ಮಾದೇಶ್ವರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

"ಕುರುಬರ ದೇವರು, ಬಡವರ ದೇವರು ಮಾದಪ್ಪ" ಎಂಬುದು ಪ್ರಚಲಿಥದಲಿರುವ ನಾಣ್ನುಡಿ. ಮಾದೇಶ್ವರ ಶಿವನ ಪ್ರತಿ ರೂಪ , ಚಾಮರಾಜನಗರ ಜಿಲ್ಲೆ ಮಾದೇಶ್ವರ ಬೆಟ್ಟದಲ್ಲಿ ನೆಲಸಿರುವ ಈ ದೇವರು, ಅಲ್ಲಿನ ಜನಾರಾದ ಕಾಡು ಕುರುಬರು , ಜೇನು ಕುರುಬರು , ಸೋಲಿಗರು ಹಾಗು ಕುರುಬ ಗೌಡರ ಕುಲದೈವ. ಮಾದೇಶ್ವರ ಸ್ವಾಮಿ ಸುಮಾರು ೬೦೦ ವರುಷಗಳ ಹಿಂದೆ ಬದುಕಿದ್ದರು ಎಂಬ ನಂಬಿಕೆ. ಅವರಿಗೆ ಹುಲಿಯೆ ವಾಹನವಾಗಿತ್ತು, ಅವರು ಮಾದೇಶ್ವರ ಬೆಟ್ಟ ಪ್ರದೇಶದ ಕಾಡಿನಲ್ಲಿ ತಿರುಗಾಡಿ ಪವಾಡಗಳನ್ನು ಮಾಡಿದರೆಂದು ಪ್ರತೀತಿ. ಅವರ ಮಹಿಮೆಯನ್ನು ಕಂಡು ಅಲ್ಲಿನ ಸಾಹುಕಾರನಾದ ಕುರುಬ ಗೌಡ ಜಾತಿಗೆ ಸೇರಿದ ಜುಂಜೆ ಗೌಡ ಎಂಬ ಯಜುಮನ ಮಾದೇಶ್ವರ ದೇವಸ್ತಾನವನ್ನು ಕಟ್ಟಿದನು.

"http://kn.wikipedia.org/w/index.php?title=ಮಾದೇಶ್ವರ&oldid=180392" ಇಂದ ಪಡೆಯಲ್ಪಟ್ಟಿದೆ