ಮಂಡ್ಯ
Wikipedia ಇಂದ
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ರಾಜಧಾನಿ ಮಂಡ್ಯ ನಗರ. ಮಂಡ್ಯ ಎಂಬ ಹೆಸರು ಮಾಂಡವ್ಯ ಋಷಿಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯ ಮೈಸೂರು ಮತ್ತು ಬೆಂಗಳೂರುಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.
ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೦೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮.
ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ರೇಖಾಂಶದಲ್ಲಿ ನಿರ್ದೇಶಿತವಾಗಿದೆ.
ಪರಿವಿಡಿ |
[ಬದಲಾಯಿಸಿ] ಪ್ರವಾಸಿ ತಾಣಗಳು
- ಬೃಂದಾವನ ಉದ್ಯಾನ
- ಕೃಷ್ಣರಾಜಸಾಗರ - ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟು
- ಶ್ರೀರಂಗಪಟ್ಟಣ
- ಮೇಲುಕೋಟೆ ದೇವಸ್ಥಾನ
- ರಂಗನತಿಟ್ಟು ಪಕ್ಷಿಧಾಮ
- ಕೊಕ್ಕರೆ ಬೆಳ್ಳೂರು ಪಕ್ಷಿಧಾಮ
- ಹೊಸಹೊಳಲು ದೇವಸ್ಥಾನ
- ಸೋಮನಾಥಪುರ ದೇವಸ್ಥಾನ
- ಶಿವನ ಸಮುದ್ರ(ಗಗನ ಚುಕ್ಕಿ ಮತ್ತು ಭರಚುಕ್ಕಿ,) ಜಲಪಾತ
- ಶ್ರೀ ಆದಿಚುಂಚನಗಿರಿ ಕ್ಷೇತ್ರ
ಮುತ್ತತ್ತಿ ಕಾವೇರಿ ನದಿ ದಡದ ಪುಣ್ಯಕ್ಷೆತ್ರ
[ಬದಲಾಯಿಸಿ] ತಾಲ್ಲೂಕುಗಳು
[ಬದಲಾಯಿಸಿ] ಹೆಸರುವಾಸಿ ವ್ಯಕ್ತಿಗಳು
- ಬಿ. ಎಂ. ಶ್ರೀಕಂಠಯ್ಯ - ಕವಿ
- ಸಿಂಗಾಚಾರ್ಯ - ಕನ್ನಡದ ಮೊದಲ ನಾಟಕಕಾರ
- ತ್ರಿವೇಣಿ - ಕಾದಂಬರಿಗಾರ್ತಿ
- ಪು.ತಿ.ನರಸಿಂಹಾಚಾರ್ - ಕವಿ
- ಎಸ್.ಎಮ್. ಕೃಷ್ಣ - ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ
- ಅಂಬರೀಶ್ - ಚಿತ್ರ ನಟ, ಸಂಸತ್ ಸದಸ್ಯ
- ರಮ್ಯ -ಚಿತ್ರ ನಟಿ
- ಪ್ರೇಂ - ಚಿತ್ರ ನಿರ್ದೇಶಕ
- ನಾಗತಿಹಳ್ಳಿ ಚ೦ದ್ರಶೇಖರ್-ಚಿತ್ರ ನಿರ್ದೇಶಕ ಹಾಗೂ ಬರಹಗಾರ
- ಬೆಸಗರಹಳ್ಳಿ ರಾಮಣ್ಣ- ಪ್ರಸಿದ್ಧ ಕವಿ
- ಎ.ಎನ್.ಮುರ್ತಿರಾಯ - ಪ್ರಸಿದ್ದ ಲೇಖಕರುದಪ್ಪಗಿನ ಅಚ್ಚು
- ಹಂಸಲೆಖ - ಪ್ರಸಿದ್ದ ಚಲನಚಿತ್ರ ಸಂಗೀತ ನಿರ್ದೇಶಕರು
- ಆರ್ಯಾಂಭ ಪಟ್ಟಾಭಿ - ಕಾದಂಬರಿಗಾರ್ತಿ
- ಕೆ.ಎಸ್.ನರಸಿಂಹಸ್ವಾಮಿ - ಸುಪ್ರಸಿದ್ದ ಕವಿ
- ರೂಪ ಅಯ್ಯರ್ - ಅಂತರರಾಷ್ತ್ರಿಯ ಖ್ಯಾತಿ ಚಲನಚಿತ್ರ ನಿರ್ದೃಶಕಿ
[ಬದಲಾಯಿಸಿ] ಹೊಳೆ/ನದಿಗಳು
[ಬದಲಾಯಿಸಿ] ಕೃಷಿ
ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಶಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಅಕ್ಕಿ ಮತ್ತು ಕಬ್ಬು, ಹಾಗು ಸಣ್ಣ ಪ್ರಮಾಣದಲ್ಲಿ ರಾಗಿ, ಉಚ್ಚೆಳ್ಳು ಮುಂತಾದವುಗಳನ್ನು ಬೆಳೆಯುವರು . ಇಲ್ಲಿನ ಕಬ್ಬು ಉತ್ಪಾದನೆಯ ಕಾರಣ ಮಂಡ್ಯ ಕರ್ನಾಟಕದ ಸಕ್ಕರೆಯ ಬಟ್ಟಲು ಎನಿಸಿಕೊಂಡಿದೆ.