ಮಂಡ್ಯ
Wikipedia ಇಂದ
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ರಾಜಧಾನಿ ಮಂಡ್ಯ ನಗರ. ಮಂಡ್ಯ ಎಂಬ ಹೆಸರು ಮಾಂಡವ್ಯ ಋಷಿಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯ ಮೈಸೂರು ಮತ್ತು ಬೆಂಗಳೂರುಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.
ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೦೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮.
ಪರಿವಿಡಿ |
[ಬದಲಾಯಿಸಿ] ಪ್ರವಾಸಿ ತಾಣಗಳು
- ಬೃಂದಾವನ ಉದ್ಯಾನ
- ಕೃಷ್ಣರಾಜಸಾಗರ - ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟು
- ಶ್ರೀರಂಗಪಟ್ಟಣ
- ಮೇಲುಕೋಟೆ ದೇವಸ್ಥಾನ
- ರಂಗನತಿಟ್ಟು ಪಕ್ಷಿಧಾಮ
- ಕೊಕ್ಕರೆ ಬೆಳ್ಳೂರು ಪಕ್ಷಿಧಾಮ
- ಹೊಸಹೊಳಲು ದೇವಸ್ಥಾನ
- ಸೋಮನಾಥಪುರ ದೇವಸ್ಥಾನ
- ಶಿವನ ಸಮುದ್ರ(ಗಗನ ಚುಕ್ಕಿ ಮತ್ತು ಭರಚುಕ್ಕಿ) ಜಲಪಾತ
- ಶ್ರೀ ಆದಿಚುಂಚನಗಿರಿ ಕ್ಷೇತ್ರ
[ಬದಲಾಯಿಸಿ] ತಾಲ್ಲೂಕುಗಳು
[ಬದಲಾಯಿಸಿ] ಹೆಸರುವಾಸಿ ವ್ಯಕ್ತಿಗಳು
- ಬಿ. ಎಂ. ಶ್ರೀಕಂಠಯ್ಯ - ಕವಿ
- ಸಿಂಗಾಚಾರ್ಯ - ಕನ್ನಡದ ಮೊದಲ ನಾಟಕಕಾರ
- ತ್ರಿವೇಣಿ - ಕಾದಂಬರಿಗಾರ್ತಿ
- ಪು.ತಿ.ನರಸಿಂಹಾಚಾರ್ - ಕವಿ
- ಎಸ್.ಎಮ್. ಕೃಷ್ಣ - ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ
- ಅಂಬರೀಶ್ - ಚಿತ್ರ ನಟ, ಸಂಸತ್ ಸದಸ್ಯ
- ರಮ್ಯ -ಚಿತ್ರ ನಟಿ
- ಪ್ರೇಂ - ಚಿತ್ರ ನಿರ್ದೇಶಕ
- ನಾಗತಿಹಳ್ಳಿ ಚ೦ದ್ರಶೇಖರ್-ಚಿತ್ರ ನಿರ್ದೇಶಕ ಹಾಗೂ ಬರಹಗಾರ
[ಬದಲಾಯಿಸಿ] ಹೊಳೆ/ನದಿಗಳು
[ಬದಲಾಯಿಸಿ] ಕೃಷಿ
ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಶಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಅಕ್ಕಿ ಮತ್ತು ಕಬ್ಬು, ಹಾಗು ಸಣ್ಣ ಪ್ರಮಾಣದಲ್ಲಿ ರಾಗಿ, ಉಚ್ಚೆಳ್ಳು ಮುಂತಾದವುಗಳನ್ನು ಬೆಳೆಯುವರು . ಇಲ್ಲಿನ ಕಬ್ಬು ಉತ್ಪಾದನೆಯ ಕಾರಣ ಮಂಡ್ಯ ಕರ್ನಾಟಕದ ಸಕ್ಕರೆಯ ಬಟ್ಟಲು ಎನಿಸಿಕೊಂಡಿದೆ.
[ಬದಲಾಯಿಸಿ] ಇವನ್ನೂ ನೋಡಿ
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ

