ಮಹಾದೇವಿ ವರ್ಮಾ
ಮಹಾದೇವಿ ವರ್ಮಾ (೧೯೦೭- ೧೧, ಸೆಪ್ಟೆಂಬರ್ ೧೯೮೭) ಹಿಂದಿ ಭಾಷೆಯ ಪ್ರಸಿದ್ಧ ಕವಯಿತ್ರಿ. "ಆಧುನಿಕ ಮೀರಾ" ಎಂದು ಖ್ಯಾತರಾಗಿದ್ದ ಇವರು ೧೯೮೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.
ಜನನ, ಹಾಗೂ ಬಾಲ್ಯ, ವಿದ್ಯಾಭ್ಯಾಸ [ಬದಲಾಯಿಸಿ]
ಉತ್ತರ ಪ್ರದೇಶದ, ಫಾರುಖಾಬಾದ್ ನಲ್ಲಿ ವಕೀಲರ ಕುಟುಂಬದಲ್ಲಿ ಇವರು ಜನಿಸಿದರು. ಮಧ್ಯಪ್ರದೇಶದ, ಜಬಲ್ ಪುರದಲ್ಲಿ ವಿದ್ಯಾಭ್ಯಾಸ ಪಡೆದರು. ಸಣ್ಣ ವಯಸ್ಸಿನಲ್ಲಿಯೇ ವಿವಾಹವಾದರೂ ಸಂಸಾರ ಜೀವನದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಬೌದ್ಧ ಧರ್ಮದ ಬೋಧನೆಗಳಿಂದ ಆಕರ್ಷಿತರಾದ ಇವರು ಬೌದ್ಧ ಸನ್ಯಾಸಿನಿಯಾಗಲೂ ಅಸಫಲ ಯತ್ನ ನಡೆಸಿದರು.
ವೃತ್ತಿ ಜೀವನ [ಬದಲಾಯಿಸಿ]
ಇವರ ಪತಿಯ ತಂದೆಯ ಮರಣ ಗಾಢ ಪರಿಣಾಮ ಬೀರೀತು. ಹೆಚ್ಚು ಓದಲು ನಿರ್ಧರಿಸಿದ 'ಮಹಾದೇವಿ ವರ್ಮಾ', 'ಅಲಹಾಬಾದ್ ವಿಶ್ವವಿದ್ಯಾಲಯ'ದಿಂದ ಸಂಸ್ಕೃತ 'ಎಂ.ಎ ಪದವಿ', ಪಡೆದರು. ನಂತರ, 'ಅಲಹಾಬಾದ್ ಮಹಿಳಾ ವಿದ್ಯಾಪೀಠ'ದ 'ಪ್ರಾಂಶುಪಾಲ'ರಾಗಿ ಕೊನೆಗೆ ಅಲ್ಲಿಯ 'ಕುಲಪತಿ'ಗಳಾಗಿಯೂ ಸೇವೆ ಸಲ್ಲಿಸಿದರು.
ಸಾಹಿತ್ಯ [ಬದಲಾಯಿಸಿ]
ಹಿಂದಿ ಸಾಹಿತ್ಯದ "ಛಾಯಾವಾದಿ" ಪ್ರಕಾರದ ಮುಖ್ಯ ಲೇಖಕಿಯರಲ್ಲಿ ಒಬ್ಬರಾಗಿ 'ಮಹಾದೇವಿ ವರ್ಮಾ' ಪ್ರಸಿದ್ಧರಾಗಿದ್ದಾರೆ. ಈ ಪ್ರಕಾರದ ಇತರ ಪ್ರಮುಖ ಲೇಖಕರೆಂದರೆ ಸುಮಿತ್ರಾನಂದನ ಪಂತ್, ಸೂರ್ಯಕಾಂತ್ ತ್ರಿಪಾತಿ, ಮೊದಲಾದವರು. ಮಹಾದೇವಿ ವರ್ಮಾ ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಕೆಲವೆಂದರೆ,
- "ಅತೀತ ಕೆ ಚಲಚಿತ್ರ" (ಅತೀತದ ಚಲನಚಿತ್ರ)
- "ಸ್ಮೃತಿ ಕೆ ರೇಖಾಯೆ" (ನೆನಪಿನ ಗೆರೆಗಳು).
- "ದೀಪ ಶಿಖಾ", ಅವರ ಕವನ ಸಂಕಲನಗಳಲ್ಲಿ ಪ್ರಸಿದ್ಧವಾದದ್ದು.