಬಹಳ ಪ್ರಖ್ಯಾತವಾದ ಆಂಜನೇಯನ ದೇವಸ್ಥಾನವಿದೆ. ಮೂರು ಕಿ ಮೀ ದೂರದಲ್ಲಿ ವಿರೂಪಾಕ್ಷ್ಶ ದೇವಸ್ಥಾನ ಇದೆ. ಊರಿನಿಂದ ಕೆಲವೇ ಮೈಲಿಗಳ ದೂರದಲ್ಲಿ ಕುರುಡುಮಲೆ ವಿನಾಯಕ ದೇವಸ್ಥಾನ ಇದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದ ಪ್ರಮುಖರಾಗಿರುವ ಶ್ರೀಪಾದರಾಜರ ಬೃಂದಾವನವಿರುವ ನರಸಿಂಹ ತೀರ್ಥವೂ ಇದೆ.
ಪ್ರಮುಖ ಸ್ಥಳಗಲು [ಬದಲಾಯಿಸಿ]
- ಬೈರಕೂರು
- ಆವಣಿ
- ಕುರುಡುಮಲೆ